ಆಗ 27, 2014

ಆದರ್ಶವೇ ಬೆನ್ನು ಹತ್ತಿ .... ಕೊನೆಯ ಕಂತು.



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 37 ಓದಲು ಇಲ್ಲಿ ಕ್ಲಿಕ್ಕಿಸಿ
ಉಳಿದ ಸದಸ್ಯರು ಪೋಲೀಸರು ಅಲ್ಲಿ ಕುಳಿತು ತಮ್ಮ ಪೊಸಿಷನ್ ತೆಗೆದುಕೊಳ್ಳುವಷ್ಟರಲ್ಲಿ ಹೊರಟು ಹೋಗಿದ್ದರು. ಕೈಯಲ್ಲಿಡಿದಿದ್ದ ಟಾರ್ಚಿನ ಬೆಳಕೇ ನಮಗೆ ಶತ್ರುವಾಗಿತ್ತು. ಅವರಿಗೆ ತೀರ ಸಮೀಪಕ್ಕೆ ಬರುವವರೆಗೂ ಸುಮ್ಮನಿದ್ದರು. ಅವರ ಹತ್ತಿರಕ್ಕೆ ಬರುತ್ತಿದ್ದಂತೆ ಪೋಲೀಸರಿಗೆ ಪ್ರೇಮ್ ನ ಹೆಗಲಿನಲ್ಲಿದ್ದ ಎ.ಕೆ.47 ಬಂದೂಕು ಕಾಣಿಸಿತು. “ಫೈರ್” ಪೋಲೀಸನೊಬ್ಬ ಕೂಗಿ ಮುಗಿಸುವಷ್ಟರಲ್ಲಿ ಪೋಲೀಸರು ಹಾರಿಸಿದ ಗುಂಡು ಪ್ರೇಮ್ ನ ಹಣೆ ಹೊಕ್ಕಿತು. ಒಂದು ಸಣ್ಣ ಕಿರುಚಾಟವನ್ನು ಮಾಡಿ ನೆಲಕ್ಕುರುಳಿದರು ಕಾ.ಪ್ರೇಮ್.

ಆಗ 20, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 37

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 36 ಓದಲು ಇಲ್ಲಿ ಕ್ಲಿಕ್ಕಿಸಿ


‘ಆತ್ಮ’ – ಕಥೆ
ಏನೆಂದರೆ ಏನೂ ಕೆಲಸ ಮಾಡದೆ ಸತ್ತು ಹೋಗ್ತೀನಿ ಅಂತ ಕನಸುಮನಸಿನಲ್ಲೂ ನಾನು ಎಣಿಸಿರಲಿಲ್ಲ. ನಮ್ಮ ಸಾವಿನಿಂದ ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ ಎಂಬುದೇನೋ ನಿಜ. ಆದರೆ..... ನಾ ಕಂಡ ಕನಸುಗಳಲ್ಲಿ ಕೊಂಚವನ್ನೂ ಸಾಧಿಸಲಾಗದೆ ಸತ್ತು ಹೋದೆನಲ್ಲಾ ಎಂಬುದನ್ನು ನೆನೆಸಿಕೊಂಡಾಗಲೆಲ್ಲಾ ಬೇಸರವಾಗುತ್ತದೆ. ಈ ಕಾಡಿಗೆ ಬರದೇ ಇದ್ದಲ್ಲಿ ಏನನ್ನಾದರೂ ಮಾಡಬಹುದಿತ್ತೇನೋ ಎಂದೊಮ್ಮೆಮ್ಮೆ ಅನ್ನಿಸುತ್ತದೆ. ನಾಡಿನಲ್ಲಿ ನಾ ನಡೆದುಕೊಂಡಿದ್ದ ರೀತಿಯಿಂದ ಅದೂ ಸಾಧ್ಯವಾಗುತ್ತಿರಲಿಲ್ಲವೇನೋ?

ಆಗ 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 36

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ


“ಏನ್ರೀ ಕೀರ್ತನ, ನೀವೂ ನನ್ನ ಜಾತೀನೇ” ಮನೆಯ ಹೊರಗಡೆ ಮುಖ ತೊಳೆಯುತ್ತ ನಿಂತ ಕೀರ್ತನಾಳ ಬಳಿ ಬಂದು ಕೇಳಿದ ಅರುಣ್.

“ನನ್ನ ಜಾತಿ ಯಾವುದು ಅಂತ ನಿಮಗ್ಯಾವಾಗ ತಿಳಿಸಿದೆ”

“ಅಯ್ಯಯ್ಯೋ ಜಾತಿ ಅಂದ್ರೆ ಹುಟ್ಟಿನಿಂದ ಬಂದಿದ್ದಲ್ಲ. ನಾವು ಸೇರಿದ ವೃತ್ತಿಯಿಂದ ಬಂದಿದ್ದು”

ಆಗ 6, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 35

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ


“ನಿಮ್ಮ ಹೆಸರು ಏನಾದ್ರೆ ನನಗೇನು? ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್ ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ, ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.

ಜುಲೈ 30, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 34



ಡಾ ಅಶೋಕ್ ಕೆ ಆರ್  
ಆದರ್ಶವೇ ಬೆನ್ನು ಹತ್ತಿ ಭಾಗ 33 ಓದಲು ಇಲ್ಲಿ ಕ್ಲಿಕ್ಕಿಸಿ
ಸ್ನೇಹಾಳಿಗೆ ಬಂದಿದ್ದ ಪತ್ರವನ್ನು ಓದಿದಳು ಪೂರ್ಣಿಮಾ. ಸಿಂಚನಾ ಕೂಡ ಓದಿದಳು. ಲೋಕಿ ಹೋಗಿದ್ದೆಲ್ಲಿಗೆ ಎಂದು ಈಗ ತಿಳಿಯಿತು. ಸ್ನೇಹ ಪೂರ್ಣಿಮಾಳ ಹೆಗಲನ್ನು ಆಸರೆಯಾಗಿಸಿಕೊಂಡು ಕುಳಿತಿದ್ದಳು. ಯಾರಿಗ್ಯಾರು ಸಮಾಧಾನಿಸಬೇಕೆಂದು ತಿಳಿಯಲಿಲ್ಲ.
“ನಿನಗೆ ಪತ್ರ ಯಾವಾಗ ತಲುಪಿತು ಸ್ನೇಹಾ?”
“ಈಗ ಒಂದರ್ಧ ಘಂಟೆಯಾಯಿತು. ನಿಮಗೆ?”

ಜುಲೈ 24, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 33

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 32 ಓದಲು ಇಲ್ಲಿ ಕ್ಲಿಕ್ಕಿಸಿ


ಬಸ್ ಶ್ರೀರಂಗಪಟ್ಟಣ ದಾಟಿ ಹಾಸನದ ಕಡೆಗೆ ಪಯಣ ಬೆಳೆಸಿತ್ತು. ‘ಎಂಥಾ ಜೀವನ ಇದು?! ಜೀವನದ ತುಂಬಾ ಅನಿಶ್ಚಿತತೆಯೇ ತುಂಬಿಕೊಂಡಿದೆಯಲ್ಲಾ. ಒಂದು ತಿಂಗಳ ಮುಂಚೆ ಕೀರ್ತನಾ ಯಾರೆಂಬುದೂ ತಿಳಿದಿರಲಿಲ್ಲ. ಭೇಟಿಯಾಗಿದ್ದು ಎರಡೇ ಬಾರಿ. ಎರಡನೇ ಬಾರಿಯಷ್ಟೇ ಇಬ್ಬರ ಮನಗಳೂ ತೆರೆದುಕೊಂಡಿದ್ದು. ಬರೀ ಅಷ್ಟಕ್ಕೆ ನಮ್ಮಿಬ್ಬರ ನಡುವೆ ಎಷ್ಟು ಗಾಢವಾದ ಸಂಬಂಧ ಬೆಳೆದಿದೆ. ಈ ಸಂಬಂಧಕ್ಕೆ ಏನು ಅರ್ಥ? ಏನು ಹೆಸರು? ಎರಡು ಬಾರಿ ಭೇಟಿಯಾದವನನ್ನು ನಂಬಿ ನನ್ನ ಜೊತೆ ಬಂದಿದ್ದಾಳೆಂದರೆ ನಮ್ಮ ಸಂಬಂಧದ ಮೇಲೆ ಆಕೆಗೆ ಎಷ್ಟು ಧೃಡ ನಂಬಿಕೆಯಿರಬೇಕು’ ಬೀಸುವ ಗಾಳಿಗೆ ಮುಖವೊಡ್ಡಿ ಕುಳಿತ ಲೋಕಿ ಯೋಚನೆಗಳಲ್ಲಿ ಮುಳುಗಿದ್ದ. ಕೀರ್ತನಾ ಆತನ ತೊಡೆಯ ಮೇಲೆ ಮಲಗಿದ್ದಳು. ಲೋಕಿ ಯೋಚನೆಗಳಿಂದ ಹೊರಬಂದಿದ್ದು ಕೀರ್ತನಾಳ ಕಣ್ಣೀರಹನಿಗಳು ಪ್ಯಾಂಟನ್ನು ತೋಯಿಸಿದಾಗ.

ಜುಲೈ 17, 2014

ಆದರ್ಶವೇ ಬೆನ್ನು ಹತ್ತಿ.... ಭಾಗ 32

 
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 31 ಓದಲು ಇಲ್ಲಿ ಕ್ಲಿಕ್ಕಿಸಿ
ಒಮ್ಮೆಯೂ ನೋಡದಿರೋ ಅಗಾಧ ಕಾಡಿನಲ್ಲಿ ನಕ್ಸಲರ ಸಂಪರ್ಕ ಸಾಧಿಸುವುದು ಹೇಗೆ? ರಸ್ತೆಯ ಯಾವುದಾದರೂ ಭಾಗದಿಂದ ಕಾಡಿನೊಳಗೇನೋ ಪ್ರವೇಶಿಸಬಹುದು. ಪರಿಚಯವೇ ಇರದ ದಟ್ಟ ಅರಣ್ಯದಲ್ಲಿ ಕಣ್ಣಿದ್ದೂ ಕುರುಡರಂತಾಗುತ್ತೇವೆಯೇ ಹೊರತು ನಕ್ಸಲರ ಸಂಪರ್ಕ ಸಾಧಿಸುವುದು ದೂರದ ಮಾತು. ಏನು ಮಾಡೋದು ಈಗ? 

ಜುಲೈ 8, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 31

hingyake
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 30 ಓದಲು ಇಲ್ಲಿ ಕ್ಲಿಕ್ಕಿಸಿ


“ಸಾರಿ. ಸ್ವಲ್ಪ ಹೆಚ್ಚೆನಿಸುವಷ್ಟೆ ಭಾವುಕನಾಗಿಬಿಟ್ಟೆ” ಎಂದ. ಈಗಲೂ ಕೀರ್ತನಾಳ ಹಸ್ತವೇ ಮಾತನಾಡಿತು.
“ನನ್ನ ವಿಷಯವೇನೋ ಹೇಳಾಯ್ತು. ನಿನ್ನ ಸಮಾಚಾರ ಹೇಳು. ರಾಜೀವ್ ದೀಕ್ಷಿತರಿಂದ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕೆಂದು ತೀರ್ಮಾನಿಸಿದೆ ಅನ್ನೋದು ತಿಳಿಯಿತು. ಆದರೆ ನಿನಗ್ಯಾಕೆ ನಕ್ಸಲ್ ತತ್ವಗಳಲ್ಲಿ ಆಸಕ್ತಿ ಬಂತು?”

ಜೂನ್ 30, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 30



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 29 ಓದಲು ಇಲ್ಲಿ ಕ್ಲಿಕ್ಕಿಸಿ
“ಇನ್ನೂ ಒಂದು ತಿಂಗಳು ಏನು ಮಾಡೋದು ಲೋಕಿ?” ದುಗುಡ ತುಂಬಿದ ದನಿಯಲ್ಲಿ ಕೇಳಿದಳು ಪೂರ್ಣಿಮಾ.

ಮೇ 7, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 29

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 28 ಓದಲು ಇಲ್ಲಿ ಕ್ಲಿಕ್ಕಿಸಿ

ತರಗತಿಗಳನ್ನು ಮುಗಿಸಿಕೊಂಡು ಎಲ್ಲರೂ ಮನೆಯತ್ತ ಹೊರಟಿದ್ದರು. ಪೂರ್ಣಿಮಾ ಲೋಕಿಯೊಡನೆ ಕಾರಿಡಾರಿನಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಳು.
“ಥ್ಯಾಂಕ್ಸ್ ಲೋಕಿ” ಎಂದಳು.
“ಯಾಕೆ?”

ಮೇ 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 28

 ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ

ನಗರ ಕೇಂದ್ರ ಗೃಂಥಾಲಯ. ತರಾಸುರವರ ತಿರುಗುಬಾಣವನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾಳೆ ಕೀರ್ತನಾ. ಒಂದು ಪುಟ ಓದ್ತಾಳೆ; ನಂತರ ಪುಸ್ತಕ ಜೋಡಿಸಿದ್ದ ಸಾಲಿನತ್ತ ನೋಡುತ್ತಾ ಅಲ್ಲಿರೋ ಜನರನ್ನು ನೋಡಿ ಬೇಸರಪಟ್ಟು ಮತ್ತೊಂದು ಪುಟ ತಿರುವುತ್ತಾ ಓದುವುದರಲ್ಲಿ ಮಗ್ನಳಾಗುತ್ತಾಳೆ. ಅವಳು ಗೃಂಥಾಲಯಕ್ಕೆ ಬರುತ್ತಿರುವುದು ಇದು ಎರಡನೆಯ ಬಾರಿ. ಮೊದಲ ಬಾರಿ ಬಂದಾಗ ಧೈರ್ಯ ಸಾಲದೆ ಅಂದುಕೊಂಡ ಕೆಲಸವನ್ನು ಸಾಧಿಸದೇ ವಾಪಸ್ಸಾಗಿದ್ದಳು.

ಏಪ್ರಿ 23, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 27

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ


‘ಘಟ್ಟಗಳಲ್ಲಿ ನಕ್ಸಲ್ ಚಳುವಳಿ ಬಲವಾಗಿ ಬೇರೂರುತ್ತಿದೆ’ ಎಂದು ಗುಪ್ತಚರರು ಸರ್ಕಾರಕ್ಕೆ ಅನೇಕ ಬಾರಿ ವರದಿ ಕಳುಹಿಸಿದ್ದರು. ಎಲ್ಲಾ ವಿಷಯಗಳಲ್ಲೂ ನಿರ್ಲಕ್ಷ್ಯ ತೋರುವ ಸರ್ಕಾರಕ್ಕೆ ಆ ವರದಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದೆನಿಸಲೇ ಇಲ್ಲ. ಎಲ್ಲಾ ವರದಿಗಳಂತೆ ಅದೂ ಧೂಳು ತಿನ್ನುತ್ತಾ ಕುಳಿತುಕೊಂಡಿತ್ತು. ಆದರೆ ಪತ್ರಿಕಾ ವರದಿಗಳು ಸರ್ಕಾರವನ್ನು ಬೆಚ್ಚಿಬೀಳಿಸಿದವು. ನಕ್ಸಲ್ ಚಳುವಳಿಯಿರಲಿ, ದೇಶದಲ್ಲಿ ನಡೆದ, ನಡೆಯುತ್ತಿರುವ ಯಾವೊಂದು ಚಳುವಳಿಯ ಒಳ ಹೊರಗು; ಆಗು ಹೋಗುಗಳು ಗೊತ್ತಿಲ್ಲದ ರಾಜಕಾರಣಿಗಳೆಲ್ಲಾ ದಿನಕ್ಕೊಂದು ಮಾತನ್ನಾಡಲಾರಂಭಿಸಿದವು.

ಏಪ್ರಿ 15, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 26



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 25 ಓದಲು ಇಲ್ಲಿ ಕ್ಲಿಕ್ಕಿಸಿ
ಪ್ರೇಮ್ ನ ವಾಗ್ಝರಿಗೆ ಪತ್ರಕರ್ತರೆಲ್ಲ ಅವಕ್ಕಾಗಿ ಕುಳಿತಿದ್ದರು. ಮೊದಲನೇ ಪ್ರಶ್ನೆಯನ್ನು ಸಯ್ಯದ್ ಕೇಳಿದ್ದ
“ಬಂದೂಕಿನಿಂದ ಬದಲಾವಣೆ ಅನ್ನೋದು ನಿಜಕ್ಕೂ ಸಾಧ್ಯವಾಗೋ ಕೆಲಸವಾ?”
“ನೀವೇ ಕಾದು ನೋಡಿ, ಒಂದೆರಡು ದಿನದಲ್ಲಲ್ಲದಿದ್ದರೂ ಕೆಲವು ವರುಷಗಳಲ್ಲಿ ಬದಲಾವಣೆ ಖಂಡಿತವಾಗ್ಯೂ ಆಗುತ್ತೆ”

ಏಪ್ರಿ 9, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 25



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಬಾಗ 24 ಓದಲು ಇಲ್ಲಿ ಕ್ಲಿಕ್ಕಿಸಿ
ಶೃಂಗೇರಿಗೆ ತಲುಪಿದಾಗ ಬೆಳಗಿನ ಜಾವ ಐದು ಘಂಟೆಯಾಗಿತ್ತು. ಮಂಜು ಕವಿದ ವಾತಾವರಣ; ಅಂಗಿಯ ಮೇಲೊಂದು ಸ್ವೆಟರ್ ಹಾಕಿಕೊಂಡಿದ್ದರೂ ಮೈ ನಡುಗಿಸುವ ಚಳಿಯಿತ್ತು. ಮುಂಜಾನೆ ಬರುವ ಪ್ರಯಾಣಿಕರಿಗಾಗಿಯೇ ಚಹಾ ಕಾಯಿಸುತ್ತಿದ್ದ ಪೆಟ್ಟಿ ಅಂಗಡಿಯ ಬಳಿ ಹೋಗಿ ಒಂದು ಕಪ್ ಚಾ, ಒಂದು ಸಿಗರೇಟ್ ತೆಗೆದುಕೊಂಡು ಕುಳಿತ ಸಯ್ಯದ್. ಆರು ಘಂಟೆಯ ಸುಮಾರಿಗೆ ದೇವಸ್ಥಾನದ ಮುಂಭಾಗಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತು.

ಏಪ್ರಿ 2, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 24



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 23 ಓದಲು ಇಲ್ಲಿ ಕ್ಲಿಕ್ಕಿಸಿ
ಸುssss....ಯ್ ಬೀಸುತ್ತಿದ್ದ ಗಾಳಿಗೆ ತರಗಲೆಗಳು ಪಟ ಪಟ ಹೊಡೆದುಕೊಳ್ಳುತ್ತಿತ್ತು. ಕೆರೆಯ ನೀರು ತುಯ್ದಾಡುತ್ತಿತ್ತು. ಕುಕ್ಕರಹಳ್ಳಿ ಕೆರೆಯ ಒಂದು ದಡದಲ್ಲಿ ಯಾರೂ ಹೆಚ್ಚು ಓಡಾಡದ ದಾರಿಯಲ್ಲಿ ಕುಳಿತಿದ್ದರು ಲೋಕಿ ಮತ್ತು ಸಯ್ಯದ್. ಅದೇ ದಿನ ಲಲಿತ್ ಮಹಲ್ ರಸ್ತೆಯಲ್ಲಿರುವ ಪೋಲೀಸ್ ಭವನದಲ್ಲಿ ರೂಪಾಳ ಮದುವೆ. ಬೇಸರ ಕಳೆಯಲು ಸಯ್ಯದ್ ಲೋಕಿಯನ್ನು ಕುಕ್ಕರಹಳ್ಳಿ ಕೆರೆಗೆ ಕರೆದುಕೊಂಡು ಬಂದಿದ್ದ.

ಮಾರ್ಚ್ 26, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 23

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 22 ಓದಲು ಇಲ್ಲಿ ಕ್ಲಿಕ್ಕಿಸಿ
ಇವೆಲ್ಲವೂ ನಡೆದುಹೋಗಿ ಆಗಲೇ ಏಳು ತಿಂಗಳಾಗಿ ಹೋಯಿತಲ್ಲ. ಕಾಲನ ವೇಗದಲ್ಲಿ ಚಲಿಸುವ ಶಕ್ತಿ ಯಾರಿಗೂ ಇಲ್ಲ ಎನ್ನಿಸಿತು ಲೋಕಿಗೆ. ಇವತ್ತಿಗೆ ನಾನು ಪೂರ್ಣಿ ಮಾತನಾಡಿ ಒಂದು ವರುಷವಾಯಿತಂತೆ. ಇವತ್ತಿನ ದಿನವೇ ಅವಳ ಜೊತೆ ಸರಿಯಾಗಿ ಮಾತನಾಡಲಿಲ್ಲವಲ್ಲ. ವಿಜಯ್ ಗಾದ ಅನ್ಯಾಯ; ತಂದೆ ದೊಡ್ಡವರೆನಿಸಿಕೊಂಡವರಿಗೆ ಹೆದರಿ ನಡೆದುಕೊಂಡ ರೀತಿ; ಆದರ್ಶಗಳಿಗೆ ವಿರುದ್ಧವಾಗಿ ನಿಂತು ಏನೊಂದೂ ಮಾತನಾಡದೆ ನಾನು ಸುಮ್ಮನಾಗಿಬಿಟ್ಟದ್ದು – ಇವೆಲ್ಲಾ ಮನಸ್ಸನ್ನು ಬಹಳ ತಿಂಗಳುಗಳ ನಂತರ ಮತ್ತೆ ಬೇಸರಕ್ಕೆ ದೂಡಿ ಬಿಟ್ಟಿತು.

ಮಾರ್ಚ್ 19, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 22



ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 21 ಓದಲು ಇಲ್ಲಿ ಕ್ಲಿಕ್ಕಿಸಿ
ಮೈಸೂರಿಗೆ ಬರುತ್ತಿದ್ದಂತಯೇ ಲೋಕಿ ಮನೆಗೂ ಹೋಗದೆ ನೇರ ಗೃಂಥಾಲಯಕ್ಕೆ ಹೋದ. ‘ಹಳೆ ಪತ್ರಿಕೆಗಳು ಎಲ್ಲಿವೆ’ ಎಂದು ಗೃಂಥಪಾಲಕರನ್ನು ಕೇಳಿ, ಪತ್ರಿಕೆಗಳಿದ್ದ ಜಾಗಕ್ಕೆ ಹೋಗಿ ‘ಬಾಂಬ್ ಎಸ್.ಐ’ ಮತ್ತು ISRAದ ಬಗ್ಗೆ ಬಂದಿದ್ದ ಪ್ರತಿಯೊಂದು ಮಾಹಿತಿಯನ್ನು ಓದಲಾರಂಭಿಸಿದ.

ಮಾರ್ಚ್ 9, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 21

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 20 ಓದಲು ಇಲ್ಲಿ ಕ್ಲಿಕ್ಕಿಸಿ


ಕೈಯಿಟ್ಟ ವ್ಯಕ್ತಿ ಎ.ಎಸ್.ಐ ರಾಮಸ್ವಾಮಿ!!
“ಉನ್ನದು ಎಂದ ಊರು” (ನಿನ್ನದ್ಯಾವ ಊರು)
“ಮೈಸೂರು” ನಡೆದ ಘಟನೆಗಳಿಂದ ಕೊಂಚ ಅಧೀರನಾಗಿದ್ದ ಲೋಕಿ ಮೆಲ್ಲನೆ ತಗ್ಗಿದ ದನಿಯಲ್ಲಿ ಉತ್ತರಿಸಿದ.
“ತಮಿಳ್ ತೆರಿಯುಮಾ?” (ತಮಿಳು ಬರುತ್ತಾ?)

ಮಾರ್ಚ್ 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 20

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ

"ಬಾಂಬ್’ ಎಸ್.ಐ ಬಂಧನ!”
ಲೋಕಿ ಸಿಂಚನಾಳ ಬಳಿ ಬಂದು “ಮಧುರೈಗೆ ಹೋಗಲು ಇದು ಸರಿಯಾದ ದಾರಿ ಅಲ್ವಂತೆ? ಕರ್ನಾಟಕ ರಿಜಿಸ್ಟ್ರೇಷನ್ ಇರೋ ಬಸ್ಸನ್ನೇ ಮಾಡಬಹುದಿತ್ತಲ್ವಾ?”
“ಕರ್ನಾಟಕ ರಿಜಿಸ್ಟ್ರೇಷನ್ ಇರೋ ಗಾಡಿ ಮಾಡಿದ್ದರೆ ಆರು ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕಿತ್ತು ತಮಿಳುನಾಡಿನಲ್ಲಿ. ಅದಿಕ್ಕೆ ಹೋಗೋದು ಸ್ವಲ್ಪ ಲೇಟಾದ್ರೂ ಪರವಾಗಿಲ್ಲ ಅಂತ ಈ ಬಸ್ಸನ್ನೇ ಮಾಡಿದ್ದು”

ಫೆಬ್ರ 21, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 19


ಡಾ ಅಶೋಕ್ ಕೆ ಆರ್
 ಆದರ್ಶವೇ ಬೆನ್ನು ಹತ್ತಿ .... ಭಾಗ 18 ಓದಲು ಇಲ್ಲಿ ಕ್ಲಿಕ್ಕಿಸಿ
“ನಾಳೆ ಟೂರಿಗೆ ಹೊರಡೋದಿಕ್ಕೆ ಎಲ್ಲಾ ಸಿದ್ಧ ಮಾಡಿಕೊಂಡಾ ಲೋಕಿ?”
“ನಾಳೆ ಸಂಜೆ ಹೊರಡೋದಲ್ವಾ, ನಾಳೆ ಮಧ್ಯಾಹ್ನ ಒಂದು ಮೂರು ಜೊತೆ ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಬಂದರೆ ಆಯಿತು”.