ಅಕ್ಟೋ 13, 2017

ಒಂದು ಟಾಯ್ಲೆಟ್ ಪ್ರಸಂಗ ಮತ್ತು ಹಿಂದಿ ಹೇರಿಕೆ.


ಡಾ. ಅಶೋಕ್. ಕೆ. ಆರ್

ಮೊನ್ನೆ ಮೊನ್ನೆ ರಾಹುಲ್ ಗಾಂಧಿ ಗುಜರಾತಿನಲ್ಲಿದ್ದಾಗ ಮೇಲ್ನೋಟಕ್ಕೆ ಅಪಹಾಸ್ಯವೆನ್ನಿಸುವ, ರಾಹುಲ್ ಗಾಂಧಿಯ ದಡ್ಡತನವನ್ನು ಎತ್ತಿ ತೋರಿಸುವಂತನ್ನಿಸುವ ಘಟನೆಯೊಂದು ಸಂಭವಿಸಿದೆ. ರಾಹುಲ್ ಗಾಂಧಿ ಮಹಿಳೆಯರ ಟಾಯ್ಲೆಟ್ಟಿನೊಳಗೋಗಿಬಿಟ್ಟಿದ್ದರಂತೆ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಆ ಮಹಿಳೆಯರ ಟಾಯ್ಲೆಟ್ಟಿನಿಂದ ಹೊರಬರುತ್ತಿರುವ ಚಿತ್ರ ಪ್ರಕಟವಾಗಿದೆ. ಆ ಟಾಯ್ಲೆಟ್ಟಿನ ಬಾಗಿಲಿನ ಮೇಲೆ ‘ಮಹಿಳೆಯರಿಗೆ’ ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಯಾಕದನ್ನು ಗಮನಿಸದೇ ಒಳಹೋದರು? ಯಾಕೆ ಒಳಹೋದರೆಂದರೆ ‘ಮಹಿಳೆಯರಿಗೆ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು ಮತ್ತು ರಾಹುಲ್ ಗಾಂಧಿಗೆ ಗುಜರಾತಿ ಓದಲು ಬರುವುದಿಲ್ಲ. ಹೀಗಾಗಿ ಟಾಯ್ಲೆಟ್ಟಿನ ಒಳಹೊಕ್ಕು ಪೇಚಿಗೆ ಸಿಲುಕಿ ನಗೆಪಾಟಲಿಗೀಡಾಗಿದ್ದಾರೆ.

ಮೇ 24, 2016

'ಹೊನಲಿಗೆ' ಮೂರು ವರುಷದ ಸಂಭ್ರಮ.

ಡಾ. ಅಶೋಕ್. ಕೆ. ಆರ್
ಭಾಷೆಯೊಂದು ನಿಂತ ನೀರೇ? ಅಥವಾ ಕಾಲದಿಂದ ಕಾಲಕ್ಕೆ ಅದರಲ್ಲಿ ಬದಲಾವಣೆಗಳಾಗಬೇಕಿರುವುದು ಅವಶ್ಯಕವೇ? ಇಂತಹುದೊಂದು ಪ್ರಶ್ನೆಗಳನ್ನು ಮೂಡಿಸುವುದು ನೀವು ಹೊನಲು (honalu.net ) ವೆಬ್ ಪುಟವನ್ನು ವೀಕ್ಷಿಸಿದಾಗ. ಅಲ್ಲಿ ಆಡು ಭಾಷೆಯ ಕನ್ನಡವನ್ನೇ 'ಎಲ್ಲರ ಕನ್ನಡದ' ಹೆಸರಿನಲ್ಲಿ ಹೆಚ್ಚು ಉಪಯೋಗಿಸಲಾಗಿದೆ. ಗ್ರಾಂಥಿಕ ಕನ್ನಡವನ್ನಷ್ಟೇ ಓದಿಕೊಂಡು ಬೆಳೆದವರಿಗೆ ಇದೇನಿದು ವಿಚಿತ್ರವೆಂದು ಅನ್ನಿಸುವುದು ಸಹಜ. ಇವರ ಈ ಪ್ರಯತ್ನ ಒಳ್ಳೆಯದಾ ಕೆಟ್ಟದ್ದಾ ಎಂದು ಇದಮಿತ್ಥಂ ಎಂದು ಹೇಳಿಬಿಡುವುದರ ಮೊದಲು ಹತ್ತಲವು ದಿಕ್ಕಿನಲ್ಲಿ ತೋಚಿದ ರೀತಿಯಲ್ಲಿ ಹರಿಯುವ ಭಾಷೆಗಷ್ಟೇ ಜೀವಂತಿಕೆ ಹಾಗೂ ಕಾಲದ ಮಿತಿಗಳನ್ನು ಮೀರಿ ಬೆಳೆಯುವ ಸಾಧ್ಯತೆಯಿರುವುದು ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಅತ್ಯವಶ್ಯಕ.
ಒಮ್ಮೆ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ, ಮನೆಯಲ್ಲಿ ಸ್ನೇಹಿತರೊಡನೆ ಅಷ್ಟು ಸರಾಗವಾಗಿ ಉಲಿಯುತ್ತಿದ್ದ ಕನ್ನಡ, ಶಾಲೆಗೆ ಬರುತ್ತಿದ್ದಂತೆ ಬ್ಬೆ ಬ್ಬೆ ಬ್ಬೆ ಎನ್ನಲಾರಂಭಿಸುತ್ತಿತ್ತು. ಧರಣಿ ಎಂದು ಬರೆಯುವ ಬದಲು ದರಣಿ ಎಂದು ಬರೆದುಬಿಟ್ಟರೆ ಮಹಾಪರಾಧವಾಗುತ್ತಿತ್ತು. ಇನ್ನು ಸಂಸ್ಕೃತ ಪದಗಳ ತತ್ಸಮ - ತದ್ಭವದ ಗೋಳಂತೂ ಅನುಭವಿಸಿದವರಿಗೇ ಗೊತ್ತು. ವ್ಯಾಕರಣ ಕಲಿಯಬೇಕು ಎನ್ನುವುದನ್ನು ಒಪ್ಪಬಹುದಾದರೂ ಭಾಷೆಯನ್ನು ಕಬ್ಬಿಣದ ಕಡಲೆಯನ್ನಾಗಿಸಿ, 'ಪಾಸಾದ್ರೆ ಸಾಕು, ಕನ್ನಡ ಪುಸ್ತಕ ಮುಟ್ಟಲ್ಲ' ಅನ್ನೋ ನಿರಭಿಮಾನವನ್ನೂ ಮೂಡಿಸಬಾರದಲ್ಲವೇ? ಇದಕ್ಕೆ ಉತ್ತರವಾಗಿ ಎಲ್ಲರ ಕನ್ನಡದ ಮೂಲಕ ಹೊನಲು ಎಂಬ ವೆಬ್ ಪುಟದ ಮೂಲಕ, ಅಂತರ್ಜಾಲದ ಮಟ್ಟಿಗೆ ಹೊಸ ಪ್ರಯತ್ನ ಪ್ರಾರಂಭವಾಗಿದೆ. 
ಹೊನಲು ತಂಡದ ಪ್ರಯತ್ನ ವಿಚಿತ್ರ ಎನ್ನಿಸಬಹುದು, ಅಸಹ್ಯ ಎನ್ನಿಸಬಹುದು, ಮೊನ್ನೆ ಫೇಸ್ ಬುಕ್ಕಿನಲ್ಲೊಂದು ಪೋಸ್ಟಿಗೆ ಸಹೃದಯರೊಬ್ಬರು ಹೊನಲುವಿನದು ವಿಧ್ವಂಸಕ ಕೃತ್ಯ ಎಂದು ಹೇಳಿದ್ದರು. ಈ ರೀತಿಯ ಎಲ್ಲಾ ಟೀಕೆಗಳ ಹಿಂದಿರಬಹುದಾದ 'ಭಾಷಾ ಶುದ್ಧತೆ'ಯನ್ನು ನಮ್ಮ ತಲೆಗೆ ತುಂಬಿರುವುದು ಮತ್ತದೇ ನಮ್ಮ ಶಾಲಾ ದಿನಗಳು ಎಂದರೆ ತಪ್ಪಲ್ಲ. ಭಾಷೆಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು. ಈ ಹೊಸ ಪ್ರಯೋಗಗಳು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದಾದರೂ ಈ ಪ್ರಯೋಗಗಳೇ ಭಾಷೆಯನ್ನು ಜೀವಂತವಾಗಿಡುವ ಸಂಗತಿಗಳು ಎನ್ನುವುದು ಸತ್ಯ. ಪ್ರಯೋಗಗಳೇ ಇಲ್ಲದಿದ್ದರೆ, ನಾವಿನ್ನೂ ಹಳಗನ್ನಡದಲ್ಲೋ, ಅಥವಾ ಅದಕ್ಕೂ ಮುಂಚೆ ಇದ್ದಿರಬಹುದಾದ ಭಾಷಾಶೈಲಿಯಲ್ಲೋ ಮಾತನಾಡುತ್ತಿದ್ದೆವು, ಬರೆಯುತ್ತಿದ್ದೆವು. ಇದೇನಿದು ಹಳೆಗನ್ನಡ ಹಿಂಗಿದೆ ಎಂದೊಬ್ಬರಿಗ್ಯಾರಿಗೋ ಅನ್ನಿಸಿ ಸಿದ್ಧ ಮಾದರಿಯ ಹಾದಿಯಿಂದ ಹೊರಬಂದಿದ್ದಕ್ಕೇ ಅಲ್ಲವೇ ನಾವಿವತ್ತೂ ಬರೆಯುತ್ತಿರುವ ಕನ್ನಡ ಹಳೆಗನ್ನಡಕ್ಕಿಂತ ಸುಲಭವಾಗಿರುವುದು? ಹೊನಲುವಿನ ತಂಡದ ಸದಸ್ಯರ ಶ್ರಮ ಎಂತದ್ದು ಎಂದು ಅರಿವುದಕ್ಕೆ ಸುಮ್ಮನೆ ಒಂದು ಪುಟ ಮಾತನಾಡುವ ಕನ್ನಡದಲ್ಲಿ ಬರೆದು ನೋಡಿ! ನಾನೂ ಪ್ರಯತ್ನಿಸಿದ್ದೆ, ಟೈಪಿಸಲು ಕುಳಿತರೆ ಸಾಕು ಗ್ರಾಂಥಿಕ ಕನ್ನಡವೇ ಬೆರಳ ತುದಿಯಲ್ಲಿರುತ್ತದೆ! ಮಾತನಾಡಲಾರಂಭಿಸಿದರೆ ಗ್ರಾಂಥಿಕ ಕನ್ನಡ ಹತ್ತಿರವೂ ಸುಳಿಯುವುದಿಲ್ಲ! ಎಲ್ಲರ ಕನ್ನಡದಲ್ಲಿ ಬರೆಯುವುದು ಗ್ರಾಂಥಿಕ ಕನ್ನಡದಲ್ಲಿ ಬರೆಯುವುದಕ್ಕಿಂತ ಕಷ್ಟಕರ....(ನನ್ನ ಕಡೆಯಿಂದ ಒಂದು ತಪ್ಪೊಪ್ಪಿಗೆಯೆಂದರೆ, ಬರ್ಕೊಡ್ತೀನಿ ಬರ್ಕೊಡ್ತೀನಿ ಎಂದು ಎರಡು ಮೂರು ಸಲ ಹೇಳಿ ಹೊನಲಿಗಾಗಲೀ ಅರಿಮೆಗಾಗಲೀ ಯಾವ ಲೇಖನವನ್ನೂ ಬರೆಯದೇ ಇರುವುದು! ಇನ್ನು ಮೇಲಾದರೂ ಬರೆಯಲು ಪ್ರಯತ್ನಿಸಬೇಕು!)
ಅಂದಮಾತ್ರಕ್ಕೆ ಹೊನಲು ವೆಬ್ ಪುಟದಲ್ಲಿ ಎಲ್ಲರ ಕನ್ನಡವೇ ಶ್ರೇಷ್ಟವೆಂಬ ಅಹಂ ತುಂಬಿ ಹೋಗಿದೆ ಎಂದು ಭಾವಿಸುವುದು ಬೇಡ. ಆ ರೀತಿ ಆಗಿಹೋದರೆ, ಗ್ರಾಂಥಿಕ ಕನ್ನಡವೇ ಶ್ರೇಷ್ಟ, ಸಂಸ್ಕೃತ ಪದಗಳ ಕನ್ನಡವೇ ಶ್ರೇಷ್ಟ ಎಂದುಕೊಳ್ಳುವವರಿಗೂ ಹೊನಲು ತಂಡಕ್ಕೂ ವ್ಯತ್ಯಾಸ ಉಳಿಯುವುದಿಲ್ಲ. ಸಾಧ್ಯವಾದಷ್ಟು ಆಡು ಮಾತಿನ ಕನ್ನಡ ಉಪಯೋಗಿಸಿ ಎನ್ನುವುದಷ್ಟೇ ಅವರ ವಿನಂತಿ. ಹೊನಲುವಿನ ಈ ಪ್ರಯತ್ನಕ್ಕೆ ಈಗ ಮೂರು ವರುಷದ ಸಂಭ್ರಮ. ಎಲ್ಲರ ಕನ್ನಡವನ್ನು ಮುಂದೊಯ್ಯಲು ಇವರು ಅನುಸರಿಸಿರುವ ದಾರಿಯೂ ಮಾದರಿಯಾಗುವಂತದ್ದು. ವಿಜ್ಞಾನದಿಂದ ಹಿಡಿದು ಅಡುಗೆಯವರೆಗೆ, ಮೊಬೈಲ್ ತಂತ್ರಾಂಶದಿಂದ ಹಿಡಿದು ಕಾರು ಬೈಕುಗಳವರೆಗೆ, ಕತೆ ಕವಿತೆಗಳೆಲ್ಲವೂ ಹೊನಲುವಿನ ಒಡಲಲ್ಲಿದೆ. ಜೊತೆಗೆ ವಿಜ್ಞಾನಕ್ಕೆಂದೇ ಮೀಸಲಾದ ಅರಿಮೆ ಎಂಬ ವೆಬ್ ಪುಟವನ್ನೂ ಇತ್ತೀಚೆಗೆ ಶುರು ಮಾಡಿದ್ದಾರೆ. 
ಈ ಭಾನುವಾರ ಬಿಪಿ ವಾಡಿಯಾ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೊನಲು, ಎಲ್ಲರ ಕನ್ನಡದ ಬಗ್ಗೆ ಪ್ರೀತಿಯಿರುವವರು, ದ್ವೇಷವಿರುವವರು, ಕನ್ನಡವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಯ್ದುಕೊಳ್ಳುವವರು, ಭಾಷಾ ಬೆಳವಣಿಗೆಯ ಬಗ್ಗೆ ಆಸಕ್ತರಾಗಿರುವವರು ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬನ್ನಿ. ಮತ್ತೇನಲ್ಲದಿದ್ದರೂ ಇಂತಹ ಕಾರ್ಯಕ್ರಮಗಳಿಂದ ಒಂದಷ್ಟು ಹೊಸ ಗೆಳೆಯರ ಪರಿಚಯವಾಗುತ್ತದೆ, ಹೊಸ ವಿಚಾರಗಳು ತಿಳಿಯುತ್ತದೆ. ಭಾನುವಾರ ಸಿಗೋಣ.

