Dec 31, 2014

ವಾಡಿ ಜಂಕ್ಷನ್ .... ಭಾಗ 8

wadi junction
Dr Ashok K R
ಇದೇನಾಗೋಯ್ತು ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’ ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’ ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.

Dec 27, 2014

ಅಂಕೋಲಾ ಕಾರವಾರ ಸುತ್ತಾ ಮುತ್ತಾ

honey beach
ಹನಿ ಬೀಚ್
Umesh Mundalli Naik
ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾಗಿದೆ. ಸ್ವತಂತ್ರ ಹೋರಾಟದಲ್ಲಿ ಇಲ್ಲಿನ ಪಾತ್ರ ಅತಿಮುಖ್ಯವಾಗಿದೆ. ಕಡಲ ಸನಿಹದ ಗುಡ್ಡಗಳಲ್ಲಿ ಬೆಳೆಯುವ ಅಂಕೋಲೆ ಮರದಿಂದ ಊರಿಗೆ ಹೆಸರು ಬಂದಿದೆ. ಕಾರವಾರದಿಂದ 34ಕಿ.ಮೀ. ದೂರದಲ್ಲಿರುವ ತಾಲೂಕಿನ ಕೇಂದ್ರ.

ಹಿಂದಿರುಗಿ ನೋಡಿದಾಗ

Dr Ashok K R
ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ನಡೆಸಿದ ಪೈಶಾಚಿಕ ಕೃತ್ಯ ಧರ್ಮ ದೇಶಗಳ ಗಡಿ ದಾಟಿ ಮೂಡಿಸಿದ ಆಘಾತ, ಸತ್ತ ಪುಟ್ಟ ಮಕ್ಕಳ ಬಗೆಗೆ ಬೆಳೆದ ಆರ್ದ್ಯ ಭಾವದ ಕಣ್ಣೀರು ಒಣಗುವ ಮುನ್ನವೇ 2014ಕ್ಕೆ ತೆರೆಬೀಳಲಿದೆ. ಹಿಂದಿರುಗಿ ನೋಡಿದಾಗ ನೆನಪಾಗುವ ಸಂಗತಿಗಳು ಅನೇಕ. ಭಾರತದ ಮಟ್ಟಿಗೆ ರಾಜಕೀಯವಾಗಿ ಒಂದು ಪಕ್ಷ ಉತ್ತುಂಗಕ್ಕೇರಿದರೆ ಮತ್ತೊಂದು ಪಕ್ಷ ಪಾತಾಳಕ್ಕಿಳಿದಿದೆ. ದಶಕಗಳ ನಂತರ ಏಕಪಕ್ಷ ಬಹುಮತ ಪಡೆದಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸಾಧನೆ. ಹಿಂದೆಂದೂ ಕಾಣದಷ್ಟು ಕಡಿಮೆ ಸೀಟುಗಳನ್ನು ದಕ್ಕಿಸಿಕೊಂಡದ್ದು ಕಾಂಗ್ರೆಸ್ಸಿನ ಸಾಧನೆ! ಮಂಗಳಯಾನದ ಯಶಸ್ಸು ಇಡೀ ವಿಶ್ವ ಭಾರತದ ತಂತ್ರಜ್ಞಾನದೆಡೆಗೆ ಗಮನಹರಿಸುವಂತೆ ಮಾಡಿತು.

Dec 22, 2014

ಮತಾಂತರವೂ ತಪ್ಪಲ್ಲ ಮರುಮತಾಂತರವೂ ತಪ್ಪಲ್ಲ; ಆದರೆ?

religious conversion
Dr Ashok K R
ಅಭಿವೃದ್ಧಿಯ ಹೆಸರಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ‘ಅಭಿವೃದ್ಧಿ’ಯ ಪಥದಿಂದ ಪಕ್ಕಕ್ಕೆ ಸರಿದು ತನ್ನ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್ ಮತ್ತದರ ಪರಿವಾರದ ಇತರ ಸಂಸ್ಥೆಗಳ ತಾಳಕ್ಕೆ ಕುಣಿಯಲು ಸಿದ್ಧತೆಗಳು ನಡೆಯುತ್ತಿವೆಯಾ? ಇಂತಹುದೊಂದು ಅನುಮಾನಕ್ಕೆ ಕಾರಣವಾಗುವ ಅನೇಕ ಬಿಡಿ ಬಿಡಿ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿರುವುದು ಕಾಕತಾಳೀಯವಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ, ಕ್ರಿಸ್ ಮಸ್ ದಿನದ ರಜಾ ವಿವಾದ, ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿಸುವ ಹೇಳಿಕೆಗಳು, ಉತ್ತರಪ್ರದೇಶದಲ್ಲಿ ಠುಸ್ಸೆಂದ ಲವ್ ಜೆಹಾದ್ ವಿವಾದ ಮತ್ತೀಗ ಪರಿವಾರದ ವಿವಿಧ ಅಂಗಸಂಸ್ಥೆಗಳು ನಡೆಸುತ್ತಿರುವ ‘ಘರ್ ವಾಪಸಿ’ ಎಂಬ ಮರುಮತಾಂತರದ ವಿವಾದಗಳೆಲ್ಲವೂ ಬಿಜೆಪಿಯೆಂದರೆ ಧರ್ಮಧಾರಿತ ರಾಜಕಾರಣ ಮಾಡುವುದಕ್ಕಷ್ಟೇ ಸರಿ ಎಂಬ ಆರೋಪಕ್ಕೆ ಪೂರಕವಾಗಿಯೇ ಇವೆ. ‘ಘರ್ ವಾಪಸಿ’ ಎಂಬ ಕಾರ್ಯಕ್ರಮ ಮುಂಚೆಯೂ ಅಲ್ಲಲ್ಲಿ ನಡೆದಿತ್ತು, ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರಕಾರವಿರುವಾಗ ಅದಕ್ಕೆ ಮತ್ತಷ್ಟು ರಂಗು ಬಂದಿದೆ. ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತ್ತೊಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ ಗುರಿಯಾಗುವ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೊರತುಪಡಿಸಿದರೆ ಹೆಚ್ಚೇನೂ ವ್ಯತ್ಯಾಸಗಳು ಗೋಚರಿಸುತ್ತಿಲ್ಲ.

Dec 21, 2014

ದಾಂಪತ್ಯ ಗೀತೆ

ಉಮೇಶ ಮುಂಡಳ್ಳಿ ಭಟ್ಕಳ
ತವರು ಸಿರಿಗಿಂತ
ನಿಮ್ಮ ಮನ ಹಿರಿದೆನಗೆ
ನಿಮ್ಮ ಎದೆ ಆಸರೆಯು 
ಒಲವು ನನಗೆ.

Dec 19, 2014

ನಂಬಿಕೆಯ ಸೌಧ

ರೇಷ್ಮಾ ಉಮೇಶ ಭಟ್ಕಳ
ಬೆಳಗಿನಿಂದ ಮನೆಯಲ್ಲಿ ಒಂದೇ ಸವನೆ ಗಜಿವಿಜಿಯಿಂದ ಕೂಡಿದ ಕೆಲಸ ಕಾರ್ಯಗಳು. ಒಂದೆಡೆ ಮಕ್ಕಳ ತಿಂಡಿ ತೀರ್ಥಗಳ ತಕರಾರು,ಇನ್ನೊಂದೆಡೆ ಗಂಡನ ಆಜ್ಞೆಯ ಭೂತಗಳು, ಇವೆಲ್ಲವುಗಳ ನಡುವೆ ತೊಂದರೆ ಅನುಭವಿಸುವವಳು ನನ್ನ ಬೆಟರ್ ಹಾಪ್, ಅಂದರೇ ನನ್ನ ಅರ್ಧಾಂಗಿ. ಆಕೆಯನ್ನು ಅರ್ದಅಂಗಿ ಎಂದು ಸದಾ ನಾನು ರೇಗಿಸುತ್ತಿದ್ದೆ. ಅವಳು ಸಹ ತಮಾಷೆಗೇನು ಕಡಿಮೆ ಇರಲಿಲ್ಲ, ಆಕೆಯ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವಲ್ಲಿಯೂ ನನ್ನ ಮಾತಿಗೆ ಪ್ರತಿಯಾಗಿ ಅರ್ಧ ಅಂಗಿನೋ ಅಥವಾ ಹರಿದ ಅಂಗಿನೋ ಎಂದು ರೇಗಿಸುತ್ತಿದ್ದಳು. ಆದರೆ ಇಂತಹ ತಮಾಷೆಯ ಸಂದರ್ಭದಲ್ಲು ನನ್ನ ಕಣ್ಮುಂದೆ ಕಟ್ಟುತ್ತಿದ್ದ ಸ್ಥಿತಿ ಅಗೋಚರ, ಚಿತ್ತ ಚಂಚಲ ಮಾಡುವಂತದ್ದು.  ಆದರೆ ಅವಳನ್ನು ನೋಡಿದಾಗಲೆಲ್ಲ ಶರೀಫ್‍ರ ಹಾಡು ನೆನಪಿಗೆ ಬರುತ್ತಿತ್ತು.

