Dec 31, 2013

ಪುಟ ತಿರುವುವ ಮುನ್ನ



ಡಾ ಅಶೋಕ್ ಕೆ ಆರ್
ಮಾಧ್ಯಮ ಮತ್ತು ‘ಭವಿಷ್ಯಕರ್ತರು’ ಸೃಷ್ಟಿಸಿದ ಪ್ರಳಯದ ‘ಭೀತಿ’ ಅಸ್ತಂಗತವಾಗಿ ಒಂದು ವರುಷ ಕಳೆದು ಹೋಗಿ ಶತಮಾನಗಳಿಂದ ಸಹಜವೆಂಬಂತೆ ಒಪ್ಪಿಕೊಂಡಿದ್ದ ಗುಲಾಮತ್ವದ ಮನಃಸ್ಥಿತಿಯ ಸಮಾಜವನ್ನು  ಪ್ರಳಯರೂಪದಲ್ಲಿ ಬಂದು ಶುದ್ಧೀಕರಿಸಿದ ನೆಲ್ಸನ್ ಮಂಡೇಲಾರ ಸಾವಿನೊಂದಿಗೆ ಮತ್ತೊಂದು ವರುಷ ಉರುಳಿ ಹೋಗಿದೆ. ಹಿಂದಿನ ವರುಷಗಳಿಗೂ ಹೊಸ ವರುಷದ ಬರುವಿಕೆಗಾಗಿ ಕಾಯ್ದಿರುವ 2013ಕ್ಕೂ ಹೆಚ್ಚಿನ ವ್ಯತ್ಯಾಸಗಳಿವೆಯೇ?

ಕಲಿಕಾ ಮಾಧ್ಯಮ ವಿವಾದ

ವೆಂಕಟೇಶ ಮಾಚಕನೂರ, ನಿವೃತ್ತ ಶಿಕ್ಷಣ ಆಯುಕ್ತರು, ಧಾರವಾಡ
(ಕೃಪೆ - ಜಗದೀಶ್ ಕೊಪ್ಪ ರವರ ಫೇಸ್ಬುಕ್ ಪುಟ )
ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮ ಇರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗನ್ನೊಳಗೊಂಡ ಸಂವಿಧಾನಿಕ ಪೀಠದ ಮುಂದೆ ಜನೇವರಿ 21 ರಿಂದ ವಿಚಾರಣೆಗೆ ಬರಲಿರುವ ವಿಷಯ ಎಲ್ಲರಿಗೂ ಗೊತ್ತಿರಲು ಸಾಕು.

Dec 25, 2013

ನಿರೀಕ್ಷಿತ ಫಲಿತಾಂಶದಲ್ಲಿ ‘ಆಮ್ ಆದ್ಮಿ’ ಜಯಶಾಲಿ



ಡಾ ಅಶೋಕ್ ಕೆ ಆರ್.
ಪಂಚ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮುಂದಿನ ವರುಷ ನಡೆಯುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹೊಸ ಹುರುಪಿನಿಂದ ಮತ್ತಷ್ಟು ಆತ್ಮಾವಲೋಕನದಿಂದ ತಯ್ಯಾರಿ ನಡೆಸಲು ಬೇಕಾದ ಮಾರ್ಗದರ್ಶನವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕೆಲವರ ಪ್ರಕಾರ ಇದು ಮುಂದಿನ ಫೈನಲ್ ಲೋಕಸಭಾ ಚುನಾವಣಾ ಪೂರ್ವದಲ್ಲಿ ನಡೆದ ಸೆಮಿಫೈನಲ್! ದಕ್ಷಿಣದ ಯಾವೊಂದು ರಾಜ್ಯದಲ್ಲೂ ನಡೆಯದ, ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ನಡೆಯದ ಈ ಚುನಾವಣೆಯನ್ನು ಸೆಮಿಫೈನಲ್ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ?

Dec 17, 2013

ಭರವಸೆ ಮೂಡಿಸಿದ ಆಮ್ ಆದ್ಮಿಯ ಗೆಲುವು

ವಸಂತ್ ರಾಜು ಎನ್.
ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಅನೇಕ ಅಚ್ಚರಿಗಳಿಗೆ ಕಾರಣವಾಗುವುದರ ಮೂಲಕ ಈ ದೇಶದ ರಾಜಕಾರಣದ ದಿಕ್ಕನ್ನು ಬದಲಿಸುವ ಭರವಸೆಯನ್ನು ಮೂಡಿಸಿದೆ.

Dec 10, 2013

ಕಲ್ಪನಾತ್ಮಕ ಭ್ರಮೆಗಳೆಲ್ಲ ವಾಸ್ತವವಾಗುವ ವಿಷಮ ಘಳಿಗೆ...



ಡಾ ಅಶೋಕ್ ಕೆ ಆರ್
‘Twenty thousand leagues under sea’ – ನಾನು ಓದಿದ ಪ್ರಥಮ ಪಠ್ಯೇತರ ಪುಸ್ತಕ. ಜೂಲಿಸ್ ವರ್ನೆ ರಚನೆಯ ಈ ಫ್ರೆಂಚ್ ಕೃತಿಯಲ್ಲಿ ನಾಟಿಲಸ್ ಎಂಬ ಬೃಹತ್ ಗಾತ್ರದ ಸಮುದ್ರದ ಎಲ್ಲ ಭಾಗಗಳಲ್ಲೂ ಚಲಿಸುವ ಸಾಮರ್ಥ್ಯವಿರುವ ಸಬ್ ಮೆರೀನ್ ಇದೆ; ಸಬ್ ಮೆರೀನ್ ಮೂಲಕ ಸಮುದ್ರದಾಳದ ಚಿತ್ರ ವಿಚಿತ್ರ ವಿಸ್ಮಯಕಾರಿ ಜೀವಿಗಳ ಪರಿಚಯ ಮಾಡಿಸುತ್ತಾನೆ ಲೇಖಕ. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಖುದ್ದು ನಾವೇ ಸಮುದ್ರದೊಳಗೆ ಈಜಾಡಿ ಬಂದಂತಹ ಅನುಭವವಾಗುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ಎಷ್ಟೋ ದಿನಗಳ ಮೇಲೆ ಆ ಇಡೀ ಪುಸ್ತಕ ಕಲ್ಪನೆಯಿಂದ ಮೂಡಿದ್ದು ಎಂಬ ಸತ್ಯ ತಿಳಿಯಿತು!! 1870ರಲ್ಲಿ ಜೂಲಿಸ್ ವರ್ನೆ ಆ ಪುಸ್ತಕ ರಚಿಸಿದಾಗ ‘ನಾಟಿಲಸ್’ ಸಾಮರ್ಥ್ಯದ ಸಬ್ ಮೆರೀನ್ ಇರಲೇ ಇಲ್ಲ! ಪುಸ್ತಕದಲ್ಲಿದ್ದ ಕಲ್ಪಿತ ತಾಂತ್ರಿಕ ವಿವರಗಳನ್ನು ಕಾಲಾಂತರದಲ್ಲಿ ನಿಜಕ್ಕೂ ಅಳವಡಿಸಿಕೊಳ್ಳಲಾಯಿತು! ನ್ಯೂಕ್ಲಿಯರ್ ಇಂಧನ ಮೂಲದಿಂದ ಚಲಿಸಬಲ್ಲ ತನ್ನ ಪ್ರಥಮ ಸಬ್ ಮೆರೀನಿಗೆ ಅಮೆರಿಕ ‘ನಾಟಿಲಸ್’ ಎಂದೇ ನಾಮಕರಣ ಮಾಡಿತು! ಇಷ್ಟೇ ಅಲ್ಲದೆ ಲೇಖಕನ ಕಲ್ಪನೆಯಲ್ಲಿ ಸೃಷ್ಟಿಯಾದ ಅನೇಕ ಜೀವಿಗಳನ್ನು ಹೋಲುವಂತಹ ಸಮುದ್ರಜೀವಿಗಳನ್ನೂ ನಂತರದಲ್ಲಿ ಪತ್ತೆ ಹಚ್ಚಲಾಯಿತು!

Dec 1, 2013

6-5=2 ಚಿತ್ರ ವಿಮರ್ಶೆ

ಡಾ ಅಶೋಕ್ ಕೆ ಆರ್

ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.

Nov 26, 2013

ನೋಡುವ ‘ದೃಷ್ಟಿ’ ಬದಲಿಸಬಲ್ಲ ‘ನೈನ್ ಲೈಫ್ಸ್’



ಡಾ ಅಶೋಕ್ ಕೆ ಆರ್

ಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives).

Nov 21, 2013

ಕೇವಲ ಮನುಷ್ಯನಾಗುವುದೆಂದರೆ....

ದೇವನೂರ ಮಹಾದೇವ
(ಕೃಪೆ: ಚಂದ್ರಶೇಖರ್ ಐಜೂರರ ಫೇಸ್ಬುಕ್ ಪುಟ )
ಕನ್ನಡ ಕಾದಂಬರಿ 'ಇಂದಿರಾಬಾಯಿ'ಗೆ ಇಂದಿಗೆ ನೂರು ವರ್ಷ. ಈ ನೂರು ವರ್ಷಗಳಲ್ಲಿ ಶ್ರೇಷ್ಠವಾದ ಕಾದಂಬರಿ ಯಾವುದು ಎಂದು ತಿರುಗಿ ನೋಡಿದಾಗ- ಅದು 'ಮಲೆಗಳಲ್ಲಿ ಮದುಮಗಳು'. ಈ ಎರಡೂ ಕೃತಿಗಳಿಗೂ ಕೃತಜ್ಞತೆ ಸಲ್ಲಿಸುವುದರ ಮೂಲಕ ಮಂಗಳೂರು ವಿಶ್ವವಿದ್ಯಾಲಯ ಏರ್ಪಡಿಸಿರುವ- 'ಯಜಮಾನ್ಯ ಮತ್ತು ಪ್ರತಿರೋಧದ ನೆಲೆ' ಎಂಬ ಈ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡುತ್ತಿದ್ದೇನೆ.

Nov 20, 2013

ಧರ್ಮ ಮರೆತ ನಾಡಿನಲ್ಲಿ....



