Aug 25, 2011

ಅಪೆಕ್ಸ್ ಕೋರ್ಟಿನ ಅಂಗಳದಲ್ಲಿ ದೆಹಲಿಯ ಬಡ ರೋಗಿ



ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಬಟ್ಟೆ, ಮನೆಗೆ ಹಣ ಹೊಂದಿಸಲೂ ಕಷ್ಟಪಡುವ ಜನರೇ ಹೆಚ್ಚಿರುವ ಭಾರತದಲ್ಲಿ ಆರೋಗ್ಯ ರಕ್ಷಣೆಯ ಸಂಪೂರ್ಣ ಹೊಣೆ ಸರಕಾರದ್ದೇ ಆಗಿರಬೇಕಾಗಿತ್ತು. ಜಾಗತೀಕರಣದ ಪ್ರಭಾವ, ಉದ್ಯಮವಾದ ಖಾಸಗಿ ಆಸ್ಪತ್ರೆಗಳು, ನಿರೀಕ್ಷೆಯ ಗುಣಮಟ್ಟ ಒದಗಿಸಲು ವಿಫಲವಾದ ಸರಕಾರಿ ಆಸ್ಪತ್ರೆ ಮತ್ತು ಉಳಿದೆಲ್ಲರಂತೆ ವೈದ್ಯರಿಗೂ ಹಣಗಳಿಕೆಯೇ ಪ್ರಮುಖ ಸಂಗತಿಯಾದ ಕಾರಣ ಸರ್ವರಿಗೂ ಉಚಿತ ಆರೋಗ್ಯವೆಂಬುದು ಕನಸಿನಲ್ಲೂ ಯೋಚಿಸಲಾಗದ ಸಂಗತಿಯಾಗಿದೆ. ಪಶ್ಚಿಮೀಕರಣದ ಫಲವಾಗಿ ಆರೋಗ್ಯಕ್ಕೂ ವಿಮೆ ಮಾಡಿಸಲೇಬೇಕಾದದ್ದು ಇಂದಿನ ಜರೂರತ್ತು. ಬಡವರ ಪಾಲಿಗೆ ವಿಮೆ ಮಾಡಿಸುವುದು ಅಸಾಧ್ಯ.

Aug 23, 2011

The religion and its fanaticism

-->
Out of many meanings of the word religion, the one which should have been the most important for human nature is “the religion is to resolve to mend one’s errant ways”. But unfortunately the mankind except few exceptions has restricted its meaning to “belief in and worship of a god or other superhuman agency”. The foundation for all the man made problems that rose from the religion is because of the followers of respective religion who accept and believe in the latter meaning of religion and either they ignore the former meaning as it is difficult to follow in life or they just reject that view as it will not help in their false propaganda and expansion of false religion.

Aug 22, 2011

ಪ್ರಭುತ್ವ ಮಣಿಸುವ ಅತ್ಯಾತುರದಲ್ಲಿ...



