ಫೆಬ್ರ 12, 2014

ಮತ್ತೆ ಮತ್ತೆ ಡಬ್ಬಿಂಗ್ - - - ಸ್ವಾರ್ಥ ಅಹಂಕಾರದ ಸೋಗಿನಲ್ಲಿ ‘ಸಂಸ್ಕೃತಿ’ಯ ರಕ್ಷಣೆ?!



ಡಾ ಅಶೋಕ್. ಕೆ. ಆರ್.

ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.

ಮೇ 8, 2012

ಡಬ್ಬಿಂಗ್ ಅವಶ್ಯಕವೇ?

ಡಾ ಅಶೋಕ್. ಕೆ. ಆರ್.
ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.