Dec 29, 2019

ಒಂದು ಬೊಗಸೆ ಪ್ರೀತಿ - 46

ಡಾ. ಅಶೋಕ್.‌ ಕೆ. ಆರ್.‌
“ಧರಣಿ….ಏ….ಧರಣಿ” ದೂರದಿಗಂತದಲ್ಲಿ ಕೇಳಿಸುತ್ತಿದ್ದ ಅಮ್ಮನ ದನಿ. ಅಮ್ಮ ನನ್ನಿಂದ ದೂರಾಗುತ್ತಿದ್ದರೋ ನಾ ಅಮ್ಮನಿಂದ ದೂರಾಗುತ್ತಿದ್ದೆನೋ ತಿಳಿಯದೆ ಎಲ್ಲವೂ ಗೊಂದಲಮಯ. ರಾಧ ಎಲ್ಲಿ ಕಾಣಿಸುತ್ತಲೇ ಇಲ್ಲವಲ್ಲ. 

“ಧರಣಿ……ಧರಣಿ” ಅಮ್ಮನ ದನಿ ಇನ್ನಷ್ಟು ಜೋರಾಯಿತು. ಇಲ್ಲ…….ನಾ ಅಮ್ಮನಿಂದ ಅಮ್ಮ ನನ್ನಿಂದ ದೂರಾಗುತ್ತಿಲ್ಲ ಹತ್ತಿರವಾಗುತ್ತಿದ್ದೇವೆಂಬುದರಿವಾಗಿ ಒಂದಷ್ಟು ಸಮಾಧಾನ. ಧರಣಿ ಧರಣಿ….. ಅಮ್ಮನ ಕೂಗು ಮಾತ್ರ ನಿಲ್ಲುತ್ತಲೇ ಇಲ್ಲ. ಇದ್ಯಾಕೆ ಅಮ್ಮ ಹೀಗೆ ಒಂದೇ ಸಮನೆ ಕೂಗುತ್ತಿದ್ದಾರೆ? ಅಪ್ಪನಿಗೇನಾದರೂ ಆಯಿತಾ? ಅಮ್ಮನಿಗೇ ಏನಾದರಾಯಿತಾ? ಅಥವಾ ರಾಧ…… ʼಅಯ್ಯೋ ರಾಧʼ ಎಂದು ಬೆಚ್ಚಿಬಿದ್ದವಳ ಬೆನ್ನ ಮೇಲೊಂದು ಬಲವಾದ ಹೊಡೆತ ಬಿತ್ತು. ʼಅಯ್ಯೋ ಅಮ್ಮʼ ಎಂದು ಕೂಗಿಕೊಳ್ಳುತ್ತಾ ಕಣ್ಣು ತೆರೆದು ಅಗಲಿಸಿ ನೋಡಿದರೆ ಕಂಡಿದ್ದು ನಮ್ಮ ಮನೆಯ ಡೈನಿಂಗ್‌ ಟೇಬಲ್ಲು. ಟೇಬಲ್ಲಿನ ಮೇಲಿದ್ದ ತಟ್ಟೆ, ತಟ್ಟೆಯೊಳಗೆ ಮುಕ್ಕಾಲು ಚಪಾತಿ ಒಂದು ಸೌಟಿನಷ್ಟು ಬೆಂಡೆಕಾಯಿ ಪಲ್ಯ, ನನ್ನ ಕೈಯೊಳಗೆ ಚಪಾತಿಯ ಒಂದು ತುಂಡು, ಎದುರಿಗೆ ನಗಾಡುತ್ತಾ ಕುಳಿತಿದ್ದ ಅಪ್ಪ. 

“ನಿಂಗೇನೇ ಬಂದು ದೊಡ್ರೋಗ. ಊಟ ಮಾಡ್ತಾ ಮಾಡ್ತಾನೇ ನಿದ್ರೆ ಹೋಗಿದ್ದೀಯಲ್ಲ” ಅಮ್ಮನ ನಗೆಮಿಶ್ರಿತ ಮಾತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 22, 2019

ಒಂದು ಬೊಗಸೆ ಪ್ರೀತಿ - 45

ಕನ್ನಡ ಕಾದಂಬರಿ
ಡಾ. ಅಶೋಕ್.‌ ಕೆ. ಆರ್.‌
ಸಾಗರ ಬಂದಿದ್ದಾಗ ರಾಜೀವ ಮನೆಯಲ್ಲಿರಲಿಲ್ಲ. ಅಪ್ಪನೂ ಹೊರಹೋಗಿದ್ದರು. ತಮ್ಮ ಸೋನಿಯಾಳೊಡನೆ ಹೊರಗೋಗಿದ್ದ. ಇದ್ದಿದ್ದು ನಾನು ಅಮ್ಮ ರಾಧ. ಸಾಗರ ಒಳಬಂದಾಗ ಮಗಳು ಮಲಗಿದ್ದಳು. ಸಾಗರನ ಜೊತೆ ಅಮ್ಮ ಎರಡು ನಿಮಿಷಗಳ ಕಾಲ ಕುಶಲೋಪರಿ ಮಾತನಾಡಿ ಕಾಫಿ ಮಾಡಲು ಒಳಗೋದರು. ʼಇರು ಮಗಳನ್ನ ಎತ್ಕೊಂಡ್‌ ಬರ್ತೀನಿʼ ಎಂದಿದ್ದಕ್ಕೆ "ಇರಲಿ ಬಿಡೆ. ಮಲಗಿರಲಿ. ಸುಮ್ನ್ಯಾಕೆ ಏಳಿಸ್ತಿ. ಎದ್ದಾಗ ನೋಡಿದರಾಯಿತಲ್ಲ” ಎಂದ. 

ʼಮತ್ತೆ…ಇನ್ನೇನ್‌ ಸಮಾಚಾರʼ ಎಂದು ಕೇಳಿದ್ದಕ್ಕೆ “ವಿಶೇಷವೇನಿಲ್ಲ” ಎಂದು ತಲೆಯಾಡಿಸಿದ. 

ʼಹುಡುಗಿ ಏನಾದ್ರೂ ನೋಡಿದ್ಯಾʼ 

“ಮ್.‌ ಒಂದೆರಡ್‌ ಫೋಟೋ ತೋರಿಸಿದ್ರು. ಇನ್ನೂ ಹೋಗಿಲ್ಲ ನೋಡೋದಿಕ್ಕೆ. ಹೋಗ್ಬೇಕು” 

ʼಮ್.‌ ಏನ್‌ ಮಾಡ್ಕೊಂಡಿದ್ದಾರೆ ಆ ಹುಡ್ಗೀರುʼ 

“ಏನೋ ಗೊತ್ತಿಲ್ವೇ. ನಾ ಕೇಳೋಕ್‌ ಹೋಗಿಲ್ಲ" 

ʼಅಯ್ಯೋ ನಿನ್ನ…. ವಿಚಾರಿಸಬೇಕಲ್ವೇ…..ʼ ಮಾತು ಮುಗಿಯುವುದಕ್ಕೆ ಮುನ್ನ ನನ್ನೆಡೆಗೆ ತೂರಿ ಬಂದ ಅವನ ತೀಕ್ಷ್ಣ ನೋಟ ಈ ವಿಷಯ ಬಿಟ್ಟು ಬೇರೆ ಮಾತನಾಡು ಎನ್ನುವಂತಿತ್ತು. 

ʼಹೋಗ್ಲಿ ಬಿಡು. ಮತ್ತೆ ಬೇರೆ ಫ್ರೆಂಡ್ಸ್ಯಾರಾದ್ರೂ ಸಿಕ್ಕಿದ್ರಾ ಮೈಸೂರಲ್ಲಿʼ 

“ಇಲ್ವೇ. ಯಾರೂ ಸಿಕ್ಕಿಲ್ಲ. ಎಲ್ರೂ ಬ್ಯುಸಿಯಲ್ವ ಈಗ. ಯಾರೂ ಸಿಗೋದಿಲ್ಲ” 

ಅದೇನು ಅವನ ಗೆಳೆಯರ ಕುರಿತಾಗಿ ಹೇಳಿದನೋ, ನನ್ನ ಬಗ್ಗೆ ಹೇಳಿದನೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಅಮ್ಮ ಕಾಫಿ ತಂದರು. ಜೊತೆಗೊಂದು ಪ್ಲೇಟಿನಲ್ಲಿ ಮಾರಿ ಬಿಸ್ಕೆಟ್ಟು. ಎರಡು ಬಿಸ್ಕೆಟ್ಟು ತಿಂದು ಕಾಫಿ ಕುಡಿದ. ಅವನು ಕಾಫಿ ಕಪ್ಪು ಮೇಜಿನ ಮೇಲಿಟ್ಟಾಗ ಮಗಳನ್ನು ತರಲು ಮೇಲೆದ್ದೆ. 

“ಮಲಗಿದ್ರೆ ಬಿಡೆ. ಇನ್ನೊಂದ್ಸಲ ಬರ್ತೀನಿ. ಸುಮ್ನೆ ಯಾಕೆ ಎಬ್ಬಿಸ್ತಿ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಕತ್ತಲು


️ಹರ್ಷಿತ.ಕೆ. ಟಿ 
ಬೆಳಕಿನ ದಾರಿಗೆಂದೂ 
ಅಡ್ಡಗಾಲು ಹಾಕದು 
ಬೆಳಕು ನುಗ್ಗಿಬಂದೊಡನೆ 
ತಲೆಬಾಗಿ ಹಿನ್ನೆಡೆದು ದಾರಿ ಕೊಡುವುದು 
ನುಂಗಿ ತೇಗಿದರೂ ಬೆಳಕು 
ಗಂಟಲಲಿ ಸಿಕ್ಕಿ ಬಿಕ್ಕಳಿಕೆಯಾಗದು 

Dec 16, 2019

ಒಂದು ಬೊಗಸೆ ಪ್ರೀತಿ - 44

ಡಾ. ಅಶೋಕ್.‌ ಕೆ. ಆರ್.‌
ಮಗು ನಿರೀಕ್ಷೆಗಿಂತ ಹೆಚ್ಚು ಬೆಳೆದಿತ್ತು. ಜೊತೆಗೆ ನನ್ನ ಪೆಲ್ವಿಸ್ಸು ಮಾಮೂಲಿಗಿಂತ ಚಿಕ್ಕದಿದ್ದ ಕಾರಣ ನಾರ್ಮಲ್‌ ಡೆಲಿವರಿ ಕಷ್ಟವೆಂದು ತಿಳಿದು ವಾರವಾಗಿತ್ತು. ಇವತ್ತು ರಾತ್ರಿ ಆಸ್ಪತ್ರೆಗೆ ಸೇರುವಂತೆ ಸೂಚಿಸಿದ್ದರು, ನಾಳೆ ಬೆಳಿಗ್ಗೆ ಸಿಸೇರಿಯನ್‌ ಮಾಡುವವರಿದ್ದರು. ದಿನಾ ನೂರಾರು ಸಿಸೇರಿಯನ್‌ ನಡೀತವೆ, ಅಮ್ಮ ಮಕ್ಕಳು ಆರೋಗ್ಯವಾಗೂ ಇರ್ತಾರೆ, ಆದರೂ ದಿಗಿಲು. ಆಪರೇಷನ್‌ ಥಿಯೇಟರ್‌ನಲ್ಲೇ ಹೆಚ್ಚು ಕಡಿಮೆಯಾಗಿ ಸತ್ತು ಹೋದರೆ, ನಾ ಬದುಕಿ ಮಗು ಸತ್ತು ಹೋದರೆ, ಮಗು ಬದುಕಿ ನಾ ಸತ್ತು ಹೋದರೆ…… ಅಪರೂಪದಲ್ಲಪರೂಪದ ಖಾಯಿಲೆ ಕಸಾಲೆಗಳನ್ನು ದಿನನಿತ್ಯದ ಆಸ್ಪತ್ರೆಯ ಒಡನಾಟದಲ್ಲಿ ನೋಡುವುದಕ್ಕೋ ಏನೋ ವಿಧ ವಿಧದ ಯೋಚನೆಗಳು ಮೂಡುತ್ತವೆ. ಎಲ್ಲಾ ಡಾಕ್ಟ್ರುಗಳಿಗೂ ಹಿಂಗೇನಾ? ಎಂಟರ ಸುಮಾರಿಗೆ ಆಸ್ಪತ್ರೆಗೆ ಹೋಗಿ ಸೇರಿಕೊಂಡೆ. ಅಪ್ಪ ಅಮ್ಮ ಜೊತೆಯಲ್ಲಿ ಬಂದಿದ್ದರು. ರಾಜೀವ ಒಂಭತ್ತರ ಸುಮಾರಿಗೆ ಬಂದು ಒಂದರ್ಧ ಘಂಟೆ ಇದ್ದು ಹೊರಟು ಹೋದರು. ಬಾಯಿಮಾತಿಗೂ ನಾನೇ ಇರ್ಲಾ ಇವತ್ತು ರಾತ್ರಿ ಅಂತ ಕೇಳಲಿಲ್ಲ. ಒಂಭತ್ತೂವರೆಯಷ್ಟೊತ್ತಿಗೆ ಅಮ್ಮನಿಗೆ ಗಡದ್ದು ನಿದ್ರೆ. ಅಪ್ಪ ಮನೆಗೆ ಹೋದರು. ದಿಗಿಲಿಗೋ, ಉತ್ಸಾಹಕ್ಕೋ ನನಗೆ ನಿದಿರೆಯೇ ಸುಳಿಯುತ್ತಿಲ್ಲ. ಸಾಗರನ ನೆನಪಾಗಿ ಮೊಬೈಲ್‌ ಕೈಗೆತ್ತಿಕೊಂಡೆ. ಮೆಸೇಜು ವಿನಿಮಯವಾಗಿ ಬಹಳ ದಿನವಾಗಿತ್ತು. ಏನೆಂದು ಮೆಸೇಜಿಸಲಿ? ಮತ್ತಿದು ನನ್ನದೇ ಪುರಾಣ ಹೇಳುವುದಕ್ಕೆ ಮೆಸೇಜ್‌ ಮಾಡ್ತಿರೋದು. ಅವನೇನಾದರೂ ಹೇಳಿದರೆ ಕೇಳುವ ತಾಳ್ಮೆಯಿಲ್ಲದ ನಾನು ನನಗೇನಾದರೂ ಹೇಳಬೇಕೆನ್ನಿಸಿದಾಗ ಅವನಲ್ಲಿ ಕೇಳುವ ತಾಳ್ಮೆಯಿದೆಯೋ ಇಲ್ಲವೋ ಎನ್ನುವುದನ್ನೂ ಯೋಚಿಸದೆ ಮೆಸೇಜು ಮಾಡಿಬಿಡುತ್ತೇನಲ್ಲ. ಅವನೇಳಿದಂತೆ ನಾ ಅವನನ್ನು ಬಳಸಿಕೊಳ್ಳುತ್ತಿದ್ದೀನಾ? ಖಂಡಿತ ಇಲ್ಲ. ಅವನೇಳಿದ್ರಲ್ಲಿದ್ದ ಸತ್ಯವೆಂದರೆ ಮಗುವಿನ ಕಣ್ಣಲ್ಲಿ ಚಿಕ್ಕವಳಾಗಿ ಕಾಣಬಾರದೆಂದು ನಾ ಸಾಗರನಿಂದ ದೂರಾಗುತ್ತಿದ್ದೀನಿ ಅಷ್ಟೇ. ಅದನ್ನು ಬಿಟ್ಟರೆ ಸಾಗರನನ್ನು ದೂರ ತಳ್ಳಲು ಇನ್ಯಾವುದೇ ಸಕಾರಣವಿಲ್ಲ. 

ಇರಲಿ, ಕಿತ್ತಾಟಗಳೆಲ್ಲ ಇರಲಿ. ಈ ಸಮಯದಲ್ಲಿ ಸಾಗರನಿಗೆ ಮೆಸೇಜು ಮಾಡದೇ ಇರುವುದು ನನ್ನಿಂದ ಸಾಧ್ಯವಿಲ್ಲ ಎಂದುಕೊಳ್ಳುತ್ತ ʼಆಸ್ಪತ್ರೆ ಸೇರಿದ್ದೀನಿ ಕಣೋ. ನಾಳೆ ಬೆಳಿಗ್ಗೆ ಆರೂ ಆರೂವರೆಗೆ ಸಿಸೇರಿಯನ್ನಿದೆʼ ಮೆಸೇಜು ಕಳಿಸಿದೆ. ಹತ್ತದಿನೈದು ನಿಮಿಷವಾದರೂ ಅವನಿಂದ ಪ್ರತಿಕ್ರಿಯೆ ಬರಲಿಲ್ಲ. ಮುನಿಸಿನ್ನು ಆರಿಲ್ಲ ಹುಡುಗನಿಗೆ. ಇರಲಿ. ನನ್ನದೂ ತಪ್ಪಿದೆ. ಇನ್ನೇನು ನನಗೂ ನಿದ್ರೆ ಹತ್ತಬೇಕೆನ್ನುವಷ್ಟರಲ್ಲಿ ಅವನಿಂದ ಮೆಸೇಜು ಬಂತು. 

“ಸಾರಿ ಕಣೇ. ಮೊಬೈಲ್‌ ಚಾರ್ಜಿಗಿಟ್ಟಿದ್ದೆ. ಈಗ ನೋಡಿದೆ ಮೆಸೇಜ್ನ. ಏನ್‌ ಫುಲ್‌ ಟೆನ್ಶನ್‌ನಲ್ಲಿದ್ದೀಯ" 

ʼಹುʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 9, 2019

ಒಂದು ಬೊಗಸೆ ಪ್ರೀತಿ - 43

ಡಾ. ಅಶೋಕ್.‌ ಕೆ. ಆರ್.‌
“ಎಷ್ಟೊಂದ್‌ ಬದಲಾಗಿಬಿಟ್ಯೆ” ಎಂದವನ ದನಿಯಲ್ಲಿ ನಿಜಕ್ಕೂ ನೋವಿತ್ತು. ಬದಲಾಗಿಯೇ ಇಲ್ಲ ಎಂದು ಸುಳ್ಳಾಡುವಂತೆಯೂ ಇರಲಿಲ್ಲ. ನನ್ನಲ್ಲಿನ ಬದಲಾವಣೆ ನನ್ನ ಆತ್ಮ ಸಂಗಾತಿಗಲ್ಲದೇ ಇನ್ಯಾರಿಗೆ ತಿಳಿಯಲು ಸಾಧ್ಯ? ಬಯಸಿ ಬಯಸಿ ಬದಲಾಗಿದ್ದೇನಲ್ಲ. ಗೆಟ್‌ ಟುಗೆದರ್‌ನಲ್ಲಿ ಅವನಾಡಿದ ಮಾತುಗಳೇ ಅವನೊಡನೆ ಹರಟುವಾಗ ಮಾತನಾಡುವಾಗ ನೆನಪಿಗೆ ಬರುತ್ತಿತ್ತು. ನಮ್ಮಪ್ಪ ಅಮ್ಮನ ಪ್ರಕಾರ ನಾ ಕೆಟ್ಟ ಹುಡುಗಿ, ಪರಶುವಿನ ಪ್ರಕಾರ ನಾ ಮೋಸ ಮಾಡಿದ ಹುಡುಗಿ, ರಾಜೀವೆಂಗೊ ನನ್ನ ಒಪ್ಪಿ ಮೆಚ್ಚಿ ಮದುವೆಯಾಗಿದ್ದಾರೆ. ನನಗೆ ಹಿಂಗೆ ಸಾಗರನ ಜೊತೆಗೆ ಸಂಬಂಧವಿದೆ ಎಂದು ತಿಳಿದರೆ ಅವರಿಗೂ ನಾ ದೂರದವಳಾಗುತ್ತೇನೆ. ಸಾಗರನ ಹತ್ತಿರವಾಗುವುದಕ್ಕೆ ನಾ ರಾಜೀವನಿಂದ ದೂರಾದರೂ ನಡಿದೀತು…. ನಾಳೆ ಹುಟ್ಟುವ ಮಗುವಿನ ಕಣ್ಣಲ್ಲಾದರೂ ನಾ ರವಷ್ಟು ಒಳ್ಳೆಯವಳಂತೆ ತೋರಬೇಕಲ್ಲವೇ? ನೀ ಸರಿ ಇಲ್ಲ ಅಂತ ಆ ಮಗುವಿನ ಬಾಯಲ್ಲಿ ಕೇಳುವಂತ ದಿನ ಬರಬಾರದಲ್ಲವೇ? ನಿಧಾನಕ್ಕೆ ನಿಧನಿಧಾನಕ್ಕೆ ಸಾಗರನಿಂದ ದೂರಾಗುತ್ತಿದ್ದೆ. ಬಿಡುವಿದ್ದರೂ ಅವನ ಬಹಳಷ್ಟು ಮೆಸೇಜುಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಕೇಳಿದರೆ ಬ್ಯುಸಿ ಕಣೋ ಎಂದುಬಿಡುತ್ತಿದ್ದೆ. ಕೆಲಸ ಮುಗಿಸಿ ಲೈಬ್ರರಿಯಲ್ಲಿ ಒಂದಷ್ಟು ಓದಿ ಮನೆಗೆ ಬಂದರೆ ಅಗಾಧ ಸುಸ್ತು. ಹಸಿವು. ಅಡುಗೆ ಮಾಡಿ ತಿಂದು ಪಾತ್ರೆ ತೊಳೆದು ಮಲಗಿದರೆ ಸಾಕು ಎನ್ನುವಷ್ಟು ಸುಸ್ತು. ಸುಸ್ತು ಕಣೋ ಎಂದ್ಹೇಳಿದಾಗ ಮುನಿಸೆಲ್ಲವನ್ನೂ ಬಿಟ್ಟು ಹೌದೇನೋ ರೆಸ್ಟ್‌ ಮಾಡು ಎಂದನ್ನುತ್ತಿದ್ದ. 

ಕೆಲವೊಮ್ಮೆ ದಿನಗಟ್ಟಲೆ ನನ್ನಿಂದ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ ಮುನಿಯುತ್ತಿದ್ದ. “ನಿನಗೆ ಬೇಕಿದ್ದಾಗ ಬ್ಯುಸಿ ಇರ್ತಿರಲಿಲ್ಲ. ನಿನಗೆ ನನ್ನ ಅವಶ್ಯಕತೆ ಇದ್ದಾಗ ಸುಸ್ತಿರುತ್ತಿರಲಿಲ್ಲ. ಈಗ ನನ್ನ ಅವಶ್ಯಕತೆ ಅಷ್ಟಾಗಿ ಇಲ್ಲವೇನೋ ಅಲ್ಲವಾ. ಅದಿಕ್ಕೆ ಬ್ಯುಸಿ, ದಿನದ ಇಪ್ಪತ್ತನಾಲ್ಕು ಘಂಟೆಯೂ ಸುಸ್ತು. ಈ ಬ್ಯುಸಿ ಸುಸ್ತಿನ ನಡುವೆ ಫೇಸ್‌ ಬುಕ್ಕಲ್ಲಿ ದಿನಕ್ಕತ್ತು ಪೋಸ್ಟು ಹಾಕಲು ಮಾತ್ರ ಭಯಂಕರ ಪುರುಸೊತ್ತಿರುತ್ತೆ” ಎಂದು ಹಂಗಿಸುತ್ತಿದ್ದ. ಮಗುವಿಗೋಸ್ಕರ ಸೆಕ್ಸಿಗೋಸ್ಕರ ನನ್ನನ್ನು ಬಳಸಿಕೊಂಡಳಿವಳು ಎಂಬ ಭಾವನೆ ಅವನಲ್ಲಿ ನೆಲೆಸಲಾರಂಭಿಸಿತ್ತು. ಮೊದಲಾಗಿದ್ದರೆ ಹಂಗಲ್ವೋ ಹಿಂಗೆ ಎಂದು ಸಮಾಧಾನ ಪಡಿಸುತ್ತಿದ್ದೆ, ಈಗ್ಯಾಕೋ ಸಮಾಧಾನಿಸಿ ಏನಾಗಬೇಕು ಎಂದು ಸುಮ್ಮನಾಗುತ್ತಿದ್ದೆ. ಇದ್ಯಾಕ್‌ ಹಿಂಗ್‌ ಮಾಡ್ದೆ, ಇದ್ಯಾಕ್‌ ಹಂಗ್‌ ಮಾಡ್ದೆ, ನನ್ನನ್ಯಾಕೆ ಇಷ್ಟೊಂದು ಅವಾಯ್ಡ್‌ ಮಾಡ್ತಿದ್ದೀಯ ಅಂತ ಪ್ರಶ್ನೆಗಳ ಸುರಿಮಳೆ ಬರಲಾರಂಭಿಸುತ್ತಿದ್ದಂತೆ ಮೌನದ ಮೊರೆ ಹೋಗಿಬಿಡುತ್ತಿದ್ದೆ. ಅದವನಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿತ್ತು, “ನನ್ನನ್ನು ಬಳಸಿ ಬಿಸಾಡಿದ್ದಕ್ಕೆ ಥ್ಯಾಂಕ್ಸ್‌” ಅಂತೊಂದು ಮೆಸೇಜು ಕಳಿಸಿ ಸುಮ್ಮನಾಗುತ್ತಿದ್ದ. ಒಂದು ದಿನದ ಮಟ್ಟಿಗೆ. ಮತ್ತೆ ಮೆಸೇಜು ಮಾಡುತ್ತಿದ್ದ. ಅಥವಾ ಕೆಲವೊಮ್ಮೆ ನನಗೇ ತುಂಬಾ ಸುಸ್ತಾದಾಗ, ಮನಸ್ಸಲ್ಲಿ ಮಗುವಿನ ಕುರಿತು, ಡೆಲಿವರಿಯ ಕುರಿತು ವಿನಾಕಾರಣ ದಿಗಿಲುಗೊಂಡಾಗ ಅವನಿಗೆ ಮೆಸೇಜಾಕುತ್ತಿದ್ದೆ. ನನ್ನ ಮೇಲಿನ ಅಷ್ಟೂ ಬೇಸರ ಕೋಪ ನುಂಗಿಕೊಂಡವನಂತೆ ಸಮಾಧಾನಿಸುತ್ತಿದ್ದ. ಎರಡು ಮೂರು ತಿಂಗಳಿಂದ ಇದೇ ಪುನರಾವರ್ತನೆ. ಕೆಲವೊಮ್ಮೆ ನನ್ನ ವರ್ತನೆಗೆ ನನಗೇ ಬೇಸರವಾಗುತ್ತಿತ್ತು, ನಿಜಕ್ಕೂ ಇವನನ್ನು ಬಳಸಿಕೊಂಡುಬಿಟ್ಟೆನಾ ಅಂತ ಅನುಮಾನ ಮೂಡುತ್ತಿತ್ತು. ಅದರ ಬಗ್ಗೆ ಹೆಚ್ಚು ಯೋಚಿಸದಂತೆ ಮಾಡಿದ್ದು ಗರ್ಭದೊಳಗೆ ಕೈಕಾಲು ಮೂಡಿಸಿಕೊಂಡು ಆಟವಾಡುತ್ತಿದ್ದ ಮಗು. ಮನೆಯಲ್ಲಿರಲಿ, ಕೆಲಸದಲ್ಲಿರಲಿ ನನ್ನ ಯೋಚನೆಯ ಬಹುಭಾಗವನ್ನು ಆವರಿಸಿಕೊಂಡಿದ್ದು ನನ್ನ ಮಗು. ಒಂದು ರಾತ್ರಿ ಮಲಗಿದ್ದ ಹೊತ್ತಿನಲ್ಲಿ ಹೊಟ್ಟೆಯ ಮೇಲೊಂದು ಬಲವಾದ ಏಟು ಬಿದ್ದಂತಾಯಿತು. ಇದೇನ್‌ ರಾಜೀವ್‌ ಯಾವತ್ತೂ ಹಿಂಗ್‌ ಒದೆಯದವರು ಇವತ್ತಿಂಗೆ ಅನ್ಕೊಂಡು ಅವರತ್ತ ತಿರುಗಿ ನೋಡಿದರೆ ಅವರು ನನ್ನ ಕಡೆಗೆ ಬೆನ್ನು ಮಾಡಿಕೊಂಡು ಮಲಗಿದ್ದಾರೆ, ಗೊರಕೆಯ ಸದ್ದು ಜೋರು ಕೇಳ್ತಿದೆ. ಏನೋ ಕನಸು ಬಿದ್ದಿರಬೇಕು ಎಂದುಕೊಂಡು ಮತ್ತೆ ನಿದ್ರೆಗೆ ಜಾರುವಷ್ಟರಲ್ಲಿ ಮತ್ತೊಂದು ಒದೆತ! ಓ ಇದು ಮಗೂದು ಅಂತ ಗೊತ್ತಾಗಿದ್ದೇ ಖುಷಿ ತಡೆಯಲಾಗಲಿಲ್ಲ. ರಾಜೀವನಿಗೆ ಬಲವಂತದಿಂದ ಎಬ್ಬಿಸಿ ವಿಷಯ ತಿಳಿಸಿದರೆ “ಬೆಳೆಯೋ ಮಗು ಒದೀದೆ ಇನ್ನೇನು? ಅದನ್‌ ಹೇಳೋಕ್‌ ನಿದ್ರೆಯಿಂದ ಎಬ್ಬಿಸಬೇಕಿತ್ತಾ” ಎಂದು ಬಯ್ದು ತಿರುಗಿ ಮಲಗಿದರು. ಸಾಗರನಿಗೆ ಮೆಸೇಜಿಸೋಣವೆಂದು ಫೋನ್‌ ಕೈಗೆತ್ತಿಕೊಂಡು ಟೈಪು ಮಾಡಿ ಸೆಂಡ್‌ ಬಟನ್‌ ಒತ್ತದೆ ಡಿಲೀಟ್‌ ಮಾಡಿ ಮಲಗಿದೆ. ಇವೆಲ್ಲ ಹಿಂಗಿಂಗೇ ನಡೀತದೆ ಅಂತ ಮೆಡಿಕಲ್‌ ಅಲ್ಲಿ ಓದಿದ್ರೂ ಮನದಲ್ಲಿ ಪುಳಕ ಮೂಡದೇ ಇರಲಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Dec 1, 2019

ಒಂದು ಬೊಗಸೆ ಪ್ರೀತಿ - 42

ಡಾ. ಅಶೋಕ್.‌ ಕೆ. ಆರ್.‌
ತೋರಿಸ್ಕೊಂಡು ಮಾತ್ರೆ ನುಂಗಲಾರಂಭಿಸಿದ ಮೇಲೆ ವಾಂತಿ ಹೆಚ್ಚು ಕಡಿಮೆ ನಿಂತೇ ಹೋಯಿತು ಅನ್ನುವಷ್ಟು ಕಡಿಮೆಯಾಯಿತು. ಊಟ ಇನ್ನೂ ಸರಿ ಸೇರುತ್ತಿರಲಿಲ್ಲ, ಆದರೂ ಮುಂಚಿಗಿಂತ ವಾಸಿ. ಸಂಜೆ ಮನೆಗೆ ಬಂದವಳೇ ಸಾಗರನಿಗೆ ಫೋನ್‌ ಮಾಡಿದೆ. 

ʼಎಷ್ಟೊತ್ಗೋ ಬರ್ತಿ ನಾಳೆʼ ನಾಳೆ ಹುಣಸೂರು ರಸ್ತೆಯಲ್ಲಿರೋ ಸೈಲೆಂಟ್‌ ಶೋರ್ಸ್‌ನಲ್ಲಿ ಗೆಟ್‌ ಟುಗೆದರ್ರು. ಎಪ್ಪತ್ತೆಂಭತ್ತು ಜನ ಬರುವವರಿದ್ದರು. ಮೈಸೂರಲ್ಲಿರುವವರು ಸ್ವಲ್ಪ ಚಟುವಟಿಕೆಯಿಂದ ತೊಡಗಿಸಿಕೊಳ್ಳಬೇಕು ಎಂದಿದ್ದರು. ಈ ಸಲ ಬಿಟ್ಟು ಬಿಡ್ರಪ್ಪ ನನ್ನ, ಹುಷಾರಿಲ್ಲ. ಮುಂದಿನ ಸಲ ಪೂರ್ತಿ ನಾನೇ ನೋಡ್ಕೋತೀನಿ ಬೇಕಿದ್ದರೆ ಎಂದು ಅದೂ ಇದೂ ಜವಾಬ್ದಾರಿ ಒಪ್ಪಿಸಲು ಫೋನಾಯಿಸಿದ್ದ ಗೆಳೆಯರಿಗೆ ತಿಳಿಸಿದ್ದ. 

“ನೀ ಎಷ್ಟೊತ್ತಿಗೆ ಬರ್ತಿ ಅಂತೀಯೋ ಅಷ್ಟೊತ್ತಿಗೆ ಬರ್ತೀನಿ” 

ʼನಾ ಏನ್‌ ಹೇಳೋದು. ಹನ್ನೊಂದರಷ್ಟೊತ್ತಿಗೆ ರೆಸಾರ್ಟಿಗೆ ಬರಬೇಕಂತ ಗ್ರೂಪಲ್ಲಿ ಹಾಕಿದ್ದಾರಲ್ಲ. ಅಷ್ಟೊತ್ತಿಗೆ ಬಾ ರೆಸಾರ್ಟಿಗೆʼ ನಗುತ್ತಾ ಹೇಳಿದೆ. 

“ಹೇ ಹೋಗೇ ಗೂಬೆ. ಎಷ್ಟೊತ್ತಿಗೆ ಸಿಗ್ತಿ ಹೇಳು” 

ʼನಾ ರಜೆ ಹಾಕಿದ್ದೀನಿ. ಬೆಳಿಗ್ಗೆ ಮನೆಗೇ ಬಾ. ಇಲ್ಲೇ ತಿಂಡಿ ತಿನ್ಕೊಂಡು ಅದೂ ಇದೂ ಮಾಡ್ಕಂಡು ಜೊತೇಲೇ ಹೋದರಾಯಿತುʼ 

“ಬರ್ತೀನಿ ಮನೆಗೆ ತಿಂಡಿಗೆ. ಜೊತೇಲೆಲ್ಲ ಬರೋಕಾಗಲ್ಲಪ್ಪ, ನನ್‌ ಫ್ರೆಂಡ್ಸು ಕಾಯ್ತಿರ್ತಾರೆ. ಅವರ ಜೊತೆಗೆ ಒಂದಷ್ಟು ಹರಟೆ ಕೊಚ್ಕಂಡು ಹನ್ನೆರಡರಷ್ಟೊತ್ತಿಗೆ ಬರ್ತೀವಿ ರೆಸಾರ್ಟಿಗೆ” 

ʼಓ. ಹಂಗೆ. ಸರಿ ಬಾ ಎಂಟೂವರೆ ಒಂಭತ್ತರಷ್ಟೊತ್ತಿಗೆʼ 

“ರಾಜೀವ್‌ ಇರ್ತಾರಾ?"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 24, 2019

ಒಂದು ಬೊಗಸೆ ಪ್ರೀತಿ - 41

ಡಾ. ಅಶೋಕ್.‌ ಕೆ. ಆರ್.‌
"ಇದು ನನ್ನ ಕೈಲಾಗೋ ಕೆಲಸವಲ್ಲ" ರಾಜೀವನ ಬಾಯಲ್ಲೀ ಮಾತುಗಳು ಬರೋಕೆ ಒಂದು ತಿಂಗಳ ಸಮಯವಾಗಿದ್ದು ಅಚ್ಚರಿಯೇ ಹೊರತು ಅವರ ಮಾತುಗಳಲ್ಲ. ಇಷ್ಟೊಂದ್ ದಿನ ತುರ್ತಿನಲ್ಲಿ ಹಣ ಬರದ ಯೋಜನೆಯೊಂದರಲ್ಲಿ ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದೇ ಅಪನಂಬುಗೆ ಮೂಡಿಸುವ ಸಂಗತಿ. ನನ್ನ ನಿರೀಕ್ಷೆಯನ್ನು ಮೀರಿ ಅವರು ನಡೆದುಕೊಳ್ಳಲಿಲ್ಲ ಎಂದು ಸಂಭ್ರಮಿಸಬೇಕೋ, ಯಾವ ಕೆಲಸವನ್ನೂ ಗಮನಕೊಟ್ಟು ಮಾಡದ ಅವರ ಬೇಜವಾಬ್ದಾರಿತನಕ್ಕೆ ಕನಿಕರಿಸಬೇಕೋ ತಿಳಿಯಲಿಲ್ಲ. ತೀರ ಕೆಟ್ಟಾನುಕೆಟ್ಟ ಪದಗಳನ್ನು ಬಳಸಿಕೊಂಡು ಅವರನ್ನು ಹೀಯಾಳಿಸಬೇಕೆಂದು ಹಾತೊರೆಯುತ್ತಿದ್ದ ಮನಸ್ಸಿಗೆ ಸುಳ್ಳು ಸುಳ್ಳೇ ಸಮಾಧಾನ ಮಾಡಿ 'ಹೋಗ್ಲಿ ಬಿಡಿ. ಇದಾಗಲಿಲ್ಲ ಅಂದ್ರೆ ಮತ್ತೇನಾದರೂ ಮಾಡಿದರಾಯಿತು. ಪ್ರಯತ್ನವನ್ನಂತೂ ಮಾಡಿದ್ರಲ್ಲ' 

“ನೀ ಬಂದ್ ಸಂಜೆ ಎರಡ್ ಘಂಟೆ ಕ್ಲಿನಿಕ್ಕಿನಲ್ಲಿ ಕುಳಿತಿದ್ದರೆ ಅದರ ಕತೆಯೇ ಬೇರೆಯಿರ್ತಿತ್ತು" ಇದವರ ಎಂದಿನ ಶೈಲಿ, ಸುತ್ತಿಬಳಸಿ ಕೊನೆಗೆ ಅವರ ವೈಫಲ್ಯಕ್ಕೆ ನಾ ಹೊಣೆಯೇ ಹೊರತು ಅವರಲ್ಲ ಎಂದನ್ನಿಸಿಬಿಡುವುದು. ಸಂಸಾರ ಹಳತಾಗುತ್ತಿದ್ದಂತೆ ಹೇಗೆ ಇಬ್ಬರ ವರ್ತನೆಯೂ ನಿರೀಕ್ಷಿತವಾಗಿಬಿಡ್ತದಲ್ಲ. ಆದರೆ ದೊಡ್ಡ ಜಗಳಗಳಾಗಬೇಕೆ ಹೊರತು ಸಣ್ಣ ಪುಟ್ಟ ಕಿರಿಪಿರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಡ್ತದೆ. ನಾ ಏನ್ ಮಾಡಿದಾಗ ಅವರು ಕೋಪಗೊಳ್ಳುತ್ತಾರೆಂದು ನನಗೆ, ಅವರು ಏನು ಮಾಡಿದಾಗ ನನಗೆ ಕೋಪ ಬರ್ತದೆಂದು ಅವರಿಗೆ ತಿಳಿದುಬಿಟ್ಟಿದೆ. ಏನೋ ಜೊತೆಯಲ್ಲಿದ್ದೀವಿ ಅಷ್ಟೇ ಅನ್ನುವ ಭಾವನೆ ನನ್ನಲ್ಲಿ ಬಂದು ಎಷ್ಟು ತಿಂಗಳಾಯಿತು? 

'ಮ್. ಅದ್ ಆಗ್ತಿರಲಿಲ್ಲವಲ್ಲ. ಏನೋ ಪಿಜಿ ಮುಗಿದ ಮೇಲೆ ನೋಡಬಹುದು ಅಷ್ಟೇ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 20, 2019

ಪಕ್ಷಿ ಪ್ರಪಂಚ: ಕೆಂಪು ಟಿಟ್ಟಿಭ.

ಚಿತ್ರ ೧: ಎರೆಹುಳುವಿನ ಬೇಟೆಯಲ್ಲಿ ಕೆಂಪು ಟಿಟ್ಟಿಭ.
ಡಾ. ಅಶೋಕ್. ಕೆ. ಆರ್. 
ನಿನಗಾಗದೇ ಇರೋ ಪಕ್ಷಿ ಯಾವ್ದು ಅಂತ ಯಾರಾದ್ರೂ ಕೇಳಿದ್ರೆ, ನನ್ನ ಮನಸಲ್ಲಿ ಪಟ್ಟಂತ ಮೂಡೋ ಪಕ್ಷಿ ಹೆಸರು ಕೆಂಪು ಟಿಟ್ಟಿಭ! ನನಗೆ ಈ ಪಕ್ಷಿ ಕಂಡರಾಗೋದಿಲ್ಲ ಅನ್ನುವುದಕ್ಕಿಂತಲೂ ಈ ಟಿಟ್ಟಿಭಗಳಿಗೆ ನಮ್ಮನ್ನು ಕಂಡರಾಗೋದಿಲ್ಲ ಅನ್ನೋದು ಸತ್ಯ. ಮನುಷ್ಯರನ್ನು ಕಂಡಾಗ ಪಕ್ಷಿಗಳಿಗೆ ಭಯವಾಗೋದು ಸಹಜವೇ, ಭಯ ಆದರೆ ದೂರ ಹಾರಿ ಹೋಗಲಿ ಬೇಕಿದ್ರೆ! ಆದರೀ ಟಿಟ್ಟಿಭಗಳು ಜೋರು ದನಿಯಲ್ಲಿ ಗಲಾಟೆ ಎಬ್ಬಿಸುತ್ತಾ ಸುತ್ತಮುತ್ತಲಿರುವ ಇನ್ನಿತರೆ ಪಕ್ಷಿಗಳೂ ದೂರ ದೂರಕ್ಕೆ ಹಾರುವಂತೆ ಮಾಡಿಬಿಡುತ್ತವೆ. ಅದಕ್ಕೂ ಕಾರಣವಿದೆ ಅನ್ನಿ.

ಆಂಗ್ಲ ಹೆಸರು: Red wattled lapwing (ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್)

ವೈಜ್ಞಾನಿಕ ಹೆಸರು: Vanellu Indicus (ವ್ಯಾನೆಲಸ್ ಇಂಡಿಕಸ್)

ಉದ್ದ ನೀಳ ಹಳದಿ ಕಾಲುಗಳನ್ನು ಹೊಂದಿರುವ ಟಿಟ್ಟಿಭಗಳು ಕೆರೆ, ನದಿಯಂಚಿನಲ್ಲಿ, ಗದ್ದೆಯಂಚಿನಲ್ಲಿ ಹೆಚ್ಚಿನ ಸಮಯ ಕಾಣಿಸಿಕೊಳ್ಳುತ್ತವೆ. ಕಂದು ಬಣ್ಣದ ರೆಕ್ಕೆಗಳು ಹರಡಿಕೊಂಡಾಗ ಬಿಳಿ - ಕಪ್ಪು ಬಣ್ಣಗಳನ್ನೂ ಕಾಣಬಹುದು. ಕೆಂಪು ಕೊಕ್ಕು, ಕಣ್ಣಿನ ಮುಂದಿನ ಕೆಂಪಿನ ಸಹಾಯದಿಂದ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನಿಂದ ಕೆಳಗೆ ಶುರುವಾಗುವ ಕಪ್ಪು ಬಣ್ಣ ಎದೆಯವರೆಗೂ ಚಾಚಿಕೊಳ್ಳುತ್ತದೆ. ಟೋಪಿ ಹಾಕಿದಂತೆ ತಲೆಯ ಮೇಲಷ್ಟು ಕಪ್ಪು ಬಣ್ಣ, ಅದರ ಎರಡು ಬದಿಯಲ್ಲಿ ಬಿಳಿ ಪಟ್ಟಿ. ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.

Nov 17, 2019

ಒಂದು ಬೊಗಸೆ ಪ್ರೀತಿ - 40

ಡಾ. ಅಶೋಕ್.‌ ಕೆ. ಆರ್.‌
ಹಿಂಗಿಂಗಾಯ್ತು ಅಂತ ಮೆಸೇಜ್ ಮಾಡಿದೆ. “ಮ್" ಎಂದೊಂದು ಪ್ರತಿಕ್ರಿಯೆ ಕಳಿಸಿದನಷ್ಟೇ. ಅವನಾದರೂ ಏನು ಹೇಳಿಯಾನು? ಏನು ಹೇಳಿದರೂ ಅದರಿಂದ ನನಗುಪಯೋಗವಾಗುವುದು ಅಷ್ಟರಲ್ಲೇ ಇದೆ. ಮೆಸೇಜುಗಳಿಂದ ಸುಳ್ಳು ಸುಳ್ಳೇ ಸಮಾಧಾನ ಆಗಬಹುದೇನೋ ಅಷ್ಟೇ. “ಜಾಸ್ತಿ ತಲೆ ಕೆಡಿಸಿಕೊಳ್ಳಬೇಡವೇ. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಿನ್ನ ತಮ್ಮನ ಹತ್ತಿರವೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸು. ನೋಡುವ, ಅಷ್ಟರಲ್ಲಿ ನಿನ್ ಗಂಡನ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ. ಅಷ್ಟರೊಳಗೆ ನಾನೂ ಕೆಲಸಕ್ಕೆ ಸೇರಿರ್ತೀನಿ. ಕೊಡ್ತೀನಿ" ಎಂದು ಮೆಸೇಜ್ ಮಾಡಿದ. 

'ಇಲ್ವೋ. ನಮ್ಮಿಬ್ಬರ ಸಂಬಂಧದಲ್ಲಿ ಹಣ ಬರೋದು ನನಗಿಷ್ಟವಿಲ್ಲ. ದುಡ್ಡು ಹೆಂಗೋ ಹೊಂಚಿಕೊಳ್ಳಬಹುದು ಬಿಡು. ನೀನೇ ಹೇಳಿದಂಗೆ ಅವರ ಮನೆಯವರು ನಮ್ಮ ಮನೆಯವರು ಇದ್ದೇ ಇದ್ದಾರಲ್ಲ. ಬೇಜಾರ್ ಅಂದ್ರೆ ಕೆಲಸ ಬಿಡೋ ದೊಡ್ಡ ನಿರ್ಧಾರವನ್ನು ಕೂಡ ನನಗೆ ತಿಳಿಸದೇ ಹೋದರಿವರು. ಅಷ್ಟೊಂದು ದೂರದವಳಾಗಿಬಿಟ್ಟೆ ನೋಡು. ನೀ ಇವರಂಗೆ ಆಗಬೇಡ್ವೋ. ನಿನ್ನ ಹೆಂಡತಿ ಒಪ್ತಾಳೋ ಬಿಡ್ತಾಳೋ ಅವಳಿಗೊಂದು ಮಾತು ಎಲ್ಲದರ ಬಗ್ಗೆಯೂ ಹೇಳು... ನೀ ಹೇಳ್ತಿ ಬಿಡು' 

“ಹ ಹ. ಅದೆಂಗೆ ಅಷ್ಟು ಖಡಕ್ಕಾಗಿ ಹೇಳ್ತಿ" 

'ಮ್. ನೀ ಚೆಂದ ಅರ್ಥ ಮಾಡ್ಕೋತಿ ಅದಿಕ್ಕೆ ಹೇಳ್ದೆ' 

“ಏನೋ ನೋಡುವ ಬಿಡು. ನೀ ಜಾಸ್ತಿ ಬೇಸರ ಮಾಡಬೇಡ್ವೆ. ನಂಗೂ ದುಃಖವಾಗ್ತದೆ" 

'ಹು ಕಣೋ. ಅದ್ಸರಿ ಪರೀಕ್ಷೆ ಹೆಂಗ್ ಆಯ್ತು. ನನ್ನ ಚಿಂತೆಯಲ್ಲೇ ಪರೀಕ್ಷೆ ಕೆಟ್ಟದಾಗಿ ಮಾಡಲಿಲ್ಲ ತಾನೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 10, 2019

ಒಂದು ಬೊಗಸೆ ಪ್ರೀತಿ - 39

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು. 

ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್‍‍ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nov 3, 2019

ಒಂದು ಬೊಗಸೆ ಪ್ರೀತಿ - 38

ಡಾ. ಅಶೋಕ್.‌ ಕೆ. ಆರ್.‌
“ಹೇಳಪ್ಪ ಏನ್ ಬಂದಿದ್ದು ಇಷ್ಟೊತ್ತಿನಲ್ಲಿ" ಅಪ್ಪನ ದನಿಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ತಾಳ್ಮೆಯಿತ್ತು. 

“ಅದೇ ಅಂಕಲ್. ಧರಣಿಗೆ ಮದುವೆ ಗೊತ್ತು ಮಾಡಿದ್ರಿ ಅಂತ ಗೊತ್ತಾಯ್ತು....” 

“ಯಾರ್ ಹೇಳಿದ್ರು?” ಪುರುಷೋತ್ತಮ ನನ್ನ ಕಡೆಗೆ ನೋಡಿದ. ಅಪ್ಪ ಅಮ್ಮನ ಸಿಟ್ಟಿನ ಕಣ್ಣುಗಳು, ತಮ್ಮನ ಅಸಹಾಯಕ ಕಣ್ಣುಗಳು ನನ್ನತ್ತ ಚಲಿಸಿದವು. 

“ಹೂನಪ್ಪ. ಗೊತ್ತು ಮಾಡಿದ್ವಿ. ನಮ್ಮ ಬಲವಂತವೇನೂ ಇಲ್ಲ. ಅವಳು ಒಪ್ಪಿಗೆ ನೀಡಿದ ಮೇಲೆಯೇ ಗೊತ್ತು ಮಾಡಿದ್ದು" 

“ಅದೂ ಗೊತ್ತಿದೆ ಅಂಕಲ್. ನಿಮ್ಮದೂ ಲವ್ ಮ್ಯಾರೇಜೇ ಅಂತಿದ್ಲು ಧರಣಿ. ಆರು ವರ್ಷದ ಲವ್ ಅಂಕಲ್....ಕಷ್ಟವಾಗ್ತದೆ" 

“ನನ್ನ ನಿರ್ಧಾರ ನಿಂಗೆ ಗೊತ್ತೇ ಇರಬೇಕಲ್ಲಪ್ಪ. ನಿಮ್ಮಮ್ಮನನ್ನು ಒಪ್ಪಿಸಿ ಕರೆದುಕೊಂಡು ಬಾ. ಧಾಂ ಧೂಂ ಅಂತ ಮದುವೆ ಮಾಡಿಕೊಡೋ ಜವಾಬ್ದಾರಿ ನಂದು. ನಮ್ಮ ಮನೆಯಲ್ಲಿ ಇನ್ಯಾರೂ ಒಪ್ಪದಿದ್ರೂ ಚಿಂತೆಯಿಲ್ಲ" 

“಻ಅಪ್ಪ ಮಗಳು ಅದೇ ಕಿತ್ತೋದ ಡೈಲಾಗ್ ಹೇಳಿ ಹೇಳಿ ನನ್ನ ಸಾಯಿಸ್ತೀರ. ನಿಮ್ಮ ಮಗಳಿಗೆ ನನ್ನ ಜೊತೆ ಲವ್ ಮಾಡ್ಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ನನ್ನ ಕೈಲಿ ಪಾರ್ಟಿ ಕೊಡಿಸ್ಕೊಂಡು, ಚಾಕಲೇಟು ಐಸ್ಕ್ರೀಮು ಕೊಡಿಸ್ಕೊಂಡು ದುಡ್ಡು ಖರ್ಚು ಮಾಡಬೇಕಾದ್ರೆ ಇದೆಲ್ಲ ನೆನಪಾಗಲಿಲ್ಲವಾ? ಆವಾಗ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ ಇವ್ಳು.....” ಕತ್ತೆತ್ತಿ ನನ್ನ ಕಡೆಗೆ ನೋಡಿದ. ಮನಸಲ್ಲೇ ಚಿನಾಲಿ ಎಂದು ಉಗಿದ. ಕಣ್ಣು ನನ್ನ ಬೆನ್ನ ಹಿಂದಿದ್ದ ಶೋಕೇಸಿನತ್ತ ಸರಿಯಿತು. ಅದರೆಡೆಗೆ ಕೈ ತೋರುತ್ತಾ "ಆ ನಿಮ್ ಶೋಕೇಸಿನಲ್ಲಿರೋ ಮುಕ್ಕಾಲು ಗಿಫ್ಟುಗಳು ನಾ ಕೊಟ್ಟಿರೋದು. ಅದನ್ನೆಲ್ಲ ತೆಗೆದುಕೋಬೇಕಾದ್ರೆ ನಿಮ್ಮಮ್ಮನ್ನ ಕೇಳ್ಕೊಂಡು ಬಾ ಅಂತ ಕಳಿಸಿದ್ಲಾ .....” ಅವನ ಮಾತು ಮುಗಿಯುವ ಮುನ್ನವೇ ಅಪ್ಪ ದಡಕ್ಕನೆ ಮೇಲೆದ್ದು ನನ್ನ ಕಡೆಗೆ ನಡೆದು ಬಂದರು. ಬಿತ್ತು ಏಟು ಕೆನ್ನೆಗೆ ಎಂದುಕೊಂಡೆ. ನನ್ನನ್ನು ಬದಿಗೆ ತಳ್ಳಿ ಶೋಕೇಸಿನ ಬಾಗಿಲು ತೆಗೆದು "ಅದ್ಯಾವ್ಯಾವ ಗಿಫ್ಟು ಕೊಡಿಸಿದ್ದೆ ತಗಳಪ್ಪ. ಲೋ ಶಶಿ ಒಳಗೋಗಿ ಒಂದು ದೊಡ್ಡ ಕವರ್ ತಗಂಡ್ ಬಾ" ಅಂದುಬಿಟ್ಟರು. ನಮ್ಮೆಲ್ಲರಿಗಿಂತ ಹೆಚ್ಚು ಆಘಾತಕ್ಕೊಳಗಾದವನು ಪುರುಷೋತ್ತಮ. ಅಪ್ಪ ಹಿಂಗೆಲ್ಲ ವರ್ತಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಹೇಳಿದ್ದಾಗೋಗಿದೆ. ಇನ್ನೇನು ಮಾಡೋದು ಎನ್ನುವವನಂತೆ ಎದ್ದು ಬಂದು ಒಂದೊಂದಾಗಿ ಗಿಫ್ಟುಗಳನ್ನೆಲ್ಲ ಎತ್ತಿಕೊಳ್ಳುತ್ತಿದ್ದ. ಐದು ವ್ಯಾಲೆಂಟೈನ್ಸ್ ಡೇಗೆ ಕೊಟ್ಟಿದ್ದು, ಆರು ನನ್ನುಟಿದಬ್ಬಕ್ಕೆ ಕೊಟ್ಟಿದ್ದು, ಎರಡು ಅವನ ಹುಟ್ಟಿದ ಹಬ್ಬದಂದು ಕೊಡಿಸಿದ್ದು, ಹೊಸ ವರ್ಷದಂದು ಕೊಡಿಸಿದ್ದ ನಾಲಕ್ಕು, ಯುಗಾದಿಗೆ ಕೊಡಿಸಿದ್ದ ಎರಡು, ಸುಮ್ಮನೆ ನನಗಿಷ್ಟವಾಯ್ತು ಅಂತ ಕೊಡಿಸಿದ್ದ ಐದು ಗಿಫ್ಟುಗಳನ್ನೂ ನೆನಪಿಟ್ಟುಕೊಂಡು ಎತ್ತಿಕೊಂಡ. ಅಂತಹ ಗಂಭೀರ ಸನ್ನಿವೇಶದಲ್ಲೂ ನನಗಿವರ ಮಕ್ಕಳಾಟ ನಗು ಮೂಡಿಸುತ್ತಿತ್ತು. ಜೋರು ನಗಲಿಲ್ಲ ಅಷ್ಟೇ. ಕವರ್ರಿಗಾಕಿಕೊಂಡವನಿಗೆ ಇನ್ನೇನು ಮಾತನಾಡಬೇಕೆಂದು ತೋಚಲಿಲ್ಲ. ಅಪ್ಪನೇ ಮಾತನಾಡಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 27, 2019

ಒಂದು ಬೊಗಸೆ ಪ್ರೀತಿ - 37

ಡಾ. ಅಶೋಕ್.‌ ಕೆ. ಆರ್.‌
“ಎಲ್ಲಿಗೆದ್ದೋಗ್ತಿ.....ಮುಚ್ಕಂಡ್ ಕೂತ್ಕೊಳ್ಳೇ ಚಿನಾಲಿ" ಪುರುಷೋತ್ತಮನ ದನಿಗೆ ಬೆಚ್ಚಿ ಬಿದ್ದೆ. ಪುರುಷೋತ್ತಮನ ಪೊಸೆಸಿವ್ನೆಸ್ ಅನುಭವಿಸಿದ್ದೀನಿ. ಅವನು ಸಿಟ್ಟಿಗೆ ಬಂದು ನನಗೆ ಹೊಡೆದಿದ್ದೂ ಇದೆ. ಆದರೆ ಇವತ್ತಿನ ದನಿಯಲ್ಲವನು ಹಿಂದೆಂದೂ ಮಾತನಾಡಿರಲಿಲ್ಲ. ಇಲ್ಲಿ ಕುಳಿತಿರುವವನು ನಿಜ್ಜ ಅವನೇನಾ ಅಂತೆಲ್ಲ ಅನುಮಾನ ಮೂಡಿಬಿಟ್ಟಿತು. ಎದ್ದೋಗುವ ಮನಸ್ಸಾಗಲಿಲ್ಲ ಈ ಚಿನಾಲಿಗೆ. ಕುಳಿತುಕೊಂಡೆ. ಜೋರಾಗಿ ಉಸಿರು ಬಿಡುತ್ತಿದ್ದ. ಸಿಗರೇಟಿನ ಘಮದ ಜೊತೆಗೆ ಮತ್ತೊಂದು ದುರ್ವಾಸನೆಯೂ ಸೇರಿಕೊಂಡಿತ್ತು. ಮೊದಲಿಗದು ಏನೆಂದು ತಿಳಿಯಲಿಲ್ಲ. ತೀರ ಅಪರಿಚಿತ ವಾಸನೆಯೂ ಆಗಿರಲಿಲ್ಲ. ಕ್ಷಣದ ನಂತರ ಮನೆಯಲ್ಲಿ ಅಪ್ಪ ಕುಡಿಯುವಾಗ ಬರುತ್ತಿದ್ದ ವಾಸನೆಯದು ಎಂದು ತಿಳಿಯಿತು. ಅಲ್ಲಿಯವರೆಗೂ ಒಂದು ತೊಟ್ಟನ್ನೂ ಬಾಯಿಗೆ ಬಿಟ್ಟುಕೊಳ್ಳದ ನನ್ನ ಪುರುಷೋತ್ತಮ ಕುಡಿದು ಬಂದಿದ್ದ.... ಅವನು ಕುಡಿದಿರೋದಕ್ಕೆ ನಾನೇ ಕಾರಣ.....ಪಾಪವೆನ್ನಿಸಿತ್ತು ಅವನ ಬಗ್ಗೆ. ಆದರೆ ನಿಜ ಹೇಳ್ತೀನಿ ಸಾಗರ ಅಷ್ಟೆಲ್ಲ ಪಾಪವೆಂಬ ಭಾವ ಅವನ ಬಗ್ಗೆ ಮೂಡಿದ ಕ್ಷಣದಲ್ಲೂ ನಾ ಬೇರೆಯವರನ್ನ ಮದುವೆಯಾಗೋ ನಿರ್ಧಾರ ತೆಗೆದುಕೊಂಡಿರೋದು ತಪ್ಪು.... ನಾ ಪ್ರೀತಿಸಿರೋದು ಪುರುಷೋತ್ತಮನನ್ನು..... ಅವನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬಾರದು ನಾನು..... ಇವನಲ್ಲೀಗ ಕ್ಷಮೆ ಕೇಳಿ ಇವನನ್ನೇ ಮದುವೆಯಾಗಬೇಕು..... ಉಹ್ಞೂ.... ಈ ರೀತಿಯ ಒಂದೇ ಒಂದು ಯೋಚನೆಯೂ ನನ್ನಲ್ಲಿ ತೇಲಿಹೋಗುವ ಮೋಡದಂತೆಯೂ ಮೂಡಲಿಲ್ಲ. ಅವನ ಮೇಲಿನ ಪ್ರೀತಿ ಸತ್ತೋಯ್ತ..... ಇಲ್ಲ..... ಇವತ್ತಿಗೂ ಅವನ ಮೇಲೆ ನನಗೆ ಪ್ರೀತಿ ಇದ್ದೇ ಇದೆ. ಅವನಷ್ಟು ಉತ್ಕಟವಾಗಿ ನನ್ನನ್ನು ಪ್ರೀತಿಸೋಕೆ ಯಾರಿಂದಲೂ ಸಾಧ್ಯವಿಲ್ಲ....... ಆ ಕ್ಷಣದಲ್ಲಿ..... ನನ್ನ ಪುರುಷೋತ್ತಮ ನನ್ನಿಂದಾಗಿ ಕುಡಿದು ಬಂದಿದ್ದಾನೆ ಅನ್ನೋ ಸತ್ಯ ಅರಿವಾದ ಸಂದರ್ಭದಲ್ಲಿ ಅವನ ಮೇಲಿನ ಪ್ರೀತಿ ಹೆಚ್ಚಾಗಲಿಲ್ಲ..... ನನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವ ಯೋಚನೆಯೂ ಹತ್ತಿರದಲ್ಲಿ ಸುಳಿಯಲಿಲ್ಲ.... ಅವನು ಇನ್ನೂ ಏನೇನು ಮಾಡಬಹುದು ಎನ್ನುವುದನ್ನು ಕಲ್ಪನೆಯೂ ಮಾಡಿಕೊಳ್ಳದ ನಾನು ಇನ್ನೂ ಅನೇಕನೇಕ ತಪ್ಪುಗಳನ್ನು ಅವತ್ತು ಮಾಡಿದೆ. ಅದನ್ನೆಲ್ಲ ಕೇಳಿ ನೀ ನಗದೇ ಹೋದರೆ ಹೇಳ್ತೀನಿ....' 

“ಪಾಪ ಇಷ್ಟೊಂದು ಗಂಭೀರದ ವಿಷಯಗಳನ್ನೇಳುವಾಗ ನಗೋಕಾಗ್ತದಾ? ಹೇಳು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 20, 2019

ಒಂದು ಬೊಗಸೆ ಪ್ರೀತಿ - 36

ಡಾ. ಅಶೋಕ್.‌ ಕೆ. ಆರ್.‌
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'

“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.

'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”

'ಇವಾಗೆಲ್ಲಿ ಹಂಗಿದ್ದೀನಿ?'

“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಻ಅಂತ ತಿಳಿಸಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 15, 2019

‘ಅಸುರನ್’: ಸಹಜತೆಗೆ ಹತ್ತಿರವಿರುವ ಒಳ್ಳೆಯ ಪ್ರಯತ್ನದ ಚಲನಚಿತ್ರ

ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು
ಅಸುರನ್ ಇಂದಿನ ದಿನಗಳಲ್ಲಿ ಬಂದಿರುವ ವಿರಳ ಚಿತ್ರಕಥೆ ಹೊಂದಿರುವ ಸಿನಿಮಾ. ವೆಟ್ರಿಮಾರನ್ ಇದರ ನಿರ್ದೇಶಕ. ಒಳ್ಳೆಯ ಛಾಯಾಗ್ರಹಣ, ಒಳ್ಳೆಯ ದೃಶ್ಯಸಂಯೋಜನೆ. ಚಿತ್ರದಲ್ಲಿ ಸಹಜತೆ ಹೆಚ್ಚು ಇದೆ.. ಪರವಾಗಿಲ್ಲ ಎನ್ನಬಹುದಾದ ಸಂಗೀತವಿದೆ.

ತಮಿಳಿನ ಧನುಷ್ ಹಾಗೂ ಮಲೆಯಾಳಂ ನ ಮಂಜು ವಾರಿಯರ್ ಮುಖ್ಯ ತಾರಾಗಣದಲ್ಲಿರುವ ಈ ಸಿನಿಮಾ ಜಾತೀಯತೆಯ ಮನಸುಗಳು ಹಾಗೂ ಕ್ರೌರ್ಯಗಳ ಕೆಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಕಥಾನಾಯಕನ ಕುಟುಂಬದ ಸುತ್ತಾ ಈ ಕಥೆಯನ್ನು ಹೆಣೆಯಲಾಗಿದೆ. ತಮಿಳಿನ ಪೂಮಣಿ ಬರೆದ ವೆಕೈ ಎಂಬ ಕಾದಂಬರಿ ಆದಾರಿತ ಚಿತ್ರವಿದು.

ಧನುಷ್ ರ ಅಭಿನಯ ಚೆನ್ನಾಗಿದೆ. ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಆರಂಭದ ಅಂದರೆ ಫ್ಲಾಶ್ ಬ್ಯಾಕ್ ಬರುವವರೆಗೂ ಚಿತ್ರದಲ್ಲಿ ಬಿಗಿತನ ಕಾಣುವುದಿಲ್ಲ. ಆ ಸನ್ನಿವೇಶಗಳಿಗೆ ತಕ್ಕಂತಹ ಭಾವಗಳನ್ನು, ಗಾಢತೆಗಳನ್ನು ವೀಕ್ಷಕರಿಗೆ ಮೂಡಿಸುವಲ್ಲಿ ಯಶಸ್ಸು ಕಾಣುವುದಿಲ್ಲ. ನಂತರದ ಚಿತ್ರ ನಿರ್ದೇಶಕರ ಹಿಡಿತ, ಪಾತ್ರಧಾರಿಗಳ ಅಭಿನಯ ಗಾಢತೆಯನ್ನು ಸನ್ನಿವೇಶಗಳನ್ನು ವೀಕ್ಷಕರಿಗೆ ಗಾಢವಾಗಿ ತಟ್ಟುವಂತೆ ಕಥೆಯನ್ನು ನಿರೂಪಿಸುತ್ತಾ ಹೋಗುತ್ತದೆ.

Oct 13, 2019

ಒಂದು ಬೊಗಸೆ ಪ್ರೀತಿ - 35

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಆರೂವರೆಗೆದ್ದು ಮೊಬೈಲ್ ನೋಡಿದಾಗ ಸಾಗರನ ಮೆಸೇಜು ಕಂಡಿತು. ಐದೂವರೆಯಷ್ಟೊತ್ತಿಗೆ "ಗುಡ್ ಮಾರ್ನಿಂಗ್. ತಲುಪಿದೆ" ಅಂತ ಮೆಸೇಜು ಮಾಡಿದ್ದ. ಪ್ರತಿಯಾಗಿ 'ಗುಡ್ ಮಾರ್ನಿಂಗ್' ಅಂತ ಕಳಿಸಿ ತಿಂಡಿ ಮಾಡಲು ಮೇಲೆದ್ದೆ. ರಾಜೀವ ತಿಂಡಿ ತಿಂದುಕೊಂಡು ಏಳೂಕಾಲಷ್ಟೊತ್ತಿಗೆ ಹೊರಟರು. ಆಗಲೇ ಫೋನ್ ಮಾಡುವ ಸಾಗರನಿಗೆ ಎಂದುಕೊಂಡವಳಿಗೆ ನಾನಿನ್ನೂ ಸ್ನಾನ ಕೂಡ ಮಾಡಿಲ್ಲ ಎನ್ನುವುದು ನೆನಪಾಯಿತು. ದಡಬಡಾಯಿಸಿ ಸ್ನಾನ ಮಾಡಿಕೊಂಡು ಹೊರಬಂದು ಸಾಗರನಿಗೆ ಫೋನ್ ಮಾಡಿದೆ. ಮೊದಲ ರಿಂಗಿಗೇ ಫೋನೆತ್ತಿಕೊಂಡ. 

'ಏನ್ ಮಾಡ್ತಿದ್ಯೋ'

“ಏನಿಲ್ಲ. ನಿನ್ನ ಫೋನಿಗೇ ಕಾಯ್ತಿದ್ದೆ"

'ಅಲ್ಲ ಫ್ರೆಂಡ್ ಮುಂದೇನೇ ಮಾತಾಡಿದ್ರೆ ಯಾರಂತ ಕೇಳೋಲ್ವ'

“ಹ ಹ. ರೂಮಿನೊರಗಿದ್ದೀನಿ ಹೇಳು"

'ಹೇಳೋಕೇನಿದೆಯೋ ಗೂಬೆ. ಒಂಟಿಕೊಪ್ಪಲು ದೇವಸ್ಥಾನದ ಹತ್ತಿರ ಬಂದು ಫೋನ್ ಮಾಡು. ಗಾಡೀಲ್ ಬರ್ತೀಯಾ ಹೆಂಗೆ?'

“ಹು ಕಣೆ. ಬೈಕಿದೆ ಫ್ರೆಂಡ್ದು"

'ಸರಿ ಬಂದ್ ಫೋನ್ ಮಾಡು. ದೇವಸ್ಥಾನದಿಂದ ದಾರಿ ಹೇಳ್ತೀನಿ'

ಫೋನಿಟ್ಟು ಕನ್ನಡಿಯ ಎದುರಿಗೆ ನಿಂತೆ. ಸುತ್ತಿಕೊಂಡಿದ್ದ ಟವಲನ್ನು ತೆಗೆದುಹಾಕಿದೆ. ಅಲ್ಲಲ್ಲಿ ಇನ್ನೂ ನೀರಿತ್ತು, ಬಿಸಿಯಿತ್ತು. ಚೆಂದ ಒರೆಸಿಕೊಂಡು ಹಾಗೇ ದೇಹವನ್ನು ನೋಡ್ತಾ ನಿಂತುಕೊಂಡೆ. ಅಯ್ಯಪ್ಪ ಎಷ್ಟು ದೊಡ್ಡದಿದೆ ನನ್ನ ಮೊಲೆಗಳು ಎಂದು ನನಗೇ ಅನ್ನಿಸಿತು. ಎದುರು ಹೋಗುವ ಗಂಡಸರೆಲ್ಲ ಒಮ್ಮೆ ಅದರತ್ತ ನೋಡದೇ ಇರೋದಿಲ್ಲ. ಎಷ್ಟು ಮುಜುಗರವಾಗ್ತದೆ ಆಗ. ಇಷ್ಟವಾದವರು ನೋಡ್ದಾಗ ಖುಷಿಯಾಗೋದೂ ಹೌದು. ಇವತ್ತಿಗೆ ಈ ಬೆತ್ತಲನ್ನು ನೋಡಿದವರ ಸಂಖೈ ಮೂರು ಎಂಬ ಯೋಚನೆ ಬಂದು ಬೆಚ್ಚಿ ಬಿದ್ದೆ. ಇದೆಂತ ಯೋಚನೆ? ಪುರುಷೋತ್ತಮನ ಎದುರಿಗೆ ಯಾವತ್ತಿಗೂ ಪೂರ್ತಿ ಬೆತ್ತಲಾಗಿರಲಿಲ್ಲ. ಅವನಾಗೇ ಕೇಳಿಕೊಂಡಿದ್ದಾಗಲೂ ಆಗಿರಲಿಲ್ಲ. 'ಹೆಂಗಿದ್ರೂ ಸೆಕ್ಸ್ ಮಾಡಲ್ಲವಲ್ಲ ಮತ್ಯಾಕೆ ಪೂರ್ತಿ ಬೆತ್ತಲಾಗೋದು ಅನ್ನುತ್ತಿದ್ದೆ' ಸುಮ್ಮನಾಗುತ್ತಿದ್ದ. ರಾಜೀವನೊಡನೆ ಶುರುವಿನಲ್ಲಿದ್ದಷ್ಟು ದೇಹದುಡುಕಾಟ ಈಗಿಲ್ಲ. ಮದುವೆಯಾಗಿ ಸುಮಾರು ವರುಷಗಳು ಉರುಳಿ ಹೋದ ಮೇಲೆ ಎಲ್ಲರ ಸಂಸಾರದಲ್ಲೂ ಹೀಗೆಯೋ ಏನೋ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 7, 2019

ಒಂದು ಬೊಗಸೆ ಪ್ರೀತಿ - 34

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಇವ್ರು ಎಷ್ಟು ಘಂಟೆಗೆ ಬಂದು ಮಲಗಿದರೋ ಗೊತ್ತಾಗದಷ್ಟು ನಿದ್ರೆ. ಬೆಳಿಗ್ಗೆ ಎದ್ದಾಗ ಅವರ ಬಾಯಿಂದಷ್ಟೇ ಅಲ್ಲ ಇಡೀ ದೇಹದಿಂದಲೇ ರಮ್ಮಿನ ವಾಸನೆ ಬರುವಂತಿತ್ತು. ನಾ ಡ್ಯೂಟಿಗೆ ಹೋಗಲು ತಯಾರಾಗುತ್ತಿರುವಾಗ ಎಚ್ಚರವಾಗಿದ್ದರು. 'ಇದ್ಯಾಕೆ ಮಲಗೇ ಇದ್ದೀರ. ಹೋಗಲ್ವ ಕೆಲಸಕ್ಕೆ' ಎಂದು ಕೇಳಿದೆ. 

“ಆ ದರಿದ್ರ ಕೆಲಸಕ್ಕೆ ಯಾರ್ ಹೋಗ್ತಾರೆ ಬಿಡು" ಮಲಗಿದ್ದಲ್ಲಿಂದಲೇ ಹೇಳಿದ. 

'ಮಾಡೋ ಕೆಲಸಾನ ದರಿದ್ರ ಅಂದ್ರೆ ಆಗ್ತದಾ?' 

“ಓಹೋ. ನನಗಿಂತ ಜಾಸ್ತಿ ದುಡೀತೀನಿ ಅನ್ನೋ ಅಹಂಕಾರದಲ್ಲಿ ಬುದ್ಧಿವಾದ ಹೇಳೋಕೆಲ್ಲ ಬರಬೇಡಿ ಮೇಡಂ. ನನಗ್ ಗೊತ್ತು ಯಾವುದು ಒಳ್ಳೇದು ಯಾವುದು ದರಿದ್ರದ್ದು ಅಂತ.....” 

'ಸರಿ ನಿಮ್ಮಿಷ್ಟ' ಬೆಳಿಗ್ಗೆ ಬೆಳಿಗ್ಗೆ ಜಗಳವಾಡುವ ಮನಸ್ಸಿರಲಿಲ್ಲ ನನಗೆ. ಇಡೀ ದಿನ ಹಾಳಾಗ್ತದೆ. 

“ಇಷ್ಟೇ ಅಲ್ವ ಜೀವನ. ಮೊದಲೆಲ್ಲ ಕೆಲಸದ ವಿಷಯಕ್ಕೆ ನಾ ಗೋಳಾಡ್ವಾಗ ಮುದ್ದುಗರೆದು ಸಮಾಧಾನ ಮಾಡ್ತಿದ್ದೆ. ಈಗ ಸರಿ ನಿಮ್ಮಿಷ್ಟ ಅಂತಂದು ಸುಮ್ಮನಾಗ್ತಿ" 

'ಬೆಳಿಗ್ಗೆ ಬೆಳಿಗ್ಗೆ ಮಾತಿಗೆ ಮಾತು ಬೆಳೆದು ಜಗಳವಾಡುವ ಮನಸ್ಸಿಲ್ಲ ರೀ...'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Oct 4, 2019

ಗಾಂಧಿ ಜಯಂತಿಯ ದಿನ ಪ್ರಧಾನಿ ಹೇಳಿದ ಸುಳ್ಳು.

ಡಾ. ಅಶೋಕ್. ಕೆ. ಆರ್. 
ಗಾಂಧಿ ಜಯಂತಿಯ ದಿನ ಸಾಬರಮತಿ ಆಶ್ರಮದಲ್ಲಿ ನಡೆದ 'ಸ್ವಚ್ಛ ಭಾರತ ದಿನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಈಗ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ. ೬೦ ತಿಂಗಳುಗಳಲ್ಲಿ ಹನ್ನೊಂದು ಕೋಟಿ ಶೌಚಾಲಯಗಳು ನಿರ್ಮಾಣವಾಗಿರುವುದನ್ನು ನೆಪವಾಗಿಟ್ಟುಕೊಂಡು ಪ್ರಧಾನಿಯವರು ಬಯಲು ಶೌಚ ಮುಕ್ತ ರಾಷ್ಟ್ರದ ಘೋಷಣೆ ಮಾಡಿದ್ದಾರೆ. ನಿಜಕ್ಕೂ ವಾಸ್ತವದಲ್ಲಿ, ಭಾರತ ಬಯಲು ಶೌಚ ಮುಕ್ತ ರಾಷ್ಟ್ರವಾಗಿದೆಯಾ? 

ನಮ್ಮ ರಾಜಕಾರಣಿಗಳು - ಅದು ಮುಖ್ಯಮಂತ್ರಿಯಾದರೂ ಸರಿ, ಪ್ರಧಾನಮಂತ್ರಿಯಾದರೂ ಸರಿ - ಚುನಾವಣೆಯ ಸಂದರ್ಭದಲ್ಲಿ ಸುಳ್ಳುಗಳನ್ನೇಳುವುದು ಅಥವಾ ಇರುವ ಸತ್ಯವನ್ನೇ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ವೈಭವೀಕರಿಸಿ ಹೇಳುವುದು ಸಹಜ ಸಂಗತಿಯಂತೇ ಆಗಿ ಹೋಗಿದೆ. My experiments with truth ಅನ್ನೋ ಹೆಸರಿನ ಆತ್ಮಚರಿತ್ರೆ ಬರೆದ, ಸತ್ಯಕ್ಕಾಗಿ ಆಗ್ರಹಿಸುವ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ ಗಾಂಧೀಜಿಯ ಜನ್ಮದಿನವೇ ಅನಾವಶ್ಯಕ ಸುಳ್ಳೇಳುವ ಅನಿವಾರ್ಯತೆಯಾದರೂ ಪ್ರಧಾನಿಗೇನಿತ್ತು? ಅಥವಾ ನಿಜಕ್ಕೂ ಯಾರೋ ಒಬ್ಬ ಅಧಿಕಾರಿಯೋ ಮತ್ತೊಬ್ಬರೋ ವೈಭವೀಕರಿಸಿ ಕೊಟ್ಟ ವರದಿಯನ್ನೇ ನಂಬಿಬಿಡುವಷ್ಟು ನಮ್ಮ ಪ್ರಧಾನಿ ಮುಗ್ದರೇ? 

ಈ ಮುಂಚೆ ಇದ್ದ ನಿರ್ಮಲ ಭಾರತ ಯೋಜನೆಯಡಿ, ತದನಂತರ ಬಂದ ಸ್ವಚ್ಛ ಭಾರತ ಯೋಜನೆಯಡಿ ಬಹಳಷ್ಟು ಗ್ರಾಮಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣಗೊಂಡಿರುವುದು ಎದ್ದು ಕಾಣಿಸುತ್ತದೆ (ಕೊನೇ ಪಕ್ಷ ಕರ್ನಾಟಕದ ಹಳ್ಳಿಗಳಲ್ಲಿ), ಅದರಲ್ಲೇನೂ ಅನುಮಾನವಿಲ್ಲ. ಅಷ್ಟಿದ್ದರೂ ಹಳ್ಳಿಯಂಚಿನ ಕೆರೆ ಬದಿಗಳಲ್ಲಿ, ಗದ್ದೆ ಹೊಲದ ಬದುವಿನಲ್ಲಿ, ಕಾಲುವೆಯಂಚಿನಲ್ಲಿ, ಹಳ್ಳಗಳತ್ತಿರ ಬಯಲು ಶೌಚ ಯಥಾಸ್ಥಿತಿಯಲ್ಲೇ ಮುಂದುವರೆದಿರುವುದಂತೂ ಹೌದು. ಶೌಚಾಲಯಗಳ ನಿರ್ಮಾಣ ನಡೆಯುತ್ತಿದ್ದರೂ ಬಯಲು ಶೌಚ ಯಾಕೆ ಮುಂದುವರೆಯುತ್ತಿದೆ?

Oct 2, 2019

ಬಲಾಡ್ಯ ರಾಜಕೀಯ ಶಕ್ತಿಯಾಗಬೇಕಿರುವ ಕನ್ನಡ ಭಾಷಿಕ ಸಮುದಾಯ

ಕು.ಸ.ಮಧುಸೂದನ ರಂಗೇನಹಳ್ಳಿ 
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಕನ್ನಡೇತರರ ಪಾಲಾಗಿರುವ ಹಿನ್ನೆಲೆಯಲ್ಲಿ ‘ಕನ್ನಡಿಗ’ರೆಂದರೆ ಯಾರು? ಕನ್ನಡಿಗ ಎಂದು ಹೇಳಲು ಇರುವ ಮಾನದಂಡವೇನು ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿಯೇ ಕನ್ನಡ ಭಾಷಿಕ ಜನಾಂಗ ತನ್ನನ್ನು ತಾನು ಆಳಿಕೊಳ್ಳಲು ಸಶಕ್ತವಾಗಿದೆಯೇ ಮತ್ತು ಅದಕ್ಕೆ ಬೇಕಾಗಿರುವುದು ಏನು ಎಂಬುದರ ಬಗ್ಗೆ ಒಂದಿಷ್ಟು ಚಿಂತನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ 

ನಿಜವಾದ ಅರ್ಥದಲ್ಲಿ ಇವತ್ತು ಕನ್ನಡ ಚಳುವಳಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಂತೆ ಕಾಣುತ್ತಿವೆ. ಇಂತಹ ಚಳುವಳಿಗಳ ಆತ್ಮವಾಗಿರಬೇಕಾಗಿದ್ದ ಅಕ್ಷರಸ್ಥ ಮದ್ಯಮವರ್ಗ ಸ್ವತ: ಜಡಗೊಂಡಿರುವ ಈ ಸನ್ನಿವೇಶದಲ್ಲಿ ನಮ್ಮ ಕನ್ನಡ ಚಳುವಳಿ ಸಹ ನಿಸ್ತೇಜಗೊಂಡಂತೆ ನಮಗೆ ಭಾಸವಾಗುತ್ತಿದ್ದರೆ ಅಚ್ಚರಿಯೇನಲ್ಲ. ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿಯೂ ಕನ್ನಡ ಚಳುವಳಿಯ ಕುರಿತು ಒಂದಿಷ್ಟು ಆಶಾಬಾವನೆ ಒಡಮೂಡಿದ್ದು ಕೆಲವರ್ಷಗಳ ಹಿಂದೆ ನಡೆದ ಕಳಸಾ ಬಂಡೂರಿ ಮತ್ತು ಕಾವೇರಿ ನದಿ ನೀರಿನ ಹಂಚಿಕೆಯ ವಿವಾದಗಳ ಬಗ್ಗೆ ನಡೆದ ಹೋರಾಟದ ಕ್ಷಣದಲ್ಲಿ ಮಾತ್ರ. 

ಹಾಗೆ ನೋಡಿದರೆ ನಾವು ಕನ್ನಡ ಚಳುವಳಿಯ ಒಟ್ಟು ಅರ್ಥವನ್ನೇ ಸಂಕುಚಿತಗೊಳಿಸಿ ನೋಡುವ ವಿಷಯದಲ್ಲಿಯೇ ಎಡವಿದ್ದೇವೆ. ಯಾಕೆಂದರೆ ಕನ್ನಡ ಚಳುವಳಿ ಎಂದರೆ ಅದು ಕೇವಲ ಕನ್ನಡ ಬಾಷೆಗೆ ಸೀಮಿತವಲ್ಲ. ಬದಲಿಗೆ ಕರ್ನಾಟಕದ ನೆಲ, ಜಲ, ಬಾಷೆ, ನೈಸರ್ಗಿಕ ಸಂಪನ್ಮೂಲಗಳೂ ಸೇರಿದಂತೆ ಒಟ್ಟು ಕನ್ನಡ ನಾಡಿನ ಚಳುವಳಿಯೇ ನಿಜವಾದ ಕನ್ನಡ ಚಳುವಳಿ! ಆದರೆ ಇದುವರೆಗು ನಡೆದ ಕನ್ನಡ ಚಳುವಳಿಗಳು ಕೇವಲ ಬಾಷಿಕ ಚಳುವಳಿಗಳಾಗಿ: ಆಡಳಿತ ಬಾಷೆ ಕನ್ನಡವಾಗಬೇಕು, ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡಬೇಕು, ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂಬ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿ ನಡೆಯುತ್ತ ಬಂದಿವೆ. ಇಂತಹ ಏಕಮುಖ ಚಳುವಳಿಯ ಅಪಾಯವೆಂದರೆ ಕನ್ನಡ ಚಳುವಳಿ ಏಕಾಕಿಯಾಗಿ ಉಳಿದುಬಿಡುವುದು ಮತ್ತು ಕನ್ನಡದ ನೆಲ, ಜಲ, ಸಂಪನ್ಮೂಲಗಳ ವಿಷಯ ತನಗೆ ಸಂಬಂದಿಸಿದ್ದಲ್ಲವೆಂಬ ಅಭಿಪ್ರಾಯ ಬೆಳೆಸಿಕೊಂಡು ಬಿಡುವುದಾಗಿದೆ. ಹೀಗಾದಾಗ ಇಡಿ ಕನ್ನಡ ಚಳುವಳಿ ಕೇವಲ ಭಾಷಾ ದುರಭಿಮಾನದ ಸಂಕೇತವಾಗಿ ಮಾತ್ರ ಉಳಿದು ಬಿಡುವ ಅಪಾಯವಿದೆ. 

Sep 29, 2019

ಒಂದು ಬೊಗಸೆ ಪ್ರೀತಿ - 33

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಮಲಗಲೋಗುವಷ್ಟರಲ್ಲಿ ಪುರುಷೋತ್ತಮ ಮತ್ತೈದು ಬಾರಿ ಕರೆ ಮಾಡಿದ್ದ. ನಾ ತೆಗೆಯಲಿಲ್ಲ. ಕೊನೆಗೆ "ಇನ್ನೂ ಕೋಪ ಹೋಗಿಲ್ವೇನೇ ಧರು" ಎಂದು ಮೆಸೇಜು ಮಾಡಿದ. 

'ಕೋಪಾನಾ? ಹಂಗೇನಿಲ್ಲಪ್ಪ' ಒಂದು ಸುಳ್ಳನ್ನ ಹಂಗೇ ವಗಾಯಿಸಿದೆ. 

“ಮತ್ಯಾಕೆ ಫೋನ್ ರಿಸೀವ್ ಮಾಡ್ಲಿಲ್ಲ" 

'ಹಂಗೇನಿಲ್ವೋ. ಮನೆಗ್ಯಾರೋ ಬಂದಿದ್ರು. ಅದಿಕ್ಕೆ ನೋಡಲಿಲ್ಲ ಫೋನ್ ನ' 

“ಓಹೋ! ಅಪ್ಪ ಅಮ್ಮ ಹೊರಗೋಗಿದ್ರೇನೋ....ನನ್ ತರ ಇನ್ಯಾವುದೋ ಬಕ್ರಾನ ಮನೆಗೆ ಕರೆಸಿಕೊಂಡಿದ್ದೇನೋ ತೆವಲು ತೀರಿಸಿಕೊಳ್ಳೋಕೆ....” ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿ ಬಯ್ಯಬೇಕೆನ್ನಿಸಿತು. ಬಯ್ಯಲಿಲ್ಲ. 

'ಓ! ನಿನ್ನನ್ನು ಮನೆಗೆ ಕರೆದುಕೊಂಡು ಬರ್ತಿದ್ದದ್ದು ತೆವಲು ತೀರಿಸಿಕೊಳ್ಳೋಕೆ ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ. ಬಾಯ್' ಎಂದು ಮೆಸೇಜು ಮಾಡಿದೆ. 

“ಹಂಗಲ್ವೇ.... ಸಾರಿ” ಅಂತ ಆರು ಸಲ ಕಳುಹಿಸಿದ. ಪ್ರತಿಕ್ರಿಯಿಸಲಿಲ್ಲ. ಕೊನೆಗೆ "ಸರಿ ನಾಳೆ ಸಿಗುವ" ಎಂದ್ಹೇಳಿದ. ಮೊಬೈಲನ್ನು ಬದಿಗಿಟ್ಟು ಮಲಗಲು ಹೋದಾಗ ಮತ್ತೊಮ್ಮೆ ಮೊಬೈಲ್ ಶಬ್ದ ಮಾಡಿತು. ಇವನದೇ ಮತ್ತೊಂದು ಮೆಸೇಜು ಬಂದಿರ್ತದೆ ಅಂತ ನೋಡಿದವಳಿಗೆ "ಹಾಯ್. ಊಟ ಆಯ್ತ" ಎಂಬ ಮೆಸೇಜು ಕಾಣಿಸಿತು. ರಾಜೀವನದು! 

'ಹು. ಆಯ್ತು. ನಿಮ್ಮದು'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 24, 2019

ಬಂಡವಾಳ ಹೂಡಿಕೆದಾರರ ಸಮಾವೇಶ ಎಂಬ ಬೃಹತ್ ಪ್ರಹಸನ!

ಕು.ಸ.ಮಧುಸೂದನ ರಂಗೇನಹಳ್ಳಿ
ದೇಶ ಮತ್ತು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ತೀವ್ರ ಆರ್ಥಿಕ ಹಿಂಜರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳ ನಡುವೆಯೇ ರಾಜ್ಯದ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಮತ್ತೊಂದು ಸುತ್ತಿನ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. 

2013ರಿಂದ 2018ರವರೆಗು ಅಂದಿನ ಕಾಂಗ್ರೆಸ್ ಸರಕಾರ ನಡೆಸಿದ್ದ ಬಂಡವಾಳ ಹೂಡಿಕೆಯ ಸಮಾವೇಶಗಳು ಪಡದುಕೊಂಡಿದ್ದ ಪ್ರಚಾರವನ್ನು, ತಂದುಕೊಟ್ಟ ಪಲಿತಾಂಶವನ್ನು ವಿಶ್ಲೇಷಿಸಿದರೆ ಈ ಸಮಾವೇಶಗಳ ನಿಜಬಣ್ಣ ಬಯಲಾಗುತ್ತ ಹೋಗುತ್ತದೆ. ಈ ಹಿಂದಿನ ಕೈಗಾರಿಕಾ ಮಂತ್ರಿಗಳು ರಾಜ್ಯದಲ್ಲಿ ಸಮಾವೇಶಗಳನ್ನು ನಡೆಸುವುದರ ಜೊತೆಜೊತೆಗೆ ವಿದೇಶಗಳಲ್ಲಿಯೂ ರೋಡ್ ಶೋಗಳನ್ನು ನಡೆಸಿ ತಮ್ಮ ಪ್ರಯತ್ನ ಶೇಕಡಾ ನೂರರಷ್ಟು ಫಲಪ್ರದವಾಗಿದೆಯೆಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ವಸ್ತು ಸ್ಥಿತಿ ಬೇರೆಯದೆ ಇದೆ! 

ಕಳೆದ ಐದು ವರ್ಷಗಳಲ್ಲಿ ಸರಿ ಸುಮಾರು ಎಪ್ಪತ್ತು ಸಾವಿರ ಕೋಟಿ ಮೊತ್ತದ ಒಂದು ಸಾವಿರದ ನೂರೈವತ್ತು ಯೋಜನೆಗಳಿಗೆ ಸರಕಾರದ ಉನ್ನತಾಧಿಕಾರದ ಸಮಿತಿ ಮಂಜೂರಾತಿ ನೀಡಿತ್ತು. ಆದರೆ ಈವರೆಗು ಕೇವಲ ನೂರಾ ನಲವತ್ತೆರಡು ಯೋಜನೆಗಳು ಮಾತ್ರ ಅನುಷ್ಠಾನಗೊಂಡಿದ್ದು, ಹೂಡಿಕೆಯಾದ ಬಂಡವಾಳ ಕೇವಲ ಒಂಭತ್ತು ಸಾವಿರ ಕೋಟಿಯಷ್ಟು ಮಾತ್ರ..ಇನ್ನುಳಿದ ಹಣ ಹೂಡಿಕೆಯಾಗುವ ಭರವಸೆಯಂತು ಸದ್ಯಕ್ಕೆ ಯಾರಿಗೂ ಇಲ್ಲ. ಯಾಕೆಂದರೆ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ನಿರಾಶಾದಾಯಕ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಬಂಡವಾಳ ಹೂಡಲು ಯಾರೂ ಮುಂದೆಬರುವುದಿಲ್ಲವೆಂಬುದು ಸತ್ಯ. 

Sep 22, 2019

ಒಂದು ಬೊಗಸೆ ಪ್ರೀತಿ - 32

ಡಾ. ಅಶೋಕ್.‌ ಕೆ. ಆರ್.‌
ಇಬ್ಬರೂ ರೂಮಿನಿಂದ ಖುಷಿಖುಷಿಯಾಗಿ ಹೊರಬಂದೋ. ನಾ ಅಪ್ಪನ ತೋಳಿನಲ್ಲಿದ್ದೆ. ಅಮ್ಮ ಇಬ್ಬರನ್ನೂ ನೋಡಿ ಮುಸಿನಕ್ಕರು. ತಮ್ಮ ಕೂಡ ಒಮ್ಮೆ ನಕ್ಕ. ತಮ್ಮ ಮೊದಲೇ ಹೆಚ್ಚು ಮಾತನಾಡುವವನಲ್ಲ. ಈಗಂತೂ ಮೂಗನಂತಾಗಿಬಿಟ್ಟಿದ್ದ. “ನಿಮ್ಮ ಸಂಭ್ರಮ ಸಡಗರವೆಲ್ಲ ಮುಗಿದಿದ್ರೆ ಬನ್ನಿ ಊಟಕ್ಕೆ" ಅಮ್ಮ ಕರೆದಳು. 

“ಏನ್ ಮಾಡಿದ್ದಿ?” ಅಪ್ಪನ ಪ್ರಶ್ನೆ. 

“ಅವರೆಕಾಳು ಉಪ್ಸಾರು" 

“ಥೂ ಥೂ. ಅಷ್ಟು ದಿನದಿಂದ ಅದೇ ಉಪ್ಸಾರು, ತಿಳಿಸಾರು ಬಿಟ್ರೆ ಬೇಳೆಸಾರು. ಬಾಯಿ ಕೆಟ್ಟೋಗದೆ. ನೀವದನ್ನೇ ತಿಂದುಕೊಳ್ಳಿ. ನಾನೂ ನನ್ನ ಮಗಳು ಬಾಯ್ರುಚಿಗೇನಾದ್ರೂ ತಿಂದ್ಕೊಂಡು ಬರ್ತೀವಿ" ಅಂದರು ಅಪ್ಪ. 

“ನಮ್ ಬಾಯಿಯೇನು ರುಚಿಗೆ ಹಂಬಲಿಸೋದಿಲ್ಲಾಂತಾನಾ? ನಾವೇನ್ ಪಾಪ ಮಾಡಿದ್ದೊ. ನಾವೂ ಬರ್ತೀವಿ" ಅಮ್ಮ ಅಂದರು. ನಾಲ್ಕೂ ಮಂದಿ ಹೊರಗೆ ಊಟಕ್ಕೆ ಹೋದೋ' 

“ಹೆಂಗೋ ಕೊನೇಪಕ್ಷ ನಿಮ್ಮ ಮನೆಯವರಾದ್ರೂ ಸರಿ ಹೋದ್ರಲ್ಲ ಬಿಡು" ಸಾಗರ ನಿಟ್ಟುಸಿರುಬಿಟ್ಟ. 

'ಅ‍ಯ್ಯೋ ಅಷ್ಟು ಬೇಗ ನಿರ್ಧಾರ ಮಾಡಿಬಿಡಬೇಡಪ್ಪ. ಇನ್ನೂ ಬಹಳಷ್ಟು ನಡೆದಿದೆ' 

“ಒಳ್ಳೆ ಮೆಗಾಸೀರಿಯಲ್ ಆಯ್ತಲ್ಲೇ ನಿನ್ನ ಕತೆ" 

'ಅಲ್ವ! ಈಗ ಯೋಚಿಸಿದ್ರೆ ನಂಗೂ ಹಂಗೇ ಅನ್ಸುತ್ತೆ. ಎಷ್ಟೆಲ್ಲ ನಡೆದುಹೋಯ್ತಲ್ಲ ಅಂತ. ಬೋರಾಯ್ತೇನೋ? ಬೋರಾಗಿದ್ರೆ ಇನ್ನೊಂದಿನ ಹೇಳ್ತೀನಿ ಬಿಡು' 

“ಹಂಗೇನಿಲ್ವೇ. ಇದೆಲ್ಲ ಹೇಳಿ ಮುಗಿಸಾಗಬೇಕಿತ್ತು ಇಷ್ಟೊತ್ತಿಗೆ. ಎಲ್ಲಿ.... ನಾವಿಬ್ರು ಇತ್ತೀಚೆಗೆ ಮಾತು ಶುರು ಮಾಡಿದಾಗೆಲ್ಲ ಸೆಕ್ಸು ಕಡೆಗೇ ಹೋಗಿಬಿಡ್ತಿದ್ದೋ ಪಟ್ಟಂತ. ಎಷ್ಟೋ ದಿನದ ಮೇಲೆ ಸೆಕ್ಸ್ ಬಿಟ್ಟು ಬೇರೆ ವಿಷಯ ಮಾತಾಡ್ತಿರೋದು ನಾವಿಬ್ರು. ಐ ಯ್ಯಾಮ್ ಹ್ಯಾಪಿ ಫಾರ್ ದಟ್" ಅಂದ. ಹುಡುಗ್ರು ಹಿಂಗೂ ಇರ್ತಾರಾ! ಇದ್ದಾನಲ್ಲ ನನ್ನ ಸಾಗರ....... 

“ನಿನ್ ಹಸ್ಬಂಡ್ ಇನ್ನೂ ಬರಲಿಲ್ಲವೇನೇ?”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 20, 2019

ಪ್ರೇಮದೊಂದು ಕವಿತೆ.


ಕು.ಸ.ಮಧುಸೂದನ 
ಆಕಾಶದಡಿಯ ಕತ್ತಲು 
ಭೂಮಿ ಮುತ್ತಲು 
ಬೆಳಕಿನೊಂದು ಕನಸು ಕಂಡ ಮಗು 
ನಿದ್ದೆಯಿಂದೆದ್ದು ಕೂತಿತು 
ಅಮ್ಮನ ತೋಳುಗಳ ಹಾಸಿಗೆ ದಾಟಿ 
ಅಂಗಳಕ್ಕಿಳಿಯಿತು. 
ಮಿಂಚುಹುಳುವೊಂದು ಕಣ್ಣ ಮುಂದೆ ಮಿನುಗಿ 
ದಾರಿಯ ಹೊಳೆಸಿತು 
ಅರ್ದಕ್ಕೆ ನಿಂತ ಹಾಡಿಗೆ ಮರುಜೀವ ಬಂದು 
ಬಿಕ್ಕಿಬಿಕ್ಕಿ ಸುಸ್ತಾಗಿದ್ದ ಚುಕ್ಕಿಗಳಿಗೆ 
ಹೊಸ ಹುರುಪು ಬಂದು 
ಬೆಳಗಿನತ್ತ ನಡೆದವು 
ಮರುದಿನದ ಸೂರ್ಯೋದಯದೊಳಗೆ 
ಲೋಕದೊಳಗೆಲ್ಲ ಪ್ರೇಮ 
ತುಂಬಿ ತುಳುಕಿತು!. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Sep 19, 2019

ಹಡೆಯುವ ಬಯಕೆಗೆ


ಕು.ಸ.ಮಧುಸೂದನ 
ಸಂಜೆ ಹುಯ್ಯುವ ಬಿಸಿಲು ಮಳೆ 
ಕೃತಕವೆನಿಸಿ 
ಕಾಮನಬಿಲ್ಲೂ ಕ್ಷಣಭಂಗುರವೆನಿಸಿ 
ತಳಮಳಿಸಿದ ಮನಸು 
ಹೊಕ್ಕುಳಾದಳದೊಳಗೆಲ್ಲೊ 
ಕಡೆಗೋಲು 
ಮಜ್ಜಿಗೆ ಕಡೆದಂತಾಗಿ 
ಬಿಟ್ಟ ಉಸಿರು ನೀಳವಾಗಿ ಎದೆಬಡಿತ ಜೋರಾಗಿ 
ನಿಂತರೆ ಸಾಕು ಮಳೆ 
ಬಂದರೆ ಮತ್ತೆ ರವಷ್ಟು ಬಿಸಿಲು 
ಮೈಕಾಯಿಸಿಕೊಳ್ಳಬೇಕು. 

ಸ್ಖಲಿಸಿಕೊಳ್ಳದೆ 
ಬಸುರಾಗದೆ 
ಹಡೆಯಲಾಗದೆ 
ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು 
ಉಳಿಸಿಕೊಳ್ಳಬೇಕು. 

Sep 15, 2019

ಒಂದು ಬೊಗಸೆ ಪ್ರೀತಿ - 31

ಡಾ. ಅಶೋಕ್.‌ ಕೆ. ಆರ್.‌
ಮುಂದೇನು ಅನ್ನೋ ಪ್ರಶ್ನೆ ಭೂತಾಕಾರದ ರೂಪ ಪಡೆದಿತ್ತು. ಮಾರನೇ ದಿನವೇ ಪರಶುನನ್ನು ಭೇಟಿ ಮಾಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದವನಿಗೆ ಅರಿವಾಯಿತು. ಮನೇಲಿ ಮಾತಾಡ್ತೀನಿ. ಯಾವಾಗ ಬರ್ತೀವಿ ಅಂತ ತಿಳಿಸ್ತೀನಿ ಅಂತೇಳಿದ. ಖುಷಿಯಾಯಿತು. ಅಪ್ಪ ಮತ್ತೊಂದು ಮಗದೊಂದು ಗಂಡು ತೋರಿಸುವ ಮುಂಚೆಯೇ ಪರಶುವಿನ ಮನೆಯವರು ಬಂದರೆ ಸಾಕಾಗಿತ್ತು ನನಗೆ. 

ಪರಶು ಮೊದಲು ಅವನ ಅಕ್ಕನ ಜೊತೆಗೆ ಮಾತನಾಡಿದ್ದ. ವಿಷಯ ಇಲ್ಲಿಯವರೆಗೆ ಮುಟ್ಟಿದೆಯೆಂದು ಅವರಕ್ಕನಿಗೂ ತಿಳಿದಿರಲಿಲ್ಲ. ತಿಳಿಯುತ್ತಿದ್ದಂತೆಯೇ ನನಗೆ ಫೋನ್ ಮಾಡಿದ್ದಳು. 

'ಹೇಳಿ ಅಕ್ಕ' ಅಂದೆ. 

“ನಾನೇನಮ್ಮ ಹೇಳೋದು. ಇಷ್ಟೆಲ್ಲ ಯಾಕ್ ಸೀರಿಯಸ್ಸಾಗಿ ಲವ್ ಮಾಡೋಕೋದ್ರಿ" 

'ಲವ್ ನ ಕಾಮಿಡಿಯಾಗೆಲ್ಲ ಕೂಡ ಮಾಡ್ಬೋದಾ?' ಆ ಮನಸ್ಥಿತಿಯಲ್ಲೂ ಅಕ್ಕನ ಮಾತುಗಳು ನಗು ತರಿಸಿತು. 

“ನೋಡು ಧರಣಿ. ಇರೋ ವಿಷಯ ಹೇಳಬೇಕಲ್ಲ ನಾನು. ನನ್ನ ಮದುವೆಗೆ ಮುಂಚೆ ಪರಶುವಿನ ಮದುವೆ ಮಾಡುವುದಕ್ಕೆ ಅಮ್ಮನಂತೂ ಒಪ್ಪುವುದಿಲ್ಲ. ....ಅದು ನಿನಗೂ ಗೊತ್ತಿರ್ತದೆ....” 

'ಈಗ್ಲೇ ಮದುವೆಯಾಗ್ಲಿ ಅನ್ನೋದು ನಮ್ಮ ಮನಸ್ಸಿನಲ್ಲೂ ಇಲ್ಲ ಅಕ್ಕ. ಒಮ್ಮೆ ಬಂದು ಮಾತಾಡಿಕೊಂಡು ಹೋಗಲಿ ಅಂತಷ್ಟೇ ಹೇಳ್ತಿರೋದು....' 

“ಹು. ಅದ್ ಸರಿ ಅನ್ನು. ಪರಶುಗೆ ಇನ್ನೂ ಕೆಲಸ ಬೇರೆ ಸಿಕ್ಕಿಲ್ಲ.....ನಿಂಗೇ ಗೊತ್ತಿರ್ತದಲ್ಲ.....ಇನ್ನೂ ಪೋಲಿ ಅಲ್ಕೊಂಡೇ ನಿಂತಿದ್ದಾನೆ....ನೀನು ನೋಡಿದ್ರೆ ಡಾಕ್ಟ್ರು....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 8, 2019

ಒಂದು ಬೊಗಸೆ ಪ್ರೀತಿ - 30

ಡಾ. ಅಶೋಕ್.‌ ಕೆ. ಆರ್.‌
'ಅದೊಂದ್ ದೊಡ್ ಕತೆ. ದೀಪಾವಳಿ ಹಬ್ಬದ ದಿನ. ನನಗೆ ಅರ್ಧ ದಿನ ಡ್ಯೂಟಿಯಿತ್ತು. ಡ್ಯೂಟಿ ಮುಗಿಸಿ ಬರಬೇಕಾದರೆ ಎಂದಿನಂತೆ ಪರಶು ಜೊತೆಯಾಗಿದ್ದ. ಆಸ್ಪತ್ರೆಯ ಹತ್ತಿರ ಅಗ್ರಹಾರ ಸರ್ಕಲ್ಲಿನ ಬಳಿ ನಿಂತು ಮಾತನಾಡ್ತಿದ್ದೊ. ಒಂದರ್ಧ ಘಂಟೆಯ ಮಾತುಕತೆಯ ನಂತರ ಹೊರಡುವಾಗ ಅವನ ಗಾಡಿ ಸ್ಟಾರ್ಟೇ ಆಗಲಿಲ್ಲ. ಹಬ್ಬದ ದಿನ, ಹತ್ತಿರದ ಮೆಕ್ಯಾನಿಕ್ಕುಗಳ್ಯಾರೂ ಅಂಗಡಿ ತೆರೆದಿರಲಿಲ್ಲ. ಹತ್ತಿರದಲ್ಲೇ ಅವನ ಸ್ನೇಹಿತನ ಮನೆಯಿತ್ತು. ಅಲ್ಲಿ ಬೈಕನ್ನು ನಿಲ್ಲಿಸಿ ನನ್ನ ಸ್ಕೂಟರ್ ಹತ್ತಿಕೊಂಡ. ರಸ್ತೆಗಳು ಖಾಲಿಯಿದ್ವು. ವೇಗವಾಗಿ ಗಾಡಿ ಓಡಿಸ್ತಿದ್ದೆ. ಆತ ಬಲಗೈಯನ್ನು ನನ್ನ ತೊಡೆಯ ಮೇಲಿಟ್ಟಿದ್ದ, ಎಡಗೈ ನನ್ನ ಸೊಂಟವನ್ನು ಬಳಸಿತ್ತು. ತಲೆಯನ್ನು ನನ್ನ ಕತ್ತಿನ ಮೇಲಿಟ್ಟು ಮಾತನಾಡುತ್ತಿದ್ದ. ನೋಡಿದವರಿಗೆ ಯಾರಿಗೇ ಆದರೂ ಪ್ರೇಮಿಗಳೆಂದು ತಿಳಿಯುವಂತಿತ್ತು. ಅವನನ್ನು ಮನೆಗೆ ಬಿಟ್ಟು ಮನೆ ತಲುಪಿದೆ. ನಮ್ಮ ದೊಡ್ಡಪ್ಪ ಮನೆಗೆ ಬಂದಿದ್ದರು. ಅವರು ಹಂಗೆಲ್ಲ ಬರೋರಲ್ಲ, ಅವರಿಗೂ ನಮಗೂ ಅಷ್ಟಕಷ್ಟೇ. ಅದರಲ್ಲೂ ಹಬ್ಬದ ದಿನವೇ ಬಂದಿದ್ದಾರೆಂದ ಮೇಲೆ ಏನೋ ವಿಶೇಷವಿರಲೇಬೇಕು ಅಂದುಕೊಂಡೆ. ಅಪ್ಪ ಅಮ್ಮನ ಕಡೆ ನೋಡಿದೆ, ಇಬ್ಬರ ಮೊಗದಲ್ಲೂ ಬೀದಿಗೆಲ್ಲ ಹಂಚುವಷ್ಟು ಸಿಟ್ಟಿತ್ತು. ಓಹೋ ಇದು ನಂದೇ ವಿಷಯ ಅಂದುಕೊಂಡೆ. 'ನಿಮ್ ದೊಡ್ಡಪ್ಪ ಒಂದ್ ಸುದ್ದಿ ತಗಂಡ್ ಬಂದವ್ರೆ' ಅಂದ್ರು ಅಪ್ಪ. ಏನು ಅಂದೆ. 'ಯಾವ್ದೋ ಹುಡುಗನ್ನ ಕೂರಿಸಿಕೊಂಡು ಹೋಗ್ತಿದ್ಯಂತಲ್ಲ ಯಾರದು' ಅಪ್ಪ ಅವರ ಮುದ್ದಿನ ಮಗಳೊಡನೆ ಈ ರೀತಿ ಮಾತಾಡಬಲ್ಲರು ಅನ್ನೋ ಕಲ್ಪನೆ ಕೂಡ ಅವತ್ತಿನವರೆಗೆ ನನಗಿರಲಿಲ್ಲ. ಅವನಾ, ಪುರುಷೋತ್ತಮ್ ಅಂತ. ಅವನ ಗಾಡಿ ಕೆಟ್ಟಿತ್ತು. ಅವನನ್ನು ಮನೆಗೆ ಬಿಟ್ಟು ಬಂದೆ. 'ಫ್ರೆಂಡು ಅಂತೆಲ್ಲ ಹೇಳ್ಬೇಡ. ನೀವಿಬ್ರೂ ಅದೆಷ್ಟು ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿದ್ರಿ ಅಂತ ನೋಡಿದ್ದೀನಿ ನಾನು' ದೊಡ್ಡಪ್ಪ ಗೇಲಿಯ ದನಿಯಲ್ಲಿ ಹೇಳಿದರು. ಅವರ ಕಡೆಗೊಮ್ಮೆ ದುರುಗುಟ್ಟಿ ನೋಡಿ ನಾನೆಲ್ಲಿ ಹೇಳಿದೆ ಅವನು ನನ್ನ ಫ್ರೆಂಡು ಅಂತ? ಅವನು ನನ್ನ ಲವರ್ರು. ಅಂದಹಾಗೆ ನಾವಿಬ್ರೂ ಕೆಟ್ಟದಾಗಿ ಕುಳಿತುಕೊಂಡು ಹೋಗ್ತಿರಲಿಲ್ಲ. ಆತ್ಮೀಯವಾಗಿ ಕುಳಿತುಕೊಂಡಿದ್ದೋ ಅಷ್ಟೇ ಎಂದೆ. ಅಷ್ಟು ಧೈರ್ಯವಾಗಿ ಹೇಗೆ ಹೇಳಿದೆ ಅಂತ ಇವತ್ತಿಗೂ ಅಚ್ಚರಿ ನನಗೆ. ನಾನೇ ಬಾಯಿಬಿಟ್ಟು ಸತ್ಯ ಹೇಳಿದಮೇಲೆ ದೊಡ್ಡಪ್ಪನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಹುಷಾರು ಕಣಪ್ಪ ಅಂತ ನನ್ನಪ್ಪನಿಗೆ ಹೇಳಿ ಹೊರಟುಬಿಟ್ಟರು. ನಂಗಿವತ್ತಿಗೂ ದೊಡ್ಡಪ್ಪನ ಮೇಲಿರೋ ಸಿಟ್ಟೆಂದರೆ ಹಬ್ಬ ಮುಗಿಯೋವರೆಗಾದರೂ ಕಾಯಬಹುದಿತ್ತು. ಪಟಾಕಿ ಹಚ್ಚೋದೆಂದರೆ ನನಗೆ ಪ್ರಾಣ. ಅವತ್ತು ದೀಪ ಕೂಡ ಹಚ್ಚಲಿಲ್ಲ. ರೂಮಿಗೋಗಿ ಬಾಗಿಲಾಕಿಕೊಂಡು ಪರಶುಗೆ ಫೋನ್ ಮಾಡಿ ಹಿಂಗಿಗಾಯ್ತು ಅಂತ ಹೇಳಿದೆ' 

ಸಾಗರ ಜೋರಾಗಿ ನಕ್ಕುಬಿಟ್ಟ. 'ಯಾಕೋ ಏನಾಯ್ತು' ಅಂದೆ. 

“ಅಲ್ವೆ. ಆಗಷ್ಟೇ ಸಿಕ್ಕಾಕಂಡಿದ್ದಿ. ಅಷ್ಟು ಅವಸರದಲ್ಲಿ ಹೋಗಿ ಫೋನ್ ಮಾಡಿದರೆ ಮನೆಯವರಿಗೆ ಕೇಳಿಸಿ ಇನ್ನೂ ರಾದ್ಧಾಂತ ಆಗೋದಿಲ್ವ!”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Sep 1, 2019

ಒಂದು ಬೊಗಸೆ ಪ್ರೀತಿ - 29

ಡಾ. ಅಶೋಕ್.‌ ಕೆ. ಆರ್.‌
ಬಾಗಿಲ ಚಿಲುಕ ಹಾಕಿ ಬಂದು ಹಾಸಿಗೆಯಲ್ಲಿ ಅಡ್ಡಾದೆ. ಕಣ್ಣಂಚಿನಲ್ಲಿ ನೀರು ಸುರಿದು ಯಾವಾಗ ಒಣಗಿತೋ ಯಾವಾಗ ನನಗೆ ನಿದ್ರೆ ಆವರಿಸಿತೋ ನನಗೂ ತಿಳಿಯದು. ಸಮಯ ನೋಡಿದರೆ ಏಳೂವರೆ ಆಗಿತ್ತು. ರಾಜೀವ ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದೆ. ಕಟ್ ಮಾಡಿದರು. ಮತ್ತೊಮ್ಮೆ ಮಾಡುವಷ್ಟರಲ್ಲಿ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಪ್ಪನ ಮನೆಗಾದರೂ ಹೋಗಿಬಿಡುವ ಎಂದುಕೊಳ್ಳುವಷ್ಟರಲ್ಲಿ ಸಾಗರನ ಫೋನ್ ಬಂದಿತ್ತು. ಕರೆ ಸ್ವೀಕರಿಸಿ ಹಲೋ ಅನ್ನುವಷ್ಟರಲ್ಲಿ "ಯಾಕೋ ಭಯಂಕರ ಬೇಸರವಾಗ್ತಿದೆ ಕಣೇ" ಅಂದ. ದನಿಯಲ್ಲಿ ದುಃಖವಿತ್ತು. 

'ಸೇಮ್ ಹಿಯರ್ ಕಣೋ. ನಾನೂ ಒಂದ್ ರೌಂಡು...ಒಂದೇನಾ?? ಎಷ್ಟೋ ರೌಂಡು ಅತ್ತು ಮುಗಿಸಿದೆ ಈಗಷ್ಟೇ' 

“ಯಾಕೋ ಪುಟ್ಟಾ. ಏನಾಯ್ತೋ? ನಾನೇನಾದ್ರೂ ತಪ್ಪಾಗ್ ನಡ್ಕಂಡ್ನ? ಅಥವಾ ಅವತ್ತು ನಾನೇನೋ ಗೀಚಿದ್ದು ಓದಿ ಹೇಳಿದ್ದಕ್ಕೆ ಬೇಜಾರ್ ಮಾಡ್ಕಂಡ್ಯ?” 

಻಻ಅಯ್ಯೋ ಅದನ್ನೆಲ್ಲ ಯೋಚಿಸುವಷ್ಟು ಪುರುಸೊತ್ತಾದರೂ ನನಗೆಲ್ಲಿದೆ ಅನ್ನೋ ವಾಕ್ಯ ಬಾಯಿಗೆ ಬಂತಾದರೂ ಬೇಸರಗೊಳ್ಳುತ್ತಾನೆ ಅಂತ ಹೇಳಲಿಲ್ಲ. ಹೆಸರಿಗಷ್ಟೇ ಸೋಲ್ ಮೇಟು, ಆತ್ಮಸಂಗಾತಿ..... ಅದ್ಯಾರೇ ಆದ್ರೂ ಮನದ ಭಾವನೆಗಳನ್ನು ಪೂರ್ಣವಾಗಿ ಹಂಚಿಕೊಳ್ಳೋದಿಕ್ಕಾಗೋದಿಲ್ಲ ಻ಅನ್ನುವುದಷ್ಟೇ ಅಂತಿಮ ಸತ್ಯ. 

'ಹೇ. ಇಲ್ವೋ. ಅದಕ್ಯಾಕ್ ಬೇಸರ ಮಾಡಿಕೊಳ್ಳಲಿ. ಗೊತ್ತಲ್ವ ನಿಂಗ್ಯಾಕೆ ಹಂಗೆಲ್ಲ ಻ಅನ್ನಿಸ್ತದೆ ಅಂತ' 

“ಮತ್ತೆ ಇನ್ನೇನಾಯ್ತೆ" 

'ನೀ ಯಾಕ್ ಭಯಂಕರ ಬೇಸರದಲ್ಲಿದ್ದೆ?' 

“ಏನಿಲ್ವೇ ಮಾಮೂಲಿ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Aug 28, 2019

ಸಮ್ಮಿಶ್ರ ಸರಕಾರದ ಪತನ: ನಾಯಕರುಗಳ ಆರೋಪ-ಪ್ರತ್ಯಾರೋಪ!

ಕು.ಸ.ಮಧುಸೂದನ 
ಮಾಜಿ ಪ್ರದಾನಿ ಶ್ರೀದೇವೇಗೌಡರ ಮತ್ತು ಮಾಜಿಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಡುವಿನ ಆರೋಪ ಪ್ರತ್ಯಾರೋಪಗಳು,ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಅವಲೋಕಿಸುತ್ತಿರುವವರಿಗೆ ಅಚ್ಚರಿಯನ್ನೇನು ಉಂಟು ಮಾಡಿಲ್ಲ. ಬದಲಿಗೆ ಕಳೆದ ಹದಿನಾರು ತಿಂಗಳ ಹಿಂದೆ ರಚನೆಯಾದ ಸಂಮಿಶ್ರ ಸರಕಾರದ ರಚನೆಯ ವಿಷಯಕ್ಕಾಗಿ ಮುನಿಸು ಮರೆತು ಒಂದಾಗಿದ್ದು ಬಾಜಪವನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂದು ಬಯಸಿದ್ದವರಿಗೆ ಸಂತೋಷವನ್ನುಂಟು ಮಾಡಿತ್ತು. ಆದರೆ ಶ್ರೀ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗುವುದರೊಂದಿಗೆ ಜಾತ್ಯಾತೀತ ಮತದಾರರಿಗೆ ಭ್ರಮನಿರಸನವಾಗಿದೆ. ಮತ್ತು ಸ್ವಪ್ರತಿಷ್ಠೆಯೇ ಮುಖ್ಯವೆಂದುಕೊಂಡಿರುವ ನಾಯಕರುಗಳ ನಡೆಯ ಬಗ್ಗೆ ಜನ ಬೇಸರಗೊಂಡಿದ್ದಾರೆ. 

ಒಂದು ಕಡೆ ಜಾತ್ಯಾತೀತ ಜನತಾದಳದ ರಾಷ್ಟ್ರಾದ್ಯಕ್ಷರಾದ ದೇವೇಗೌಡರು ಕಾಂಗ್ರೆಸ್ಸಿನ ಕಿರುಕುಳಕ್ಕೆ ಕುಮಾರಸ್ವಾಮಿ ರೋಸಿಹೋಗಿದ್ದರು ಎಂದು ಹೇಳುತ್ತಲೇ ಸಮ್ಮಿಶ್ರ ಸರಕಾರ ಪತನವಾಗಲು ಸಿದ್ದರಾಮಯ್ಯನವರೇ ಕಾರಣ ಎಂಬ ಮಾತನ್ನೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದರಾಮಯ್ಯನವರು ಸಮ್ಮಿಶ್ರ ಸರಕಾರ ಬೀಳಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದುದು, ದೇವೇಗೌಡರ ಕುಟುಂಬ ಅದರಲ್ಲೂ ರೇವಣ್ಣನವರು ಸರಕಾರದ ಆಡಳಿತದಲ್ಲಿ ಮೂಗುತೂರಿಸಿದ್ದೇ ಕಾರಣವೆಂದು ಹೇಳಿದ್ದಾರೆ. ಸಮ್ಮಿಶ್ರ ಸರಕಾರದ ಹದಿನಾಲ್ಕು ತಿಂಗಳ ಆಡಳಿತವನ್ನು, ಅದರ ಆಂತರಿಕ ಕಿತ್ತಾಟಗಳನ್ನು ಸೂಕ್ಷ್ಮವಾಗಿ ನೋಡಿದವರಿಗೆ ಇಬ್ಬರೂ ನಾಯಕರುಗಳ ಮಾತುಗಳೂ ಅರ್ದಸತ್ಯವೆಂಬುದು ಗೊತ್ತಾಗುತ್ತದೆ. 

Aug 25, 2019

ಒಂದು ಬೊಗಸೆ ಪ್ರೀತಿ - 28

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ಮೇಲೆ ಇವತ್ತು ರಜೆಯಿತ್ತು. ಮಧ್ಯಾಹ್ನ ಊಟದ ನಂತರ ನಿದ್ರೆ ಹೋಗಿದ್ದವಳಿಗೆ ಎಚ್ಚರವಾಗಿದ್ದು ನಾಲ್ಕರ ಸುಮಾರಿಗೆ ಕಾಲಿಂಗ್ ಬೆಲ್ ಬಹಳಷ್ಟು ಹೊತ್ತು ಬಡಿದುಕೊಂಡಾಗ. ರಾಜಿ ಕೂಡ ಇಷ್ಟು ಬೇಗ ಬರೋರಲ್ಲ. ಅವರೇನಿದ್ರೂ ಆರೂ ಆರೂವರೆಯ ನಂತರವೇ ಬರೋದು. ಇನ್ನು ಈ ತಿಂಗಳ ಕೇಬಲ್ ಬಿಲ್ಲು, ಪೇಪರ್ ಬಿಲ್ಲೆಲ್ಲ ಕೊಟ್ಟಾಗಿದೆ. ಅವರೂ ಇರಲಿಕ್ಕಿಲ್ಲ. ಇನ್ಯಾರಿರಬಹುದು ಇಷ್ಟೊತ್ತಿನಲ್ಲಿ ಅಂತ ಯೋಚಿಸುತ್ತಾ ಕೆದರಿಹೋಗಿದ್ದ ಕೂದಲನ್ನು ಒಟ್ಟು ಮಾಡಿ ಕ್ಲಿಪ್ ಹಾಕಿಕೊಳ್ಳುತ್ತಾ ಹೊರಬಂದು ಬಾಗಿಲು ತೆರೆದೆ. ರಾಜಿಯ ಅಮ್ಮ ಅಕ್ಕ ಬಾಗಿಲ ಬಳಿ ನಿಂತಿದ್ದರು. ಇದೇ ಮೊದಲ ಬಾರಿಗೆ ಇವರು ಈ ಮನೆಯ ಕಡೆಗೆ ಬಂದಿರೋದು. ಇದ್ದಕ್ಕಿದ್ದಂತೆ ಯಾವ ಮುನ್ಸೂಚನೆಯೂ ಇಲ್ಲದಂತೆ ಮನೆಗೆ ಬಂದವರನ್ನು ಕಂಡು ದಿಗಿಲಾಯಿತು. ದಿಗಿಲನ್ನು ಆದಷ್ಟೂ ಮರೆಮಾಚಲೆತ್ನಿಸುತ್ತಾ 'ಬನ್ನಿ ಅತ್ತೆ ಬನ್ನಿ ಅಕ್ಕ' ಎಂದಕ್ಕರೆಯ ಮಾತುಗಳನ್ನಾಡುತ್ತಾ ಒಳ ಕರೆದೆ. ಇಬ್ಬರೂ ಕಷ್ಟದಿಂದ ಒಂದಷ್ಟು ಮುಗುಳ್ನಕ್ಕು ಒಳಹೊಕ್ಕರು. ಮನೆಯ ಕುಬ್ಜ ಗಾತ್ರವನ್ನು ಪರಿವೀಕ್ಷಿಸುತ್ತಾ ವ್ಯಂಗ್ಯದ ನಗೆ ನಕ್ಕು ತಮ್ಮ ಮನದ ಕುಬ್ಜತನವನ್ನು ಜಾಹೀರುಗೊಳಿಸಿದರು. ಅಡುಗೆ ಮನೆ ಸೇರಿದೆ. ರಾಜಿಯ ಮನೆಯಲ್ಯಾರೂ ಟೀ ಕುಡಿಯುವುದಿಲ್ಲ, ಕಾಫಿಯಷ್ಟೇ ಅವರಿಗೆ ಪ್ರಿಯ. ಮೂರು ಲೋಟ ಕಾಫಿಗಿಟ್ಟೆ. ಹೊರಗಡೆ ಅಮ್ಮ ಮಗಳಿಬ್ಬರು ಗುಸು ಗುಸು ಮಾತನಾಡುತ್ತಿದ್ದಿದ್ದು ಕೇಳುತ್ತಿತ್ತು. ಏನ್ ವಿಷಯವಿರಬಹುದು? ಇಬ್ಬರೂ ಹೀಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಟ್ಟಿದ್ದಾರಲ್ಲ? ಎಂದು ಪ್ರಶ್ನಿಸಿಕೊಳ್ಳುತ್ತಲೇ ಕಾಫಿಯೊಡನೆ ಬಂದು ಕುಳಿತೆ. ಕಾಫಿ ಹೀರುತ್ತಾ ಅತ್ತೆ "ಮತ್ತೆ ಎಲ್ಲಾ ಆರಾಮ....ಡ್ಯೂಟಿ ಇಲ್ವಾ ನಿಂಗಿವತ್ತು" 

'ಇಲ್ಲ ಇವತ್ತು ನನಗೆ ವೀಕ್ಲಿ ಆಫ್ ಇತ್ತು ಅತ್ತೆ. ನೀವೆಲ್ಲ ಆರಾಮ. ಮಾವ ಹುಷಾರಾಗಿದ್ದಾರ' 

“ಮ್. ಏನೋ ಇಲ್ಲಿಗೆ ಬಂದಾಗ್ಲಾದ್ರೂ ವಿಚಾರಿಸಿಕೊಳ್ತೀಯಲ್ಲ ಸಂತೋಷವಮ್ಮ" ಅವರ ವ್ಯಂಗ್ಯಕ್ಕೆ ನನ್ನ ಮೌನವೇ ಉತ್ತರವಾಗಿತ್ತು. 

“ರಾಜೀವ?” ಅಕ್ಕ ಕೇಳಿದರು. 

'ಅವರು ಬರೋದು ಆರೂವರೆ ಏಳಾಗುತ್ತೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಹೀಗೊಂದು ಹಗಲು

ಕು.ಸ.ಮಧುಸೂದನ

ಒಂದು:
ಅಡ್ಡಾದಿಡ್ಡಿ ಬೆಳೆದ ನಗರಗಳು
ಅನಾಥವಾದ ಹಳ್ಳಿಗಳು
ಪೂರ್ವದ ಮೇಲೆ ಹಲ್ಲೆ ಮಾಡಿ
ಒಸರಿದ ರಕ್ತ ನೆಕ್ಕುತಿಹ ಪಶ್ಚಿಮದ ಸೂರ್ಯ
ತಂದ ಕಡ ತೀರಿಸಲಾಗದೆ
ಕರಿಯ ತೊಗಲುಗಳನ್ನು ಮಾರಾಟಕ್ಕಿಟ್ಟ ವಂಚಕ ಪಡೆ
ಕಣ್ಣಿದ್ದರೂ ಕಾಣುತ್ತಲ್ಲ
ಕಿವಿಯಿದ್ದರೂ ಕೇಳುತ್ತಿಲ್ಲ
ಕಾಲಿದ್ದರೂ ನಡೆಯಲಾಗುತ್ತಿಲ್ಲ
ಇರುವೆರಡು ಕುಷ್ಠ ಹಿಡಿದ ಕೈಗಳಲಿ
ಅವರದೇ ಹರಿಕಥೆ ಭಜನೆ

Aug 24, 2019

ನೈತಿಕತೆಯ ಬಗೆಗೆ ಕೆಲವು ಮೂರ್ಖ ಪ್ರಶ್ನೆಗಳು!

ಕು.ಸ.ಮಧುಸೂದನ ರಂಗೇನಹಳ್ಳಿ 

ಅಂತೂ 'ಆಪರೇಷನ್ ಕಮಲ' ಅನ್ನುವ ರಾಕ್ಷಸೀಆಯುಧವನ್ನು ಬಳಸಿ,ಮೈತ್ರಿ ಸರಕಾರವನ್ನು ಉರುಳಿಸಿ ತನ್ನದೇ ಸರಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಆಂತರಿಕ ಭಿನ್ನಮತೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರವಿಲ್ಲವೆನ್ನುತ್ತಲೇ ನಾಟಕವಾಡುತ್ತ ಬಂದ ಬಿಜೆಪಿಯ ನಾಯಕರುಗಳ ಮಾತುಗಳನ್ನು ಜನ ನಂಬದೇ ಹೋದರೂ, ಈ ಕ್ಷಣಕ್ಕೂ ಬಿಜೆಪಿ ತಾನು ಪರಮಪವಿತ್ರವೆಂಬ ಮುಖವಾಡದಲ್ಲಿ ಸರಕಾರ ರಚಿಸಿ. ಗೆಲುವಿನ ವಿಕೃತ ನಗು ಬೀರುತ್ತಿದೆ 

ಆದರೆ ಪ್ರಜಾಸತ್ತೆಯಲ್ಲಿನ ಈ ಕಪಟನಾಟಕ ಇಲ್ಲಿಗೇ ಮುಗಿಯುವುದಿಲ್ಲ. ಅಕಸ್ಮಾತ್ ಅತೃಪ್ತ ಶಾಸಕರುಗಳ(ಆತ್ಮಗಳ) ಅನರ್ಹತೆ ಬಗ್ಗೆ ನ್ಯಾಯಾಲಯದ ತೀರ್ಪೇನೆ ಬರಲಿ, ಇನ್ನು ಆರುತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಅವರುಗಳಿಗೆ ತನ್ನ 'ಬಿ'ಫಾರಂ ಕೊಟ್ಟು ಮತಬಿಕ್ಷೆಗೆ ಜನರ ಮುಂದೆ ಬರಲೇಬೇಕಾಗುತ್ತದೆ. ಆಗ ಜನ ಕೆಳಗಿನ ಪ್ರಶ್ನೆಗಳನ್ನು ಅವರಿಗೆ ಕೇಳಬೇಕಾಗುತ್ತದೆ: 

ಮೊದಲಿಗೆ, ಆಡಳಿತ ಪಕ್ಷಗಳ ಶಾಸಕರುಗಳ ರಾಜಿನಾಮೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂಇಲ್ಲ. ಯಾಕೆಂದರೆ ಕಳೆದ ವರ್ಷ ವಿದಾನಸಭೆಯ ಚುನಾವಣಾ ಪಲಿತಾಂಶಗಳು ಬಂದಾಗ ತನಗೆ ಬಹುಮತವಿಲ್ಲವೆಂಬ ಸಂಗತಿ ಗೊತ್ತಿದ್ದರೂ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರ ಹಿನ್ನೆಲೆಯಲ್ಲಿ ಇದ್ದುದು, ಅನ್ಯಪಕ್ಷಗಳಿಂದ ಹಲವು ಶಾಸಕರುಗಳ ರಾಜಿನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಂಡು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಗುಪ್ತ ಕಾರ್ಯತಂತ್ರವೇ ಅಲ್ಲವೇ? ಅದೊಂದನ್ನು ಹೊರತು ಪಡಿಸಿದಂತೆ ವಿಶ್ವಾಸ ಮತ ಸಾಬೀತು ಪಡಿಸಲು ನಿಮಗೆ ಅನ್ಯ ಮಾರ್ಗವೇನಾದರು ಇತ್ತೆ? ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಒಂದು ಆಡಿಯೊ ಕ್ಲಿಪಿಂಗಿನಲ್ಲಿ ತಾವು ಈ ವ್ಯವಹಾರದ ಬಗ್ಗೆ ಮಾತಾಡಿದ್ದೂ ಇದೆ. 

Aug 18, 2019

ಒಂದು ಬೊಗಸೆ ಪ್ರೀತಿ - 27

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮೂರರ ಸಮಯಕ್ಕೆ ಒಂದು ಆಕ್ಸಿಡೆಂಟ್ ಕೇಸ್ ಬಂದಿತ್ತು. ಇಷ್ಟೊತ್ತಿಗೆಲ್ಲ ಈ ಆರ್.ಬಿ.ಐ ಕ್ಯಾಂಪಸ್ಸಿನಲ್ಲಿ ಓಡಾಡುವವರ ಸಂಖೈ ಕಡಿಮೆ, ಕಡಿಮೆಯೇನು ಇಲ್ಲವೇ ಇಲ್ಲ ಻ಅಂತ ಹೇಳಬಹುದು. ನಾನಂತೂ ಇದುವರೆಗೂ ಇಲ್ಲಿ ಆಕ್ಸಿಡೆಂಟ್ ಕೇಸನ್ನು ನೋಡಿರಲಿಲ್ಲ, ಉಪಚರಿಸಿರಲಿಲ್ಲ. ಯಾರೋ ಟ್ರಿಪ್ಪಿಗೆ ಹೋಗಿ ವಾಪಸ್ಸಾಗ್ತಿದ್ರಂತೆ ನಿದ್ರೆಯ ಮತ್ತಲ್ಲಿದ್ರೋ ಏನೋ ಗಾಡಿ ಹಿಡಿತ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಗುದ್ದಿಬಿಟ್ಟಿದ್ದಾರೆ. ಪುಣ್ಯಕ್ಕೆ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಹಿಂದೆ ಕುಳಿತಿದ್ದ ತಾಯಿ ಮಗುವಿಗೆ ಚೂರೂ ಪೆಟ್ಟಾಗಿರಲಿಲ್ಲ. ಗಾಡಿ ಓಡಿಸುತ್ತಿದ್ದವರಿಗೆ ಮಾತ್ರ ಅಲ್ಲಲ್ಲಿ ಚರ್ಮದೊಳಗೆ ರಕ್ತ ಹೆಪ್ಪುಗಟ್ಟುವಂತೆ ಗಾಯಗಳಾಗಿವೆ. ಸಾಮಾನ್ಯ ಇಂತಹ ಸಮಯದಲ್ಲಿ ತಲೆ ಸ್ಟೀರಿಂಗ್ ವೀಲಿಗೆ ತಗುಲಿ ಪೆಟ್ಟಾಗಿರ್ತದೆ, ಗಾಡಿ ಓಡಿಸುತ್ತಿದ್ದವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದಾಗಿ ಅಂತದ್ದೇನೂ ಆಗಿರಲಿಲ್ಲ. ಒಂದಷ್ಟು ನೋವಿನ ಮಾತ್ರೆ ಕೊಟ್ಟು ಕಳುಹಿಸಿ ರೂಮಿಗೆ ವಾಪಸ್ಸಾದೆ. ಇವನಿಗೊಂದು ಗುಡ್ ಮಾರ್ನಿಂಗ್ ಹೇಳೋಣ ಅಂತನ್ನಿಸಿತು. 'ಸುಸ್ತು ಕಡಿಮೆಯಾಯಿತಾ? ಗುಡ್ ಮಾರ್ನಿಂಗ್' ಅಂತೊಂದು ಮೆಸೇಜು ಕಳುಹಿಸಿದೆ. ಮೆಸೇಜು ತಲುಪಿತ್ತೋ ಇಲ್ಲವೋ "ಗುಡ್ ಮಾರ್ನಿಂಗ್. ಸುಸ್ತ್ಯಾಕೆ?” ಅಂತ ಉತ್ತರ ರೂಪದ ಪ್ರಶ್ನೆ ಬಂತು. 

'ಓಯ್! ಇಷ್ಟು ಬೇಗ ಎದ್ದು ಬಿಟ್ಟಿದ್ದಿ. ಓದ್ಕೋತಿದ್ದ' 

“ಇಲ್ಲ. ಬೇಗ ಎದ್ದಿರೋದಲ್ಲ. ಇನ್ನೂ ನಿದ್ರೇನೇ ಮಾಡಿಲ್ಲ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Aug 11, 2019

ಒಂದು ಬೊಗಸೆ ಪ್ರೀತಿ - 26

ಡಾ. ಅಶೋಕ್.‌ ಕೆ. ಆರ್.‌
ನಾನೂ ಸಾಗರ ಲವ್ ಯು ಲವ್ ಯು ಟೂ ಅಂತೇಳಿಕೊಂಡ ಮೇಲೆ ಬರುತ್ತಿರುವ ಮೊದಲ ನೈಟ್ ಡ್ಯೂಟಿ ಇದು. ಬೆಳಿಗ್ಗೆ ಡ್ಯೂಟಿಯಿದ್ದಾಗ ಆಗೊಮ್ಮೆ ಈಗೊಮ್ಮೆ ಮೆಸೇಜು ಮಾಡಲಷ್ಟೇ ಸಾಧ್ಯವಾಗಿತ್ತು, ಸಾಗರನ ಮನವಿನ್ನೂ ಪೂರ್ಣ ತಿಳಿಯಾಗಿಲ್ಲವೇನೋ ಎಂದೇ ನನಗನ್ನಿಸುತ್ತಿತ್ತು. ಹಂಗೇನಿಲ್ವೇ, ಓದೋದ್ರಲ್ಲಿ ಸ್ವಲ್ಪ ಬ್ಯುಸಿ. ನೀ ಬಿಡುವಾದಾಗ ಫೋನ್ ಮಾಡು ಮಾತಾಡುವ ಅಂತೇಳಿದ್ದ. ಮಾತಿನಲ್ಲಿ ಉದಾಸೀನತೆಯಿರಲಿಲ್ಲವಾದರೂ ಹೊಸತಾಗಿ ಪ್ರೀತಿಗೆ ಬಿದ್ದವರಲ್ಲಿದ್ದ ಉತ್ಸಾಹವೂ ಇರಲಿಲ್ಲ. ಸರಿ ಅವನ ಮನದ ಗೊಂದಲಗಳೂ ಪೂರ್ಣ ತಪ್ಪೇನಲ್ಲವಲ್ಲ. ಎಷ್ಟು ಸಮಯ ಬೇಕೋ ಅಷ್ಟನ್ನು ಆತ ತೆಗೆದುಕೊಳ್ಳಲಿ ಎಂದುಕೊಂಡು ನಾನೂ ಹೆಚ್ಚು ಮೆಸೇಜು ಮಾಡುವುದಕ್ಕೆ ಹೋಗಲಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದರೆ ಮನೆ ಕೆಲಸದ ಸುಸ್ತು. ಜೊತೆಗೆ ಅಪ್ಪ ಅಮ್ಮ ಶಶಿ ಒಂದೇ ಸಮ ಫೋನ್ ಮಾಡಿಕೊಂಡು ಏನಂದ್ರು ಏನಂದ್ರು ಒಪ್ತಾರಂತ ಒಪ್ಪಬಹುದು ಅಂತ ನಿನಗನ್ನಿಸುತ್ತ ಅಂತ ಪಟ್ಟು ಬಿಡದೆ ಪ್ರಶ್ನೆ ಕೇಳಿ ಕೇಳಿ ಮತ್ತಷ್ಟು ಸುಸ್ತು ಮಾಡಿಸೋರು. 

ರಾತ್ರಿ ಹತ್ತರವರೆಗೆ ರೋಗಿಗಳಿದ್ದರು. ಹತ್ತಕ್ಕೆ ಬಿಡುವಾದಾಗ ಸಾಗರನಿಗೆ ಮೆಸೇಜು ಮಾಡಿದೆ. 

'ಏನ್ ಮಾಡ್ತಿದ್ಯೋ' 

"ಊಟ ಮುಗಿಸಿ ಸಿಗರೇಟು ಹಚ್ಚಿದ್ದೆ" 

'ಅಷ್ಟೊಂದೆಲ್ಲ ಸಿಗರೇಟು ಸೇದಬೇಡ್ವೋ' 

"ಯಾಕೋ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Aug 6, 2019

ನನ್ನವನ ನಿರೀಕ್ಷೆಯಲ್ಲಿ....

ಸ್ಪೂರ್ತಿ.
ನನ್ನೆದೆಯಲ್ಲಿ ನಡೆದಿದೆ ನಿನ್ನಯ
ಪ್ರೀತಿಯ ಕಾರುಬಾರು...
ವ್ಯಕ್ತಪಡಿಸು ಬಂದು ನಿನ್ನ
ಪ್ರೀತಿಯ ನನ್ನ ಬಳಿ ಒಂಚೂರು....
ನೆನೆದರೆ ನಮ್ಮಿಬ್ಬರ ಮೊದಲ ಬೇಟಿಯ,
ಮನಸಲ್ಲಿ ಇಂದಿಗೂ ಅವತ್ತಿನ ಅದೇ ತಳಮಳ
ಆ ನೆನಪುಗಳು ಮೂಡಿಸುತ್ತಿವೆ ನನ್ನ
ಮುಖದಲ್ಲಿ ರೋಮಾಂಚನದ ಫಳಫಳ....
ಈ ಎಲ್ಲ ನೆನಪುಗಳು ಒಟ್ಟಿಗೆ ಹರಿಸುತ್ತಿವೆ
ಕಣ್ಣಂಚಲ್ಲಿ ನೀರನ್ನು ಗಳಗಳ...
ಸಾಕಾಗಿದೆ ಅತ್ತು-ಅತ್ತು ನಿನ್ನ ನೆನೆದು...
ಬೇಗ ಬಂದು ಸೇರಿಬಿಡಬಾರದೆ ನಿನ್ನವಳ......

ಇಂತಿ ನಿನ್ನವಳು

Aug 5, 2019

ಒಂದು ಬೊಗಸೆ ಪ್ರೀತಿ - 25

ಡಾ. ಅಶೋಕ್.‌ ಕೆ. ಆರ್.‌
“ಬೇಗ ತಯಾರಾಗು. ಸೋನಿಯಾ ಮನೆಗೆ ಹೋಗಿ ಬರೋಣ" ಎಂದರು ರಾಜಿ. 

ಬೆಳಿಗ್ಗೆ ನಾ ಬಂದಾಗ ಶಶಿ ಜೊತೆಗೆ ಮಾತನಾಡಿದ ಬಗ್ಗೆ ಏನನ್ನೂ ತಿಳಿಸಿರಲಿಲ್ಲ ರಾಜಿ. ಸಂಜೆ ಬರಲಿ ಮನೆಗೆ ಒಂದ್ ಸುತ್ತು ಜಗಳವಾಡ್ತೀನಿ ಎಂದುಕೊಂಡಿದ್ದವಳಿಗೆ ಜಗಳವಾಡುವ ಮನಸ್ಸೂ ಇರಲಿಲ್ಲ. ಹುಂಗುಟ್ಟಿ ಹೋಗಿ ತಯಾರಾದೆ. ರಾಜಿ ಹಿಂದಿನಿಂದ ಬಂದು ಅಪ್ಪಿಕೊಂಡು "ಯಾಕೆ ಡಾರ್ಲಿಂಗ್ ಸಪ್ಪಗಿದ್ದಿ. ಅವರೇನೇನೋ ಮಾತನಾಡ್ತಾರೆ ಅಂತ ತಲೆ ಕೆಡಿಸಿಕೋಬೇಡ. ನಾನಿರ್ತೀನಲ್ಲ. ಮಾತಾಡ್ತೀನಿ" ಎಂದ್ಹೇಳುತ್ತ ಕತ್ತಿಗೊಂದು ಮುತ್ತನಿತ್ತರು. ಬೇಸರ ದೂರವಾಯಿತು. 'ಹು...ನೀವೇ ಮಾತಾಡಿ. ಅವರ ಬಾಯಲ್ಲಿ ಏನೇನು ಮಾತು ಕೇಳ್ಬೇಕೋ ಏನೋ' ಕತ್ತು ತಿರುಗಿಸಿ ಅವರ ಕೆನ್ನೆಗೊಂದು ಮುತ್ತು ಕೊಟ್ಟೆ. ಸೋನಿಯಾಗೆ ಬರುತ್ತಿರುವುದಾಗಿ ಒಂದು ಮೆಸೇಜು ಹಾಕಿದೆ. 

ಸೋನಿಯಾಳ ಮನೆ ತಲುಪಿದಾಗ ಏಳರ ಹತ್ತಿರವಾಗಿತ್ತು. ಅವರ ತಂದೆ ತಾಯಿ ಮನೆಯಲ್ಲೇ ಇದ್ದರು. ನಮ್ಮಿಬ್ಬರನ್ನು ಕಂಡು ಅವರಿಬ್ಬರಿಗೂ ಅಚ್ಚರಿಯಾಯಿತು. ಪಕ್ಕದ ಮನೆಯಲ್ಲೇ ಇದ್ದರೂ ನಾನು ಅವರ ಮನೆಗೆ ಹೋಗಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಗೇಟಿನ ಬಳಿ ಕಂಡಾಗ ಕುಶಲೋಪರಿ ವಿಚಾರಿಸಿಕೊಂಡಿದ್ದೆಷ್ಟೋ ಅಷ್ಟೇ. ನಮ್ಮ ಮನೆಯಲ್ಲೇನೋ ಫಂಕ್ಷನ್ ಗಿಂಕ್ಷನ್ ಇರಬೇಕು, ಅದಕ್ಕೆ ಕರೆಯೋಕೆ ಬಂದಿದ್ದಾರೆ ಅಂದುಕೊಂಡಿರುತ್ತಾರೆ. ನಮ್ಮ ಅವರ ಮನೆಯವರು ಸೇರಿ ನಡೆಸೋ ಫಂಕ್ಷನ್ ಬಗ್ಗೆ ಮಾತನಾಡೋಕೆ ಬಂದಿದ್ದೀವಿ ಅನ್ನುವುದರ ಕಲ್ಪನೆ ಕೂಡ ಅವರಿಗಿರಲಿಕ್ಕಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jul 28, 2019

ಒಂದು ಬೊಗಸೆ ಪ್ರೀತಿ - 24

ಡಾ. ಅಶೋಕ್.‌ ಕೆ. ಆರ್.‌
'ನಾ ನೇರ್ವಾಗಿ ಹೇಳಿದ್ನ ನೀ ಸುತ್ತಿ ಬಳಸಿ ಹೇಳಿದೆ ಅಷ್ಟೇ' ನಕ್ಕೆ. 

“ನಾವಂಗೆ ಚೂರ್ ಸುತ್ತಿ ಬಳಸೋದ್ ಜಾಸ್ತಿ" 

'ಎಲ್ಲಾದ್ರಲ್ಲೂನಾ' ತುಂಟ ನಗೆ ಮೂಡಿತು. 

“ಅಂದ್ರೆ" ಮುಗ್ಧನಂತೆ ನಾಟಕವಾಡಿದ. 

'ಅಂದ್ರೆ... ಎಲ್ಲಾ.....ದ್ರ.....ಲ್ಲೂ....ನಾ' ಅಂತ 

“ಏನೋ ಗೊತ್ತಿಲ್ಲಪ್ಪ. ಅನುಭವ ಇಲ್ಲ. ನಾನಿನ್ನೂ ವರ್ಜಿನ್ನು" 

'ಆಹಾ ವರ್ಜಿನ್ನಂತೆ....' 

“ಹು ಕಣೇ ನಿಜವಾಗ್ಲೂ" 

'No one is virgin by heart ಕಣೋ' 

ಒಂದ್ನಿಮಿಷ ಅವ ಮಾತನಾಡಲಿಲ್ಲ. 

“ಹೌದಲ್ಲ. ಭಯಂಕರ ಸತ್ಯ ಹೇಳಿದೆ ಮಾರಾಯ್ತಿ. ಮನಸ್ಸಿನಿಂದ ಯಾರೂ ವರ್ಜಿನ್ನುಗಳಾಗೋಕೆ ಸಾಧ್ಯವೇ ಇಲ್ಲ. ಆ ಲೆಕ್ಕಕ್ಕೆ ನಮ್ ವರ್ಜಿನಿಟಿ ಒಂಭತ್ತನೇ ಕ್ಲಾಸಿಗೇ ಮುಗಿದೋಯ್ತ ಅಂತ" 

'ಹ. ಹ. ಯಾರಪ್ಪ ಅದು ನಮ್ ಹುಡುಗುನ್ ವರ್ಜಿನಿಟಿ ಕಿತ್ಕೊಂಡೋರು' 

“ನೆನಪಿಲ್ವೇ. ಸುಮಾರ್ ಜನ ಇರ್ತಾರಲ್ಲ" ಇಬ್ಬರ ನಗು ಒಬ್ಬರಿಗೊಬ್ಬರಿಗಪ್ಪಳಿಸಿತು. 

“ಒಂದೆಂತದೋ ಕೇಳ್ಲಾ... ನೀ ಬೇಸರ ಮಾಡ್ಬಾರ್ದು" 

'ಕೇಳೋ... ಬೇಸರ ಯಾಕೆ' 

“ನೀನ್ಯಾವಾಗ ವರ್ಜಿನಿಟಿ..... ಮನಸ್ಸಿನ ವರ್ಜಿನಿಟಿ ಅಲ್ಲ.....ದೇಹದ ವರ್ಜಿನಿಟಿ ಕಳ್ಕಂಡಿದ್ದು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jul 22, 2019

ಒಂದು ಬೊಗಸೆ ಪ್ರೀತಿ - 23

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮನೆ ತಲುಪುವವರೆಗೂ ಸಾಗರನಿಗೆ ಮೆಸೇಜ್ ಮಾಡಲು ಆಗಿರಲಿಲ್ಲ. ರಾಜಿ ಇನ್ನೂ ಆಫೀಸಿಗೆ ಹೊರಟಿರಲಿಲ್ಲ. ಸಾಗರನಿಗೆ ರಾತ್ರಿ ಮಾಡಿದ್ದ ಕಾಲ್ ಡೀಟೇಲ್ಸನ್ನು ಡಿಲೀಟ್ ಮಾಡಿದ್ದೀನಾ ಎಂದು ಮರುಪರಿಶೀಲಿಸಿದೆ. ರಾಜಿ ನನ್ನ ಮೊಬೈಲನ್ನು ತೆಗೆದು ಪರಿಶೀಲಿಸೋರೇನಲ್ಲ. ನಾನೂ ಅವರ ಮೊಬೈಲನ್ನು ಮುಟ್ಟುವವಳಲ್ಲ. ಆದರೂ ಸುಮ್ನೆ ಯಾಕೆ ರಿಸ್ಕು ಅಂತ್ಹೇಳಿ ಡಿಲೀಟ್ ಮಾಡ್ತಿದ್ದೆ. ರಾಜಿ ಆಫೀಸಿಗೆ ಹೊರಟ ಮೇಲೆ ಸಾಗರನಿಗೊಂದು 'ಗುಡ್ ಮಾರ್ನಿಂಗ್' ಮೆಸೇಜು ಕಳುಹಿಸಿದೆ. ಅರ್ಧ ಘಂಟೆಯ ನಂತರ ಉತ್ತರಿಸಿದ್ದ. ಻ಅಷ್ಟರಲ್ಲಿ ಗೇಟಿನ ಸದ್ದಾಯಿತು. ಮೆಸೇಜುಗಳನ್ನು ಡಿಲೀಟು ಮಾಡಿ ಬಾಗಿಲು ತೆರೆದರೆ ಶಶಿ ಬಂದಿದ್ದ, ಸೋನಿಯಾ ಕೂಡ ಜೊತೆಯಲ್ಲಿ ಬಂದಿದ್ದಳು. 

'ಏನ್ರಪ್ಪಾ ಯುವಪ್ರೇಮಿಗಳು. ಕೆಲಸಕ್ ಹೋಗೋದ್ ಬಿಟ್ಟು ಇಷ್ಟು ದೂರ. ಮದುವೆಯಾಗೋಕೆ ಓಡಿಬಂದಿದ್ದೀರಾ ಹೆಂಗೆ' ನಗುತ್ತಾ ಸೋನಿಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದುಕೊಂಡೆ. 

“ಅಪ್ಪ ಅಮ್ಮ ಅಕ್ಕ ಭಾವ ಒಪ್ಕಂಡ ಮೇಲೆ ಓಡೋಗಿ ಮದುವೆಯಾಗೋ ದರ್ದು ನಮಗಿಲ್ಲಪ್ಪ" ಶಶಿಯ ದನಿಯಲ್ಲಿ ಒಂದಷ್ಟು ದಿನದಿಂದ ಕಾಣೆಯಾಗಿದ್ದ ಲವಲವಿಕೆ ಮರಳಿ ಬಂದಂತಿತ್ತು. ಸೋನಿಯಾಳ ಮುಖದಲ್ಲಿ ಮಾತ್ರ ಆ ಲವಲವಿಕೆ ಪ್ರತಿಫಲಿಸಲಿಲ್ಲ. 

ಒಂದಷ್ಟು ಸಮಯ ಮೂರೂ ಮಂದಿ ಸುಮ್ಮನೆ ಕುಳಿತಿದ್ದೆವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jul 14, 2019

ಒಂದು ಬೊಗಸೆ ಪ್ರೀತಿ - 22

ಡಾ. ಅಶೋಕ್.‌ ಕೆ. ಆರ್.‌
“ನಿನಗೆ ಇಂಜಿನಿಯರಿಂಗ್ ಮಾಡ್ಬೇಕು ಅಂತಿತ್ತಾ?” 

'ಹು. ನಿಂಗೇ ಗೊತ್ತಲ್ಲ. ನಾವ್ ಪಿಯುಲಿದ್ದಾಗ ಇಂಜಿನಿಯರಿಂಗ್ ಬೂಮ್ ನಲ್ಲಿತ್ತು. ಸಾಫ್ಟ್ ವೇರು, ಇನ್ಫೋಸಿಸ್ಸು, ಅಮೆರಿಕಾ ಅಮೆರಿಕಾ ಬಹಳಷ್ಟು ಜನರ ಕನಸಾಗಿತ್ತಲ್ಲ. ನಂಗೂ ಹಂಗೇ ಇತ್ತು. ಇಂಜಿನಿಯರಿಂಗ್ ಮಾಡ್ಕಂಡು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡ್ಕಂಡು ಆಮೇಲೆ ಪರಶುವಿನ ಜೊತೆ ವಿದೇಶಕ್ಕೋಗಿ ದುಡಿದು ದುಡಿದು ಕೈತುಂಬಾ ದುಡ್ಡು ಮಾಡ್ಕಂಡು ಬಂದು ಸೆಟಲ್ ಆಗಿಬಿಡಬೇಕು ಅಂತಿತ್ತು. ನಿಂಗಿರಲಿಲ್ವಾ' 

“ಇಲ್ಲಪ್ಪ. ನಂಗೆ ಮೊದಲಿಂದಾನೂ ಡಾಕ್ಟರ್ ಆಗಬೇಕು ಅಂತಲೇ ಇತ್ತು" ಸಾಗರನ ಮಾತಿಗೆ ಮ್ ಎಂದೊಂದು ನಿಟ್ಟುಸಿರುಬಿಟ್ಟೆ. 

“ಮತ್ತೆ ನೀನ್ಯಾಕೆ ಇಂಜಿನಿಯರಿಂಗ್ ಬಿಟ್ಟು ಮೆಡಿಕಲ್ ಸೇರಿದೆ" 

'ಹು. ಅಲ್ಲಿಗೇ ಬಂದೇ ಇರು. ಪಿಯು ರಿಸಲ್ಟು ಬಂತು. ನಂಗೇ ಅಚ್ಚರಿಯಾಗುವಂತೆ ತೊಂಭತ್ತನಾಲ್ಕು ಪರ್ಸೆಂಟ್ ತೆಗೆದೆ. ಅಪ್ಪನ ಕೈಲಿ ಶಹಬ್ಬಾಸ್ ಅನ್ನಿಸಿಕೊಂಡೆ. ಪರಶು ಮೆಚ್ಚುಗೆಯಿಂದ ನೋಡಿದ. ಅವನು ಅರವತ್ತು ಪರ್ಸೆಂಟು ತೆಗೆದುಕೊಂಡು ಪಾಸಾಗಿದ್ದ. ನನ್ನ ತೊಂಭತ್ತನಾಲ್ಕಕ್ಕಿಂತಲೂ ಅವನ ಅರವತ್ತು ದೊಡ್ಡದೆಂದನ್ನಿಸಿತು ನನಗೆ' 

“ಮ್. ಅಶ್ವಿನಿಗಿಂತಾ ಜಾಸ್ತಿ ತೆಗೆದಾ ಇಲ್ಲವಾ?” ವ್ಯಂಗ್ಯದಲ್ಲೇ ಕೇಳಿದ ಸಾಗರ. 

'ಆಹಾ.... ವ್ಯಂಗ್ಯ ನೋಡು! ನಾವ್ ಒಂದ್ಸಲ ಡಿಸೈಡ್ ಮಾಡಿಬಿಟ್ರೆ ನಮ್ ಮಾತ್ ನಾವೇ ಕೇಳಲ್ಲ' 

“ಪಿಚ್ಚರ್ ಡೈಲಾಗು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Jul 11, 2019

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ

ಕು.ಸ.ಮಧುಸೂದನ
ಕತ್ತಲಾಗಲೆಂದೆ ಬೆಳಗಾಗುವುದು 
ಆರಲೆಂದೇ ದೀಪ ಉರಿಯುವುದು
ಬಾಡಲೆಂದೇ ಹೂವು ಅರಳುವುದು 
ಕಮರಲೆಂದೆ ಕನಸು ಹುಟ್ಟುವುದು 
ಗೊತ್ತಿದ್ದರೂ ಹಣತೆ ಹಚ್ಚಿಟ್ಟಳು 
ಬರಲಿರುವ ಸಖನಿಗಾಗಿ. 

ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು 
ಬರಲಿರುವ ಸಖನ ಮೂಗಿಗೆ ಘಮಿಸಲೆಂದು 
ಬರಡು ಎದೆಗೆ ವಸಂತನ ಕನವರಿಸಿ 
ಹೊಸ ಕನಸು ಚಿಗುರಿಸಿಕೊಂಡಳು 
ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು 

Jul 9, 2019

ಶಬ್ದವೊಂದು ಕವಿತೆಯಾಗುವ ಮೊದಲು!

ಕು.ಸ.ಮಧುಸೂದನ
ಶಬ್ದವೊಂದು ಕವಿತೆಯಾಗುವ ಮೊದಲು 
ಕಣ್ಣುಗಳಿಗೆ ಕನಸಿನ ಪಾಠ ಮಾಡಿ ಹೋಯಿತು

ಕವಿತೆಯೊಂದು ಹಾಳೆಗಿಳಿಯುವ ಮೊದಲು
ಕನಸೊಂದ ಕಣ್ಣಿಗಿಳಿಸಿ ಹೋಯಿತು. 

ಹಕ್ಕಿಯೊಂದು ಬಾನೊಳಗೆ ಹಾರುವ ಮೊದಲು 
ಭುವಿಗೆ ವಿದಾಯದ ಅಪ್ಪುಗೆಯನೊಂದ ನೀಡಿ ಹೋಯಿತು 

ಮರಣವೊಂದು ಮನುಜನ ತಬ್ಬುವ ಮೊದಲು 
ಜೀವನದ ಗುಟ್ಟೊಂದ ಕಿವಿಯಲುಸುರಿ ಹೋಯಿತು. 
ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

Jul 7, 2019

ಒಂದು ಬೊಗಸೆ ಪ್ರೀತಿ - 21

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
‘ಸರಿ ಕಣೋ. ಡ್ಯೂಟಿಗೆ ಹೊರಟೆ. ಒಂಭತ್ತರ ಮೇಲೆ ಬಿಡುವಾಗ್ತೀನಿ. ಮೆಸೇಜು ಮಾಡ್ತೀನಿ’ 

“ಸರಿ ಸರಿ. ನಂಗೂ ಇವತ್ತು ಡ್ಯೂಟೀನೇ” 

‘ಡ್ಯೂಟಿನಾ? ಪರೀಕ್ಷೆಗೆ ಓದಿಕೊಳ್ಳೋಕೆ ರಜೆ ಕೊಟ್ಟಿದ್ದಾರೆ ಅಂತಿದ್ದೆ’ 

“ನಿನ್ ಜೊತೆ ಡ್ಯೂಟಿ ಅಂದೆ” 

‘ಹ ಹ. ನಿಂಗಿಷ್ಟ ಇಲ್ದೇ ಹೋದ್ರೆ ರಜಾ ಹಾಕೊಳ್ಳಪ್ಪ. ನಂದೇನೂ ಬಲವಂತವಿಲ್ಲ’ 

“ಹಂಗೇನಿಲ್ವೇ ನಂಗೂ ಇಷ್ಟಾನೇ. ಏನೋ ತಲೆಗ್ ಏನೇನೋ ಯೋಚ್ನೆ ಬರ್ತವೆ ಅಷ್ಟೇ” 

‘ತಲೆ ಇರೋದೆ ಯೋಚ್ನೆ ಮಾಡೋದಿಕ್ಕಲ್ವ. ತಲೆ ಕೆಡಿಸ್ಕೋಬೇಡ ಬಿಡು’ 

ಸಾಲುದ್ದದ ಸ್ಮೈಲಿ ಕಳುಹಿಸಿದ. ಸ್ಮೈಲಿಯಲ್ಲಿ ಸರ್ವ ಭಾವನೆಗಳೂ ಅಡಕವಾಗಿದ್ದವು. 

“ಸರಿ ಕಣೇ. ಡ್ಯೂಟಿಗೆ ಹೊರಡು. ಬಿಡುವಾದಾಗ ..... ಅಲ್ಲಲ್ಲ ಬಿಡುವು ಮಾಡಿಕೊಂಡು ಮೆಸೇಜು ಮಾಡು. ಕಾಯ್ತಿರ್ತೀನಿ” 

‘ಬರೀ ಮೆಸೇಜೇ ಸಾಕೇನೋ. ನಾ ಫೋನ್ ಮಾಡಿ ಮಾತಾಡ್ಬೇಕು ಅಂತಿದ್ದೆ ಇವತ್ತು’ 

“ಡ್ಯೂಟಿ?” 

‘ಡ್ಯೂಟಿ ಇದೆ. ಡ್ಯೂಟಿ ಡಾಕ್ಟರ್ ರೂಮಿರುತ್ತಲ್ಲ. ರಾತ್ರಿಯೇನೂ ಅಲ್ಲಿ ಪೇಷೆಂಟ್ಸ್ ಹೆಚ್ಚಿಗೆ ಇರಲ್ಲ. ಹತ್ ಘಂಟೆಗೆಲ್ಲ ರೂಮಿಗೋಗಿ ಮಲಗ್ತೀನಿ ಸಾಮಾನ್ಯವಾಗಿ. ನಿನಗೆ ನಿದ್ರೆ ಬಂದಿಲ್ಲ ಅಂದ್ರೆ ಫೋನ್ ಮಾಡ್ತೀನಿ ಹತ್ತರ ಮೇಲೆ’ 

“ನನಗ್ ನಿದ್ರೆ ಬಂದಿದ್ರೂ ಪರವಾಗಿಲ್ಲ ಫೋನ್ ಮಾಡಿ ಎಬ್ಬಿಸು. ಆದ್ರೆ....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.