ಆಗ 24, 2014

ಸಮಾಧಿಗಳ ಆಗರವಾಗುತ್ತಿರುವ ಕಲಾಗ್ರಾಮ


ಕಲಾಗ್ರಾಮದಲ್ಲಿ ಅನಂತಮೂರ್ತಿಯವರ ಅಂತ್ಯಸಂಸ್ಕಾರ

ಡಾ ಅಶೋಕ್ ಕೆ ಆರ್
ಸತ್ತ ಖ್ಯಾತನಾಮರನ್ನು ಸಮಾಧಿಯ ಪ್ರತಿಮೆಯೊಳಗೆ ಬಂಧಿಸುವುದು ಹೊಸತೇನಲ್ಲ. ಕೆಲವೊಮ್ಮೆ ಈ ಸಮಾಧಿಯ ಸ್ಥಳಗಳು ಅವರ ಹಾದಿಯಲ್ಲಿ ಕೊಂಚ ದೂರವಾದರೂ ನಡೆದು ಅನುಭೂತಿ ಪಡೆದುಕೊಳ್ಳುವವರಿಗೆ ಸಹಕಾರಿಯಾಗುತ್ತದೆ. ಬಹಳಷ್ಟು ಬಾರಿ ಈ ಸ್ಥಳಗಳು ರಂಜನೀಯ ಪ್ರೇಕ್ಷಣೀಯ ಸ್ಥಳಗಳಾಗಿ ಪರಿವರ್ತಿತವಾಗಿ ವಾಣಿಜ್ಯ ಉದ್ದೇಶಕ್ಕೆ ಮೀಸಲಾಗಿಬಿಡುವ ಅಪಾಯವಿದೆ. ಅನೇಕ ಕಡೆ ಈ ಅಪಾಯ ಜಾರಿಯೂ ಆಗಿಹೋಗಿದೆ.