Feb 22, 2014

Very true (source - seppo.net)

ವಿಶೇಷಗಳಿಲ್ಲದ ನಿರಾಸದಾಯಕವೂ ಅಲ್ಲದ ಕರ್ನಾಟಕ ಬಜೆಟ್.

ಡಾ ಅಶೋಕ್ ಕೆ ಆರ್

            ಮತ್ತೊಂದು ಬಜೆಟ್ಟಿನ ಸಮಯ. ಕಳೆದ ವರುಷ ಚುನಾಯಿತವಾದ ಕಾಂಗ್ರೆಸ್ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಮತ್ತೊಂದು ಬಜೆಟ್ ಮಂಡಿಸಿದೆ. ದಾಖಲೆಯ ಒಂಭತ್ತನೆಯ ಬಾರಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 2014 – 2015ರ ಸಾಲಿನ ಬಜೆಟ್ಟಿನ ಮೇಲೆ ಯಾರಿಗೂ ಅತಿಯಾದ ನಿರೀಕ್ಷೆಗಳೇನಿರಲಿಲ್ಲ. ಇದು ಲೋಕಸಭಾ ಚುನಾವಣೆ ಇರುವ ವರುಷವಾದ್ದರಿಂದ ತೆರಿಗೆಯನ್ನು ಮತ್ತಷ್ಟು ಹೊರೆಯಾಗಿಸುವ ಸಾಧ್ಯತೆ ಕಡಿಮೆಯೆಂಬುದು ಎಲ್ಲರ ಭಾವನೆಯಾಗಿತ್ತು. ಒಂದಷ್ಟು ತೆರಿಗೆ ಕಡಿತ ಮಾಡಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಮತ ಹೆಚ್ಚಿಸಿಕೊಳ್ಳಬಹುದೆಂಬ ಭಾವನೆಯೂ ಇತ್ತು. ಇಡೀ ದೇಶದ ಆರ್ಥಿಕತೆಯೇ ಒಂದಷ್ಟು ಕುಂಟುತ್ತ ತೆವಳುತ್ತ ಸಾಗುತ್ತಿರುವಾಗ ಕರ್ನಾಟಕ ಬಜೆಟ್ಟಿನಲ್ಲಿ ದೂರದೃಷ್ಟಿಯ ಬೃಹತ್ ವ್ಯಾಪ್ತಿಯ ಯೋಜನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು. ಆದರೂ ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿರುವ ಸಿದ್ಧರಾಮಯ್ಯ ಆರ್ಥಿಕ ಶಿಸ್ತನ್ನು ತಂದು ಒಂದಷ್ಟು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾಗಿತ್ತು. ಅತ್ತ ಪರಿಪೂರ್ಣವೂ ಅಲ್ಲದ ಇತ್ತ ಚುನಾವಣೆಯನ್ನಷ್ಟೇ ಗುರಿಯಾಗಿಸಿಕೊಂಡು ತಯಾರಿಸಿರದ ಆಯವ್ಯಯವನ್ನು ಸಿದ್ಧರಾಮಯ್ಯನವರು ಮಂಡಿಸಿದ್ದಾರೆ. ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರಿಂದ ಮತ್ತಷ್ಟು ಮಗದಷ್ಟು ನಿರೀಕ್ಷೆ ಮಾಡಿದ್ದರೆ ತಪ್ಪಲ್ಲ.

Feb 21, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 19


ಡಾ ಅಶೋಕ್ ಕೆ ಆರ್
 ಆದರ್ಶವೇ ಬೆನ್ನು ಹತ್ತಿ .... ಭಾಗ 18 ಓದಲು ಇಲ್ಲಿ ಕ್ಲಿಕ್ಕಿಸಿ
“ನಾಳೆ ಟೂರಿಗೆ ಹೊರಡೋದಿಕ್ಕೆ ಎಲ್ಲಾ ಸಿದ್ಧ ಮಾಡಿಕೊಂಡಾ ಲೋಕಿ?”
“ನಾಳೆ ಸಂಜೆ ಹೊರಡೋದಲ್ವಾ, ನಾಳೆ ಮಧ್ಯಾಹ್ನ ಒಂದು ಮೂರು ಜೊತೆ ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಬಂದರೆ ಆಯಿತು”.

Feb 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 18

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 17 ಓದಲು ಇಲ್ಲಿ ಕ್ಲಿಕ್ಕಿಸಿ


ಕಾಲೇಜಿನ ಒಳಗೆ ಹೋಗುವಾಗಲೇ ಲೋಕಿಗೆ ಸಿಂಚನಾ ಸಿಕ್ಕಿದಳು. “ಯಾಕೋ ಲೋಕೇಶ್ ಟ್ರಿಪ್ಪಿಗೆ ಬರಲ್ಲ ಅಂದುಬಿಟ್ಯಂತೆ. ಪೂರ್ಣಿ ಬರ್ತಾ ಇದ್ದಾಳೆ. ನೀನು ಬರೋದಿಲ್ಲ ಅಂದರೆ ಹೇಗೆ ಹೇಳು?” ಮುಗುಳ್ನಗುತ್ತಾ ಕೇಳಿದಳು ಸಿಂಚನಾ.
‘ಏನು ಕಾರಣ ಅಂತ ಹೇಳೋದು?’ ಎಂದು ಯೋಚಿಸುತ್ತಾ “ಶಿವಮೊಗ್ಗದ ಕಡೆಯ ಊರುಗಳನ್ನೆಲ್ಲಾ ನೋಡಿಬಿಟ್ಟಿದ್ದೀನಿ ಸಿಂಚನಾ. ಅದಕ್ಕೆ ಬರಲ್ಲ ಅಂದೆ”

Feb 12, 2014

ಮತ್ತೆ ಮತ್ತೆ ಡಬ್ಬಿಂಗ್ - - - ಸ್ವಾರ್ಥ ಅಹಂಕಾರದ ಸೋಗಿನಲ್ಲಿ ‘ಸಂಸ್ಕೃತಿ’ಯ ರಕ್ಷಣೆ?!



ಡಾ ಅಶೋಕ್. ಕೆ. ಆರ್.

ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.

Feb 8, 2014

ಅಪ್ಪ ಅಮ್ಮನಿಗೊಂದು ಪತ್ರ ಬರೀರಿ!

ಸಮಗ್ರ ಅಭಿವೃದ್ಧಿ ಎಂಬ ಆಳುವವರ ದಾಳ

 ನೀಲಾ ಕೆ ಗುಲ್ಬರ್ಗ

ಭಾರತ ನಮ್ಮದು ಮಹಾನ್ ಭೂಮಿ
ಇದರ ಕತೆಯನು ಕೇಳಿರಿ ಅಣ್ಣಾ
ಇಲ್ಲಿ ಹರಿವುದು ಗಂಗೆ-ತುಂಗೆ ಕಾವೇರಿ-ಭೀಮೆ
ಸಾಗರದಲ್ಲಿ ಮುತ್ತುಗಳು ಪರ್ವತವೆಲ್ಲ ವಜ್ರಗಳು
ಆದರೂ ಹಸಿವಿನ ಸಾವು ಏಕಣ್ಣ? ರೊಟ್ಟಿಯು ತುಟ್ಟಿ ಏಕಣ್ಣ?

Feb 7, 2014

“ಬದಲಾಗದಿದ್ದಲ್ಲಿ ನಾವಿಂದು ಜಗವಾ ಬದಲಾಯಿಸುವೆವೆಂದು” !

Mohammad Irshad

“ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದು ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದು ಹರಾಮ್ . ಹೆಣ್ಣು 15 ತುಂಬಿದಾಗ ಆಕೆ ದೊಡ್ಡವಳಾಗುತ್ತಾಳೆ . ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದು ಡಾನ್ಸ್ ಮಾಡುವುದು ಹರಾಮ್ . ಜಿಲ್ಲಾದ್ಯಂತ ಸ್ಕೂಲ್ ಡೇ ಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಇದು ಹರಾಮ್.

Feb 2, 2014

Seven Sister's questions.....



Nido Tania, a student from north east was beaten to death in New Delhi by some shop keepers. Shop keepers made some comments regarding Nido Tania's hairstyle and race that stirred up the quarrel which finally ended up in the death of Nido. Its not new for the people from Seven Sister States (Arunachal pradesh, Assam, Meghalaya, Manipur, Mizoram, Nagaland, Tripura) getting humiliated from citizens of  MAINLAND INDIA. Because of various socio political reasons the number of rebel outfits demanding liberation were more in these states. All those rebellion movements were successfully destroyed by armed forces of India. At a time when the rebellion is fading we have these type of incidents which will further allienate the people of seven sister states from mainland India. Nido was son of congress MLA; that might be one more reason for more coverage in media. Otherwise usually the mainstream media of Mainland India never cares about the events related to north east part of our country. This was evident when the media neglected the naked protest of Manipuri women against indian army with a banner 'INDIAN ARMY RAPE US'. Here is a letter that was published in Justice for Nido Tania facebook page.

Feb 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 17



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 16 ಓದಲು ಇಲ್ಲಿ ಕ್ಲಿಕ್ಕಿಸಿ
‘ಜೀವನದಲ್ಲಿ ಇವತ್ತು ಮಹತ್ವವಾದ ದಿನ’ ಎಂಬುದು ತಿಳಿದಿದ್ದ ಲೋಕಿ ಉತ್ಸಾಹದಿಂದ ಗ್ರೌಂಡಿಗೆ ಬಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತ. ಗಡಿಯಾರ ನೋಡಿದ, ಆರು ಘಂಟೆಯಾಗಿ ಎರಡು ನಿಮಿಷಗಳಾಗಿದ್ದವು. ಸುತ್ತಮುತ್ತ ನೋಡಿದ ಆ ‘ಹುಚ್ಚ’ನಾಗಲೀ ಆ ಇಬ್ಬರು ವ್ಯಕ್ತಿಗಳಾಗಲೀ ಅಲ್ಲಿ ಕಾಣಲಿಲ್ಲ. ಲೋಕಿಯ ಪಕ್ಕದಲ್ಲಿ ಮೂವತ್ತರ ಆಸುಪಾಸಿನ ಮಹಿಳೆಯೊಬ್ಬಳು ಬಂದು ಕುಳಿತಳು. ‘ಎಲ್ಲೂ ಜಾಗವಿಲ್ಲವೆಂಬಂತೆ ಈಕೆ ಇಲ್ಲೇ ಬಂದು ಕೂರಬೇಕೆ?’ ಎಂದುಕೊಂಡು ಲೋಕಿ ಮೇಲೆದ್ದ.