          ಕಳೆದ ನಲವತ್ತೆರಡು ವರ್ಷಗಳಿಂದ ಭಾರತವನ್ನು ‘ಆಳಿದ’ ಯಾವೊಂದು ಪಕ್ಷವೂ ಒಂದು ಪ್ರಬಲ ಲೋಕಪಾಲ ಮಸೂದೆಯನ್ನು ಮಂಡಿಸಲು ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿಲ್ಲ. ಬಹುಶಃ ಶಾಂತರಾಮ್ ಕಾದಂಬರಿಯಲ್ಲಿ ಬರುವ the problem with corruption is it works very fine!  ಎಂಬ ವಾಕ್ಯದಂತೆ ನಾವೆಲ್ಲರೂ ಭೃಷ್ಟಾಚಾರಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮದು ಸಂಪ್ರದಾಯಬದ್ಧ ದೇಶ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವ ಪರಿಣಾಮ ನಮಗೆ ಆರಾಧಿಸಲು ಒಬ್ಬ ದೇವರು ಬೇಕು. ಸದ್ಯ ಅಣ್ಣಾ ಹಜಾರೆಗೆ ಆ ದೇವರ ಸ್ಥಾನ ಕೊಟ್ಟು ಬೀದಿಗಿಳಿದಿದ್ದೇವೆ. ಬೆಚ್ಚಗೆ ಮನೆಯಲ್ಲಿ ಕುಳಿತು ಯಾವೊಂದು ಚಳಿವಳಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸದೇ ಇದ್ದ ಜನರನ್ನು ಬೀದಿಗಿಳಿದು ದನಿತೆಗೆಯುವಂತೆ ಮಾಡಿದ್ದು ಅಣ್ಣಾರ ನಿಜವಾದ ಸಾಧನೆಯೇ ಹೊರತು ಅವರ ಹೋರಾಟದಿಂದ ಜಾರಿಯಾಗುವ ಅಥವಾ ಜಾರಿಯಾಗದೆ ಇರುವ ಜನಲೋಕಪಾಲ ಮಸೂದೆಯಲ್ಲ. 

Aug 21, 2011

ಮಣ್ಣಿನ ಸಿನಿಮಾ ಮತ್ತು ಕಂಪ್ಯೂಟರ್ ಪ್ರಿಂಟ್ ಔಟ್.


-->
ಮಾನ್ಯ ಮುನಿರತ್ನರವರಿಗೆ,
ಶುಭಾಷಯಗಳು, karnataka film producers associationನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಕ್ಕೆ. ಅಧ್ಯಕ್ಷರಾದ ಸಂತಸದಲ್ಲಿ ನೀವು ಉದುರಿಸಿದ ಅಣಿಮುತ್ತುಗಳನ್ನು ಪ್ರಜಾವಾಣಿಯ ಸಿನಿಮಾ ಪುರವಣಿಯಲ್ಲಿ ಕಂಡು ಯಾವ ಭಾವನೆಯನ್ನು ವ್ಯಕ್ತಪಡಿಸಬೇಕೆಂಬುದು ತಿಳಿಯದೆ ಗೊಂದಲವೇರ್ಪಟ್ಟಿದೆ! ‘ಮೂರು ಕೋಟಿಯವರೆಗಷ್ಟೇ ಮಾರ್ಕೆಟ್ ಇರುವ ಗಣೇಶನಂತಹ ನಟ ಎರಡು ಕೋಟಿ ಸಂಭಾವನೆ ಕೇಳುತ್ತಾನೆ, ಅವನೆಗಿಂತ ಹೆಚ್ಚು ಮಾರ್ಕೆಟ್ ಇರುವ ಪುನೀತ್ ನಷ್ಟೇ ದುಡ್ಡು ಕೇಳುತ್ತಾನೆ, ಇದು ತಪ್ಪು. ಇಂಥದು ನಡೆಯಬಾರದು; ಮೊದಲಿವನ್ನು ಸರಿಪಡಿಸಬೇಕು’ ಎಂದು ಆದೇಶ ನೀಡಿದ್ದೀರಿ. ಯಾರು ಸರಿಪಡಿಸಬೇಕೆಂಬುದನ್ನೂ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು, ಇರಲಿ.

Aug 14, 2011

ಕಡ್ಡಿಗೀರಿ ......................ಹಚ್ಚಿದನು

-->
ಹಳ್ಳಿಹೈದ. S. ಅBಹನಕೆರೆ
          ಟೀ ಸ್ಟಾಲ್ ಬಳಿ ಕುಳಿತಿದ್ದವನ ಕೆಣಕಿದವನು ಮೋಗ್ಲಿಯೇ. ಅಲ್ಲಿಂದ ಉರ್ಕೊಂಡು ಹೋಗುವಂತೆ ಮಾಡಿದವನೂ ಮೋಗ್ಲಿಯೇ. ಬೈಕ್ ನಿಲ್ಲಿಸಿ ಒಳಬಂದವನೆ “ಅಣ್ಣಾ ಎರಡ್ ಕಿಂಗ್ ಎರಡ್ ಟೀ” ಅಂದ. ತಕ್ಷಣ ಸುತ್ತಮುತ್ತ ನೋಡಿದೆ, ಯಾರೂ ಇರಲಿಲ್ಲ, mostly ನನಗೇ ಆರ್ಡರ್ ಮಾಡಿರಬೇಕೆಂದುಕೊಂಡು “ನನಗೆ ಬೇಡ” ಅಂದೆ.

Aug 10, 2011

ವ್ವಕ್ತಿತ್ವ ಬದಲಾಗಬೇಕು ವ್ವಕ್ತಿಯಲ್ಲ

-->
ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ತೆರೆ ಬಿದ್ದು ಮತ್ತೊಂದು ಅಂಕದ ಆರಂಭವಾಗಿದೆ. ಸಿಟ್ಟಿನ ಜಾಗಕ್ಕೆ ನಗು ಬಂದಿದೆ ಅರ್ಥಾತ್ ಮೂಗಿನ ತುದಿಯಲ್ಲೇ ಕೋಪ ಸಾಕಿಕೊಂಡಿದ್ದ ಯಡಿಯೂರಪ್ಪನವರ ಜಾಗದಲ್ಲಿ ತಮ್ಮ ದೇಹ ರಚನೆಯ ಕಾರಣದಿಂದಲೋ ಅಥವಾ ನಿಜಕ್ಕೂ ಖುಷಿಯ ಮನಸ್ಸಿನ ಕಾರಣದಿಂದಲೋ ಯಾವಾಗಲೂ ನಗುತ್ತಿರುವಂತೆ ತೋರುವ ಸದಾನಂದಗೌಡರು ಮುಖ್ಯಮಂತ್ರಿಯ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದ ವರಿಷ್ಠರ ಮಾತನ್ನು ನಂಬುವುದಾದರೆ “ಡೆಮಾಕ್ರೆಟಿಕ್” ರೀತಿಯಲ್ಲಿ ಆಯ್ಕೆಯಾಗಿದ್ದಾರೆ.

Aug 7, 2011

India as a leader in 21st century.

Narasimhan Khadri.
-->
internet source.

Reading newspapers nowadays has been a very disturbing exercise even for strong hearted. Whole world is anxious to know what the immediate future holds for them. Recent developments in the North eastern part of Africa can only be described as horrific. Somalia is not new to hunger and terrorism. Its a part of their psyche. But terrorism and hunger of this magnitude is shocking and hurting. But then you will never get used to hunger no matter how much you have seen it. Somalia is in its worst drought situation and it is in need of help from every quarter of the world. Even India can play a very constructive role. Somalia would have got sufficient financial help from the western developed nations, if not for the crisis that they  themselves are in.

Aug 5, 2011

Incendies Movie Review.


-->

We all wait for good stories and this is one for sure. Well I will have to be cautious about how much I write about the story as such as not to spoil the impression. Story is adapted from a play ‘scorched’ by wajdimouawad.

Aug 1, 2011

ಮತ್ಸ್ಯಗಂಧಿಯ ಮೀನುಗಳು

-->
ಮತ್ಸ್ಯಗಂಧಿ 
ಬೆಳಗಿನ ಜಾವ ಮೂರಕ್ಕೆ ನಂತರ ಪ್ರಯತ್ನಪಟ್ಟರೂ ನೆನಪಿಗೆ ಬಾರದ ಸ್ವಪ್ನವೊಂದರಿಂದ ಎಚ್ಚರವಾಯಿತು. ಅರ್ಧ ಗಂಟೆ ಹೊರಳಾಡಿದೆನಾದರೂ ನಿದ್ರೆ ಹತ್ತಲಿಲ್ಲ. ಎದ್ದು ಕುಳಿತು ಕೊನೆಯ ಕೆಲವು ಪುಟಗಳಷ್ಟೇ ಉಳಿದಿದ್ದ ‘ನನ್ನ ತೇಜಸ್ವಿ’ ಪುಸ್ತಕವನ್ನು ಕೈಗೆತ್ತಿಕೊಂಡೆ. ಆರಾಗುವಷ್ಟರಲ್ಲಿ ಪುಸ್ತಕದ ಪುಟಗಳು ಮುಗಿದುಹೋದವು. ರೂಮಿನಲ್ಲೇ ಅತ್ತಿಂದಿತ್ತ ಹೆಜ್ಜೆ ಹಾಕಿದೆ. ಇಂದೇಕೋ ಮಳೆಯಿರಲಿಲ್ಲ. ಏನು ಮಾಡಬೇಕೆಂದು ತೋಚದೆ ಮೊಬೈಲೆತ್ತಿಕೊಂಡು ಗೂಗಲ್ ಗೆ ಹೋಗಿ ಸುಳ್ಯ ಎಂದು ಟೈಪಿಸಿ ಮೂಡುವ ಪುಟಗಳಿಗೆ ಕಾದೆ. ಮೊದಲ ಪುಟ ವಿಕಿಪೀಡಿಯಾದಾಗಿತ್ತು. ಅದನ್ನೇ ತೆರೆದೆ. ಸುಳ್ಯದ ಹತ್ತಿರದ ಜಾಗಗಳ ಹೆಸರುಗಳನ್ನು ನೋಡುತ್ತಿದ್ದಾಗ ತೊಡಿಕಾನ, ಮತ್ಸ್ಯಗಂಧಿ, ದೇವರಗುಂಡಿಯ ಹೆಸರುಗಳು ಕಂಡವು. ಸುಳ್ಯದಿಂದ ಹತ್ತಿರದಲ್ಲೇ ಇದ್ದ ಜಾಗಗಳವು. ಸರಿ ನಡಿ ಹೊರಡೋಣ ಎಂದು ಶರ್ಟು ಪ್ಯಾಂಟು ತೊಟ್ಟು ಜರ್ಕಿನ್ನಿನ ಒಳಜೇಬಿಗೆ ಕ್ಯಾಮೆರಾ, ಮೊಬೈಲನ್ನು ಹಾಕಿ ಜರ್ಕಿನ್ನನ್ನು ಹೆಗಲಿಗೇರಿಸಿ ಬೈಕೇರಿ ಹೊರಟೆ. ದಾರಿ ಕೇಳಲು ರಸ್ತೆಯಲ್ಲಿ ಜನ ಸಂಚಾರವೇ ಆರಂಭವಾಗಿರಲಿಲ್ಲ. ಎಲ್ಲರೂ ಭಾನುವಾರದ ರಜೆಯ ಮೋಜನ್ನು ನಿದ್ರೆಯಲ್ಲಾನಂದಿಸುತ್ತಿರುವಾಗ ನನಗ್ಯಾವ ಹುಕಿ ಇದು? ಎಂದು ನಗೆ ಬಂತು. ಬಸ್ ನಿಲ್ದಾಣದ ಬಳಿ ಹೋಗಿ ಆಟೋದವರನ್ನು ತೊಡಿಕಾನಕ್ಕೆ ಹೋಗುವ ದಾರಿ ಕೇಳಿದೆ. ಮಡಿಕೇರಿಯೆಡೆಗೆ ಹೋಗುವ ರಸ್ತೆಯಲ್ಲೇ ಹೋಗಿ ಅರಂತೋಡುವಿನ ಬಳಿ ಬಲಕ್ಕೆ ಹೊರಳಿ ಐದು ಕಿ.ಮಿ ಕ್ರಮಿಸಿದರೆ ತೊಡಿಕಾನ ಸಿಗುತ್ತದೆ ಎಂದರು.