ಮಾರ್ಚ್ 29, 2017

ಮಾಧ್ಯಮಗಳನ್ನು ನಿಯಂತ್ರಿಸುವುದು ಸರಿಯೇ?

ಡಾ. ಅಶೋಕ್. ಕೆ. ಆರ್.
ಇತ್ತೀಚೆಗೆ ಕರ್ನಾಟಕದ ಉಭಯ ಸದನಗಳಲ್ಲಿ ಮಾಧ್ಯಮದ, ಅದರಲ್ಲೂ ದೃಶ್ಯ ಮಾಧ್ಯಮದವರ ಅತಿಗಳ ಬಗ್ಗೆ ನಾಲ್ಕು ಘಂಟೆಗಳಷ್ಟು ಸುದೀರ್ಘ ಅವಧಿಯವರೆಗೆ ಚರ್ಚೆಗಳಾಗಿತ್ತು. ವೈಯಕ್ತಿಕ ಅವಹೇಳನ, ವ್ಯಕ್ತಿಗತ ಟೀಕೆಗಳ ಬಗ್ಗೆ ಬಹಳಷ್ಟು ಸದಸ್ಯರು ಬೇಸರ, ಕೋಪ ವ್ಯಕ್ತಪಡಿಸಿದ್ದರು. ಮಾಧ್ಯಮಗಳನ್ನು ನಿಯಂತ್ರಿಸಬೇಕು, ವೈಯಕ್ತಿಕ ತೇಜೋವಧೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದರು. ವರದಿ ಮಾಡಲು ಸದನ ಸಮಿತಿ ರಚಿಸಲಾಗುತ್ತದೆ ಎಂದು ಸ್ಪೀಕರ್ ಕೋಳಿವಾಡರು ತಿಳಿಸಿದ್ದರು. ಅಂದು ಮಾಧ್ಯಮದ ವಿರುದ್ಧ ನಡೆದ ಚರ್ಚೆಯಲ್ಲಿ ಭಾಗವಹಿಸದವರೂ ಸಹಿತ ಮೌನದಿಂದಿದ್ದು ಒಪ್ಪಿಗೆ ಸೂಚಿಸಿದ್ದರು. ಸರಕಾರದ ಮಟ್ಟದಲ್ಲಿ ಕೆಲಸ ನಡೆಯುವ ವೇಗ ನಮಗೆ ಗೊತ್ತೇ ಇದೆ. ಈ ವಿಷಯದಲ್ಲಿ ಆ ರೀತಿಯಾಗದೆ ಅತಿ ಶೀಘ್ರವಾಗಿ ಸದನ ಸಮಿತಿಯನ್ನು ರಚಿಸಲಾಗಿದೆ. ಆರೋಗ್ಯ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ಕೆ.ಎಸ್. ಈಶ್ವರಪ್ಪನವರು ಸಮಿತಿ ರಚನೆಯನ್ನು ವಿರೋಧಿಸಿದ್ದಾರೆ, ಸಮಿತಿ ರಚನೆ ಯಾಕೆ ತಪ್ಪು – ಮಾಧ್ಯಮಗಳನ್ನು ನಿಯಂತ್ರಿಸುವುದು ಯಾಕೆ ಸರಿಯಲ್ಲ ಎಂದು ಕಾಂಗ್ರೆಸ್ಸಿನ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ. ಮಾಧ್ಯಮಗಳನ್ನು ನಿಯಂತ್ರಿಸಬೇಕೆ?

ಆಗ 3, 2013

ಮಾಧ್ಯಮಗಳ ಆದ್ಯತೆ ಏನು?

ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ನಟ ದರ್ಶನ್. ಆಸ್ಪತ್ರೆಯ ವೈದ್ಯರ ಪ್ರಕಾರ ಕುತ್ತಿಗೆಯ ಬಳಿ ಪೆಟ್ಟಾಗಿದೆ, ಅಪಾಯವೇನೂ ಇಲ್ಲ.
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು? 

ಜುಲೈ 9, 2013

ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ ದಿನೇಶ್ ಅಮೀನ್ ಮಟ್ಟು.



