Dec 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,

Dec 24, 2018

ಅಲ್ಲಿಯವರೆಗು ಕಾಯುತ್ತ!

ಕು.ಸ.ಮಧುಸೂದ ನರಂಗೇನಹಳ್ಳಿ 
ರೆಕ್ಕೆ ಬಿಚ್ಚಿ ಹಗಲು 
ಹಾರಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ 
ಕನಸೇನಲ್ಲ ಕಣ್ಣ ಮುಂದಿನ ನೋಟ 
ಉಕ್ಕುವ ಯೌವನದ ಬೆಂಕಿ ಕಾವು 
ಸರಿದ ಇರುಳುಗಳ ನೆರಳುಗಳ 
ನಟ್ಟ ನಡುವೆ ಸರಳುಗಳ ಸರಸದಾಟ 
ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ 
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು 
ಮಟಾಮಾಯ 
ಇವನ ಕಡುಕಪ್ಪು ಕಬ್ಬಿಣದಂತ ತೋಳುಗಳಿಗೆ ಕಾದವಳು 
ಕರಗಿದಂತೆ ಕಾಲ 
ಜರುಗಿದಂತೆ ಗಡಿಯಾರದ ಮುರಿದ ಮುಳ್ಳು 
ಕುಂತಲ್ಲೇ ಒದ್ದೆಯಾದಳು

ಕಂಡೆ ನೋಡ !?

ಪ್ರವೀಣಕುಮಾರ್ ಗೋಣಿ
ನಿನಗೆ ಶರಣಾಗುವಿಕೆಯ 
ಹೊರತು ಮಿಕ್ಕೆಲ್ಲವೂ 
ವ್ಯರ್ಥವೆನಿಸುವ ವೇಳೆ 
ಮಾಯೆ ಅಳಿದು ನಿಂತಿತ್ತು ನೋಡ .

ವಾಸನೆಗಳ ತಾಳಕ್ಕೆ 
ತಕ ತಕನೇ ಕುಣಿದು 
ಮೈಮನಗಳು ದಣಿದಾಗ 
ನಿನ್ನ ಅನುಭಾವವೊಂದೇ ಚಿರವೆನ್ನುವ 
ಅರಿವು ಅರಳಿ ನಿಂತಿತ್ತು ನೋಡ . 

Dec 18, 2018

ರಾಜಾಸ್ಥಾನ ಬಾಜಪ ಸೋಲಿಗೆ ಕಾರಣವಾದ ಆಡಳಿತ ವೈಖರಿ!

ಚಿತ್ರಮೂಲ: election commission of India
ಕು.ಸ.ಮಧುಸೂದನ ರಂಗೇನಹಳ್ಳಿ
ಕಳೆದ ಐದು ವರ್ಷಗಳಿಂದ ರಾಜಾಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಬಾಜಪದ ಶ್ರೀಮತಿ ವಸುಂದರಾ ರಾಜೆಯವರ ಸರಕಾರ ಈ ಬಾರಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ಸಿಗೆ ಅಧಿಕಾರ ವಹಿಸಿಕೊಟ್ಟಿದೆ. ಚುನಾವಣೆಗಳಿಗು ಮೊದಲು ಬಿಡುಗಡೆಯಾದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನದ ಸಂಜೆ ದೊರೆತ ಎಕ್ಸಿಟ್ ಪೋಲ್ ಸಹ ಬಾಜಪ ಸರಕಾರದ ಸೋಲನ್ನು ಖಚಿತ ಪಡಿಸಿದ್ದವು.

ಎಲ್ಲರೂ ಬಾಜಪ ಸೋಲಬಹುದೆಂದೇನೊ ನುಡಿದಿದ್ದರೂ ಅದು ಈ ಮಟ್ಟಿಗೆ ಸೋಲುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಯಾಕೆಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟ 200 ಸ್ಥಾನಗಳ ಪೈಕಿ 163 ರಲ್ಲಿ ಬಾಜಪ ಗೆದ್ದಿದ್ದರೆ, ಕಾಂಗ್ರೆಸ್ 21 ರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಹೆಚ್ಚೂ ಕಡಿಮೆ ಅಂದು ಪ್ರದಾನಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಅಷ್ಟು ಬಲಿಷ್ಠವಾಗಿ ಹೊರಹೊಮ್ಮಿದ್ದ ಬಾಜಪ ಇವತ್ತು ಕೇವಲ ಐದೇ ವರ್ಷಗಳಲ್ಲಿ ಕಾಂಗ್ರೆಸ್ಸಿನೆದುರು ಮಂಡಿಯೂರಿದೆ. ಈ ಬಾರಿ ಚುನಾವಣೆ ನಡೆದ 199ಕ್ಷೇತ್ರಗಳ ಪೈಕಿ ಕಾಂಗ್ರೆಸ್ 99 ಸ್ಥಾನವನ್ನು, ಬಾಜಪ 73 ಸ್ಥಾನಗಳನ್ನು ಗೆದ್ದಿವೆ. ಇನ್ನು ಯಥಾ ಪ್ರಕಾರ ಇಲ್ಲಿ ಅಷ್ಟೇನು ಪ್ರಭಾವಶಾಲಿಯಲ್ಲದ ಬಹುಜನ ಪಕ್ಷ 6 ಸ್ಥಾನಗಳನ್ನೂ ಪಡೆದಿದೆ. ಇರಲಿ ಈಗ ನಾವು ರಾಜಾಸ್ಥಾನದಲ್ಲಿನ ಬಾಜಪ ಸೋಲಿಗೆ ಕಾರಣವಾದ ಅಂಶಗಳನ್ನು ನೋಡೋಣ:

ಅವಳ ನೆನಪಿನಲ್ಲಿ.


ಡಾ. ಅಶೋಕ್. ಕೆ. ಆರ್. 
ಒಂದ್ ಹುಡ್ಗೀನ್ ಇಷ್ಟ ಪಟ್ಟು ಧೈರ್ಯ ತಕಂಡ್ ಪ್ರಪೋಸು ಮಾಡಿ ಅಪ್ಪಿ ತಪ್ಪಿ ಅವಳು ಒಪ್ಪೂ ಬಿಟ್ಟು 'ಶುಭಂ' ಅಂತೊಂದ್ ಬೋರ್ಡು ಹಾಕೊಳ್ಳೋದಕ್ಕಿಂತ ಗ್ಯಾಪ್ ಗ್ಯಾಪಲ್ಲಿ ಒಂದೊಂದ್ ಹುಡ್ಗಿ ಜೊತೆ ಒನ್ ವೇ ಲವ್ವಲ್ ಬಿದ್ದು ನಾಕೈದು ವರ್ಷಕ್ಕೊಂದ್ಸಲ ಹಳೇ ಗಾಯ ಕೆರ್ಕಂಡ್ ಕೂರೋದ್ ಚೆಂದ್ವೋ ಏನೋಪ! 

ಮೊನ್ಮೊನ್ನೆ ನಮ್ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಇಮಿಡೀಯಟ್ ಸೀನಿಯರ್ಸು ಗೆಟ್ ಟುಗೆದರ್ ಮಾಡ್ಕಂಡಿದ್ ಫೋಟೋಗಳನ್ನ ಹಾಕಂಡಿದ್ರು ಎಫ್.ಬೀಲಿ. ಅದರಲ್ಲಿದ್ದ ಗ್ರೂಪ್ ಫೋಟೋನ ತಟಕ್ಕಂತ ಝೂಮ್ ಮಾಡಿದ್ದು ಅವಳ ನೋಡುವ ನೆಪದಿಂದ! ಆರೇಳು ವರ್ಷ ಆಗಿತ್ತಾಂತ ಅವಳ ಮುಖ ನೋಡಿ?! 

ಹೆಚ್ಚು ಕಡಿಮೆ ಹದಿನೇಳು ವರುಷದ ಹಿಂದಿನ ನೆನಪುಗಳು. ನಮ್ ಕಾಲೇಜ್ ಶುರುವಾಗಿ ಮೊದಲ ಇಂಟರ್ನಲ್ಸ್ ಮುಗಿಯುವ ಸುಮಾರಿಗೆ ನಮ್ ಇಮಿಡೀಯಟ್ ಸೀನಿಯರ್ಸುಗಳ ರಿಸಲ್ಟ್ ಬಂದಿತ್ತು. ಊರಿಗೋಗಿದ್ದ ಸೀನಿಯರ್ಸ್ ಎಲ್ಲಾ ಕಾಲೇಜಿಗೆ ವಾಪಸ್ಸಾದ್ರು. ಎರಡನೇ ವರ್ಷದ ಶುರುವಿನಲ್ಲಿ ಓದಿ ದಬಾಕೋಕು ಏನೂ ಇರೋಲ್ಲ. ಜೊತೆಗೆ ಮೆಡಿಕಲ್ನಲ್ಲಿ ಮೊದಲ ವರ್ಷ ಪಾಸಾದ್ರೆ ಡಾಕ್ಟರಾಗಿಬಿಟ್ಟ ಫೀಲಿಂಗ್ ತಲೇಲ್ ಇರ್ತದೆ! ಸೀನಿಯರ್ಸ್ ಎಲ್ಲಾ ಗುಂಪು ಗುಂಪಾಗಿ ಲೈಬ್ರರಿಗೆ ಬಂದು ಕೂರೋರು. ಜೂನಿಯರ್ಸ್ ಯಾರ್ನಾದ್ರೂ ಕರುಸ್ಕಂಡು ಅದೂ ಇದೂ ತರ್ಲೆ ಪ್ರಶ್ನೆ ಕೇಳ್ತಾ ಮಜಾ ತಗೊಳ್ಳೋರು. ಆಗಲೇ ಅವಳು ಕಂಡಿದ್ದು. 

Dec 16, 2018

ಹನಿ....

ಪಮ್ಮೀ ಫೀನಿಕ್ಸ್
ಮುಂಗಾರು ಮೆಲ್ಲ ಮೆಲ್ಲನೇ ಆವರಿಸುತ್ತಾ ಇಳೆಯನೆಲ್ಲಾ ಆವರಿಸತೊಡಗಿದಾಗ ಮಸ್ತಿಷ್ಕದಲಿ ಘನೀಭವಿಸಿದ ನೆನಪುಗಳು ನಿಧಾನವಾಗಿ ಕರಗುತ್ತಾ ಹನಿಹನಿ ಧಾರೆಯಾಗಿ ಮೈಮನದ ತುಂಬಾ ಆವರಿಸಿಕೊಳ್ಳುತ್ತದೆ.....

ನಿನ್ನಂತೆಯೇ ಈ ಮಳೆಯೂ ಸುರಿದರೆ ಇಡಿಯಾಗಿ ಕವಿದುಕೊಳ್ಳುವುದು. ಹೆಪ್ಪುಗಟ್ಟಿದ ವಿಶಾದದ ತೆರೆ ಹರಿದು ಕಚಗುಳಿಯಿಡುತ್ತಾ ನೀ ಎದೆಯಂಗಳಕ್ಕೆ ಹೆಜ್ಜೆಯಿಡುವಾಗ ನಿನಗೆ ಸ್ವಾಗತಿಸಲೆಂದೇ ಉದುರುವ ಜಾಜಿಮೊಲ್ಲೆ ತನ್ನ ಘಮದೊಂದಿಗೆ ನಿನ್ನಾಗಮನದ ಸೂಚನೆ ತಲುಪಿಸುವುದು

Dec 14, 2018

ನೀ ಎನಗೆ !


ಪ್ರವೀಣಕುಮಾರ್ ಗೋಣಿ

ಅಕಾರಣ ಹನಿವ 
ಕಣ್ಣ ಹನಿಗಳೊಳಗೆ 
ನಿನ್ನ ಸಾಂತ್ವನದ 
ಬಿಸಿ ಮತ್ತೆ ಹೃದಯವನ್ನ ಅರಳಿಸುವುದೋ !

ಬೇಡಿಕೆಗಳ ಹೊರೆಯೆಲ್ಲ 
ಹೊತ್ತು ನಿನ್ನೆಡೆ ನಡೆದೆ ನಿಜ ,
ನೀ ಎದುರಾಗುತ್ತಲೇ 
ಬಯಕೆಗಳ ಹೊರೆಯೇ 
ಕರಗಿ ಮತ್ತೆ ಹಗುರಾದೆನೋ ನಾನು ! 

ಚತ್ತೀಸ್ ಗಡ ಪಲಿತಾಂಶ: ರಾಜಕೀಯ ಪಕ್ಷಗಳಿಗೊಂದು ಪಾಠ!

ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ನೋಡಿದರೆ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನ ನಡೆದ ನಂತರದ ಸಮೀಕ್ಷೆಗಳು ಛತ್ತೀಸ ಗಢ್ ರಾಜ್ಯದಲ್ಲಿ ಬಾಜಪ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಬಗ್ಗೆಯೇ ಹೇಳಿದ್ದವು. ಆದರೆ ಎಲ್ಲ ಭವಿಷ್ಯಗಳನ್ನು ಸುಳ್ಳು ಮಾಡುವಂತೆ ಕಾಂಗ್ರೆಸ್ ಇಲ್ಲಿ ಭರ್ಜರಿಯಾಗಿ ಗೆದ್ದು ಬಾಜಪಕ್ಕೆ ಹೀನಾಯ ಸೋಲನ್ನು ಕರುಣಿಸಿದೆ. ಮದ್ಯಪ್ರದೇಶ ಮತ್ತು ರಾಜಾಸ್ಥಾನಕ್ಕೆ ಹೋಲಿಸಿದಲ್ಲಿ ಇಲ್ಲಿ ಬಾಜಪದ ಸೋಲು ಅನಿರೀಕ್ಷಿತ ಮತ್ತು ಅಗಾಧವಾದದ್ದು. ಆದರೆ ಈ ರಾಜ್ಯದ ಪಲಿತಾಂಶಗಳು ಎಲ್ಲ ಪಕ್ಷಗಳಿಗೂ ಒಂದು ಪಾಠವಾಗಿದೆ. 

2013ರ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಾಜಪ 49 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ 39ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದಿದ್ದರೆ ಬಾಜಪ ಕೇವಲ 16 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. ಮತಗಳಿಕೆಯ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೇಕಡಾ 12 ರಷ್ಟು ವ್ಯತ್ಯಾವಿದೆ. ಇಷ್ಟು ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸಬಹುದೆಂದು ಸ್ವತ: ಕಾಂಗ್ರೆಸ್ಸಿನವರೆ ನಿರೀಕ್ಷಿಸಿರಲಿಲ್ಲವೆಂಬುದು ನಿಜ. ಯಾಕೆಂದರೆ ಕಳೆದ ಹದಿನೈದು ವರ್ಷಗಳಿದ ಆಡಳಿತ ನಡೆಸುತ್ತಿದ್ದ ಬಾಜಪವನ್ನು, ಬಲಾಡ್ಯ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್ ಅವರನ್ನು ಸೋಲಿಸಲು ಕಾಂಗ್ರೆಸ್ಸಿನಲ್ಲಿ ಸ್ಥಳೀಯವಾಗಿ ಬಲಿಷ್ಠ ನಾಯಕರು ಇರಲಿಲ್ಲ. ಶ್ರೀ ಅಜಿತ್ ಜೋಗಿಯವರು ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವೊಂದನ್ನು ಕಟ್ಟಿದ ನಂತರವಂತು ಕಾಂಗ್ರೆಸ್ ಕಷ್ಟದಲ್ಲಿತ್ತು. ಕಾಂಗ್ರೆಸ್ಸಿನ ಮತಗಳನ್ನು ಅಜಿತ್ ಜೋಗಿಯವರು ಕಸಿದುಕೊಳ್ಳುವ ಮೂಲಕ ಬಾಜಪಕ್ಕೆ ಚತ್ತೀಸಗಡ್ ಸುಲಭದ ತುತ್ತಾಗುತ್ತದೆಯೆಂದು ಬಹಳ ಜನ ಹೇಳಿದ್ದರು. ಆದರೆ ಜೋಗಿಯವರ ಮ್ಯಾಜಿಕ್ ನಡೆಯಲೇ ಇಲ್ಲ. ಬಾಜಪದ ಸುದೀರ್ಘ ಆಳ್ವಿಕೆಯಿಂದ ಬೇಸರಗೊಂಡಿದ್ದ ಮತದಾರರು ಜಿಗುಪ್ಸೆಗೊಂಡಂತೆ ಕಾಂಗ್ರೆಸ್ಸಿಗೆ ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಟ್ಟುಬಿಟ್ಟರು. ಹಾಗಿದ್ದರೆ ಇಂತಹದೊಂದು ದೊಡ್ಡ ಬದಲಾವಣೆಯ ಹಿಂದೆ ಇರಬಹುದಾದ ನೈಜ ಕಾರಣಗಳನ್ನು ಹುಡುಕುತ್ತ ಹೋದರೆ ಬೇರೆ ಕಡೆಯಲ್ಲಿನ ಕಾರಣಗಳ ಜೊತೆ ಇಲ್ಲಿಯದೇ ಆದ ಎರಡು ದೊಡ್ಡ ಸ್ಥಳೀಯ ಕಾರಣಗಳೂ ಇವೆಯೆಂಬುದನ್ನು ನೋಡಬಹುದು. 

Dec 12, 2018

ತೆಲಂಗಾಣ! ಟಿ.ಆರ್.ಎಸ್. ಗೆಲುವಿನ ಐದು ಮುಖ್ಯ ಕಾರಣಗಳು

ಕು.ಸ.ಮಧುಸೂದನರಂಗೇನಹಳ್ಳಿ
ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೆ.ಚಂದ್ರಶೇಖರ್ ರಾವ್ ಅವರ ಟಿ.ಆರ್.ಎಸ್. ತೆಲಂಗಾಣ ವಿದಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಜಯಗಳಿಸಿದೆ.ಚುನಾವಣೆ ನಡೆದ 119ಸ್ಥಾನಗಳ ಪೈಕಿ 88ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧಪಕ್ಷಗಳು ದೂಳಿಪಟವಾಗುವಂತೆ ಮಾಡಿದೆ.ಟಿ.ಆರ್.ಎಸ್.ಗೆಲ್ಲಬಹುದೆಂದು ಭವಿಷ್ಯ ನುಡಿದಿದ್ದವರಿಗೂ ಅಚ್ಚರಿಯಾಗುವಂತೆ ಅದು ಜಯಗಳಿಸಿರುವುದರ ಹಿಂದೆ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ.

ಹಾಗೆ ನೋಡಿದರೆ ತೆಲಂಗಾಣ ವಿದಾನಸಭಾ ಚುನಾವಣೆಗಳು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಜೊತೆಗೆ ನಡೆಯಬೇಕಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಬೀಸಬಹುದಾದ ಪ್ರದಾನಮಂತ್ರಿ ಶ್ರೀನರೇಂದ್ರ ಮೋದಿಯವರ ಅಲೆಯಿಂದ ತಪ್ಪಿಸಿಕೊಳ್ಳಲೆಂಬಂತೆ ಕೆ.ಸಿ.ಆರ್. ಅವಧಿಗೆ ಮುನ್ನವೇ ವಿದಾನಸಭೆ ವಿಸರ್ಜಿಸಿ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡರು. ಅವರ ಈ ನಿರ್ದಾರವನ್ನು ವಿರೋಧಪಕ್ಷಗಳು ಟೀಕಿಸಿ, ರಾಜಕೀಯ ಪಂಡಿತರು ಅವರ ಈ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆಯೆಂದು ನಕ್ಕಿದ್ದರು. ಆದರೆ ಅಂತಿಮವಾಗಿ ಕೆ.ಸಿ.ರಾವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಇಂತಹ ಅಭೂತಪೂರ್ವ ಗೆಲುವು ತಮ್ಮದಾಗಬಹುದೆಂದು ಸ್ವತ: ಅವರೇ ನಿರೀಕ್ಷಿಸಿದ್ದರೆಂದು ಹೇಳುವುದು ತಪ್ಪಾಗುತ್ತದೆ.

Dec 7, 2018

ಶಾಂತಿ- ಪ್ರಶಾಂತಿ

ಪದ್ಮಜಾ ಜೋಯ್ಸ್ ದರಲಗೋಡು
ಹೆಸರೂ ಶಾಂತಿ , ಮನೆಯೂ ಪ್ರಶಾಂತಿ ನಿಲಯ ಪರಿಸರವೂ ಶಾಂತ ಪ್ರಶಾಂತವೇ ಇದ್ದರೂ.... 

ಶಾಂತಿಯ ಮನ ಅಶಾಂತಿಯ ಕಡಲಾಗಿತ್ತು.... ಬದುಕಿಡೀ ಶಾಂತಿಯ ಅರ್ಥವೂ ನಿಲುಕದ ಅಶಾಂತಿಯ ಬೀಡಾಗಿತ್ತು
ಇದ್ದುದರಲ್ಲೇ ನೆಮ್ಮದಿ ನೀಡುತ್ತಿದ್ದು ಸಾಗರನ ಸಾಂಗತ್ಯ ಮಾತ್ರ...

ಇದೀಗ ಅವನಲ್ಲಾದ ಬದಲಾವಣೆಗಳೂ ಅವಳಲ್ಲಿ ಕಡಲ ನಡುವಿನ ಬಿರುಗಾಳಿಗೆ ಸಿಕ್ಕ ಹಾಯಿ ದೋಣಿಯಾಗಿತ್ತು ಅವಳ ಬದುಕು...

"ಜನಮನ" ಎಂದೇ ಹೆಸರಿಟ್ಟ ಹೊರಚಾವಣಿಯಲ್ಲಿ ಆಪ್ತ ಸಲಹಾ ಕೇಂದ್ರದಲ್ಲಿ ನೆರೆದಿದ್ದ ಹತ್ತಾರು ಜನದ ಕ್ಲಿಷೆಕೇಶಗಳನ್ನು ಕೇಳಿ ಒಂದಷ್ಟು ತಿಳಿ ಹೇಳಿ ಸಲಹೆ ನೀಡಿ ಅಯ್ಯೋ ಎನಿಸಿದ ಹಲಕೆಲವು ಜವಾಬ್ದಾರಿಗಳ ಅನಗತ್ಯವಾದರೂ ಹೆಗಲೇರಿಸಿಕೊಂಡು ಎಲ್ಲರನ್ನೂ ಊಟಕ್ಕೆ ಕಳುಹಿಸಿ ಬ಼ಂದು ಮರೆತ ಯಾವುದೋ ಕೆಲಸ ನೆನಪಾದ಼ಂತೆ ಅರ್ಧ ಟೈಪಿಸಿ ಉಳಿದ ನೋಟ್ ಪ್ಯಾಡನ್ನು ತೆರೆದಾಗ ಪಕ್ಕದಲ್ಲಿ ನಗುತ್ತಿದ್ದ ಫೋಟೋ ಅದರಲ್ಲಿನ ಮುಖಭಾವವೂ ತನ್ನ ಅಪಹಾಸ್ಯ ಮಾಡಿದಂತೆನಿಸಿತು.... 

ಆಪರೇಷನ್ ಕಮಲದ ಅನಿವಾರ್ಯತೆ ಯಾರಿಗಿದೆ?

ಕು.ಸ.ಮಧುಸೂದನ
'ಆಪರೇಷನ್ ಕಮಲ' ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರ ಆರು ತಿಂಗಳು ಪೂರೈಸುತ್ತಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಆಡಿಯೋ ತುಣುಕೊಂದು ಹೀಗೊಂದು ಸಂಶಯವನ್ನು ಹುಟ್ಟು ಹಾಕಿದೆ. ಈ ಆಡಿಯೋ ತುಣುಕಿನ ಸತ್ಯಾಸತ್ಯತೆಯೇನೇ ಇರಲಿ ಈ ಸರಕಾರವನ್ನು ಕೆಡವಿ ಅಧಿಕಾರಕ್ಕೇರಲು ಬಾಜಪ ಪ್ರಯತ್ನಿಸುತ್ತಿರುವುದೇನು ಹೊಸತಲ್ಲ.

ಚುನಾವಣೆಗಳು ಮುಗಿದ ನಂತರ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ವಿಶ್ವಾಸ ಮತ ಸಾಬೀತಿಗೆ ಬೇಕಾದ ಸಂಖ್ಯೆ ಹೊಂದಲು ಆಪರೇಷನ್ ಕಮಲ ನಡೆಸಲು ಪ್ರಯತ್ನಗಳು ನಡೆದಿದ್ದವು. ವಿಶ್ವಾಸ ಮತದ ಮೇಲಿನ ಚರ್ಚೆಯಲ್ಲಿ ಮಾತಾಡುತ್ತ ಸ್ವತ: ಯಡಿಯೂರಪ್ಪನವರೇ ತಾವು ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳನ್ನು ಸಂಪರ್ಕಿಸಿದ್ದು ನಿಜವೆಂದು ಹೇಳಿಕೊಂಡಿದ್ದರು. ಅದಾದ ನಂತರ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಪರೇಷನ್ ಕಮಲ ನಡೆಸುವ ನಂಬಿಕೆಯಿಂದಲೇ ಬಾಜಪದ ಬಹುತೇಕ ನಾಯಕರುಗಳು ಈ ಸರಕಾರ ಇನ್ನು ಒಂದು ವಾರದಲ್ಲಿ ಬೀಳುತ್ತದೆ, ಇನ್ನು ಎರಡು ವಾರದಲ್ಲಿ ಬೀಳುತ್ತದೆಯೆಂದು ಭವಿಷ್ಯ ನುಡಿಯುತ್ತ ನಗೆಪಾಟಲಿಗೀಡಾಗುತ್ತ ಹೋಗಿದ್ದು ನಮ್ಮ ಮುಂದಿದೆ. ಇದೀಗ ಚಳಿಗಾಲದ ಅಧಿವೇಶನ ಈ ತಿಂಗಳು ಹತ್ತನೇ ತಾರೀಖು ಪ್ರಾರಂಭವಾಗಲಿದ್ದು, ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡುವ ತರಾತುರಿಯಲ್ಲಿರುವ ಮೈತ್ರಿ ಸರಕಾರಕ್ಕೆ ಈಗ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಯಥಾ ಪ್ರಕಾರ ಬಾಜಪ ಈ ಆಡಿಯೋದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು ತಮ್ಮ ಪಕ್ಷ ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ತಾವಾಗಿಯೇ ಪಕ್ಷ ಸೇರಲು ಬಯಸುವ ಶಾಸಕರುಗಳಿಗೆ ಬೇಡ ಎನ್ನುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಆಡಿಯೋದ ಅಧಿಕೃತತೆಯನ್ನು ಮತ್ತು ಇದರ ಮೂಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಖ್ಯವಾಗಿ ಈಗ ಈ ಆಪರೇಷನ್ ಕಮಲ ಯಾರಿಗೆ ಹೆಚ್ಚು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿಶ್ಲೇಷಿಸಿ ನೋಡಬೇಕಾಗಿದೆ. 

Dec 3, 2018

ಡ್ರಾಫ್ಟ್ ಮೇಲ್: ಭಾಗ 5 - ಒಂದು ಮಡಚಿಟ್ಟ ಪುಟ


ಚೇತನ ತೀರ್ಥಹಳ್ಳಿ.

ಚಿನ್ಮಯಿ ನಿರಾಳವಾಗಿದ್ದಾಳೆ. ಬೆಳಕು ಬಾಗಿಲಿನಾಚೆ ಹೋಗುತ್ತಿದ್ದರೂ ಒಳಗಿನ ಕತ್ತಲು ಮಾಯವಾಗಿದೆ. ಅವಳ ಒಳಗಿನ ಕತ್ತಲು…

ಆಡದೆ ಉಳಿಸಿಕೊಳ್ಳುವ ಮಾತು ಹೇಗೆಲ್ಲ ಜೀವ ಹಿಂಡುತ್ತೆ!
ಡ್ರಾಫ್ಟ್ ಮೇಲ್ ಕಳಿಸುವವರೆಗೂ ಅವಳಿಗೆ ತಾನು ಹೊತ್ತುಕೊಂಡಿದ್ದ ಭಾರ ಗೊತ್ತೇ ಆಗಿರಲಿಲ್ಲ!!
ಹಾಗಂತ ಎಲ್ಲ ಮಾತುಗಳು ಹೊರೆಯಾಗೋದಿಲ್ಲ. ಕೆಲವು ಯೋಗ್ಯತೆಯಲ್ಲಿ ಅದೆಷ್ಟು ಹಗುರವಾಗಿರುತ್ತವೆ ಅಂದರೆ…
ಅವುಗಳನ್ನು ನೆನೆದು ದುಃಖ ಪಡಲಿಕ್ಕೂ ಅಸಹ್ಯ ಅನ್ನಿಸಿಬಿಡುತ್ತೆ.

ಚಿನ್ಮಯಿಗೆ ಗೊತ್ತಿದೆ.
ಕಾಲ ಮೀರಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೆಂದು.
ಕೆಲವೊಮ್ಮೆ ಅಂಥ ಮಾತುಗಳು ವ್ಯಾಲಿಡಿಟಿ ಮುಗಿದ ಮಾತ್ರೆಗಳಂತೆ ದುಷ್ಟಪರಿಣಾಮ ಬೀರೋದೇ ಹೆಚ್ಚು!

