Dec 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,

Dec 24, 2018

ಅಲ್ಲಿಯವರೆಗು ಕಾಯುತ್ತ!

ಕು.ಸ.ಮಧುಸೂದ ನರಂಗೇನಹಳ್ಳಿ 
ರೆಕ್ಕೆ ಬಿಚ್ಚಿ ಹಗಲು 
ಹಾರಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ 
ಕನಸೇನಲ್ಲ ಕಣ್ಣ ಮುಂದಿನ ನೋಟ 
ಉಕ್ಕುವ ಯೌವನದ ಬೆಂಕಿ ಕಾವು 
ಸರಿದ ಇರುಳುಗಳ ನೆರಳುಗಳ 
ನಟ್ಟ ನಡುವೆ ಸರಳುಗಳ ಸರಸದಾಟ 
ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳ 
ಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪು 
ಮಟಾಮಾಯ 
ಇವನ ಕಡುಕಪ್ಪು ಕಬ್ಬಿಣದಂತ ತೋಳುಗಳಿಗೆ ಕಾದವಳು 
ಕರಗಿದಂತೆ ಕಾಲ 
ಜರುಗಿದಂತೆ ಗಡಿಯಾರದ ಮುರಿದ ಮುಳ್ಳು 
ಕುಂತಲ್ಲೇ ಒದ್ದೆಯಾದಳು

ಕಂಡೆ ನೋಡ !?

ಪ್ರವೀಣಕುಮಾರ್ ಗೋಣಿ
ನಿನಗೆ ಶರಣಾಗುವಿಕೆಯ 
ಹೊರತು ಮಿಕ್ಕೆಲ್ಲವೂ 
ವ್ಯರ್ಥವೆನಿಸುವ ವೇಳೆ 
ಮಾಯೆ ಅಳಿದು ನಿಂತಿತ್ತು ನೋಡ .

ವಾಸನೆಗಳ ತಾಳಕ್ಕೆ 
ತಕ ತಕನೇ ಕುಣಿದು 
ಮೈಮನಗಳು ದಣಿದಾಗ 
ನಿನ್ನ ಅನುಭಾವವೊಂದೇ ಚಿರವೆನ್ನುವ 
ಅರಿವು ಅರಳಿ ನಿಂತಿತ್ತು ನೋಡ . 

Dec 18, 2018

ರಾಜಾಸ್ಥಾನ ಬಾಜಪ ಸೋಲಿಗೆ ಕಾರಣವಾದ ಆಡಳಿತ ವೈಖರಿ!

ಚಿತ್ರಮೂಲ: election commission of India
ಕು.ಸ.ಮಧುಸೂದನ ರಂಗೇನಹಳ್ಳಿ
ಕಳೆದ ಐದು ವರ್ಷಗಳಿಂದ ರಾಜಾಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಬಾಜಪದ ಶ್ರೀಮತಿ ವಸುಂದರಾ ರಾಜೆಯವರ ಸರಕಾರ ಈ ಬಾರಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ಸಿಗೆ ಅಧಿಕಾರ ವಹಿಸಿಕೊಟ್ಟಿದೆ. ಚುನಾವಣೆಗಳಿಗು ಮೊದಲು ಬಿಡುಗಡೆಯಾದ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನದ ಸಂಜೆ ದೊರೆತ ಎಕ್ಸಿಟ್ ಪೋಲ್ ಸಹ ಬಾಜಪ ಸರಕಾರದ ಸೋಲನ್ನು ಖಚಿತ ಪಡಿಸಿದ್ದವು.

