ಮಾರ್ಚ್ 10, 2015

ಶಿರಸಿಯ ಸಿರಿ

tourist places of shirsi
ಶಿರಸಿ ಮಾರಿಕಾಂಬ ದೇವಾಲಯ
Umesh Mundalli
ಘಟ್ಟದ ಮೇಲಿನ ಎತ್ತರದ ನೆತ್ತಿಯ ಮೇಲಿನ ಪ್ರದೇಶವಾಗಿದ್ದರಿಂದಲೇ ಶಿರಸಿ ಎಂದು ಹೆಸರಾಗಿದೆ ಎನ್ನುತ್ತಾರೆ. ‘ಶಿರಿಷ’ ಎಂಬ ಸಂಸ್ಕೃತ ಪದದಿಂದ ಉತ್ಪತ್ತಿಯನ್ನು ಸೂಚಿಸುತ್ತಾರೆ. ಶಿರಸಿ ತಾಲೂಕು ಹುಬ್ಬಳ್ಳಿಯಿಂದ 90 ಕಿ.ಮಿ. ಕುಮಟಾದಿಂದ 55 ಕಿ.ಮಿ. ಮತ್ತು ಸಿದ್ದಾಪುರದಿಂದ 36 ಕಿ.ಮಿ.ದೂರದಲ್ಲಿದೆ. ಇಂದು ವಾಣಿಜ್ಯೋದ್ಯಮ, ಬ್ಯಾಂಕು, ಶೈಕ್ಷಣಿಕ ಸಂಸ್ಥೆ ಇತ್ಯಾದಿಗಳಿಂದಾಗಿ ಮತ್ತು ಮಾರಿಕಾಂಬಾ ದೇವಿಯ ಜಾತ್ರೆಯಿಂದಾಗಿ ಕನಾಟಕದಾದ್ಯಂತ ಪ್ರಸಿದ್ಧಿ ಪಡೆದಿದೆ. ಶಿರಸಿಯಲ್ಲಿ ಅನೇಕ ಮಂದಿರಗಳು, ಮಠ, ಕಲ್ಯಾಣಮಂಟಪಗಳಿದ್ದು ವಿಶಾಲವಾಗಿ ಕಲಾತ್ಮಕವು ಆಗಿವೆ.ಶಿರಸಿಯ ಮಾರಿಕಾಂಬಾ ದೇವಾಲಯ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದು. ಇದು ಶಿರಸಿಯ ಕಿರೀಟಪ್ರಾಯವಾಗಿದೆ. ಈ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು ಇದುವರೆಗೆ ಅನೇಕ ಬಾರಿ ನವೀಕರಣಗೊಂಡಿವೆ. ದೇವಾಲಯದ ರಂಗಮಂಟಪ ವಿಶಾಲವಾಗಿವೆ. ದೇವಾಲಯದ ಗೋಡೆಗಳಲ್ಲಿ ಕಾವಿಕಲೆಯ ಉತ್ತಮ ಚಿತ್ರಗಳನ್ನು ಕಾಣಬಹುದಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಕನಾಟಕದಲ್ಲೆ ಅತಿ ದೊಡ್ಡ ಜಾತ್ರೆಯಾಗಿದ್ದು ಆಗ ದೇವಿಯ ಕಟ್ಟಿಗೆಯ ಪ್ರತಿಮೆಯನ್ನು ನವಿಕರಿಸಲಾಗುತ್ತದೆ.
madhukeshwara temple
ಮದುಕೇಶ್ವರ ದೇವಸ್ಥಾನ
ಬನವಾಸಿ ಮದುಕೇಶ್ವರ ದೇವಾಲಯ
ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯ ಸ್ಥಾಪಿಸಿದ ಕದಂಬ ಮಯೂರಶರ್ಮನು ಕ್ರಿ.ಶ.4ನೇ ಶತಮಾನದಲ್ಲಿ ಬನವಾಸಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಬನವಾಸಿ ಶಿರ್ಶಿಯಿಂದ 22 ಕಿ.ಮಿ. ದೂರದಲ್ಲಿದೆ. ಮಯೂರ ವರ್ಮನಿಂದ ನಿರ್ಮಿತವಾಗಿರುವ ಮಧುಕೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ವರದಾ ನದಿಯ ದಂಡೆಯ ಮೇಲಿದೆ ಈ ಪುಣ್ಯ ಕ್ಷೇತ್ರ ಬನವಾಸಿ. ಮರುದುಂಬಿಯಾಗಾದರೂ ಹುಟ್ಟುವೆನು ಮತ್ತೊಮ್ಮೆ ಬನವಾಸಿಯಲ್ಲೆ ಎಂದು ಕನ್ನಡದ ಆದಿಕವಿ ಪಂಪ ಹೇಳಿರುವುದು ಇಲ್ಲಿನ ಸ್ಥಳದ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತವೆ. ಕರ್ನಾಟಕದ ಇತಿಹಾಸ ಮತ್ತು ಸಾಹಿತ್ಯಕ ದ್ರಷ್ಠಿಯಿಂದ ಪ್ರಮುಖ ಸ್ಥಾನವಿದೆ. ಇಲ್ಲಿ ಪ್ರತಿವರ್ಷ ಕದಂಬೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಕನ್ನಡದ ಒಬ್ಬ ಪ್ರತಿಭಾನ್ವಿತ ಸಾಹಿತಿಗೆ ಮುಖ್ಯಮಂತ್ರಿಗಳು ಪಂಪ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

Madhukeshwara temple
ದೇಗುಲದ ಒಳನೋಟ
ವರದಾ ನದಿಯ ದಂಡೆಯ ಮೇಲಿರುವ ಮದುಕೇಶ್ವರ ದೇವಾಲಯ ಪ್ರಮುಖವಾದದ್ದು. ಈ ದೇವಾಲಯದಲ್ಲಿರುವ ಐದು ಹೆಡೆಯ ನಾಗಶಿಲ್ಪ, ಗರ್ಭಗುಡಿಯಲ್ಲಿರುವ ಮದುಕೇಶ್ವರಲಿಂಗ, ಕಾರ್ತಿಕೇಯ, ಆದಿಮೂರ್ತಿ, ವೀರಭದ್ರ, ನರಸಿಂಹ, ಗಣಪತಿ,ವೆಂಕಟರಮಣ ಮತ್ತು ಅಷ್ಟದಿಕ್ಪಾಲಕ ಮೂರ್ತಿಗಳು ಆಕರ್ಷಣೀಯವಾಗಿವೆ. ದೇವಾಲಯದ ಕಂಬಗಳು ಕಲಾತ್ಮಕವಾಗಿದ್ದು ನೋಡುಗರನ್ನು ಸೆಳೆಯುತ್ತವೆ. ಇವು ಕದಂಬ ಶೈಲಿಯ ದ್ಯೋತಕವಾಗಿದೆ. ಸಾಲುಗಂಬಗಳ ಮದ್ಯೆ ಇರುವ ಬೃಹದ್ದಾಕಾರದ ನಂದಿಯ ಮೂರ್ತಿ ಮನಮೋಹಕವಾಗಿದೆ. ದೇವಾಲಯದ ಕಂಬದ ಮೇಲೆ ಕಲ್ಯಣಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಅರಸರು ಮತ್ತು ಸೋದೆ ಅರಸರ ಕಾಲದ ಅನೇಕ ಶಾಸನಗಳನ್ನು ಕಾಣಬಹುದಾಗಿದೆ. ಶಿರಸಿಯಿಂದ ಬನವಾಸಿಗೆ ಬಸ್ಸು ಮತ್ತು ಖಾಸಗಿ ವಾಹನಗಳ ಸೌಲಭ್ಯವಿದೆ.
Sonda mata
ಸೋಂದ ಮಠ
ಸೋಂದ ಮಠ
ಬನವಾಸಿಯಂತೆ ಇನ್ನು ಕೆಲವು ಧಾರ್ಮಿಕ ಐತಿಹಾಸಿಕ ಸ್ಥಳಗಳು ಇಲ್ಲಿವೆ. ಶಿರಸಿಯಿಂದ 16ಕಿ.ಮಿ. ದೂರದಲ್ಲಿ ಸ್ವರ್ಣವಲ್ಲಿ ಮಠ ಮತ್ತು 19 ಕಿ.ಮಿ. ದೂರದಲ್ಲಿ ಸೋಂದ ಮಠವಿದೆ. ಇದೊಂದು ಐತಿಹಾಸಿಕ ಮತ್ತು ಯಾತ್ರಾ ಸ್ಥಳವಾಗಿದೆ. ಹಿಂದೆ ಈ ಭಾಗವು ಸೋದೆ ಅರಸರ ರಾಜಧಾನಿಯಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಇಲ್ಲಿಯ ಕೆರೆಗಳಸಂಪರ್ಕ ಜಾಲ ಅದ್ಯಯನಕ್ಕೆ ಬಹಳ ಅನುಕೂಲಮಾಡಿಕೊಟ್ಟಿದೆ. ಹುಲೇಕಲ್ ಲಕ್ಷ್ಮೀನಾರಾಯಣ ದೇವಾಲಯ,ಸೋದೆ ಕೋಟೆ, ಮುತ್ತಿನಕೆರೆ,ಹಳೆಯೂರು ಶಂಕರನಾರಾಯಣ ದೇವಾಲಯ ಮೊದಲಾದ ಹಲವು ದೇವಾಲಯಗಳು ಕಲಾತ್ಮಕವಾಗಿದೆ. ಇಲ್ಲಿರುವ ಜೈನ ಮಠಗಳು ಸೋದೆ ಅರಸರ ಐತಿಹಾಸಿಕ ಪಳಿಯುಳಿಕೆಗಳು. ಸೋಂದಾ ಸ್ವಾದಿ ಜೈನ ಮಠ, ಸೋದೆ ವಾದಿರಾಜ ಮಠ, ಸ್ವರ್ಣವಲ್ಲಿ ಮಠ, ಗದ್ದಿಗೆಯ ಮಠ ಹಾಗೂ ಮಹಾಂತೀರ ಮಠ ಎಂಬ ಪಂಚಮಠಗಳು ಇಲ್ಲಿ ದರ್ಶನಕ್ಕೆ ಸಿಗುತ್ತದೆ. ಈ ಮಠಗಳು ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕೇಂದ್ರಗಳಾಗಿಯು ಕಾರ್ಯನಿರ್ವಹಿಸುತ್ತಿವೆ.
shivagange falls
ಶಿವಗಂಗೆ
ಶಿವಗಂಗಾ ಫಾಲ್ಸ್ 
ಶಿರಸಿಯಿಂದ 24ಕಿ.ಮೀ.ದೂರದಲ್ಲಿರುವ ಶಿವಗಂಗಾ ಜಲಪಾತವು ಗಣೇಶ ಫಾಲ್ ಹೊಳೆಯಿಂದ ಆಗಿದೆ. ಶಿವ ಜಟೆಯಿಂದ ಇಳಿಯುವ ಗಂಗೆಯಂತೆ ದು ಕಾಣುವುದರಿಂದ ಇದನ್ನು ಶಿವಗಂಗಾ ಜಲಪಾತ ಎಂದು ಕರೆಯಲಾಗಿದೆ ಎನ್ನುತ್ತಾರೆ ಸ್ಥಳಿಯರು.
ಹುಣಸೆಹೊಂಡ ವೆಂಕಟ್ರಮಣ ಸ್ವಾಮಿ 
