Jan 30, 2014

ದಿನೇಶ್ ಕುಮಾರ್ ಕವಿತೆ

ದಿನೇಶ್ ಕುಮಾರ್

ಹೌದು ಸ್ವಾಮೀ....

ಸ್ವಾಮೀ ಜಾತಿಯೆಂಬುದೇ ಇಲ್ಲ, ಇರಲಿಲ್ಲ
ಎಂಬ ನಿಮ್ಮ ವಾದವೇ ದಿಟ

ನಮಗೆ ಹುಚ್ಚು ನಾಯಿ ಕಚ್ಚಿತ್ತು
ಊರಿಂದ ಹೊರಗೆ ಜೋಪಡಿಗಳಲ್ಲಿ ಬದುಕಿದೆವು

Jan 28, 2014

‘ಧರ್ಮ’ ಸಂಕಟಕ್ಕೆ ಒಳಗಾಗುವ ಚುನಾವಣೆಯ ಕಾಲವಿದು….



ಡಾ ಅಶೋಕ್ ಕೆ ಆರ್.
ಧಾರವಾಡ, ಹುಮನಾಬಾದ್ ಮತ್ತಿವೆಲ್ಲವಕ್ಕೂ ಕಳಶವಿಟ್ಟಂತೆ ದಕ್ಷಿಣ ಕನ್ನಡದ ನಾನಾ ಭಾಗಗಳಲ್ಲಿ ಕಳೆದೆರಡು ತಿಂಗಳುಗಳಿಂದ ಒಂದರಹಿಂದೊಂದರಂತೆ ಕೋಮುಗಲಭೆಗಳು ವರದಿಯಾಗುತ್ತಿವೆ. ಅಪರಾಧ ಪ್ರಕರಣಗಳು, ವೈಯಕ್ತಿಕ ಸಂಗತಿಗಳು, ಉದ್ದೇಶಪೂರ್ವಕವೆಂಬಂತೆ ತೋರುವ ಘಟನೆಗಳೆಲ್ಲ ದೊಡ್ಡ ಕೋಮು ಗಲಭೆಗಳಾಗಿ ಮಾರ್ಪಡುತ್ತಿರುವುದು ಏನನ್ನು ಸೂಚಿಸುತ್ತಿದೆ? ಮತ್ತೇನಿಲ್ಲ ಚುನಾವಣೆ ಸಮೀಪಿಸುತ್ತಿದೆ. ಅತಿದೊಡ್ಡ ಪ್ರಜಾಪ್ರಭುತ್ವದ ಬಹುದೊಡ್ಡ ಲೋಕಸಭಾ ಚುನಾವಣೆಗೆ ಸರ್ವಪಕ್ಷಗಳೂ ಸಿದ್ಧಗೊಳ್ಳುತ್ತಿವೆ, ಸಿದ್ಧತೆಯ ಮಾದರಿ ಸಮಾಜದ ಆರೋಗ್ಯಕ್ಕೆ ಮತ್ತು ತತ್ಪರಿಣಾಮವಾಗಿ ವ್ಯಕ್ತಿಯ ವಿಕಸನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

Jan 26, 2014

ಗಾಂಧಿ ಈಗ. . . .

You observe any daily news papers supplement these days. They are good enough to see not to read!
Hardly we can expect one or two readable articles and even those readable articles are often forgotten after a day or two.
Prajavani, one of the leading Kannada daily gives better supplements when compared to other leading Kannada daily.
Prajavani's today's supplement (26/01/2014) saphthahika puravina is one of the best supplement in recent days. Outs about Gandhi, his ideals, his confusions and a lot of confusions and discussions which occur because of Gandhi. Eminent writers and thinkers have written about Gandhi.
Don't miss it.
You can read all articles in www.prajavani.net
www.prajavaniepaper.com

The mind of Swamy Vivekananda

Jan 25, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 16

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ....ಭಾಗ 15 ಓದಲು ಇಲ್ಲಿ ಕ್ಲಿಕ್ಕಿಸಿ

ಇದ್ದಕ್ಕಿದ್ದಂತೆ ‘ಹುಚ್ಚ’ ತನ್ನನ್ನು ಮಾತನಾಡಿಸಿದ್ದು, ಅದೂ ತನ್ನ ಹೆಸರು ಹಿಡಿದು ಕರೆದದ್ದು – ಲೋಕಿ ಗರಬಡಿದವನಂತೆ ನಿಂತುಬಿಟ್ಟ. ‘ಹುಚ್ಚ’ ಪುಸ್ತಕ ಹುಡುಕುವುದರಲ್ಲೇ ತೊಡಗಿದ್ದ.
 ಕೆಲಕ್ಷಣಗಳ ಮೌನದ ನಂತರ ಲೋಕಿ ಸಾವರಿಸಿಕೊಂಡು
“ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯ್ತು?”
“ಬರೀ ನಿನ್ನ ಹೆಸರೇ ಅಲ್ಲ, ನಿನ್ನ ಎಲ್ಲಾ ವಿಷಯವೂ ಗೊತ್ತು”

Jan 24, 2014

ತಾರತಮ್ಯ

ಮುನೀರ್ ಕಾಟಿಪಳ್ಳ
ಇಂದು ಸಾವಿರಾರು ಬಡ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರು. ಮೀಡಿಯಾಗಳಿಗೆ ಇದು ಸುದ್ದಿ ಅಲ್ಲ. ಹಜಾರೆ, ಕ್ರೇಜಿ ಮುಂತಾದವರ ಎಲ್ಲ ಪ್ರತಿಭಟನೆಗಳನ್ನು ದಿನವಿಡೀ ತೋರಿಸೋ ಮೀಡಿಯಾ ಕಮ್ಯುನಿಷ್ಟರ ನಾಯಕತ್ವದ ಬಡವರ ನಿಜ ಹೋರಾಟಗಳನ್ನು ಕಡೆಗಣಿಸುತ್ತದೆ. ಇಷ್ಟಕ್ಕೆ ವಾಸ್ತವದ ಅರಿವಿಲ್ಲದವರು ಕಮ್ಯುನಿಷ್ಟರು ಅಪ್ರಸ್ತುತ ಎಂದು ಹೀಗಳೆಯುತ್ತಾರೆ.

Jan 17, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 15



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 14 ಓದಲು ಇಲ್ಲಿ ಕ್ಲಿಕ್ಕಿಸಿ
ಮಾರನೆಯ ದಿನ ಗೌತಮ್ ಕಾಲೇಜಿಗೆ ಬಂದರೂ ತರಗತಿಗಳಿಗೆ ಬರಲಿಲ್ಲ. ಮಧ್ಯಾಹ್ನ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ದೂರದಲ್ಲಿ ಸಿಂಚನಾ ಪೂರ್ಣಿಮಾಳ ಜೊತೆ ಕ್ಯಾಂಟೀನಿನ ಕಡೆಯೇ ಬರುತ್ತಿದ್ದುದನ್ನು ನೋಡಿದ. ಎದೆ ಡವಗುಟ್ಟಲಾರಂಭಿಸಿತು. ‘ಆಕೆ ಏನು ಹೇಳಬಹುದು. ದೂರದಿಂದ ಅವಳ ಮುಖ ಬೇರೆ ಕಾಣುತ್ತಿಲ್ಲ. ಅವಳ ಮುಖದಲ್ಲಿ ಕೋಪ? ಊಹ್ಞೂ ಕಾಣ್ತಿಲ್ಲ. ಜೊತೆಯಲ್ಲಿ ಪೂರ್ಣಿಮಾಳನ್ನು ಯಾಕೆ ಕರೆದುಕೊಂಡು ಬರ್ತಾ ಇದ್ದಾಳೆ. ನಾನು ಪತ್ರ ಕೊಟ್ಟಿರೋ ವಿಷಯ ಆಕೆಗೂ ಹೇಳಿಬಿಟ್ಟಿದ್ದಾಳೆ ಅನ್ಸುತ್ತೆ. ಛೇ! ಏನು ಹುಡುಗೀನಪ್ಪ; ಪ್ರೀತಿ ಪ್ರೇಮದಂಥ ಖಾಸಗಿ ವಿಷಯಗಳನ್ನು ಕೂಡ ಆಕೆಗೆ ಹೇಳಿಬಿಟ್ಟಿದ್ದಾಳಲ್ಲ. ಇವರಿಬ್ಬರ ಮಧ್ಯೆ ಗೌಪ್ಯತೆಯೇ ಇಲ್ಲವಾ?’ ಗೌತಮನಿಗೆ ಪೂರ್ಣಿಮಾಳನ್ನು ಕಂಡು ಈರ್ಷ್ಯೆ ಉಂಟಾಯಿತು. ಸಿಂಚನಾ ನನಗಿಂತ ಇವಳಿಗೇ ಆಪ್ತಳಲ್ಲಾ ಅನ್ನೋ ಕಾರಣಕ್ಕೆ.