ಪತ್ರಿಕೋದ್ಯಮ ಮತ್ತು ಪತ್ರಕರ್ತ ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತಾ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವುದನ್ನೇ ಮರೆಯುತ್ತಿರುವ ವಿಷಮ ದಿನಗಳಿವು. ಪತ್ರಿಕೆ ಪ್ರಕಟಿಸುವ ವರದಿಗಳೇ ಹೋರಾಟ – ಚಳುವಳಿಗಳಿಗೆ ಮುನ್ನುಡಿಯಾಗುತ್ತಿದ್ದ ದಿನಗಳು ಶರವೇಗದಲ್ಲಿ ಮಾಯವಾಗುತ್ತಿದೆ. ದೃಶ್ಯ ಮಾಧ್ಯಮ ಮಾಹಿನಿಗಳ ಭರಾಟೆ ಹೆಚ್ಚುತ್ತಿದ್ದ ಹಾಗೆ ಪತ್ರಿಕೋದ್ಯಮದ ಬೆಲೆಯೂ ಇಳಿಯುತ್ತಿರುವುದು ವಿಪರ್ಯಾಸವೇ ಸರಿ. ಹೀಗೆಂದ ಮಾತ್ರಕ್ಕೆ ಪತ್ರಿಕೋದ್ಯಮ ಮುಂಚಿನ ದಿನಗಳಲ್ಲಿ ಸಂಪೂರ್ಣ ಪರಿಶುದ್ಧವಾಗಿತ್ತಾ? ಇದ್ದಿರಲಾರದು. ಆದರೆ ಪತ್ರಕರ್ತರ ಭ್ರಷ್ಟಾಚಾರ, ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗನುಗುಣವಾಗಿ ವರದಿಗಳನ್ನೇ ತಿರುಚಿಬಿಡುವ ದಾರ್ಷ್ಟ್ಯತನ ಹೆಚ್ಚುತ್ತಿರುವುದು ಒಟ್ಟಾರೆಯಾಗಿ ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳಿಗನುಗುಣವಾಗಿಯೇ ಇದೆ. ಸುದ್ದಿಯ ಸತ್ಯಾಸತ್ಯತೆ, ಆ ಸುದ್ದಿಯಿಂದ ಸಮಾಜದ ಮನಸ್ಸಿನ ಮೇಲುಂಟಾಗುವ ಪರಿಣಾಮಗಳಿಗಿಂತ ಹೆಚ್ಚಾಗಿ ಆ ಸುದ್ದಿ ಎಷ್ಟರ ಮಟ್ಟಿಗೆ ಬಿಕರಿಯಾಗಬಹುದು? ಎಷ್ಟರ ಮಟ್ಟಿಗೆ ನಮ್ಮ ಆದಾಯ ಹೆಚ್ಚಿಸಬಲ್ಲದು? ಎಂಬ ಪ್ರಶ್ನೆಗಳೇ ಮುಖ್ಯವಾಗಿ ಹೋಗಿದೆ. ಪತ್ರಕರ್ತ ಗೆಳೆಯನೊಬ್ಬ ಹೇಳಿದಂತೆ ಇಂದಿನ ಮಾಧ್ಯಮಗಳು entertainment ಮತ್ತು informationನಿಂದ ಉದ್ಭವವಾದ infotainment! ಪತ್ರಿಕೋದ್ಯಮದ ಬಗ್ಗೆ ಇಷ್ಟೆಲ್ಲ ಸಿನಿಕತೆಗಳಿದ್ದಾಗ್ಯೂ ಇಂದಿಗೂ ಪತ್ರಿಕೆಯ ಸುದ್ದಿ ವಿಶ್ಲೇಷಣೆಯನ್ನು ಗೌರವದಿಂದ ನೋಡುವಂತೆ ಮಾಡುವಲ್ಲಿ ದಿನೇಶ್ ಅಮೀನ್ ಮಟ್ಟುರಂಥ ಪತ್ರಕರ್ತರು ಕಾರಣಕರ್ತರೆಂದರೆ ತಪ್ಪಲ್ಲ.

ಮಾರ್ಚ್ 13, 2013

ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್.



ಡಾ ಅಶೋಕ್ ಕೆ ಆರ್

ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ.  ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.

