Mar 14, 2012

ಒಂದು ಅಪಘಾತ ಮತ್ತು ನಮ್ಮ ‘ಅಭಿವೃದ್ಧಿ’

ಫೋಟೋ ಮೂಲ - ಡೆಕ್ಕನ್ ಹೆರಾಲ್ಡ್
ಡಾ ಅಶೋಕ್.ಕೆ.ಆರ್.
‘Oh my god’ ನಮ್ಮ ಬೆಂಗಳೂರು ಎಷ್ಟೆಲ್ಲ ಅಭಿವೃದ್ಧಿಯಾಗಿಬಿಟ್ಟಿದೆ! ಮೆಟ್ರೋ ರೈಲಾಗಲೇ ಚುಕುಬುಕು ಅಂತ ಓಡಾಡಲಾರಂಭಿಸಿದೆ. ಅಷ್ಟದಿಕ್ಕುಗಳಲ್ಲೂ ಫ್ಲೈಓವರ್ ಮೇಲೆ ಫ್ಲೈಓವರ್ ಕಟ್ಟಲಾಗುತ್ತಿದೆ. ಮಾಲ್ ಗಳು ಗಲ್ಲಿಗೊಂದರಂತೆ ಪ್ರಾರಂಭವಾಗುತ್ತಿವೆ. ವೋಲ್ವೋ ಬಸ್ಸಿಗೆ ಸೆಡ್ಡು ಹೊಡೆಯಲು ಮರ್ಸಿಡಿಸ್ ಬಸ್ಸುಗಳು ರಾಜಠೀವಿಯಿಂದ ಸಂಚರಿಸಲಾರಂಭಿಸಿವೆ. ಓಹ್! ಯಾವ ದುಬಾರಿ ಕಾರಾದರೂ ಲಭ್ಯವಿದೆ ನಮ್ಮಲ್ಲಿ! ಇನ್ನೇನು ಬೇಕು? ಬೆಂಗಳೂರು ಸಿಂಗಪುರವಾಗಿ ಭಾರತ ಸೂಪರ್ ಪವರ್ ರಾಷ್ಟ್ರವಾಗುವುದಕ್ಕೆ ಇನ್ನು ಕ್ಷಣಗಣನೆ ಆರಂಭಿಸಿಯೇಬಿಡಬಹುದಲ್ಲವೇ? ! ಒಂದ್ನಿಮಿಷ ತಡೀರಿ!

Mar 8, 2012

ತಾಕತ್ತಿದ್ದರೆ ಇದನ್ನೂ ಬ್ರೇಕಿಂಗ್ ನ್ಯೂಸ್ ಮಾಡಿ!!

ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!

Mar 5, 2012

ಕರ್ತವ್ಯ ಮರೆತವರ ಕರುನಾಡಿನಲ್ಲಿ

ಪೋಲೀಸರಿಂದ ದಾಂಧಲೆ. ಮೂಲ - ಫೇಸ್ ಬುಕ್

ಪತ್ರಕರ್ತರ ಪ್ರತಿಭಟನೆ. ಮೂಲ - ಡೆಕ್ಕನ್ ಹೆರಾಲ್ಡ್
ವಕೀಲರ ದೌರ್ಜನ್ಯ. ಮೂಲ - ಫೇಸ್ ಬುಕ್
ಮೊದಲು ವಕೀಲರಿಗೆ ಧನ್ಯವಾದಗಳನ್ನರ್ಪಿಸಿಬೇಕು! ವಿವಿಧ ರಾಜಕೀಯ ಪಕ್ಷಗಳ ವಸಾಹತಾಗಿರುವ ಮಾಧ್ಯಮಗಳನ್ನು, ಪತ್ರಕರ್ತರನ್ನು ಒಂದುಗೂಡಿಸಿದ ಕೀರ್ತಿ ವಕೀಲರಿಗೆ ಸಲ್ಲಬೇಕು. ವಕೀಲರು ಮತ್ತು ಮಾಧ್ಯಮ – ಪೋಲೀಸರ ನಡುವೆ ನಡೆದ ‘ಬ್ಲ್ಯಾಕ್ ಫ್ರೈಡೆ’ ಕದನದಲ್ಲಿ ಸೋಲನುಭವಿಸಿದ್ದು ಅವರಲ್ಲಿನ ಕರ್ತವ್ಯನಿಷ್ಠೆ ಎಂಬುದು ಕರ್ನಾಟಕದ ಇವತ್ತಿನ ಸಾಮಾಜಿಕ ಪರಿಸರದ ಪ್ರತಿಬಿಂಬ. ಪ್ರಾರಂಭೋತ್ಸವ ವಕೀಲರಿಂದಾಗಿದ್ದಾದರೂ ಉಳಿದೀರ್ವರು ತಮ್ಮ ಕೊಡುಗೆ ನೀಡುವುದರಲ್ಲಿ ಹಿಂದೆ ಬೀಳಲಿಲ್ಲ.