Jan 14, 2014

ಬೆನ್ನಿ ಹಿನ್‌ ಬಾಬಾನನ್ನು ವಿರೋಧಿಸೋಣ- ಬೆನ್‌ ಹಿಂದೆನೂ ಒಮ್ಮೆ ನೋಡಿಕೊಳ್ಳೋಣ

ಶಶೀಧರ್ ಹೆಮ್ಮಾಡಿ
ಕಡಲು ಕಂಗಳ ಹುಡುಗಿಯಿಂದ ತೆಗೆದುಕೊಂಡಿದ್ದು

ಬೇವಕೂಫೋಂ ಕಿ ಕಮಿ ನಹಿ
ಏಕ್ಢೂಂಡೊ ಹರಝಾರ್ಮಿಲ್ತೆಂ ಹೈಂ
(ಮೂರ್ಖರಿಗೇನೂ ಕೊರತೆ ಇಲ್ಲ, ಒಬ್ಬರನ್ನು ಹುಡುಕಿದರೆ ಸಾವಿರ ಮಂದಿ ಸಿಗುತ್ತಾರೆ)

Jan 9, 2014

ಮಂಗಳೂರಿನ ಬೀದಿಗಳಲ್ಲಿ ಮತ್ತೆ ಧರ್ಮ ಯುದ್ಧದ ರಣೋತ್ಸಾಹ

Muneer Katipalla
“ ಧರ್ಮ ರಕ್ಷಕರ ನಾಡು” ಮಂಗಳೂರಿನಲ್ಲಿ ಮತ್ತೆ ಧರ್ಮ ರಕ್ಷಣೆಯ ಅತ್ಯುತ್ಸಾಹ ಕಂಡುಬರುತ್ತಿದೆ. ಒಂದೆರಡು ತಿಂಗಳ ಹಿಂದೆ ಮುಸ್ಲಿಂ ಧರ್ಮ ರಕ್ಷಕರು ವಿಟ್ಲದ ಪತ್ರಕರ್ತ ವಿಟಿ ಪ್ರಸಾದ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆರಂಭವಾದ ಈ ಸುತ್ತಿನ ಧರ್ಮದಾಟ ಈಗ ಕ್ಲೈಮಾಕ್ಸ್ ಹಂತಕ್ಕೆ ತಲುಪುತಿದೆ. ವಿಟ್ಲ ಘಟನೆ, ಬಂಟ್ವಾಳದ ಜಯರಾಮ್ ಮೇಲಿನ ಹಲ್ಲೆ , ದೇರಳ ಕಟ್ಟೆಯಲ್ಲಿ ಮುಸ್ಲಿಂ ನಾಮಧಾರಿ ಹೀನ ಜಂತುಗಳು ನಡೆಸಿದ ಹೇಯ ಕೃತ್ಯ , ನಗರದ ಹೃದಯ ಭಾಗದಲ್ಲಿ ಮುಸ್ಲಿಂ ನೈತಿಕ ಪೊಲೀಸರು ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ( ಮಧ್ಯೆ ಮಧ್ಯೆ ಹಿಂದುತ್ವವಾದಿಗಳ ನೈತಿಕ ಪೊಲೀಸ್ ಗಿರಿ ಯಥಾಪ್ರಕಾರ ನಡೆಯುತಿತ್ತು ಬಿಡಿ) ಇವುಗಳನ್ನು ಬಳಸಿಕೊಂಡು ಹಿಂದೂಗಳ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ರಕ್ತಪಾತದ ಘೋಷಣೆಯೊಂದಿಗೆ ಬೀದಿಗಿಳಿದು ವಾರ ಕಳೆದಿದೆ.

Jan 7, 2014

ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ ಸಿದ್ಧಾರ್ಥ...

ಡಾ. ಅಶೋಕ್. ಕೆ. ಆರ್
ಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.

ವಿಚಾರಣೆ

ಕು ಸ ಮಧುಸೂದನ

ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.

Jan 6, 2014

ಕೆ.ವಿ. ಸುಬ್ಬಣ್ಣ 2

ಅರೆ ಶತಮಾನದ ಅಲೆಬರಹಗಳು ಪುಸ್ತಕದಿಂದ

'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಉತ್ಸಾಹದಲ್ಲಿ.......

Noel Chungigudde
'ಆಮ್ ಆದ್ಮಿ' ಪಕ್ಷವನ್ನು ಹೊಗಳುವ ಉತ್ಸಾಹದಲ್ಲಿ ಇವರನ್ನೆಲ್ಲ ನಾವು ಸಹಿಸಿಕೊಳ್ಳುತ್ತೇವೆ! ಕಮ್ಯೂನಿಸ್ಟರನ್ನು ತೆಗಳುತ್ತೇವೆ!!!

ಹೋರಾಟ ಮಾಡಿದ್ರೆ ಈ ಬಿಜೆಪಿ- ಕಾಂಗ್ರೆಸ್ ತರ ಮಾಡ್ಬೇಕು. ಚುನಾವಣೆ ಬಂದಾಗ ರಥಯಾತ್ರೆ, ಪಾದ ಯಾತ್ರೆ, ರೋಡ್ show. ಮೈ-ಕೈ ನೋವಿಲ್ಲ, ಲಾಠಿ ಏಟು ತಿನ್ನುವ ಪ್ರಶ್ನೆಯೇ ಇಲ್ಲ,

Jan 5, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 14



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 13 ಓದಲು ಇಲ್ಲಿ ಕ್ಲಿಕ್ಕಿಸಿ
ಗೌತಮ್ – ತರಗತಿಯಲ್ಲಿದ್ದ ಎಲ್ಲಾ ಹುಡುಗರಲ್ಲೂ ಅಸೂಯೆ ಹುಟ್ಟಿಸುವಂಥ ವ್ಯಕ್ತಿತ್ವ. ನೋಡ್ಲಿಕ್ಕೆ ಚೆನ್ನಾಗಿದ್ದ ಅನ್ನೋದಕ್ಕಿಂತ ಎಲ್ಲಾ ವಿಷಯಗಳಲ್ಲೂ ಮುಂದು. ಒಂದು ರೀತೀಲಿ ಸಕಲಕಲಾವಲ್ಲಭ. ಹುಡುಗೀರ ಜೊತೆ ಮಾತನಾಡೋದರಲ್ಲಿರಬಹುದು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಲ್ಲಿರಬಹುದು ಎಲ್ಲಾದರಲ್ಲೂ ಮುಂದು. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಮಯದಲ್ಲಿ ನಡೆಸಿದ್ದ ಆಶುಭಾಷಣ ಸ್ಪರ್ಧೆ, ಪ್ರಬಂಧ ರಚನೆ, ಸಂಗೀತ, ಡಿಬೇಟ್, ನಾಟಕ ಎಲ್ಲದರಲ್ಲೂ ಮೊದಲ ಸ್ಥಾನ ಗೌತಮನಿಗೆ. ಹುಡುಗಿಯರು ಪ್ರತೀ ವಿಷಯಕ್ಕೂ ‘ಗೌತಮ್ ಗೌತಮ್’ ಅಂತ ಕೂಗುತ್ತಿದ್ದರೆ ಹುಡುಗರೆಲ್ಲಾ ‘ನಮಗೇ ಅದೃಷ್ಟ ಇಲ್ವಲ್ಲಾ ಗುರೂ’ ಎಂದು ಪೇಚಾಡಿಕೊಳ್ಳುತ್ತಿದ್ದರು. ಲೋಕಿಗೂ ಮೊದಮೊದಲು ‘ಛೇ ನಾನು ಯಾವುದರಲ್ಲೂ ಭಾಗವಹಿಸುವುದಿಲ್ಲವಲ್ಲಾ. ನಿಜಕ್ಕೂ ನಾನೊಬ್ಬ ದಂಡಪಿಂಡ’ ಎನ್ನಿಸುತ್ತಿತ್ತು. ಆದರೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದಾಗಲೆಲ್ಲ ಈ ಕೀಳರಿಮೆ ಕಡಿಮೆಯಾಗುತ್ತಿತ್ತು.

Jan 3, 2014

ಕೆ.ವಿ. ಸುಬ್ಬಣ್ಣ

ಅರೆಶತಮಾನದ ಅಲೆಬರಹಗಳು ಪುಸ್ತಕದಿಂದ. . .