ಡಾ ಅಶೋಕ್ ಕೆ ಆರ್.

ಅದು ದೈವಗಳ ನಾಡು, ಧಾರ್ಮಿಕತೆಯ ಧರ್ಮಸೂಕ್ಷ್ಮರ ನಾಡು. ಅದು ದಕ್ಷಿಣ ಕನ್ನಡ. ಹಸಿರ ಪರಿಸರದಲ್ಲಿ ಕಾನನದ ನಡುವೆ ಅರಳಿರುವ ಊರು. ದಟ್ಟ ಕಾನನ ನಮ್ಮ ಪೂರ್ವಿಕರಿಗೆ ಹುಟ್ಟಿಸಿದ ಭೀತಿಯ ಕಾರಣದಿಂದಲೋ ಏನೋ ಇಲ್ಲಿರುವ ದೇವಳಗಳ ಸಂಖೈಯೂ ಅಧಿಕ. ದೈವಾರಾಧನೆಯ ಜೊತೆಜೊತೆಗೆ ಭೂತಾರಾಧಾನೆ ಕೂಡ ಇಲ್ಲಿನ ವಿಶೇಷ. ಶಿಕ್ಷಿತರ ಅನುಪಾತ ಗಮನಿಸಿದಾಗ ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ. ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಉತ್ತಮ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ನಾಗರೀಕತೆಯ ಅತ್ಯುನ್ನತ ಮಜಲನ್ನು ಕಾಣಬೇಕಿತ್ತು ಆದರೆ ಧಾರ್ಮಿಕ ಮೂಲಭೂತವಾದತನ ಇಲ್ಲಿರುವ ಎಲ್ಲ ಧರ್ಮಗಳಲ್ಲೂ ಸಮಾನರೀತಿಯಲ್ಲಿ ಪ್ರವಹಿಸುತ್ತ ದಕ್ಷಿಣ ಕನ್ನಡಕ್ಕೆ ಮೂಲಭೂತವಾದಿಗಳ, ಸಂಕುಚಿತ ಮನೋಭಾವದವರ ಊರೆಂಬ ಅಪಖ್ಯಾತಿ ದೊರೆಯುವಂತೆ ಮಾಡಿಬಿಟ್ಟಿರುವುದು ದುರಂತ. ಒಂದು ಅಪರಾಧಕ್ಕೆ ಸಿಗುವ ಪ್ರತಿಕ್ರಿಯೆ ಅಪರಾಧಿಯ ಧರ್ಮವನ್ನಾಧರಿಸುತ್ತದೆಯೇ ಹೊರತು ಅಪರಾಧಿಯ ಕೃತ್ಯಕ್ಕಲ್ಲ ಎಂಬುದೇ ಇಲ್ಲಿನ ದುರಂತ.

Nov 9, 2013

ಗಾನ ಮುಗಿಸಿದ ಮನ್ನಾ ಡೇ



ಡಾ ಅಶೋಕ್ ಕೆ ಆರ್
ಭಾರತೀಯ ಚಲನಚಿತ್ರಗಳಿಗೂ ಸಂಗೀತ – ಹಾಡಿಗೂ ಬಿಡಿಸಲಾರದ ನಂಟು. ವಿಶ್ವದ ಇತರೆ ಚಿತ್ರೋದ್ಯಮಕ್ಕೂ ನಮ್ಮ ವಿವಿಧ ಚಿತ್ರೋದ್ಯಮಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವಿದು. ನಮ್ಮಲ್ಲೂ ಅಲ್ಲೊಂದು ಇಲ್ಲೊಂದು ಪ್ರಾಯೋಗಿಕವಾಗಿ ಹಾಡಿಲ್ಲದ ಚಿತ್ರಗಳು ಬರುತ್ತವಾದರೂ ಅವುಗಳ ಸಂಖೈ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದು ಹಾಸ್ಯ ಚಿತ್ರವಿರಲಿ, ಸಾಹಸ ಪ್ರಧಾನವಿರಲಿ, ಒಂದು ಗಂಭೀರ ಕಥೆಯ ಚಿತ್ರವಾಗಲಿ ಹಾಡುಗಳಿಲ್ಲದೆ ಭಾರತೀಯ ಚಿತ್ರಗಳು ಅಷ್ಟಾಗಿ ರುಚಿಸುವುದಿಲ್ಲ. ಶಾಸ್ತ್ರೀಯ ಸಂಗೀತ, ರಾಕ್ ಪಾಪ್ ಸಂಗೀತಗಳು ಸೀಮಿತ ಆಸಕ್ತ ಜನರನ್ನು ಮಾತ್ರ ತಲುಪಿದರೆ ಎಲ್ಲ ರೀತಿಯ ಸಂಗೀತವನ್ನು ತನ್ನದೇ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಸಿನಿಮಾರಂಗದ್ದು. ಸಂಗೀತದೊಡನೆ ಬೆರೆತ ಸಾಹಿತ್ಯವನ್ನು ಜನರ ಮನ ಮುಟ್ಟಿಸಿದ್ದು ಅತ್ಯಮೋಘ ಗಾಯಕರು.

Nov 8, 2013

ಅತ್ಯಾತುರದ ಬದುಕಿನಲ್ಲಿ ಚಿಂತನೆಗಳ ಅಬಾರ್ಷನ್!



ಡಾ ಅಶೋಕ್ ಕೆ ಆರ್.
‘ನಮ್ಮೂರ ತಿಂಡಿ’ ಎದುರಿಗಿನ ಅಂಡರ್ ಪಾಸ್. ಸಮಯ ರಾತ್ರಿ ಎಂಟು ಘಂಟೆ. ಗೆಳೆಯನೊಬ್ಬನನ್ನು ನೋಡಲು ಬೈಕಿನಲ್ಲಿ ಹೋಗುತ್ತಿದ್ದೆ. ಅಂಡರ್ ಪಾಸ್ ಕೆಳಗಿನ ಜಂಕ್ಷನ್ನಿನಲ್ಲಿ ಎಡಬದಿಯಿಂದೊಂದು ಆಟೋ ಬರುತ್ತಿತ್ತು. ಬೈಕ್ ನಿಧಾನಿಸಿದೆ. ಆಟೋ ರಸ್ತೆಯ ಮಧ್ಯೆ ಬಂದು ಮುಂದೆ ಹೋಗದೆ ನಿಂತುಬಿಟ್ಟಿತು. ‘ಥೂ ಈ ಆಟೋದವ್ರು...’ ಎಂದು ಮನದಲ್ಲೇ ಬಯ್ದುಕೊಂಡು ಹಾರ್ನ್ ಒತ್ತಿದೆ. ಪೀಕ್ ಅವರ್ರಿನ ಟ್ರಾಫಿಕ್ಕಿನಲ್ಲಿ ಮನೆಗೆ ಹೋಗಲವಣಿಸುತ್ತಿದ್ದ ನನ್ನ ಜೊತೆಯಿದ್ದ ಇತರೆ ವಾಹನದವರೂ ಹಾರ್ನ್ ಒತ್ತುವುದರಲ್ಲಿ ಹಿಂದೆ ಬೀಳಲಿಲ್ಲ. ಎರಡು ನಿಮಿಷದ ಸತತ ಹಾರ್ನ್ ಹಾವಳಿಯ ನಂತರ ಆಟೋ ನಿಧಾನಕ್ಕೆ ಮುಂದೆ ಸಾಗಿತು. ಆಟೋ ದಾಟಿ ಹೋಗುತ್ತಿದ್ದವನಿಗೆ ನಾಚಿಕೆಯಾಯಿತು.

Nov 5, 2013

ಭಾಷೆಯೊಂದರ ಜನನ ಮರಣದ ಸುತ್ತ...


ಡಾ ಅಶೋಕ್ ಕೆ ಆರ್


ಭಾವನೆಗಳ ಅಭಿವ್ಯಕ್ತಿಗೆ, ಸಂವಹನದ ಸರಾಗತೆಗಾಗಿ ಹುಟ್ಟಿದ್ದು ಭಾಷೆ. ಶಬ್ದ, ಮುಖದ ಹಾವಭಾವಗಳ ಮುಖಾಂತರ ಭಾವನೆಗಳು ವ್ಯಕ್ತವಾಗುವುದಕ್ಕೂ ಮುಂಚಿತವಾಗಿ ಕೈಸನ್ನೆ ‘ಭಾಷೆ’ಯಾಗಿ ಬಳಕೆಯಾಗುತ್ತಿತ್ತು ಎಂದು ತಿಳಿಸುತ್ತದೆ ಮಾನವನ ನಿಕಟ ಸಂಬಂಧಿ ಚಿಂಪಾಂಜಿಯ ಮೇಲೆ ನಡೆದ ಕೆಲವು ವೈಜ್ಞಾನಿಕ ಅಧ್ಯಯನಗಳು. ಕೈಸನ್ನೆ, ಹಾವಭಾವಗಳೆಲ್ಲ ಸಮ್ಮಿಲನಗೊಂಡು ಶಬ್ದಕ್ಕೊಂದು ಮಾಧುರ್ಯ ದೊರೆತು ಹುಟ್ಟಿದ್ದು ಮನುಷ್ಯ ಭಾಷೆ. ಸಾವಿರಾರು ವರುಷಗಳ ಹಿಂದೆ ಪ್ರಪಂಚದ ನಾನಾ ಕಡೆಗಳಲ್ಲಿ ನಾನಾ ರೂಪದಲ್ಲಿ ಹುಟ್ಟಿದ ಭಾಷೆಗೂ ಒಂದು ಆಯಸ್ಸಿದೆ. ದಿನನಿತ್ಯದ ಸಂಗಾತಿಯಾಗಿ ತನ್ನನ್ನು ಬಳಸುವವರ ಸಂಖ್ಯೆ ಕಡಿಮೆಯಾಗಲು ಶುರುವಾದ ದಿನವೇ ಭಾಷೆಯ ಅವನತಿಯೂ ಪ್ರಾರಂಭವಾಗುತ್ತದೆ. ಸರಿಸುಮಾರು ಹತ್ತು ಸಾವಿರ ವರುಷಗಳ ಹಿಂದೆ ಅಂದಾಜು ಇಪ್ಪತ್ತು ಸಾವಿರ ಭಾಷೆಗಳಿದ್ದವು. ಸಂಪೂರ್ಣ ನಶಿಸುತ್ತ, ಮಗದೊಂದು ಭಾಷೆಯ ಜೊತೆಗೆ ಬೆರೆತು ಹೋಗಿ ಈಗ ಉಳಿದಿರುವ ಭಾಷೆಗಳ ಸಂಖೈ ಏಳು ಸಾವಿರ ಮಾತ್ರ. ಇನ್ನೂ ಆಘಾತದ ಅಂಶವೆಂದರೆ ಅಧ್ಯಯನವೊಂದರ ಪ್ರಕಾರ ಎರಡು ವಾರಕ್ಕೊಂದು ಭಾಷೆ ವಾರಸುದಾರರಿಲ್ಲದೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ! 2100ರ ವೇಳೆಗೆ ಇರುವ ಭಾಷೆಗಳಲ್ಲಿ ಅರ್ಧದಷ್ಟು ನಶಿಸುವ ಸಂಭವವಿದೆ!