“ಬೋಲ್ ಕೆ ಲಬ್ ಆಜಾದ್ ಹೈ ತೇರೇ ಜಬಾನ್ ಅಬ್ ತಕ್ ತೇರೀ ಹೈ…” ಅವಳಿಷ್ಟದ ಫೈಜ್ ಪದ್ಯ.
ತಾನು ಕಳಿಸದೇ ಬಿಟ್ಟ ಮೇಲ್’ಗಳನ್ನು ಓದುತ್ತ ಕುಳಿತಿದ್ದಾಳೆ. ಅವನ್ನು ಈಗಲೂ ಯಾರಿಗೂ ಕಳಿಸಲಾರಳು. ಕೆಲವಂತೂ ತನಗೇನೇ ಓದಿಕೊಳ್ಳಲು ಅಸಹ್ಯ!
ತಾನು ಹಾಗೆಲ್ಲ ಇರುವ ಅನಿವಾರ್ಯತೆ ಯಾಕಿತ್ತು? ಯಾಕೆ ಮಾತಾಡಬೇಕಿದ್ದಾಗ ಸದ್ದುಸುರಲಿಲ್ಲ?
ಆಗೆಲ್ಲ ನನ್ನ ತುಟಿಗಳ ಸ್ವಾತಂತ್ರ್ಯ ಕಸಿದಿದ್ದು ಯಾರು? ನನ್ನ ನಾಲಿಗೆ ನನ್ನದಲ್ಲವೆನ್ನುವಂತೆ ಮಾಡಿದ್ದು ಯಾರು!?
ಕೊನೆಪಕ್ಷ ಗೌತಮನ ಬಳಿಯೂ ಹೇಳಿಕೊಳ್ಳಲಿಲ್ಲ!
ಹಳೆಯ ಕಂತುಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

Nov 28, 2018

ಪರಿತ್ಯಕ್ತೆ

ಪದ್ಮಜಾ ಜೋಯ್ಸ್ ದರಲಗೋಡು
ವಿಷಾದವೇ ಮಡುಗಟ್ಟಿದಂತೆ ನಿಸ್ಸಾರವಾಗಿ ಮಾಗಿದ ವಯಸ್ಸಿನ ದುಗುಡದ ಮನಸ್ಸಿನಿಂದೆಂಬಂತೆ ಸದ್ದಿಲ್ಲದೇ ಸರಿದು ಬಂದ ಅವನನ್ನು ಹೊತ್ತ ಕಾರೊಂದು ಆ ಕಟ್ಟಡದ ಎದುರು ಬಂದು ನಿ಼ಂತಾಗ ನಿರೀಕ್ಷೆಯಲ್ಲಿದ್ದಂತೇ ಒಳಗಿನಿಂದ ಎರಡು ಜೋಡಿ ಕಂಗಳು ಗಮನಿಸಿದ್ದವು.....ಅದೊಂದು ಮಾನಸಿಕ ಚಿಕಿತ್ಸಾ ಕೇಂದ್ರ....
ಗಮನಿಸಿದ, ನಿರೀಕ್ಷೆಯಲ್ಲೇ ಇದ್ದ ಒಂದು ಜೋಡಿ ಕಂಗಳಲ್ಲೊಂದು ಮನೋರೋಗ ತಜ್ಞರಾದರೇ... ಇನ್ನೊಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಯದು.... ಇಂದವಳ ಹುಟ್ಟಿದ ಹಬ್ಬ , ಇದು ದಶಕದಿಂದಲೂ ಅನೂಚಾನವಾಗಿ ನೆಡೆಯುತ್ತಿರುವ ಘಟನೆಯೇ ಆದರೂ ಯಾವುದೋ ನಿರೀಕ್ಷೆ ಹೊತ್ತು ಬರುವವರಲ್ಲಿ ದಿನದಿನಕ್ಕೂ ನಿರಾಸೆ ಮಡುಗಟ್ಟುತ್ತಿರುವುದನ್ನು .. ತಜ್ಞರೂ .. ಗಮನಿಸಿ ಸತ್ಯವನ್ನು ಹೇಳಿಬಿಡಿಬೇಕೆಂಬ ತುಡಿತ ಅತಿಯಾದರೂ ರೋಗಿಗಿತ್ತ ವಾಗ್ದಾನ ನೆನಪಾಗಿ ಖೇದದಿಂದ ತುಟಿ ಬಿಗಿದುಕೊಂಡರು...
ಕಾರು ನಿಲ್ಲಿಸಿದವ ಏನನ್ನೋ ನಿರೀಕ್ಷಿಸುವಂತೆ "ಅವಳ" ರೂಮಿನ ಕಿಟಕಿಯತ್ತ ಕಣ್ಣು ಹಾಯಿಸಿ ನಿರಾಸೆಯಿ಼ಂದ ನಿಟ್ಟುಸಿರಿಟ್ಟು, ತಲೆಕೊಡವಿ ಅವನು "ಅವಳಿಗಾಗಿ" ತಂದ ವಸ್ತುಗಳನ್ನು ಎದೆಗವಚಿಕೊಂಡು ಹಿಂದೆ ಬ಼ಂದ ಇನ್ನೊಂದು ಕಾರು ಹಾಗೂ ಬ಼ಂದವರಿಗೆ ಕಾಯದೇ ಒಳನೆಡೆದ , 
ಮತ್ತುಳಿದವರು "ಆವಳ" ಬಳಗ ಅವರೂ ತ಼ಂದದ್ದೆಲ್ಲವನ್ನೂ ಎತ್ತಿಕೊಂಡು ಹಿ಼ಂದೆಯೇ ನೆಡೆದರು... ಎಲ್ಲ ಮೌನವಾಗಿ ಪರಸ್ಪರ ದಿಟ್ಟಿಸಿಕೊಂಡರೇ ವಿನಾ ಆಡಲ್ಯಾವ ಮಾತುಗಳಿರಲಿಲ್ಲ... 

Nov 26, 2018

ಡ್ರಾಫ್ಟ್ ಮೇಲ್: ಭಾಗ 4 - ಬಟವಾಡೆಯಾಗದ ಪತ್ರ ಮತ್ತು ಗೌತಮ # 2

ಚೇತನ ತೀರ್ಥಹಳ್ಳಿ. 
To: editor@kt.com

ವಿಷಯ: ನಿಮ್ಮ ಪತ್ರಿಕೆಯ ಪಕ್ಷಪಾತ ಧೋರಣೆ ಕುರಿತು

ನಮಸ್ತೇ

ಗೋಧ್ರಾ ಹಿಂಸಾಚಾರ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿದೆ. ನೀವು ಗೋಧ್ರಾದಲ್ಲಿ ಹಿಂದುತ್ವವಾದಿಗಳು ನಡೆಸಿದ ವಿಧ್ವಂಸದ ಬಗ್ಗೆ ಬರೆದುದೆಲ್ಲವೂ ಸರಿಯಾಗಿದೆ. ಆದರೆ, ಅದೇ ವೇಳೆ ನೀವು ಮುಸಲ್ಮಾನರು ನಡೆಸಿದ ದುಷ್ಕøತ್ಯಗಳನ್ನು ಸಂಪೂರ್ಣ ಮರೆಮಾಚಿದ್ದೀರಿ.

ಮುಗ್ಧ ಕೌಸರಳ ಭ್ರೂಣ ಬಗೆದು ಎಂದೆಲ್ಲ ಅತಿರಂಜಿತವಾಗಿ ಬರೆದಿರುವ ಲೇಖಕರು (ಆ ಹೆಣ್ಣುಮಗಳ ಅವಸ್ಥೆಗೆ ಪ್ರಾಮಾಣಿಕ ಸಂತಾಪವಿದೆ. ಆ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇನೆ) ಕಾಶ್ಮೀರಿ ಪಂಡಿತಾಯಿನರನ್ನು ಜೀವಂತ ಗರಗಸದಲ್ಲಿ ಕೊಯ್ದಿದ್ದು ಮರೆತೇಬಿಟ್ಟಿದ್ದಾರೆ.

ಇಷ್ಟಕ್ಕೂ ಕರಸೇವಕರನ್ನು ರೈಲಿನ ಬೋಗಿಯಲ್ಲಿ ಕೂಡಿ ಹಾಕಿ ಜೀವಂತ ಸುಡದೆ ಹೋಗಿದ್ದರೆ, ಈ ಪ್ರತೀಕಾರಕ್ಕೆ ಅವರು ಇಳಿಯುತ್ತಿದ್ದರೆ?

ದಯವಿಟ್ಟು ನಿಷ್ಪಕ್ಷಪಾತವಾದ ಲೇಖನಗಳನ್ನು ಪ್ರಕಟಿಸಲು ವಿನಂತಿ.

ವಂದೇ,

ಚಿನ್ಮಯಿ ಕೆಸ್ತೂರ್

Nov 22, 2018

ಅವಳು

ಪ್ರವೀಣಕುಮಾರ್ ಗೋಣಿ
ಅವಳ ಕಣ್ಣಂಚಿನ ಬೆಳಕೊಳಗೆ
ಬದುಕು ಮತ್ತೆ ಚಿಗುರೊಡೆಯುವುದು 
ಕತ್ತಲಿನ ಭಯವ ಅಳಿಸಿ 
ಉಲ್ಲಾಸದ ಅಭಯ ಹೃದಯದೊಳಗೆ ಅರಳುವುದು .

Nov 19, 2018

ಡ್ರಾಫ್ಟ್ ಮೇಲ್: ಭಾಗ 3 - ಗೌತಮ #1


ಚೇತನ ತೀರ್ಥಹಳ್ಳಿ. 

ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ. 

ಅದಕ್ಕೂ ಹಿಂದಿನದೆಲ್ಲ ಸೇರಿ, ಈ ಹದಿನೈದು ವರ್ಷಗಳ ಹರಿವಿನಲ್ಲಿ ಅವಳು ಈಜಿದ್ದೆಷ್ಟು, ಮುಳುಗಿದ್ದೆಷ್ಟು!

ಆಗಾಗ ಮನೆಗೆ ಬರುವ ತವರು ಅವಳ ತಲೆ ನೇವರಿಸಿ ಕಣ್ಣೀರಿಡುತ್ತದೆ. ಚಿನ್ಮಯಿಗೆ ಯಾಕೆಂದೇ ಅರ್ಥವಾಗೋದಿಲ್ಲ.

ಮಧ್ಯಾಹ್ನದಲ್ಲಿ ಬೆಳಕಿನ ಬಾಗಿಲಾಗುವ ಬಿಸಿಲು, ಹೊತ್ತು ಕಳೆದಂತೆ ಕರಗುವುದು ಅವಳಿಗೆ ಗೊತ್ತಿದೆ; ಮತ್ತೆ ಮರುದಿನ ಮೂಡುತ್ತದೆ ಅನ್ನೋದು ಕೂಡಾ.

ಒಂದೇ ಒಂದು ಜನ್ಮದಲ್ಲಿ ಹಲವು ಬದುಕು ಬಾಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. 

ವಾಸ್ತವದಲ್ಲಿ, ಅದು ಸಿಗುವಂಥದಲ್ಲ… ನಾವೇ ಕಂಡುಕೊಳ್ಳುವಂಥದ್ದು. ಹಲವು ಬದುಕುಗಳ ಅವಕಾಶ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಹಾಗಂತ ಚಿನ್ಮಯಿ ನಂಬಿಕೊಂಡಿದ್ದಾಳೆ. ಅದನ್ನು ಸಾವಧಾನವಾಗಿ ಸಾಕಾರ ಮಾಡಿಕೊಂಡಿದ್ದಾಳೆ ಕೂಡ.

ತಾನು ಏನಾಗಿದ್ದಾಳೋ ಆ ಬಗ್ಗೆ ಅವಳಿಗೆ ಖುಷಿ ಇದೆ. ಹಾಗಂತ ಅವಳು ಏನೋ ಆಗಿಬಿಟ್ಟಿದ್ದಾಳೆ ಎಂದಲ್ಲ. ಅವಳಿಗೆ ತಾನು ‘ಚಿನ್ಮಯಿ’ ಆಗಿರುವ ಬಗ್ಗೆ ನೆಮ್ಮದಿಯಿದೆ! ಹಾಗೆಂದೇ ಮನಮಂದಿಯ ದುಃಖ ಅವಳನ್ನು ಗಲಿಬಿಲಿಗೊಳಿಸುತ್ತದೆ. ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತೆ ಕೂಡಾ. 

Nov 17, 2018

ಆತ್ಮ ಮತ್ತು ಕಸಾಯಿಖಾನೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ಆತ್ಮವನ್ನು ಹಾಡಹಗಲೇ
ಬಟಾಬಯಲೊಳಗೆ ಬಿಚ್ಚಿಡಬಾರದೆಂಬುದನ್ನು
ಮರೆತಿದ್ದೆ.

ಬೀದಿಗೆ ಬಂದ ಅಪರೂಪದ ಆತ್ಮವನ್ನು
ಕಸಾಯಿ ಖಾನೆಯ ಚಕ್ಕೆಗಳೆದ್ದ ಮರದ ದಿಮ್ಮಿಯ ಮೇಲಿಟ್ಟು
ಕತ್ತು ಕತ್ತರಿಸಿದರು
ಮುಂಡದಿಂದ ಚಿಮ್ಮಿದ ರಕ್ತವನ್ನು ದೊಡ್ಡ 
ಅಲ್ಯೂಮಿನಿಯಂ ಪಾತ್ರೆಯಲ್ಲಿ ಹಿಡಿದು
ದಾಹ ತೀರುವವರೆಗು ಕುಡಿದರು

Nov 13, 2018

ಮೇರ್ಕು ತೊಡರ್ಚಿ ಮಲೈ ಎಂಬ ದೃಶ್ಯ ಕಾವ್ಯ.

ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ). 

ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ. 

Nov 12, 2018

ಮಾತನಾಡಲಾಗಲೇ ಇಲ್ಲ!

ಕು.ಸ.ಮಧುಸೂದನ ರಂಗೇನಹಳ್ಳಿ
ಅಪರೂಪಕ್ಕೆ ಸಿಕ್ಕ ಗೆಳೆಯ
ಮಾತನಾಡುತ್ತ ಹೋದೆವು
ಬೇಸಿಗೆ ಬಗ್ಗೆ
ಬಾರದ ಮಳೆ ಏರುತ್ತಿರುವ ಬೆಲೆ ಬಗ್ಗೆ
ಬೆಳೆಯುತ್ತಿರುವ ಮಕ್ಕಳ ಅವರ ಓದಿನ ಬಗ್ಗೆ
ಮದುವೆಗೆ ಬಂದ ಮಗಳ 
ಮದುವೆಗೆಂದು ಚೀಟಿಹಾಕಿದ ಹಣದ ಬಗ್ಗೆ 
ಮಾತಾಡಿದೆವು

ಡ್ರಾಫ್ಟ್ ಮೇಲ್: ಭಾಗ 2 - ಡ್ರಾಫ್ಟ್ ಸೇರಿದ ಮೊದಲ ಪತ್ರ


ಚೇತನ ತೀರ್ಥಹಳ್ಳಿ. 