ಜನ 2, 2013

ಅಪರಾಧ ಮತ್ತು ಸ್ಥಳದ ಮಹಿಮೆ.

ಡಾ ಅಶೋಕ್ ಕೆ ಆರ್
ಆ ದೌರ್ಭಾಗ್ಯೆಯ ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು!

ಅಕ್ಟೋ 19, 2012

ತನಿಖಾ ವರದಿಯ ನೈತಿಕತೆಯೇ ಪ್ರಶ್ನಾರ್ಹವೆನಿಸತೊಡಗಿದಾಗ?!



ಡಾ ಅಶೋಕ್ ಕೆ ಆರ್

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು – ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ – ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ಪಬ್ಲಿಕ್ ಟಿ ವಿ ಹಾಕಿದೆ!!

ಸೆಪ್ಟೆಂ 3, 2012

ಮಿನುಗುವ ಮನಗಳ “ರಸ್ತೆ ನಕ್ಷತ್ರ”



-      ಡಾ ಅಶೋಕ್ ಕೆ ಆರ್.

ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.

ಆಗ 7, 2012

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...


anna hazare
Team anna
 
-       ಡಾ. ಅಶೋಕ್. ಕೆ. ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಆಗ 2, 2012

ಎಚ್ಚರ ಪತ್ರಕರ್ತ ಎಚ್ಚರ....!

ಇಷ್ಟು ದಿನ ಪತ್ರಕರ್ತರನ್ನು ಅದರಲ್ಲೂ  ದೃಶ್ಯಮಾಧ್ಯಮದ ವರದಿಗಾರರನ್ನು ದೂಷಿಸುವುದೇ ಆಗುತ್ತಿತ್ತು. ಕಾರಣ ಅಲ್ಲಿನ ಬಹುತೇಕರ ವರ್ತನೆ ದೂಷಿಸಲು ಯೋಗ್ಯವಾಗಿಯೇ ಇರುವುದು! ಮಂಗಳೂರಿನ ಪಡೀಲಿನ ಘಟನೆಯಲ್ಲಿ ವಿಚಾರಣೆಗೊಳಪಟ್ಟ ನವೀನ್ ಸೂರಿಂಜೆ ಬರೆದ ಲೇಖನದ ನಂತರ ಉಳಿದೆಡೆಗಳಿಂದಲೂ ಪತ್ರಕರ್ತರು ಅನುಭವಿಸುತ್ತಿರುವ ಪಡಿಪಾಟಲುಗಳ ವಿವರಗಳು ಬರುತ್ತಿವೆ. ನಂತರ ಪ್ರಜಾವಾಣಿಯ ಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ಕೂಡ ಪತ್ರಕರ್ತರ ಪಾತ್ರದ ಬಗ್ಗೆ, ಅವರ ಮೇಲಾಗುತ್ತಿರುವ ಕೊಟ್ಟಿ ಕೇಸುಗಳ ಬಗ್ಗೆ ತಿಳಿಸಿತ್ತು. ಉತ್ತರಕರ್ನಾಟಕದ ಪತ್ರಕರ್ತ ಪರಶುರಾಮ್ ತಹಸೀಲ್ದಾರ್ ತಾನು ಅನುಭವಿಸಿದ್ದನ್ನು ಬರೆದಿದ್ದಾರೆ...

ಜುಲೈ 31, 2012

ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ....

ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?

ಜುಲೈ 26, 2012

'ಆ ಅಂಗಡಿ' ಮತ್ತು 'ಈ ಅಂಗಡಿ' ನಡುವೆ...

ಫೇಸ್ ಬುಕ್ಕಿನಲ್ಲಿ ಕೊನೆಯ ಕಂತೆಂಬಂತೆ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್ ರವರು ಪ್ರಜಾವಾಣಿ ತೊರೆಯುತ್ತಿರುವ ಸಂಗತಿ ತಿಳಿಸಿದ್ದಾರೆ! ಪ್ರಜಾವಾಣಿಯನ್ನು ಆ ಅಂಗಡಿಯೆಂದು ಕರೆಯುತ್ತ ಯಡಿಯೂರಪ್ಪನವರನ್ನು ಚೂಪು ಮೀಸೆಯ ಸರದಾರನೆಂದು ಕರೆಯುತ್ತ ಕಾರಣಗಳನ್ನು ಹೇಳಿದ್ದಾರೆ. ಯಾವ ಪಕ್ಷಕ್ಕೂ ಸೇರಿದ್ದಲ್ಲವೆಂಬ ಭಾವನೆ ಮೂಡಿಸಿದ್ದ 'ಕರ್ನಾಟಕದ ವಿಶ್ವಾಸರ್ಹ ದಿನಪತ್ರಿಕೆಯ' ವಿಶ್ವಾಸಾರ್ಹತೆಯನ್ನು ಬೆತ್ತಲು ಮಾಡಿದ್ದಾರೆ. ಖುಷಿಯ ಸಂಗತಿಯೆಂದರೆ ಅವರು ಈ ಅಂಗಡಿಯನ್ನು ಸೇರಲಿದ್ದಾರೆ. 'ನಂಬರ್ ಒನ್' ಈ ಅಂಗಡಿ ವಿಜಯ ಕರ್ನಾಟಕವೇ ತಾನೇ?!!

ಜುಲೈ 21, 2012

ಮುದ್ರಣ ಮಾಧ್ಯಮದಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಿಗೆ ಭವಿಷ್ಯ ಇದೆಯೇ?

ನಿನ್ನೆಯ ಪ್ರಜಾವಾಣಿಯ ಪತ್ರಿಕೆಯಲ್ಲಿ ಪಿ.ಮೊಹಮ್ಮದ್ ರವರ ವ್ಯಂಗ್ಯಚಿತ್ರ ಪ್ರಕಟವಾಗುವ ಜಾಗದಲ್ಲಿ ಈ ಪ್ರಕಟಣೆ ಇತ್ತು. ಮೊಹಮ್ಮದ್ ರವರು ಪ್ರಜಾವಾಣಿ ಪತ್ರಿಕೆ ತೊರೆಯುತ್ತಿರುವುದಾಗಿ ಫೇಸ್ ಬುಕ್ಕಿನಲ್ಲಿ ಈಗಾಗಲೇ ತಿಳಿಸಿದ್ದರಾದರೂ ಯಾವಾಗ ಬಿಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಮೊಹಮ್ಮದ್ ಪ್ರಜಾವಾಣಿ ತೊರೆದಿದ್ದಾರೆ ನಿನ್ನೆಯಿಂದ. ಇನ್ನವರ ಮೊನಚಾದ ವ್ಯಂಗ್ಯಚಿತ್ರಗಳನ್ನು ಪ್ರಜಾವಾಣಿಯಲ್ಲಿ ನೋಡುವ ಹಾಗಿಲ್ಲ. ಪ್ರಜಾವಾಣಿ ಕೊಂಚ ಸಪ್ಪೆಯೆನಿಸುವುದು ಖಂಡಿತ. ಕೆಲಸದ ಬದಲಾವಣೆಗಳು ಹೊಸದಲ್ಲ. ಮೊಹಮ್ಮದ್ ಗಿಂತಲೂ ಉತ್ತಮವಾದ ವ್ಯಂಗ್ಯಚಿತ್ರಕಾರಕ ಪ್ರಜಾವಾಣಿಗೆ ಬರಬಹುದು; ಬರಲಿ. ಮೊಹಮ್ಮದ್ ರವರು ಮತ್ತೊಂದು ಪತ್ರಿಕೆಗೆ ಹೋಗುತ್ತಿದ್ದಾರೇನೋ ಎಂಬ ಭಾವನೆಯಲ್ಲಿದ್ದೆ. ಆದರಿಂದು ಫೇಸ್ ಬುಕ್ಕಿನಲ್ಲಿ ಅವರು ಬರೆದಿರುವುದನ್ನು ನೋಡಿದರೆ ಅವರು ತಮ್ಮ ಕುಂಚಕ್ಕೆ ಸಂಪೂರ್ಣ ವಿರಾಮ ಕೊಡುವಂತೆ ಕಾಣಿಸುತ್ತಿದ್ದಾರೆ. ವ್ಯಂಗ್ಯಚಿತ್ರಕಾರನ ನೋವು ನಲಿವುಗಳನ್ನು ಈ ಪುಟ್ಟ ಪತ್ರದಲ್ಲಿ ವಿವರಿಸಿದ್ದಾರೆ. ಬ್ಯುಸಿನೆಸ್ಸಿಗೆ ಇಳಿಯುವುದಾಗಿ ಹೇಳಿದ್ದಾರೆ. ಜೀವನಕ್ಕೆ ಬ್ಯುಸಿನೆಸ್ಸು ಅನಿವಾರ್ಯವೆಂದವರಿಗೆ ಅನ್ನಿಸಿದ್ದರೆ ಸಂತಸವೇ ಆದರೆ ಕೊನೇ ಪಕ್ಷ ತಮ್ಮ ಮನಸ್ಸಂತೋಷಕ್ಕಾದರೂ ವ್ಯಂಗ್ಯಚಿತ್ರಗಳನ್ನು ರಚಿಸುವ ಕಾರ್ಯ ಮುಂದುವರೆಸಲಿ .....

ಈ ದುಷ್ಕೃತ್ಯವನ್ನು ಪ್ರಾಯೋಜಿಸಿದವರು – ಮಾಧ್ಯಮವೃಂದ!

-      ಡಾ. ಅಶೋಕ್, ಕೆ, ಆರ್

ಪ್ರಶಸ್ತಿ ಪಡೆದ ಕೆವಿನ್ ಚಿತ್ರ 
ಕೆವಿನ್ ಕಾರ್ಟರ್ 
             ಅದು 1993ರ ಇಸವಿ. ಧೀರ್ಘಕಾಲೀನ ಬರ ಮತ್ತು ಅಂತರ್ಯುದ್ಧದಿಂದ ಸೂಡಾನ್ ದೇಶ ಬಸವಳಿದಿತ್ತು. ಯು ಎನ್ ನ ವತಿಯಿಂದ ಕೆವಿನ್ ಕಾರ್ಟರ್ ಎಂಬ ಛಾಯಾವರದಿಗಾರ ಸೂಡಾನ್ ದೇಶದಲ್ಲಿ ಸಂಚರಿಸುತ್ತಿದ್ದ. ಅಲ್ಲಿ ಆತ ತೆಗೆದ ಒಂದು ಚಿತ್ರಕ್ಕೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಲಭಿಸಿತು. ಬರಪೀಡಿತ ಪ್ರದೇಶದ ಅಪೌಷ್ಟಿಕ ಮಗುವೊಂದು ಆಯಾಸದಿಂದ ತಲೆತಗ್ಗಿಸಿ ಕುಳಿತಿದೆ, ಹಿನ್ನೆಲೆಯಲ್ಲಿ ಆ ಮಗುವಿನ ಸಾವಿಗೆ ಕಾದಿರುವಂತೆ ರಣಹದ್ದೊಂದು ಕುಳಿತಿರುವ ಚಿತ್ರವದು.

ಜೂನ್ 28, 2012

ಮುಖ್ಯವಾಹಿನಿಯ ಜಾಣಗುರುಡು


ಡಾ ಅಶೋಕ್ ಕೆ ಆರ್        
 ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

ಏಪ್ರಿ 12, 2012

ಬರ ಬಿದ್ದ ನಾಡಿನಲ್ಲಿ ವಿವೇಕಕ್ಕೂ ಅಭಾವ


          ಇಡೀ ಕರ್ನಾಟಕ ಬರ ಪರಿಸ್ಥತಿಯನ್ನೆದುರಿಸುತ್ತಿರುವ ಸಂದರ್ಭದಲ್ಲಿ ಒಂದು ಚಿತ್ರದ ಮೂಲದ ಬಗ್ಗೆ ಶುರುವಾದ ವಿವಾದ ಪಡೆಯುತ್ತಿರುವ ಅಸಹ್ಯಕರ ತಿರುವುಗಳು ಮಾಧ್ಯಮದ ಮೇಲೆ ನಂಬುಗೆಯಿಟ್ಟ ಜನರನ್ನೆಲ್ಲ ತಲೆತಗ್ಗಿಸುವ ಹಾಗೆ ಮಾಡಿದೆ. ಪತ್ರಿಕೆಗಳಿಗಿಂತ ಹೆಚ್ಚು ಜನರನ್ನು ತಲುಪಲು ಶಕ್ತವಾಗಿರುವ ದೃಶ್ಯಮಾಧ್ಯಮಗಳು ತಮ್ಮ ವೈಯಕ್ತಿಕ ದ್ವೇಷ ಸಾಧನೆಗೆ ಮಾಧ್ಯಮದ ವೇದಿಕೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

