Jan 23, 2017

ಧೋಬಿಘಾಟ್’ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಸಂಕಲನ ಬಿಡುಗಡೆ

ಜ.20ರಂದು ಬೆಂಗಳೂರಿನಲ್ಲಿ ಪತ್ರಕರ್ತ, ಸಿನೆಮಾ ನಿರ್ದೇಶಕರೂ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರ “ಮೈಲುತುತ್ತ’ ಪದ್ಯಸಂಕಲನ ವಿಭಿನ್ನ ರೀತಿಯಲ್ಲಿ ಲೋಕಾರ್ಪಣೆಗೊಂಡಿತು. ಮಲ್ಲೇಶ್ವರದ ಧೋಬಿಘಾಟ್’ನಲ್ಲಿ ‘ಪದ್ಯಗಳಿಗೆ ಬಿಡುಗಡೆ’ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಕ್ರವರ್ತಿಯವರ ದರ್ವೇಶ್ ಚೌಕಿ ತಂಡ ಈವರೆಗಿನ ಸಾಹಿತ್ಯಲೋಕದ ಶಿಷ್ಟಾಚಾರಗಳನ್ನು ಮೀರಿ ಕಾರ್ಯಕರ್ಮ ರೂಪಿಸಿತ್ತು. 

ತಲ್ಲಣ

ಸವಿತ ಎಸ್ ಪಿ
ಕಂಗಳಲಿ ನಿಂತು
ಕಾಡುವ ಬಗೆ ಏನು
ನೋಟದಲಿ ಸೆಳೆದು
ಮಾಡಿರುವೆ ಮೋಡಿ

Jan 20, 2017

ಮನದ ಮರೆಯಲಿ ನಿಂತ ಚಲುವೆ

ನಾಗಪ್ಪ.ಕೆ.ಮಾದರ
ರವಿಯ ಕಿರಣಗಳ ನಡುವೆ 
ಬಳಲುವ ಚಲುವೆ ನಿನ್ನಂದವನ್ನು 
ನೋಡಲು ಸೂರ್ಯ ತನ್ನ 
ರಶ್ಮಿಯನ್ನು ಚಿಮ್ಮುಕಿಸುತಿಹನು

ಮಣಿಪುರ ವಿದಾನಸಭಾ ಚುನಾವಣೆ: ಜನಾಂಗೀಯ ಸಂಘರ್ಷವೇ ಪ್ರಮುಖವಾಗಿ, ಮಿಕ್ಕೆಲ್ಲ ಅಭಿವೃದ್ದಿಯ ವಿಚಾರಗಳು ನಗಣ್ಯವಾಗಿರುವ ದುರಂತ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೀಗ ಚುನಾವಣೆ ಘೋಷಣೆಯಾಗಿರುವ ಐದು ರಾಜ್ಯಗಳ ಪೈಕಿ ಮಣಿಪುರ ರಾಜ್ಯ ವಿದಾನಸಭಾ ಚುನಾವಣೆಗಳು ಯಾವುದೇ ಮಾನದಂಡದಿಂದ ನೋಡಿದರು ರಾಷ್ಟ್ರದ ಸಾಮಾನ್ಯಜನರ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು. ಯಾಕೆಂದರೆ ಇಂಡಿಯಾದ ಉಳಿದ ಭಾಗಗಳ ಜನರಿಗೆ ಈಶಾನ್ಯರಾಜ್ಯಗಳ ಬಗ್ಗೆ ಅಷ್ಟೇನು ಅರಿವು, ಕಾಳಜಿ ಇದ್ದಂತಿಲ್ಲ. ಸ್ವಾತಂತ್ರ ಬಂದ ದಿನದಿಂದಲೂ ಅವು ತೀರಾ ನಿರ್ಲಕ್ಷಿತ ಪ್ರದೇಶಗಳಾಗಿಯೇ ಉಳಿದಿವೆ. ಇದಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ, ಈಶಾನ್ಯದಲ್ಲಿರುವ ರಾಜ್ಯಗಳು ಬೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಠಿಯಿಂದ ಬಹಳ ಸಣ್ಣವಾಗಿದ್ದು, ಅಲ್ಲಿಯ ಜನರ ಚಹರೆ ವೇಷಭೂಷಣಗಳು ಭಿನ್ನವಾಗಿರುವುದು. ಜೊತೆಗೆ ಮೊದಲಿನಿಂದಲೂ ಅಲ್ಲಿ ಜನಾಂಗೀಯ ಮತ್ತು ಸ್ವಾತಂತ್ರದ ಸಂಘರ್ಷಗಳು ನಡೆಯುತ್ತಲೇ ಇರುವುದು.

Jan 19, 2017

ಸ್ವರ್ಗದಿಂದೊಂದು ಸ್ವಗತ: ಎಂ.ಕೆ.ಗಾಂದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನನ್ನ ದೇಶದಲ್ಲಿ ನೋಟುಗಳ ಮೇಲಿದ್ದ ನನ್ನ ಬಾವಚಿತ್ರವನ್ನು ತೆಗೆದು ಹಾಕಿದ್ದಾರೆ ಮತ್ತು ನಾನು ಬಹಳವಾಗಿ ಪ್ರೀತಿಸುತ್ತಿದ್ದ ಖಾದಿಯನ್ನು ಪ್ರಚಾರ ಮಾಡುತ್ತಿದ್ದ ಖಾದಿಗ್ರಾಮೋದ್ಯೋಗದ ಕ್ಯಾಲೆಂಡರಿನಿಂದಲೂ ನನ್ನ ಬಾವಚಿತ್ರವನ್ನು ತೆಗೆದು ಬೇರೆಯವರದನ್ನು ಹಾಕಿದ್ದಾರೆಂದು ಇದೀಗ ಬಂದವರೊಬ್ಬರು ನನಗೆ ಹೇಳಿದರು. ನನಗೇನೂ ಅನಿಸಲಿಲ್ಲ. ಯಾಕೆಂದರೆ ಅವರು ಮುದ್ರಿಸುತ್ತಿದ್ದ ನೋಟುಗಳ ವ್ಯಾಮೋಹ ನಾನಲ್ಲಿ ಇದ್ದಾಗಲೂ ನನಗಿರಲಿಲ್ಲ. ಇನ್ನು ಕ್ಯಾಲೆಂಡರ್ ಡೈರಿಗಳ ಮೂಲಕ ಪ್ರಚಾರ ನಡೆಸುವ ತಂತ್ರಗಳು ನನ್ನ ಕಾಲದಲ್ಲಿರಲಿಲ್ಲ. ಮತ್ತು ಅಂತವುಗಳ ಬಗ್ಗೆ ನನಗೆ ನಂಬಿಕೆಯೂ ಹಿಂದೆ ಇರಲಿಲ್ಲ, ಈಗಲೂ ಇಲ್ಲ.

ಉತ್ತರಪ್ರದೇಶ: M.Y FACTOR

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೇನೆ ಹೇಳಿದರು ಬರಲಿರುವ ಉತ್ತರಪ್ರದೇಶದ ಚುನಾವಣೆಯ ಅಂತಿಮ ಪಲಿತಾಂಶವನ್ನು ನಿರ್ದರಿಸಲಿರುವುದು 'ಮೈಫ್ಯಾಕ್ಟರ್'(M.YFACTOR) ಎನ್ನುವುದಂತು ಬಹುತೇಕ ನಿಜ! ಎಂವೈ ಅಂದರೆ 'ಮುಸ್ಲಿಂ ಮತ್ತು ಯಾದವ' ಎಂದರ್ಥ. ಕಳೆದೆರಡು ಮೂರು ಚುನಾವಣೆಗಳ ಪಲಿತಾಂಶಗಳನ್ನು ಹಾಗು ವರ್ತಮಾನದಲ್ಲಿ ಆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಿದರೆ ಈ ಮೈ ಫ್ಯಾಕ್ಟೆರಿನ ಬಗ್ಗೆ ನಿಖರವಾದ ಅರ್ಥ ಮತ್ತು ಬಲ ತಿಳಿಯುತ್ತದೆ.

ಕಳೆದ ಬಾರಿ ಒಟ್ಟಾರೆ ಶೇಕಡಾ 29.15ರಷ್ಟು ಮತಗಳನ್ನು ಪಡೆದ ಸಮಾಜವಾದಿ ಪಕ್ಷ 224 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಪಡೆದಿತ್ತು.ಎರಡನೆ ಸ್ಥಾನದಲ್ಲಿ ಬಹುಜನ ಪಕ್ಷವು ಶೇಕಡಾ25.91 ಮತಗಳನ್ನು ಗಳಿಸಿ 80 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಭಾರತೀಯ ಜನತಾ ಪಕ್ಷವು ಶೇಕಡಾ 15ರಷ್ಟು ಮತಗಳನ್ನು ಪಡೆದು47 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನುಳಿದಂತೆ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೇವಲ ಶೇಕಡಾ 11.63 ಮತಗಳಿಸಿ 28 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳವು ಶೇಕಡಾ 2.33 ಮತಗಳಿಸಿ 9 ಸ್ಥಾನಗಳಿಗೆ ಸೀಮಿತವಾಗಿತ್ತು. (ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪ ಹೆಚ್ಚು ಸ್ಥಾನಗಳನ್ನು ಗೆದ್ದುತನ್ನ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ, ನಾನಿಲ್ಲಿ ಹಿಂದಿನ ವಿದಾನಸಭಾ ಚುನಾವಣೆಯ ಪಲಿತಾಂಶವನ್ನು ಮಾತ್ರ ವಿಶ್ಲೇಷಣೆಗೆ ಬಳಸಿಕೊಂಡಿದ್ದೇನೆ).

Jan 12, 2017

ಹತ್ತಿರವಾಗುತ್ತಿರುವ ನಿತೀಶ್ ಕುಮಾರ್ ಮತ್ತು ನರೇಂದ್ರಮೋದಿ: ರಾಜಕೀಯ ಮಾಗುವಿಕೆಯೊ? ಅವಕಾಶವಾದಿತನವೊ?

ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಬಹುಶ: ಶಕ್ತಿರಾಜಕಾರಣದಲ್ಲಿ ಅಧಿಕಾರದ ಕುರ್ಚಿಗೆ ಮಾತ್ರ ಅಂತಹ ಅದ್ಬುತ ಶಕ್ತಿ ಇರುವಂತೆ ಕಾಣುತ್ತದೆ. ವಿರೋಧಪಕ್ಷದಲ್ಲಿದ್ದಾಗ ಬೆಂಕಿ ಉಗುಳುತ್ತಿದ್ದ ನಾಯಕರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ನಿರಂತರವಾಗಿ ಅದು ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ರಾಜಕೀಯವಾಗಿ ರಾಜಿಯಾಗುತ್ತ ಹೋಗುತ್ತಾನೆ. ಅದನ್ನು ರಾಜಕೀಯ ಪಂಡಿತರು ರಾಜಕಾರಣಿಯೊಬ್ಬನ ವ್ಯಕ್ತಿತ್ವದ ಮಾಗುವಿಕೆ ಎನ್ನುತ್ತಾರೆ. ಆದರೆ ಸಾಮಾನ್ಯರ ಮಟ್ಟಿಗೆ ಅದು ಅವಕಾಶವಾದಿತನ ಮಾತ್ರ. ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವೇ ಅಂತಿಮವಾದ ಗುರಿಯಾಗಿರುವುದರಿಂದ ಇಂತಹ ಮಾಗುವಿಕೆಗಳಿಗೆ ಅಚ್ಚರಿ ಪಡುವಂತದ್ದೇನಿಲ್ಲ. ರಾಜಕೀಯದಲ್ಲಿ ಇವತ್ತಿನ ಮಿತ್ರರುಗಳು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರುಗಳಾಗಬಹುದಾದ ಸಾಧ್ಯತೆಯೂ ಇದೆ. ಇಂಡಿಯಾದ ರಾಜಕಾರಣದ ವೈಶಿಷ್ಟ್ಯತೆ ಇರುವುದೆ ಇಂತಹ ಅಸಾದ್ಯಗಳನ್ನು ಸಾದ್ಯವಾಗಿಸುವಲ್ಲಿ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿಗಳೂ ಆದ ಶ್ರೀ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಅವರು ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತ ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.

ಪೀಳಿಗೆಯ ಅಂತರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಮ್ಮ ತಾತ ಎಂದೂ ಕವಿತೆ ಬರೆದವನೇ ಅಲ್ಲ
ಕವಿತೆಯ ಮಾತು ಬಿಡಿ
ಕನಿಷ್ಠ ಅ ಆ ತಿದ್ದಿದವನೂ ಅಲ್ಲ
ತನ್ನಪಾಡಿಗೆ ತಾನು ಗದ್ದೆ ಉತ್ತಿಕೊಂಡು
ಎತ್ತುಗಳ ಸಾಕಿಕೊಂಡು
ಹಸುಗಳ ಹಾಲು ಕರೆದುಕೊಂಡು
ಹೆಂಡತಿ ಮಕ್ಕಳ ಸಲಹಿಕೊಂಡು 
ನೆಮ್ಮದಿಯಾಗಿದ್ದ

Jan 11, 2017

ಭಾವ ಸ್ಪರ್ಶ

ಸವಿತ‌ ಎಸ್ ಪಿ
ಕಂಗಳಲಿ ಮಧುರ ಪ್ರೇಮಕಾವ್ಯಕೆ 
ಹೊಸಭಾಷ್ಯ ಸದ್ದಿಲ್ಲದೆ ಬರೆದು
ಹೆಜ್ಜೆಗಳಲಿ ಲಾಸ್ಯದ ಲಜ್ಜೆ ಬೆರೆಸಿದೆ

ಮನಸಿನಲಿ ಬಣ್ಣಬಣ್ಣದ ಕಾಮನಬಿಲ್ಲ
ಹೊಸಕಾಮನೆ ರಸಕಾವ್ಯ ತುಂಬಿ
ತುಟಿಗಳಲಿ ಮಾಸದ ಕಿರುನಗು ತುಂಬಿದೆ

ಡಿ.ಎಂ.ಕೆ.ಯ ಅರವತ್ಮೂರರ ಯುವನಾಯಕ ಸ್ಟಾಲಿನ್

ಸ್ಟಾಲಿನ್ ಮತ್ತು ಕರುಣಾನಿಧಿ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೊನೆಗೂ ಕರುಣಾನಿದಿಯವರ ಪುತ್ರರೂ ಡಿ.ಎಂ.ಕೆ.ಪಕ್ಷದ ಯುವ ನಾಯಕರೂ ಆದ ಶ್ರೀ ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಾದ್ಯಕ್ಷ ಹುದ್ದೆ ಲಬಿಸಿದೆ. ಈ ಹುದ್ದೆಗೆ ನಿಜಕ್ಕೂ ಅರ್ಹರಾಗಿದ್ದ ಸ್ಟಾಲಿನ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಅವರ 63ನೇ ವಯಸ್ಸಿನಲ್ಲಿ ಎನ್ನುವುದೇ ವಿಷಾದದ ಸಂಗತಿಯಾಗಿದೆ. 1977ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸ್ಟಾಲಿನ್ ಎಂಭತ್ತರ ದಶಕದ ಉತ್ತರಾರ್ದದಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಸ್ಟಾಲಿನ್ ಅವರದು ಪಕ್ಷದ ಅದ್ಯಕ್ಷರಾಗುವ ತನಕದ ಹಾದಿ ಬಹಳ ಕಠಿಣವಾದದ್ದೇನು ಅಲ್ಲದಿದ್ದರೂ ಬಹಳ ಸಹನೆ ಬಯಸುವಂತಹದ್ದಾಗಿತ್ತು ಎನ್ನುವುದೇ ವಿಶೇಷ! ಇದಕ್ಕೆ ಕಾರಣ ಇಂಡಿಯಾದ ರಾಜಕಾರಣಿಗಳ ಪಟ್ಟಭದ್ರ ಮನಸ್ಥಿತಿ ಮತ್ತು ಪಾಳೇಗಾರಿಕೆಯ ನಡವಳಿಕೆಗಳೇ ಕಾರಣವೆಂದರೆ ತಪ್ಪಾಗಲಾರದು.

Jan 8, 2017

ಆರ್.ಬಿ.ಐಗೆ ಪಬ್ಲಿಕ್ ಅಕೌಂಟ್ಸ್ ಸಮಿತಿ ಕೇಳಿರುವ ಹತ್ತು ಪ್ರಶ್ನೆಗಳು.

ಕೆ.ವಿ. ಥಾಮಸ್ ನೇತೃತ್ವದ ಪಬ್ಲಿಕ್ ಅಕೌಂಟ್ಸ್ ಸಮಿತಿಯು ಆರ್.ಬಿ.ಐ ಗವರ್ನರ್ ಊರ್ಜಿತ್ ಪಟೇಲ್ ರವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಜನವರಿ 28ರಂದು ಸಮಿತಿಯ ಮುಂದೆ ಬಂದು ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ತಿಳಿಸಿದ್ದಾರೆ.

ಪ್ರಶ್ನೆ 1: ಕೇಂದ್ರ ಸಚಿವರಾದ ಪಿಯುಶ್ ಗೋಯಲ್ ರವರು ಸಂಸತ್ತಿನಲ್ಲಿ ನೋಟು ಅಮಾನ್ಯದ ನಿರ್ಧಾರವನ್ನು ತೆಗೆದುಕೊಂಡಿದ್ದು ಆರ್.ಬಿ.ಐ. ಸರಕಾರ ಅದರ ಸಲಹೆಯಂತೆ ಕೆಲಸ ಮಾಡಿತಷ್ಟೇ ಎಂದು ತಿಳಿಸಿದ್ದಾರೆ. ನೀವಿದನ್ನು ಒಪ್ಪುವಿರಾ?

ಪ್ರಶ್ನೆ 2: ನಿರ್ಧಾರ ಆರ್.ಬಿ.ಐದ್ದೇ ಎನ್ನುವುದು ಹೌದಾದರೆ ಭಾರತದ ಅನುಕೂಲಕ್ಕಾಗಿ ನೋಟು ಅಮಾನ್ಯಗೊಳಿಸುವ ನಿರ್ಧಾರವನ್ನು ಆರ್.ಬಿ.ಐ ತೆಗೆದುಕೊಂಡಿದ್ಯಾವಾಗ?

ನೀರುಗಂಟಿಗಳಿಗೆ ನ್ಯಾಯ ಸಿಗಲಿ.

ಎಸ್. ಅಭಿ ಹನಕೆರೆ
ನಿಮ್ಮ ಮನೆಗೆ ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲವೆಂದಾಗ ನೀರು ಬಿಡುವ ನೀರುಗಂಟಿಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತೀರಿ, ಅದೇ ಏನೂ ತೊಂದರೆ ಆಗದೆ ನಲ್ಲಿ ನೀರು ಬರುತ್ತಿದ್ದರೆ, ಅಪ್ಪಿ ತಪ್ಪಿಯೂ ಹೊಗಳುವುದಿಲ್ಲ. ಹೊಗಳಿಕೆ ತೆಗಳಿಕೆ ಪಕ್ಕಕ್ಕಿಟ್ಟು ಅವರಿಗೆ ಬರುತ್ತಿರುವ ಸಂಬಳ, ಅವರಿಗೆ ಸರ್ಕಾರ ಕೊಡುತ್ತಿರುವ ಸವಲತ್ತು, ಕೆಲಸ ನಿರ್ವಹಿಸುವಾಗ ಜೀವರಕ್ಷಕ ಸಾಧನಗಳಿಲ್ಲದೆಯೇ ಎಂತಹಾ ಕಠಿಣ ಪರಿಸ್ಥಿತಿಯಲ್ಲಿಯೂ ದುಡಿಯಬೇಕಾದ ಅನಿವಾರ್ಯತೆ, ಇವುಗಳನ್ನೆಲ್ಲಾ ಕೇಳುವಾಗ ಎಂಥವರಿಗೂ ಕಣ್ಣೀರು ಬರುತ್ತದೆ. ನಲ್ಲಿ ನೀರಿನಿಂದ ಉಪಯೋಗವಾದರೂ ಇದೆ, ಕಣ್ಣೀರಿನಿಂದ ಏನು ಪ್ರಯೋಜನ?

Jan 6, 2017

ಮುಂದಿನ ವಿದಾನಸಭಾ ಚುನಾವಣೆಯ ಹೊತ್ತಿಗೆ ಧೃವೀಕರಣಗೊಳ್ಳಲಿರುವ ಮೇಲ್ವರ್ಗಗಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ವಿಷಯವಾಗಿ ನಾವೀಗ ಮಾತಾಡುವುದು ತೀರಾ ಅವಸರದ ವಿಚಾರವೆನಿಸಿದರು, ಇನ್ನು ಹದಿನೈದು ತಿಂಗಳಲ್ಲಿ ಬರಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹೊತ್ತಿಗೆ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗಬಹುದಾದ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ.

ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ ವಿದಾನಸಭಾ ಚುನಾವಣೆಗಳು ಹತ್ತಿರವಾಗತೊಡಗಿದಂತೆ ಅಹಿಂದವನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ತಾವು ಒಂದಾಗಿ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ಆ ಶಕ್ತಿಗಳು ಕೆಲಸ ಮಾಡತೊಡಗಿವೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆ ಏನಲ್ಲ.ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳಾಗಿದ್ದ ಶ್ರೀದೇವರಾಜ್ ಅರಸುರವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು.