May 29, 2014

ಪಕ್ಷಿ ವೀಕ್ಷಣೆಗೊಂದು ದಿನ



ಗ್ರೇ ಹೆರಾನ್
ಡಾ ಅಶೋಕ್. ಕೆ. ಆರ್ 

ಇತ್ತೀಚಿನ ದಿನಗಳಲ್ಲಿ ವಾರಾಂತ್ಯದ ಪ್ರವಾಸವೆಂದರೆ ದೂರವೂ ಅಲ್ಲದ ತುಂಬಾ ಹತ್ತಿರವೂ ಅಲ್ಲದ ಉತ್ತಮ ಹೋಟೆಲ್ಲಿಗೋ, ಸಕಲ ಐಷಾರಾಮಿ ಸೌಲಭ್ಯಗಳಿರುವ ರೆಸಾರ್ಟಿಗೋ ಹೋಗಿ ವಾರಪೂರ್ತಿ ಮನೆ ಆಫೀಸಿನಲ್ಲಿ ಮಾಡಿದ್ದನ್ನು ವಾರಾಂತ್ಯದಲ್ಲಿ ಹೊಸ ಜಾಗದಲ್ಲಿ ಮಾಡುವುದಷ್ಟೇ ಆಗಿಹೋಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಹೋಗುವವರ ಸಂಖೈಯೂ ಹೆಚ್ಚುತ್ತಿದೆಯಾದರೂ ಬಹಳಷ್ಟು ಮಂದಿ ನಿರ್ಮಲ ಸ್ಥಳಗಳನ್ನು ಮಲಿನಗೊಳಿಸಿ ಹಿಂದಿರುಗುತ್ತಾರೆ. ಇಂತಹವರ ಕಾರಣದಿಂದಾಗಿ ಹೆಚ್ಚು ಪ್ರಸಿದ್ಧವಲ್ಲದ ತಾಣಗಳ ಕುರಿತು ಮಾಹಿತಿ ಒದಗಿಸುವುದಕ್ಕೆ ಕೊಂಚ ಹಿಂಜರಿಕೆ ಇರುವುದು ಸುಳ್ಳಲ್ಲ.

May 22, 2014

ಕೆ.ಪಿ.ಎಸ್.ಸಿ ಕರ್ಮಕಾಂಡ - ಆಮ್ ಆದ್ಮಿ ಪಕ್ಷದ ಪತ್ರಿಕಾ ಟಿಪ್ಪಣಿ

ಸಿದ್ಧಾರ್ಥ್ ಶರ್ಮ - ರಾಜ್ಯ ಸಂಚಾಲಕರು
ರವಿ ಕೃಷ್ಣಾರೆಡ್ಡಿ - ಕಾರ್ಯಕಾರಿ ಸಮಿತಿ ಸದಸ್ಯರು


ಪತ್ರಿಕಾ ಟಿಪ್ಪಣಿ 22/05/2014
ಕೆಪಿಎಸ್‌ಸಿ ಕರ್ಮಕಾಂಡ : 1998, 1999, 2004 ರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗಳಲ್ಲಿ ಅಪಾರ ಅಕ್ರಮ, ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಆಗಿದೆ ಅಂದ ಮೇಲೆ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಒತ್ತಾಯಿಸುತ್ತಿದ್ದರೂ ಸಹ ಸರ್ಕಾರ ಸುಮ್ಮನಿರುವುದೇಕೆ?

May 20, 2014

ನಿರೀಕ್ಷೆಗಳನ್ನು ಮೀರಿಸಿದ ಮತದಾರ “ಪ್ರಭು”



ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.

May 14, 2014

ಹೋಗಿ ಸಿಂಗ್ ಜಿ.... ಮತ್ತೆ ಮರಳದಿರಿ...

ಮುನೀರ್ ಕಾಟಿಪಳ್ಳ
 ಹತ್ತು ವರ್ಷಗಳ ಕಾಲ ಇಂಡಿಯಾ ದೇಶವನ್ನು ಆಳಿದ ಮೌನಿ ಬಾಬ ಸಿಂಗ್ ಜಿ ನಿರ್ಗಮಿಸುತ್ತಿದ್ದಾರೆ. ಪಲಿತಾಂಶ ಏನೇ ಇದ್ದರು ಅವರ ನಿರ್ಗಮನ ಖಚಿತ ಮತ್ತು ಶಾಶ್ವತ.

ಬೆಳ್ಳಂದೂರು ಕೆರೆಯ ಸ್ವಗತ

ರಮ್ಯ ವರ್ಷಿಣಿ
ನಾನು ಒಂದು ಕಾಲದಲ್ಲಿ ಹಸುರಿನಿಂದ ಕಂಗೊಳಿಸ್ತಿದ್ದೆ. ಒಂದು ಸಾರಿ ನನ್ನ ಕಡೆ ಕಣ್ಣು ಹಾಯಿಸಿ ನೋಡಿದ್ರೆ ಎಂಥವರನ್ನು ಆಕರ್ಷಣೆ ಮಾಡಿ ನನ್ನ ಕಡೆ ಸೆಳೆದುಕೊಳ್ತಿದ್ದೆ. ನನ್ನ ಸುತ್ತಾಮುತ್ತಲ ಹಸಿರು ಎಲ್ಲರ ಬಾಯಲ್ಲೂ ಅಬ್ಬಾಬ್ಬಾ ಅನ್ನಿಸೊ ಹಾಗೆ ಮನಸೂರೆ ಮಾಡಿತ್ತು. ನೀವ್ ನೋಡ್ತಿರೋ ನಾನು ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳೆಂದೂರು ಕೆರೆ.

May 7, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 29

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 28 ಓದಲು ಇಲ್ಲಿ ಕ್ಲಿಕ್ಕಿಸಿ

ತರಗತಿಗಳನ್ನು ಮುಗಿಸಿಕೊಂಡು ಎಲ್ಲರೂ ಮನೆಯತ್ತ ಹೊರಟಿದ್ದರು. ಪೂರ್ಣಿಮಾ ಲೋಕಿಯೊಡನೆ ಕಾರಿಡಾರಿನಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಳು.
“ಥ್ಯಾಂಕ್ಸ್ ಲೋಕಿ” ಎಂದಳು.
“ಯಾಕೆ?”

May 1, 2014

ಬೆಳ್ಳಕ್ಕಿಗಳ ಪ್ರಪಂಚ


ಆದರ್ಶವೇ ಬೆನ್ನು ಹತ್ತಿ .... ಭಾಗ 28

 ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ

ನಗರ ಕೇಂದ್ರ ಗೃಂಥಾಲಯ. ತರಾಸುರವರ ತಿರುಗುಬಾಣವನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾಳೆ ಕೀರ್ತನಾ. ಒಂದು ಪುಟ ಓದ್ತಾಳೆ; ನಂತರ ಪುಸ್ತಕ ಜೋಡಿಸಿದ್ದ ಸಾಲಿನತ್ತ ನೋಡುತ್ತಾ ಅಲ್ಲಿರೋ ಜನರನ್ನು ನೋಡಿ ಬೇಸರಪಟ್ಟು ಮತ್ತೊಂದು ಪುಟ ತಿರುವುತ್ತಾ ಓದುವುದರಲ್ಲಿ ಮಗ್ನಳಾಗುತ್ತಾಳೆ. ಅವಳು ಗೃಂಥಾಲಯಕ್ಕೆ ಬರುತ್ತಿರುವುದು ಇದು ಎರಡನೆಯ ಬಾರಿ. ಮೊದಲ ಬಾರಿ ಬಂದಾಗ ಧೈರ್ಯ ಸಾಲದೆ ಅಂದುಕೊಂಡ ಕೆಲಸವನ್ನು ಸಾಧಿಸದೇ ವಾಪಸ್ಸಾಗಿದ್ದಳು.