ಡಿಯರ್ ಫೆಲೋಟ್ರಾವೆಲರ್,

ನನ್ನ ತಿರುವಿನಲ್ಲಿ ತಿರುಗುತ್ತಿದ್ದೇನೆ. ಈ ತಿರುವೇ ನನ್ನ ನಿಲ್ದಾಣವೂ ಆಗಲಿದೆ. 

ನಂಗೆ ಸತ್ತುಹೋಗಬೇಕು ಅನಿಸುತ್ತಿದೆ. ಇದನ್ನು ನನ್ನ ಕೊನೆಯ ಪತ್ರ ಅಂದುಕೋ. 

ನೀನು ವಾಪಸ್ ಬರುವ ಹೊತ್ತಿಗೆ ನಾನು ಇರೋದಿಲ್ಲ. ಶೋಕೇಸಿನಲ್ಲಿ ನಿನ್ನ ಫೋಟೋ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದೀನಿ. ಅದನ್ನು ಪೊಲೀಸರಿಗೆ ಕೊಡು. 

ಅದರಲ್ಲೂ ವಿಶೇಷವೇನಿಲ್ಲ. ಯಾಕೆ ಬದುಕಬೇಕು ಅಂತ ಗೊತ್ತಿಲ್ಲದ ಕಾರಣ ಸತ್ತು ಹೋಗ್ತಿದ್ದೀನಿ ಅಂತ ಬರೆದಿದ್ದೀನಿ. 

ಇತ್ತೀಚೆಗೆ ನಮ್ಮ ನಡುವೆ ಜಗಳ ಜಾಸ್ತಿಯಾಗ್ತಿದೆ. ನೀನು ಇಷ್ಟು ಅಸಹನೆ ಮಾಡಿದರೆ ನಾನು ಹೇಗೆ ಬದುಕಿರಲಿ? ಖುಷಿಗೆ, ಬದುಕಿಗೆ, ಧೈರ್ಯಕ್ಕೆ ಜೊತೆ ಯಾರಿದ್ದಾರೆ?

ಆದರೆ ಡೆತ್ ನೋಟಿನಲ್ಲಿ ಇದನ್ನೆಲ್ಲ ಬರೆದಿಲ್ಲ.

Nov 9, 2018

ಖಾಸಗಿ ಬ್ಯಾಂಕಿನ ಅಮಾನವೀಯ ನಡೆ! ಮುಕ್ತ ಆರ್ಥಿಕ ನೀತಿಯ ಫಲ

ಕು.ಸ.ಮಧುಸೂದನ ರಂಗೇನಹಳ್ಳಿ
ಜಾಗತೀಕರಣದ ಮತ್ತೊಂದು ಮಾರಕಾಯುಧ ನಮ್ಮ ರೈತರ ಬಲಿ ಪಡೆಯುವತ್ತ ಮುಂದಾಗಿದೆ.ಅದೇ ಆಕ್ಸಿಸ್ ಬ್ಯಾಂಕ್! 

ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಫಲವಾಗಿ 1993ರಲ್ಲಿ ಜನ್ಮ ತಳೆದ ಖಾಸಗಿ ವಲಯದ ಈ ಬ್ಯಾಂಕ್ ದೇಶದಾದ್ಯಂತ 1947 ಶಾಖೆಗಳನ್ನು ಹೊಂದಿದೆ. ಖಾಸಗಿ ವಲಯದ ಅತ್ಯಂತ ಪ್ರಮುಖ ಬ್ಯಾಂಕ್ ಎಂದು ಹೆಸರು ಮಾಡಿರುವ ಇದು ದೇಶದ ಬೇರೆಲ್ಲ ಬ್ಯಾಂಕುಗಳಿಗಿಂತ ಹೆಚ್ಚು ಎ.ಟಿ.ಎಂ. ಗಳನ್ನು ಸಹ ಹೊಂದಿದೆ. ಇದರ ಕೇಂದ್ರಕಛೇರಿ ಮುಂಬೈನಲ್ಲಿದೆ..ಇರಲಿ ನಾನೇನು ಇಲ್ಲಿಈ ಬ್ಯಾಂಕಿನ ಮಾಹಿತಿ ನೀಡಲು ಇದನ್ನು ಬರೆಯುತ್ತಿಲ್ಲ. ವಿಷಯಕ್ಕೆ ಹೋಗುವ ಮೊದಲು ಈ ಬ್ಯಾಂಕಿನ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಿರಲೆಂದು ಹೇಳಿದೆ. 

ಇದೀಗ ಈ ಬ್ಯಾಂಕು ಕನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸುಮಾರು 181 ರೈತರ ವಿರುದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕೋರ್ಟಿನಿಂದ ಬಂಧನದ ಆದೇಶವನ್ನು ಹೊರಡಿಸಿ ತನ್ನ ರಾಕ್ಷಸೀತನವನ್ನು ಮೆರೆದಿದೆ. ಇದೀಗ ರೈತಸಂಘ ಮತ್ತು ರಾಜ್ಯ ಸರಕಾರಗಳ ಮದ್ಯಸ್ಥಿಕೆಯಿಂದ ತನ್ನ ಕಾನೂನು ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಬ್ಯಾಂಕಿನ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಈ ಬಂಧನದ ವಾರೆಂಟುಗಳು ರದ್ದಾಗುವುದಿಲ್ಲ. ಯಾಕೆಂದರೆ ಈ ವಾರೆಂಟುಗಳನ್ನು ಹೊರಡಿಸಿರುವುದು ಎರಡು ಸಾವಿರ ಮೈಲುಗಳಷ್ಟು ದೂರವಿರುವ ಕೊಲ್ಕತ್ತಾದ ನ್ಯಾಯಾಲಯಗಳು. ಕಾರಣ ಕರ್ನಾಟಕದಲ್ಲಿನ ಈ ಬ್ಯಾಂಕುಗಳು ಕೊಲ್ಕತ್ತಾದ ಆಡಳಿತವಲಯಕ್ಕೆ ಸೇರಿರುವುದು. ಈಗ ಅಲ್ಲಿ ನ್ಯಾಯಾಲಯಗಳಿಗೆ ದೀಪಾವಳಿಯ ರಜೆ ಇರುವುದರಿಂದ ಅವುಗಳು ಮತ್ತೆ ತಮ್ಮಕಲಾಪಗಳನ್ನು ಪ್ರಾರಂಭಿಸುವವರೆಗು ನಮ್ಮ ರೈತರು ಬಂಧನದ ಭೀತಿಯಲ್ಲಿಯೇ ಬದುಕುವ ಅನಿವಾರ್ಯ ಸೃಷ್ಠಿಯಾಗಿದೆ.

Nov 8, 2018

ಕಾಯುತ್ತಲೇ ಇರುತ್ತೇವೆ!

ಕು.ಸ.ಮಧುಸೂದನ ರಂಗೇನಹಳ್ಳಿ
ಯಾವತ್ತೂ ಅಚಲವಾಗಿ ಎದ್ದು ನಿಲ್ಲದೆ
ಗಟ್ಟಿ ದ್ವನಿಯಲ್ಲಿ ಮಾತಾಡದೆ
ನಡುಬಾಗಿಸಿ ನಿಂತವರಿಗೆ
ನೋವುಗಳೇನು ಅಪರಿಚಿತ ನೆಂಟರಲ್ಲ
ಒಡಹುಟ್ಟಿದ ಒಡನಾಡಿಗಳು.
ಮೂಗು ಹಿಡಿದರೆ ಬಾಯಿ ತಾನಾಗೆ ಬಿಡುತ್ತದೆಯೆಂದು ಗೊತ್ತಿದ್ದರು
ಹಿಡಿಯುವ ಧೈರ್ಯ ಸಾಲದೆ
ಕಾಯುತ್ತಿದ್ದೇವೆ ಬೆಕ್ಕಿಗೆ ಗಂಟೆ ಕಟ್ಟಬಲ್ಲ ನಾಯಕನಿಗಾಗಿ.

Nov 5, 2018

ಡ್ರಾಫ್ಟ್ ಮೇಲ್: ಭಾಗ 1

ಚೇತನ ತೀರ್ಥಹಳ್ಳಿ. 
ಚಿನ್ಮಯಿ ಕಾಲು ನೀಡಿಕೊಂಡು, ಲ್ಯಾಪ್‍ಟಾಪ್ ತೆರೆದು ಕುಳಿತಿದ್ದಾಳೆ. ನಡು ಮಧ್ಯಾಹ್ನದ ಬಿಸಿಲು ಗೋಡೆಗೆ ಅಪ್ಪಳಿಸಿ, ಬಾಗಿಲುದ್ದ ನೆಲದ ಮೇಲೆ ಅಂಗಾತ ಬಿದ್ದಿದೆ.

“ಅರೆ! ಬೆಳಕಿನ ಬಾಗಿಲು..” ತನ್ನೊಳಗೆ ಬೆರಗಾಗುತ್ತಾಳೆ.

ಹಗೂರ ಎದ್ದು, ಹೊಸ್ತಿಲಾಚೆ ಬಿಸಿಲಿಗೆ ಬೆನ್ನಾಗಿ ನಿಲ್ಲುತ್ತಾಳೆ. ಮನೆಯೊಳಗೆ ನೆಲದಲ್ಲಿ ಅವಳ ನೆರಳು!

ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಸೆಲ್ಫಿ ಮೋಡಿನಿಂದ ಮಾಮೂಲಿಗೆ ಬರುತ್ತಾಳೆ.

ಯಾವ ಕೋನದಿಂದ ತೆಗೆದರೆ ಫೋಟೋ ಚೆನ್ನಾಗಿ ಬರುತ್ತದೆ ಅನ್ನೋದು ಅವಳಿಗೆ ಗೊತ್ತಿದೆ.

ತಮ್ಮದೇ ಫೋಟೋ ತೆಗೆದುಕೊಳ್ಳುವವರು ಛಾಯಾಗ್ರಹಣವನ್ನ ವಿಶೇಷವಾಗಿ ಅಭ್ಯಾಸ ಮಾಡಬೇಕಿಲ್ಲ.. ನಾರ್ಸಿಸಿಸ್ಟ್‍ಗಳಾದರೆ ಸಾಕು ಅನ್ನೋದು ಅವಳ ನಂಬಿಕೆ.

ಚಿನ್ಮಯಿ ತೆಗೆದ ಫೋಟೋ ಅದ್ಭುತವಾಗಿ ಬಂದೇಬಂದಿದೆ. ‘ದೇಹ ಮೀರಿದರೂ ನೆರಳಿಗೆ ಹೊಸ್ತಿಲು ದಾಟಲಾರದ ಭಯ’ ಅನ್ನುವ ಒಕ್ಕಣೆ ಕೊಟ್ಟು ಇನ್ಸ್ಟಾಗ್ರಾಮಿನಲ್ಲಿ ಶೇರ್ ಮಾಡುತ್ತಾಳೆ.

ಅವಳು ತೀರ ಪುರುಸೊತ್ತಿನಲ್ಲಿ ಇದ್ದಾಳೆಂದು ಇದನ್ನೆಲ್ಲ ಮಾಡುತ್ತಿಲ್ಲ. ಮಾಡಲೇಬೇಕಿರುವ ಕೆಲಸವೊಂದನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಮುಂದೂಡಲಿಕ್ಕಾಗಿ ಮಾಡುತ್ತಿದ್ದಾಳೆ. ಅದೊಂದು ಮಾಡಿಬಿಟ್ಟರೆ ಈ ದಿನದ ಕೆಲಸವೇ ಮುಗಿದುಹೋಗುತ್ತದೆ. ಆದರೆ ಚಿನ್ಮಯಿ ಯಾವುದನ್ನು ವಿಪರೀತ ಇಷ್ಟಪಡುತ್ತಾಳೋ ಅದನ್ನು ಹೊಂದಲು ಭಯಪಡುತ್ತಾಳೆ.

ಅವಳಿಗೆ ಖಾಲಿಯಾಗುವುದೆಂದರೆ ಇಷ್ಟ.

ಅವಳಿಗೆ ಖಾಲಿಯಾಗುವುದೆಂದರೆ ಭಯ.

Nov 4, 2018

ಧಗಧಗಿಸುವೊಂದು ಮದ್ಯಾಹ್ನ!


ಕು.ಸ.ಮಧುಸೂದನ್

ನಕ್ಷತ್ರಗಳು ಬೂದಿಯಾಗಿ
ಚಂದ್ರ ಕರಗಿ
ಸೂರ್ಯ ನಿಗಿನಿಗಿ ಕೆಂಡವಾಗಿ

ತೆಂಗಿನ ಮರಕೆ ಬಡಿದು ಸಿಡಿಲು
ನಾಲ್ಕಂಕಣದ ಮನೆತೊಲೆಗಳಿಗೆ ಗೆದ್ದಲು
ನೆಲ ಮಾಳಿಗೆಯೊಲು ಹೂತಿಟ್ಟ ಹೆಣಗಳು ತೂಗಿ

ಹುಳು ಬಿದ್ದು ಅನ್ನದ ತಟ್ಟೆಯೊಳಗೆ
ಹದ್ದುಗಳು ಹಣಕುತ್ತ ಅಮೃತದ 
ಬಟ್ಟಲೊಳಗೆ ಬಾಗಿ
ಕು.ಸ.ಮಧುಸೂದನ್ ರವರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

Oct 31, 2018

ಮೀಟೂ ಮತ್ತು ಶಬರಿಮಲೆ ವಿವಾದಗಳ ನಡುವೆ ನಾವು ಮರೆತದ್ದೇನು?

ಕು.ಸ.ಮಧುಸೂದನ ರಂಗೇನಹಳ್ಳಿ 
ಇಂಡಿಯಾದ ಸಂಸದೀಯ ಪ್ರಜಾಸತ್ತೆಯ ದೌರ್ಬಲ್ಯ ಮತ್ತು ದುರಂತವಿರುವುದೇ ನಮ್ಮ ಈ ತೆರನಾದ ನಡವಳಿಕೆಗಳಲ್ಲಿ. ಈ ನೆಲದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಕಾಲಕಾಲಕ್ಕೆ ಇಂತಹ ಹುಸಿಕ್ರಾಂತಿಗಳ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು, ಅವುಗಳ ಸುತ್ತ ಚರ್ಚೆಯಾಗಬೇಕಾದ ವಿಚಾರಗಳ ದಾರಿ ತಪ್ಪಿಸುತ್ತ ಹೋಗುವುದು ನಡೆದುಕೊಂಡೇ ಬಂದಿದೆ.ನಾವು ಸಹ ನಮಗರಿವಿದ್ದೊ ಇಲ್ಲದೆಯೊ ದಾರಿ ತಪ್ಪುತ್ತಲೇ ಬರುತ್ತಿದ್ದೇವೆ. 

ಇದೀಗ ಎರಡು ವಿಷಯಗಳು ಇಡೀದೇಶದ ಗಮನವನ್ನು ಸೆಳೆದಿದ್ದು ನಮ್ಮ ಗಮನ ಮತ್ತು ಚರ್ಚೆಗಳನ್ನು ಆ ಎರಡು ವಿಚಾರಗಳೇ ಆವರಿಸಿಕೊಂಡಿವೆ. ಮೊದಲನೆಯದು ಮಾಜಿ ನಟಿ ತನುಶ್ರೀ ದತ್ತಾ ಶುರು ಮಾಡಿದ ಮೀಟೂ ಅಭಿಯಾನವಾದರೆ ಎರಡನೆಯದು, ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ಬಗ್ಗೆ ಎದ್ದಿರುವ ವಿವಾದ ಮತ್ತು ಅದರ ಪರ-ವಿರೋಧ ಪ್ರತಿಭಟನೆಗಳು!. 

ಉಂಟೆ !?


ಪ್ರವೀಣಕುಮಾರ್ ಗೋಣಿ
ಮಾಯೆಯೆನ್ನುವ ಮಿಥ್ಯದ 
ನರ್ತನದ ತೆಕ್ಕೆಗೆ ಸಿಕ್ಕಿ 
ದುರುಳ ಮನಸಿನ 
ವಶವಾಗುವ ಸ್ಥಿತಿಗಿಂತ 
ಹೀನತೆ ಬೇರೊಂದು ಉಂಟೆ ?

ತೀರದ ದಾಹಕ್ಕೆ 
ತೊರೆಯಲಾಗದ ಮೋಹಕ್ಕೆ 
ಅಂತ್ಯವಿರದ ವಾಸನೆಗಳ 
ಸೆರೆಯಿಂದ ಬಿಡಿಸಿಕೊಳ್ಳಲಾಗದ 
ಪಾಮರತೆಗಿಂತ ಬೇರೆ ನಿಕೃಷ್ಟತೆಯುಂಟೆ ?

ಮಸ್ತಕದೊಳಗಿನ ಮಣಭಾರದ 
ಜ್ಞಾನವನ್ನೇ ಅರಿವ ಕಿರೀಟವಾಗಿಸಿಕೊಂಡು
ತನ್ನ ತಾನೇ ಜ್ಞಾನಿಯೆಂದು 
ಭಾವಿಸಿಕೊಂಡು ಬೀಗುವ ಭ್ರಮೆಗಿಂತ 
ಮತ್ತೊಂದು ಅಜ್ಞಾನ ಉಂಟೆ ?

Oct 19, 2018

ಛತ್ತೀಸ್ ಗಡ್ ಮತ್ತು ರಾಜಸ್ಥಾನಗಳಲ್ಲಿ ಬಾಜಪದ ಹಿನ್ನಡೆಗೆ ಇರಬಹುದಾದ ಕಾರಣಗಳು?

ಕು.ಸ.ಮಧುಸೂದನ ರಂಗೇನಹಳ್ಳಿ  
ಛತ್ತೀಸ್ ಗಡ 
ಇತ್ತೀಚೆಗೆ ಹೊರಬಿದ್ದಿರುವ ಚುನಾವಣಾಪೂರ್ವ ಸಮೀಕ್ಷೆಗಳನ್ನೇ ನಂಬುವುದಾದಲ್ಲಿ ಕಳೆದ ಐದು ವರ್ಷಗಳಿಂದ ಬಾಜಪದ ತೆಕ್ಕೆಯಲ್ಲಿರುವ ಛತ್ತೀಸ್ಗಡ ರಾಜ್ಯ ಈ ಬಾರಿ ಕಾಂಗ್ರೆಸ್ಸಿನ ಮಡಿಲಿಗೆ ಜಾರಿ ಬೀಳಲಿದೆ. 

ಛತ್ತೀಸ್ ಗಡ ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್ 47 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿದರೆ, ಬಾಜಪ 40 ಸ್ಥಾನಗಳೊಂದಿಗೆ ವಿಪಕ್ಷದಲ್ಲಿ ಕೂರಬೇಕಾಗುತ್ತದೆ. 2013ರಲ್ಲಿ ಬಾಜಪ 49 ಸ್ಥಾನಗಳನ್ನು, ಕಾಂಗ್ರೆಸ್ 39 ಸ್ಥಾನಗಳನ್ನು ಗೆದ್ದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಐದು ವರ್ಷಗಳ ಹಿಂದೆಯೂ ಬಾಜಪ ಮತ್ತು ಕಾಂಗ್ರೆಸ್ಸಿನ ನಡುವಿನ ಮತಗಳಿಕೆಯ ಪ್ರಮಾಣದಲ್ಲಿ ಹೆಚ್ಚೇನು ವ್ಯತ್ಯಾಸವಿರಲಿಲ್ಲ.ಈ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಎರಡೂ ರಾಷ್ಟ್ರೀಯ ಪಕ್ಷಗಳ ಮತಗಳಿಕೆಯ ಪ್ರಮಾಣದಲ್ಲಿ ಅಂತಹ ಅಗಾಧ ಅಂತರವೇನು ಇರುವುದಿಲ್ಲ. ಎರಡು ಪಕ್ಷಗಳ ಮತಗಳಿಕೆಯ ವ್ಯತ್ಯಾಸ ಶೇಕಡಾ 0.7ರಷ್ಟು ಮಾತ್ರ ಇರುತ್ತದೆ ಎಂದು ಹೇಳಲಾಗಿದ್ದು. ತೀವ್ರವಾದ ಹಣಾಹಣಿಯ ಕಾಳಗ ಇದಾಗಲಿರುವುದು ಖಚಿತ! 

ಈ ಹಿನ್ನೆಲೆಯಲ್ಲಿ ಛತ್ತೀಸ್ ಗಡ್ ರಾಜ್ಯದಲ್ಲಿನ ಬಾಜಪ ಸೋಲಿಗೆ ಕಾರಣಗಳೇನಾಗಿರಬಹುದೆಂಬುದನ್ನು ವಿಶ್ಲೇಷಿಸಿ ನೋಡಬೇಕಾಗುತ್ತದೆ. 

Oct 15, 2018

ಬಾಜಪಕ್ಕೆ ಲಾಭ ತರಲಿರುವ ಕಾಂಗ್ರೆಸ್-ಜನತಾದಳದ ಉಪಚುನಾವಣಾ ಮೈತ್ರಿ!

ಕು.ಸ.ಮಧುಸೂದನ ರಂಗೇನಹಳ್ಳಿ
ಕಾಂಗ್ರೆಸ್ ಮತ್ತು ಜನತಾದಳದ ಮೈತ್ರಿಯ ದೆಸೆಯಿಂದ ಹಳೆಯ ಮೈಸೂರು ಭಾಗದಲ್ಲಿ ಬಾಜಪ ಬೇರೂರಲು ಸುವರ್ಣಾವಕಾಶವೊಂದು ಸೃಷ್ಠಿಯಾಗಿದೆಯೇ? ಹೌದೆನ್ನುತ್ತಾರೆ, ಹಳೆ ಮೈಸೂರು ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು! ಅವರುಗಳ ಈ ಭಯ ಅಕಾರಣವೇನಲ್ಲ.

ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಮೂರು ಸಂಸತ್ ಸ್ಥಾನಗಳ ಮತ್ತು ಎರಡು ವಿದಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಮೈತ್ರಿಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಸ್ಪಷ್ಟವಾಗಿದೆ. ರಾಮನಗರ ವಿದಾನಸಭಾ ಕ್ಷೇತ್ರದಲ್ಲಿ ಜನತಾದಳವು (ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ಪತ್ನಿ, ಮಾಜಿ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ!) ಮಂಡ್ಯಮತ್ತು ಶಿವಮೊಗ್ಗ ಸಂಸತ್ ಕ್ಷೇತ್ರಗಳಲ್ಲಿ ಬಹುತೇಕ ಜನತಾದಳದ ಅಭ್ಯರ್ಥಿಗಳೇ ಕಣಕ್ಕಿಳಿಯಲಿರುವುದು ಖಚಿತವಾಗಿದೆ. ಅದರಲ್ಲೂ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಇದುವರೆಗು ಕಾಂಗ್ರೆಸ್ ಮತ್ತು ಜನತಾದಳಗಳೇ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು ಬಾಜಪ ಯಾವತ್ತಿಗೂ ಮೂರನೇ ಸ್ಥಾನದಲ್ಲಿರುತ್ತಿತ್ತು. ಇನ್ನು ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಬಾಜಪದ ನಡುವೆ ಹೋರಾಟವಿರುತ್ತಿದ್ದರೂ ಜನತಾದಳಕ್ಕೂ ಇಲ್ಲಿ ಬೇರು ಮಟ್ಟಿನ ಕಾರ್ಯಕರ್ತರುಗಳ ಪಡೆ ಇದೆ ಎನ್ನಬಹುದು. 

Oct 4, 2018

'ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿ': ಕೇಂದ್ರ ಚುನಾವಣಾ ಆಯೋಗದ ಅಪರೂಪದ ನಿರ್ದಾರದ ಹಿಂದಿರುವುದೇನು?

ಕು.ಸ.ಮಧುಸೂದನ ರಂಗೇನಹಳ್ಳಿ
ತೆಲಂಗಾಣ ವಿದಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ತೆಲಂಗಾಣದ ಉಸ್ತುವಾರಿ ಸರಕಾರವಾಗಲಿ ಅಥವಾ ಆ ರಾಜ್ಯ ಕುರಿತಂತೆ ಕೇಂದ್ರ ಸರಕಾರವಾಗಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದೆಂಬ ಆದೇಶವನ್ನು ಹೊರಡಿಸಿದೆ. 

ಕೇಂದ್ರ ಸರಕಾರದ ಆಜ್ಞಾಪಾಲಕನಂತೆ ವರ್ತಿಸುವ ಸಾಂವಿಧಾನಿಕ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿರ್ದಾರವನ್ನು ನಮ್ಮ ಕೇಂದ್ರ ಚುನಾವಣಾ ಆಯೋಗ ಈಗ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಹಾಲಿ ಇರುವ ಕೆ.ಚಂದ್ರಶೇಖರ್ ರಾವ್ ಅವರ ಸರಕಾರವು ಉಸ್ತುವಾರಿ ಸರಕಾರವಾಗಿದ್ದು, ಜನಪರವಾದ ಯಾವುದೇ ಜನಪ್ರಿಯ ಯೋಜನೆಗಳನ್ನು ಹೊಸದಾಗಿ ಘೋಷಿಸಲು ಅದು ಅಧಿಕಾರ ಹೊಂದಿಲ್ಲವೆಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತೆಲಂಗಾಣದ ಮುಖ್ಯಮಂತ್ರಿಗಳಾದ ಶ್ರೀ ಕೆ.ಚಂದ್ರಶೇಖರರಾವ್ ಇದೇ ಸೆಪ್ಟೆಂಬರ್ ಆರನೇ ತಾರೀಖು ವಿದಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ವಿದಾನಸಭೆಯನ್ನು ವಿಸರ್ಜಿಸಿದಾಗ ಶ್ರೀ ರಾವ್ ಅವರು ಬಹುಶ: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾಗಬಹುದು ಮತ್ತು ಡಿಸೆಂಬರ್ ಮದ್ಯಭಾಗದ ಹೊತ್ತಿಗೆ ಚುನಾವಣೆಗಳು ನಡೆಯಬಹುದು. ಈ ಬಗ್ಗೆ ನಾನು ಚುನಾವಣಾ ಆಯೋಗದ ಜೊತೆ ಚರ್ಚಿಸಿದ್ದೇನೆಂದೂ ಹೇಳಿದ್ದರು.

Sep 18, 2018

ನಿನ್ನ ಕಂಡೆ !!

ಪ್ರವೀಣಕುಮಾರ್ ಗೋಣಿ
ಸುಮ್ಮನೆ ನೀರಾಡುವ 
ಕಂಗಳ ಹಸಿಯಲ್ಲಿ ನಿನ್ನ ಕಂಡೆ 
ನಕ್ಕು ಹಗುರಾದಾಗ 
ಸ್ಪುರಿಸಿದ ಸಮಾಧಾನದಲ್ಲಿ ನಿನ್ನ ಕಂಡೆ .

ಸಾಕೆನಿಸಿದ ಬದುಕ ಜಂಜಾಟದಲ್ಲೂ 
ಸೋಕಿದ ಸಂಕಟದೊಳಗೂ ನೀನೇ ಕಂಡೆ 
ಮುಸುಕು ಸರಿಸಿ ಅರಳಿದ 
ಸಂಭ್ರಮದ ಸಡಗರದಲ್ಲೂ ನಿನ್ನನೇ ಕಂಡೆ .

Sep 17, 2018

"ಹೆಣ್ಣೊಪ್ಪಿಸಿ ಕೊಡೋದು" ಎಂಥೊಂದು ಶಾಸ್ತ್ರದ ಬೆನ್ನೇರಿ.....

ಪದ್ಮಜಾ ಜೋಯಿಸ್
"ಮದುವೆ" ಒಂದು ಮಹತ್ವದ ಸಂಪ್ರದಾಯ, ದೇವಾನುದೇವತೆಗಳ ವಿವರಗಳನ್ನು ಅನುಸರಿಸಿ ಬಂದ ಉಲ್ಲೇಖಗಳು ನಮ್ಮ ಮುಂದೆ ಸಾಕಷ್ಟು ಇವೆ, ಅಂತೆಯೇ ಅನಾದಿ ಕಾಲದಿಂದಲೂ ಇದೊಂದು ಪ್ರಮುಖ ಆಚರಣೆಯಾಗಿ ಶಾಸ್ತ್ರಬದ್ಧವಾಗಿ ನೆಡೆಯುವ ಕಾರ್ಯ, ಇದು ಸಂಸಾರ ಬ಼ಂಧನವನ್ನು ಸಾರುವ ಪತಿಪತ್ನಿಯರ ಸಮಾಗಮಕ್ಕೆ ಅನುವು ಮಾಡಿಕೊಡಲು ಹಿರಿಯರಿಂದ ಪರಂಪರಾನುಗತವಾಗಿ ಬಂದ ಒಂದು ಹಾದಿ... ಮೊದಮೊದಲು 7 ನಂತರ 5 ನಂತರ 3 ನಂತರ 2 ಈಗ 1ಒಂದೇ ದಿನಕ್ಕಾಗಿದೆ, ಇದರಲ್ಲಿ ತಥ್ಯವೂ ಇದೆ.. ಈಗಿನ ರಾಕೆಟ್ ಯುಗದಲ್ಲಿ ಅದಕ್ಕೆಲ್ಲಿ ಸಮಯ ??

ಜೀರಿಗೆ ಬೆಲ್ಲದಿಂದಿಡಿದು ಮಾಂಗಲ್ಯಧಾರಣೆವರೆಗೆ ಹಂತಹಂತವಾಗಿ ಪರಿಪೂರ್ಣಗೊಂಡನಂತರದ ಈ ಘಳಿಗೆ ಹೆಣ್ಣೊಪ್ಪಿಸಿ ಕೊಡುವ/ ಮನೆತುಂಬಿಸಿಕೊಡುವ ಶಾಸ್ತ್ರ , ಈ ಕಾರ್ಯ ಮಾತ್ರ ಹೆತ್ತೊಡಲಿನೊಂದಿಗೆ ನೆರೆದವರೆಲ್ಲರ ಮನಕಲಕಿ ಕರುಳು ಮೀಟುವಂತಹುದು, ಇಲ್ಲಿ ಹೆಣ್ಣೊಪ್ಪಿಸಿಕೊಡುವವರು ಮಾತ್ರವಲ್ಲ ಒಪ್ಪಿಸಿಕೊಂಡವರೂ ಕಣ್ಣೊರೆಸಿಕೊಳ್ಳುವುದು, ಇದಕ್ಕೊಂದಷ್ಟು ಹೆಂಗೆಳೆಯರ ಜಾನಪದ ಭಾವಗೀತೆ ಸಂಪ್ರದಾಯಗೀತೆಗಳ ಹಿಮ್ಮೇಳ ಬೇರೆ ದುಃಖದ ಬಿಕ್ಕುಗಳೊಂದಿಗೆ..... ನಂಬಿಕೆ ಭರವಸೆಗಳು ಸುಂದರ ಸಮರಸ ಬಾಳಿನ ಬುನಾದಿಯೇ ಆಗಿದೆ.....

ಶಾಸ್ತ್ರ ಸಂಪ್ರದಾಯ ಮೂಢನಂಬಿಕೆ ಎಂದು ಹೀಗೆಳೆವ ಮುನ್ನ ವೈಜ್ಞಾನಿಕ ಕಾರಣಗನ್ನೂ ವಿಶ್ಷ್ಲೇಷಿಸಿ ವಿವೇಚನೆಯಿಂದ ವಿವೇಕಯುತವಾಗಿ ಅರಿತು ನೆಡೆದಲ್ಲಿ ಎಲ್ಲವೂ ಸೊಗಸಾಗಿ ಹಿತವಾಗಿಯೇ ಇರುತ್ತವೆ,

Sep 16, 2018

ತೆಲಂಗಾಣ: ಕೆ. ಚಂದ್ರಶೇಖರ್ ರಾವ್ ಅವರ ರಾಜಕೀಯ ಜೂಜಾಟ!

ಕು.ಸ.ಮಧುಸೂದನ ರಂಗೇನಹಳ್ಳಿ
ವರ್ತಮಾನದ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ತನ್ನ ಅಧಿಕಾರದಾಹವನ್ನು ಪ್ರದರ್ಶಿಸಿ, ಅದಕ್ಕೆ ಪೂರಕವಾಗಿ ಸಂವಿದಾನದತ್ತವಾಗಿ ಜನತೆ ನೀಡಿದ ಐದು ವರ್ಷದ ಅಧಿಕಾರಾವಧಿಯನ್ನು ತಿರಸ್ಕರಿಸಿ, ವಿದಾನಸಭೆಯನ್ನು ವಿಸರ್ಜಿಸಿದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಶ್ರೀ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದ ಜನತೆಗೆ ಮಾತ್ರವಲ್ಲದೆ ಸಂವಿದಾನಕ್ಕೂ ದ್ರೋಹ ಬಗೆದಿದ್ದಾರೆ. ಈ ಹಿಂದೆಯೂ ಇಂಡಿಯಾದ ರಾಜಕಾರಣದಲ್ಲಿ ಹಲವಾರು ಮುಖ್ಯಮಂತ್ರಿಗಳು ಅವಧಿಗು ಮುನ್ನವೇ ವಿದಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದಿದೆ. ಆದರೆ ಅವರೆಲ್ಲರಿಗೂ ಹೇಳಿಕೊಳ್ಳಲು ಒಂದೊಂದು ಕಾರಣಗಳಿರುತ್ತಿದ್ದವು. ಸ್ಪಷ್ಟ ಬಹುಮತ ಇಲ್ಲದಿರುವುದು, ಸರಕಾರದ ಒಳಗೆ ಹಲವು ರೀತಿಯ ಭಿನ್ನಮತೀಯ ಚಟುವಟಿಕೆಗಳಿರುವುದು, ಸರಕಾರವೇ ದೊಡ್ಡ ಹಗರಣಗಳ ಸುಳಿಗೆ ಸಿಲುಕುವುದು ಹೀಗೇ ವಿದಾನಸಭೆ ವಿಸರ್ಜನೆ ಸಮರ್ಥಿಸಿಕೊಳ್ಳಲು ಅವರುಗಳಿಗೆ ಗಟ್ಟಿ ಕಾರಣಗಳಿರುತ್ತಿದ್ದವು. 

ಈ ಹಿನ್ನೆಲೆಯಲ್ಲಿ ನೋಡಿದರೆ ಚಂದ್ರಶೇಖರ್ರಾವ್ ಅವರಿಗೆ ಇಂತಹ ಯಾವುದೇ ಕಾರಣಗಳೂ ಇರಲಿಲ್ಲ ಮತ್ತು ಅವರ ಸರಕಾರದ ಭದ್ರತೆಗೆ ಯಾವುದೇ ಆಂತರೀಕ ಮತ್ತು ಬಾಹ್ಯ ಬೆದರಿಕೆಯೂ ಇರಲಿಲ್ಲ. ನೂರಾ ಹತ್ತೊಂಭತ್ತು ಸಂಖ್ಯಾಬಲದ ವಿದಾನಸಭೆಯಲ್ಲಿ ಅವರ ಟಿ.ಆರ್.ಎಸ್.ಪಕ್ಷಕ್ಕೆ ತೊಂಭತ್ತು ಸ್ಥಾನಗಳ ರಾಕ್ಷಸ ಬಹುಮತ ಲಭ್ಯವಿತ್ತು. ಜೊತೆಗೆ ಅಂತಹ ಯಾವುದೇ ಭಿನ್ನಮತೀಯ ಚಟುವಟಿಕೆಯಾಗಲಿ, ಹಗರಣಗಳ ಆರೋಪವಾಶಗಲಿ ಇರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿದಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ. 

Sep 11, 2018

‘ದುರಿತಕಾಲದ ದನಿ’: ವರ್ತಮಾದ ತಲ್ಲಣಗಳಿಗೆ ಹಿಡಿದ ಕೈಗನ್ನಡಿ

ಪದ್ಮಜಾ ಜೋಯ್ಸ್ ದರಲಗೋಡು
"ಕವಿತೆ ಹುಟ್ಟುವುದಿಲ್ಲ ಸುಖದ ಉದ್ಗಾರಗಳಲ್ಲಿ,
ಅದು ಹುಟ್ಟುವುದು ನೋವಿನ ಛೀತ್ಕಾರಗಳಲ್ಲಿ...!!

ಕು.ಸ.ಮಧುಸೂದನ ರಂಗೇನಹಳ್ಳಿ ಯವರ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಭಟ್ಟೀ ಇಳಿಸಿದ ಸಂಕಲನ.ಈ ದನಿಯ ಹಿಂದಿನ ಕಾಳಜಿ ದೀನದಲಿತರ ಕಷ್ಟ ಸಂಕಷ್ಟಗಳಿಗೆ ಮಿಡಿಯುವ ಹೃದಯದ ಸ್ವಚ್ಛ ಶುದ್ಧ ಮಾನವೀಯತೆ ಮನಕಲಕುವಂತಿದೆ.

‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೇ...

"ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನೆಡೆದಿದ್ದರೇ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೇ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ , ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ."" 

‘ದುರಿತಕಾಲದ ದನಿ’ ಕವನಸಂಕಲನದ ಬಿಡುಗಡೆ ಸಮಾರಂಭ.

ಕು.ಸ.ಮಧುಸೂದನರಂಗೇನಹಳ್ಳಿ ಅವರ ಕವನ ಸಂಕಲನ ಲೋಕಾರ್ಪಣೆ ಮಾಡಿದ ಖ್ಯಾತ ವಿಮರ್ಶಕ ಆರ್.ಜಿ. ಹಳ್ಳಿ ನಾಗರಾಜ್ ಈ ಸಂದರ್ಭದಲ್ಲಿ ಮಾತನಾಡುತ್ತ,

“ಸಂತೋಷ ಕೊಡುವ ಕಾಲದಲ್ಲಿ ನಾವು ಬದುಕುತ್ತಿಲ್ಲ ಅಸಹಿಷ್ಣುತೆ, ಭಯದ ಜೊತೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುತ್ತಿದ್ದೇವೆ.ಸಂಸ್ಕೃತಿಯ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.ಇಂತಹ ಸಮಕಾಲೀನ ವಿಚಾರಗಳನ್ನಿಟ್ಟುಕೊಂಡೇ ಕು.ಸ.ಮಧುಸೂದನರಂಗೇನಹಳ್ಳಿಯವರ ಕವಿತೆಗಳು ಸೃಷ್ಠಿಯಾಗಿವೆ.ಈಗಿನ ದುರಿತ ಕಾಲದ ವಿರುದ್ದ ಆರೋಗ್ಯಪೂರ್ಣ ದ್ವನಿ ಎತ್ತಿರುವ ಈ ಸಂಕಲನದ ಕವಿತೆಗಳಿಗೆ ವಿಶೇಷ ಮಹತ್ವವಿದೆ” ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಕವಿಯಿತ್ರಿ ಶ್ರೀಮತಿ ಹೆಚ್.ಎಲ್.ಪುಷ್ಪಾ,ಪ್ರೊ.ವೃಷಭೇಂದ್ರಪ್ಪ. ಡಾ.ಪ್ರಕಾಶ್ ಹಲಗೇರಿ, ಪ್ರೊ, ಅರವಿಂದ್, ಡಾ,ಹೊನ್ನಾಳಿ ಶಿವಕುಮಾರ್, ಶ್ರೀ ಸಂತೇಬೆನ್ನೂರು ಫೈಜ್ನಾಟ್ರಾಜ್, ವೀರಭದ್ರಪ್ಪ ತೆಲಿಗಿ ಹಾಗು ಚಿತ್ರ ಕಲಾವಿದರಾದ ಶ್ರೀ ನಾಮದೇವ ಕಾಗದಕರ ಉಪಸ್ಥಿತರಿದ್ದರು

Aug 29, 2018

ಮನುಷ್ಯರ ಆತ್ಮದಿಂದಾಗುವ ದೇಶ

ಕು.ಸ.ಮಧುಸೂದನರಂಗೇನಹಳ್ಳಿ
ದೇಶವೆನ್ನೋದು
ಕಲ್ಲು ಮಣ್ಣಿನ ಭೂಮಿ ಮಾತ್ರವಾಗಿದ್ದಾಗ
ಬಣ್ಣದ ಭೂಪಟದಲ್ಲಿ ಬರೆದ ಕಲ್ಪನೆಯ ಗಡಿಗಳು 
ಮಾತ್ರವಾದಾಗ
ಅದನ್ನು ಆರಾಧಿಸುವವರು ಭಕ್ತರಾಗುತ್ತಾರೆ
ಅಲ್ಲಗೆಳೆಯುವವರು ದ್ರೋಹಿಗಳಾಗುತ್ತಾರೆ.

Aug 28, 2018

ಪ್ರೀತಿ

ಪ್ರವೀಣಕುಮಾರ್ ಗೋಣಿ
ಪ್ರೀತಿಸಿದಷ್ಟು ಪಡೆಯುತ್ತ ಹೋಗುವೆ 
ದ್ವೇಷಿಸಿದಷ್ಟು ಕಳೆದುಕೊಳ್ಳುತ್ತಾ ಸಾಗುವೆ 
ಸುಮ್ಮನೆ ಪ್ರೀತಿಸು ! ಅಕಾರಣವಾಗಿ ಪ್ರೀತಿಸು !
ಪ್ರೀತಿಯೊಂದೇ ಪವಿತ್ರವಾದುದ್ದು 
ಪರಮ ಅರಿವಿನ ಹಾದಿಯದು ಪ್ರೀತಿ .

ಪ್ರೀತಿಸುತ್ತ ಪಾಮರತೆಯು ಸರಿವುದು 
ಇರುಳು ಸರಿದು ಹಗಲು ಅರಳುವಂತೆ ,
ಪ್ರೀತಿಸುತ್ತಲೇ ಹೃದಯ ಅರಳುವುದು 
ಮೊಗ್ಗುಗಳೆಲ್ಲ ಅರಳಿ ಪರಿಮಳವ ಬೀರುವಂತೆ . 

Aug 24, 2018

‘ದುರಿತಕಾಲದ ದನಿ’ ಕವನ ಸಂಕಲನ ಬಿಡುಗಡೆ ಸಮಾರಂಭ.

ದಿನಾಂಕ 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನ ಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಬಿಡುಗಡೆಗೊಳಿಸಲಿದ್ದಾರೆ.

ಕೃತಿಯ ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ

ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾರವರು (ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು,ಬೆಂಗಳೂರು) ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇಂದ್ರಪ್ಪ, ನಿರ್ದೇಶಕರು, ಬಾಪೂಜಿ ಇಂಜಿಯರಿಂಗ್ ಕಾಲೇಜು, ದಾವಣಗೆರೆ ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ವಿವರಗಳು

Aug 19, 2018

ಪಕ್ಷಿ ಪ್ರಪಂಚ: ಕೆಂಬೂತ.

greater coucal
ಚಿತ್ರ ೧: ಎಲೆಯೊಂದಿಗೆ ಕೆಂಬೂತ.
ಕುಪ್ಪಳವೆಂದೂ ಕರೆಯಲ್ಪಡುವ ಈ ಪಕ್ಷಿ ರೆಕ್ಕೆಗೆ ಬಣ್ಣ ಬಳಿದುಕೊಂಡ ಕಾಗೆಯಂತೆ ಕಾಣಿಸುತ್ತದೆ! 

