ಫೆಬ್ರ 12, 2014

ಮತ್ತೆ ಮತ್ತೆ ಡಬ್ಬಿಂಗ್ - - - ಸ್ವಾರ್ಥ ಅಹಂಕಾರದ ಸೋಗಿನಲ್ಲಿ ‘ಸಂಸ್ಕೃತಿ’ಯ ರಕ್ಷಣೆ?!



ಡಾ ಅಶೋಕ್. ಕೆ. ಆರ್.

ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.

ಡಿಸೆಂ 1, 2013

6-5=2 ಚಿತ್ರ ವಿಮರ್ಶೆ

ಡಾ ಅಶೋಕ್ ಕೆ ಆರ್

ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.

ಸೆಪ್ಟೆಂ 23, 2013

Lunchbox - movie review

U Prashanth Nayak
It is a testament to the legend of Mumbai's Dabbawallahs that even a mistake on their part (less than one in every six million deliveries) results in an outstanding film. As Lunchbox's Aslam Sheikh resurrects his Ammi and says " Meri maa kehthi thi ke even the wrong train can take one to the right destination". In Maximum City dabbas and trains often go together, and here they take us on a delightful ride where the ending does not matter. So we get an exciting new director- Ritesh Batra who in his first full-length work engineers a cinematic repast in which he blends cinema verite with a warm winsome storyline.The knack lies in his sensitive observations,perfectly natural humour and particularly in his restraint - he thus admirably resists the temptation of emptying the entire kitchen's masalas into this Lunchbox.

ಸೆಪ್ಟೆಂ 10, 2013

Pather Panchali (1955) -movie review

U Prashanth Nayak
Sometimes, if you have to get to the heart of a legend, your scalpel will face a tougher time clearing the thickets of pre-existent praise surrounding it, than in the actual dissection of the subject at hand. A watching of Citizen Kane ,especially for a cineaste who is not yet deadened by the laureals heaped on it, may well require years of staying away from any comments on the movie, and active exorcising of any external opinions about it, before one settles down to the chimerical task of reviewing it without bias.

ಏಪ್ರಿ 25, 2013

ಗಾಂಧಿವಾದದ ನೆರಳಿನಲ್ಲಿ ಬದುಕಿನ ಕೂರ್ಮಾವತಾರ.



ಡಾ ಅಶೋಕ್, ಕೆ, ಆರ್.
ಬದುಕು ಮಗ್ಗುಲು ಬದಲಿಸಲು ವಯಸ್ಸಿನ ಹಂಗಿಲ್ಲ. ಕೆಲಸ ನಿರ್ವಹಿಸುವುದರಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿ ತನ್ನಿಡೀ ಜೀವನದ ಆಗುಹೋಗುಗಳನ್ನು ವಿಮರ್ಶಿಸಲಾರಂಭಿಸುತ್ತ ಕೆಲವೊಮ್ಮೆ ಪುಟಿಯುತ್ತ ಕೆಲವೊಮ್ಮೆ ಕುಸಿಯುತ್ತಾ ಹೊಸ ಮನುಷ್ಯನಾಗಿ ಜನ್ಮ ತಳೆಯುವ ಕಥೆಯೇ ಕೂರ್ಮಾವತಾರ. ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರ ಕಥೆಯೊಂದನ್ನು ಆಧರಿಸಿ ತೆಗೆದಿರುವ ಚಿತ್ರ ಕೂರ್ಮಾವತಾರ.

ನವೆಂ 1, 2012

ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!



prakash jha

ಡಾ ಅಶೋಕ್ ಕೆ ಆರ್

ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.

ಅಕ್ಟೋ 9, 2012

ಕದ್ದ ಸಿನಿಮಾದ ಆಸ್ಕರ್ ಪಯಣ



ranbir

ಡಾ ಅಶೋಕ್ ಕೆ ಆರ್
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?

ಸೆಪ್ಟೆಂ 30, 2012

ಧರ್ಮಗುರುಗಳ ಸಹಜ ಮನಸ್ಸಿನ ಅನಾವರಣ


Habemus papam [photo source - iloveitalianmovies]

ಡಾ ಅಶೋಕ್ ಕೆ ಆರ್
ಸ್ವಾಮೀಜಿಗಳ, ಮೌಲ್ವಿಗಳ, ಒಟ್ಟಾರೆ ಎಲ್ಲ ಧರ್ಮದ ಗುರುಗಳ ಸ್ಥಾನದಲ್ಲಿರುವವರ ಮನಸ್ಥಿತಿ ಎಂತಹುದು ಎಂಬುದು ನಿಜಕ್ಕೂ ಕುತೂಹಲದ ವಿಷಯ. ವರುಷದ ಮುನ್ನೂರೈವತ್ತು ದಿನವೂ ಅವರು ಧರ್ಮಚಿಂತನೆಯಲ್ಲೇ ತೊಡಗುತ್ತಾರಾ? ಹಳೆಯ ತಪ್ಪುಗಳು, ಹಿಂದಿನ ದಿನಗಳು, ಆ ದಿನಗಳ ಜನರ ಒಡನಾಟ ಅವರಿಗೆ ಕಾಡುವುದೇ ಇಲ್ಲವಾ? ನೆನಪಿನಾಳದಿಂದ ಒತ್ತರಿಸಿ ಬರುವ ಭಾವನೆಗಳಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವೇ? ದೂರದಲ್ಲಿ ನಿಂತು ಧರ್ಮಗುರುಗಳನ್ನು ದೇವರ ಅವತಾರದಂತೆ ದೇವದೂತನಂತೆ ನೋಡುವವರಿಗೆ ಆ ಧರ್ಮಗುರುಗಳೂ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ ಆತನಿಗೂ ಒಂದು ಮನಸ್ಸಿದೆ ಎಂಬುದೇ ಮರೆತುಹೋಗಿರುತ್ತದೆ. ಪೋಪ್ ಸ್ಥಾನಕ್ಕೆ ಆರಿಸಲ್ಪಟ್ಟ ಒಬ್ಬ ವ್ಯಕ್ತಿಯ ಮನಸ್ಥಿತಿಯ ಅನಾವರಣವಾಗಿರುವುದು ನನ್ನಿ ಮೊರೆಟ್ಟಿ [Nanni Moratti] ನಿರ್ದೇಶನದ ಇಟಾಲಿಯನ್ ಚಿತ್ರ “ಹೆಬೆಮಸ್ ಪಾಪಮ್”ನಲ್ಲಿ [Habemus Papam ಅರ್ಥಾತ್ we have a pope].

ಆಗ 30, 2012

ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’


kavya madhavan
ಗದ್ದಾಮ photo source - sify.com
ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.

ಆಗ 8, 2012

ಕನಸುಗಳ ಬೆಂಬತ್ತಿದ ಬರ್ಟ್ ಮನ್ರೋ – The worlds fastest Indian


burt munro

 ಡಾ ಅಶೋಕ್. ಕೆ. ಆರ್.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.

ಫೆಬ್ರ 27, 2012

“ಮರೀನಾ” ಎಂಬ ದೃಶ್ಯಕಾವ್ಯ

ಡಾ. ಅಶೋಕ್. ಕೆ. ಆರ್.
 ಅದು ಕಡಲಕಿನಾರೆಯ ಕಥೆ. ಮನೆಬಿಟ್ಟು ಓಡಿಬಂದವರ, ಮನೆಯಿಲ್ಲದೆ ಬಂದವರ, ಮನೆಯಿಂದ ಓಡಿಸಿಕೊಂಡವರ ಮನಮುಟ್ಟುವ ಕಥೆ. ಪಾಂಡಿರಾಜ್ ಎಂಬ ನಿರ್ದೇಶಕನ ಮನದ ಪಟದಲ್ಲಿ ಮೂಡಿದ ಕಥೆಯ ಯಶಸ್ಸು ಚಿತ್ರ ನೋಡುವಾಗ ನಮ್ಮ ಕಣ್ಣಂಚಿನಲ್ಲಿ ಮೂಡುವ ಹನಿಗಳಲ್ಲಿದೆ. ಧಾರಾಕಾರವಾಗಿ ಗೊಳೋ ಎಂದಳುತ್ತಾ ಕುಳಿತರೆ ನಿರ್ದೇಶಕ ಜವಾಬ್ದಾರನಲ್ಲ!