Dec 18, 2014

ಸ್ವಚ್ಛತೆಯ ಕಾರ್ಮಿಕರಿಗೆ ಬಿ.ಬಿ.ಎಂ.ಪಿಯ ‘ಗೌರವ’

pourakarmikas protest
ಸಂಬಳ ಕೇಳುತ್ತಿದ್ದೇವೆ ಭಿಕ್ಷೆಯಲ್ಲ
 ಇಂಗ್ಲೀಷ್ ಮೂಲ: ರವಿ ಕೃಷ್ಣರೆಡ್ಡಿ
ಅನುವಾದ: ಡಾ. ಅಶೋಕ್.ಕೆ.ಆರ್
ಈ ದೌರ್ಜನ್ಯದ ಬಗ್ಗೆ ಬೆಂಗಳೂರಿಗರಿಗೆ ನಾಚಿಕೆಯಾಗಬೇಕು. ಮೂರು ವಾರ್ಡಿನ ಇನ್ನೂರು ಮಂದಿ ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಸಿಗುವ ಕನಿಷ್ಠ ಸಂಬಳಕ್ಕಾಗಿ ಈ ಪೌರಕಾರ್ಮಿಕರು ಈ ವರುಷದಲ್ಲಿದು ಏಳನೇ ಬಾರಿ ಪ್ರತಿಭಟನೆಯ ಹಾದಿ ಹಿಡಿದಿರುವುದು. ಇಡೀ ನಗರದಲ್ಲಿ ಇಂಥವರ ಸಂಖೈ ಸಾವಿರದ ಆಸುಪಾಸಿನಲ್ಲಿರಬಹುದು.

ಆರಂಭ ಚಿತ್ರದ ಹಾಡುಗಳ ವೀಡಿಯೋ ಯೂಟ್ಯೂಬಿನಲ್ಲಿ ಲಭ್ಯ

ಶರ ಪ್ರೊಡಕ್ಷನ್ಸ್ ಬ್ಯಾನರ್ರಿನಡಿಯಲ್ಲಿ ಡಿ.ಗಣೇಶ್ ವಿ. ನಾಗೇನಹಳ್ಳಿ ನಿರ್ಮಿಸುತ್ತಿರುವ ಎಸ್. ಅಭಿ ಹನಕೆರೆ ನಿರ್ದೇಶನದ  "ಆರಂಭ - The Last Chance" ಚಿತ್ರದ ಹಾಡುಗಳ ವೀಡಿಯೋ, ಟ್ರೇಲರ್ ಮತ್ತು ಟೀಸರ್ ಆಲ್ಫಾ ಡಿಜಿಟೆಕ್ ಮೂಲಕ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಒಂದು ಭಾಗವಾಗಿ 'ಹಿಂಗ್ಯಾಕೆ'ಯೂ ಇರುವುದರಿಂದ ಹಾಡುಗಳ ವಿಮರ್ಶೆಯನ್ನು ನಾವೇ ಮಾಡುವುದು ಸಾಧುವಲ್ಲವಲ್ಲವೇ? ಕೇಳಿ ಕಮೆಂಟಿಸಿ ಇಷ್ಟವಾದರೆ ನಿಮ್ಮ ಸ್ನೇಹಿತರ ವಲಯದಲ್ಲಿ ಹಂಚಿಕೊಳ್ಳಿ. ಥೂ ಸರಿಯಿಲ್ಲ ಎನ್ನಿಸುವಂತಹ ದೃಶ್ಯಗಳೂ ಇದ್ದರೆ ಹೇಳಿ ನಿರ್ದೇಶಕರಿಗೆ ತಲುಪಿಸುತ್ತೇವೆ.

ಸ್ಟೋರಿ ಇದ್ರೂ ಮತ್ತೊಂದಿದ್ರು ಈ ರೀತಿ ಪೋಲಿ ಕಮರ್ಷಿಯಲ್ ಇರಲೇ ಬೇಕಾ?
https://www.youtube.com/watch?v=WCe6uecDZY0&authuser=0

Dec 13, 2014

ಪಿರಿಯಾಪಟ್ಟಣ ಎಂಬ ಅಭಿವೃಧ್ದಿ ವಂಚಿತ ತಾಲೂಕು

ಪಿರಿಯಾಪಟ್ಟಣ
Vasanth Raju N
ಪಿರಿಯಾಪಟ್ಟಣ ಮೈಸೂರಿನ ಪ್ರಮುಖ ತಾಲ್ಲೊಕು ಕೇಂದ್ರ. ಕೊಡಗಿನ ಅಂಚಿನಲ್ಲಿರುವ ಈ ತಾಲ್ಲೊಕು ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಗೆ ಪ್ರಸಿದ್ದಿ. ಬೈಲ್‍ಕುಪ್ಪೆ (ಟಿಬೆಟ್ ನಿರಾಶ್ರಿತ ಪ್ರದೇಶ) ಕರ್ನಾಟಕದ ಬೌದ್ದ ಧರ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದಲ್ಲದೇ ಇತಿಹಾಸ ಪ್ರಸಿದ್ದಿ ಕನ್ನಂಬಾಡಿ ಮತ್ತು ಮಸಣಿಕಮ್ಮ ದೇವಸ್ಥಾನಗಳು ಕೂಡ ಪ್ರಮುಖ ಭಕ್ತಿ ಕೇಂದ್ರಗಳು. ಅದರೆ ಈ ತಾಲೂಕು ಯಾವುದೇ ರಚನಾತ್ಮಕ ಅಭಿವೃದ್ದಿ ಕಾಣದೇ ಹಿಂದುಳಿದಿದೆ. ಇದಕ್ಕೆ ಕಾರಣವಾಗಿರುವ ಕೆಲ ಅಂಶಗಳನ್ನು ಕುರಿತು ಚರ್ಚೆಯ ಉದ್ದೇಶ ಈ ಲೇಖನದ್ದು.

Dec 10, 2014

ಅಂಗವಿಕಲರ ರಾಜ್ಯ ಸಂಘಟನೆಗೆ ಸಹಕರಿಸಲು ಮನವಿ

office bearers
ಪತ್ರಿಕಾ ಪ್ರಕಟಣೆ.
ಅಂಗವಿಕಲರ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಶ್ರೀ ಕೊಡಕ್ಕಲ್ ಶಿವಪ್ರಸಾದರು ಇದೀಗ ಅಖಿಲ ಭಾರತ ಅಂಗವಿಕಲರ ನೌಕರರ ಸಂಘ (ರಿ) ಇದರ ರಾಜ್ಯ ಸಂಚಾಲಕರಾಗಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಅವರೀಗ ಕರ್ನಾಟಕದಲ್ಲಿ ಅಂಗವಿಕಲರ ಸಂಘಟನೆಗಾಗಿ ಕಾರ್ಯತತ್ಪರರಾಗಿದ್ದಾರೆ.

ಕರ್ನಾಟಕ ಮೊಬೈಲ್ ಒನ್: ಕಿರುಪರಿಚಯ

karnataka mobile one
ಮೊದಲ ಪುಟ
ಭಾರತದ ಐಟಿ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವುದು ನಮ್ಮ ರಾಜಧಾನಿ ಬೆಂಗಳೂರು. ಐಟಿ ಕ್ಯಾಪಿಟಲ್ ಆಗಿರುವುದರಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಅನೇಕ ಅನುಕೂಲಗಳೂ ಆಗಿವೆ, ಅನಾನುಕೂಲಗಳೂ ಆಗಿವೆ. ಐಟಿ ತಂತ್ರಜ್ಞಾನವನ್ನು ಸರಕಾರದ ವತಿಯಿಂದ ಜನರ ಬಳಿಗೆ ಕೆಲಸವೊಂದು ನಡೆದಿದೆ. ಎಲ್ಲರೊಳಗೊಂದಾಗಿರುವ ಮೊಬೈಲು ಫೋನುಗಳನ್ನು ಉಪಯೋಗಿಸಿಕೊಂಡು ಸರಕಾರದ ವಿವಿಧ ಇಲಾಖೆಗಳನ್ನು ಮತ್ತನೇಕ ಖಾಸಗಿ ಸೇವೆಗಳನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೊಬೈಲ್ ಒನ್ ಯೋಜನೆ ಸಿದ್ಧರಾಮಯ್ಯನವರ ಆಸಕ್ತಿಯಿಂದಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿಗೊಂಡಿದೆ.

Dec 9, 2014

ಮೌಡ್ಯದ ವಿರುದ್ಧ ಕಿಕ್ ಔಟ್ ಸಮರ

kickout astrologers
Dr Ashok K R
ನಂಬಿಕೆಗೂ ಮೂಢನಂಬಿಕೆಗೂ ನಡುವಿನ ಗೆರೆ ಅತಿ ತೆಳುವಾದದ್ದು. ಜೊತೆಗೆ ಅನಾದಿ ಕಾಲದಿಂದ ನಂಬಿಕೊಂಡು ಬಂದ ಮೂಢನಂಬಿಕೆ ಕಾಲ ಸವೆದ ಹಾಗೆ ನಂಬಿಕೆಯಾಗಿ ಮಾರ್ಪಟ್ಟು ಆ ಆಚರಣೆಯನ್ನು ಮೌಡ್ಯವೆಂದು ಹೇಳುವವರೇ ಮೂಢರೆಂದು ಜರೆಯುವವರ ಸಂಖೈ ಹೆಚ್ಚುತ್ತದೆ. ಪ್ರತಿ ನಂಬಿಕೆಗೆ ಹೇಗೆ ಪ್ರತ್ಯಕ್ಷ ಪರೋಕ್ಷ ಕಾರಣಗಳಿವೆಯೋ ಅದೇ ರೀತಿ ಮೂಢನಂಬಿಕೆಗೂ ಕಾರಣಗಳಿವೆ. ನಂಬಿದವರಿಗದು ಮೌಡ್ಯತೆ ಎಂದು ತಿಳಿಹೇಳಬೇಕಿರುವುದು ವೈಚಾರಿಕ ಸಮಾಜದ ಕರ್ತವ್ಯವಾ? ಅಥವಾ ಒಬ್ಬರ ನಂಬಿಕೆಯನ್ನು ಪ್ರಶ್ನಿಸುವುದು ತಪ್ಪಾಗುತ್ತದೆ ಎಂಬ ನಂಬುಗೆಯೊಂದಿಗೆ ಮೂಡತೆಯೆಡೆಗೆ ಸಾಗುವವರ ಸಂಖೈ ಹೆಚ್ಚಾಗುತ್ತಿದ್ದರೂ ತೆಪ್ಪಗಿರಬೇಕಾ? ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿವಿಧ ಘಟನಾವಳಿಗಳು, ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಪ್ರತಿಭಟನೆಗಳು, ಎಫ್ ಐ ಆರ್, ಪ್ರತಿ – ಎಫ್ ಐ ಆರ್ ಗಳು ಇಂತಹ ಪ್ರಶ್ನೆಗಳನ್ನು ಮೂಡಿಸಿ ಒಂದಷ್ಟು ದ್ವಂದ್ವಗಳನ್ನು ಮೂಡಿಸುತ್ತವೆ.

