ಅಕ್ಟೋ 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

ಅಕ್ಟೋ 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

ಸೆಪ್ಟೆಂ 30, 2014

ಡಾ ಎನ್ ಜಗದೀಶ್ ಕೊಪ್ಪ: ಬಿಳಿ ಸಾಹೇಬನ ಭಾರತ - ಜಿಮ್ ಕಾರ್ಬೆಟ್ ನ ಮಾನವೀಯ ಮುಖ


jim corbet kannada book
ಬಿಳಿ ಸಾಹೇಬನ ಭಾರತ - ಡಾ ಎನ್ ಜಗದೀಶ್ ಕೊಪ್ಪ
ನಾನು ಇತ್ತೀಚಿನ ದಿನಗಳಲ್ಲಿ ಇಷ್ಟಪಡುವ ಲೇಖಕರಲ್ಲೊಬ್ಬರು ಜಗದೀಶ್ ಕೊಪ್ಪ. ಅವರ ಲೇಖನಗಳನ್ನು ಮೊದಲು ಓದಿದ್ದು ವರ್ತಮಾನದಲ್ಲಿ. ಅವರ ಅನುವಾದಿತ ಕೃತಿಗಳಿರಬಹುದು, ವಿಶ್ಲೇಷಣಾತ್ಮಕ ಲೇಖನಗಳಿರಬಹುದು ಹೊಸತೇನನ್ನೋ ಓದುಗರಿಗೆ ತಿಳಿಸುವ ಹಂಬಲವಿರುವಂತಹ ಬರಹಗಳವು. ಅವರ ಹೊಸ ಪುಸ್ತಕ - ಬಿಳಿ ಸಾಹೇಬನ ಭಾರತ, ಜಿಮ್ ಕಾರ್ಬೆಟ್  ಜೀವನಗಾಥೆ. ಜಿಮ್ ಕಾರ್ಬೆಟ್ ಎಂದರೆ ನನಗೆ ಗೊತ್ತಿರುವಂತೆ ಬೇಟೆಗಾರ ಮತ್ತು ಇಂಗ್ಲೀಷ್ ಆಫೀಸರ್. ಆತನ ಮಾನವೀಯ ಮುಖಗಳು ಮತ್ತು ನಿಸರ್ಗದೊಂದಿಗಿನ ಸಂಬಂಧಗಳ ಬಗೆಗಿನ ಪುಸ್ತಕವಿದು. ಅಕ್ಟೋಬರ್ ಹನ್ನೊಂದರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. 
ಬಿಳಿ ಸಾಹೇಬನ ಭಾರತದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.


ಜಿಮ್ ಕಾರ್ಬೆಟ್ ಮೊಕಮೆಘಾಟ್ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆಯ ವಿಷಯದಲ್ಲಿ ಶಿಸ್ತು ಕಾಣತೊಡಗಿತು. ಆರಂಭದಲ್ಲಿ ಕಾರ್ಬೆಟ್ಗೆ ಇದ್ದ ಒತ್ತಡಗಳು ಮರೆಯಾಗತೊಡಗಿದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನೊಳಗೆ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯಲ್ಲಿದ್ದ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತ್ತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ.

ಮಾರ್ಚ್ 24, 2014

ಬಿರುಬಿಸಿಲಿಗೂ ಬಾಡದ ಮರುಭೂಮಿಯ ಹೂವಿದು.



ಡಾ.ಅಶೋಕ್. ಕೆ. ಆರ್.
ಆತ್ಮಕಥೆಗಳೇ ಹಾಗೆ! ಅಸಂಖ್ಯಾತ ತಿರುವುಗಳಿರುವ ಪುಟಪುಟಕ್ಕೂ ಕುತೂಹಲ ಹೆಚ್ಚಿಸುವ ಥ್ರಿಲ್ಲರ್ ಕಾದಂಬರಿಗಳಿಗಿಂತ ರೋಮಾಂಚನಕಾರಿ. ಕಲ್ಪಿಸಿಕೊಳ್ಳಲೂ ಕಷ್ಟಸಾಧ್ಯವಾದ ಅನೇಕ ಸಂಗತಿಗಳು ನಿಜಜೀವನದಲ್ಲಿ ಘಟಿಸಿಬಿಟ್ಟಿರುತ್ತದೆ. ಓದಿ ಮುಗಿಸಿದ ನಂತರ ಒಂದಷ್ಟು ಅಚ್ಚರಿ ಮತ್ತು ಅಘಾತ ಮೂಡಿಸುವ ಆತ್ಮಕಥೆ 90ರ ದಶಕದ ಜಾಹೀರಾತು ಜಗತ್ತಿನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದ ವಾರಿಸ್ ಡೆರಿಸ್ ಳದ್ದು.

ಡಿಸೆಂ 31, 2013

ಕಲಿಕಾ ಮಾಧ್ಯಮ ವಿವಾದ

ವೆಂಕಟೇಶ ಮಾಚಕನೂರ, ನಿವೃತ್ತ ಶಿಕ್ಷಣ ಆಯುಕ್ತರು, ಧಾರವಾಡ
(ಕೃಪೆ - ಜಗದೀಶ್ ಕೊಪ್ಪ ರವರ ಫೇಸ್ಬುಕ್ ಪುಟ )
ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಮಾಧ್ಯಮ ಇರಬೇಕೆಂಬ ಕರ್ನಾಟಕ ಸರ್ಕಾರದ ಆದೇಶದ ವಿವಾದವು ಈಗ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗನ್ನೊಳಗೊಂಡ ಸಂವಿಧಾನಿಕ ಪೀಠದ ಮುಂದೆ ಜನೇವರಿ 21 ರಿಂದ ವಿಚಾರಣೆಗೆ ಬರಲಿರುವ ವಿಷಯ ಎಲ್ಲರಿಗೂ ಗೊತ್ತಿರಲು ಸಾಕು.

ನವೆಂ 5, 2012

ಜೀವೋತ್ಪಾದಕರ ‘ಹತ್ಯೆ’ಯ ಕಥೆ!



jagadish koppa

ಡಾ ಅಶೋಕ್ ಕೆ ಆರ್

ಭುವಿಯ ಮೇಲೆ ಮೊದಲ ಜೀವಿಯ ಉಗಮವಾಗಿದ್ದು ನೀರಿನಲ್ಲಿ. ಮಂಗಳ ಮತ್ತಿನ್ನಿತರ ಗ್ರಹಗಳ ಮೇಲಿನ ಅಧ್ಯಯನದಲ್ಲಿ ಪ್ರಾಮುಖ್ಯತೆ ದೊರೆಯುವುದು ನೀರಿನ ಅಸ್ತಿತ್ವಕ್ಕೆ. ನಮ್ಮ ದೇಹತೂಕದ ಅರ್ಧಕ್ಕೂ ಅಧಿಕ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ ಎಂಬುದು ಕೂಡ ನೀರಿನ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. “ನದಿಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ” ಎಂಬರ್ಥದ ಮಾತುಗಳನ್ನು ಕೇಳಿದಾಗಲೆಲ್ಲ ನನ್ನಲ್ಲಿ ನೂರಾರು ಪ್ರಶ್ನೆಗಳೇಳುತ್ತವೆ. ನದಿ ನೀರು ಸಮುದ್ರಕ್ಕೆ ಸೇರದಿದ್ದರೆ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರುಗಳಾಗುವುದಿಲ್ಲವೇ? ಸಮುದ್ರದ ಜೀವಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದಿಲ್ಲವೇ? ಬೃಹತ್ ಅಣೆಕಟ್ಟು ಕಟ್ಟುವುದರಿಂದ ನದಿ ಕೆಳಗಿನ ಪಾತ್ರದ ಜೀವಸಮುದಾಯ, ನಾಗರೀಕತೆಗಳಿಗೆ ಹಾನಿಯುಂಟಾಗುವುದಿಲ್ಲವೇ? ಇನ್ನು ಬೃಹತ್ ಅಣೆಕಟ್ಟೆಗಳಿಂದ ಭೂತಾಪಮಾನದ ಏರುವಿಕೆಯೂ ಹೆಚ್ಚುತ್ತದಂತೆ! ಇಂಥ ಗೊಂದಲಗಳೇ ತುಂಬಿರುವಾಗ ಒಂದಷ್ಟು ಉತ್ತರ ದೊರಕಿಸಿದ್ದು ಡಾ ಎನ್ ಜಗದೀಶ್ ಕೊಪ್ಪರವರ ಕೃತಿ ‘ಜೀವನದಿಗಳ ಸಾವಿನ ಕಥನ’