Apr 29, 2014

Apr 23, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 27

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ


‘ಘಟ್ಟಗಳಲ್ಲಿ ನಕ್ಸಲ್ ಚಳುವಳಿ ಬಲವಾಗಿ ಬೇರೂರುತ್ತಿದೆ’ ಎಂದು ಗುಪ್ತಚರರು ಸರ್ಕಾರಕ್ಕೆ ಅನೇಕ ಬಾರಿ ವರದಿ ಕಳುಹಿಸಿದ್ದರು. ಎಲ್ಲಾ ವಿಷಯಗಳಲ್ಲೂ ನಿರ್ಲಕ್ಷ್ಯ ತೋರುವ ಸರ್ಕಾರಕ್ಕೆ ಆ ವರದಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದೆನಿಸಲೇ ಇಲ್ಲ. ಎಲ್ಲಾ ವರದಿಗಳಂತೆ ಅದೂ ಧೂಳು ತಿನ್ನುತ್ತಾ ಕುಳಿತುಕೊಂಡಿತ್ತು. ಆದರೆ ಪತ್ರಿಕಾ ವರದಿಗಳು ಸರ್ಕಾರವನ್ನು ಬೆಚ್ಚಿಬೀಳಿಸಿದವು. ನಕ್ಸಲ್ ಚಳುವಳಿಯಿರಲಿ, ದೇಶದಲ್ಲಿ ನಡೆದ, ನಡೆಯುತ್ತಿರುವ ಯಾವೊಂದು ಚಳುವಳಿಯ ಒಳ ಹೊರಗು; ಆಗು ಹೋಗುಗಳು ಗೊತ್ತಿಲ್ಲದ ರಾಜಕಾರಣಿಗಳೆಲ್ಲಾ ದಿನಕ್ಕೊಂದು ಮಾತನ್ನಾಡಲಾರಂಭಿಸಿದವು.

ಕಬೀರನ ಪರ ಹೋರಾಟ ದಿಕ್ಕು ತಪ್ಪದಿರಲಿ

ಕಬೀರನ ಹತ್ಯೆಯ ವಿರುದ್ಧದ ಪ್ರತಿಭಟನೆ ಆತನ ಧರ್ಮದ ಕಾರಣದಿಂದಾಗಿ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಿರುವಾಗ ಮುನೀರ್ ಕಾಟಿಪಳ್ಳ ಬರೆದಿರುವ ಈ ಪುಟ್ಟ ಲೇಖನ ಪ್ರಸ್ತುತವೆನ್ನಿಸಿತು.

ಕಬೀರನ ಹತ್ಯೆ ಮಾಡಿದ್ದು ಪ್ರಭುತ್ವ. ಪ್ರಭುತ್ವ ಮಾಡಿರುವ ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕೇವಲ ಮುಸ್ಲಿಮರ ಜವಾಬ್ದಾರಿ ಅಲ್ಲ.ಇದು ಮುಸ್ಲಿಮರಿಗೆ ಸೀಮಿತವಾದ ವಿಷಯವೂ ಅಲ್ಲ. ಪ್ರಭುತ್ವ ಮಾಡಿದ ಕೊಲೆಯ ವಿರುದ್ದ ಹೋರಾಟದಲ್ಲಿ ಇಡೀ ಜನ ಸಮೂಹ ಪಾಲ್ಗೊಳ್ಳಬೇಕು.ಆ ರೀತಿಯ ಐಕ್ಯ ಹೋರಾಟ ನಡೆದರೆ ಮಾತ್ರ ಕಬೀರ್ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಅಂತಹ ಐಕ್ಯ ಹೋರಾಟದ ಅಪೂರ್ವ ಸನ್ನಿವೇಶ ನಿರ್ಮಾಣವಾಗುತ್ತಿರುವುದನ್ನು ಕಂಡು, ಜನಚಳುವಳಿ ಎದ್ದುಬರುತ್ತಿರುವುದನ್ನು ಕಂಡು ಪ್ರಭುತ್ವ ಬೀತಿಗೊಂಡಿದೆ. ಹಿಂದು ಮುಸ್ಲಿಂ ಹೀಗೆ ಎಲ್ಲಾ ವಿಭಾಗದ ಜನ ಕಬೀರ್ ತಮ್ಮ ಮನೆಯ ಮಗನೇನೋ ಎಂಬಂತೆ ಕಬೀರ್ ಪರ ದನಿ ಎತ್ತುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ.ಈ ಹೋರಾಟವನ್ನು ಹೇಗಾದರು ಮುರಿಯಬೇಕು ಎಂದು ಪಿತೂರಿ ನಡೆಸತೊಡಗಿದೆ.

Apr 22, 2014

ಕಬೀರನ ಸಾವು; ಮನುಷ್ಯತ್ವದ ಎದೆಗೆ ಬಿದ್ದ ಗುಂಡು.

ಉಷಾ ಕಟ್ಟೀಮನಿ

ಯಾವನೋ ಒಬ್ಬ ಸಾಬಿ, ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ. ಇನ್ಯಾರಿಗೋ ಆ ಸುದ್ದಿ ತಲುಪಿ ಅವರು ಒಂದಷ್ಟು ಜನ ಗುಂಪು ಸೇರಿಕೊಂಡು ಬಂದು ಆ ಸಾಬಿಯನ್ನು ದನ ಬಡಿದಂತೆ ಬಡಿಯುತ್ತಾರೆ-ಇಲ್ಲಿನ ಶಬ್ದ ಪ್ರಯೋಗವನ್ನು ಗಮನಿಸಿ, ಅಂದರೆ ದನಕ್ಕೆ ಬಡಿಯುವುದು ಟೇಕನ್ ಫಾರ್ ಗ್ರೆಂಟೆಡ್ ಅಂತನಾ?

Apr 17, 2014

ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮ



ಡಾ ಅಶೋಕ್ ಕೆ ಆರ್

ಪ್ರಜಾಪ್ರಭುತ್ವ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಆ ಕಾರಣದಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಮೂರು ಆಧಾರ ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗದ ಜೊತೆಗೆ ಸಮೀಕರಿಸಿ ನಾಲ್ಕನೇ ಸ್ಥಂಭವಾಗಿ ಗುರುತಿಸಲಾಗಿದೆ. ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಪತ್ರಿಕೋದ್ಯಮಕ್ಕಿರುವ ಸ್ವಾತಂತ್ರ್ಯ ಮತ್ತು ಪತ್ರಕರ್ತರಿಗಿರುವ ರಕ್ಷಣೆಯ ಆಧಾರದ ಮೇಲೆ ಆ ಸಮಾಜದ ಆರೋಗ್ಯವನ್ನಳೆಯುವುದೂ ಇದೆ. Reporters without borders ಸಂಸ್ಥೆಯ ಅಧ್ಯಯನದ ಅನ್ವಯ ಭಾರತ ಪತ್ರಿಕೋದ್ಯಮದ ವಿಷಯದಲ್ಲಿ ಗಳಿಸಿರುವುದು 143ನೇ ಸ್ಥಾನ! ಇತ್ತೀಚಿನ ವರುಷಗಳಲ್ಲಿ ಭಾರತದಲ್ಲಿ ಪತ್ರಿಕೋದ್ಯಮಿಗಳ ಮೇಲೆ ಪತ್ರಕರ್ತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. 2013ರಲ್ಲಿ ಭಾರತದ ಎಂಟು ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗುತ್ತದೆ. ಈ ಸಂಖ್ಯೆ ಪತ್ರಕರ್ತರಿಗೆ ಅಪಾಯಕಾರಿ ದೇಶವೆನ್ನಿಸಿಕೊಂಡಿರುವ ಪಾಕಿಸ್ತಾನಕ್ಕಿಂತಲೂ ಹೆಚ್ಚು ಎಂಬುದು ಭಾರತದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನೆನಪಿಸುತ್ತದೆ.

ಕಾಂಗ್ರೆಸ್ ರಹಿತ ಭಾರತ ಸಾಧ್ಯವೇ?

 ಡಾ.ಅಶೋಕ್. ಕೆ. ಆರ್


ಮೋದಿ ಜಪದ ಭಾಜಪ ಕಾಂಗ್ರೆಸ್ಸನ್ನು ಭಾರತದಿಂದ ಸಂಪೂರ್ಣ ನಿರ್ನಾಮವಾಗಿಸುವುದೇ ನಮ್ಮ ಗುರಿ ಎಂದು ಬಹಳಷ್ಟು ಪ್ರಚರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಏಳಿಗೆಯಿಂದ ರಾಷ್ಟ್ರೀಯ ಪಕ್ಷಗಳೆನ್ನಿಸಿಕೊಂಡ ಕಾಂಗ್ರೆಸ್ ಮತ್ತು ಭಾಜಪ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲೂ ಎಣಗುತ್ತಿರುವ ಪರಿಸ್ಥಿತಿಯಿದೆ. ಒಂದಷ್ಟು ರಾಜ್ಯಗಳಲ್ಲಿ ಭಾಜಪ ಪ್ರಭಾವಶಾಲಿಯಾಗಿ ಮಗದೊಂದಷ್ಟು ಕಡೆ ಕಾಂಗ್ರೆಸ್ ಪ್ರಭಾವಶಾಲಿಯಾಗಿ ಮತ್ತೊಂದು ಪಕ್ಷದ ಏಳಿಗೆಗೆ ಅಡ್ಡಿಯಾಗಿದ್ದರೆ ಇನ್ನುಳಿದವುಗಳಲ್ಲಿ ಮತದಾರ ಒಮ್ಮೆ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಭಾಜಪಕ್ಕೆ ಅವಕಾಶ ನೀಡುವ ಮನಸ್ಸು ಮಾಡಿದ್ದಾನೆ.

Apr 15, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 26



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 25 ಓದಲು ಇಲ್ಲಿ ಕ್ಲಿಕ್ಕಿಸಿ
ಪ್ರೇಮ್ ನ ವಾಗ್ಝರಿಗೆ ಪತ್ರಕರ್ತರೆಲ್ಲ ಅವಕ್ಕಾಗಿ ಕುಳಿತಿದ್ದರು. ಮೊದಲನೇ ಪ್ರಶ್ನೆಯನ್ನು ಸಯ್ಯದ್ ಕೇಳಿದ್ದ
“ಬಂದೂಕಿನಿಂದ ಬದಲಾವಣೆ ಅನ್ನೋದು ನಿಜಕ್ಕೂ ಸಾಧ್ಯವಾಗೋ ಕೆಲಸವಾ?”
“ನೀವೇ ಕಾದು ನೋಡಿ, ಒಂದೆರಡು ದಿನದಲ್ಲಲ್ಲದಿದ್ದರೂ ಕೆಲವು ವರುಷಗಳಲ್ಲಿ ಬದಲಾವಣೆ ಖಂಡಿತವಾಗ್ಯೂ ಆಗುತ್ತೆ”

Apr 11, 2014

ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ?

ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? 

ಎಲ್ಲರಿಂದ ಬೇಸತ್ತ ಮತದಾರ ದೆಹಲಿಯಲ್ಲಿ ಹೊಚ್ಚ ಹೊಸ ಪಕ್ಷ, ಹಿಂದೆ ಮುಂದೆ ಕಂಡು ಕೇಳರಿಯದ ಪಕ್ಷ ಆಮ್ ಆದ್ಮಿ ಪಾರ್ಟಿಗೆ ವೋಟ್ ಕೊಟ್ಟು ಗೆಲ್ಲಿಸಿದ. ರೆಫರೆಂಡಮ್‌ನಲ್ಲಿ ಸರ್ಕಾರ್ ಮಾಡಿ ಅಂತ ಕೂಡ ಅಭಿಪ್ರಾಯ ಕೊಟ್ಟ. ಆದರೆ ಈ ಆಮ್ ಆದ್ಮಿ ಪಕ್ಷ 45 ದಿನಗಳ ನೌಟಂಕಿ ನಡೆಸಿ ಸರಕಾರ ಬರ್ಖಾಸ್ತು ಮಾಡಿಕೊಂಡಿತು. ದೆಹಲಿಯಲ್ಲಿ ಮಾಡಲಿಕ್ಕೆ ಸಾವಿರ ಕೆಲಸಗಳು ಬಾಕಿ ಇವೆ. ಅದೆಲ್ಲ ಬಿಟ್ಟು ಏನೇನೋ ಮಾಡಲಿಕ್ಕೆ ಹೋಗಿ ಆಪ್ ಸರಕಾರ ಇಲ್ಲವಾಯಿತು. ಈಗ ದೆಹಲಿಯ ಸ್ಥಿತಿ ಅತಂತ್ರ. ದೆಹಲಿಯಲ್ಲ್ಲಿ ಆಯ್ಕೆಯಾದ ಆಪ್ ಎಂಎಲ್ಎಗಳು ಈಗ ದೆಹಲಿ ಮರೆತು ದೇಶ ಸುತ್ತುತ್ತಿದ್ದಾರೆ. ಎಲ್ಲೆಲ್ಲೋ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಕೇಜ್ರಿವಾಲ್‌ನನ್ನು ನಾನು ಮೆಚ್ಚುತ್ತೇನೆ ಆದರೆ ಇದೇ ಕೇಜ್ರಿವಾಲ್ ಈಗ ಲೋಕಸಭೆಗೂ ಸ್ಪರ್ಧಿಸುತ್ತಿದ್ದಾರೆ. ಹಾಗಿದ್ದರೆ ದೆಹಲಿಯಲ್ಲಿ ಇವರನ್ನು ಗೆಲ್ಲಿಸಿದ ಮತದಾರನ ಗತಿ ಏನು? ಇದು ಒಂದು ರೀತಿಯ ಬೃಷ್ಟಾಚಾರವಲ್ಲವೆ? ಇದು ಸಾರ್ವಜನಿಕರ ದುಡ್ಡು ಪೋಲಾಗುವ ಕೆಲಸವಲ್ಲವೆ? 

ಜೀವಮಾನದುದ್ದಕ್ಕೂ ಈ ವ್ಯವಸ್ಥೆ ಬಗ್ಗೆ ಒಂದೇ ಒಂದು ಮಾತು ಕೂಡ ಆಡದ, ಒಂದೇ ಒಂದು ಅಭಿಪ್ರಾಯ ವ್ಯಕ್ತಪಡಿಸದ, ಊರ್ ಮೇಲ್ ಊರ್ ಬಿದ್ರೆ ಶಾನುಭಾಗರ ಶಾ... ಎಂತ ಹೋಯ್ತು ಎಂದು ತಮ್ಮ ಕೆಲಸ ಮಾಡಿಕೊಂಡಿದ್ದ ಮಹಾ ಸಭ್ಯ ಸಂಸಾರಸ್ಥ ಮಹಾನುಭಾವರೆಲ್ಲ ಆಪ್ ಅಭ್ಯರ್ಥಿಗಳು. ಹೆಚ್ಚಿನವರು ಬಹಳ ಶಿಕ್ಷಿತರು, ವೈದ್ಯರು, ಇಂಜಿನಿಯರ್‌ಗಳು, ಐಐಟಿಯನ್ನರು, ಸಿಇಒಗಳು, ಚಿತ್ರ ನಟರು ಇತ್ಯಾದಿ ಇತ್ಯಾದಿ. ಈಗ ಈ ಜಾವೇದ್ ಜಾಫ್ರಿ ಎಂಬ ನಟ ಮತ್ತು ಡ್ಯಾನ್ಸ್ ಮಾಸ್ಟರ್, ಗುಲ್ ಪನಾಗ್ ಎಂಬ ನಟಿ ಇವರೆಲ್ಲ ಆಪ್ ಆಭ್ಯರ್ಥಿಗಳು. ಆಪ್ ಕಟ್ಟಿದ ಕಾರ್ಯಕರ್ತರೆಲ್ಲ ಇವರಿಗೆ ಮತದಾರ ಮಾತ್ರ. ಆಮ್ ಆದ್ಮಿ ಹೆಸರಿಗೆ ಮಾತ್ರ. ಆಮ್ ಆದ್ಮಿ ಇವರಿಗೆ ಕೇವಲ ಮತದಾರ ಮಾತ್ರ. 

ಕಸಬರಿಕೆ ಚಿಹ್ನೆಯ ಈ ಪಾರ್ಟಿ ಕಸಬರಿಕೆಯಿಂದ ಕೊಳೆ ಎಲ್ಲ ಸ್ವಚ್ಛ ಮಾಡಿ ಗುಡಿಸುತ್ತೆ ಎಂದ ನಂಬಿದ್ದ ದೆಹಲಿಯ ಜನ ಇವರ ಕಸಬರಿಕೆಯಿಂದ ಕೇವಲ ಧೂಳು ಮಾತ್ರ ಏಳುತ್ತಿದೆ ವಿನಃ ಸ್ವಚ್ಛತೆ ನಡೆಯುತ್ತಿಲ್ಲ ಎಂಬುದನ್ನು ಮನಗಂಡಂತಿದೆ. ಇಂದು ಟಿವಿ ಚಾನೆಲ್‌ನಲ್ಲಿ ಮಾತನಾಡಿದ ದೆಹಲಿಯ ಅನೇಕ ಆಪ್ ಆಭಿಮಾನಿಗಳು ಅವರು ಆಪ್ ಬಗ್ಗೆ ಭ್ರಮನಿರಸನ ಹೊಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆಪ್ ಕೇವಲ ಕರಪ್ಷನ್ ಬಗ್ಗೆ ಮಾತನಾಡುತ್ತೆ. ಕೋಮುವಾದದ ಬಗ್ಗೆ ಆಪ್ ಮಾತಾಡುತ್ತಿಲ್ಲ. ಬೃಷ್ಟಾ಼ಚಾರ ವಿರೋಧಿ ಎಂದು ಹೇಳಿಕೊಳ್ಳುವ ಕೇಜ್ರಿವಾಲ್ ಖಾಸಗೀಕರಣದ ದೊಡ್ಡ ಸಮರ್ಥಕನೂ ಹೌದು. 

ಬೃಷ್ಟಾಚಾರದ ಬಗ್ಗೆ ನಾನು, ನೀವು, ಅವರು ಎಲ್ಲರೂ ಮಾತನಾಡಬಹುದು. ಅದು ಸುಲಭ. ಈ ದೇಶದ ಇಂದಿನ ದೊಡ್ಡ ಶತ್ರು ಬೃಷ್ಟಾಚಾರ ಅಲ್ಲ. ಕೋಮುವಾದದ ಬಗ್ಗೆ ಮಾತನಾಡಬೇಕು, ಅದಕ್ಕೆ ಎದೆಗಾರಿಕೆ ಬೇಕು. ಈ ದೇಶದಲ್ಲಿ ಅಲ್ಪಸಂಖ್ಯಾತರು ಎರಡನೆಯ ದರ್ಜೆಯ ಮನುಷ್ಯರಾಗುತ್ತಿದ್ದಾರಲ್ಲಾ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ದಲಿತರ ಶೋಷಣೆ, ಹತ್ಯೆ, ಅವಮಾನ ಇನ್ನೂ ಮುಂದುವರಿದಿದೆಯಲ್ಲ, ಅದರ ಬಗ್ಗೆ ಮಾತನಾಡಬೇಕು. ಅದಕ್ಕೆ ಎದೆಗಾರಿಕೆ ಬೇಕು. ಹರ್ಯಾಣ, ಪಂಜಾಬ್‌ಗಳಲ್ಲಿ ನಡೆಯುವ ಮರ್ಯಾದಾ ಹತ್ಯೆಗಳನ್ನು ವಿರೋಧಿಸಬೇಕು. ಅದಕ್ಕೆ ಎದೆಗಾರಿಕೆ ಬೇಕು. ಆದರೆ ಸ್ವತಃ ಕೇಜ್ರಿವಾಲ್ ಈ ಖಾಪ್ ಪಂಚಾಯತ್‌ಗಳ ಸಮರ್ಥಕನೂ ಹೌದು.  

ಮೋದಿಯನ್ನು ನರಹಂತಕ ಎಂಬ ಕಾರಣಕ್ಕೆ ವಿರೋಧಿಸಿ ಎಂದು ಸಾರ್ವಜನಿಕವಾಗಿ ಘೋಷಿಸುವ ಸಿದ್ದರಾಮಯ್ಯ ನನಗೆ ಇಷ್ಟವಾಗುತ್ತಾರೆ.  ಕೇಜ್ರಿವಾಲ್ ಬಗ್ಗೆ ಗೌರವ ಇದೆ. ಆದರೆ ಆಪ್‌ ಮೂಲಕ ಮಾಡುತ್ತಿರುವ ಈ ನೌಟಂಕಿ ಅವರು ನಿಲ್ಲಿಸಲೇಬೇಕು. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಸರಕಾರ ನಡೆಸಲಾಗದೆ ಓಡಿ ಹೋದವರಿಂದ ಈ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅರವಿಂದ ಕೇಜ್ರಿವಾಲ್ ಮತ್ತು ಆಪ್ ಬಗ್ಗೆ ಭಯಂಕರ ಎಕ್ಸೈಟ್ ಆಗಿ ಮಾತನಾಡುವವರು ಸದ್ಯಕ್ಕಂತೂ ನನಗೆ ಮೂರ್ಖರ ತರಹ ಕಾಣಿಸುತ್ತಿದ್ದಾರೆ.
ಅರವಿಂದ್ ಕೇಜ್ರಿವಾಲ್
ಶಶಿಧರ ಹೆಮ್ಮಾಡಿಯವರ ಫೇಸ್ ಬುಕ್ಕಿನಲ್ಲಿ ಓದಿದ ಈ ಲೇಖನದ ಎಲ್ಲ ಅಂಶಗಳನ್ನು ಒಪ್ಪುವುದು ನನಗೆ ಕಷ್ಟವೆನ್ನಿಸಿದರೂ ಕೆಲವಾದರೂ ಚರ್ಚೆಗೊಳಪಡುವ ಚಿಂತಿಸುವ ವಿಷಯಗಳಿರುವುದರಿಂದ 'ಹಿಂಗ್ಯಾಕೆ'ಯಲ್ಲಿ ಮರುಪ್ರಕಟಿಸುತ್ತಿದ್ದೇನೆ.

Apr 9, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 25



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಬಾಗ 24 ಓದಲು ಇಲ್ಲಿ ಕ್ಲಿಕ್ಕಿಸಿ
ಶೃಂಗೇರಿಗೆ ತಲುಪಿದಾಗ ಬೆಳಗಿನ ಜಾವ ಐದು ಘಂಟೆಯಾಗಿತ್ತು. ಮಂಜು ಕವಿದ ವಾತಾವರಣ; ಅಂಗಿಯ ಮೇಲೊಂದು ಸ್ವೆಟರ್ ಹಾಕಿಕೊಂಡಿದ್ದರೂ ಮೈ ನಡುಗಿಸುವ ಚಳಿಯಿತ್ತು. ಮುಂಜಾನೆ ಬರುವ ಪ್ರಯಾಣಿಕರಿಗಾಗಿಯೇ ಚಹಾ ಕಾಯಿಸುತ್ತಿದ್ದ ಪೆಟ್ಟಿ ಅಂಗಡಿಯ ಬಳಿ ಹೋಗಿ ಒಂದು ಕಪ್ ಚಾ, ಒಂದು ಸಿಗರೇಟ್ ತೆಗೆದುಕೊಂಡು ಕುಳಿತ ಸಯ್ಯದ್. ಆರು ಘಂಟೆಯ ಸುಮಾರಿಗೆ ದೇವಸ್ಥಾನದ ಮುಂಭಾಗಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು.

Apr 4, 2014

ವೊಡಾಫೋನ್ ಒದ್ದೋಡಿಸಿ.....

ಡಾ. ಅಶೋಕ್ ಕೆ ಆರ್. 
ಫೇಸ್ ಬುಕ್ಕಿನಲ್ಲಿ #vodafone_insults_kannada ದಿನೇ ದಿನೇ ಹಬ್ಬುತ್ತಲೇ ಇದೆ. ವೊಡಾಫೋನಿನ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ವೊಡಾಫೋನಿನಿಂದ ಬೇರೆ ಸಂಪರ್ಕಕ್ಕೆ ಪೋರ್ಟ್ ಮಾಡಿಸಿಕೊಳ್ಳುವಂತೆ ವಿನಂತಿಸಲಾಗುತ್ತಿದೆ ಮತ್ತು ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಷ್ಟೂ ಜನ ಪೋರ್ಟ್ ಮಾಡಲು ಕೇಳಿಕೊಂಡಿದ್ದರೆ ನೂರಾರು ಮಂದಿ ಗ್ರಾಹಕರನ್ನು ವೊಡಾಫೋನ್ ಕಳೆದುಕೊಳ್ಳಬೇಕಾಗುತ್ತದೆ.

Apr 2, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 24



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 23 ಓದಲು ಇಲ್ಲಿ ಕ್ಲಿಕ್ಕಿಸಿ
ಸುssss....ಯ್ ಬೀಸುತ್ತಿದ್ದ ಗಾಳಿಗೆ ತರಗಲೆಗಳು ಪಟ ಪಟ ಹೊಡೆದುಕೊಳ್ಳುತ್ತಿತ್ತು. ಕೆರೆಯ ನೀರು ತುಯ್ದಾಡುತ್ತಿತ್ತು. ಕುಕ್ಕರಹಳ್ಳಿ ಕೆರೆಯ ಒಂದು ದಡದಲ್ಲಿ ಯಾರೂ ಹೆಚ್ಚು ಓಡಾಡದ ದಾರಿಯಲ್ಲಿ ಕುಳಿತಿದ್ದರು ಲೋಕಿ ಮತ್ತು ಸಯ್ಯದ್. ಅದೇ ದಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಪೋಲೀಸ್ ಭವನದಲ್ಲಿ ರೂಪಾಳ ಮದುವೆ. ಬೇಸರ ಕಳೆಯಲು ಸಯ್ಯದ್ ಲೋಕಿಯನ್ನು ಕುಕ್ಕರಹಳ್ಳಿ ಕೆರೆಗೆ ಕರೆದುಕೊಂಡು ಬಂದಿದ್ದ.

Apr 1, 2014

ನಮೋನೂ ಅಲ್ಲ ರಾಗಾನೂ ಅಲ್ಲ ಆಡಳಿತ ನಡೆಸುವುದು ಕಾಂಚಾಣ.....

ಪ್ರಜಾವಾಣಿ ಪತ್ರಿಕೆಯಿಂದ
ಡಾ ಅಶೋಕ್ ಕೆ ಆರ್

ನಮ್ಮ ದೇಶದ ಆಡಳಿತ ನಡೆಸುವುದ್ಯಾರು? ಬಿಜೆಪಿ ಕಾಂಗ್ರೆಸ್ ತೃತೀಯ ರಂಗ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮೋದಿ, ಅಡ್ವಾಣಿ? ತತ್ವ ಸಿದ್ಧಾಂತಗಳ ಪಕ್ಷವೋ ಆದರ್ಶ ನೀತಿ ನಿಯಮಗಳ ವ್ಯಕ್ತಿಯೋ ದೇಶವನ್ನು ಮುನ್ನಡೆಸುತ್ತಾರೆಂಬುದು ನಮ್ಮ ಕನಸಷ್ಟೇ. ಪಾಶ್ಚಿಮಾತ್ಯ ದೇಶಗಳಲ್ಲಿ ಎಂದೋ ಘಟಸಿ ಅಲ್ಲಿನವರಲ್ಲಿ ಹೆಚ್ಚಿನವರು ಅದನ್ನೂ ಒಪ್ಪಿಯೂ ಮುಗಿದು ಹೋದ ಸಂಗತಿಗಳು ಭಾರತದಲ್ಲಿ ಈಗ ಬೆಳಕಿಗೆ ಬರುತ್ತಿವೆ. ಆಡಳಿತವಿರುವ ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ ಇರಲಿ ಸರಕಾರದ ನೀತಿ ನಿಯಮಗಳ ದಿಕ್ಕುದೆಸೆಗಳನ್ನು ನಿರ್ಧರಿಸುವವರು ಕೆಲವೇ ಕೆಲವು ಉದ್ಯಮಪತಿಗಳು.

ಹದಿನಾರನೇ ಲೋಕಸಭೆಗೆ ಕ್ಷಣಗಣನೆ - ವಿಚಾರಗಳು ಹಿಂದಾಗಿ ಗದ್ದಲಗಳೇ ವಿಜೃಂಭಿಸುವ ಚುನಾವಣೆಯ ಸಮಯ



ಡಾ ಅಶೋಕ್ ಕೆ ಆರ್
ವರುಷದ ಹಿಂದಿನಿಂದಲೇ ಪ್ರಾರಂಭವಾಗಿದ್ದ ಚುನಾವಣಾ ತಯಾರಿಗಳು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ವೇಗೋತ್ಕರ್ಷಕ್ಕೊಳಗಾಗಿವೆ. ಚುನಾವಣಾ ತಯಾರಿಗಳು ಆರಂಭಗೊಂಡ ದಿನದಿಂದಲೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ‘ಸಮರ’ ಎಂದೇ ಬಿಂಬಿಸಲಾಗುತ್ತಿತ್ತು. ಚುನಾವಣೆ ಘೋಷಣೆಯಾದ ನಂತರವಾದರೂ ವಿಷಯಾಧಾರಿತ ಚರ್ಚೆಗಳು ಮುನ್ನೆಲೆಗೆ ಬರದಿರುವುದು ನಮ್ಮ ಪ್ರಜಾಪ್ರಭುತ್ವ ಹಿಡಿಯುತ್ತಿರುವ ಜಾಡನ್ನು ತೋರುತ್ತಿದೆಯೇ? ಈಗಲೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಭಾಷಣಗಳಲ್ಲಿ ಕಾಂಗ್ರೆಸ್ ಮತ್ತದರ ನಾಯಕರ ಬಗೆಗಿನ ಅವಹೇಳನಕಾರಿ ಮಾತುಗಳು ಮತ್ತು ಕಾಂಗ್ರೆಸ್ಸಿಗರ ಭಾಷಣಗಳಲ್ಲಿ ನರೇಂದ್ರ ಮೋದಿ ಬಗೆಗಿನ ವ್ಯಂಗ್ಯಮಿಶ್ರಿತ ಕೆಲವೊಮ್ಮೆ ಅಸಂಬದ್ಧ ಮಾತುಗಳೇ ವಿಜೃಂಭಿಸುತ್ತಿದೆಯೇ ಹೊರತು ಅಧಿಕಾರಕ್ಕೆ ಬಂದರೆ ತಾವು ನೀಡಬಹುದಾದ ಆಡಳಿತದ ಮಾದರಿಯ ಬಗೆಗಿನ ವಿಚಾರಗಳು ಚರ್ಚೆಗೊಳಪಡುತ್ತಲೇ ಇಲ್ಲ. ಇವತ್ತಿನ ಚುನಾವಣಾ ಮಾದರಿ ಪ್ರಜಾಪ್ರಭುತ್ವದ ಅಣಕವಾಡುತ್ತಿದೆ.