Dec 8, 2014

LIBRARY FOR A CAUSE

MyLISA
Tent Library
N. S. Harinarayana; Sunil M. V; Dr. N. Vasantharaju
The Mysore Librarian and Information Scientists Association (MyLISA) in Mysore runs a Tent Library.
“Books are for Use” and “Books for all” are the dictums propounded by Padmashree S.R. Ranganathan, also called the ‘Father of Library Movement in India’.

Dec 4, 2014

ಹಿಂದಿ ಹೇರಿಕೆಯ ವಿವಿಧ ಹಂತಗಳು

santemavattur
ಹಿಂದಿ ಹೇರಿಕೆ
Dr Ashok K R
ತಾತ ತೀರಿಹೋಗಿದ್ದ ಕಾರಣ ಕುಣಿಗಲ್ ಸಮೀಪದ ಊರಿಗೆ ತೆರಳಿದ್ದೆ. ಮೇನ್ ರೋಡಿನಿಂದ ಕೊಂಚ ದೂರದಲ್ಲಿದ್ದ ಊರಾದ ಕಾರಣ ಸಾವಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಕರೆತರಲು ರೇಷ್ಮೆ ಮಾರುಕಟ್ಟೆಗೆ ಹೆಸರುವಾಸಿಯಾದ ಸಂತೆಮಾವತ್ತೂರಿಗೆ ಹೋಗಿ ಬಸ್ಸು ನಿಲ್ಲುವ ಜಾಗದಲ್ಲಿ ಬೈಕು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಎದುರಿಗೊಂದು ಮುರಿದು ಬಿದ್ದಂತಿದ್ದ ಮನೆ ಕಾಣಿಸಿತು. ಮತ್ತೊಮ್ಮೆ ಆ ಮನೆಯತ್ತ ಕಣ್ಣಾಡಿಸಿದಾಗ ಮನೆಯ ಒಂದು ಪಾರ್ಶ್ವ ಸಂಪೂರ್ಣ ಪಾಳು ಬಿದ್ದಿದ್ದರೆ ಮತ್ತೊಂದು ಬದಿಯಲ್ಲಿ ಅಂಚೆ ಕಛೇರಿಯಿತ್ತು. ಇದೇನು ಅಂಚೆ ಕಛೇರಿಯ ಹಳೆಯ ಕಟ್ಟಡವೋ ಈಗಲೂ ಕಾರ್ಯನಿರ್ವಹಿಸುತ್ತಿದೆಯೋ ಎಂದು ಅಲ್ಲೇ ರಸ್ತೆ ಬದಿಯಲ್ಲಿ ಒಣಗಿಸಿ ಸುತ್ತಿದ ತಂಬಾಕು ಎಲೆಗಳು, ಅಡಿಕೆ, ವೀಳ್ಯದೆಲೆ ಮಾರುತ್ತಿದ್ದ ಹೆಂಗಸನ್ನು ಕೇಳಿದಾಗ ‘ಅದೇ ಆಪೀಸು. ಮಧ್ಯಾಹ್ನ ಅಲ್ವಾ ಊಟಕ್ಕೆ ಹೋಗಿರ್ತಾರೆ’ ಎಂದ್ಹೇಳಿ ಅಂಚೆ ಕಛೇರಿಯ ಆಧುನೀಕರಣದ ಮತ್ತೊಂದು ಮಜಲನ್ನು ತೋರಿಸಿದರು.

Dec 2, 2014

ಬಂದು ನೋಡಿ ಹೊನ್ನಾವರ…

apsarakonda
ಅಪ್ಸರಕೊಂಡ
ಉಮೇಶ ಮುಂಡಳ್ಳಿ ಭಟ್ಕಳ
ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 38ಕಿ.ಮಿ. ಮತ್ತು ಕುಮಟಾದಿಂದ ಕೇವಲ 19 ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕ ವಿಜಯನಗರದ ರಾಜರೊಡನೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದಾಗಿ ಉಲ್ಲೇಖಗಳಿವೆ. ಇಲ್ಲಿನ ಶರಾವತಿ ಸೇತುವೆ ರಾಜ್ಯದಲ್ಲಿಯೆ ಅತಿಉದ್ದದ ಸೇತುವೆಯಾಗಿದೆ. ಇಲ್ಲಿನ ಪ್ರವಾಸಿತಾಣದಲ್ಲಿ ಕರ್ನಲ್ ಹಿಲ್, ರಾಮತೀರ್ಥ, ಇಡಗುಂಜಿ, ಗುಂಡಬಾಳ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಕುದ್ರಗಿ, ಗೇರುಸೊಪ್ಪ ಮತ್ತು ಅಪ್ಸರಕೊಂಡ ಮೊದಲಾದವುಗಳು ಅತ್ಯಂತ ಆಕರ್ಷಣೀಯವಾಗಿದೆ. ರಾಮತೀರ್ಥ ಹೊನ್ನಾವರದಿಂದ ಕೇವಲ 3ಕಿಮಿ. ಅಂತರದಲ್ಲಿದೆ. ಇಲ್ಲಿ ಸರ್ವಕಾಲಕ್ಕೂ ಬೀಳುವ ತೀರ್ಥ ಅನೇಕ ರೋಗಗಳಿಗೆ ದಿವ್ಯ ಔಷದಿ

Nov 30, 2014

ಗೋವಾದಲ್ಲಿ ಆರಂಭ ಚಿತ್ರದ ದ್ವನಿಸುರುಳಿ ಬಿಡುಗಡೆ.

aarambha goa publicity
ಪತ್ರಿಕಾ ಪ್ರಕಟಣೆ 
ಅಖಿಲ ಗೋವಾ ಕನ್ನಡ ಮಹಾ ಸಂಘ ಅಧ್ಯಕ್ಷರಾದ ಸಿದ್ದಣ್ಣ ಮೀಟಿಯವರು, ಎಸ್ ಅಭಿ ಹನಕೆರೆ ನಿರ್ದೇಶನದ  ಆಡಿಯೋ ಸೀಡಿಯನ್ನು ಗೋವಾ ಬೀಚಿನಲ್ಲಿ ಬಿಡುಗಡೆಗೊಳಿಸಿದರು.

Nov 25, 2014

ನಾನೂ ಶಿಲ್ಪವಾಗಬೇಕು....

ಉಮೇಶ ಮುಂಡಳ್ಳಿ ಭಟ್ಕಳ
ಬನ್ನಿ ಯಾರಾದರೂ
ಎತ್ತಿಕೊಳ್ಳಿ,
ಶಿಲ್ಪವಾಗಿಸಿ,
ಕಪ್ಪು ಕಲ್ಲಿನಂತೆ ನಾನು
ಗರ್ಭಗುಡಿಯ ಸೇರಬೇಕು,
ಶಿಲ್ಪವಾಗಬೇಕು.

ಅಹಮ್ಮುಗಳಿಗೆ ಬಲಿಯಾದ ಧರ್ಮ ಮತ್ತು ಕರ್ತವ್ಯ

kannada news channels
Dr Ashok K R
ಟಿ.ವಿ 9 ಮತ್ತು ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಕೆಟ್ಟತನಕ್ಕಾಗಿ! ಡಿ.ಕೆ.ಶಿವಕುಮಾರರ ಮೇಲೆ ಟಿ.ವಿ.9 ಮತ್ತು ಅದರ ಸೋದರ ಸಂಸ್ಥೆ ನ್ಯೂಸ್ 9 ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಆರೋಪವನ್ನೊರಸಿದ್ದಾರೆ. ಡಿ.ಕೆ.ಶಿವಕುಮಾರರು ತಮ್ಮ ಅಧಿಕಾರದ ಪ್ರಭಾವಳಿಯನ್ನು ಬಳಸಿ ಕೇಬಲ್ ಆಪರೇಟರ್ರುಗಳ ಮೂಲಕ ಟಿ.ವಿ.9 ಮತ್ತು ನ್ಯೂಸ್ 9 ವಾಹಿನಿ ಪ್ರಸಾರವಾಗದಂತೆ ನೋಡಿಕೊಂಡಿದ್ದಾರೆ! ಟಿ.ವಿ.9 ವಾಹಿನಿಯ ಪ್ರಕಾರ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆಯ ವರೆಗೆ ಈ ಬ್ಲ್ಯಾಕ್ ಔಟ್ ನಡೆದಿದೆ. ಮಾಧ್ಯಮಗಳನ್ನು ಹತ್ತಿಕ್ಕುವ ಸರ್ಕಾರದ ಪ್ರತಿನಿಧಿಯ ಪ್ರಯತ್ನ ಸ್ವಹಿತಾಸಕ್ತಿಗಾಗಿ ನಡೆಸಿದ ಫ್ಯಾಸಿಸ್ಟ್ ಮನೋಭಾವವೇ ಹೊರತು ಮತ್ತೇನಲ್ಲ. ಸರಕಾರದ ವಿರುದ್ಧ ಒಂದಾದ ಮೇಲೊಂದರಂತೆ ವರದಿಗಳನ್ನು ಪ್ರಕಟಿಸುತ್ತಿರುವುದು ಈ ಹತ್ತಿಕ್ಕುವಿಕೆಗೆ ಕಾರಣವಂತೆ! ಮಾಧ್ಯಮದ ಕೆಲಸವೇ ವಿರೋಧ ಪಕ್ಷದಂತೆ ಕೆಲಸ ನಿರ್ವಹಿಸುವುದಲ್ಲವೇ? ಅದನ್ನೇ ಅವರನ್ನು ಮಾಡಬೇಡಿ (ಅವರು ಮಾಡುತ್ತಿಲ್ಲ ಎಂಬುದು ಮತ್ತೊಂದು ಸತ್ಯ) ಎಂದರೆ ಹೇಗೆ ಸ್ವಾಮಿ? ಉಳಿದ ವಾಹಿನಿಗಳೂ ಕೂಡ ಸರಕಾರದ ವಿರುದ್ಧ ವರದಿಗಳನ್ನು ಬಿತ್ತರಿಸುವಾಗ ಟಿ.ವಿ.9 ಮಾತ್ರ ಹೇಗೆ ಮತ್ತು ಏಕೆ ಬಹಿಷ್ಕಾರಕ್ಕೊಳಗಾಯಿತು?