ಮಾರ್ಚ್ 8, 2012

ತಾಕತ್ತಿದ್ದರೆ ಇದನ್ನೂ ಬ್ರೇಕಿಂಗ್ ನ್ಯೂಸ್ ಮಾಡಿ!!

ಪತ್ರಕರ್ತರ ಗ್ರಹಚಾರವೇ ನೆಟ್ಟಗಿಲ್ಲವೇನೋ! ದುಡ್ಡು ತೆಗೊಂಡು ವರದಿ ಮಾಡಿದ ಆರೋಪ ಎದುರಿಸಿದ್ದಾಯಿತು, ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣದಲ್ಲಿ ಪತ್ರಕರ್ತೆಯೊಬ್ಬರ ಬಂಧನ ನಡೆಯಿತು, ಇತ್ತೀಚೆಗೆ ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಛೇರಿ ಮೇಲೆ ನಡೆದ ದಾಳಿಯಲ್ಲೂ ಮೊದಲ ಬಂಧನವಾಗಿರುವುದು ಒಬ್ಬ ಪತ್ರಕರ್ತ! ಅಫ್ ಕೋರ್ಸ್ ಇದ್ಯಾವುದೂ ಇನ್ನು ಸಾಬೀತಾಗದ ಆರೋಪಗಳು, ಆದರೆ ಇತರರ ಮೇಲೆ ಆರೋಪಪಟ್ಟಿ ತಯಾರಾಗುವ ಮುಂಚೆಯೇ ಆರೋಪಿ ಪಟ್ಟ ಕಟ್ಟಿ ನ್ಯೂಸನ್ನು ಬ್ರೇಕ್ ಮಾಡುತ್ತಲೇ ಸಾಗುವ ಪತ್ರಕರ್ತರ ಮೇಲೆ ಆರೋಪ ಬಂದಾಗಲೂ ಸಾಬೀತಾಗುವ ಮೊದಲು ಆರೋಪಿಯೆಂದು ಗಣಿಸುವುದರಲ್ಲಿ ತಪ್ಪಿಲ್ಲವೇನೋ!!

ಮಾರ್ಚ್ 5, 2012

ಕರ್ತವ್ಯ ಮರೆತವರ ಕರುನಾಡಿನಲ್ಲಿ

ಪೋಲೀಸರಿಂದ ದಾಂಧಲೆ. ಮೂಲ - ಫೇಸ್ ಬುಕ್

ಪತ್ರಕರ್ತರ ಪ್ರತಿಭಟನೆ. ಮೂಲ - ಡೆಕ್ಕನ್ ಹೆರಾಲ್ಡ್
ವಕೀಲರ ದೌರ್ಜನ್ಯ. ಮೂಲ - ಫೇಸ್ ಬುಕ್
ಮೊದಲು ವಕೀಲರಿಗೆ ಧನ್ಯವಾದಗಳನ್ನರ್ಪಿಸಿಬೇಕು! ವಿವಿಧ ರಾಜಕೀಯ ಪಕ್ಷಗಳ ವಸಾಹತಾಗಿರುವ ಮಾಧ್ಯಮಗಳನ್ನು, ಪತ್ರಕರ್ತರನ್ನು ಒಂದುಗೂಡಿಸಿದ ಕೀರ್ತಿ ವಕೀಲರಿಗೆ ಸಲ್ಲಬೇಕು. ವಕೀಲರು ಮತ್ತು ಮಾಧ್ಯಮ – ಪೋಲೀಸರ ನಡುವೆ ನಡೆದ ‘ಬ್ಲ್ಯಾಕ್ ಫ್ರೈಡೆ’ ಕದನದಲ್ಲಿ ಸೋಲನುಭವಿಸಿದ್ದು ಅವರಲ್ಲಿನ ಕರ್ತವ್ಯನಿಷ್ಠೆ ಎಂಬುದು ಕರ್ನಾಟಕದ ಇವತ್ತಿನ ಸಾಮಾಜಿಕ ಪರಿಸರದ ಪ್ರತಿಬಿಂಬ. ಪ್ರಾರಂಭೋತ್ಸವ ವಕೀಲರಿಂದಾಗಿದ್ದಾದರೂ ಉಳಿದೀರ್ವರು ತಮ್ಮ ಕೊಡುಗೆ ನೀಡುವುದರಲ್ಲಿ ಹಿಂದೆ ಬೀಳಲಿಲ್ಲ.

ಜನ 19, 2012

ಪಬ್ಲಿಕ್ ಟಿ.ವಿ ಪಬ್ಲಿಕ್ಕಿಗಾಗಿಯೇ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತಾ . . .

ಡಾ. ಅಶೋಕ್. ಕೆ. ಆರ್.
  ಹತ್ತರ ನಂತರ ಹನ್ನೊಂದಾಗುವುದಿಲ್ಲ ಎಂಬ ಭರವಸೆಯೊಂದಿಗೆ ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕನ್ನಡಕ್ಕೆ ಮತ್ತೊಂದು ಸುದ್ದಿವಾಹಿನಿಯ ರಂಗಪ್ರವೇಶವಾಗುತ್ತಿದೆ. ಪಬ್ಲಿಕ್ ಟಿ.ವಿ ಎಂಬ ಹೆಸರಿನಲ್ಲಿ. ಕನ್ನಡಪ್ರಭದಲ್ಲಿ ಕೆಲಸದಲ್ಲಿದ್ದ ನಂತರ ಕೆಲಕಾಲ ಸುವರ್ಣವಾಹಿನಿಯನ್ನು ಮುನ್ನಡೆಸಿದ ರಂಗನಾಥ್ ಪಬ್ಲಿಕ್ ಟಿ.ವಿಯ ಕ್ಯಾಪ್ಟನ್. ಸುವರ್ಣಸುದ್ದಿವಾಹಿನಿಗೆ ಹೋಗುವಾಗ ತಮ್ಮೊಡನೆ ಕನ್ನಡಪ್ರಭದ ವಿಶ್ವಾಸಾರ್ಹ ಪ್ರತಿಭಾವಂತ ಪತ್ರಕರ್ತರನ್ನು ಕರೆದೊಯ್ದ ರಂಗನಾಥ್ ಅದೇ ಪತ್ರಕರ್ತರನ್ನು ಹೊಸ ವಾಹಿನಿಯ ಬೆನ್ನೆಲುಬಾಗಿ ನಿಲ್ಲಿಸಿಕೊಂಡಿದ್ದಾರೆ. ಯಶ ಪಡೆಯುತ್ತಾರಾ? ನಿರ್ಧರಿಸಲು ಹೆಚ್ಚು ಸಮಯ ಕಾಯಬೇಕಿಲ್ಲ.

ನವೆಂ 25, 2011

ಪತ್ರಕರ್ತನ ಹತ್ಯೆಗೆ ಪತ್ರಕರ್ತೆಯ ಸಹಾಯ ಹಸ್ತ?!

ಜೆ ಡೆ source - youthkiawaaz.com

ಜೂನ್ ಹನ್ನೊಂದು ೨೦೧೧ರಲ್ಲಿ ಹತ್ಯೆಯಾದ ಮಿಡ್ ಡೇ ಪತ್ರಿಕೆಯ ಪತ್ರಕರ್ತ ಜೆ ಡೆಯ ಹತ್ಯೆಗೆ ಸಹಕರಿಸಿದ ಆರೋಪದ ಮೇಲೆ ಏಶಿಯನ್ ಏಜ್ ನ ಪತ್ರಕರ್ತೆ, ಡೆಪ್ಯುಟಿ ಬ್ಯುರೋ ಚೀಫ್ 'ಜಿಗ್ನ ವೋರ'ಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.