ಎಲ್ಲರೂ ಬಾಜಪ ಸೋಲಬಹುದೆಂದೇನೊ ನುಡಿದಿದ್ದರೂ ಅದು ಈ ಮಟ್ಟಿಗೆ ಸೋಲುತ್ತದೆಯೆಂಬ ನಿರೀಕ್ಷೆ ಇರಲಿಲ್ಲ. ಯಾಕೆಂದರೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟ 200 ಸ್ಥಾನಗಳ ಪೈಕಿ 163 ರಲ್ಲಿ ಬಾಜಪ ಗೆದ್ದಿದ್ದರೆ, ಕಾಂಗ್ರೆಸ್ 21 ರಲ್ಲಿ ಮಾತ್ರ ಗೆಲ್ಲಲು ಶಕ್ತವಾಗಿತ್ತು. ಹೆಚ್ಚೂ ಕಡಿಮೆ ಅಂದು ಪ್ರದಾನಮಂತ್ರಿ ಅಭ್ಯರ್ಥಿಯಾಗಿದ್ದ ಶ್ರೀ ನರೇಂದ್ರ ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಅಷ್ಟು ಬಲಿಷ್ಠವಾಗಿ ಹೊರಹೊಮ್ಮಿದ್ದ ಬಾಜಪ ಇವತ್ತು ಕೇವಲ ಐದೇ ವರ್ಷಗಳಲ್ಲಿ ಕಾಂಗ್ರೆಸ್ಸಿನೆದುರು ಮಂಡಿಯೂರಿದೆ. ಈ ಬಾರಿ ಚುನಾವಣೆ ನಡೆದ 199ಕ್ಷೇತ್ರಗಳ ಪೈಕಿ ಕಾಂಗ್ರೆಸ್ 99 ಸ್ಥಾನವನ್ನು, ಬಾಜಪ 73 ಸ್ಥಾನಗಳನ್ನು ಗೆದ್ದಿವೆ. ಇನ್ನು ಯಥಾ ಪ್ರಕಾರ ಇಲ್ಲಿ ಅಷ್ಟೇನು ಪ್ರಭಾವಶಾಲಿಯಲ್ಲದ ಬಹುಜನ ಪಕ್ಷ 6 ಸ್ಥಾನಗಳನ್ನೂ ಪಡೆದಿದೆ. ಇರಲಿ ಈಗ ನಾವು ರಾಜಾಸ್ಥಾನದಲ್ಲಿನ ಬಾಜಪ ಸೋಲಿಗೆ ಕಾರಣವಾದ ಅಂಶಗಳನ್ನು ನೋಡೋಣ:

ಅವಳ ನೆನಪಿನಲ್ಲಿ.


ಡಾ. ಅಶೋಕ್. ಕೆ. ಆರ್. 
ಒಂದ್ ಹುಡ್ಗೀನ್ ಇಷ್ಟ ಪಟ್ಟು ಧೈರ್ಯ ತಕಂಡ್ ಪ್ರಪೋಸು ಮಾಡಿ ಅಪ್ಪಿ ತಪ್ಪಿ ಅವಳು ಒಪ್ಪೂ ಬಿಟ್ಟು 'ಶುಭಂ' ಅಂತೊಂದ್ ಬೋರ್ಡು ಹಾಕೊಳ್ಳೋದಕ್ಕಿಂತ ಗ್ಯಾಪ್ ಗ್ಯಾಪಲ್ಲಿ ಒಂದೊಂದ್ ಹುಡ್ಗಿ ಜೊತೆ ಒನ್ ವೇ ಲವ್ವಲ್ ಬಿದ್ದು ನಾಕೈದು ವರ್ಷಕ್ಕೊಂದ್ಸಲ ಹಳೇ ಗಾಯ ಕೆರ್ಕಂಡ್ ಕೂರೋದ್ ಚೆಂದ್ವೋ ಏನೋಪ! 

ಮೊನ್ಮೊನ್ನೆ ನಮ್ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಇಮಿಡೀಯಟ್ ಸೀನಿಯರ್ಸು ಗೆಟ್ ಟುಗೆದರ್ ಮಾಡ್ಕಂಡಿದ್ ಫೋಟೋಗಳನ್ನ ಹಾಕಂಡಿದ್ರು ಎಫ್.ಬೀಲಿ. ಅದರಲ್ಲಿದ್ದ ಗ್ರೂಪ್ ಫೋಟೋನ ತಟಕ್ಕಂತ ಝೂಮ್ ಮಾಡಿದ್ದು ಅವಳ ನೋಡುವ ನೆಪದಿಂದ! ಆರೇಳು ವರ್ಷ ಆಗಿತ್ತಾಂತ ಅವಳ ಮುಖ ನೋಡಿ?! 