ಆಂಗ್ಲ ಹೆಸರು: Crow pheasant (ಕ್ರೋ ಫೀಸೆಂಟ್) 
Greater coucal (ಗ್ರೇಟರ್ ಕುಕೋಲ್)
Southern coucal (ಸದರ್ನ್ ಕುಕೋಲ್) 

ವೈಜ್ಞಾನಿಕ ಹೆಸರು: Centropus sinensis (ಸೆಂಟ್ರೋಪಸ್ ಸಿನೆನ್ಸಿಸ್) 

ಕಾಗೆಗಿಂತ ಕೊಂಚ ದೊಡ್ಡಕ್ಕಿರುವ ಕೆಂಬೂತಗಳನ್ನು ಅವುಗಳ ರೆಕ್ಕೆಯ ಬಣ್ಣದಿಂದ ಸುಲಭವಾಗಿ ಗುರುತಿಸಬಹುದು. ಕಪ್ಪು ತಲೆ, ಕಪ್ಪು - ಗಾಢ ನೀಲಿ/ನೇರಳೆ ಬಣ್ಣ ಮಿಶ್ರಿತ ಕತ್ತು - ಎದೆ - ದೇಹವನ್ನೊಂದಿರುವ ಕೆಂಬೂತಗಳ ರೆಕ್ಕೆಯ ಬಣ್ಣ ಕಂದು. ಅಗಲವಾದ ರೆಕ್ಕೆಗಳಿವಕ್ಕಿವೆ. ಕಪ್ಪು ಬಣ್ಣದ ಉದ್ದನೆಯ ಬಾಲದ ರೆಕ್ಕೆಗಳನ್ನಿವು ಹೊಂದಿವೆ. ಕಪ್ಪು ತಲೆಯಲ್ಲಿ ಕೆಂಪನೆಯ ಕಣ್ಣುಗಳು ಎದ್ದು ಕಾಣಿಸುತ್ತವೆ. ವಿಶಾಲ ರೆಕ್ಕೆಗಳಿದ್ದರೂ ಹಾರುವುದನ್ನು ಹೆಚ್ಚು ಇಷ್ಟಪಡದ ಪಕ್ಷಿಯಿದು. ಅಪಾಯದ ಸೂಚನೆ ಸಿಕ್ಕಾಗಷ್ಟೇ ಹಾರುತ್ತವೆ, ನಿಧಾನಗತಿಯಲ್ಲಿ. ಮಿಕ್ಕ ಸಮಯದಲ್ಲಿ ಘನ ಗಂಭೀರತೆಯಿಂದ ನಡೆದು ಹೋಗುವುದೇ ಕೆಂಬೂತಕ್ಕೆ ಪ್ರಿಯ. ನಡೆಯುವಿಕೆಯ ಮಧ್ಯೆ ಆಗಾಗ ಕುಪ್ಪಳಿಸುವುದರಿಂದ ಇದಕ್ಕೆ ಕುಪ್ಪಳವೆಂಬ ಹೆಸರು ಬಂದಿದೆ. 

Aug 14, 2018

ಏಕಕಾಲಕ್ಕೆ ಚುನಾವಣೆಗೆ ಬಾಜಪದ ಶಿಫಾರಸ್ಸು! ಯಾಕೆ ಮತ್ತು ಹೇಗೆ?

ಕು.ಸ.ಮಧುಸೂದನ ರಂಗೇನಹಳ್ಳಿ 
ಅಂತೂ ವಿವಿದ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಪಂಡಿತರುಗಳ ವಿರೋಧಗಳ ನಡುವೆಯೂ ದೇಶದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ತನ್ನ ನಿಲುವಿಗೆ ಬದ್ದವಾಗಿರುವ ಬಾಜಪ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ಇದೀಗ ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗಳ ಜೊತೆಗೆ ದೇಶದ ಇತರೆ ಹನ್ನೊಂದು ರಾಜ್ಯಗಳ ವಿದಾನಸಭೆಗಳಿಗೂ ಚುನಾವಣೆ ನಡೆಸುವ ಶಿಫಾರಸ್ಸೊಂದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುವ ಬಗ್ಗೆ ಚಿಂತಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾರವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಇನ್ನು ಕೇಂದ್ರ ಸರಕಾರ ಅಧಿಕೃತವಾಗಿ ಈ ಬಗ್ಗೆ ಚುನಾವಣಾ ಅಯೋಗಕ್ಕೆ ಶಿಫಾರಸ್ಸು ಮಾಡುವ ಸಾದ್ಯತೆ ಹೆಚ್ಚಿದೆ. 

ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ್, ಮಿಜೋರಾಂ ರಾಜ್ಯಗಳಲ್ಲಿ ಮುಂದಿನ ಮೆ ತಿಂಗಳವರೆಗು ರಾಜ್ಯಪಾಲರ ಆಡಳಿತವನ್ನು ಹೇರುವುದು. 2019ರ ಅಂತ್ಯಕ್ಕೆ ಅವಧಿ ಮುಗಿಯಲಿರುವ ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರ,ಹರಿಯಾಣ, ಜಾರ್ಖಂಡ್ ರಾಜ್ಯಗಳ ಸರಕಾರಗಳನ್ನು ಅವಧಿಗೆ ಮುಂಚಿತವಾಗಿಯೇ ವಿದಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಯ ಜೊತೆಗೆ ಸದರಿ ರಾಜ್ಯಗಳಿಗೂ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು. 2020ಕ್ಕೆ ಚುನಾವಣೆಗೆ ಹೋಗಬೇಕಿರುವ ಬಿಹಾರದಲ್ಲಿ ತಮ್ಮ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ಅವರ ಮನವೊಲಿಸಿ ಬಿಹಾರದ ವಿದಾನಸಭೆಯನ್ನೂ ಅವಧಿಗೆ ಮುನ್ನವೇ ವಿಸರ್ಜಿಸಿ ಲೋಕಸಭೆಯ ಜೊತೆಗೇನೆ ಚುನಾವಣೆಗೆ ಹೋಗುವಂತೆ ಮಾಡುವುದು. ಅಲ್ಲಿಗೆ ತಮ್ಮ ಹಿಡಿತದಲ್ಲಿರುವ ಎಂಟು ರಾಜ್ಯಗಳನ್ನು ಚುನಾವಣೆಗೆ ಸಿದ್ದಪಡಿಸಿದಂತಾಗುತ್ತದೆ. ಇದರ ಜೊತೆಗೆ ಹೇಗಿದ್ದರೂ ಮುಂದಿನ ಮೇ ತಿಂಗಳ ಹೊತ್ತಿಗೆ ಸಹಜವಾಗಿಯೆ ಚುನಾವಣೆ ನಡೆಯಬೇಕಿರುವ ಆಂದ್ರ ಪ್ರದೇಶ, ತೆಲಂಗಾಣ, ಒಡಿಶ್ಸಾ ರಾಜ್ಯಗಳೂ ಸೇರಿಕೊಂಡರೆ ದೇಶದ ಮುವತ್ತು ರಾಜ್ಯಗಳ ಪೈಕಿ ಸುಮಾರು ಹನ್ನೊಂದು ರಾಜ್ಯಗಳು ಲೋಕಸಭೆಯ ಜೊತೆಗೆಯೇ ಚುನಾವಣೆ ಎದುರಿಸುವಂತಾಗುತ್ತದೆ. ಇದು ಸದ್ಯದಲ್ಲಿ ಬಾಜಪ ಮಾಡಲಿರುವ ಶಿಫಾರಸ್ಸಿನ ಹಿಂದಿರುವ ಚಾಣಾಕ್ಷ್ಯ ನಡೆಯಾಗಿದೆ. 

Aug 12, 2018

ಪಕ್ಷಿ ಪ್ರಪಂಚ: ಬೂದು ಮಂಗಟ್ಟೆ.

ಚಿತ್ರ ೧: ಆಲದ ಮರದ ಹಣ್ಣು ಸವಿಯುತ್ತಿರುವ ಬೂದು ಮಂಗಟ್ಟೆ. 
ನಮ್ಮಲ್ಲಿ ಹೆಚ್ಚು ಕಂಡುಬರುವ ಆಕರ್ಷಕ ಬಣ್ಣಗಳಿಲ್ಲದ ಮಂಗಟ್ಟೆಗಳೆಂದರೆ ಅವು ಬೂದು ಮಂಗಟ್ಟೆಗಳು. 

ಆಂಗ್ಲ ಹೆಸರು: Indian grey hornbill (ಇಂಡಿಯನ್ ಗ್ರೇ ಹಾರ್ನ್ ಬಿಲ್) 
ವೈಜ್ಞಾನಿಕ ಹೆಸರು: Ocyceros birostris (ಒಸಿಕೆರಾಸ್ ಬಿರೋಸ್ಟ್ರಿಸ್) 

ಎತ್ತರದ ಮರಗಳಲ್ಲಿ ಜೋಡಿಯಾಗಿ ಅಥವಾ ಕೆಲವೊಮ್ಮೆ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತವೆ ಬೂದು ಮಂಗಟ್ಟೆಗಳು. ಉದ್ದ ಕೊಕ್ಕಿನ ದೊಡ್ಡ ದೇಹದ ಈ ಪಕ್ಷಿಗಳ ಗುರುತಿಸುವಿಕೆ ಕಷ್ಟವಲ್ಲ. ಹೆಸರೇ ಸೂಚಿಸುವಂತೆ ಬೂದು ಬಣ್ಣದ ಪಕ್ಷಿಯಿದು. ದೇಹದ ತುಂಬ ಬೂದು ಬಣ್ಣದ ರೆಕ್ಕೆ ಪುಕ್ಕಗಳಿವೆ. ಎದೆಯ ಭಾಗದಲ್ಲಿ ಬೂದು - ಬಿಳಿ ಮಿಶ್ರಿತ ಬಣ್ಣವಿದೆ. ಬಾಗಿದ ಉದ್ದನೆಯ ಕೊಕ್ಕಿನ ಬಣ್ಣ ಗಾಢ ಬೂದು ಬಣ್ಣದಿಂದ ಕಪ್ಪು. ಕೊಕ್ಕಿನ ತುದಿಯ ಭಾಗ ತೆಳು ಹಳದಿ. ಕೊಕ್ಕಿನ ಮೇಲೊಂದು ಪುಟ್ಟ ಕಪ್ಪನೆಯ ಶಿರಸ್ತ್ರಾಣವಿದೆ. ಕೆಂಪು ಕಣ್ಣುಗಳು ಬೂದು ದೇಹದ ಪಕ್ಷಿಯಲ್ಲಿ ಎದ್ದು ಕಾಣಿಸುತ್ತವೆ. ದೇಹದಷ್ಟೇ ಉದ್ದದ ಬಾಲದ ಗರಿಗಳು ಇವಕ್ಕಿವೆ. ದೇಹದ ಬಣ್ಣಕ್ಕಿಂತ ಕೊಂಚ ಗಾಢ ಬಣ್ಣಗಳನ್ನು ಬಾಲದಲ್ಲಿ ಕಾಣಬಹುದು. ಹೆಣ್ಣಿಗೂ ಗಂಡಿಗೂ ಇರುವ ಪ್ರಮುಖ ವ್ಯತ್ಯಾಸ ಶಿರಸ್ತ್ರಾಣದ ಗಾತ್ರ. ಹೆಣ್ಣಿನಲ್ಲಿದರ ಗಾತ್ರ ಪುಟ್ಟದು. 

ದಳದ ಅದ್ಯಕ್ಷರಾಗಿ ಹೆಚ್.ವಿಶ್ವನಾಥ್: ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುತ್ತಿರುವ ಶ್ರೀ ಹೆಚ್.ಡಿ.ದೇವೇಗೌಡರು

ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಮಾಜಿ ಸಚಿವರಾದ ಶ್ರೀ ಹೆಚ್. ವಿಶ್ವನಾಥ್ ಅವರನ್ನು ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಮಾಡುವ ಮೂಲಕ ಶ್ರೀ ದೇವೇಗೌಡರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಚಾಣಾಕ್ಷ್ಯ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಆದರೆ ಅದು ಅವರದೇ ಪಕ್ಷದ ಮೈತ್ರಿ ಸರಕಾರದ ಮೇಲೆ ಬೀರಬಹುದಾದ ಪ್ರಭಾವಗಳೇನು ಎಂಬುದನ್ನು ನಾವು ಅವಲೋಕಿಸಬೇಕಾಗಿದೆ

ಇದೀಗ ಕರ್ನಾಟಕ ರಾಜ್ಯದ ಜಾತ್ಯಾತೀತ ಜನತಾದಳದ ರಾಜ್ಯಾದ್ಯಕ್ಷರನ್ನಾಗಿ ಶ್ರೀ ಹೆಚ್. ವಿಶ್ವನಾಥವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಆಂತರೀಕ ವಲಯದಲ್ಲಿ ಇದರ ಬಗ್ಗೆ ಯಾವುದೇ ಭಿನ್ನಮತದ ಮಾತುಗಳು ಕೇಳಿಬರುತ್ತಿಲ್ಲವಾದರೂ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಮಾತ್ರ ಈ ನೇಮಕದ ಹಿಂದಿನ ತಂತ್ರಗಾರಿಕೆಯ ಬಗ್ಗೆ ಪಿಸುಮಾತಿನ ಅಸಮಾದಾನಗಳು ಕೇಳಿ ಬರುತ್ತಿವೆ. ಅದರಲ್ಲೂ ಕಾಂಗ್ರೇಸ್ ಒಳಗಿನ ಸಿದ್ದರಾಮಯ್ಯನವರ ಗುಂಪಿಗೆ ಈ ನೇಮಕ ಇರುಸುಮುರುಸು ಉಂಟು ಮಾಡಿರುವುದಂತು ಸುಳ್ಳೇನಲ್ಲ.

ರಾಜಕೀಯದಲ್ಲಿ ಬಹಳಷ್ಟು ವಿದ್ಯಾಮಾನಗಳು ಸಾಮಾನ್ಯ ಜನರ ಊಹೆಗೂ ನಿಲುಕದ ರೀತಿಯಲ್ಲಿ ನಡೆದು ಹೋಗುವುದು ಸಾಮಾನ್ಯ. ಅದರಲ್ಲೂ ಇಂಡಿಯಾದ ಬಹುಪಕ್ಷೀಯ ರಾಜಕಾರಣದ ಚದುರಂಗದಾಟದಲ್ಲಿ ಮಿತ್ರರು ಶತ್ರುಗಳಾಗುವುದು, ಶತ್ರುಗಳು ಮಿತ್ರರಾಗುವುದು ತೀರಾ ಸಹಜವಾದ ಕ್ರಿಯೆಗಳು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಅವರ ಒಂದು ಕಾಲದ ಗೆಳೆಯ ಶ್ರೀ ಹೆಚ್. ವಿಶ್ವನಾಥ್ ಅವರು. 

Aug 11, 2018

ನಮ್ಮನ್ನಗಲಿದ ಸುಮತೀಂದ್ರ ನಾಡಿಗರ ನೆನಪಿನಲ್ಲಿ….

sumateendra nadig
ಸುಮತೀಂದ್ರ ನಾಡಿಗ್
ಕು.ಸ.ಮಧುಸೂದನ ರಂಗೇನಹಳ್ಳಿ 
ಸುಮತೀಂದ್ರ ನಾಡಿಗ್ ಇನ್ನಿಲ್ಲವಾದ ಸುದ್ದಿ ಕೇಳಿ ಮನಸಿಗೆ ಪಿಚ್ಚೆನ್ನಿಸಿ ಬಿಟ್ಟಿತ್ತು. ಬಹುಶ: ಈ ಪೀಳಿಗೆಯ ಬಹುತೇಕರಿಗೆ ನಾಡಿಗರು ಅಪರಿಚಿತರೇ ಎನ್ನ ಬಹುದು. 

ಯಾವತ್ತಿಗೂ ನಾನವರನ್ನು ಬೇಟಿಯಾಗಲೇ ಇಲ್ಲ. ಅದೊಂದು ನೋವು ಸದಾ ನನ್ನನ್ನು ಕಾಡುವುದು ಖಂಡಿತ! ಕೇವಲ ಪತ್ರಗಳ ಮೂಲಕವೇ ನನಗವರು ಕೆಲಕಾಲ ನನ್ನ ಹಿತೈಷಿಯಾಗಿ, ನಾನು ತೀವ್ರವಾದ ಅನಾರೋಗ್ಯ ಪೀಡಿತನಾಗಿದ್ದ ಸಮಯದಲ್ಲಿ ಬದುಕುವ ಧೈರ್ಯ ತುಂಬಿದಂತವರು. 

2000ನವೆಂಬರಿನಲ್ಲಿ ನನ್ನ ದೇಹದ ಎಡಭಾಗಕ್ಕೆ ಆದ ಪಾರ್ಶ್ವವಾಯುವಿನಿಂದ ಸತತ ಎರಡು ವರ್ಷ ಆಸ್ಪತ್ರೆಯಲ್ಲಿ ಅಕ್ಷರಶ: ಜೀವ ಶವದಂತೆ ಮಲಗಿದ್ದೆ. ನಂತರ ನಿದಾನವಾಗಿ ಎದ್ದು ಓಡಾಡುವಂತಾದಾಗ ಎಂದೂ ಸುಮ್ಮನೆ ಕೂರದ ನಾನು ಕವಿತೆಗಳಿಗೆ ಮಾತ್ರ ಮೀಸಲಾಗಿದ್ದ ಕಾವ್ಯ ಖಜಾನೆ( ಕಾವ್ಯ ಕನ್ನಡಿ) ಎನ್ನುವ ಖಾಸಗಿ ಪತ್ರಿಕೆಯೊಂದನ್ನು ಶುರು ಮಾಡಿದ್ದೆ.

ಸ್ತ್ರೀ ಸುತ್ತ ಪುರುಷನೆಂಬ ವಿಷವರ್ತುಲ!


ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ

ಪುರುಷ ಕೇಂದ್ರಿತ ವ್ಯವಸ್ಠೆಯಲಿ
ಬದುಕ ನದಿ ಈಜುತ್ತೆನೆಂದರೆ 
ಎಲ್ಲಿ ನೋಡಿದರು ಅಲ್ಲಿ ಪುರುಷ ಮೊಸಳೆಗಳು 
ತಪ್ಪಿಸಿಕೊಂಡರೆ ಬಾ ಯಿ ತೆರೆದು 
ಪತಾಳ ಸೇರಿಸುವ ಸುಳಿ ..!

ಹರಸಾಹಸ ಮಾಡಿ ದಂಡೆಗೆ ಬಂದರೆ 
ಹೆಜ್ಜೆ ಹೆಜ್ಜೆಗೂ ಬುಸುಗುಡುವ 
ಕಾಮುಕ ಕಾಳಿಂಗಗಳು 
ಮುಂಗುಸಿಯಾದರೂ ಷಡ್ಯಂತ್ರದಲಿ 
ಮುಗಿಸಿ ಬಿಡುವ ಹುನ್ನಾರ 
ತಲುಪಬೇಕಾದ ಗುರಿ ದೂರ ಬಹುದೂರ ..!

Aug 5, 2018

ಪಕ್ಷಿ ಪ್ರಪಂಚ: ನೀಲಿಬಾಲದ ಕಳ್ಳಿಪೀರ.

ಚಿತ್ರ ೧: ಕಾವೇರಿ ತೀರದ ಕಳ್ಳಿಪೀರಗಳು.
ಡಾ. ಅಶೋಕ್. ಕೆ. ಆರ್.
ಶ್ರೀರಂಗಪಟ್ಟಣದ ನಗುವನಹಳ್ಳಿ - ಚಂದಗಾಲು ಗ್ರಾಮದಲ್ಲಿನ ಕಾವೇರಿ ನದಿ ತೀರದಲ್ಲಿ ಅತಿ ಹೆಚ್ಚು ಚಿತ್ರ ತೆಗೆಸಿಕೊಂಡಿರುವ ಖ್ಯಾತಿ ನೀಲಿಬಾಲದ ಕಳ್ಳಿಪೀರಗಳದ್ದು. 

ಆಂಗ್ಲ ಹೆಸರು: Blue tailed bee eater (ಬ್ಲೂ ಟೈಲ್ಡ್ ಬೀಈಟರ್) 

ವೈಜ್ಞಾನಿಕ ಹೆಸರು: Merops Philippinus (ಮೆರೋಪ್ಸ್ ಫಿಲಿಪ್ಪಿನಸ್) 

ಥಳ ಥಳ ಹೊಳೆಯುವ ಬಣ್ಣಗಳನ್ನೊಂದಿರುವ ಪಕ್ಷಿಗಳಿವು. ಹಸಿರು - ಹಳದಿ - ಕಿತ್ತಳೆ ಕಂದು ಬಣ್ಣಗಳನ್ನೊಂದಿವೆಯಾದರೂ ಹಸಿರು ಬಣ್ಣವೇ ಹೆಚ್ಚಿದೆ. ಕೆಂಪು ಕಣ್ಣಿನ ಸುತ್ತ ಕಪ್ಪು ಪಟ್ಟಿಯಿದೆ. ಕಣ್ಣಿನ ಮೇಲ್ಭಾಗದಲ್ಲಿ ಗಿಣಿ ಹಸಿರು ಬಣ್ಣದ ಸಣ್ಣ ಪಟ್ಟಿಯಿದೆ. ನೆತ್ತಿ ಹಸಿರು - ಕಂದು ಮಿಶ್ರಿತ ಬಣ್ಣದ್ದು. ಕಣ್ಣಿನ ಕೆಳಗೆ ಬಿಳಿ ಪಟ್ಟಿ, ಅದರ ಕೆಳಗೆ ಕೇಸರಿ ಕಂದು ಮಿಶ್ರಿತ ಬಣ್ಣದ ಪಟ್ಟಿ. ಬಿಳಿ ಮತ್ತು ಕೇಸರಿ ಕಂದು ಪಟ್ಟಿ ಪಕ್ಷಿಯ ಕತ್ತಿಗೂ ಹರಡಿಕೊಂಡಿವೆ. ದೇಹದ ಇತರೆ ಭಾಗಗಳಲ್ಲಿ ಹಳದಿ ಹಸಿರು ಬಣ್ಣದ ವಿವಿಧ ವರ್ಣಗಳಿವೆ. ಬಾಲದ ಭಾಗದಲ್ಲಿ ನೀಲಿ ಬಣ್ಣವಿರುವ ಕಾರಣ ಇವಕ್ಕೆ ನೀಲಿಬಾಲದ ಕಳ್ಳಿಪೀರಗಳೆಂದು ಹೆಸರು. ಕಿಬ್ಬೊಟ್ಟೆಯ ಭಾಗವೂ ನೀಲಿ ಬಣ್ಣವನ್ನೊಂದಿದೆ. ನೀಲಿ ಬಾಲಕ್ಕೆ ಬೂದು ಬಣ್ಣದ ಪುಕ್ಕಗಳಂಟಿಕೊಂಡಿವೆ. ಬಾಲದ ತುದಿಗೆ ಕಿರುಬಾಲಗಳಂತೆ ಎರಡು ಪುಟ್ಟ ರೆಕ್ಕೆಗಳಂಟಿಕೊಂಡಿವೆ. ಹಾರುವಾಗ ನಡುವಿನಲ್ಲೊಂದು ಅತ್ಲಾಗಿತ್ಲಾಗೊಂದೊಂದು ಬಾಲದ ರೆಕ್ಕೆಗಳನ್ನು ಗಮನಿಸಬಹುದು. ಕೊಕ್ಕು ಮತ್ತು ಕಾಲುಗಳು ಕಪ್ಪು ಬಣ್ಣದ್ದಾಗಿವೆ. 
ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ. 

Aug 3, 2018

ಯಾಕೆ ಅಲೆವೇ ನೀ ಮನವೇ ?

ಪ್ರವೀಣಕುಮಾರ್ .ಗೋಣಿ
ಪ್ರೀತಿಯೊಂದೇ ಅವನ 
ತಲುಪಲು ಇರುವ 
ಹಾದಿಯಾಗಿರುವಾಗ ಯಾಕೇ
ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

ನಿನ್ನೊಳಗೆ ಅವನೇ ಬಿತ್ತಿದ 
ಪ್ರೀತಿಯ ಬೀಜ ಇರುವಾಗ 
ಅದಕ್ಕೆ ನೀರೆರೆದು ಮರವಾಗಿ ಬೆಳೆಸೋ 
ಯಾಕೇ ಮತ್ತೆಲ್ಲೆಲ್ಲೋ ಅಲೆವೇ ನೀ ಮನವೇ .

Aug 2, 2018

ವಿದಾಯ

ಪದ್ಮಜಾ ಜೋಯಿಸ್ 
ಅಂತಿಮವಾಗಿ ವಿದಾಯವೇ
ಬಯಸುವೆಯಾದರೇ..,.
ಇದೋ ನೀಡುತಿರುವೆ
ನಿಬಂಧನೆಗಳೊಂದಿಗೆ.,,

ಮತ್ತೆಂದೂ ನೆನೆಯದಿರು ನನ್ನ 
ನೆನೆದ ಕ್ಷಣದಲಿ ನಿನ್ನ
ಕಣ್ರೆಪ್ಪೆಗಳಲಿ ಮೂಡುವ
ನನ್ನ ಪ್ರತಿಬಿಂಬದ ಕಣ್ಣಂಚಿನ 
ಹನಿ ಕರಗಿಸಬಹುದು
ನಿನ್ನ ಕಲ್ಲು ಹೃದಯವನ್ನು ....

ಮತ್ತೇರಿಸುವ ಈ ರಾತ್ರಿ ..

ಕೆ.ಜಿ .ಸರೋಜಾ ನಾಗರಾಜ್ ಪಾಂಡೊಮಟ್ಟಿ
ಮತ್ತೇರಿಸುವ ನಿನ್ನ ಮಾತಿನಲ್ಲಿ 
ಇಂದೇಕೆ ಈ ಗಮಲು ಅಮಲಿನಲ್ಲಿ ..

ಕಾಡುವುದಿದ್ದರೆ ಈ ರಾತ್ರಿ ಕಾಡಿಬಿಡು
ಸಮಯ ಕ್ಷಣ ಕ್ಷಣಕ್ಕೂ ಕಮ್ಮಿಯಾಗುತ್ತಿದೆ ..

ಸಂಬಂಧದ ಕೊಂಡಿ ಕಳಚುತ್ತಾ ಇದೆ ಎಂದಾಗ ನನ್ನಲ್ಲಿ 
ಸ್ಪಷ್ಟವಾಗಿ ಕಂಡಿದ್ದು ನಿನ್ನ ಹೃದಯ ಸಾರಾಯಿಯಲ್ಲಿ .

Aug 1, 2018

ಯಾರಿವನು?

ಪದ್ಮಜಾ ಜೋಯಿಸ್ 
ಹೋದಲ್ಲಿ ಬಂದಲ್ಲಿ ,
ಕುಳಿತಲ್ಲಿ ನಿಂತಲ್ಲಿ.
ಪರಿಚಿತರು ಕಾಡುತ್ತಾರೆ
ಸಖಿಯರು ದುಂಬಾಲು ಬೀಳುವರು, 
ನಿನ್ನ ಕನಸು ಮನಸುಗಳಲ್ಲಿ,
ಕಾವ್ಯ ಕಥನಗಳಲ್ಲಿ,
ಬದುಕು ಸಾವುಗಳಲಿ
ಝರಿಯಾಗಿ ಹರಿದವ
ಜೀವವಾಗಿ ಮಿಡಿದವ 
ಪ್ರೇಮಿಯಾಗಿ ಕಾಡಿದವ
ವಿರಹವನೇ ಉಣಿಸಿದವ
ಯಾರವ ಹೇಳೇ ಯಾರವ ??

Jul 29, 2018

ಪಕ್ಷಿ ಪ್ರಪಂಚ: ಕೆಂಪು ಕಿಬ್ಬೊಟ್ಟೆಯ ಪಿಕಳಾರ.

ಚಿತ್ರ ೧: ಕೆಂಪು ಕಿಬ್ಬೊಟ್ಟೆಯ ಪಿಕಳಾರ
ಡಾ. ಅಶೋಕ್. ಕೆ. ಆರ್
ಪಿಕಳಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದು ಕೆಮ್ಮೀಸೆ ಪಿಕಳಾರವಾದರೆ ಅದರ ನಂತರದಲ್ಲಿ ಹೆಚ್ಚು ಕಣ್ಣಿಗೆ ಬೀಳುವುದು ಕೆಂಪು ಕಿಬ್ಬೊಟ್ಟೆಯ ಪಿಕಳಾರ. 


ಆಂಗ್ಲ ಹೆಸರು: Red vented bulbul (ರೆಡ್ ವೆಂಟೆಡ್ ಬುಲ್ ಬುಲ್)

ವೈಜ್ಞಾನಿಕ ಹೆಸರು: Pycnonotus cafer (ಪಿಕ್ನೋನಾಟಸ್ ಕ್ಯಾಫರ್) 


ಕಪ್ಪು ತಲೆ, ಕಪ್ಪು ಕೊಕ್ಕು ಹೊಂದಿರುವ ಈ ಪಕ್ಷಿಗಳ ದೇಹದ ಭಾಗದಲ್ಲಿ ಕಂದು ಬಣ್ಣವೇ ಪ್ರಮುಖವಾದುದು. ಬೆನ್ನಿನ ಭಾಗದಲ್ಲಿ ಗಾಢ ಕಂದು - ಕಪ್ಪು - ಬಿಳಿ ಬಣ್ಣಗಳ ಸಂಯೋಜನೆಯಿದೆ. ಎದೆ ಭಾಗದಲ್ಲಿ ತಿಳಿ ಕಂದು, ಬಿಳಿ ಬಣ್ಣಗಳಿವೆ. ಎದೆಯ ಮೇಲ್ಭಾಗ ಮತ್ತು ಇಡೀ ಬೆನ್ನಿನ ಮೇಲಿರುವ ಬಣ್ಣಗಳು ಮೀನಿನ ಹೊರಭಾಗದಂತೆ ಕಾಣಿಸುತ್ತದೆ. ಕಿಬ್ಬೊಟ್ಟೆಯ ಜಾಗದಲ್ಲಿರುವ ಕೆಂಪು ಬಣ್ಣದ ಸಹಾಯದಿಂದ ಈ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಬಾಲದ ಬಣ್ಣು ಕಂದುಗಪ್ಪು. ತುದಿಯಲ್ಲಿ ಚೂರೇ ಚೂರು ಬಿಳಿ ಬಣ್ಣವಿದೆ. ಪುಟ್ಟ ಕಪ್ಪು ಕಾಲುಗಳಿವೆ.
ಹೆಣ್ಣು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.