Nov 3, 2013

ವೈದ್ಯಕೀಯ ನಿರ್ಲಕ್ಷ್ಯ ಮತ್ತು ಕೋರ್ಟ್ ತೀರ್ಪಿನ ಸುತ್ತಮುತ್ತ

medical-malpractice
ಡಾ ಅಶೋಕ್ ಕೆ ಆರ್ 

ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಅಬ್ಬಬ್ಬಾ ಎನ್ನಿಸುವ 6 ಕೋಟಿ ಪರಿಹಾರ ಘೋಷಿಸಿದೆ. ಪ್ರಕರಣ ದಾಖಲಾದ ದಿನದಿಂದ ಬಡ್ಡಿಯನ್ನೂ ಸೇರಿಸಿ ಕೊಡಬೇಕಿರುವುದರಿಂದ ಈ ಪರಿಹಾರದ ಮೊತ್ತ ಹನ್ನೊಂದು ಕೋಟಿಯನ್ನು ದಾಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಹದಿನೈದು ವರುಷಗಳ ಹಿಂದೆ ಮರಣಹೊಂದಿದ ಡಾ.ಅನುರಾಧಾ ಸಹಾರ ಪತಿ ಡಾ.ಕುನಾಲ್ ಸಹಾ ನಡೆಸಿದ ದೀರ್ಘ ಹೋರಾಟಕ್ಕೆ ಜಯ ಸಂದಿದೆ.

Oct 30, 2013

ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್

ಡಾ ಅಶೋಕ್ ಕೆ ಆರ್.

ಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”.

ಹಿಂದೂಗಳೆಲ್ಲ ಒಂದು! ಆದರೆ ಎಂದು??!

ಶಶಿಧರ್ ಹೆಮ್ಮಾಡಿ
ಹಿಂದೂಗಳೆಲ್ಲ ಒಂದು ಎಂಬ ಮಾತನ್ನು ಪದೇ ಪದೇ ಕೇಳುವ ಪ್ರಸಂಗಗಳು ಇತ್ತೀಚೆಗೆ ಹೆಚ್ಚುತ್ತಿದೆಯಾದರೂ ಈಗಲೂ ""   ವಿದ್ಯಾವಂತರೆಂಬ ಹೆಸರು ಗಳಿಸಿದ ಅನಕ್ಷರಸ್ಥರಿರುವ ಬಹುತೇಕ ಎಲ್ಲ ಊರುಗಳಲ್ಲಿ ದಲಿತರಿಗೆ ಮನೆ ಸಿಗುವುದು ಕಷ್ಟದ ಕೆಲಸ. ಗೆಳತಿಯೊಬ್ಬಳು ಹೇಳುತ್ತಿದ್ದಳು ಸ್ವಂತ ಮನೆಯಲ್ಲಿರುವ ಅವರಿಗೆ ಮನೆಗೆಲಸದವರು ಸಿಗುವುದೇ ಕಷ್ಟವಂತೆ, ಕಾರಣ ಅವರಿರುವ ಪ್ರದೇಶದಲ್ಲಿ ದಲಿತರ ಸಂಖೈ ಕಡಿಮೆ ಮತ್ತವರ ಮನೆಗೆ ಇತರೆ ಕೆಲಸದವರು ಬರಲಾಗದ್ದಕ್ಕೆ ಕಾರಣ ಗೆಳತಿ ದಲಿತ ಜಾತಿಗೆ ಸೇರಿದವಳು. ಫೇಸ್ ಬುಕ್ಕಿನಲ್ಲಿ ಶಶಿಧರ ಹೆಮ್ಮಾಡಿ ಬರೆದಿರುವ ಈ ಲೇಖನ ನೋಡಿದೆ. ಓದಿ ಪ್ರತಿಕ್ರಿಯಿಸಿ....

Oct 22, 2013

ನೂತನ ರಾಜ್ಯಕ್ಕೆ ನೂರಾರು ವಿಘ್ನಗಳು


         ಡಾ ಅಶೋಕ್ ಕೆ ಆರ್

ಚಿಕ್ಕ ರಾಜ್ಯಗಳು ಆಡಳಿತಕ್ಕೆ ಅಭಿವೃದ್ಧಿಗೆ ಅನುಕೂಲಕರವೆಂಬ ದೂರದೃಷ್ಟಿಯಿಂದ ಜಾರ್ಖಂಡ್, ಉತ್ತರಖಂಡ ಮತ್ತು ಚತ್ತೀಸಗಡ ರಾಜ್ಯಗಳನ್ನು 2000ದಲ್ಲಿ ರಚಿಸಲಾಯಿತು. ಕೆಲವೊಂದು ಸಂಗತಿಗಳಲ್ಲಿ ಈ ಚಿಕ್ಕ ರಾಜ್ಯಗಳು ತಮ್ಮ ಮಾತೃ ರಾಜ್ಯಗಳಿಗಿಂತ ಮುನ್ನಡೆದರೆ ಒಟ್ಟಾರೆಯಾಗಿ ದೊಡ್ಡ ರಾಜ್ಯಗಳನ್ನು ಒಡೆದು ಸಣ್ಣ ರಾಜ್ಯಗಳನ್ನು ರಚಿಸಿದ್ದು ರಾಜಕೀಯ ಪಕ್ಷಗಳಿಗೆ ಅಧಿಕಾರಕ್ಕೇರಲು ಅನುಕೂಲಕರವಾಗಿ ಮತ್ತಷ್ಟು ಅಧಿಕಾರಿ ವರ್ಗದವರಿಗೆ ಹೆಚ್ಚಿನ ಭ್ರಷ್ಟಾಚಾರ ಮಾಡಿಕೊಡಲು ಅನುವು ಮಾಡಿಕೊಟ್ಟಿತೇ ಹೊರತು ಚಿಕ್ಕ ರಾಜ್ಯದಿಂದ ಹೆಚ್ಚಿನ ಅಭಿವೃದ್ಧಿ ಎಂಬ ಭರವಸೆಗೆ ನಿರೀಕ್ಷಿತ ಮಟ್ಟದ ಯಶ ಸಿಕ್ಕಿಲ್ಲ. ಚಿಕ್ಕ ರಾಜ್ಯಗಳಿಂದ ಅಭಿವೃದ್ಧಿಯೆಂಬ ನೆಪವೊಡ್ಡಿ ಹೊಸ ರಾಜ್ಯಗಳ ಉದಯವಾಗಿದ್ದು ಒಂದು ಕಡೆಯಾದರೆ 1956ರಲ್ಲಿ ನಡೆದ ರಾಜ್ಯಗಳ ಪುನರ್ ವಿಂಗಡನೆ ಮತ್ತು ರಚನೆಯ ಸಮಯದಲ್ಲಿ ಬಲವಂತದ ವಿಲೀನಗಳು ನಡೆದುಹೋಗಿ ಪ್ರತ್ಯೇಕ ರಾಜ್ಯಕ್ಕೆ ಆ ಪ್ರಾಂತ್ಯದವರು ದಶಕಗಳಿಂದ ಹೋರಾಟಕ್ಕಿಳಿಯುವಂತೆ ಮಾಡಿದ್ದು ಮತ್ತೊಂದು ಕಡೆ. ಪ್ರತ್ಯೇಕ ರಾಜ್ಯಕ್ಕೆ ಹೋರಾಡಿದವರಿಗೆಲ್ಲ ಸ್ಪೂರ್ತಿಯಾದ ಹೋರಾಟ ತೆಲಂಗಾನ ರಾಜ್ಯಕ್ಕಾಗಿ ನಡೆದ ಹೋರಾಟ. ದಶಕಗಳ ರಕ್ತಸಿಕ್ತ ಹೋರಾಟಕ್ಕೆ ಜಯ ಸಿಕ್ಕಿದೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಜಾಮರ ಆಳ್ವಿಕೆಯಿಂದ ಹಿಡಿದು ತೆಲಂಗಾಣ ಉದಯಿಸುವವರೆಗೆ ಸಾವಿರಾರು ಜನರ ಬಲಿದಾನವಾಗಿದೆ.

Oct 11, 2013

ನೆರಳು



 ಡಾ ಅಶೋಕ್ ಕೆ ಆರ್

ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ ಪ್ರಚಂಡ ಬಿಸಿಲು. ಕಾರಿನ ಎಸಿಯೂ ಬಂದಾಗಿತ್ತು. ‘ಅಲ್ಲೇ ಮರದ ನೆರಳಿನಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ’ ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಮೂರಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ! ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ರಾತ್ರಿ ಪಾರ್ಟಿಯಲ್ಲಿ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡು ಮತ್ತೊಂದಷ್ಟು ನಕ್ಕ. ಅಳಿಲಿನ ಕಿಚಪಚ ಸದ್ದು ಕೇಳಿ ಕತ್ತು ತಿರುಗಿಸಿ ಹಿಂದೆ ನೋಡಿದ. ಅಳಿಲು ಕಂಡಿತು, ಆದರೆ ತನ್ನ ನೆರಳೇ ಮಾಯವಾಗಿತ್ತು!

Oct 6, 2013

ಗಿಮಿಕ್ಕು ಮಾಡುವುದಾದರೆ ಹೀಗೆ ಮಾಡಿ...!!!

Akshatha Humchadakatte
ಜನಾರ್ಧನ ಪೂಜಾರಿಯವರೇ , ಧನ್ಯವಾದಗಳು .
ನೀವು ಮಾಡಿದ ಕೆಲಸ ಬಹಳ ದೊಡ್ಡದು . ಎಷ್ಟು ದೊಡ್ಡದೆಂದರೆ ಅದು ಹೆಣ್ಣು ಕುಲಕ್ಕೆ ಮಾತ್ರವೇ ಅರ್ಥವಾಗುವಂತದ್ದು . ಇದನ್ನು ಗಿಮಿಕ್, ಸ್ಟಂಟ್ , ಮತ್ತೆ ಹೆಣ್ಣು ಮಕ್ಕಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವ ಪುರುಷ ಪ್ರಧಾನ ಸಮಾಜದ ಒಂದು ಪ್ರಯತ್ನ ... ಹೀಗೆ ಏನೇ ಹೀಗೆಳೆಯಲಿ

Oct 4, 2013

ಅಕ್ರಮದ ಅದಿರಿನಲ್ಲಿ ಸರ್ವರದೂ ಸಮಪಾಲು



 ಡಾ ಅಶೋಕ್ ಕೆ ಆರ್
ಅತ್ತ ಕಡೆ ಚೀನಾ ಒಂದೊಂದೆ ಹೆಜ್ಜೆ ಭಾರತದೆಡೆಗೆ ಇಟ್ಟಾಗಲೂ ಅವರ ಮರಾಮೋಸದ ಬಗ್ಗೆ, ನಮ್ಮ ನೆಲವನ್ನು ಕಬಳಿಸಬಯಸುವ ಅವರ ಆಕ್ರಮಣಕಾರಿ ನಡಾವಳಿಯ ಬಗ್ಗೆ ನಮ್ಮಲ್ಲಿ ಹತ್ತಾರು ರೀತಿಯ ಚರ್ಚೆಗಳು ಪ್ರಾರಂಭವಾಗಿಬಿಡುತ್ತದೆ. ಅದೇ ಸಮಯದಲ್ಲಿ ಇತ್ತ ಕಡೆ ನಮ್ಮದೇ ದೇಶದ ಜನತೆ ನಮ್ಮದೇ ದೇಶದ ಭೂಮಿಯನ್ನು ಅಗೆದು ಬರಿದು ಮಾಡಿ ಚೀನಾದಂತಹ ದೇಶಗಳಿಗೇ ರಫ್ತು ಮಾಡಿಬಿಡುತ್ತಾರೆ! ಚೀನಾದವರಿಗಿಂದ ನಾವು ಈ ದೇಶಕ್ಕೆ ಹೆಚ್ಚು ಮೋಸ ಮಾಡಿದ್ದೇವೆ ಎಂದು ಮೆರೆಯುತ್ತಿದ್ದ ಜನರಲ್ಲಿ ಕೆಲವರು “ಜನಾನುರಾಗಿಯಾಗಿ”(?) ಮತ್ತೆ ಮತ್ತೆ ಶಾಸಕ ಸ್ಥಾನ ಅಲಂಕರಿಸಿದ್ದಾರೆ. ಸಚಿವರಾದವರೂ ಇದ್ದಾರೆ! 2008, 2011ರ ಜುಲೈನಲ್ಲಿ ವರದಿ ನೀಡಿದ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತದ 2008ರ ವರದಿಯ ನಂತರ ಅಕ್ರಮ ಗಣಿಗಾರಿಕೆಯ ಕುರಿತು ಸುಪ್ರೀಂಕೋರ್ಟಿಗೆ ವರದಿ ನೀಡಿದ ಸಿಇಸಿ; ಇವೆಲ್ಲದರ ಸಹಾಯದಿಂದ ಮತ್ತಷ್ಟು ತನಿಖೆ ನಡೆಸಿದ ಸಿ.ಬಿ.ಐ ಗಣಿ ಹಗರಣದ ಪ್ರಮುಖ ಆರೋಪಿಗಳ ಮೇಲೆ ಎಫ್ ಐ ಆರ್ ದಾಖಲಿಸುತ್ತ, ವಿಚಾರಣೆಗೊಳಪಡಿಸುತ್ತ ಕೆಲವು ಆರೋಪಿಗಳನ್ನು ಜೈಲಿಗೂ ಅಟ್ಟುತ್ತಿದ್ದಾರೆ. ಮಣ್ಣು ಬಗೆದು ದೇಶಕ್ಕೇ ದ್ರೋಹ ಬಗೆದವರು ಜೈಲು ಸೇರುತ್ತಿರುವುದು ಸಂತಸದ ಸಂಗತಿ. 

Sep 23, 2013

Lunchbox - movie review

U Prashanth Nayak
It is a testament to the legend of Mumbai's Dabbawallahs that even a mistake on their part (less than one in every six million deliveries) results in an outstanding film. As Lunchbox's Aslam Sheikh resurrects his Ammi and says " Meri maa kehthi thi ke even the wrong train can take one to the right destination". In Maximum City dabbas and trains often go together, and here they take us on a delightful ride where the ending does not matter. So we get an exciting new director- Ritesh Batra who in his first full-length work engineers a cinematic repast in which he blends cinema verite with a warm winsome storyline.The knack lies in his sensitive observations,perfectly natural humour and particularly in his restraint - he thus admirably resists the temptation of emptying the entire kitchen's masalas into this Lunchbox.

ಇಂದು ಭವಿಷ್ಯದ ನರೇಂದ್ರ ಮೋದಿಯನ್ನು ಭೇಟಿ ಮಾಡಿದೆ!



Noel Chungigudde
ಎಂದಿನಂತೆ ಮನೆಯಿಂದ ಕುಂದಾಪುರದತ್ತ ಬರುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಶೆವರ್ಲೆ ಕಾರೊಂದು ರಸ್ತೆ ಬಿಟ್ಟು ಗದ್ದೆಗೆ ಜಿಗಿದು ಕೆಸರಿನಲ್ಲಿ ಹುದುಗಿ ಹೋಗಿರುವುದನ್ನು ಕಂಡೆ. ಓರ್ವ ಮಹಿಳೆ ಸೇರಿದಂತೆ ಅದರಲ್ಲಿದ್ದ ನಾಲ್ವರು ಕಾರನ್ನು ಗದ್ದೆಯಿಂದ ಹೇಗೆ ಹೊರತೆಗೆಯುವುದು ಎಂಬ ಚಿಂತೆಯಲ್ಲಿ ಮುಳುಗಿ ಕಾರಿನತ್ತ ದೃಷ್ಠಿ ನೆಟ್ಟುದಾರಿ ಕಾಣದಾಗಿದೆ ರಾಘವೇಂದ್ರನೇ, ಬೆಳಕ ತೋರಿ ನಡೆಸ ಬಾ ಯೋಗಿವರ್ಯನೆಎಂಬ ಮುಖಭಾವದಲ್ಲಿ ನಿಂತಿರುವುದನ್ನು ನೋಡಿ ನನ್ನ ವಾಹನ ನಿಲ್ಲಿಸಿ ಅವರತ್ತ ನಡೆದು ಹೋದೆ. ’ಎಲ್ಲರೂ ಸೇರಿ ಕಾರು ಎತ್ತಿದರೆ ಮೇಲೆ ಬಂದೀತೆಎಂದು ಪ್ರಯತ್ನ ಮಾಡೋಣವೇ ಎಂದೆ.

Sep 20, 2013

ಮಾಯೆಯೊಳಗಣ ಮಾಯೆ....




ಡಾ ಅಶೋಕ್ ಕೆ ಆರ್        
 ಹೊಸ ನಿರ್ದೇಶಕರಿಗೆ ಮತ್ತು ಕೆಲವು ಬಾರಿ ಯಶಸ್ವಿ ಚಿತ್ರ ಕೊಟ್ಟ ನಿರ್ದೇಶಕರಿಗೂ ತಾವು ಪ್ರೀತಿಯಿಂದ ಜತನದಿಂದ ಪೋಷಿಸಿ ಬೆಳೆಸಿದ ಕತೆಯನ್ನು ಚಲನಚಿತ್ರವಾಗಿಸಲು ನಿರ್ಮಾಪಕರು ಸಿಗುವುದಿಲ್ಲ. ಸಿದ್ಧ ಸೂತ್ರಗಳ ಚಿತ್ರ ಮಾಡುವಂತೆ, ರಿಮೇಕ್ ಚಿತ್ರ ಮಾಡುವಂತೆ, ಹತ್ತಾರು ಚಿತ್ರಗಳನ್ನು ನೋಡಿ ಕದ್ದು ರೀಲು ಸುತ್ತುವಂತೆ ಒತ್ತಾಯಿಸುವ ನಿರ್ಮಾಪಕರ ಸಂಖೈಯೇ ಅಧಿಕ. ಇನ್ನು ಅಪ್ಪಿ ತಪ್ಪಿ ಹೊಸತನದ ಚಿತ್ರಕ್ಕೆ ನಿರ್ಮಾಪಕರೊಬ್ಬರನ್ನು ಒಪ್ಪಿಸಿದರೂ ಈಗಾಗಲೇ ಚಾಲ್ತಿಯಲ್ಲಿರುವ ನಟರನ್ನೇನಾದರೂ ತಮ್ಮ ಚಿತ್ರದ ನಾಯಕ ನಟನ ಸ್ಥಾನಕ್ಕೆ ಕಲ್ಪಿಸಿಕೊಂಡುಬಿಟ್ಟಿದ್ದರೆ ಆ ನಾಯಕನನ್ನು ಒಪ್ಪಿಸುವಷ್ಟರಲ್ಲಿ ನಿರ್ದೇಶಕನಿಗೆ ಚಿತ್ರ ಮಾಡುವ ಆಸೆಯೇ ಹೊರಟುಹೋಗುತ್ತದೇನೋ!!

Sep 15, 2013

ಅರಾಜಕತೆ ಹರಡುವ ಅಧರ್ಮದ ವಕ್ತಾರರು



ಧರ್ಮದ ಹೆಸರಿನಲ್ಲಿ ಅಧಾರ್ಮಿಕತೆ ಹರಡುತ್ತ ಅಮಾಯಕರ ನೆತ್ತರು ಚೆಲ್ಲಿದ ಯಾಸಿನ್ ಭಟ್ಕಳ್ ಕಡೆಗೂ ಬಂಧನಕ್ಕೊಳಗಾಗಿದ್ದಾನೆ. ಸಹಚರ ಅಸಾದುಲ್ಲಾನೊಟ್ಟಿಗೆ ಭಾರತ ನೇಪಾಳ ಗಡಿಯಲ್ಲಿರುವ ಬಿಹಾರದ ಮೋತಿಹಾರಿಯಲ್ಲಿ ಭಾರತದ ತನಿಖಾ ದಳಕ್ಕೆ ಸಿಕ್ಕಿಬಿದ್ದಿದ್ದಾನೆ. ಅನೇಕ ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಬೇಕಾಗಿದ್ದ, ಇಂಡಿಯನ್ ಮುಜಾಹಿದ್ದೀನ್ ಎಂಬ ಕ್ರೂರ ಸಂಘಟನೆಯ ಸೃಷ್ಟಿ ಮತ್ತು ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಯಾಸಿನ್ ಭಟ್ಕಳನ ಬಂಧನದಿಂದ ಇಂಡಿಯನ್ ಮುಜಾಹಿದ್ದೀನ್ ಹಿನ್ನೆಡೆ ಅನುಭವಿಸಬಹುದಾದರೂ ಧರ್ಮದ ಹೆಸರಿನಲ್ಲಿ ಅಧರ್ಮದ ಕೊಳಚೆ ಹರಡುವ ಜನರಿರುವವರೆಗೆ ಮತ್ತಾ ಕೊಳಚೆ ತುಂಬಿಕೊಂಡು ಹಿಂಸೆಯ ಹರಡುವಿಕೆಯನ್ನೇ ಪ್ರಮುಖವಾಗಿಸಿಕೊಳ್ಳುವ ಯಾಸಿನ್ ಭಟ್ಕಳ್, ಅಸಾದುಲ್ಲಾ, ಅಬ್ದುಲ್ ಕರೀಮ್ ತುಂಡಾರಂಥಹ ಜನರಿರುವವರೆಗೆ ಇಂಡಿಯನ್ ಮುಜಾಹಿದ್ದೀನ್ ತರಹದ ಸಂಘಟನೆಗಳಿಗೆ ಸಾವೇ ಬರಲಾರದೇನೋ?

ಭಟ್ಕಳದಲ್ಲಿ ಜನವರಿ 15, 1983ರಲ್ಲಿ ಜರಾರ್ ಸಿದ್ದಿಬಾಪಾ ಮತ್ತು ರೆಹಾನಾಳ ಮಗನಾಗಿ ಹುಟ್ಟಿದವನ ಹೆಸರು ಮೊಹಮದ್ ಅಹ್ಮದ್ ಸಿದ್ದಿಬಾಪ, ಕುಖ್ಯಾತಿಗೊಂಡಿದ್ದು ಯಾಸಿನ್ ಭಟ್ಕಳ್ ಎಂಬ ಹೆಸರಿನಿಂದ. ಹತ್ತನೇ ತರಗತಿಯನ್ನು ಪಾಸು ಮಾಡಲಾಗದ ಯಾಸಿನ್ ತಂದೆಯೊಡನೆ ಬಟ್ಟೆ ವ್ಯಾಪಾರಕ್ಕೆಂದು 2005ರಲ್ಲಿ ದುಬೈಗೆ ತೆರಳುತ್ತಾನೆ. ಕುಟುಂಬದವರ ಪ್ರಕಾರ ಯಾಸಿನ್ ದುಬೈನಲ್ಲೇ ನಾಪತ್ತೆಯಾಗಿಬಿಡುತ್ತಾನೆ! ದುಬೈಗೆ ಹೋಗುವಷ್ಟರಲ್ಲೇ ಧಾರ್ಮಿಕ ಮೂಲಭೂತವಾದದೆಡೆಗೆ ಸೆಳೆಯಲ್ಪಟ್ಟಿದ್ದ ಯಾಸಿನ್ ಮತ್ತೆ ಭಾರತಕ್ಕೆ ಮರಳಿ ಬಂದು ಸಿಮಿ(student Islamic movement of india) ಸಂಘಟನೆ ಸೇರುತ್ತಾನೆ. ಅಷ್ಟರಲ್ಲಾಗಲೇ ತನ್ನ ಫ್ಯಾಸಿಸ್ಟ್ ಮನೋಭಾವದಿಂದ ಸಿಮಿ ನಿಷೇಧದ ಭೀತಿ ಎದುರಿಸುತ್ತಿತ್ತು. ಸಿಮಿಯ ನಿಷೇಧದ ಕಾರಣದಿಂದ ಸಿಮಿಯಲ್ಲಿದ್ದ ಮೂಲಭೂತವಾದಿಗಳು ಇಂಡಿಯನ್ ಮುಜಾಹಿದ್ದೀನ್ ಹುಟ್ಟು ಹಾಕಿದರು ಎಂದು ಹೇಳಲಾಗುತ್ತದೆಯಾದರೂ ಸಿಮಿಯ ‘ಕೇವಲ ಮಾತಿನ ಹೋರಾಟ’ದಿಂದ ಬೇಸತ್ತ ಯಾಸಿನ್ ಭಟ್ಕಳನಂಥವರು ಗನ್ನು ಬಾಂಬು ಹಿಡಿದು ಧರ್ಮದ “ರಕ್ಷಣೆಗೆ”(?) ಹೊರಟರೆಂಬ ಮತ್ತೊಂದು ವಾದವೂ ಇದೆ. ಅಬ್ದುಲ್ ಸುಭಾನ್ ಖುರೇಷಿ, ಸಫ್ದಾರ್ ನಗೋರಿ ಮುಂತಾದವರ ಜೊತೆ ಸೇರಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹುಟ್ಟು ಹಾಕುವಲ್ಲಿ ಮತ್ತದರ ಮೂಲಕ ಭಯೋತ್ಪಾದನೆ ಹರಡುವಲ್ಲಿ ಯಾಸಿನ್ ಪಾತ್ರವೂ ದೊಡ್ಡದು. ಇಂಥ ಯಾಸಿನ್ ಭಟ್ಕಳನ ಸೋದರರ ಪೈಕಿ ರಿಯಾಜ್ ಮತ್ತು ಇಕ್ಬಾಲ್ ಕೂಡ ಉಗ್ರಗಾಮಿತ್ವದೆಡೆಗೆ ಸೆಳೆದುಹೋಗಿ ಈಗ ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆದಿದ್ದಾರೆಂಬ ಸಂಶಯವಿದೆ.

ಬಂಧನದ ನಂತರ ಯಾಸಿನ್ ದೃಡಪಡಿಸಿರುವಂತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಎಲ್ಲ ದುಷ್ಕೃತ್ಯಗಳಿಗೆ ಪಾಕಿಸ್ತಾನದ ಐ.ಎಸ್.ಐ ಎಲ್ಲ ರೀತಿಯ ಬೆಂಬಲ ನೀಡುತ್ತದೆ. ಯಾಸಿನ್ ಭಟ್ಕಳನಂಥವರು ತಮ್ಮ ಅಧಾರ್ಮಿಕ ನೈಪುಣ್ಯದಿಂದ ಭಯೋತ್ಪಾದಕತೆಯ ದಾರಿಗೆ ಸೆಳೆಯುವ ಯುವಕರನ್ನು ಬಾಂಗ್ಲಾ, ನೇಪಾಳದ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿ ತರಬೇತುಗೊಳಿಸುತ್ತಿದ್ದರು. ಈ ತರಹದ ತರಬೇತಿ ಶಿಬಿರಗಳು ಕರ್ನಾಟಕದ ಕರಾವಳಿಯಲ್ಲಿ, ಕೇರಳದ ಕಾಡುಗಳಲ್ಲಿ ಕೂಡ ನಡೆಯುತ್ತಿದ್ದವು. ಪೋಲೀಸರ ಪ್ರಕಾರ ಚಿಕ್ಕಮಗಳೂರಿನ ಕಾಡಿನಲ್ಲಿ ಇಂತಹುದೊಂದು ಕ್ಯಾಂಪಿನ ಮೇಲೆ ದಾಳಿ ಮಾಡಿದಾಗ ಯಾಸಿನ್ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ. ಲಕ್ನೋ ಮೂಲದ ಇಮ್ರಾನೆಂದು ಸುಳ್ಳು ಹೇಳಿಕೊಂಡು ದೆಹಲಿಯ ಝಹೀದಾಳನ್ನು ವಿವಾಹವಾಗಿದ್ದ ಯಾಸಿನ್ ಬೆನ್ನು ಬಿದ್ದಿದ್ದ ಪೋಲೀಸರಿಂದ ತಪ್ಪಿಸಿಕೊಳ್ಳಲು ನಾನಾ ಹೆಸರೇಳಿಕೊಂಡು ಅಲೆಯುತ್ತಿದ್ದ. ಶಿವಾನಂದ್, ಇಮ್ರಾನ್ ಎಂದು ಅಲೆಯುತ್ತಿದ್ದ ಹತ್ತನೇ ತರಗತಿ ಅನುತ್ತೀರ್ಣವಾಗಿದ್ದ ಯಾಸಿನ್ ಬಂಧನಕ್ಕೊಳಗಾದಾಗ ಡಾ.ಶಾರುಖ್ ಹೆಸರಿನ ಯುನಾನಿ ವೈದ್ಯನಾಗಿದ್ದ!! ಬಾಂಬುಗಳ ಮೂಲಕ ಅಮಾಯಕರ ಪ್ರಾಣಹರಣ ಮಾಡುತ್ತಿದ್ದ ಯಾಸಿನ್ ಜೀವ ಉಳಿಸುವ ವೈದ್ಯನ ಸೋಗಿನಲ್ಲಿದ್ದಿದ್ದು ವ್ಯಂಗ್ಯವೇ ಸರಿ.

ಇಂಡಿಯನ್ ಮುಜಾಹಿದ್ದೀನ್ ಮೂಲಕ ನಡೆಸಿದ ದುಷ್ಕೃತ್ಯಗಳು ಅನೇಕಾನೇಕ. 2007ರ ನವೆಂಬರಿನಲ್ಲಿ ಉತ್ತರಪ್ರದೇಶದಲ್ಲಿ ಸತತ ಆರು ಬಾಂಬ್ ಸ್ಪೋಟದಿಂದ ಹದಿನೈದು ಜನರ ದುರ್ಮರಣ, ಮೇ 2008ರಲ್ಲಿ ಜೈಪುರದಲ್ಲಿ ಹದಿನೈದು ನಿಮಿಷದೊಳಗೆ ಸಿಡಿಸಿದ ಒಂಭತ್ತು ಬಾಂಬುಗಳಿಂದ ಅರವತ್ತಕ್ಕೂ ಹೆಚ್ಚು ಮಂದಿ ಸತ್ತು ಇನ್ನೂರಕ್ಕೂ ಅಧಿಕ ಮಂದಿ ಗಾಯಾಳುವಾದರು, ಅದೇ ವರುಷದಲ್ಲಿ ಬೆಂಗಳೂರು ಅಹಮದಾಬಾದ್, ದೆಹಲಿಯಲ್ಲಿ ಒಂದಾದ ನಂತರ ಒಂದು ಬಾಂಬ್ ಸ್ಪೋಟ ಮಾಡಿಸಿತ್ತು ಇಂಡಿಯನ್ ಮುಜಾಹಿದ್ದೀನ್.2010ರ ಫೆಬ್ರವರಿಯಲ್ಲಿ ಪುಣೆಯ ಜರ್ಮನಿ ಬೇಕರಿ ಬಾಂಬ್ ಬ್ಲಾಸ್ಟ್ ಪ್ರಕರಣ, ಸೆಪ್ಟಂಬರಿನಲ್ಲಿ ದೆಹಲಿಯ ಜಮಾ ಮಸೀದಿಯ ಬಳಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದು, ಡಿಸೆಂಬರಿನಲ್ಲಿ ಉತ್ತರಪ್ರದೇಶದ ವಾರಣಾಸಿಯಲ್ಲಿ ಬಾಂಬ್ ಸ್ಪೋಟ. 2011ರಲ್ಲಿ ಮುಂಬೈನಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಇಪ್ಪತ್ತಾರು ಮಂದಿಯ ದುರ್ಮರಣ. ಈ ವರುಷದ ಫೆಬ್ರವರಿಯಲ್ಲಿ ಹೈದರಾಬಾದಿನ ದಿಲ್ ಕುಷ್ ನಗರದಲ್ಲಿ ಮತ್ತು ತೀರ ಇತ್ತೀಚೆಗೆ ಬಿಹಾರದ ಭೋದಗಯಾದಲ್ಲಿ ನಡೆದ ಬಾಂಬ್ ಸ್ಪೋಟದಲ್ಲೂ ಕೂಡ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪಾತ್ರವಿದೆ ಎಂದು ಶಂಕಿಸಲಾಗಿದೆ. ಹೀಗೆ ದೇಶದ ನಾನಾ ಭಾಗಗಳಲ್ಲಿ ನಡೆದ ಹತ್ತಾರು ವಿಧ್ವಂಸಕ ಕೃತ್ಯಗಳ ಮುಖಾಂತರ ನೂರಾರು ಜನರ ಸಾವಿಗೆ ಕಾರಣವಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮಿದುಳಿನಂತೆ ಕಾರ್ಯನಿರ್ವಹಿಸುತ್ತಿದ್ದ ಯಾಸಿನ್ ಭಟ್ಕಳನ ಬಂಧನ ಭಾರತೀಯ ಪಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಸಿಕ್ಕ ಎರಡನೆ ದೊಡ್ಡ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ. ಮೊದಲ ಗೆಲುವು ಲಷ್ಕರ್ ಇ ತೊಯಬಾದ ಅಬ್ದುಲ್ ಕರೀಮ್ ತುಂಡಾನ ಬಂಧನ.

ಭಾರತ, ನ್ಯೂಜಿಲ್ಯಾಂಡ್, ಅಮೆರಿಕಾ, ಬ್ರಿಟನ್ ಇನ್ನು ಅನೇಕ ದೇಶಗಳಿಂದ ನಿಷೇಧಕ್ಕೊಳಗಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಯಾಸಿನ್ ಭಟ್ಕಳನ ಬಂಧನಕ್ಕೆ ದೇಶದ ವಿವಿಧ ಭಾಗದ ಪೋಲೀಸರು ಹತ್ತು ಹಲವು ಪ್ರಯತ್ನ ಮಾಡಿದ್ದರು.2009ರಲದಲಿ ಕೊಲ್ಕತ್ತಾದಲ್ಲೊಮ್ಮೆ ಖೋಟಾ ನೋಟಿನ ಹಗರಣವೊಂದರಲ್ಲಿ ಬಂಧಿತನಾಗಿದ್ದ ಯಾಸಿನ್ ದೆಹಲಿ ಪೋಲೀಸರು ಕೊಲ್ಕತ್ತಾಗೆ ಆಗಮಿಸುವುದರೊಳಗಾಗಿ ನಕಲಿ ಹೆಸರು ಹೇಳಿಕೊಂಡು ತಪ್ಪಿಸಿಕೊಂಡಿದ್ದ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ತರಬೇತಿ ಶಿಬಿರವೊಂದರಿಂದಲೂ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ. ತನ್ನ ಪಾಪದ ಕೆಲಸದ ಅರಿವಿದ್ದ ಯಾಸಿನ್ ಇಂಟರ್ನೆಟ್, ಈ-ಮೇಲ್ ಬಳಸುವುದಿರಲಿ ಮೊಬೈಲ್ ಫೋನನ್ನೂ ಬಳಸುತ್ತಿರಲಿಲ್ಲ. ವಿಧ್ವಂಸಕ ಕೃತ್ಯ ನಡೆಸಿದ ಬಳಿಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹೆಸರಿನಲ್ಲಿ ಪತ್ರಿಕಾ ಕಛೇರಿಗಳಿಗೆ ಈ-ಮೇಲ್ ಕಳುಹಿಸುವುದನ್ನೂ ವಿರೋಧಿಸುತ್ತಿದ್ದ ಯಾಸಿನ್. ಈ-ಮೇಲ್, ಇಂಟರ್ನೆಟ್ ಮೂಲಕ ಸಿಕ್ಕಿ ಬೀಳುವ ಸಾಧ್ಯತೆಗಳು ಅಧಿಕವೆಂಬುದು ಒಂದು ಕಾರಣವಾದರೆ, ದುಷ್ಕೃತ್ಯ ಮಾಡಿದ್ಯಾರೆಂದು ತಿಳಿಯದಿದ್ದರೆ ಪೋಲೀಸರು ಅಮಾಯಕ ಮುಸ್ಲಿಮರನ್ನು ಬಂಧಿಸುತ್ತಾರೆ ಅದರಿಂದ ನಮ್ಮ ಸಂಘಟನೆಗೆ ಮುಸ್ಲಿಮರ ಮಧ್ಯೆ ಹೆಚ್ಚೆಚ್ಚು ಬೆಂಬಲ ಸಿಗುತ್ತದೆ ಎಂಬ ಕುತಂತ್ರವೂ ಇತ್ತು. ಸಿಕ್ಕಿ ಬೀಳಬಾರದೆಂದು ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸುತ್ತಿದ್ದ ಯಾಸಿನ್ ಭಟ್ಕಳನಿಗೆ ಪೋಲೀಸರು ತನ್ನನ್ನು ಹಿಡಿದೇ ತೀರುತ್ತಾರೆ ಎಂಬ ಅನುಮಾನ ಬಂದಿತ್ತೇನೋ, ಯುನಾನಿ ವೈದ್ಯನ ಹೆಸರಿನಲ್ಲಿ ನೇಪಾಳ ಮತ್ತು ಬಿಹಾರದ ಹಳ್ಳಿಗಳಲ್ಲಿ ತಿರುಗಾಡಿಕೊಂಡಿದ್ದ. ನಗರವಾಸಿಗಳನ್ನು ತನ್ನ ದುಷ್ಕೃತ್ಯಗಳತ್ತ ಸೆಳೆಯಲು ಮೊದಲಿನ ದಿನಗಳಲ್ಲಿ ಸಫಲನಾಗುತ್ತಿದ್ದ ಯಾಸಿನ್ ಭಟ್ಕಳನಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮುಸ್ಲಿಮರನ್ನು ಮೊದಲಿನ ಸಂಖೈಯಲ್ಲಿ ಭಯೋತ್ಪಾದನೆಗೆ ಪ್ರೇರೇಪಿಸಲು ವಿಫಲನಾಗುತ್ತಿದ್ದ ಕಾರಣ ಹಳ್ಳಿಗರ ತಲೆಕೆಡಿಸುವ ಸಲುವಾಗಿ ಬಿಹಾರದ ಕಡೆಗೆ ನಡೆದ. ನೇಪಾಳ ಗಡಿ ತಪ್ಪಿಸಿಕೊಳ್ಳುವ ಪ್ರಸಂಗ ಬಂದರೆ ಸಹಕಾರಿಯೆಂಬ ಕಾರಣದಿಂದ ಗಡಿಯ ಹಳ್ಳಿಗಳಲ್ಲೇ ತಿರುಗಾಡುತ್ತಿದ್ದ.

ದೇಶದ ಅನೇಕ ರಾಜ್ಯದ ಪೋಲೀಸರು ಯಾಸಿನ್ ಭಟ್ಕಳನನ್ನು ವಿಚಾರಣೆಗೆ ಪಡೆಯಲು ಕಾಯುತ್ತಿದ್ದಾರೆ. ಯಾಸಿನ್ ಜೊತೆಯಲ್ಲಿ ಬಂಧನಕ್ಕೊಳಗಾಗಿರುವ ಅಸಾದುಲ್ಲ ಫಾರ್ಮಸಿ ಪದವೀಧರ. ಮೂಲತ ಲಕ್ನೋದ ಅಜಂಗಡದವನು. ಹಡ್ಡಿ ಎಂಬ ಅಡ್ಡ ಹೆಸರಿನ ಅಸಾದುಲ್ಲ ಭಾರತದ ಮೊತ್ತ ಮೊದಲ ಸೂಸೈಡ್ ಬಾಂಬರ್ ಆಗುತ್ತಿದ್ದನಂತೆ! ಯಾಸಿನ್ ಭಟ್ಕಳ್ ಪೋಲೀಸರಿಗೆ ತಿಳಿಸಿರುವ ಮಾಹಿತಿಯಂತೆ ಕೆಲವು ಮಹಿಳೆಯರನ್ನು ಕೂಡ ಸೂಸೈಡ್ ಬಾಂಬರ್ ಆಗಿ ತಯಾರು ಮಾಡಲಾಗಿದೆಯಂತೆ. ಈಗಾಗಲೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಮತ್ತೊಬ್ಬ ನಾಯಕನನ್ನು ನೇಮಿಸಲಾಗಿದೆ ಎಂಬ ವರದಿಯಿದೆ, ಯಾಸಿನ್ ಭಟ್ಕಳನ ಬಂಧನ ವಿರೋಧಿಸಿ ಮತ್ತಷ್ಟು ಬಾಂಬ್ ಸ್ಪೋಟ ನಡೆಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗದು. ಗುಪ್ತಚರ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆಯಿಂದಷ್ಟೇ ಇಂಥ ಸಂಘಟನೆಯ ಬೆನ್ನೆಲುಬು ಮುರಿಯಲು ಸಾಧ್ಯ. ಇದೇ ಸಮಯದಲ್ಲಿ ಬಾಂಬ್ ಸ್ಪೋಟವಾದ ತಕ್ಷಣ ಉದ್ರಿಕ್ತ ಜನರ, ವಿರೋಧ ಪಕ್ಷಗಳ, ಮಾಧ್ಯಮಗಳ ಕೋಪ ತಣಿಸಲು ಆ ಸ್ಪೋಟಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿರದ ಜನರನ್ನು ಬಂಧಿಸುವ ಕೆಲಸವಾಗಬಾರದು. ಯಾಸಿನ್ ಅಂಥ ಮಾನವತೆಯ ವಿರೋಧಿಗಳು ಇಂಥಹ ಸಂದರ್ಭಕ್ಕೇ ಹೊಂಚು ಹಾಕುತ್ತ ಮತ್ತಷ್ಟು ಮಗದಷ್ಟು ಜನರನ್ನು ತಮ್ಮ ಕೆಟ್ಟ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ನಕಲಿ ಬಂಧನವನ್ನು ನೆಪವಾಗಿಸಿಕೊಳ್ಳುತ್ತಾರೆ. ಯಾಸಿನ್ ಭಟ್ಕಳ, ಅಬ್ದುಲ್ ಕರೀಮ್ ತುಂಡಾ, ಅಸಾದುಲ್ಲನಂಥವರಿಗೆ ಯಾವ ಧರ್ಮದಿಂದಲೂ ಏನೂ ಆಗಬೇಕಿಲ್ಲ, ಪಾಕಿಸ್ತಾನದ ಕೈಗೊಂಬೆಗಳಾಗಿ ಕಂಡಲ್ಲೆಲ್ಲ ಬಾಂಬು ಸ್ಪೋಟಿಸುವ ಇಂಥವರಿಂದ ಸಾಮಾನ್ಯ ಮುಸಲ್ಮಾನರೂ ಕೂಡ ಉಳಿದ ಧರ್ಮದ ಜನರ ಅನುಮಾನದ ದೃಷ್ಟಿಗೆ ಒಳಗಾಗುತ್ತಾರಷ್ಟೇ. ವಿಪರ್ಯಾಸವೆಂದರೆ ಉಳಿದ ಧರ್ಮದವರ ಅನುಮಾನದ ದೃಷ್ಟಿಯೇ ಈ ಧಾರ್ಮಿಕ ಮೂಲಭೂತವಾದಿಗಳಿಗೆ ಬಂಡವಾಳ. ಈ ಧಾರ್ಮಿಕ ಮೂಲಭೂತವಾದತನ ಅಳಿದು ಹೋಗುವುದು ಸಾಧ್ಯವೇ ಇಲ್ಲವೇ? ಇತಿಹಾಸದ ಕಾಲಗರ್ಭದಲ್ಲಿ ಧಾರ್ಮಿಕ ಮೂಲಭೂತವಾದಿತನ ಹೊಸತೇನಲ್ಲ. ಧರ್ಮ, ದೇಶ, ಜನಾಂಗದ ಹೆಸರಿನಲ್ಲಿ ನಡೆದ ನರಮೇಧಗಳು ಸಾವಿರಾರು. ಈಗಿನ ಧಾರ್ಮಿಕ ಮೂಲಭೂತವಾದತನದ ಉಗ್ರ ರೂಪ ಮುಸ್ಲಿಮರ ಮುಖಾಂತರ ಹೊರಬೀಳುತ್ತಿದೆ, ಮುಸ್ಲಿಂ ಉಗ್ರರಿಗೆ ಕಾರಣ ಕೇಳಿದರೆ ಅವರ ಬೆಟ್ಟು ಮತ್ತೊಂದು ಧರ್ಮದ ಕಡೆಗೆ, ಆ ಮತ್ತೊಂದು ಧರ್ಮದ ಮೂಲಭೂತವಾದಿಗಳಿಗೆ ಕಾರಣ ಕೇಳಿದರೆ ಅವರ ಬೆಟ್ಟು ಮತ್ತೊಂದು ಧರ್ಮದೆಡೆಗೆ, ಆ ಮತ್ತೊಂದು ಧರ್ಮದವರಿಗೆ ಕಾರಣ ಕೇಳಿದರೆ ಅವರ ಬೆಟ್ಟು……….. ಈ ವಿಷವರ್ತುಲಕ್ಕೆ ಅಂತ್ಯವಾಡಲು ಇಪ್ಪತ್ತೊಂದನೇ ಶತಮಾನದಲ್ಲಾದರೂ ಮಾನವೀಯತೆಯ ಧರ್ಮ ಜನ್ಮತಳೆಯಬೇಕೇನೋ…..

ಡಾ ಅಶೋಕ್ ಕೆ ಆರ್

Sep 14, 2013

ಗಲ್ಲು

 ಗಲ್ಲು ಶಿಕ್ಷೆ ತಪ್ಪು ಎಂದು ಮಾತನಾಡಿದಾಕ್ಷಣ ಆ ರೀತಿ ಮಾತನಾಡಿದವರು ಅಪರಾಧಿಯ ಪರವಾಗಿ ಮಾತನಾಡುತ್ತಿದ್ದಾರೆ ಎಂದು ತಪ್ಪು ತಿಳಿದುಕೊಳ್ಳುವ ಜನರೇ ಹೆಚ್ಚು. ಗಲ್ಲು ಶಿಕ್ಷೆ ಅಪರಾಧದ ಪ್ರಮಾಣವನ್ನು ಕಡಿಮೆಮಾಡುವುದರಲ್ಲಿ ವಹಿಸುವ ಪಾತ್ರ ಕಡಿಮೆಯೆಂದೇ ಹೇಳಬಹುದು. ಅನೇಕ ರಾಷ್ಟ್ರಗಳಲ್ಲಿ ಗಲ್ಲು ಶಿಕ್ಷೆ ಸಂಪೂರ್ಣ ರದ್ದಾಗಿದೆ, ಆ ಕಾರಣಕ್ಕೆ ಅಲ್ಲಿನ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿಬಿಟ್ಟಿದೆಯಾ? ಇರಲಾರದು. ದೆಹಲಿಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಗಲ್ಲು ಶಿಕ್ಷೆ ತಪ್ಪು ಎಂದೀಗ ಹೇಳಿದರೆ ""  ನಿಮ್ಮ ಸಂಬಂಧಿಗಳೇ ರೇಪ್ಗೆ ಒಳಗಾದರೆ ಈ ರೀತಿ ಮಾತನಾಡುತ್ತೀರ " ಎಂದು ಪ್ರಶ್ನಿಸುವವರೇ ಅಧಿಕ. ಅಂಥ ಅಸಂಬದ್ಧ ವಾದ ಬದಿಗೆ ಸರಿಸೋಣ. ಇಂಥ ಹೀನ ಕೃತ್ಯ ಮಾಡಿದವರಿಗೆ ಒಂದೇ ಕ್ಷಣದ ನೋವು ನೀಡಿ ಮರಣ ವಿಧಿಸಿಬಿಟ್ಟರೆ ಸಾಕಾ? 
ವಿ. ಆರ್ . ಕಾರ್ಪೆಂಟರ್ ಈ ಸಂದರ್ಭದಲ್ಲಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದ ಕೆಲವು ಸಾಲುಗಳು.

Sep 10, 2013

Pather Panchali (1955) -movie review

U Prashanth Nayak
Sometimes, if you have to get to the heart of a legend, your scalpel will face a tougher time clearing the thickets of pre-existent praise surrounding it, than in the actual dissection of the subject at hand. A watching of Citizen Kane ,especially for a cineaste who is not yet deadened by the laureals heaped on it, may well require years of staying away from any comments on the movie, and active exorcising of any external opinions about it, before one settles down to the chimerical task of reviewing it without bias.

Sep 1, 2013

ನೀವೆಲ್ಲ ಸರ್ವಜ್ಞರೇ? ಸರಸ್ವತಿಯರೇ ಎಂದ ಆ ಹೆಣ್ಣುಮಗಳಿಗೆ ಏನು ಉತ್ತರ ಕೊಡಲಿ?





ಮೂಲ  - ಪ್ರಜಾವಾಣಿ
ನಾಲ್ಕನೇ ಆಯಾಮದಲ್ಲಿ ಪದ್ಮರಾಜ್ ದಂಡಾವತಿ ಬರೆಯುತ್ತಾರೆ -
ಅವರು ಸಣ್ಣಗೆ ಅಳುತ್ತಿದ್ದಂತಿತ್ತು. ಮಾತು ನಿಂತು ನಿಂತು ಬರುತ್ತಿತ್ತು. ದನಿ ಮೆದುವಾಗಿದ್ದರೂ ಆಳದಲ್ಲಿ ಸಿಟ್ಟು ಇದ್ದಂತೆ ಇತ್ತು. ಆಕ್ರೋಶ ಇತ್ತು. ಹತಾಶೆ ಇತ್ತು. ಅವರಿಗೆ ಅವಮಾನ ಆದಂತಿತ್ತು. ಅದಕ್ಕೆ ಏನು ಪರಿಹಾರ ಎಂದು ಝಂಕಿಸಿ ಕೇಳುವ ದಾಷ್ಟೀಕ ಇದ್ದಂತಿತ್ತು. ಆದರೆ, ತಮ್ಮ ಹೆಸರು, ಊರು ಬರೆಯಬಾರದು ಎಂದು ಅವರು ಷರತ್ತು ಹಾಕಿದರು. ಅದಕ್ಕೆ ಕಾರಣವನ್ನೂ ಕೊಟ್ಟರು. ಇದು ನನ್ನ ಕಥೆ ಎಂದು ಮಾತ್ರ ನೀವು ತಿಳಿಯಬೇಡಿ. ಇಂಥ ಬೇಕಾದಷ್ಟು ಕಥೆಗಳು ರಾಜ್ಯದ ಮೂಲೆ ಮೂಲೆಯಲ್ಲಿ ನಡೆದಿರಬಹುದು ಎಂದರು. ನಾನು ಹೇಳಿದ್ದನ್ನು ನನ್ನ ಮಾತುಗಳಲ್ಲಿಯೇ ಇಟ್ಟು ಬಿಡಿ. ನಿಮ್ಮದನ್ನು ಏನೂ ಸೇರಿಸಬೇಡಿ ಎಂದು ತಾಕೀತೂ ಮಾಡಿದರು!:

Aug 31, 2013

“ಆಹಾರ ಭದ್ರ”ವಾಗಲು ಭ್ರಷ್ಟರ ಹಸಿವು ನಿಲ್ಲಬೇಕು!



ಡಾ ಅಶೋಕ್ ಕೆ ಆರ್
ಪ್ರತಿಯೊಬ್ಬ ಪ್ರಜೆಗೂ ಆಹಾರವೆಂಬುದು ಹಕ್ಕಾಗಬೇಕೆಂಬ ಸದುದ್ದೇಶದಿಂದ ಆಹಾರ ಭದ್ರತಾ ಮಸೂದೆ ಕೊನೆಗೂ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದ ಮೇಲೆ ಜಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಯಾವ ಪಕ್ಷದ ವಿರೋಧವೂ ಇಲ್ಲದೆ (ಸಂಸದರ ವೇತನ ಹೆಚ್ಚಳಗಳನ್ನು ಹೊರತುಪಡಿಸಿ) ಜಾರಿಯಾದ ಮಸೂದೆಯಿದು. ಕೆಲವೊಂದು ರಾಜಕೀಯ ಪಕ್ಷಗಳ ವಿರೋಧವಿದ್ದಿದ್ದೂ ಸತ್ಯವಾದರೂ ಆ ವಿರೋಧ ಮಸೂದೆಯಲ್ಲಿನ ಕೆಲವು ಅಂಶಗಳ ಮಾರ್ಪಾಟಿಗೆ ಮತ್ತು ಕೆಲ ಉತ್ತಮಪಡಿಸುವಿಕೆಗಾಗಿಯ ಬದಲಾವಣೆಗೆ ಹೊರತು ಸಂಪೂರ್ಣ ಮಸೂದೆಯ ವಿರುದ್ಧವಲ್ಲ ಎಂಬುದು ಗಮನಾರ್ಹ.

Aug 23, 2013

ಗೋವಿನಂತಾಗಿದ್ದಾರೆ ನನ್ನ ಕೇರಿ ಜನ

ನಾಗರಾಜ್ ಹೆತ್ತೂರು
ನಮ್ಮಜ್ಜ ದನ ಕಾಯುತ್ತಿದ್ದರಂತೆ
ಗೋವು ದೇವರೆಂದಲ್ಲ

ಅವರಜ್ಜ ಮಾಡಿದ ಕುಲುವಾಡಿಕೆಯಿಂದ
ನಮ್ಮಜ್ಜನ ಅಜ್ಜನೂ ಅವರಜ್ಜಂದಿರು
ದನ ಕಾಯುತ್ತಿದ್ದರಂತೆ
ಇದು ನಮ್ಮಜ್ಜಂದಿರ ಇತಿಹಾಸ

Aug 21, 2013

What actually COULD BE the duty of a DOCTOR??



                                                                   Amaresh Arali

No creature in the world is immortal. Everything that exists today will ruin someday. Life here seems to be like a bubble on water, which has got no permanent existence. When we know this open secret of nature, then the question that strikes my mind is- What actually is the role of A DOCTOR then...?

Aug 19, 2013

ಬಲವಂತದ ಚುನಾವಣೆಯಲ್ಲಿ “ಪ್ರತಿಷ್ಠೆ” ಅಭ್ಯರ್ಥಿ!



ಡಾ. ಅಶೋಕ್. ಕೆ. ಆರ್
ರಾಷ್ಟ್ರಾದ್ಯಂತ ನಡೆಯಬೇಕಿರುವ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಒಂದು ವರುಷ ಬಾಕಿಯಿರುವಾಗ ಕರ್ನಾಟಕದ ಜನತೆಗೆ ಎರಡು ಲೋಕಸಭಾ ಚುನಾವಣೆಯ ಭಾರವನ್ನು ಹೊರುವ ಸುಯೋಗ! ಲೋಕಸಭೆಗೆ ಆಯ್ಕೆಯಾದವರು ತಮ್ಮ ಸಂಸತ್ ಅವಧಿಯ ಮಧ್ಯದಲ್ಲೇ ವಿಧಾನಸಭೆಗೆ ಸ್ಪರ್ಧಿಸಲು ಸಾಂವಿಧಾನಿಕವಾಗಿ ಯಾವ ಅಡ್ಡಿ ಆತಂಕಗಳೂ ಇಲ್ಲವಾಗಿರುವುದರಿಂದ ರಾಜಕೀಯ ನೇತಾರರ ಅಸರ್ಮಪಕ ನಿರ್ಧಾರಗಳಿಂದ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಜನರಿಗೆ ಕೇವಲ ಎಂಟತ್ತು ತಿಂಗಳುಗಳಿಗಾಗಿ ಸಂಸತ್ ಸದಸ್ಯರೊಬ್ಬರನ್ನು ಆರಿಸುವ ಅನಿವಾರ್ಯ ಕರ್ಮ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದ ಜೆ.ಡಿ.ಎಸ್ ನ ಮಾನ್ಯ ಕುಮಾರಸ್ವಾಮಿಯವರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಅದೇ ಜೆ.ಡಿ.ಎಸ್ ನ ಮಾನ್ಯ ಚೆಲುವರಾಯಸ್ವಾಮಿಯವರು ರಾಜ್ಯಕ್ಕೆ “ಸೇವೆ” ಸಲ್ಲಿಸುವ ಉದ್ದೇಶದಿಂದ ಸಂಸತ್ ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆಗೆ ನಿಂತು ಗೆಲುವು ಕಂಡರು. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಜೆ.ಡಿ.ಎಸ್ ನಿರ್ಣಾಯಕಾರಿ ಪಾತ್ರ ವಹಿಸುತ್ತದೆ ಮತ್ತು ತಾವು ಅಧಿಕಾರದ ಕುರ್ಚಿ ಏರಬಹುದು ಎಂಬುದಿವರ ಉದ್ದೇಶವಾಗಿತ್ತೇ ಹೊರತು “ರಾಜ್ಯ ಸೇವೆ” ಎಂಬುದು ನೆಪವಷ್ಟೇ. ಅದೃಷ್ಟವಶಾತ್ ರಾಜ್ಯದಲ್ಲಿ ಅತಂತ್ರತೆ ಸೃಷ್ಟಿಯಾಗದೆ ಏಕಪಕ್ಷ ಬಹುಮತ ಪಡೆದ ಕಾರಣದಿಂದ ಜೆ.ಡಿ.ಎಸ್ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ಸೀಮಿತವಾಗಬೇಕಾಯಿತು. ಲೋಕಸಭಾ ಚುನಾವಣೆಗೆ ಉಳಿರಿರುವುದು ಕೆಲವೇ ತಿಂಗಳು ಮರುಚುನಾವಣೆ ನಡೆಯಲಾರದು ಎಂದು ನಂಬಿಕೊಂಡಿದ್ದ ಜೆ.ಡಿ.ಎಸ್ ಗೆ ಮರುಚುನಾವಣೆ ಘೋಷಿತವಾಗಿರುವುದು ಬಿಸಿ ತುಪ್ಪದಂತೆ ಪರಿಣಮಿಸಿದೆ. ಆರು ತಿಂಗಳ ಅವಧಿಯ ಒಳಗೇ ಲೋಕಸಭಾ ಚುನಾವಣೆ ನಡೆಯುವಂತಿದ್ದರೆ ಮರುಚುನಾವಣೆಯ ಅವಶ್ಯಕತೆಯಿಲ್ಲ ಆದರೆ ಮುಂದಿನ ಲೋಕಸಭಾ ಚುನಾವಣೆ ಎಂಟು ತಿಂಗಳುಗಳ ನಂತರವಿರುವುದರಿಂದ ಅಲ್ಲಿಯ ತನಕ ಕ್ಷೇತ್ರವನ್ನು ಅನಾಥವಾಗಿ ಬಿಡಬಾರದ ಕಾರಣಕ್ಕೆ ಮರುಚುನಾವಣೆಯನ್ನು ಘೋಷಿಸಿದೆ ಚುನಾವಣಾ ಆಯೋಗ.