ಹೆಚ್ಚು ಕಡಿಮೆ ಹದಿನೇಳು ವರುಷದ ಹಿಂದಿನ ನೆನಪುಗಳು. ನಮ್ ಕಾಲೇಜ್ ಶುರುವಾಗಿ ಮೊದಲ ಇಂಟರ್ನಲ್ಸ್ ಮುಗಿಯುವ ಸುಮಾರಿಗೆ ನಮ್ ಇಮಿಡೀಯಟ್ ಸೀನಿಯರ್ಸುಗಳ ರಿಸಲ್ಟ್ ಬಂದಿತ್ತು. ಊರಿಗೋಗಿದ್ದ ಸೀನಿಯರ್ಸ್ ಎಲ್ಲಾ ಕಾಲೇಜಿಗೆ ವಾಪಸ್ಸಾದ್ರು. ಎರಡನೇ ವರ್ಷದ ಶುರುವಿನಲ್ಲಿ ಓದಿ ದಬಾಕೋಕು ಏನೂ ಇರೋಲ್ಲ. ಜೊತೆಗೆ ಮೆಡಿಕಲ್ನಲ್ಲಿ ಮೊದಲ ವರ್ಷ ಪಾಸಾದ್ರೆ ಡಾಕ್ಟರಾಗಿಬಿಟ್ಟ ಫೀಲಿಂಗ್ ತಲೇಲ್ ಇರ್ತದೆ! ಸೀನಿಯರ್ಸ್ ಎಲ್ಲಾ ಗುಂಪು ಗುಂಪಾಗಿ ಲೈಬ್ರರಿಗೆ ಬಂದು ಕೂರೋರು. ಜೂನಿಯರ್ಸ್ ಯಾರ್ನಾದ್ರೂ ಕರುಸ್ಕಂಡು ಅದೂ ಇದೂ ತರ್ಲೆ ಪ್ರಶ್ನೆ ಕೇಳ್ತಾ ಮಜಾ ತಗೊಳ್ಳೋರು. ಆಗಲೇ ಅವಳು ಕಂಡಿದ್ದು. 

Dec 16, 2018

ಹನಿ....

ಪಮ್ಮೀ ಫೀನಿಕ್ಸ್
ಮುಂಗಾರು ಮೆಲ್ಲ ಮೆಲ್ಲನೇ ಆವರಿಸುತ್ತಾ ಇಳೆಯನೆಲ್ಲಾ ಆವರಿಸತೊಡಗಿದಾಗ ಮಸ್ತಿಷ್ಕದಲಿ ಘನೀಭವಿಸಿದ ನೆನಪುಗಳು ನಿಧಾನವಾಗಿ ಕರಗುತ್ತಾ ಹನಿಹನಿ ಧಾರೆಯಾಗಿ ಮೈಮನದ ತುಂಬಾ ಆವರಿಸಿಕೊಳ್ಳುತ್ತದೆ.....

ನಿನ್ನಂತೆಯೇ ಈ ಮಳೆಯೂ ಸುರಿದರೆ ಇಡಿಯಾಗಿ ಕವಿದುಕೊಳ್ಳುವುದು. ಹೆಪ್ಪುಗಟ್ಟಿದ ವಿಶಾದದ ತೆರೆ ಹರಿದು ಕಚಗುಳಿಯಿಡುತ್ತಾ ನೀ ಎದೆಯಂಗಳಕ್ಕೆ ಹೆಜ್ಜೆಯಿಡುವಾಗ ನಿನಗೆ ಸ್ವಾಗತಿಸಲೆಂದೇ ಉದುರುವ ಜಾಜಿಮೊಲ್ಲೆ ತನ್ನ ಘಮದೊಂದಿಗೆ ನಿನ್ನಾಗಮನದ ಸೂಚನೆ ತಲುಪಿಸುವುದು

Dec 14, 2018

ನೀ ಎನಗೆ !


ಪ್ರವೀಣಕುಮಾರ್ ಗೋಣಿ

ಅಕಾರಣ ಹನಿವ 
ಕಣ್ಣ ಹನಿಗಳೊಳಗೆ 
ನಿನ್ನ ಸಾಂತ್ವನದ 
ಬಿಸಿ ಮತ್ತೆ ಹೃದಯವನ್ನ ಅರಳಿಸುವುದೋ !

ಬೇಡಿಕೆಗಳ ಹೊರೆಯೆಲ್ಲ 
ಹೊತ್ತು ನಿನ್ನೆಡೆ ನಡೆದೆ ನಿಜ ,
ನೀ ಎದುರಾಗುತ್ತಲೇ 
ಬಯಕೆಗಳ ಹೊರೆಯೇ 
ಕರಗಿ ಮತ್ತೆ ಹಗುರಾದೆನೋ ನಾನು ! 

ಚತ್ತೀಸ್ ಗಡ ಪಲಿತಾಂಶ: ರಾಜಕೀಯ ಪಕ್ಷಗಳಿಗೊಂದು ಪಾಠ!

ಕು.ಸ.ಮಧುಸೂದನ ರಂಗೇನಹಳ್ಳಿ
ಹಾಗೆ ನೋಡಿದರೆ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನ ನಡೆದ ನಂತರದ ಸಮೀಕ್ಷೆಗಳು ಛತ್ತೀಸ ಗಢ್ ರಾಜ್ಯದಲ್ಲಿ ಬಾಜಪ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಬಗ್ಗೆಯೇ ಹೇಳಿದ್ದವು. ಆದರೆ ಎಲ್ಲ ಭವಿಷ್ಯಗಳನ್ನು ಸುಳ್ಳು ಮಾಡುವಂತೆ ಕಾಂಗ್ರೆಸ್ ಇಲ್ಲಿ ಭರ್ಜರಿಯಾಗಿ ಗೆದ್ದು ಬಾಜಪಕ್ಕೆ ಹೀನಾಯ ಸೋಲನ್ನು ಕರುಣಿಸಿದೆ. ಮದ್ಯಪ್ರದೇಶ ಮತ್ತು ರಾಜಾಸ್ಥಾನಕ್ಕೆ ಹೋಲಿಸಿದಲ್ಲಿ ಇಲ್ಲಿ ಬಾಜಪದ ಸೋಲು ಅನಿರೀಕ್ಷಿತ ಮತ್ತು ಅಗಾಧವಾದದ್ದು. ಆದರೆ ಈ ರಾಜ್ಯದ ಪಲಿತಾಂಶಗಳು ಎಲ್ಲ ಪಕ್ಷಗಳಿಗೂ ಒಂದು ಪಾಠವಾಗಿದೆ. 

2013ರ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಾಜಪ 49 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದ್ದರೆ, ಕಾಂಗ್ರೆಸ್ 39ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದಿದ್ದರೆ ಬಾಜಪ ಕೇವಲ 16 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿದೆ. ಮತಗಳಿಕೆಯ ಪ್ರಮಾಣದಲ್ಲಿ ಎರಡೂ ಪಕ್ಷಗಳ ನಡುವೆ ಶೇಕಡಾ 12 ರಷ್ಟು ವ್ಯತ್ಯಾವಿದೆ. ಇಷ್ಟು ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸಬಹುದೆಂದು ಸ್ವತ: ಕಾಂಗ್ರೆಸ್ಸಿನವರೆ ನಿರೀಕ್ಷಿಸಿರಲಿಲ್ಲವೆಂಬುದು ನಿಜ. ಯಾಕೆಂದರೆ ಕಳೆದ ಹದಿನೈದು ವರ್ಷಗಳಿದ ಆಡಳಿತ ನಡೆಸುತ್ತಿದ್ದ ಬಾಜಪವನ್ನು, ಬಲಾಡ್ಯ ಮುಖ್ಯಮಂತ್ರಿ ಶ್ರೀ ರಮಣ್ ಸಿಂಗ್ ಅವರನ್ನು ಸೋಲಿಸಲು ಕಾಂಗ್ರೆಸ್ಸಿನಲ್ಲಿ ಸ್ಥಳೀಯವಾಗಿ ಬಲಿಷ್ಠ ನಾಯಕರು ಇರಲಿಲ್ಲ. ಶ್ರೀ ಅಜಿತ್ ಜೋಗಿಯವರು ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವೊಂದನ್ನು ಕಟ್ಟಿದ ನಂತರವಂತು ಕಾಂಗ್ರೆಸ್ ಕಷ್ಟದಲ್ಲಿತ್ತು. ಕಾಂಗ್ರೆಸ್ಸಿನ ಮತಗಳನ್ನು ಅಜಿತ್ ಜೋಗಿಯವರು ಕಸಿದುಕೊಳ್ಳುವ ಮೂಲಕ ಬಾಜಪಕ್ಕೆ ಚತ್ತೀಸಗಡ್ ಸುಲಭದ ತುತ್ತಾಗುತ್ತದೆಯೆಂದು ಬಹಳ ಜನ ಹೇಳಿದ್ದರು. ಆದರೆ ಜೋಗಿಯವರ ಮ್ಯಾಜಿಕ್ ನಡೆಯಲೇ ಇಲ್ಲ. ಬಾಜಪದ ಸುದೀರ್ಘ ಆಳ್ವಿಕೆಯಿಂದ ಬೇಸರಗೊಂಡಿದ್ದ ಮತದಾರರು ಜಿಗುಪ್ಸೆಗೊಂಡಂತೆ ಕಾಂಗ್ರೆಸ್ಸಿಗೆ ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಟ್ಟುಬಿಟ್ಟರು. ಹಾಗಿದ್ದರೆ ಇಂತಹದೊಂದು ದೊಡ್ಡ ಬದಲಾವಣೆಯ ಹಿಂದೆ ಇರಬಹುದಾದ ನೈಜ ಕಾರಣಗಳನ್ನು ಹುಡುಕುತ್ತ ಹೋದರೆ ಬೇರೆ ಕಡೆಯಲ್ಲಿನ ಕಾರಣಗಳ ಜೊತೆ ಇಲ್ಲಿಯದೇ ಆದ ಎರಡು ದೊಡ್ಡ ಸ್ಥಳೀಯ ಕಾರಣಗಳೂ ಇವೆಯೆಂಬುದನ್ನು ನೋಡಬಹುದು. 

Dec 12, 2018

ತೆಲಂಗಾಣ! ಟಿ.ಆರ್.ಎಸ್. ಗೆಲುವಿನ ಐದು ಮುಖ್ಯ ಕಾರಣಗಳು

ಕು.ಸ.ಮಧುಸೂದನರಂಗೇನಹಳ್ಳಿ
ಎಲ್ಲ ನಿರೀಕ್ಷೆಗಳನ್ನೂ ಮೀರಿ ಕೆ.ಚಂದ್ರಶೇಖರ್ ರಾವ್ ಅವರ ಟಿ.ಆರ್.ಎಸ್. ತೆಲಂಗಾಣ ವಿದಾನಸಭಾ ಚುನಾವಣೆಗಳಲ್ಲಿ ಅಭೂತಪೂರ್ವ ಜಯಗಳಿಸಿದೆ.ಚುನಾವಣೆ ನಡೆದ 119ಸ್ಥಾನಗಳ ಪೈಕಿ 88ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧಪಕ್ಷಗಳು ದೂಳಿಪಟವಾಗುವಂತೆ ಮಾಡಿದೆ.ಟಿ.ಆರ್.ಎಸ್.ಗೆಲ್ಲಬಹುದೆಂದು ಭವಿಷ್ಯ ನುಡಿದಿದ್ದವರಿಗೂ ಅಚ್ಚರಿಯಾಗುವಂತೆ ಅದು ಜಯಗಳಿಸಿರುವುದರ ಹಿಂದೆ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ಅವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿದೆ.

ಹಾಗೆ ನೋಡಿದರೆ ತೆಲಂಗಾಣ ವಿದಾನಸಭಾ ಚುನಾವಣೆಗಳು 2019ರ ಮೇ ತಿಂಗಳ ಲೋಕಸಭಾ ಚುನಾವಣೆಗಳ ಜೊತೆಗೆ ನಡೆಯಬೇಕಿತ್ತು. ಆದರೆ ಲೋಕಸಭಾ ಚುನಾವಣೆಗಳಲ್ಲಿ ಬೀಸಬಹುದಾದ ಪ್ರದಾನಮಂತ್ರಿ ಶ್ರೀನರೇಂದ್ರ ಮೋದಿಯವರ ಅಲೆಯಿಂದ ತಪ್ಪಿಸಿಕೊಳ್ಳಲೆಂಬಂತೆ ಕೆ.ಸಿ.ಆರ್. ಅವಧಿಗೆ ಮುನ್ನವೇ ವಿದಾನಸಭೆ ವಿಸರ್ಜಿಸಿ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡರು. ಅವರ ಈ ನಿರ್ದಾರವನ್ನು ವಿರೋಧಪಕ್ಷಗಳು ಟೀಕಿಸಿ, ರಾಜಕೀಯ ಪಂಡಿತರು ಅವರ ಈ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆಯೆಂದು ನಕ್ಕಿದ್ದರು. ಆದರೆ ಅಂತಿಮವಾಗಿ ಕೆ.ಸಿ.ರಾವ್ ಗೆಲುವಿನ ನಗೆ ಬೀರಿದ್ದಾರೆ. ಆದರೆ ಇಂತಹ ಅಭೂತಪೂರ್ವ ಗೆಲುವು ತಮ್ಮದಾಗಬಹುದೆಂದು ಸ್ವತ: ಅವರೇ ನಿರೀಕ್ಷಿಸಿದ್ದರೆಂದು ಹೇಳುವುದು ತಪ್ಪಾಗುತ್ತದೆ.

Dec 7, 2018

ಶಾಂತಿ- ಪ್ರಶಾಂತಿ

ಪದ್ಮಜಾ ಜೋಯ್ಸ್ ದರಲಗೋಡು
ಹೆಸರೂ ಶಾಂತಿ , ಮನೆಯೂ ಪ್ರಶಾಂತಿ ನಿಲಯ ಪರಿಸರವೂ ಶಾಂತ ಪ್ರಶಾಂತವೇ ಇದ್ದರೂ.... 

ಶಾಂತಿಯ ಮನ ಅಶಾಂತಿಯ ಕಡಲಾಗಿತ್ತು.... ಬದುಕಿಡೀ ಶಾಂತಿಯ ಅರ್ಥವೂ ನಿಲುಕದ ಅಶಾಂತಿಯ ಬೀಡಾಗಿತ್ತು
ಇದ್ದುದರಲ್ಲೇ ನೆಮ್ಮದಿ ನೀಡುತ್ತಿದ್ದು ಸಾಗರನ ಸಾಂಗತ್ಯ ಮಾತ್ರ...

ಇದೀಗ ಅವನಲ್ಲಾದ ಬದಲಾವಣೆಗಳೂ ಅವಳಲ್ಲಿ ಕಡಲ ನಡುವಿನ ಬಿರುಗಾಳಿಗೆ ಸಿಕ್ಕ ಹಾಯಿ ದೋಣಿಯಾಗಿತ್ತು ಅವಳ ಬದುಕು...

"ಜನಮನ" ಎಂದೇ ಹೆಸರಿಟ್ಟ ಹೊರಚಾವಣಿಯಲ್ಲಿ ಆಪ್ತ ಸಲಹಾ ಕೇಂದ್ರದಲ್ಲಿ ನೆರೆದಿದ್ದ ಹತ್ತಾರು ಜನದ ಕ್ಲಿಷೆಕೇಶಗಳನ್ನು ಕೇಳಿ ಒಂದಷ್ಟು ತಿಳಿ ಹೇಳಿ ಸಲಹೆ ನೀಡಿ ಅಯ್ಯೋ ಎನಿಸಿದ ಹಲಕೆಲವು ಜವಾಬ್ದಾರಿಗಳ ಅನಗತ್ಯವಾದರೂ ಹೆಗಲೇರಿಸಿಕೊಂಡು ಎಲ್ಲರನ್ನೂ ಊಟಕ್ಕೆ ಕಳುಹಿಸಿ ಬ಼ಂದು ಮರೆತ ಯಾವುದೋ ಕೆಲಸ ನೆನಪಾದ಼ಂತೆ ಅರ್ಧ ಟೈಪಿಸಿ ಉಳಿದ ನೋಟ್ ಪ್ಯಾಡನ್ನು ತೆರೆದಾಗ ಪಕ್ಕದಲ್ಲಿ ನಗುತ್ತಿದ್ದ ಫೋಟೋ ಅದರಲ್ಲಿನ ಮುಖಭಾವವೂ ತನ್ನ ಅಪಹಾಸ್ಯ ಮಾಡಿದಂತೆನಿಸಿತು.... 

ಆಪರೇಷನ್ ಕಮಲದ ಅನಿವಾರ್ಯತೆ ಯಾರಿಗಿದೆ?

ಕು.ಸ.ಮಧುಸೂದನ
'ಆಪರೇಷನ್ ಕಮಲ' ಮತ್ತೊಮ್ಮೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರ ಆರು ತಿಂಗಳು ಪೂರೈಸುತ್ತಿರುವ ಈ ಸಮಯದಲ್ಲಿ ಬಿಡುಗಡೆಯಾಗಿರುವ ಆಡಿಯೋ ತುಣುಕೊಂದು ಹೀಗೊಂದು ಸಂಶಯವನ್ನು ಹುಟ್ಟು ಹಾಕಿದೆ. ಈ ಆಡಿಯೋ ತುಣುಕಿನ ಸತ್ಯಾಸತ್ಯತೆಯೇನೇ ಇರಲಿ ಈ ಸರಕಾರವನ್ನು ಕೆಡವಿ ಅಧಿಕಾರಕ್ಕೇರಲು ಬಾಜಪ ಪ್ರಯತ್ನಿಸುತ್ತಿರುವುದೇನು ಹೊಸತಲ್ಲ.

ಚುನಾವಣೆಗಳು ಮುಗಿದ ನಂತರ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದ ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೇ ವಿಶ್ವಾಸ ಮತ ಸಾಬೀತಿಗೆ ಬೇಕಾದ ಸಂಖ್ಯೆ ಹೊಂದಲು ಆಪರೇಷನ್ ಕಮಲ ನಡೆಸಲು ಪ್ರಯತ್ನಗಳು ನಡೆದಿದ್ದವು. ವಿಶ್ವಾಸ ಮತದ ಮೇಲಿನ ಚರ್ಚೆಯಲ್ಲಿ ಮಾತಾಡುತ್ತ ಸ್ವತ: ಯಡಿಯೂರಪ್ಪನವರೇ ತಾವು ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳನ್ನು ಸಂಪರ್ಕಿಸಿದ್ದು ನಿಜವೆಂದು ಹೇಳಿಕೊಂಡಿದ್ದರು. ಅದಾದ ನಂತರ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆಪರೇಷನ್ ಕಮಲ ನಡೆಸುವ ನಂಬಿಕೆಯಿಂದಲೇ ಬಾಜಪದ ಬಹುತೇಕ ನಾಯಕರುಗಳು ಈ ಸರಕಾರ ಇನ್ನು ಒಂದು ವಾರದಲ್ಲಿ ಬೀಳುತ್ತದೆ, ಇನ್ನು ಎರಡು ವಾರದಲ್ಲಿ ಬೀಳುತ್ತದೆಯೆಂದು ಭವಿಷ್ಯ ನುಡಿಯುತ್ತ ನಗೆಪಾಟಲಿಗೀಡಾಗುತ್ತ ಹೋಗಿದ್ದು ನಮ್ಮ ಮುಂದಿದೆ. ಇದೀಗ ಚಳಿಗಾಲದ ಅಧಿವೇಶನ ಈ ತಿಂಗಳು ಹತ್ತನೇ ತಾರೀಖು ಪ್ರಾರಂಭವಾಗಲಿದ್ದು, ಅದಕ್ಕೂ ಮುಂಚೆ ಸಂಪುಟ ವಿಸ್ತರಣೆ ಮಾಡುವ ತರಾತುರಿಯಲ್ಲಿರುವ ಮೈತ್ರಿ ಸರಕಾರಕ್ಕೆ ಈಗ ಮತ್ತೆ ಆಪರೇಷನ್ ಕಮಲದ ಭೀತಿ ಎದುರಾಗಿದೆ. ಯಥಾ ಪ್ರಕಾರ ಬಾಜಪ ಈ ಆಡಿಯೋದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು ತಮ್ಮ ಪಕ್ಷ ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ತಾವಾಗಿಯೇ ಪಕ್ಷ ಸೇರಲು ಬಯಸುವ ಶಾಸಕರುಗಳಿಗೆ ಬೇಡ ಎನ್ನುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಆಡಿಯೋದ ಅಧಿಕೃತತೆಯನ್ನು ಮತ್ತು ಇದರ ಮೂಲದ ಬಗ್ಗೆ ಚರ್ಚಿಸುವುದಕ್ಕಿಂತ ಮುಖ್ಯವಾಗಿ ಈಗ ಈ ಆಪರೇಷನ್ ಕಮಲ ಯಾರಿಗೆ ಹೆಚ್ಚು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿಶ್ಲೇಷಿಸಿ ನೋಡಬೇಕಾಗಿದೆ. 

Dec 3, 2018

ಡ್ರಾಫ್ಟ್ ಮೇಲ್: ಭಾಗ 5 - ಒಂದು ಮಡಚಿಟ್ಟ ಪುಟ


ಚೇತನ ತೀರ್ಥಹಳ್ಳಿ.

ಚಿನ್ಮಯಿ ನಿರಾಳವಾಗಿದ್ದಾಳೆ. ಬೆಳಕು ಬಾಗಿಲಿನಾಚೆ ಹೋಗುತ್ತಿದ್ದರೂ ಒಳಗಿನ ಕತ್ತಲು ಮಾಯವಾಗಿದೆ. ಅವಳ ಒಳಗಿನ ಕತ್ತಲು…

ಆಡದೆ ಉಳಿಸಿಕೊಳ್ಳುವ ಮಾತು ಹೇಗೆಲ್ಲ ಜೀವ ಹಿಂಡುತ್ತೆ!
ಡ್ರಾಫ್ಟ್ ಮೇಲ್ ಕಳಿಸುವವರೆಗೂ ಅವಳಿಗೆ ತಾನು ಹೊತ್ತುಕೊಂಡಿದ್ದ ಭಾರ ಗೊತ್ತೇ ಆಗಿರಲಿಲ್ಲ!!
ಹಾಗಂತ ಎಲ್ಲ ಮಾತುಗಳು ಹೊರೆಯಾಗೋದಿಲ್ಲ. ಕೆಲವು ಯೋಗ್ಯತೆಯಲ್ಲಿ ಅದೆಷ್ಟು ಹಗುರವಾಗಿರುತ್ತವೆ ಅಂದರೆ…
ಅವುಗಳನ್ನು ನೆನೆದು ದುಃಖ ಪಡಲಿಕ್ಕೂ ಅಸಹ್ಯ ಅನ್ನಿಸಿಬಿಡುತ್ತೆ.

ಚಿನ್ಮಯಿಗೆ ಗೊತ್ತಿದೆ.
ಕಾಲ ಮೀರಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲವೆಂದು.
ಕೆಲವೊಮ್ಮೆ ಅಂಥ ಮಾತುಗಳು ವ್ಯಾಲಿಡಿಟಿ ಮುಗಿದ ಮಾತ್ರೆಗಳಂತೆ ದುಷ್ಟಪರಿಣಾಮ ಬೀರೋದೇ ಹೆಚ್ಚು!

“ಬೋಲ್ ಕೆ ಲಬ್ ಆಜಾದ್ ಹೈ ತೇರೇ ಜಬಾನ್ ಅಬ್ ತಕ್ ತೇರೀ ಹೈ…” ಅವಳಿಷ್ಟದ ಫೈಜ್ ಪದ್ಯ.
ತಾನು ಕಳಿಸದೇ ಬಿಟ್ಟ ಮೇಲ್’ಗಳನ್ನು ಓದುತ್ತ ಕುಳಿತಿದ್ದಾಳೆ. ಅವನ್ನು ಈಗಲೂ ಯಾರಿಗೂ ಕಳಿಸಲಾರಳು. ಕೆಲವಂತೂ ತನಗೇನೇ ಓದಿಕೊಳ್ಳಲು ಅಸಹ್ಯ!
ತಾನು ಹಾಗೆಲ್ಲ ಇರುವ ಅನಿವಾರ್ಯತೆ ಯಾಕಿತ್ತು? ಯಾಕೆ ಮಾತಾಡಬೇಕಿದ್ದಾಗ ಸದ್ದುಸುರಲಿಲ್ಲ?
ಆಗೆಲ್ಲ ನನ್ನ ತುಟಿಗಳ ಸ್ವಾತಂತ್ರ್ಯ ಕಸಿದಿದ್ದು ಯಾರು? ನನ್ನ ನಾಲಿಗೆ ನನ್ನದಲ್ಲವೆನ್ನುವಂತೆ ಮಾಡಿದ್ದು ಯಾರು!?
ಕೊನೆಪಕ್ಷ ಗೌತಮನ ಬಳಿಯೂ ಹೇಳಿಕೊಳ್ಳಲಿಲ್ಲ!
ಹಳೆಯ ಕಂತುಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.