ಜನ 30, 2016

ಹಿಂದಿ ಹೇರಿಕೆ ನಿಲ್ಬೇಕ್!

ದಿನೇ ದಿನೇ ಹೆಚ್ಚುತ್ತಲೇ ಇರುವ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ನಾನಾ ರೂಪ ಪಡೆದುಕೊಳ್ಳುತ್ತಿವೆ, ಸರಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಒಂದೋ ಹೋರಾಟಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ ಇಲ್ಲಾ ಕುರಿಮಂದೆಯಂತಹ ಕನ್ನಡಿಗರು ‘ರಾಷ್ಟ್ರಭಾಷೆ’ ‘ಏಕತೆ’ ‘ಭಾರತ ದೇಶ’ ಎಂಬ ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಭ್ರಮೆಯಲ್ಲಿ ಮುಳುಗಿಹೋಗಿ ಕನ್ನಡವನ್ನೂ ಮುಳುಗಿಸಿಬಿಡುತ್ತಾರೆ. ರತೀಶ್ ರತ್ನಾಕರ ಇಂಥಹ ಕನ್ನಡಿಗರನ್ನು ಬಡಿದೆಬ್ಬಿಸಲು ‘ಪರಪಂಚ’ ಚಿತ್ರದ “ಹುಟ್ಟಿದ ಊರನ್ನು ಬಿಟ್ಟು ಬಂದ ಮೇಲೆ” ಹಾಡಿನ ದಾಟಿಯಲ್ಲಿ “ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ” ಎಂಬ ಗೀತೆ ರಚಿಸಿದ್ದಾರೆ. ಪರಪಂಚ ಚಿತ್ರದ ಹಾಡು ಎಲ್ಲರ ಬಾಯಲ್ಲಿ ನಲಿಯಲಾರಂಭಿಸಿದ್ದು ಅನವಶ್ಯಕ ಕಾರಣಗಳಿಂದ ಪ್ರಸಿದ್ಧಿಗೆ ಬಂದಿದ್ದ ವೆಂಕಟ್ ಬಾಯಲ್ಲಿ ಅದನ್ನು ಮತ್ತೆ ಹಾಡಿಸಿದಾಗ. ರತೀಶ್ ರತ್ನಾಕರರ ಹಾಡನ್ನೊಮ್ಮೆ ಓದಿಬಿಡಿ, ಹಂಚಿಕೊಳ್ಳಿ, ಸಾಧ್ಯವಾದರೆ ಅದೇ ರಾಗದಲ್ಲಿ ಹಾಡಿ ವೀಡಿಯೋ ಅಪ್ ಲೋಡ್ ಮಾಡಿ, ಎಲ್ಲದಕ್ಕಿಂತ ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ದನಿಎತ್ತಿ.

‘ಹುಟ್ಟಿದ ಊರಿಗೆ ಹಿಂದಿ ಬಂದ ಮೇಲೆ ಇನ್ನೇನು ಬರುವುದು ಬಾಕಿ ಇದೆ
ನಿನ್ನೂರಲ್ಲೇ ನೀನು ಆಗ್ಬೇಡ ಪರದೇಸಿ ಎದ್ದೇಳು ಕಾಲ ಮಿಂಚಿ ಹೋಗೋದ್ರೊಳ್ಗೆ
ಹಿಂದೆ ಹೇರಿಕೆ ಊರ ತುಂಬಿದೆ ನಿನ್ನ ಇರುವನು ಅಳಿಸಲು
ತಾಯ್ನುಡಿಗಿಂತ ಇನ್ನೇನು ಬೇಕು ನಿನ್ನಯ ಬದುಕು ಬೆಳಗಲು
ನಿದ್ದೆಯಿಂದೇಳೋ ಮಗನೆ ಮೈಕೊಡ್ವಿ ನಿಲ್ಲೋ ಸಿವನೆ
ಕಣ್ಣುಬಿಡು ಎಲ್ಲಾ ನೋಡು ಕೈಯನ್ನೆತ್ತಿ ಕೂಗಿಬಿಡು || ಹುಟ್ಟಿದ ಊರಿಗೆ ||

ನಿನ್ನುಡಿ ಒಟ್ಟಿಗೆ ಹಿಂದಿಯೂ ಇದ್ದರು ಅಲ್ಲೇನೋ ಮಾಟ ಅಡಗಿದೆ
ಕನ್ನಡ ಅಳಿಸಿ ಹಿಂದಿಯೇ ಸಾಕು ಅನ್ನುವ ಕಾಲ ಬರಲಿದೆ
ಆಸೆಯ ತೋರಿಸಿ ಒತ್ತಾಯ ಮಾಡಿಸಿ ಹಿಂದಿಯ ಒಪ್ಪ ಬೇಕಂತಾರೊ
ಒಪ್ಪಿದರೆ ಅಲ್ಲಿ ಗುಂಡಿಯ ತೆಗೆದು ಇದ್ದಂತೆ ಮಣ್ಣು ಮಾಡ್ತಾರೊ

ಅಂಚೆಲಿ ಹಿಂದಿಯೇ ಮೊದಲಂತೆ ರೈಲಲ್ಲಿ ಕನ್ನಡ ಇಲ್ವಂತೆ
ಬ್ಯಾಂಕಲ್ಲಿ ಕೇಳೋದ್ ಬ್ಯಾಡ್ವಂತೆ ಕನ್ನಡ ಮಾಯ ಆಯ್ತಂತೆ
ಆಳೋರು ಕೈಯ ಕೊಟ್ರಂತೆ ಹಿಂದಿಯ ದಾಸರಾಗ್ ಬಿಟ್ರಂತೆ
ವಲಸೆಯೆ ಎಲ್ಲಾ ಹೆಚ್ಚಾಯ್ತು, ಕೆಲಸಾನೆ ನಿಂಗೆ ದೂರಾಯ್ತು
ನಿಂಗು ತಾಕತ್ತಿದೆ ಮಗನೆ, ತಲೆಯೆತ್ತಿ ನಿಲ್ಲೋ ಸಿವನೆ
ನಿದ್ದೆ ಬಿಡು ಎದ್ದು ನೋಡು ಹೆಜ್ಜೆಯಿಟ್ಟು ನುಗ್ಗಿಬಿಡು || ಹುಟ್ಟಿದ ಊರಿಗೆ ||

ಡಿಸೆಂ 16, 2015

ಹೊಸ ವರ್ಷದಿಂದ ಸ್ನ್ಯಾಪ್ ಡೀಲಿನಲ್ಲಿ ಕನ್ನಡದಲ್ಲೇ ವ್ಯವಹರಿಸಿ!

snapdeal in 12 languages
ಭಾರತದ ಭಾಷಾ ವೈವಿಧ್ಯತೆಯನ್ನು ಕಡೆಗಣಿಸುವ ಕಂಪನಿಗಳೇ ಅಧಿಕ. ಕಂಪನಿಗಳ ಲೆಕ್ಕದಲ್ಲಿ ಭಾರತವೆಂದರೆ ಇಂಗ್ಲೀಷ್ ತಪ್ಪಿದರೆ ಹಿಂದಿ. ಬೆಂಗಳೂರಲ್ಲೇ ನೆಲೆಯೂರಿರುವ ಫ್ಲಿಪ್ ಕಾರ್ಟಿನಂತಹ ಸಂಸ್ಥೆ ಕೂಡ ಬೆಂಗಳೂರಿನಲ್ಲಿ ಹಾಕುವ ಬ್ಯಾನರುಗಳಲ್ಲಿ ಹಿಂದಿ ಬಳಸಿಬಿಡುತ್ತದೆ. ತೆಗೆದುಕೊಂಡಿರುವ ವಸ್ತುವಿನಲ್ಲಿ ಏನಾದರೂ ದೋಷವಿದ್ದು ಇ-ಕಾಮರ್ಸ್ ಸಂಸ್ಥೆಗಳಿಗೆ ದೂರವಾಣಿ ಕರೆ ಮಾಡಿದಾಗಲೂ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕಾದ ಕರ್ಮ. ಇನ್ನು ಅಂತರ್ಜಾಲ ಪುಟಗಳಂತೂ ಸಂಪೂರ್ಣ ಆಂಗ್ಲಮಯವೇ ಆಗಿರುತ್ತದೆ. ಅಂತರ್ಜಾಲದಲ್ಲಿ ಇಂಗ್ಲೀಷ್ ಅನಿವಾರ್ಯವೆಂಬುದು ಎಷ್ಟು ಸತ್ಯವೋ ಗೂಗಲ್, ಫೇಸ್ ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳು ಭಾರತದ ವಿವಿಧ ಭಾಷೆಗಳಲ್ಲಿ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಮರೆಯಬಾರದು. ಇ-ಕಾಮರ್ಸ್ ಕಂಪನಿಗಳು ನಿಧಾನಕ್ಕಾದರೂ ವಿವಿಧ ಭಾರತೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಸದ್ಯಕ್ಕೆ ಸ್ನ್ಯಾಪ್ ಡೀಲ್ ತನ್ನ ಮೊಬೈಲ್ ಆ್ಯಪ್ ಗಳನ್ನು ಬಹುಭಾಷೆಯಲ್ಲಿ ನೀಡಲು ತೀರ್ಮಾನಿಸಿದೆ. 
ಸದ್ಯಕ್ಕೆ ಸ್ನ್ಯಾಪ್ ಡೀಲನ್ನು ಇಂಗ್ಲೀಷಿನ ಜೊತೆಗೆ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನೀಡಲಾರಂಭಿಸಿದೆ. 2016ರ ಜನವರಿ 26ರಿಂದ ಕನ್ನಡ, ತಮಿಳು, ಗುಜರಾತಿ, ಮರಾಠಿ, ಬೆಂಗಾಲಿ, ಮಲಯಾಳಂ, ಒರಿಯಾ, ಅಸ್ಸಾಮಿ ಮತ್ತು ಪಂಜಾಬಿ ಭಾಷೆಯಲ್ಲಿ ಸ್ನ್ಯಾಪ್ ಡೀಲ್ ಲಭ್ಯವಿರುತ್ತದೆ. ಮಾರಾಟಗಾರರು ಮತ್ತು ಗ್ರಾಹಕರ ನಿರಂತರ ಒತ್ತಾಯದ ಕಾರಣದಿಂದ ಮತ್ತು ಸ್ಥಳೀಯ ಭಾಷೆ ಉಪಯೋಗಿಸುವವರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಂತಹ ನಿರ್ಧಾರವನ್ನು ಕೈಗೊಂಡಿರುವುದಾಗಿ ಸ್ನ್ಯಾಪ್ ಡೀಲ್ ತಿಳಿಸಿದೆ. ಕನ್ನಡದಲ್ಲಿ ಸೇವೆ ಕೊಡಿ ಎಂದು ನಿರಂತರವಾಗಿ ಒತ್ತಾಯಿಸುವುದರಿಂದ ಖಂಡಿತವಾಗಿಯೂ ಉಳಿದ ಕಂಪನಿಗಳೂ ಸ್ನ್ಯಾಪ್ ಡೀಲ್ ನ ಹಾದಿ ಹಿಡಿದು ಭಾರತದ ಎಲ್ಲಾ ಭಾಷೆಗಳಿಗೂ ಪ್ರಾಮುಖ್ಯತೆ ಕೊಡುವ ದಿನಗಳು ದೂರವಿಲ್ಲ.

ಅಕ್ಟೋ 27, 2015

Amazon, don't make us 'bankrupt'

Dear Amazon,
I have been seeing your ads in many kannada newspapers from past 2 days. 'The Great Indian Sale' in view of Deepavali festival is appreciable for all those purchasers who wait for the 'deals'. I am very much disappointed with those advertisements. The festival of lights is termed as 'Diwali' in your ads. Though this festival is famous as Diwali in Non Karnataka states it is called as Deepavali in Karnataka. Use of the word 'Diwali' in Karnataka is really absurd because the word 'Diwali' in Kannada means 'bankrupt'! You should have a team to understand the local language and use local language properly before placing ads in News papers of that particular state. Or do you really mean that whoever purchases in Amazon will go 'bankrupt'? If that is the case then please continue with the present ads or make proper arrangements to change the ads. Thought of purchasing few items this time but seeing your callousness towards the Local Language i won't be purchasing anything this time.
Happy Deepavali in advance.
With Regards,
Kannadiga.

Copy and send this to amazon customer service: click here
amazon india facebook page: click here

ಸೆಪ್ಟೆಂ 21, 2015

Chennai Declaration of Language Rights

Language Rights Conference 

19-20. September, 2015 
Chennai 
The organizations and individuals, signatories to the present Chennai Declaration of Language Rights. or Chennai Declaration, meeting in Chennai on 20th September 2015, 

Having regard to the Universal Declaration of Linguistic Rights, released on 9th June 1996 in Barcelona, Spain which was a culmination of various international and regional declarations, laws, covenants and conventions. including 1948 Universal Declaration of Human Rights. 1966 International Covenant on Civil and Political Rights, 1992 Resolution 47/135 of the General Assembly of the United Nations Organization, 1989 Convention of the International Labour Organization and others, 

Having regard to various resolutions and demands raised by various language communities in the Union of India on preventing or removing imposition or selective promotion of any particular anguage over any other language and for language rights, 

Considering that the current language policies of the Union Government of India are detrimental to the very survival and development of languages spoken by various communities in the Indian Union. 
Considering that the current provisions in the Constitution of India and all acts, rules and guidelines based on it related to the languages in the Indian Union are neither based on language equality and rights nor on the demands of the people of various language communities, 

Considering the imposition of Hindi by the Union Government, supported and promoted by various pan-Indian political parties and organizations, the centers of power including media and the State governments and considering the historically significant movements by various language communities against the imposition. 

Considering that in the name of development, English is given over emphasis and the all pervasive and increasing phenomenon of English dominating every aspect of our lives and replacing all the languages in the Indian Union in the public and private spaces, thus restricting our linguistic. cultural and economic choices; 

Considering that the people representing the languages listed in the Schedule 8 of the Constitution of India are demanding to make their languages the official languages of the Union Government of India, the people representing many other languages demanding their languages to be included in the said schedule and hundreds of language communities with numerically smaller population are fighting for conserving and developing their ethnic languages 

Considering that the Languages in the Indian Union signify the diversity of the population in the Indian Union, with these languages being historically, socially, culturally and territorially part and parcel of the respective language communities. 

Considering that the languages of the Indian Union are the vaults of traditional knowledge systems which have evolved over centuries based on their own conditions and practices and losing them would mean losing our heritage, knowledge base and traditional expertise, 

HEREBY DECLARE THAT 

All languages in the Indian Union are considered to be equal and each language community has the right to conserve, develop and empower their languages in all possible ways and means in a democratic milieu. 

Every citizen of the Indian Union has the fundamental and inalienable right to use his/her mother tongue for all transactions with the executive, judiciary and legislative wings of the government and the government shall use the mother tongue of the citizen for all transactions and 
communications with the citizen. All citizens of the Indian Union shall have the rights to get all education in their mother tongues. All citizens of the Indian Union shall also have the rights to get commercial and public services in their mother tongues.

We call for setting up a New Language Commission to review and amend Part 17 of the Constitution of India and other relevant provisions to create a new language policy, based on the recommendations and demands for all language communities in the Indian Union. 

We demand that the Union Government to address the following demands and accept them immediately: 

a. Make all the languages listed in Schedule 8 of the Constitution of India the official languages of the Union Government 
b. Include in the Schedule 8 of the Constitution the languages for which the demands were made by their respective language communities and pending with the Union Government for many years 
c. Provide urgent support to the ethnic, indigenous and other languages with fewer number of speakers through an exclusive government agency and save them from extinction and assimilation 

We demand that all the governments ensure that the right to get education in mother tongue is not infringed at every level. 

We demand that the state governments to implement already existing governing language laws and policies fully. States that do not have such a policy should create one. 

Declaring the above demands, we seek the support of all political parties, organizations. civil society organizations including human rights bodies. educational and cultural entities, and media to bring what we call THE LANGUAGE EQUALITY AND RIGHTS BILL in the Parliament and pass it to achieve the above goal. We urge the State Governments and local governments to pass legally powerful resolutions to demand the above three rights particularly and set up of a new Language Commission to address the various aspects of language rights, policies and planning. 

Drafted by: 
Anand G., Karnataka 
Deepak Pawar, Maharashtra 
Ganesh Chetan, Karnataka 
Garga Chatterjee, West Bengal 
Joga Singh Virk, Punjab 
Kumuthavaiji Tamjl Nadu 
Manj M. Manivannan, Tamil Nadu 
P. Pavithran Kerala  
Priyank KS, Karnataka 
Saket Shreebushan Sahu, Odisha 
S. Senthilnathan (Aazhi Senthilnathan) Tamil Nadu 
Thamizneriyan, Tamil Nadu 
Vasant Shetty, Karnataka 
Vivek V., Karnataka 
Umakanthan P., Karnataka 



ಸೆಪ್ಟೆಂ 12, 2015

ಹಿಂದಿ ‘ಮುಂದಾಳು’ ಭಾಷೆಯಾದರೆ ಉಳಿದವೇನು ಜೀತಕ್ಕಿವೆಯೇ?

ಪಾಂಚಜನ್ಯದ ಸಂಪಾದಕೀಯ
 DrAshok K R
‘ಭಾರತದ ತಾಕತ್ತು ಹಿಂದಿ’ ಎಂದು ದೊಡ್ಡ ಹೆಡ್ಡಿಂಗಿನಲ್ಲಿ ಆರ್.ಎಸ್.ಎಸ್ಸಿನ ಮುಖವಾಣಿ ಪಂಚಜನ್ಯದಲ್ಲೊಂದು ಸಂಪಾದಕೀಯ ಬರುತ್ತದೆ, ಸೆಪ್ಟೆಂಬರ್ ನಾಲ್ಕರಂದು. ಸಂಪಾದಕೀಯದ ಮೇಲೆ ‘ಹಿಂದಿಯನ್ನು ವಿರೋಧಿಸುವ ಯಾವುದೇ ಆಂದೋಲನ ದೇಶದ ಪ್ರಗತಿಗೆ ಮಾರಕ’ ಎಂದು ಸುಭಾಷ್ ಚಂದ್ರಬೋಸ್ ಹೇಳಿದರೆನ್ನಲಾದ ಹೇಳಿಕೆಯಿದೆ. ಹಿತೇಶ್ ಶಂಕರ್ ಬರೆದಿರುವ ಸಂಪಾದಕೀಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಆಗಸ್ಟ್ ಹದಿನೈದರಂದು ಟ್ವಿಟರಿನಲ್ಲಿ ನಡೆದ #stophindiimposition ಅನ್ನು ಟೀಕಿಸಿದ್ದಾರೆ. ಹಿಂದಿಯನ್ನು ವಿರೋಧಿಸುವುದು (ಸತ್ಯವಾಗಿ ನಾವೆಲ್ಲರೂ ವಿರೋಧಿಸುತ್ತಿರುವುದು ಹಿಂದಿ ಹೇರಿಕೆಯನ್ನು ಎಂಬುದನ್ನು ನಯವಾಗಿ ಮರೆಸುತ್ತಾರೆ) ಮೂರ್ಖತನದ ಕೆಲಸವಂತೆ, ಹಿಂದಿಯನ್ನು ವಿರೋದಿಸುವವರ ರಾಜತಾಂತ್ರಿಕ ಶಡ್ಯಂತ್ರದ ಭಾಗವಂತೆ! ಗಂಗ, ಯಮುನಾ, ಕಾವೇರಿ, ನರ್ಮದಾ ನದಿಗಳ ಹೆಸರನ್ನು ಹೇಳುತ್ತಾ ಭಾವನಾತ್ಮಕವಾಗಿ ಹಿಂದಿಯನ್ನು ವಿರೋಧಿಸುವುದು ತಪ್ಪು ಎನ್ನುತ್ತಾರೆ. ಹಿಂದಿಯನ್ನು ಸಮರ್ಥಿಸಲು ಗಾಂಧಿ, ಭಗತ್ ಸಿಂಗರೆಲ್ಲರನ್ನೂ ಎಳೆದು ತರುತ್ತಾರೆ.

ಹಿಂದಿಯನ್ನು ಮತ್ತಷ್ಟು ಬೆಳೆಸಬೇಕಂತೆ! ನಮ್ಮ ಭಾಷೆಯನ್ನು ಕೊಂದೇ?
ಇದೇ ಪಾಂಚಜನ್ಯದಲ್ಲಿ ‘ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿರುವ ಹಿಂದಿಯ ಪ್ರಭಾವ’ ಎಂಬ ಮತ್ತೊಂದು ಲೇಖನ ಪ್ರಕಟವಾಗಿದೆ. 1918ರಲ್ಲಿ ಮದ್ರಾಸಿನಲ್ಲಿ ಮಹಾತ್ಮ ಗಾಂಧಿ ಹಿಂದಿ ಪ್ರಚಾರ ಸಭಾವನ್ನು ಉದ್ಘಾಟಿಸಿದರು. ಅಲ್ಲಿಂದ ಇಲ್ಲಿಯವರೆಗೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಸಾಕಷ್ಟು ಬೆಳೆದಿದೆ. ಹಿಂದಿ ಬೆಳೆದಿದೆ, ಇನ್ನಷ್ಟು ಪ್ರಯತ್ನ ಪಡಬೇಕೆಂದು ಬರೆದಿದ್ದಾರೆ! ಈಗಲೇ ನಮ್ಮ ರಾಜ್ಯದ ಬ್ಯಾಂಕು ಪೋಸ್ಟ್ ಆಫೀಸುಗಳಲ್ಲಿರುವ ಚಲನ್ನುಗಳು ಹಿಂದಿ ಮತ್ತು ಇಂಗ್ಲೀಷಿನಲ್ಲಷ್ಟೇ ಇವೆ. 
ಇನ್ನಷ್ಟು ಪ್ರಯತ್ನವೆಂದರೆ ಹಿಂದಿಯಷ್ಟೇ ಇರುವುದಾ? ದಕ್ಷಿಣದ ನಾಲ್ಕು ರಾಜ್ಯಗಳ ಪ್ರಮುಖ ನಗರಗಳಲ್ಲೆಲ್ಲಾ ಹಿಂದಿ ಪ್ರಚಾರಕರು ಇರಬೇಕರಂತೆ! ಇತಿಹಾಸ, ಪ್ರವಾಸ, ಪುರಾತತ್ವ, ಅನುವಾದದ ಬಗ್ಗೆ ಹಿಂದಿಯಲ್ಲಿ ಶಿಕ್ಷಣ ಕೊಟ್ಟು ಅಂತವರನ್ನು ರೈಲ್ವೆ ನಿಲ್ದಾಣ, ಹೋಟೆಲ್, ಪ್ರವಾಸಿ ಕೇಂದ್ರ, ಸಂಗ್ರಹಾಲಯ, ಐತಿಹಾಸಿಕ ಸ್ಥಳಗಳಲ್ಲಿ ಹಿಂದಿಯ ಸಮನ್ವಯಕಾರರನ್ನಾಗಿ ಮಾಡಬೇಕಂತೆ!
ದಕ್ಷಿಣ ಭಾರತದಲ್ಲಿ ಹಿಂದಿ ಸಮನ್ವಯಕರು ಇರಬೇಕಂತೆ
ಹಿಂದಿ ಗೊತ್ತಿರುವವರು ಈ ರಾಜ್ಯಗಳಲ್ಲಿ ಇಲ್ಲದ ಕಾರಣ ಒರಿಸ್ಸಾ, ಗುಜರಾಜ್, ಪಂಜಾಬಿನ ಜನರು ಭಾಷೆಯ ಸಮಸ್ಯೆಯಿಂದ ದಕ್ಷಿಣ ಭಾರತದ ದರ್ಶನೀಯ ಸ್ಥಳಗಳನ್ನು ನೋಡಲಾಗುತ್ತಿಲ್ಲವಂತೆ! ವ್ಯಾಪಾರ ವಹಿವಾಟು ಹೆಚ್ಚಲು ಈ ಹಿಂದಿ ಸಮನ್ವಯಕಾರರು ಕಾರಣಕರ್ತರಾಗುತ್ತಾರಂತೆ. ಹೀಗೆ ಲೇಖನದ ತುಂಬೆಲ್ಲ ಸುಳ್ಳುಗಳೇ ತುಂಬಿಕೊಂಡಿದೆ. ಪ್ರವಾಸಕ್ಕೆ ಹೋಗಲು ಅಲ್ಲಿನವರಿಗೆ ನಮ್ಮ ಭಾಷೆ ಗೊತ್ತಿರಬೇಕು ಎಂಬುದೇ ಸತ್ಯವಾದರೆ ದಕ್ಷಿಣದವರ್ಯಾರು ಉತ್ತರ ಭಾರತಕ್ಕೆ ಪ್ರವಾಸ ಹೋಗುವಂತಿಲ್ಲ. ಕನ್ನಡಿಗರು ತಮಿಳುನಾಡಿಗೆ, ತೆಲುಗರು ಕರ್ನಾಟಕಕ್ಕೆ ಪ್ರವಾಸ ಬರುವಂತಿಲ್ಲ! ಹಿಂದಿಯನ್ನು ಎಲ್ಲರ ಭಾಷೆಯಾಗಿಸಿ ಬಲಪಡಿಸಬೇಕಂತೆ. ನಮಗೇನ್ ಕರ್ಮವೇ! ದಕ್ಷಿಣ ಭಾರತವನ್ನು ಹಿಂದಿಯಿಂದ ‘ಕಂಗೊಳಿಸಬೇಕೆಂದು’ ಬರೆದಿರುವುದು ಆಲ್ ಇಂಡಿಯಾ ರೇಡಿಯೋದ ಪತ್ರಕರ್ತ ಸಂಜಯ್ ಬ್ಯಾನರ್ಜಿ! ಸರಕಾರೀ ಕೆಲಸದಲ್ಲಿರುವ ಹಿಂದಿ ಪತ್ರಕರ್ತನೊಬ್ಬನ ಮನಸ್ಥಿತಿಯಿದು.

ಈ ಆರ್.ಎಸ್.ಎಸ್ಸಿಗರಿಗೆ ಹಿಂದಿ ಭಾಷೆಯ ಮೇಲೆ ವ್ಯಾಮೋಹವಿರಲಿ. ಬೇರೆ ಭಾಷೆಗಳನ್ನು ಸಾಯಿಸಿ ಹಿಂದಿಯನ್ನು ಬಲಿಷ್ಟಗೊಳಿಸಿ ಅದನ್ನು ದೇಶಪ್ರೇಮದೊಂದಿಗೆ ಬೆರೆಸುವ ಚಟವ್ಯಾಕೆ? ಪಾಂಚಜನ್ಯದ ಲೇಖನಗಳು ಪ್ರಕಟವಾಗಿರುವುದು ಸೆಪ್ಟೆಂಬರ್ ನಾಲ್ಕರ ಸಂಚಿಕೆಯಲ್ಲಿ. ಸೆಪ್ಟೆಂಬರ್ ಹತ್ತರಿಂದ ಮಧ್ಯಪ್ರದೇಶದ ಭೋಪಾಲದಲ್ಲಿ ವಿಶ್ವ ಹಿಂದಿ ಸಮ್ಮೇಳನ ಪ್ರಾರಂಭವಾಗುತ್ತದೆ. ಸಮ್ಮೇಳನದ ಮೊದಲ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ. ಅದೇನು ಮೋದಿಯವರ ಭಾಷಣ ಕೇಳಿ ಪಾಂಚಜನ್ಯದ ಲೇಖನಗಳನ್ನು ಬರೆಯಲಾಯಿತೋ ಅಥವಾ ಪಾಂಚಜನ್ಯ ಓದಿ ಮೋದಿಯವರು ಭಾಷಣ ಮಾಡಿದರೋ ತಿಳಿಯುವುದಿಲ್ಲ.
ನರೇಂದ್ರ ಮೋದಿಯವರ ಭಾಷಣ ಪಾಂಚಜನ್ಯದ ಮತ್ತೊಂದು ರೂಪವಾಗಿತ್ತು
ಮೋದಿಯವರು ಬೆಳೆದು ಬಂದಿದ್ದು ಆರ್.ಎಸ್.ಎಸ್ಸಿನ ಸಂಸ್ಕೃತಿಯಲ್ಲೇ ಎಂಬ ಅಂಶ ಹಿಂದಿ ಮಾತೃಭಾಷೆಯಲ್ಲದ ಗುಜರಾತಿನಿಂದ ಬಂದೂ ‘ಹಿಂದಿಗಷ್ಟೇ ಭಾರತವನ್ನು ಗಟ್ಟಿಗೊಳಿಸುವ ಶಕ್ತಿಯಿರುವುದು’ ಎನ್ನುವ ಅವರ ಅಭಿಪ್ರಾಯದ ಮೂಲಕವೇ ಗುರುತಿಸಿಬಿಡಬಹುದು. ಪ್ರಪಂಚದಲ್ಲಿರುವ 6000 ಭಾಷೆಗಳಲ್ಲಿ 90% ವಿನಾಶದ ಅಂಚಿನಲ್ಲವೆ ಎಂದವರು ಹೇಳುತ್ತಾರೆ, ಭಾಷೆ ಜ್ಞಾನವನ್ನು ತಿಳಿಸುತ್ತದೆ, ಅನುಭವವನ್ನು ತಿಳಿಸಿಕೊಡುತ್ತದೆ ಎಂದೆಲ್ಲ ಹೇಳುತ್ತಾರೆ; ಕೊನೆಗೆ ಹಿಂದಿಯ ಪಾದಾರವಿಂದಗಳಿಗೆ ಶರಣಾಗಿ ಬಿಡುತ್ತಾರೆ! ಹಿಂದಿ ಬರದಿದ್ದರೆ ನನ್ನ ಕಥೆ ಏನ್ ಆಗುತ್ತಿತ್ತು? ಎಂದು ಹೇಳುತ್ತಾ ಹಿಂದಿ ಬರದವರು ದೇಶದ ಪ್ರಧಾನಿಯಾಗಲು ಲಾಯಕ್ಕಿಲ್ಲ ಎಂಬ ಸಂದೇಶ ಕೊಡುತ್ತಾರೆ. ಹಿಂದಿ ಬರದಿದ್ದರೆ ಮೋದಿಯವರು ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲವಂತೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ! ವಿವಿಧ ಮಾತೃಭಾಷೆಗಳನ್ನು ಜೋಡಿಸಲು ಹಿಂದಿ ಉಪಯುಕ್ತವೆಂಬುದು ನಮ್ಮ ಪ್ರಧಾನ ಮಂತ್ರಿಗಳ ಅಭಿಪ್ರಾಯ! ಎಲ್ಲದಕ್ಕಿಂತ ಅಪಾಯಕಾರಿ ಅಭಿಪ್ರಾಯವೆಂದರೆ ಎಲ್ಲಾ ಭಾಷಿಕರು ತಮ್ಮ ತಮ್ಮ ಭಾಷೆಯನ್ನು ನಾಗರಿ ಲಿಪಿಯಲ್ಲಿ (ದೇವನಾಗರಿ) ಬರೆಯುವ ಅಭ್ಯಾಸ ಮಾಡಬೇಕಂತೆ! ಹಿಂದಿ ಹೇರಿಕೆಯ ಜೊತೆಜೊತೆಗೆ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕನ್ನಡವನ್ನು ನಾಗರಿ ಲಿಪಿಯಲ್ಲಿ ಬರೆಸುವಂತಹ ಅಸಹ್ಯದ ಕೆಲಸವೂ ನಡೆದರೆ ಅಚ್ಚರಿಪಡಬೇಡಿ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದ ಉತ್ತರಪ್ರದೇಶದವರಿಗೆ ಚಹಾ ಮಾರುತ್ತಾ ಹಿಂದಿ ಕಲಿತೆ ಎಂದವರು ಹೆಮ್ಮೆಯಿಂದ ಹೇಳುತ್ತಾರೆ. ಒಂದು ಭಾಷೆ ಕಲಿಯುವುದೇನೋ ಹೆಮ್ಮೆಯ ಸಂಗತಿಯೇ. ಗುಜರಾತಿಗೆ ವ್ಯಾಪಾರಕ್ಕೆಂದು ಬಂದವರು ಗುಜರಾತಿ ಕಲಿಯಬೇಕೆ ಹೊರತು ಗುಜರಾತಿಗಳೇ ಹಿಂದಿ ಕಲಿಯಬೇಕೆ? ಎಂಬ ಪ್ರಶ್ನೆ ಹಾಗೆಯೇ ಉಳಿದುಹೋಗುತ್ತದೆ. ಗುಜರಾತಿಗಳು ನೆರೆಹೊರೆಯವರೊಂದಿಗೆ, ಆಟೋದವರೊಂದಿಗೆ ಜಗಳವಾಡಬೇಕಾದರೆ ಹಿಂದಿಯಲ್ಲಿ ಜಗಳವಾಡುತ್ತಾರಂತೆ. ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರಂತೆ! “ಭಾರತದ ತಾಕತ್ತು ಹಿಂದಿ” ಎಂಬ ಸಂಪಾದಕೀಯ ಬರೆದ ಪಾಂಚಜನ್ಯಕ್ಕೂ “ಹಿಂದಿ ಮಾತನಾಡಿದರೆ ಧಮ್ ಇದೆ ಎಂದುಕೊಳ್ಳುತ್ತಾರೆ” ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಲಿಗೂ ಎಷ್ಟೊಂದು ಸಾಮ್ಯತೆಯಿದೆಯಲ್ಲವೇ? ಹಿಂದಿ ತಾಕತ್ತಿನ ಧಮ್ಮಿನ ಭಾರತವನ್ನು ಮುನ್ನಡೆಸುವ ಭಾಷೆಯಾದರೆ ಭಾರತದ ಉಳಿದ ಭಾಷೆಗಳೇನು ಜೀತಕ್ಕಿವೆಯೇ?

ನೂರಾರು ಭಾಷೆಗಳಿರುವ ಒಂದು ದೇಶದ ಪ್ರಧಾನಮಂತ್ರಿ ಮತ್ತು ಆ ಪ್ರಧಾನಮಂತ್ರಿಯವರನ್ನು ಸಾಂಸ್ಕೃತಿಕವಾಗಿ ಬೆಳೆಸಿದ ಒಂದು ಸಂಸ್ಥೆ ಹಿಂದಿ ಹೇರಿಕೆಯನ್ನು ವಿವಿಧ ಭಾವನೆಗಳ ನೆಪದಲ್ಲಿ, ವ್ಯಾಪಾರ ವಹಿವಾಟಿನ ನೆಪದಲ್ಲಿ ಇತರೆ ಭಾಷಿಕರ ಮೇಲೆ ಹೇರಲು ಉತ್ತೇಜನ ನೀಡುತ್ತಾರೆ. ಇದಕ್ಕಿಂತ ದೊಡ್ಡ ದುರಂತವಿದೆಯೇ? ಇವರೇನು ಈ ಹೇರಿಕೆ ಮಾಡುವವರಲ್ಲಿ ಮೊದಲಿಗರಲ್ಲ, ಕೊನೆಯವರೂ ಅಲ್ಲ. ಕಾಂಗ್ರೆಸ್ (ಇದನ್ನೂ ಓದಿ: ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚಭಾಷಾ ಪ್ರಣಾಳಿಕೆ), ಬಿಜೆಪಿ (ಇದನ್ನೂ ಓದಿ: ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು) ಎಂಬ ‘ರಾಷ್ಟ್ರೀಯ’ ಪಟ್ಟ ಕಟ್ಟಿಕೊಂಡ ಪಕ್ಷಗಳೆರಡರ ಮುಖಂಡರುಗಳು ಈ ಹಿಂದಿ ಹೇರಿಕೆಯ ಸಮರ್ಥಕರೇ ಆಗಿದ್ದಾರೆ. ಹಿಂದಿ ದೇಶವನ್ನು ಒಗ್ಗೂಡಿಸುವುದಿರಲಿ, ಇದೇ ರೀತಿಯ ಹೇರಿಕೆಯನ್ನು ಒಂದು ಭಾಷೆ ಶ್ರೇಷ್ಟವೆಂಬ ಸಂಗತಿಯನ್ನು ಇವರು ಪ್ರಚುರಪಡಿಸುತ್ತಲೇ ಸಾಗಿದರೆ ದೇಶವನ್ನೊಡೆಯಲು ಪರದೇಶದವರ ಅವಶ್ಯಕತೆಯೇ ಇಲ್ಲ. ಈ ಹಿಂದಿ ಭಾಷಾಂಧರೇ ಸಾಕು ದೇಶ ಮತ್ತೊಮ್ಮೆ ವಿಭಜನೆಗೊಳ್ಳಲು.

ಆಗ 20, 2015

ಲಜ್ಜೆಗೆಡುವುದರಲ್ಲಿ ಎಲ್ಲರೂ ಮುಂದು....

ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಕನ್ನಡ, ಇಂಗ್ಲೀಷಿನ ಜೊತೆಗೆ ತೆಲುಗು, ತಮಿಳು, ಉರ್ದು ಭಾಷೆಯಲ್ಲಿಯೂ ಪ್ರಕಟಿಸಿ ಮತಗಳಿಕೆಗಾಗಿ ಕನ್ನಡತನವನ್ನು ಕೊಲ್ಲುವುದಕ್ಕೆ ತಾನು ಹಿಂಜರಿಯುವುದಿಲ್ಲ ಎಂದು ತೋರಿಸಿತ್ತು. 

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.


ಉಳಿದೆರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಂಚ ಭಾಷಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಗೆ ನಾ ಮುಂದು ತಾ ಮುಂದು ಎಂಬಂತೆ So Called ರಾಷ್ಟ್ರೀಯ ಪಕ್ಷಗಳು ತಮಿಳು ಭಾಷೆಯ ಕರಪತ್ರವನ್ನು ಹಂಚುತ್ತಿವೆ. ಕರ್ನಾಟಕದ ನಾಯಕ ಶಿರೋಮಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಪರಮೇಶ್ವರ್, ಅನಂತಕುಮಾರ್, ಯಡಿಯೂರಪ್ಪ, ಸದಾನಂದಗೌಡ ಮುಂತಾದವರು ತಮಿಳು ಭಾಷಾ ಕರಪತ್ರದಲ್ಲಿ ಮಿಂಚುತ್ತಿರುವ ಪರಿಯನ್ನು ಆನಂದಿಸಿ ತಣ್ಣಗೆ ಒಂದು ಲೋಟ ನೀರು ಕುಡ್ಕೊಳ್ಳಿ....
BJP tamil bbmp

Congress Tamil BBMP

JDS Tamil BBMP

ಆಗ 11, 2015

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.

Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ? 
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು. 
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.

ಡಿಸೆಂ 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.