ಡಿಸೆಂ 7, 2018

ಆಪರೇಷನ್ ಕಮಲದ ಅನಿವಾರ್ಯತೆ ಯಾರಿಗಿದೆ?

ಕು.ಸ.ಮಧುಸೂದನ
'ಆಪರೇಷನ್ ಕಮಲ' ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರ ಆರು ತಿಂಗಳು ಪೂರೈಸುತ್ತಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಆಡಿಯೋ ತುಣುಕೊಂದು ಹೀಗೊಂದು ಸಂಶಯವನ್ನು ಹುಟ್ಟು ಹಾಕಿದೆ. ಈ ಆಡಿಯೋ ತುಣುಕಿನ ಸತ್ಯಾಸತ್ಯತೆಯೇನೇ ಇರಲಿ ಈ ಸರಕಾರವನ್ನು ಕೆಡವಿ ಅಧಿಕಾರಕ್ಕೇರಲು ಬಾಜಪ ಪ್ರಯತ್ನಿಸುತ್ತಿರುವುದೇನು ಹೊಸತಲ್ಲ.

ಚುನಾವಣೆಗಳು ಮುಗಿದ ನಂತರ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ವಿಶ್ವಾಸ ಮತ ಸಾಬೀತಿಗೆ ಬೇಕಾದ ಸಂಖ್ಯೆ ಹೊಂದಲು ಆಪರೇಷನ್ ಕಮಲ ನಡೆಸಲು ಪ್ರಯತ್ನಗಳು ನಡೆದಿದ್ದವು. ವಿಶ್ವಾಸ ಮತದ ಮೇಲಿನ ಚರ್ಚೆಯಲ್ಲಿ ಮಾತಾಡುತ್ತ ಸ್ವತ: ಯಡಿಯೂರಪ್ಪನವರೇ ತಾವು ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳನ್ನು ಸಂಪರ್ಕಿಸಿದ್ದು ನಿಜವೆಂದು ಹೇಳಿಕೊಂಡಿದ್ದರು. ಅದಾದ ನಂತರ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಪರೇಷನ್ ಕಮಲ ನಡೆಸುವ ನಂಬಿಕೆಯಿಂದಲೇ ಬಾಜಪದ ಬಹುತೇಕ ನಾಯಕರುಗಳು ಈ ಸರಕಾರ ಇನ್ನು ಒಂದು ವಾರದಲ್ಲಿ ಬೀಳುತ್ತದೆ, ಇನ್ನು ಎರಡು ವಾರದಲ್ಲಿ ಬೀಳುತ್ತದೆಯೆಂದು ಭವಿಷ್ಯ ನುಡಿಯುತ್ತ ನಗೆಪಾಟಲಿಗೀಡಾಗುತ್ತ ಹೋಗಿದ್ದು ನಮ್ಮ ಮುಂದಿದೆ. ಇದೀಗ ಚಳಿಗಾಲದ ಅಧಿವೇಶನ ಈ ತಿಂಗಳು ಹತ್ತನೇ ತಾರೀಖು ಪ್ರಾರಂಭವಾಗಲಿದ್ದು, ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡುವ ತರಾತುರಿಯಲ್ಲಿರುವ ಮೈತ್ರಿ ಸರಕಾರಕ್ಕೆ ಈಗ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಯಥಾ ಪ್ರಕಾರ ಬಾಜಪ ಈ ಆಡಿಯೋದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು ತಮ್ಮ ಪಕ್ಷ ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ತಾವಾಗಿಯೇ ಪಕ್ಷ ಸೇರಲು ಬಯಸುವ ಶಾಸಕರುಗಳಿಗೆ ಬೇಡ ಎನ್ನುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಆಡಿಯೋದ ಅಧಿಕೃತತೆಯನ್ನು ಮತ್ತು ಇದರ ಮೂಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಖ್ಯವಾಗಿ ಈಗ ಈ ಆಪರೇಷನ್ ಕಮಲ ಯಾರಿಗೆ ಹೆಚ್ಚು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿಶ್ಲೇಷಿಸಿ ನೋಡಬೇಕಾಗಿದೆ. 

ಮೇ 3, 2018

ನಿರೀಕ್ಷೆ ಮತ್ತು ವಾಸ್ತವ......

ಸಾಂದರ್ಭಿಕ ಚಿತ್ರ 
ಡಾ. ಅಶೋಕ್. ಕೆ. ಆರ್. ಪೇಪರ್ರಿನವನು ಪತ್ರಿಕೆಯನ್ನು ಕಾಂಪೌಂಡಿನೊಳಗೆ ಎಸೆದ ಸದ್ದಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ಬಾಗಿಲು ತೆರೆದು ಪತ್ರಿಕೆ ತೆಗೆದುಕೊಂಡು ಒಳಬಂದು ಓದಲಾರಂಭಿಸಿದೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳ ಮಾತುಗಳಲ್ಲದೆ ಬೇರೆ ಸುದ್ದಿಗಳನ್ನು ಕಾಣಲು ಸಾಧ್ಯವೇ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾತುಗಳೇ ಇವತ್ತಿನ ಪ್ರಮುಖ ಸುದ್ದಿ:

ಆಗ 20, 2015

ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು....

ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಕನ್ನಡ, ಇಂಗ್ಲೀಷಿನ ಜೊತೆಗೆ ತೆಲುಗು, ತಮಿಳು, ಉರ್ದು ಭಾಷೆಯಲ್ಲಿಯೂ ಪ್ರಕಟಿಸಿ ಮತಗಳಿಕೆಗಾಗಿ ಕನ್ನಡತನವನ್ನು ಕೊಲ್ಲುವುದಕ್ಕೆ ತಾನು ಹಿಂಜರಿಯುವುದಿಲ್ಲ ಎಂದು ತೋರಿಸಿತ್ತು. 

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.


ಉಳಿದೆರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಂಚ ಭಾಷಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಗೆ ನಾ ಮುಂದು ತಾ ಮುಂದು ಎಂಬಂತೆ So Called ರಾಷ್ಟ್ರೀಯ ಪಕ್ಷಗಳು ತಮಿಳು ಭಾಷೆಯ ಕರಪತ್ರವನ್ನು ಹಂಚುತ್ತಿವೆ. ಕರ್ನಾಟಕದ ನಾಯಕ ಶಿರೋಮಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಪರಮೇಶ್ವರ್, ಅನಂತಕುಮಾರ್, ಯಡಿಯೂರಪ್ಪ, ಸದಾನಂದಗೌಡ ಮುಂತಾದವರು ತಮಿಳು ಭಾಷಾ ಕರಪತ್ರದಲ್ಲಿ ಮಿಂಚುತ್ತಿರುವ ಪರಿಯನ್ನು ಆನಂದಿಸಿ ತಣ್ಣಗೆ ಒಂದು ಲೋಟ ನೀರು ಕುಡ್ಕೊಳ್ಳಿ....
BJP tamil bbmp

Congress Tamil BBMP

JDS Tamil BBMP

ಜುಲೈ 9, 2012

ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ....

ಡಾ. ಅಶೋಕ್. ಕೆ. ಆರ್
ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!

ಆಗ 10, 2011

ವ್ವಕ್ತಿತ್ವ ಬದಲಾಗಬೇಕು ವ್ವಕ್ತಿಯಲ್ಲ

-->
ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ತೆರೆ ಬಿದ್ದು ಮತ್ತೊಂದು ಅಂಕದ ಆರಂಭವಾಗಿದೆ. ಸಿಟ್ಟಿನ ಜಾಗಕ್ಕೆ ನಗು ಬಂದಿದೆ ಅರ್ಥಾತ್ ಮೂಗಿನ ತುದಿಯಲ್ಲೇ ಕೋಪ ಸಾಕಿಕೊಂಡಿದ್ದ ಯಡಿಯೂರಪ್ಪನವರ ಜಾಗದಲ್ಲಿ ತಮ್ಮ ದೇಹ ರಚನೆಯ ಕಾರಣದಿಂದಲೋ ಅಥವಾ ನಿಜಕ್ಕೂ ಖುಷಿಯ ಮನಸ್ಸಿನ ಕಾರಣದಿಂದಲೋ ಯಾವಾಗಲೂ ನಗುತ್ತಿರುವಂತೆ ತೋರುವ ಸದಾನಂದಗೌಡರು ಮುಖ್ಯಮಂತ್ರಿಯ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದ ವರಿಷ್ಠರ ಮಾತನ್ನು ನಂಬುವುದಾದರೆ “ಡೆಮಾಕ್ರೆಟಿಕ್” ರೀತಿಯಲ್ಲಿ ಆಯ್ಕೆಯಾಗಿದ್ದಾರೆ.

ಜುಲೈ 27, 2011

25,228 ಪುಟಗಳು ರದ್ದಿಗಾ??!

Individual photos from net edited by author

-->
ಅಶೋಕ್. ಕೆ.ಅರ್
ಪತ್ರಕರ್ತ ಗೆಳೆಯ ಅವಿಗೆ ಹಿಂದೊಮ್ಮೆ ನಿಮಗೆ ಬಿಡಪ್ಪ ಜನ ಸತ್ತರೂ ಖುಷಿಯಾಗ್ತೀರಾ ಬರೆಯೋದಿಕ್ಕೆ ಸರಕು ಸಿಗ್ತು ಅಂತ ರೇಗಿಸಿದ್ದಾಗ “ನೋಡಪ್ಪಾ ಆ್ಯಕ್ಸಿಡೆಂಟ್ ಆಗಿದ್ದು ಕೊಲೆ ಆಗಿದ್ದು ಒಳ್ಳೆ ಘಟನೆ ಅಲ್ಲ ಆದರೆ ಸುದ್ದಿಯ ಸಂಗ್ರಹದ ವಿಚಾರಕ್ಕೆ ಬಂದರೆ ಅದು ಒಳ್ಳೆ ಸುದ್ದಿ” ಎಂದು ಒಂದಷ್ಟು ಖಾರವಾಗೇ ಪ್ರತಿಕ್ರಯಿಸಿದ್ದ. ಸುದ್ದಿಗೂ ಘಟನೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದ. ಒಬ್ಬ ಪತ್ರಕರ್ತನಿಗೆ ಒಳ್ಳೆ ಸುದ್ದಿಯಾಗುವ ಇಂಥ ಸಂಗತಿಗಳು ಕೆಟ್ಟ ಘಟನೆಯಾಗಿ ಓದುಗರ ಮನ ತಲುಪಿದರೆ ಆಗ ಆ ಪತ್ರಕರ್ತನನ್ನು ಯಶಸ್ವಿಯೆಂದು ಕರೆಯಬಹುದೇನೋ? ಆದರೆ ಈಗಿನ ದಿನಗಳಲ್ಲಿ ಕೆಟ್ಟ ಘಟನೆಗಳು ಕೂಡ ಓದುಗರಿಗೆ ಕೇವಲ ಸುದ್ದಿಯಾಗಷ್ಟೇ ತಲುಪುತ್ತಿದೆ. ಇದು ಪತ್ರಕರ್ತರ ಸೋಲಾ ಅಥವಾ ಜನರ ಮನಸ್ಸಿನ ಸೂಕ್ಷ್ಮತೆಯ ಮಟ್ಟವೇ ಕಡಿಮೆಯಾಗುತ್ತಿದೆಯಾ?