ಜೂನ್ 19, 2026

ಇಥೆನಾಲ್‌ ಮಿಶ್ರಿತ ಪೆಟ್ರೋಲಿನ ಸುತ್ತ...


ಡಾ. ಅಶೋಕ್.‌ ಕೆ. ಆರ್.
ಇ – 85 ಪೆಟ್ರೋಲ್‌ ಅನ್ನು ದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಿದ ಮೇಲಷ್ಟೇ ಇದೇನಿದು ಇ - 85, ಏನಿದು ಇ - 20 ಪೆಟ್ರೋಲ್‌ ಅಂತ ಹುಡುಕಲಾರಂಭಿಸಿದೆ. ಪೆಟ್ರೋಲಿನಲ್ಲಿ ಎಷ್ಟು ಪ್ರಮಾಣದ ಎಥೆನಾಲ್‌ ಇಂಧನವನ್ನು ಬೆರೆಸುತ್ತೇವೆ ಎನ್ನುವುದರ ಮೇಲೆ "ಇ"ಯ ಪ್ರಮಾಣ ನಿರ್ಧರಿತವಾಗುತ್ತೆ. ಹದಿನೈದು ಪರ್ಸೆಂಟ್‌ ಪೆಟ್ರೋಲಿಗೆ ಎಂಭತ್ತೈದು ಪರ್ಸೆಂಟ್‌ ಎಥೆನಾಲ್‌ ಬೆರೆಸಿದರೆ ಅದು ಇ-85. ಕಳೆದೊಂದು ವರ್ಷದಿಂದ ನಮ್ಮೆಲ್ಲ ಪೆಟ್ರೋಲು ಬಂಕುಗಳಲ್ಲಿ ಇ-20 ಪೆಟ್ರೋಲ್‌ ಮಾತ್ರ ಲಭ್ಯವಿದೆ. ಇದಕ್ಕೂ ಮೊದಲು ಇ-10 ಪೆಟ್ರೋಲ್‌ ಅಥವಾ ಶುದ್ಧ ಪೆಟ್ರೋಲ್‌ ಲಭ್ಯವಿರುತ್ತಿತ್ತು. ಅಂದರೆ ನಾವೀಗ ಬಳಸುತ್ತಿರುವ ಪೆಟ್ರೋಲಲ್ಲಿ ಇಪ್ಪತ್ತು ಪ್ರತಿಶತಃ ಇಥೆನಾಲ್‌ ಇದೆ.

ಇಥೆನಾಲ್‌ ಅನ್ನು ಸಸ್ಯಜನ್ಯ ಮೂಲಗಳಿಂದ ದೇಶದೊಳಗೇ ಉತ್ಪಾದಿಸುವುದರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಪೆಟ್ರೋಲಿನ ಮೇಲೆ ಅವಲಂಬನೆ ಕಡಿಮೆಯಾಗ್ತದೆ. ಅಷ್ಟರಮಟ್ಟಿಗೆ ಹಣದ ಹೊರಹರಿಯುವಿಕೆ ತಪ್ಪುತ್ತದೆ. ಜೊತೆಗೆ ಇಥೆನಾಲ್‌ ಮಿಶ್ರಿತ ಪೆಟ್ರೋಲ್‌ ಉಂಟುಮಾಡುವ ಮಾಲಿನ್ಯದ ಪ್ರಮಾಣವೂ ಕಡಿಮೆ ಇರುತ್ತದಂತೆ. ಆ ಲೆಕ್ಕಕ್ಕೆ ಇಥೆನಾಲ್‌ ಇಲ್ಲದ ಇ-0 ಪೆಟ್ರೋಲಿಗಿಂತ ಇಥೆನಾಲ್‌ ಬೆರೆಸಿದ ಇ-20 ಪೆಟ್ರೋಲಿನ ಬೆಲೆ ಕಡಿಮೆಯಿರಬೇಕಿತ್ತು. ಅದಾಗಿಲ್ಲ. ಲಾಭ ಉಳಿಸಿಕೊಳ್ಳುವುದು ಎಷ್ಟು ಕಾರಣವೋ ಇಥೆನಾಲ್‌ ತಯಾರಿಕೆ ಕೂಡ ಕಡಿಮೆ ಖರ್ಚಿನದ್ದಲ್ಲವಾದ್ದರಿಂದ ವಿದೇಶಿ ಪೆಟ್ರೋಲಿಗೆ ಇಪ್ಪತ್ತು ಪ್ರತಿಶತಃ ಸ್ವದೇಶಿ ಇಥೆನಾಲ್‌ ಬೆರೆಸಿದ ಮೇಲೂ ಬೆಲೆ ಅಷ್ಟೇ ಉಳಿದಿದೆ. ದೆಹಲಿಯಲ್ಲಿ ಇ-85 ಪೆಟ್ರೋಲಿನ ಬೆಲೆ ಮಾತ್ರ ಮಾಮೂಲಿ ಪೆಟ್ರೋಲಿಗಿಂತ ಇಪ್ಪತ್ತು ರುಪಾಯಿಯಷ್ಟು ಕಡಿಮೆಯಿರುತ್ತದೆಂದು ಘೋಷಿಸಿದ್ದಾರೆ.

ಜೂನ್ 18, 2026

ಕರಾವಳಿಯ ಕೋಮು ಗಲಭೆಗಳಲ್ಲಿ ಸತ್ತವರ ಕುಟುಂಬಗಳ ಕಣ್ಣೀರ ಕತೆಗಳು.


 ಡಾ. ಅಶೋಕ್ ಕೆ ಆರ್

ನಾನು ಕನ್ನಡದಲ್ಲಿ ಓದಿದ ವಿಶಿಷ್ಟ ಪುಸ್ತಕಗಳಲ್ಲಿ "ಕರಾವಳಿಯ ರಕ್ತ - ಕಣ್ಣೀರು" ಪ್ರಮುಖ ಸ್ಥಾನವನ್ನೇ ಪಡೆಯುತ್ತದೆ.

ಮತಾಂಧರ ದ್ವೇಷದಿಂದ, ಧಾರ್ಮಿಕ ದ್ವೇಷದ ಕಾರಣದಿಂದ ಕೊಲೆಯೊಂದು ನಡೆದರೆ ಮುಖ್ಯವಾಹಿನಿ ವಾಹಿನಿಗಳಲ್ಲಿ ಸುದ್ದಿಯಾಗುತ್ತದೆ. ಕೊಲೆಯಾದವರ ಸಾಮಾಜಿಕ ಸ್ಥಾನಮಾನ, ರಾಜಕೀಯ ಹಿನ್ನೆಲೆ, ಅಪರಾಧಗಳ ಹಿನ್ನೆಲೆಯ ಆಧಾರದ ಮೇಲೆ ಸುದ್ದಿ ಮೊದಲ ಪುಟದಲ್ಲಿ ದೊಡ್ಡದಾಗಿ ಪ್ರಕಟವಾಗುತ್ತದೋ ಅಥವಾ ಎರಡು ಮೂರನೇ ಪುಟಗಳ ಸ್ಥಳೀಯ ಆವೃತ್ತಿಯಲ್ಲಿ ಪುಟ್ಟ ಕಾಲಂನಲ್ಲಿ ಪ್ರಕಟವಾಗುತ್ತದೋ ಎನ್ನುವುದು ನಿರ್ಧಾರವಾಗುತ್ತದೆ. ಟಿವಿಯಲ್ಲಿ ಹೆಚ್ಚು ಸಮಯ ಸುದ್ದಿಯಾಗಲು ಸಹ ಇದೇ ಮಾನದಂಡಗಳು ಅನ್ವಯ. ರಾಜಕೀಯ ಪಕ್ಷಗಳು ನೇರವಾಗಿ ಅಖಾಡಕ್ಕೆ ಧುಮುಕಿದರೆ ಮತ್ತೊಂದಷ್ಟು ದಿನಗಳ ಕಾಲ ಸುದ್ದಿಯ ಪ್ರಸಾರವಾಗುತ್ತದೆ. 

ಜೂನ್ 4, 2026

ಸಿದ್ಧರಾಮಯ್ಯನವರೀಗ ಮಾಜಿ ಮುಖ್ಯಮಂತ್ರಿ.


ಡಾ. ಅಶೋಕ್.‌ ಕೆ. ಆರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಾ ಮತ‌ ಚಲಾಯಿಸಲು ಪ್ರಮುಖ ಕಾರಣ ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಲಿ ಎಂದು.

ಮಂಡ್ಯದ ಬಹಳಷ್ಟು ಒಕ್ಕಲಿಗ ಗೌಡರು 'ಈ ಕುರುಬ ಎರಡೆರಡು ಸಲ ಮುಖ್ಯಮಂತ್ರಿ ಆಗಿಬಿಟ್ನಲ್ಲ' ಅಂತ ಕೊರಗೋದನ್ನ ನೋಡೋದೇ ಒಂದು ಚೆಂದವಾಗಿತ್ತು! ಕರ್ನಾಟಕದ ಉಳಿದ ಮುಖ್ಯಮಂತ್ರಿಗಳು ಸ್ವರ್ಗವನ್ನೇ ಕರ್ನಾಟಕಕ್ಕೆ ಇಳಿಸಿ ಬಿಟ್ಟಿದ್ದವರಂತೆ ಸಿದ್ಧರಾಮಯ್ಯನವರನ್ನು ಶೋಷಕ ಜಾತಿಯ ಅನೇಕರು ಲೇವಡಿ ಮಾಡುತ್ತಿದ್ದುದಕ್ಕೆ ಜಾತಿ ಕಾರಣವೇ ಹೊರತು ಮತ್ತೇನಲ್ಲ. ಮೇಲ್ ಶೋಷಕ ಜಾತಿಯ ಮಾತಿನ ಶೈಲಿ "ಗತ್ತು" ಅನ್ನಿಸಿಕೊಂಡರೆ ಸಿದ್ಧರಾಮಯ್ಯನವರ ಮಾತಿನ ಶೈಲಿ "ದುರಹಂಕಾರ" ಅನ್ನಿಸಿಕೊಳ್ಳುತ್ತಿತ್ತು. ಇರಲಿ, ನಮ್ಮ ಸಮಾಜದಲ್ಲಿ ಜಾತಿ ಅನ್ನೋದು ನಮ್ಮ ಜೀವಿತಾವಧಿಯಲ್ಲಂತೂ ಅತ್ತಗಿತ್ತಗೂ ಅಲುಗಾಡುವುದಿಲ್ಲ. ಇನ್ನೆರಡಲ್ಲ ಹತ್ತು ತಲೆಮಾರು ಕಳೆಯುವಷ್ಟರಲ್ಲಾದರೂ ಅಲ್ಲಾಡಿದರೆ ಪುಣ್ಯ.