ಸೋದೆ ಶಿರಸಿ ಬಳಿ ಇರುವ ಪವಿತ್ರ ಕ್ಷೇತ್ರ. ಈ ಊರಿನ ಬಳಿ ಇರುವ ಹುಣಸೆಹೊಂಡದ ವೆಂಕಟ್ರಮಣ ದೇವಾಲಯ ಅತ್ಯಂತ ಮನಮೋಹಕವಾದದದ್ದು. ಈ ದೇವಾಲಯವನ್ನು ವೃದ್ಧರೊಬ್ಬರು ಹುಣಸೆ ಹಣ್ಣು ಮಾರಿದ ಹಣದಿಂದ ಕಟ್ಟಿಸಿದರೆಂದು ಹೇಳಲಾಗುತ್ತದೆ. ಆದರೆ ಇತಿಹಾಸತಜÐರ ಪ್ರಕಾರ 1672ರ ಅವಧಿಯಲ್ಲಿ ಮಧುಲಿಂಗ ನಾಯಕ ಕಟ್ಟಿಸಿರುವನೆಂದು ಹೇಳುತ್ತಾರೆ. ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಬೇಲೂರು- ಹಳೆಬೀಡಿನ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿದೆ. ದೇವಾಲಯದ ವಾಸ್ತು ಶಿಲ್ಪ ವಿಜಯನಗರ ಮತ್ತು ಹೊಯ್ಸಳ ಶೈಲಿಯಿಂದ ಕೂಡಿದೆ.
hunasehonda
ಹುಣಸೆಹೊಂಡ
ಸಹಸ್ರ ಲಿಂಗ
ಶಿರಸಿಯಿಂದ 17 ಕಿ.ಮಿ. ದೂರದಲ್ಲಿರುವ ಶಾಲ್ಮಲಾ ನದಿಯಲ್ಲಿ ಎಲ್ಲೆಂದರಲ್ಲಿ ಹರಡಿ ನಿಂತ ಶಿವಲಿಂಗಗಳ ತಾಣ ಸಹಸ್ರ ಲಿಂಗವಿದೆ. ಎತ್ತ ನೋಡಿದರೂ ನದಿಯಲ್ಲಿ ವಿವಿಧ ಗಾತ್ರದ, ವಿವಿದ ವಿನ್ಯಾಸದ ಲಿಂಗಗಳೇ ಕಾಣಸಿಗುತ್ತದೆ. ಪರಮಶೀವನನ್ನು ಎಷ್ಟು ಬೇಕಾದರೂ ಕಣ್ತುಂಬಿಕೊಂಡು ಆರಾದಿಸುವ ಅವಕಾಸ ಇಲ್ಲಿ ಮಾತ್ರ ಸಾಧ್ಯ. ಮಹಾ ಶಿವರಾತ್ರಿಯಂದು ಇಲ್ಲಿ ಭಕ್ತರ ದಂಡೆ ಮೆರೆದಿರುತ್ತದೆ. ಅಲ್ಲಲ್ಲಿ ನಂದಿ ಮತ್ತು ಬಸವನ ವಿಗ್ರಹಗಳು ಕಾಣಸಿಗುತ್ತವೆ. ಸೋದೆಯಿಂದ ಬರಿ 5ಕಿ.ಮೀ ಅಂತರದಲ್ಲಿದೆ ಈ ಪ್ರವಾಸಿ ತಾಣ.

ಮಾರ್ಚ್ 2, 2015

ಜೊಯಡಾ ಹಳಿಯಾಳ ಕ್ಷೇತ್ರದರ್ಶನ

Umesh Mundalli
ವಿಸ್ತೀರ್ಣದ ದೃಷ್ಟಿಯಲ್ಲಿ ಜೊಯಡಾ ಜಿಲ್ಲೆಯ ಅತಿ ದೊಡ್ಡ ತಾಲೂಕಾದರೂ ಇಲ್ಲಿ ಜನಸಂಖ್ಯೆ ಮಾತ್ರ ವಿರಳ. ಅನೇಕ ಸವಲತ್ತುಗಳಿಂದ ವಂಚಿತವಾದರೂ ಇಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸುವವರಿಗೆ ಮಾತ್ರ ಅದಕ್ಕೆ ಕಿಂಚಿತ್ತು ಕೊರತೆ ಇಲ್ಲಾ. ಮುಗಿಲೆತ್ತರಕ್ಕೆ ಚಾಚಿರುವ ಬೆಟ್ಟಗಳು, ದಟ್ಟ ಅರಣ್ಯದಲ್ಲಿ ಗಗನಕ್ಕೆ ಮುತ್ತಿಡಲು ಹೊರಟ ವೃಕ್ಷ ಸಂಕುಲಗಳು, ಪ್ರಾಣಿ ಪಕ್ಷಿಗಳ ಕೂಗು ಎಂತವನ ಎದೆಯಲ್ಲೂ ಪ್ರೀತಿಯ ಸಿಂಚನಗೈಯುತ್ತವೆ. ಇಲ್ಲಿ ಸಂಚರಿಸುವಾಗ ಊಟಿಯ ತಣ್ಣನೆ ಅನುಭವವಾಗುತ್ತದೆ. 

ಫೆಬ್ರ 14, 2015

ಅವ್ವ

ಉಮೇಶ ಮುಂಡಳ್ಳಿ ಭಟ್ಕಳ
ಮಲಗಿದ್ದಾಳೆ ಅವ್ವ
ಏಳುವಂತಿಲ್ಲಾ,
ಹೇಗೆ ಎದ್ದಾಳು?
ಮಲಗಿದ್ದಾಳೆ
ಚಿರನಿದ್ರೆಯಲಿ.

ಎವೆಯಿಕ್ಕದೆ ನೋಡುತ್ತಿರೆ
ನಿನ್ನ ಕಣ್ಣು,
ಕೇಳಿಸುತ್ತಲೇ ಇಲ್ಲಾ
ಎದೆಯ ಕೂಗು.
ಒಂದು ಹನಿಯಿಲ್ಲ
ಆರ್ದತೆಯೆ ಎಲ್ಲಾ.
ಮಲಗಿದ್ದಾಳೆ
ಅವ್ವ
ಚಿರನಿದ್ರೆಯಲಿ.

ಡಿಸೆಂ 27, 2014

ಅಂಕೋಲಾ ಕಾರವಾರ ಸುತ್ತಾ ಮುತ್ತಾ

honey beach
ಹನಿ ಬೀಚ್
Umesh Mundalli Naik
ಅಂಕೋಲಾ ಕರ್ನಾಟಕದ ಬಾರ್ಡೋಲಿ ಎಂದು ಹೆಸರಾಗಿದೆ. ಸ್ವತಂತ್ರ ಹೋರಾಟದಲ್ಲಿ ಇಲ್ಲಿನ ಪಾತ್ರ ಅತಿಮುಖ್ಯವಾಗಿದೆ. ಕಡಲ ಸನಿಹದ ಗುಡ್ಡಗಳಲ್ಲಿ ಬೆಳೆಯುವ ಅಂಕೋಲೆ ಮರದಿಂದ ಊರಿಗೆ ಹೆಸರು ಬಂದಿದೆ. ಕಾರವಾರದಿಂದ 34ಕಿ.ಮೀ. ದೂರದಲ್ಲಿರುವ ತಾಲೂಕಿನ ಕೇಂದ್ರ.

ಡಿಸೆಂ 21, 2014

ದಾಂಪತ್ಯ ಗೀತೆ

ಉಮೇಶ ಮುಂಡಳ್ಳಿ ಭಟ್ಕಳ
ತವರು ಸಿರಿಗಿಂತ
ನಿಮ್ಮ ಮನ ಹಿರಿದೆನಗೆ
ನಿಮ್ಮ ಎದೆ ಆಸರೆಯು 
ಒಲವು ನನಗೆ.

ಡಿಸೆಂ 2, 2014

ಬಂದು ನೋಡಿ ಹೊನ್ನಾವರ…

apsarakonda
ಅಪ್ಸರಕೊಂಡ
ಉಮೇಶ ಮುಂಡಳ್ಳಿ ಭಟ್ಕಳ
ಹೊನ್ನಾವರ ತಾಲೂಕು ಕೇಂದ್ರ ಭಟ್ಕಳದಿಂದ 38ಕಿ.ಮಿ. ಮತ್ತು ಕುಮಟಾದಿಂದ ಕೇವಲ 19 ಕಿಮಿ. ಅಂತರದಲ್ಲಿದೆ. ಹಿಂದೆ ಹೊನ್ನಾವರ ಓನೋರ, ಹೊನ್ನುರು ಎಂದೆಲ್ಲ ಕರೆಸಿಕೊಳ್ಳುತ್ತಿತ್ತು ಎಂದು ಹೇಳಲಾಗುತ್ತಿತ್ತು. ಕಿ.ಶ. 800ರ ಸುಮಾರಿಗೆ ಆಳಿದ ರಾಣಿ ಹೊನ್ನಮ್ಮನಿಂದಾಗಿ ಈ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಅರಬ್ಬಿ ತುರ್ಕಿ ದೊರೆಗಳು ಹೊನ್ನಾವರದ ಮೂಲಕ ವಿಜಯನಗರದ ರಾಜರೊಡನೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂಬುದಾಗಿ ಉಲ್ಲೇಖಗಳಿವೆ. ಇಲ್ಲಿನ ಶರಾವತಿ ಸೇತುವೆ ರಾಜ್ಯದಲ್ಲಿಯೆ ಅತಿಉದ್ದದ ಸೇತುವೆಯಾಗಿದೆ. ಇಲ್ಲಿನ ಪ್ರವಾಸಿತಾಣದಲ್ಲಿ ಕರ್ನಲ್ ಹಿಲ್, ರಾಮತೀರ್ಥ, ಇಡಗುಂಜಿ, ಗುಂಡಬಾಳ, ಕರಿಕಾನಮ್ಮ, ಬಸವರಾಜದುರ್ಗ, ಗುಣವಂತೆ, ಕುದ್ರಗಿ, ಗೇರುಸೊಪ್ಪ ಮತ್ತು ಅಪ್ಸರಕೊಂಡ ಮೊದಲಾದವುಗಳು ಅತ್ಯಂತ ಆಕರ್ಷಣೀಯವಾಗಿದೆ. ರಾಮತೀರ್ಥ ಹೊನ್ನಾವರದಿಂದ ಕೇವಲ 3ಕಿಮಿ. ಅಂತರದಲ್ಲಿದೆ. ಇಲ್ಲಿ ಸರ್ವಕಾಲಕ್ಕೂ ಬೀಳುವ ತೀರ್ಥ ಅನೇಕ ರೋಗಗಳಿಗೆ ದಿವ್ಯ ಔಷದಿ

ನವೆಂ 25, 2014

ನಾನೂ ಶಿಲ್ಪವಾಗಬೇಕು....

ಉಮೇಶ ಮುಂಡಳ್ಳಿ ಭಟ್ಕಳ
ಬನ್ನಿ ಯಾರಾದರೂ
ಎತ್ತಿಕೊಳ್ಳಿ,
ಶಿಲ್ಪವಾಗಿಸಿ,
ಕಪ್ಪು ಕಲ್ಲಿನಂತೆ ನಾನು
ಗರ್ಭಗುಡಿಯ ಸೇರಬೇಕು,
ಶಿಲ್ಪವಾಗಬೇಕು.