Nov 22, 2014

What is a real temple?


temple in subramanya
Shanmukha HR
Having prayed to gods and goddesses in so many temples, I once gave a thought to what's it that we really go to temple for...? All of us go to temples to pray for one or the other reason. Most of us pray for our loved ones and feel protected.

Nov 21, 2014

ವಾಡಿ ಜಂಕ್ಷನ್ .... ಭಾಗ 7

wadi junction
Dr Ashok K R
ಎಂಟು ಘಂಟೆಯ ಸುಮಾರಿಗೆ ಕ್ರಾಂತಿ ರೂಮಿಗೆ ಬಂದ. ಬನ್ನಿಮಂಟಪದಲ್ಲಿ ಟೆಂಪೋ ಹಿಡಿದು ಕಳಸ್ತವಾಡಿಯಲ್ಲಿ ಇಳಿದುಕೊಂಡು ಚಕ್ರೇಶ್ವರಿ ಬಾರಿನಲ್ಲಿ ಎರಡು ಬಿಯರ್ ಬಾಟಲ್ ಖರೀದಿಸಿ ಪಕ್ಕದ ರಾಜಹಂಸ ಡಾಬಾಕ್ಕೆ ಕಾಲಿಟ್ಟಾಗ ಸಮಯ ಒಂಭತ್ತಾಗಿತ್ತು. ಕ್ರಾಂತಿ ಯೋಚನಾಲಹರಿಯಲ್ಲಿ ತೇಲುತ್ತಾ ಮೌನವಾಗುಳಿದಿದ್ದ. ಉಳಿದ ಮೂವರೂ ಕ್ರಾಂತಿಯನ್ನು ಯಾವ ರೀತಿಯಿಂದ ಮಾತಿಗೆ ಹಚ್ಚಬೇಕು ಎಂಬುದನ್ನು ಚಿಂತಿಸುತ್ತಾ ಕುಳಿತಿದ್ದರು. ‘ನಿಮ್ಮಿಬ್ಬರಲ್ಲೊಬ್ಬರು ಮೊದಲು ಮಾತನಾಡಬೇಕು ನಂತರವಷ್ಟೇ ನಾನು ಆ ವಿಷಯವನ್ನು ಚರ್ಚಿಸೋದು’ ಎಂದು ತುಷಿನ್ ಮೊದಲೇ ಹೇಳಿಬಿಟ್ಟಿದ್ದ. 
Also Read: ವಾಡಿ ಜಂಕ್ಷನ್ ಭಾಗ 6

Nov 19, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 2

modi cabinetDr Ashok K R
ಕೇಂದ್ರ ಸರ್ಕಾರವನ್ನು ರೂಪಿಸುವಲ್ಲಿ ಉತ್ತರ ಪ್ರದೇಶದ ಪ್ರಭಾವ ಹೆಚ್ಚು. ದೊಡ್ಡ ರಾಜ್ಯ, ವಿಪರೀತ ಜನಸಂಖೈಯಿರುವ ಉತ್ತರಪ್ರದೇಶದಿಂದ ಎಂಭತ್ತು ಜನ ಸಂಸದರು ಲೋಕಸಭೆ ಪ್ರವೇಶಿಸುತ್ತಾರೆ. ಸಂಸದರ ಸಂಖೈಯ ಆಧಾರದಲ್ಲಿ ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಿಂದ ಆಯ್ಕೆಯಾಗುವವರ ಸಂಖೈ ನಲವತ್ತೆಂಟು! ಉತ್ತರ ಪ್ರದೇಶ ಗೆದ್ದರೆ ಅಧಿಕಾರದ ಗದ್ದುಗೆ ಏರಿದಂತೆಯೇ ಎಂಬ ಮಾತು ಅದಕ್ಕಾಗೇ ಹುಟ್ಟಿರಬೇಕು. ಎಂಭತ್ತು ಸ್ಥಾನದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಪ್ಪತ್ತೊಂದು ಸ್ಥಾನದಲ್ಲಿ ಜಯಗಳಿಸಿತ್ತು. ಸಹಜವಾಗಿ ಅಲ್ಲಿನವರಿಗೆ ಸಚಿವ ಸಂಪುಟದಲ್ಲೂ ಪ್ರಾಮುಖ್ಯತೆ ದೊರೆಯಬೇಕು. ಮೊದಲ ಸಂಪುಟದಲ್ಲಿ ಉತ್ತರಪ್ರದೇಶದ ಎಂಟು ಮಂದಿಯಿದ್ದರೆ ಈ ಬಾರಿ ಮತ್ತೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ದಲಿತ ನಾಯಕರಿಗೆ, ನಿಶಾದರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಆರೆಸ್ಸೆಸ್ ನಾಯಕ ರಾಮ್ ಶಂಕರ್ ಕಥಾರಿಯಾ, ನಿಶಾದರ ಮತಗಳನ್ನು ಬಿಜೆಪಿಗೆ ತಂದುಕೊಟ್ಟ ಸಾಧ್ವಿ ನಿರಂಜನ್ ಜ್ಯೋತಿಯವರಿಗೆ ಸಚಿವ ಸ್ಥಾನ ದಕ್ಕಿದೆ. 
ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ ಭಾಗ 1

Nov 18, 2014

ಪ್ರಹಸನವಾಗದ ವಿಸ್ತರಣೆಯಲ್ಲಿ ಅನ್ಯಾಯವಾಗಿದ್ದು ಕರ್ನಾಟಕಕ್ಕೆ .... ಭಾಗ 1


modi cabinet
Dr Ashok K R
ಸಂಪುಟ ವಿಸ್ತರಣೆಯೆಂಬುದು ಪ್ರಹಸನದಂತೆ ನಡೆಯುವ ಸಂದರ್ಭಗಳೇ ಹೆಚ್ಚಾಗುತ್ತಿರುವ ದಿನಗಳಲ್ಲಿ ನರೇಂದ್ರ ಮೋದಿಯವರ ಸಂಪುಟ ವಿಸ್ತರಣೆಯ ಕಾರ್ಯ ಸುಸೂತ್ರವಾಗಿ ನಡೆದಿದೆ ಎಂದೇ ಹೇಳಬಹುದು. ಅನೇಕ ವರುಷಗಳಿಂದ ಸಮ್ಮಿಶ್ರ ಸರ್ಕಾರಗಳೇ ಅಸ್ತಿತ್ವದಲ್ಲಿದ್ದ ಕಾರಣ ಬಹುಮತ ಪಡೆಯಲಾಗದ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಕೋರಿಕೆ – ಅಣತಿಯ ಮೇರೆಗೆ ಸಂಪುಟ ವಿಸ್ತರಣೆ ನಡೆಸಬೇಕಾಗುತ್ತಿತ್ತು. ಒಂದು ಪಕ್ಷಕ್ಕೆ ಕೊಟ್ಟರೆ ಮತ್ತೊಂದು ಪಕ್ಷಕ್ಕೆ ಮುನಿಸು. ಅವರ ಮುನಿಸು ತಣಿಸುವಷ್ಟರಲ್ಲಿ ಮಗದೊಬ್ಬರ ಕೋಪ; ಇವೆಲ್ಲ ಘಟನೆಗಳೂ ಸೇರಿ ಸಂಪುಟ ವಿಸ್ತರಣೆಯೆಂದರೆ ಅಧಿಕಾರದಲ್ಲಿರುವ ಮುಖ್ಯಸ್ಥನಿಗೆ ತಲೆನೋವಿನ ಸಂಗತಿಗಳನ್ನಾಗಿ ಮಾಡಿತ್ತು. ದಶಕಗಳ ನಂತರ ಕೇಂದ್ರದಲ್ಲಿ ಏಕಪಕ್ಷ ಬಹುಮತ ಪಡೆದಿದೆ, ಚುನಾವಣಾ ಪೂರ್ವದಿಂದ ಜೊತೆಗಿದ್ದ ಮಿತ್ರಪಕ್ಷಗಳಿಗೆ ಸಚಿವ ಸ್ಥಾನ ನೀಡಿದ್ದ ಬಿಜೆಪಿಯ ಮೇಲೆ ‘ನಮಗೆ ಇಂತಹ ಸ್ಥಾನ ಬೇಕು’ ಎಂದು ಒತ್ತಾಯಿಸುವಂತಿಲ್ಲ, ಒತ್ತಾಯಿಸಿದರೆ ಎನ್ ಡಿ ಎ ತೊರೆದು ಹೋಗಲು ಸಿದ್ಧರಾಗಬೇಕಾಗುತ್ತದೆ. ಅದರಲ್ಲೂ ಏಕಪಕ್ಷಕ್ಕಿಂತ ಏಕವ್ಯಕ್ತಿ ಆಡಳಿತದಂತಿರುವ ಈಗಿನ ಕೇಂದ್ರ ಸರ್ಕಾರದಲ್ಲಿ ಬಿಜೆಪಿಯವರೇ ಮೇಲಿನವರ ಮಾತುಗಳನ್ನು ಪ್ರಶ್ನಿಸುವಂತಿಲ್ಲ, ಇನ್ನು ಉಳಿದ ಪಕ್ಷಗಳು ಪ್ರಶ್ನಿಸಲು ಹೇಗೆ ಸಾಧ್ಯ?! ಕಾಂಗ್ರೆಸ್ಸಿನ ಹೈಕಮಾಂಡಿನ ಕಾರ್ಯವೈಖರಿಯನ್ನು ಟೀಕಿಸುತ್ತಿದ್ದ ಬಿಜೆಪಿಯಲ್ಲೂ ಹೈಕಮಾಂಡ್ ಸಂಸ್ಕೃತಿ ಬಹುವೇಗವಾಗಿ ಬೆಳೆಯುತ್ತಿದೆ! ಅಲ್ಲಿಗೆ ಬಿಜೆಪಿ ಕಾಂಗ್ರೆಸ್ ಆಗುವ ಪ್ರಯತ್ನದಲ್ಲಿ ವೇಗದಿಂದಲೇ ಮುಂದುವರೆಯುತ್ತಿದೆ!

ಡಬ್ಬಿಂಗ್ ಮುಗಿಸಿದ 'ಆರಂಭ'

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಗಣೇಶ್ ವಿ.ನಾಗೇನಹಳ್ಳಿ ನಿರ್ಮಿಸುತ್ತಿರುವ 'ಆರಂಭ' ಚಿತ್ರ ಡಬ್ಬಿಂಗ್ ಪೂರ್ಣಗೊಳಿಸಿ ರೀರೆಕಾರ್ಡಿಂಗಿಗೆ ಸಿದ್ಧವಾಗಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಿಥುನ್ ಪ್ರಕಾಶ್, ರಸಗವಳ ನಾರಾಯಣ,ಬೇಬಿ ಹಾಸಿನಿ,ಅಭಿರಾಮಿ,ಡಿಸ್ಕೊ ಪೃಥ್ವಿ,ಬಳ್ಳಾರಿ ರಾಘವೇಂದ್ರ,ಪ್ರವೀಣ್,ಬ್ಯಾಂಕ್ ಜನಾರ್ಧನ,ಪಾಂಡು ಕುಮಾರ್,ಅಭಿರಾಜ್ ಅಭಿನಯಿಸುತ್ತಿದ್ದಾರೆ. ಎಸ್. ಅಭಿ ಹನಕೆರೆ ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಊರಾದ ಕಣಗಾಲಿನಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಆರಂಭ ಚಿತ್ರತಂಡದ್ದು. ಚಿತ್ರರಂಗದ ಗಣ್ಯರನ್ನು ಮತ್ತು ಸಿನಿಮಾಸಕ್ತರನ್ನು ಕಣಗಾಲಿಗೆ ಆಹ್ವಾನಿಸಿ ಪುಟ್ಟಣ್ಣ ಕಣಗಾಲರ ನೆನಪಿನಲ್ಲಿ 'ಆರಂಭ' ಚಿತ್ರದ ಪ್ರೀಮಿಯರ್ ಶೋ ನಡೆಸುವ ಉದ್ದೇಶ ನಿರ್ದೇಶಕರಿಗಿದೆ. 
ಜಿ.ಮ್ಯೂಸಿಕ್ ಲಾಂಛನದಲ್ಲಿ ಚಿತ್ರದ ಹಾಡುಗಳು ಬಿಡುಗಡೆಗೊಂಡಿದ್ದು ಜನರ ಮನಗೆದ್ದಿದೆ.

Nov 11, 2014

ಇಂತಿ ನಮಸ್ಕಾರಗಳು

inthi namaskaragalu
ಇಂತಿ ನಮಸ್ಕಾರಗಳು
ಬಹುಶಃ ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಅರ್ಥವಾಗದ, ಅರ್ಥವಾಗದಿದ್ದರೂ ಓದಿಸಿಕೊಂಡ ಪುಸ್ತಕವೆಂದರೆ ನಟರಾಜ್ ಹುಳಿಯಾರರು ಪಿ.ಲಂಕೇಶ್ ಮತ್ತು ಡಿ.ಆರ್.ನಾಗರಾಜರ ಕುರಿತು ಬರೆದಿರುವ ನೆನಪಿನ ಸಂಚಿಕೆ 'ಇಂತಿ ನಮಸ್ಕಾರಗಳು'. ಈ ಪುಸ್ತಕ ಅರ್ಥವಾಗದ್ದಕ್ಕೆ ಮುಖ್ಯ ಕಾರಣ ನಟರಾಜ್ ಹುಳಿಯಾರರು ಬರೆದಿರುವ ಇಬ್ಬರ ಬರವಣಿಗೆ, ಬದುಕಿನ ಬಗೆಗೆನ ಅಷ್ಟೇನೂ ತಿಳಿಯದಿರುವುದು.

Nov 9, 2014

ವಾಡಿ ಜಂಕ್ಷನ್ .... ಭಾಗ 6



wadi junctionDr Ashok K R
ಅವರು ನಾಲ್ವರು ಇದ್ದಿದ್ದೇ ಹಾಗೆ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಒಬ್ಬೊಬ್ಬರಲ್ಲೂ ಬಹಳಷ್ಟು ವ್ಯತ್ಯಾಸಗಳಿದ್ದುವಾದರೂ ಹೊರಗಿನಿಂದ ನೋಡುವವರಿಗೆ ಒಬ್ಬನಿಗೇ ನಾಲ್ಕು ಅಂಗಿ ತೊಡಿಸಿದಂತೆ ಕಾಣಿಸುತ್ತಿದ್ದರು. ಎಲ್ಲರಿಗಿಂತ ಕೊನೆಯಲ್ಲಿ ಬಂದು ತರಗತಿಯ ಒಂದು ಮೂಲೆಯಲ್ಲಿ ಕುಳಿತು ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲರಿಗಿಂತ ಮೊದಲು ಹೊರಟು ಕಾಲೇಜಿನ ಎದುರಿಗಿದ್ದ ಅಫ್ರೋಜ್ ಭಾಯ್ ಅಂಗಡಿಯಲ್ಲಿ ಸಿಗರೇಟಿಡಿದು ಕುಳಿತು ಬಿಡುತ್ತಿದ್ದರು. ಮೊದಲ ವರ್ಷದ ಮೊದಲ internals ಮುಗಿಯುವವರೆಗೂ ಬಹುತೇಕ ಮಂದಿ ಇವರು ನಾಲ್ವರು ದುಡ್ಡು ಕೊಟ್ಟು ಓದಲು ಬಂದಿರೋ ದಡ್ಡ ಶಿಖಾಮಣಿಗಳೆಂದೇ ತಿಳಿದಿದ್ದರು.

Nov 8, 2014

`ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು ಮಕ್ಕಳೇ ನನ್ನ ನೋಡಿದರೂ ಮಾತನಾಡಿಸುತ್ತಿರಲಿಲ್ಲ’

jadamali jagattu
ಜಾಡಮಾಲಿ ಜಗತ್ತು
ಭಾನುವಾರ ನವೆಂಬರ್ 9ರಂದು ಹಾಸನದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ಒಂಭತ್ತು ಘಂಟೆಗೆ ನಾಗರಾಜ್ ಹೆತ್ತೂರ್‍ ಅವಧಿ ವೆಬ್ ಪತ್ರಿಕೆಗೆ ಬರೆದಿದ್ದ "ಜಾಡಮಾಲಿ ಜಗತ್ತು" ಲೇಖನಗಳ ಸಂಗ್ರಹದ ಪುಸ್ತಕ ಬಿಡುಗಡೆಗೊಳ್ಳುತ್ತಿದೆ. ಪುಸ್ತಕದ ಆಯ್ದಭಾಗ ಹಿಂಗ್ಯಾಕೆಯ ಓದುಗರಿಗಾಗಿ.
ಹೌದು..!  ವೃತ್ತಿಯೇ ಅಂತದ್ದು. ಯಾರಿಗಾದರೂ ಸರಿಯೇ ನಾನು ಇಂತಹವರು ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಕಾರಣ ವೃತ್ತಿಗೆ ಗೌರವ ಕೊಡುವವರು ಸಮಾಜದಲ್ಲಿ ಯಾರಿದ್ದಾರೆ ಹೇಳಿ ? ಯಾರು  ಅವರನ್ನು ಕರೆದು ಆತ್ಮೀಯವಾಗಿ ಮಾತನಾಡಿಸುತ್ತಾರೆ ? ಯಾವ ಮಕ್ಕಳೂ ಕೂಡ ನನ್ನ ಅಮ್ಮ ಕಸ ಗುಡಿಸುವವಳು, ನನ್ನಪ್ಪ ಬೀದಿ ಗುಡಿಸುವ ಪೌರ ಕಾರ್ಮಿಕ ಎಂದು ಹೇಳಿಕೊಳ್ಳುವ  ಪರಿಸ್ಥಿತಿ ಇಂದಿನ ಸಮಾಜದಲ್ಲಿ ಇಲ್ಲ.

ಹೊಂಬಣ್ಣವನ್ನರಸಿ....


golden hours
ಹೊಂಬಣ್ಣದ ಸಮಯ
Dr Ashok K R
ಕ್ಯಾಮೆರಾ ದೊಡ್ಡದೇ ಇರಲಿ ಪುಟ್ಟದೇ ಇರಲಿ ಫೋಟೋಗ್ರಫಿ ಕಲಿಯುವ ಉತ್ಸಾಹ ಮೂಡಿದ ಮೇಲೆ ಆ ಉತ್ಸಾಹದ ಜೊತೆಜೊತೆಗೇ ಶಿಸ್ತು ಮೈಗೂಡದಿದ್ದರೆ ಕಷ್ಟ. ಶಿಸ್ತು ಮೈಗೂಡಿಸಿಕೊಂಡ ಮೇಲೆ ಕ್ಯಾಮೆರಾ ಕೈಗೆತ್ತುಕೊಳ್ಳಬೇಕು. ಕ್ಯಾಮೆರಾ ಮತ್ತು ಫೋಟೋಗ್ರಫಿಯ ಮೇಲೆ ‘ಭಯಂಕರ’ ಪ್ರೀತಿ ಮೂಡಿದರೆ ಶಿಸ್ತು ತಾನಾಗೇ ನಮ್ಮೊಳಗೆ ಪ್ರವೇಶಿಸಿಬಿಡುತ್ತದೆ. ಅದರಲ್ಲೂ ನಿದ್ರಾದೇವಿಯ ಅಪಾರ ಕೃಪೆಯಿರುವವರಿಗೆ ಮುಂಜಾನೆಯ ಸವಿನಿದ್ರೆಯಿಂದೇಳುವುದು ಹಿಂಸೆಯೇ ಸರಿ. ಕೋಳಿ ಕೂಗುವುದಕ್ಕಿಂತ ಮೊದಲೇ ಎದ್ದು ಬೆಳಕಿನ ನಿರೀಕ್ಷೆಯಲ್ಲಿರುವವರಿಗೆ (ನನ್ನದೂ ಇದೇ ಕೆಟಗರಿ) ತೊಂದರೆಯಿಲ್ಲ ಬಿಡಿ!

Nov 6, 2014

ನಂದಿತಾ ಎಂಬ ಪುಟ್ಟಿಗೆ ಸಮಾಜ ಮಾಡಿದ ಅನ್ಯಾಯ….

nanditha case
ನಂದಿತಾ

ಒಂದು ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ (ಅದು ಅತ್ಯಾಚಾರದಿಂದಾದ ಹತ್ಯೆ ಎಂದು ಆರೋಪವಿರುವುದರಿಂದ ಅತ್ಯಾಚಾರ ಮತ್ತು ತದನಂತರ ನಡೆದ ಕೊಲೆ ಎಂದೇ ಒಪ್ಪಿಕೊಳ್ಳೋಣ), ಸಹಜವಾಗಿ ಅತ್ಯಾಚಾರ ನಡೆಸಿದವರನ್ನು ಮತ್ತು ಹತ್ಯೆ ಮಾಡಿದವರನ್ನು ಬಂಧಿಸಬೇಕಿರುವುದು ಸರ್ಕಾರ ಮತ್ತು ಪೋಲೀಸರ ಕರ್ತವ್ಯ. ಕೆಲವೊಮ್ಮೆ ಬಂಧನ ಶೀಘ್ರವಾಗಿ ಆಗಬಹುದು. ಕೆಲವೊಮ್ಮೆ ನಿಧಾನವಾಗಬಹುದು. ನಿಧಾನವಾದಾಗ ಸರ್ಕಾರದ ವಿರುದ್ಧ ಪ್ರತಿಭಟಿಸಿ ಮಂತ್ರಿಗಳ ಮತ್ತು ಅಧಿಕಾರಿಗಳ ಮೇಲೆ ಒತ್ತಡ ತರಬೇಕಿರುವುದು ಪ್ರತಿಪಕ್ಷ ಮತ್ತು ಜನರ ಕರ್ತವ್ಯ. ಮೇಲ್ನೋಟಕ್ಕೆ ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ನಡೆದಿರುವುದೂ ಅದೇ ರೀತಿಯಾಗಿ ಕಾಣುತ್ತದೆ. ಆದರೆ?

Nov 5, 2014

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ; ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 2

Dr Ashok K R
ಆತನ ಹೆಸರು ಹಾರ್ವೆ ಫಾಲ್ಸಿಯಾನಿ. ಮೂಲತಃ ಫ್ರೆಂಚಿನವ. ಸ್ವಿಝರ್ಲ್ಯಾಂಡಿನ ಜಿನೀವಾದಲ್ಲಿರುವ ಹೆಚ್.ಎಸ್.ಬಿ.ಸಿ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದಾತ. ಕೆಲಸಕ್ಕೆ ಸೇರಿಕೊಂಡ ನಂತರ ತನ್ನ ಬ್ಯಾಂಕು ಹೇಗೆ ವಿವಿಧ ದೇಶಗಳ ತೆರಿಗೆಗಳ್ಳರ ಹಣವನ್ನು ಜೋಪಾನವಾಗಿರಿಸುತ್ತಿದೆ ಎಂಬುದನ್ನು ಕಂಡುಕೊಂಡ. ಬ್ಯಾಂಕಿನ ಇತರೆ ಸಹೋದ್ಯೋಗಿಗಳಂತೆ ಅವ್ಯವಹಾರವನ್ನು ನೋಡಿದ ನಂತರ ಕಣ್ಣು ಮುಚ್ಚಿ ಕೂರದೆ ತನಗಿರುವ ಕಂಪ್ಯೂಟರ್ ಜ್ಞಾನವನ್ನುಪಯೋಗಿಸಿ ನಿಧಾನಕ್ಕೆ ಬ್ಯಾಂಕಿನ ಸರ್ವರುಗಳಿಂದ ಹೆಚ್.ಎಸ್.ಬಿ.ಸಿ ಬ್ಯಾಂಕಿನ ಖಾತೆದಾರರ ವಿವರಗಳನ್ನು ಒಂದೊಂದಾಗಿ ಸಂಗ್ರಹಿಸಲಾರಂಭಿಸುತ್ತಾನೆ. ಕೊನೆಗೆ ಇಪ್ಪತ್ತನಾಲ್ಕು ಸಾವಿರ ಖಾತೆದಾರರ ವಿವರಗಳೊಂದಿಗೆ (ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಖಾತೆಗಳು) ಪರಾರಿಯಾಗುತ್ತಾನೆ.

Nov 4, 2014

ವರ್ತಮಾನ ಬಳಗದ ಪ್ರಶಸ್ತಿ ಪ್ರಧಾನ ಸಮಾರಂಭ.

ಟಿ.ಎಸ್.ವಿವೇಕಾನಂದರಿಗೆ ಪ್ರಶಸ್ತಿ ವಿತರಣೆ
ರವಿಕೃಷ್ಣರೆಡ್ಡಿವರಿದ್ದ ಮೇಲೆ ಕಾರ್ಯಕ್ರಮವೊಂದು ಫಾರ್ಮಲ್ ಆಗಿ ನಡೆಯುವ ಸಾಧ್ಯತೆ ಅಪರೂಪ! ಬಹುಶಃ ಇದೇ ಕಾರಣಕ್ಕೋ ಏನೋ ಅವರು ಕರೆದಾಗ ಹೋಗದೇ ಇರಲು ನನಗೆ ಸಾಧ್ಯವಾಗುವುದಿಲ್ಲ! (ವರ್ತಮಾನಕ್ಕೆ ಬರೆಯುವುದನ್ನು ವೈಯಕ್ತಿಕ ಕಾರಣಗಳಿಗೆ ನಿಲ್ಲಿಸಿದ್ದರೂ ನನ್ನನ್ನೂ ಇನ್ನೂ ವರ್ತಮಾನದ ಬಳಗದವನಂತೆಯೇ ನೋಡುತ್ತಾರೆ). ಗಾಂಧಿ ಜಯಂತಿ ಕಥಾ ಸ್ಪರ್ಧೆಯ 2014ರ ವಿಜೇತರಿಗೆ 'ಬಹುಮಾನ ವಿತರಿಸಲು' ನವೆಂಬರ್ ಎರಡರಂದು ಗಾಂಧಿನಗರದ ಬಸಂತ್ ರೆಸಿಡೆನ್ಸಿಯಲ್ಲಿ 'ಕಾರ್ಯಕ್ರಮ' ಆಯೋಜಿಸಿದ್ದರು. ಬಹುಮಾನ ವಿಜೇತರಾದ ಟಿ.ಎಸ್. ವಿವೇಕಾನಂದ, ಟಿ.ಕೆ. ದಯಾನಂದ, ಡಾ.ಎಚ್. ಎಸ್. ಅನುಪಮರವರನ್ನು ವೇದಿಕೆಯ ಮೇಲೆ ಕೂರಿಸಿ, ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಹಿರೇಮಠರಿಗೆ ಶಾಲು ಹೊದಿಸಿ ಸನ್ಮಾನಿಸಿ ರವಿಕೃಷ್ಣರೆಡ್ಡಿಯವರು ಎಸ್. ಆರ್. ಹಿರೇಮಠರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಹಾಡಿ ಹೊಗಳಿ ಹಿರೇಮಠರಿಂದ ಕಥೆಗಾರರಿಗೆಲ್ಲ ಶಾಲು ಹೊದಿಸಿ ಗಂಧದ ಮಾಲೆ ಹಾಕಿಸಿ ಬಹುಮಾನವನ್ನು ವಿತರಿಸಲಾಯಿತು

ಲಡಾಯಿ ಪ್ರಕಾಶನದ ಪುಸ್ತಕ ಬಿಡುಗಡೆ ಸಮಾರಂಭ.

ladai prakashana
ದಸಂಸದವರಿಂದ ಕ್ರಾಂತಿಗೀತೆ
ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಹುಲಿಯ ನೆರಳಿನೊಳಗೆ, ಚೆ - ಕ್ರಾಂತಿಯ ಸಹಜೀವನ ಮತ್ತು ಮೋಟಾರ್ ಸೈಕಲ್ ಡೈರಿಯ ಕನ್ನಡ ಅವತರಿಣಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಧೂದರ್ ಹೊನ್ನಾಪುರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ: ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 1

Dr Ashok K R
ಕಳೆದ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎಯ ನೇತೃತ್ವ ವಹಿಸಿದ್ದ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದುದು ಪರರಾಷ್ಟ್ರಗಳಲ್ಲಿರುವ – ಹೆಚ್ಚಿನದಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ ‘ಕಪ್ಪು ಹಣ’ವನ್ನು ಭಾರತಕ್ಕೆ ನೂರೇ ದಿನಗಳಲ್ಲಿ ವಾಪಸ್ಸು ತರುವ ಬಗ್ಗೆ. ನೂರು ದಿನಗಳಲ್ಲಿ ಅಷ್ಟೂ ಹಣವನ್ನು ವಾಪಸ್ಸು ತಂದು ಭಾರತದ ಏಳ್ಗೆಗೆ ಕಾಣ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದರು. ಉಳಿದನೇಕ ಕಾರಣಗಳಿಂದ ಮತ್ತು ತಮ್ಮ ವೈಯಕ್ತಿಕ ಪ್ರಭಾವದಿಂದ ಬಿಜೆಪಿ ಏಕಪಕ್ಷವಾಗಿ ಸರಕಾರ ನಡೆಸುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ನಿರೀಕ್ಷೆಯಂತೆ ನೂರು ದಿನಗಳೊಳಗೆ ಕಪ್ಪು ಹಣವೆಲ್ಲ ವಾಪಸ್ಸು ಬಂತೇ?

Nov 2, 2014

ನಾಲ್ಕಕ್ಷರ ಕಲಿ(ತ)ಯದ ದಲಿತರು ಮೊದಲು ಅಟ್ರಾಸಿಟಿ ಮನಸ್ಥಿತಿಯಿಂದ ಹೊರಬರಬೇಕು

false atrocity case
M L Lingaraju, Prajasamara
   ಸದುದ್ದೇಶದಿಂದ ಜಾರಿಗೆ ಬಂದಿದ್ದ ಜಾತಿನಿಂದನೆ, ಅಟ್ರಾಸಿಟಿ ಪ್ರಕರಣ ಇಂದು ಎಷ್ಟರ ಮಟ್ಟಿಗೆ ದುರುಪಯೋಗವಾಗುತ್ತಿದೆ ಎಂದರೆ, ನಿಜಕ್ಕೂ ಬೇಸರವಾಗುತ್ತದೆ. ಮೊನ್ನೆ ಫೇಸ್ಬುಕ್ನಲ್ಲಿ ದಲಿತ ಯುವಕನು ಹಾಕಿದ್ದ ಸ್ಟೇಟಸ್ಗೆ ಇನ್ನಾವುದೋ ಕೋಮಿನ ಯುವಕ ಕಮೆಂಟು ಮಾಡಿದ್ದಕ್ಕೆ ರಾದ್ಧಾಂತವೇ ನಡೆದುಹೋಯಿತು. ಸ್ಟೇಟಸ್ ಹಾಕಿದ್ದ ದಲಿತ ಯುವಕ, ಕಮೆಂಟ್ ಮಾಡಿದವನ ಮೇಲೆ ನಾಳೆ ಅಟ್ರಾಸಿಟಿ ದಾಖಲು ಮಾಡುವುದಾಗಿ ಅದಕ್ಕಾಗಿ ನನ್ನ ಬೆಂಬಲಕ್ಕೆ ಬರುವ ಸ್ನೇಹಿತರಿದ್ದರೆ, ಬನ್ನಿ ಎಂದು ಕರೆ ನೀಡಿದ್ದ.

Oct 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

Oct 29, 2014

P. Sainath: 100 days of Namo and Sycophant media.



Sainath P
ಪಿ. ಸಾಯಿನಾಥ್

P.Sainath
Its barely a couple of weeks ago since the media and the elite celebrated hundred days of the Modi government in power. I want to speak about the media, because at this point the media are an embarrassment not only to themselves but to Mr Modi’s public relation officers who must be feeling insecure about their jobs! You know, so since the media are doing so much better, the sycophantic projection, that PR firm which he had hired, I don’t think there contract need be renewed. The first hundred days, you know we had that tamasha over the first hundred days, I ask myself this question whether its Mr Modi or whether it is Mr Dr Manmohan singh or whoever, what about, what happens in those hundred days typically in rural area. 

Oct 27, 2014

ಮಾಧ್ಯಮ ಮತ್ತು ಜನಸಾಮಾನ್ಯ

media and common man
Dr Ashok K R


ಭಾರತದ ಮಕ್ಕಳ ಏಳಿಗೆಗಾಗಿ, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರ ವಿರುದ್ಧ ಅವಿರತ ಹೋರಾಟ ಮಾಡಿದ ಕೈಲಾಶ್ ಸತ್ಯಾರ್ಥಿ ಎನ್ನುವವರಿಗೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಹಿಯ ಜೊತೆಗೆ ಜಂಟಿಯಾಗಿ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಘೋಷಣೆಯಾಯಿತು. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದ ನೋಬಲ್ ಪ್ರಶಸ್ತಿ ಸಂತಸ ನೀಡುವುದರ ಜೊತೆಜೊತೆಗೆ “ಯಾರಿದು ಕೈಲಾಶ್ ಸತ್ಯಾರ್ಥಿ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಬಹುಶಃ ಕೈಲಾಶ್ ಸತ್ಯಾರ್ಥಿಯ ಸಂಘಟನೆಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇನ್ಯಾರಿಗೂ ಅವರ ಹೆಸರಾಗಲೀ ಅವರ ಕೆಲಸ ಕಾರ್ಯಗಳಾಗಲೀ ತಿಳಿದೇ ಇರಲಿಲ್ಲ. ನೋಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆಯೂ ಅವರ ಬಗ್ಗೆಯೇ ಮಾತು, ಅವರ ಬಗ್ಗೆಯೇ ಚರ್ಚೆ. ದೂರದೂರಿನವರಿಗಿರಲಿ ಅವರು ಕೆಲಸ ಮಾಡುತ್ತಿದ್ದ ರಾಜ್ಯದ ಹೆಚ್ಚಿನ ಜನರಿಗೂ ಅವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲವಂತೆ. ಎಲೆಮರೆಕಾಯಿಯಂತೆ ಅವರು ಕೆಲಸ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳಬಹುದಾದರೂ ಜನಸಾಮಾನ್ಯರಿಗೆ ಜನಸಾಮಾನ್ಯರ ಮಧ್ಯೆಯೇ ಇದ್ದು ಅತ್ಯುತ್ತಮವೆನ್ನಿಸುವಂತಹ ಕೆಲಸ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿಯವರನ್ನು ನೋಬೆಲ್ ಬರುವುದಕ್ಕೆ ಮುಂಚೆಯೇ ಪರಿಚಯಿಸುವ ಕೆಲಸ ಮಾಧ್ಯಮದ್ದಾಗಿತ್ತಲ್ಲವೇ? ಒಬ್ಬ ವ್ಯಕ್ತಿ ಆತನ ಕೆಲಸಗಳು ನಮ್ಮ ಮಾಧ್ಯಮದಲ್ಲಿ ಬರುವುದಕ್ಕೂ ವಿದೇಶಿ ಪ್ರಶಸ್ತಿಯೊಂದು ಅವರಿಗೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಾದರೂ ಯಾಕೆ?

Oct 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

Oct 23, 2014

ಫ್ಯಾಕ್ಟರಿ ಹಾಲು!

Muufri
ಹಾಲು ಫ್ಯಾಕ್ಟರಿ!
ದೂರದ ಅಮೆರಿಕಾದಲ್ಲಿ ಭಾರತೀಯ ಮೂಲದವರಾದ ರಿಯಾನ್ ಪಾಂಡೆ, ಪೆರುಮಾಲ್ ಗಾಂಧಿ ಮತ್ತು ಇಶಾ ದತಾರ್ ಸೇರಿಕೊಂಡು ಹಾಲಿನ ಫ್ಯಾಕ್ಟರಿ ತಯಾರಿಸುವ ಉತ್ಸಾಹದಲ್ಲಿದ್ದಾರೆ. Genetically engineered ಹಸುಗಳನ್ನು ಚಿಕ್ಕ ಜಾಗದಲ್ಲಿ ಗುಡ್ಡೆ ಹಾಕಿಕೊಂಡು ಹಾಲು ಉತ್ಪಾದಿಸುವ ಫ್ಯಾಕ್ಟರಿ ಎಲ್ಲೆಡೆಯೂ ಇರುವಾಗ ಈ ಹಾಲಿನ ಫ್ಯಾಕ್ಟರಿಯ ವಿಶೇಷವೇನೆಂದರೆ ಇಲ್ಲಿ ಹಸುಗಳೊಂದೂ ಇರುವುದಿಲ್ಲ! ಬೇರೆ ಪ್ರಾಣಿಯೂ ಇರುವುದಿಲ್ಲ ಎಂಬುದನ್ನು ನೆನಪಿಡಿ! ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿರುವ ಮುಫ್ರಿ ತಂಡದ ಪ್ರಯತ್ನವಿದು!
Also Read
ಹಿಂಗೂ ಇರುತ್ತೆ!

Oct 22, 2014

ಅಂಬೇಡ್ಕರ್ ವಾದಿಯ ಕಣ್ಣಲ್ಲಿ ಬಾಬಾಸಾಹೇಬ್

ladai prakashana
ಬಿ. ಶ್ರೀಪಾದ್ ಭಾವಾನುವಾದ ಮಾಡಿರುವ ನಾಮದೇವ ನಿಮ್ಗಾಡೆ ಬರೆದಿರುವ "ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ" ಪುಸ್ತಕದ ಬಗ್ಗೆ ಡಾ.ಎಚ್.ಎಸ್. ಅನುಪಮರವರ ಬರಹ. ಲಡಾಯಿ ಪ್ರಕಾಶನದಿಂದ ಮುದ್ರಣ ಕಂಡಿರುವ ಪುಸ್ತಕ ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.



 ಮಧ್ಯಪ್ರದೇಶದ ಸಾತಗಾಂವ್ ಎಂಬ ಹಳ್ಳಿಯ ಮಹಾರ್ ಕೇರಿಯಲ್ಲಿ 1920ನೇ ಇಸವಿಯ `ಮಳೆಗಾಲದ ಯಾವುದೋ ಒಂದು ದಿನ ಹುಟ್ಟಿದ ನಾಮದೇವನೆಂಬ ಹುಡುಗನೊಬ್ಬ, ತನ್ನ 14ನೇ ವರ್ಷಕ್ಕೆ ಶಾಲೆ ಸೇರಿ ಓದಿ, ಪದವೀಧರನಾಗಿ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಿ, ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ನಾಮದೇವ್ ನಿಮ್ಗಾಡೆಯಾಗಿ ಬೆಳೆದ ಕತೆಯೇ, `ಇನ್ ಟೈಗರ್ಸ್ ಶಾಡೋ.’
ಉಳಿದ ದಲಿತ ಆತ್ಮಕಥೆಗಳಲ್ಲಿರುವಂತೆಯೇ ಇಲ್ಲೂ ನಿಮ್ಗಾಡೆ ತಾವು ಎದುರಿಸಿದ ಅಸ್ಪೃಶ್ಯತೆಯ ಅವಮಾನ, ಜಾತೀಯತೆಯ ಕ್ರೌರ್ಯಗಳು, ಮಾನವೀಯ ಅನುಕಂಪದ ಸಹಾಯಗಳು ಇವನ್ನೆಲ್ಲ ನೆನೆದು ದಾಖಲಿಸುತ್ತಲೇ, ಅಂಬೇಡ್ಕರ್ ಅವರ ವ್ಯಕ್ತಿತ್ವ-ವೈಯುಕ್ತಿಕ ಜೀವನದ ಬಗೆಗೊಂದು ಆಪ್ತ ಮತ್ತು ಖಾಸಾ ಆದ ಫಸ್ಟ್ಹ್ಯಾಂಡ್ ನೋಟವೊಂದನ್ನು ಕೊಟ್ಟಿದ್ದಾರೆ. ಕಳೆದ ಶತಮಾನದ 40-50 ದಶಕವು ನಮ್ಮ ದೇಶದ ಮಟ್ಟಿಗೆ ಮಹಾಸಂಕ್ರಮಣದ ಕಾಲ. ದಿನಗಳಲ್ಲಿ ಅಂಬೇಡ್ಕರರೊಡನೆ ಹತ್ತಿರದಿಂದ ಒಡನಾಡಿದ ನಾಮದೇವ ನಿಮ್ಗಾಡೆ, ತಮ್ಮ ಗುರು-ಸ್ಪೂರ್ತಿ-ಸಲಹಾಕಾರ-ಆಪದ್ಭಾಂಧವ ಎಲ್ಲವೂ ಆಗಿದ್ದ ಬಾಬಾಸಾಹೇಬ್ ಅವರನ್ನು ಹೆಜ್ಜೆಹೆಜ್ಜೆಗೂ ನೆನಪಿಸಿಕೊಂಡಿದ್ದಾರೆ. ತಮ್ಮ ಯಶಸ್ಸಿನ ರೂವಾರಿ ಅವರೇ ಎಂದು ಹುಲಿ ನಡೆದ ಜಾಡಿನಲ್ಲಿ ನಡೆಯುತ್ತಾರೆ.
ಪುಸ್ತಕದ ಬಗೆಗೆ ಹೆಚ್ಚು ಬರೆಯುವುದಕ್ಕಿಂತ ಅದರ ಇಣುಕುನೋಟವನ್ನು ಕೊಡುವುದು ಸೂಕ್ತ. ಅದರಲ್ಲೂ ಮತ್ತೆಮತ್ತೆ ಬರುವ ಅಂಬೇಡ್ಕರ್ ಕುರಿತಾದ ಘಟನೆಗಳ ಸಾರಸಂಗ್ರಹ ಇಲ್ಲಿದೆ..

'ಹುಲಿಯ ನೆರಳಿನೊಳಗೆ' ಪುಸ್ತಕದ ಮುನ್ನುಡಿಯಿಂದ



namadeva nimgade
ನಂ 2 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ 'ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ' ಪುಸ್ತಕಕ್ಕೆ ಅಪ್ಪಗೆರೆ ಸೋಮಶೇಖರ್ ಬರೆದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ. 
ಆತ್ಮಕಥೆಯಲ್ಲೊಂದು ಅಂಬೇಡ್ಕರ್ ಕಥೆ

 ದೆಹಲಿಯ ನವಯಾನ ಪ್ರಕಾಶನ ಪ್ರಕಟಿಸಿರುವ In The Tiger’s Shadow : The Autobiography of An Ambedkariteಪ್ರಖ್ಯಾತ ವಿಜ್ಞಾನಿಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ. ಮಹತ್ವದ ಆತ್ಮಕಥೆಯನ್ನುಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ. ಶ್ರೀಪಾದ ಭಟ್ ಅವರು ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಭಾರತೀಯ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ ಹಲವು ಪ್ರಮುಖ ದಲಿತ ಆತ್ಮಕಥೆಗಳು ಕನ್ನಡ ಪ್ರಜ್ಞೆ ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿವೆ. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ದಲಿತ ಆತ್ಮಕಥೆಗಳನ್ನು ಕುರಿತ ಜಿಜ್ಞಾಸೆಗೆ ಭಿನ್ನ ಆಯಾಮವನ್ನು ಒದಗಿಸಿಕೊಟ್ಟಿವೆ. ಅವುಗಳಲ್ಲಿ ಲಕ್ಷ್ಮಣ ಗಾಯಕವಾಡರಉಚಲ್ಯಾ; ಮಾದವಿ ದೇಸಾಯಿ ಅವರಕುಣಿಯೇ ಘುಮ(ಕನ್ನಡಕ್ಕೆ-ಚಂದ್ರಕಾಂತ ಪೋಕಳೆ); ಶರಣಕುಮಾರ ಲಿಂಬಾಳೆ ಅವರಅಕ್ರಮ ಸಂತಾನ; ದಾದಾ ಸಾಹೇಬ್ ಮಲ್ಲಾರಿ ಮೋರೆ ಅವರಗಬಾಳ(ಕನ್ನಡಕ್ಕೆ-ದು. ನಿಂ. ಬೆಳಗಲಿ); ಎಸ್. ಕೆ. ಥೊರಟ್ ಅವರಬಾಲ್ಯದಿಂದ ಪ್ರಾಯಕ್ಕೆ(ಕನ್ನಡಕ್ಕೆ-ನಗರಗೆರೆ ರಮೇಶ್, ಗಂಗಾಧರಮೂರ್ತಿ); ನರೇಂದ್ರಜಾದವ್ ಅವರಬಹಿಷ್ಕø(ಕನ್ನಡಕ್ಕೆ-ಸುಮಾಧ್ವಾರಕನಾಥ್); ಭಗವಾನ್ ದಾಸ್ ಅವರಭಂಗಿಜನ ಕಥಾ(ಕನ್ನಡಕ್ಕೆ-ಕೆ. ನಾರಾಯಣಸ್ವಾಮಿ); ಭೀಮರಾವ್ ಗಸ್ತಿ ಅವರವಾಲ್ಮೀಕಿ(ಕನ್ನಡಕ್ಕೆ-ಸರಜೂ ಕಾಟ್ಕರ್); ಭಾಮ ಅವರಕರುಕ್ಕು(ಕನ್ನಡಕ್ಕೆ-ಎಸ್. ಪ್ಲೋಮಿನ್ದಾಸ್); ದಯಾ ಪವಾರ ಅವರಬಲುತ(ಕನ್ನಡಕ್ಕೆ-ಪ್ರೊ. ಚಂದ್ರಕಾಂತ ಪೋಕಳೆ) ; ಬೇಬಿ ಹಾಲ್ದಾರ್ ಅವರನೋವು ತುಂಬಿದ ಬದುಕು(ಕನ್ನಡಕ್ಕೆ-ಜಿ. ಕುಮಾರಪ್ಪ)–ಮುಂತಾದವು ಪ್ರಮುಖ ಆತ್ಮಕಥಗಳಾಗಿವೆ. ಪರಂಪರೆಗೆ ಹೊಸ ಸೇರ್ಪಡೆ ಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ.