Oct 27, 2019

ಒಂದು ಬೊಗಸೆ ಪ್ರೀತಿ - 37

ಡಾ. ಅಶೋಕ್.‌ ಕೆ. ಆರ್.‌
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....' 

“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 20, 2019

ಒಂದು ಬೊಗಸೆ ಪ್ರೀತಿ - 36

ಡಾ. ಅಶೋಕ್.‌ ಕೆ. ಆರ್.‌
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'

“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.

'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”

'ಇವಾಗೆಲ್ಲಿ ಹಂಗಿದ್ದೀನಿ?'

“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಻ಅಂತ ತಿಳಿಸಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

Oct 13, 2019

ಒಂದು ಬೊಗಸೆ ಪ್ರೀತಿ - 35

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಆರೂವರೆಗೆದ್ದು ಮೊಬೈಲ್ ನೋಡಿದಾಗ ಸಾಗರನ ಮೆಸೇಜು ಕಂಡಿತು. ಐದೂವರೆಯಷ್ಟೊತ್ತಿಗೆ "ಗುಡ್ ಮಾರ್ನಿಂಗ್. ತಲುಪಿದೆ" ಅಂತ ಮೆಸೇಜು ಮಾಡಿದ್ದ. ಪ್ರತಿಯಾಗಿ 'ಗುಡ್ ಮಾರ್ನಿಂಗ್' ಅಂತ ಕಳಿಸಿ ತಿಂಡಿ ಮಾಡಲು ಮೇಲೆದ್ದೆ. ರಾಜೀವ ತಿಂಡಿ ತಿಂದುಕೊಂಡು ಏಳೂಕಾಲಷ್ಟೊತ್ತಿಗೆ ಹೊರಟರು. ಆಗಲೇ ಫೋನ್ ಮಾಡುವ ಸಾಗರನಿಗೆ ಎಂದುಕೊಂಡವಳಿಗೆ ನಾನಿನ್ನೂ ಸ್ನಾನ ಕೂಡ ಮಾಡಿಲ್ಲ ಎನ್ನುವುದು ನೆನಪಾಯಿತು. ದಡಬಡಾಯಿಸಿ ಸ್ನಾನ ಮಾಡಿಕೊಂಡು ಹೊರಬಂದು ಸಾಗರನಿಗೆ ಫೋನ್ ಮಾಡಿದೆ. ಮೊದಲ ರಿಂಗಿಗೇ ಫೋನೆತ್ತಿಕೊಂಡ. 

'ಏನ್ ಮಾಡ್ತಿದ್ಯೋ'

“ಏನಿಲ್ಲ. ನಿನ್ನ ಫೋನಿಗೇ ಕಾಯ್ತಿದ್ದೆ"

'ಅಲ್ಲ ಫ್ರೆಂಡ್ ಮುಂದೇನೇ ಮಾತಾಡಿದ್ರೆ ಯಾರಂತ ಕೇಳೋಲ್ವ'

“ಹ ಹ. ರೂಮಿನೊರಗಿದ್ದೀನಿ ಹೇಳು"

'ಹೇಳೋಕೇನಿದೆಯೋ ಗೂಬೆ. ಒಂಟಿಕೊಪ್ಪಲು ದೇವಸ್ಥಾನದ ಹತ್ತಿರ ಬಂದು ಫೋನ್ ಮಾಡು. ಗಾಡೀಲ್ ಬರ್ತೀಯಾ ಹೆಂಗೆ?'

“ಹು ಕಣೆ. ಬೈಕಿದೆ ಫ್ರೆಂಡ್ದು"

'ಸರಿ ಬಂದ್ ಫೋನ್ ಮಾಡು. ದೇವಸ್ಥಾನದಿಂದ ದಾರಿ ಹೇಳ್ತೀನಿ'

ಫೋನಿಟ್ಟು ಕನ್ನಡಿಯ ಎದುರಿಗೆ ನಿಂತೆ. ಸುತ್ತಿಕೊಂಡಿದ್ದ ಟವಲನ್ನು ತೆಗೆದುಹಾಕಿದೆ. ಅಲ್ಲಲ್ಲಿ ಇನ್ನೂ ನೀರಿತ್ತು, ಬಿಸಿಯಿತ್ತು. ಚೆಂದ ಒರೆಸಿಕೊಂಡು ಹಾಗೇ ದೇಹವನ್ನು ನೋಡ್ತಾ ನಿಂತುಕೊಂಡೆ. ಅಯ್ಯಪ್ಪ ಎಷ್ಟು ದೊಡ್ಡದಿದೆ ನನ್ನ ಮೊಲೆಗಳು ಎಂದು ನನಗೇ ಅನ್ನಿಸಿತು. ಎದುರು ಹೋಗುವ ಗಂಡಸರೆಲ್ಲ ಒಮ್ಮೆ ಅದರತ್ತ ನೋಡದೇ ಇರೋದಿಲ್ಲ. ಎಷ್ಟು ಮುಜುಗರವಾಗ್ತದೆ ಆಗ. ಇಷ್ಟವಾದವರು ನೋಡ್ದಾಗ ಖುಷಿಯಾಗೋದೂ ಹೌದು. ಇವತ್ತಿಗೆ ಈ ಬೆತ್ತಲನ್ನು ನೋಡಿದವರ ಸಂಖೈ ಮೂರು ಎಂಬ ಯೋಚನೆ ಬಂದು ಬೆಚ್ಚಿ ಬಿದ್ದೆ. ಇದೆಂತ ಯೋಚನೆ? ಪುರುಷೋತ್ತಮನ ಎದುರಿಗೆ ಯಾವತ್ತಿಗೂ ಪೂರ್ತಿ ಬೆತ್ತಲಾಗಿರಲಿಲ್ಲ. ಅವನಾಗೇ ಕೇಳಿಕೊಂಡಿದ್ದಾಗಲೂ ಆಗಿರಲಿಲ್ಲ. 'ಹೆಂಗಿದ್ರೂ ಸೆಕ್ಸ್ ಮಾಡಲ್ಲವಲ್ಲ ಮತ್ಯಾಕೆ ಪೂರ್ತಿ ಬೆತ್ತಲಾಗೋದು ಅನ್ನುತ್ತಿದ್ದೆ' ಸುಮ್ಮನಾಗುತ್ತಿದ್ದ. ರಾಜೀವನೊಡನೆ ಶುರುವಿನಲ್ಲಿದ್ದಷ್ಟು ದೇಹದುಡುಕಾಟ ಈಗಿಲ್ಲ. ಮದುವೆಯಾಗಿ ಸುಮಾರು ವರುಷಗಳು ಉರುಳಿ ಹೋದ ಮೇಲೆ ಎಲ್ಲರ ಸಂಸಾರದಲ್ಲೂ ಹೀಗೆಯೋ ಏನೋ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 7, 2019

ಒಂದು ಬೊಗಸೆ ಪ್ರೀತಿ - 34

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಇವ್ರು ಎಷ್ಟು ಘಂಟೆಗೆ ಬಂದು ಮಲಗಿದರೋ ಗೊತ್ತಾಗದಷ್ಟು ನಿದ್ರೆ. ಬೆಳಿಗ್ಗೆ ಎದ್ದಾಗ ಅವರ ಬಾಯಿಂದಷ್ಟೇ ಅಲ್ಲ ಇಡೀ ದೇಹದಿಂದಲೇ ರಮ್ಮಿನ ವಾಸನೆ ಬರುವಂತಿತ್ತು. ನಾ ಡ್ಯೂಟಿಗೆ ಹೋಗಲು ತಯಾರಾಗುತ್ತಿರುವಾಗ ಎಚ್ಚರವಾಗಿದ್ದರು. 'ಇದ್ಯಾಕೆ ಮಲಗೇ ಇದ್ದೀರ. ಹೋಗಲ್ವ ಕೆಲಸಕ್ಕೆ' ಎಂದು ಕೇಳಿದೆ. 

“ಆ ದರಿದ್ರ ಕೆಲಸಕ್ಕೆ ಯಾರ್ ಹೋಗ್ತಾರೆ ಬಿಡು" ಮಲಗಿದ್ದಲ್ಲಿಂದಲೇ ಹೇಳಿದ. 

'ಮಾಡೋ ಕೆಲಸಾನ ದರಿದ್ರ ಅಂದ್ರೆ ಆಗ್ತದಾ?' 

“ಓಹೋ. ನನಗಿಂತ ಜಾಸ್ತಿ ದುಡೀತೀನಿ ಅನ್ನೋ ಅಹಂಕಾರದಲ್ಲಿ ಬುದ್ಧಿವಾದ ಹೇಳೋಕೆಲ್ಲ ಬರಬೇಡಿ ಮೇಡಂ. ನನಗ್ ಗೊತ್ತು ಯಾವುದು ಒಳ್ಳೇದು ಯಾವುದು ದರಿದ್ರದ್ದು ಅಂತ.....” 

'ಸರಿ ನಿಮ್ಮಿಷ್ಟ' ಬೆಳಿಗ್ಗೆ ಬೆಳಿಗ್ಗೆ ಜಗಳವಾಡುವ ಮನಸ್ಸಿರಲಿಲ್ಲ ನನಗೆ. ಇಡೀ ದಿನ ಹಾಳಾಗ್ತದೆ. 

“ಇಷ್ಟೇ ಅಲ್ವ ಜೀವನ. ಮೊದಲೆಲ್ಲ ಕೆಲಸದ ವಿಷಯಕ್ಕೆ ನಾ ಗೋಳಾಡ್ವಾಗ ಮುದ್ದುಗರೆದು ಸಮಾಧಾನ ಮಾಡ್ತಿದ್ದೆ. ಈಗ ಸರಿ ನಿಮ್ಮಿಷ್ಟ ಅಂತಂದು ಸುಮ್ಮನಾಗ್ತಿ" 

'ಬೆಳಿಗ್ಗೆ ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಮನಸ್ಸಿಲ್ಲ ರೀ...'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 4, 2019

ಗಾಂಧಿ ಜಯಂತಿಯ ದಿನ ಪ್ರಧಾನಿ ಹೇಳಿದ ಸುಳ್ಳು.

ಡಾ. ಅಶೋಕ್. ಕೆ. ಆರ್. 
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ? 

ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ? 

ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?

Oct 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ.