Nov 28, 2016

ಪಂಜಾಬ್ ವಿದಾನಸಭಾ ಚುನಾವಣೆ: ಪ್ರಯಾಸ ಪಡಬೇಕಿರುವ ಬಾಜಪ-ಅಕಾಲಿದಳ ಮೈತ್ರಿಕೂಟ!

ಕು.ಸ.ಮಧುಸೂದನ
ಉತ್ತರಪ್ರದೇಶದಲ್ಲಿನ 2017ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಾಜಪ ಇದೀಗ ತಾನು ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಆಡಳಿತ ನಡೆಸುತ್ತಿರುವ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸತತವಾಗಿ ಎರಡು ಅವಧಿಗೆ ಅಧಿಕಾರ ನಡೆಸಿರುವ ಬಾಜಪ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆ ನಿಜಕ್ಕೂ ಕಷ್ಟಕರವಾಗಲಿದೆ. ಇದಕ್ಕಿರಬಹುದಾದ ಕಾರಣಗಳನ್ನು ನೋಡೋಣ:

ಮೊದಲನೆಯದಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರ ಪರಿಣಾಮವಾಗಿ ಅದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಎರಡನೆಯದಾಗಿ ಮೊದಲಿಂದಲೂ ಇದ್ದ ಮಾದಕದ್ರವ್ಯಗಳ ಮಾಫಿಯಾ ಹೆಚ್ಚಾಗಿದ್ದು, ಇದರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೂ ಷಾಮೀಲಾಗಿದ್ದಾರೆಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಲೇ ಬಂದಿದ್ದಾರೆ.

Nov 25, 2016

ಮೇಕಿಂಗ್ ಹಿಸ್ಟರಿ: ಊಳಿಗಮಾನ್ಯತೆಗೆ ಹೊಡೆತಗಳು ಬಿದ್ದಾಗ

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಊಳಿಗಮಾನ್ಯತೆಯನ್ನು ಎರಡು ರೀತಿಯಿಂದ ಗುರಿಯಾಗಿಸಲಾಗಿತ್ತು. ಒಂದನ್ನು ಸುಲಭವಾಗಿ ಗುರುತಿಸಬಹುದಿತ್ತು. ಊಳಿಗಮಾನ್ಯ ವರ್ಗಗಳ ಮೇಲೆ ಸತತವಾಗಿ ನಡೆದ ದಾಳಿಯದು. ಎರಡನೆಯ ರೀತಿ ಸೂಕ್ಷ್ಮವಾಗಿತ್ತು ಮತ್ತು ಅದು ಒಂದು ಸಂದರ್ಭದಲ್ಲಿ ತುಂಬಾ ಖಚಿತವಾಗಿ ತೋರಿಸಿಕೊಂಡಿತಾದರೂ ಅದರ ಬಗ್ಗೆ ನಮ್ಮಲ್ಲಿ ತುಂಬಾ ಸಾಕ್ಷ್ಯಗಳಿಲ್ಲ. ಈ ಎರಡನೆಯ ಅಂಶವನ್ನು ಮೊದಲು ಪರೀಕ್ಷಿಸೋಣ. 

ಸಂಗೊಳ್ಳಿ ರಾಯಣ್ಣ ಪರಿಚಯಿಸಿದ ರೀತಿಯಲ್ಲಿಯೇ, ಹೊಸಂತೆಯಲ್ಲಿ ನಡೆದ ರೈತ ರ್ಯಾಲಿಯಲ್ಲಿ, ಎಲ್ಲಾ ರೈತರು, ತಮ್ಮ ನಡುವಿನ ಜಾತಿ ಭೇದದ ನಡುವೆಯೂ ಸಹಭೋಜನ ನಡೆಸಿದ್ದರು. (120) ವ್ಯಾಪಕ ಜನ ಸಮೂಹ ಜೊತೆಯಾದಾಗ, ಊಳಿಗಮಾನ್ಯತೆ ವಿಧಿಸಿದ್ದ ಕಟ್ಟಳೆಗಳಲ್ಲಿ ಸಂಪೂರ್ಣ ವಿರುದ್ಧ ದಿಕ್ಕಿನ ಮೌಲ್ಯಗಳು ಮತ್ತು ಗ್ರಹಿಕೆಗಳೊಡನೆ ಜೊತೆಯಾಗುತ್ತಿತ್ತು. ಈ ಹೊಸ ಪರಂಪರೆಯು, ದಮನಿತರ ನಡುವಿನ ಒಗ್ಗಟ್ಟನ್ನು ದೃಡಗೊಳಿಸುತ್ತಿತ್ತು ಮತ್ತು ಮೇಲ್ಜಾತಿಯ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಬಹಿರಂಗವಾಗಿ ದೃಢವಾಗಿ ದಾಳಿ ನಡೆಸುವಂತೆ ಮಾಡುತ್ತಿತ್ತು. 

Nov 23, 2016

ಬಾಜಪಕ್ಕೆ ಎದುರಾಗಿರುವ ಅಗ್ನಿಪರೀಕ್ಷೆ: ಗೋವಾ ವಿದಾನಸಭಾ ಚುನಾವಣೆ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದುವರೆಗಿನ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಗೋವಾ ರಾಜ್ಯದ ವಿದಾನಸಭಾ ಚುನಾವಣೆಗಳು ಮುಂದಿನ ವರ್ಷದ ಮೊದಲಭಾಗದಲ್ಲಿ ನಡೆಯಲಿವೆ. ಮೂರು ಕಾರಣಗಳಿಗಾಗಿ ಈ ಚುನಾವಣೆಗಳು ಮೊದಲಬಾರಿಗೆ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಮಹತ್ವ ಪಡೆಯಲಾರಂಬಿಸಿವೆ. ಈ ಮೂರು ಕಾರಣಗಳನ್ನು ತಿಳಿದು, ಸದ್ಯದ ಅಲ್ಲಿನ ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವ ಮುಂಚೆ ಗೋವಾದ ರಾಜಕೀಯ ಹಿನ್ನೆಲೆಯನ್ನು ಒಮದಿಷ್ಟು ಅವಲೋಕಿಸೋಣ: 

1985ರವರೆಗು ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ, ನಂತರದಲ್ಲಿ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ ಪಡೆದು 40 ಸ್ಥಾನಗಳ ವಿದಾನಸಭೆ ರಚನೆಯಾಯಿತು. ಅಲ್ಲಿಯವರೆಗು ಶಕ್ತಿಶಾಲಿಯಾಗಿಯು, ಪ್ರಬಾವಶಾಲಿಯೂ ಆಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ನಂತರದ ದಿನಗಳಲ್ಲಿ ನಿದಾನವಾಗಿ ನೇಪಥ್ಯಕ್ಕೆ ಸರಿಯುತ್ತ ಕಾಂಗ್ರೆಸ್ ಮತ್ತು ಬಾಜಪಗಳು ಬೆಳೆಯುವಂತಾಯಿತು.

Nov 21, 2016

ಜಾತಿಗಣತಿಯ ವರದಿ ಬಹಿರಂಗ ಪಡಿಸದ ಸರಕಾರ: ಮೇಲ್ವರ್ಗಗಳ ಒತ್ತಡಕ್ಕೆ ಮಣಿದರೇ ಮುಖ್ಯಮಂತ್ರಿಗಳು?

ಸಾಂದರ್ಭಿಕ ಚಿತ್ರ: ಬ್ಯುಸಿನೆಸ್ ಲೈನ್
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಚುನಾವಣೆಗಳಿಗೂ ಮುಂಚೆ ಹೇಳಿದಂತೆಯೇ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನು ( ಇನ್ನೊಂದು ಅರ್ಥದಲ್ಲಿ ಜಾತಿಗಣತಿ), ಮೇಲ್ವರ್ಗಗಳ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಾಡಿ ಮುಗಿಸಿದರು. ಇವತ್ತು ನಾವೇನೇ ಜಾತಿವಿನಾಶದ ಆದರ್ಶದ ಮಾತುಗಳನ್ನು ಆಡಿದರೂ ಜಾತಿ ಎನ್ನುವುದು ಈ ದೇಶದ ಕಟುವಾಸ್ತವ ಎಂಬುದನ್ನು ಮರೆಯಬಾರದು. ಈ ಗಣತಿ ಕಾರ್ಯವನ್ನು ವಿರೋಧಿಸಿದವರೆಲ್ಲ ಜಾತಿಪದ್ದತಿಯ ಪೋಷಕರೇ ಆಗಿದ್ದುದು ಮತ್ತು ಅಂತಹ ಮೇಲ್ವರ್ಗಗಳ ಬೆಂಬಲ ಪಡೆದ ರಾಜಕೀಯ ಪಕ್ಷಗಳೇ ಆಗಿದ್ದವು. ಸರಕಾರದ ಒಳಗೇ ಇರುವ ಹಲವು ಮೇಲ್ವರ್ಗಗಳ ನಾಯಕರುಗಳೇ ಈ ಜಾತಿ ಗಣತಿಯನ್ನು ಆಂತರಿಕವಾಗಿ ವಿರೋಧಿಸಿದ್ದರು. ಇಷ್ಟಲ್ಲದೆ ಮೇಲ್ವರ್ಗಗಳ ಹಿಡಿತದಲ್ಲಿರುವ ನಮ್ಮ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಹ ಈ ಜಾತಿ ಗಣತಿಯನ್ನು ವಿಡಂಬನೆ ಮಾಡುತ್ತ, ಪರೋಕ್ಷವಾಗಿ ತಮ್ಮ ಅಸಮಾದಾನವನ್ನೂ ವ್ತಕ್ತ ಪಡಿಸಿದ್ದವು. ಆದರೆ ಯಥಾ ಪ್ರಕಾರ ತಮ್ಮ ನಿಲುವನ್ನು ಸಡಿಲಿಸದ ಮುಖ್ಯಮಂತ್ರಿಗಳು ಗಣತಿ ಕಾರ್ಯ ಮುಗಿಯುವಂತೆ ನೋಡಿಕೊಂಡರು, ಸ್ವಾತಂತ್ರ ಪೂರ್ವದಲ್ಲಿ ಅಂದರೆ ಬ್ರಿಟೀಷರ ಆಳ್ವಿಕೆಯಲ್ಲಿ 1931ನೇ ಇಸವಿಯಲ್ಲಿ ನಡೆದ ಜಾತಿಗಣತಿಯ ನಂತರ ಇದುವರೆಗು ಇಂಡಿಯಾದ ಯಾವ ರಾಜ್ಯದಲ್ಲು ಇಂತಹ ಗಣತಿಕಾರ್ಯ ನಡೆದಿರಲಿಲ್ಲ.

Nov 18, 2016

ಅನಾಣ್ಯೀಕರಣ ಮತ್ತು ರಾಜಕೀಯ ಲಾಭ!

ಕು.ಸ.ಮದುಸೂದನನಾಯರ್ ರಂಗೇನಹಳ್ಳಿ
ದಿನಾಂಕ 9-11-2016ರ ಬುದವಾರ ತಡಸಂಜೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಅನಾಣ್ಯೀಕರಣದ(ಡಿಮೊನೈಟೇಷನ್) ನಿರ್ದಾರವನ್ನು ಪ್ರಕಟಿಸಿದ ಕೂಡಲೆ ಇಡೀ ರಾಷ್ಟ್ರ ಒಮ್ಮೆಲೇ ಬೆಚ್ಚಿ ಬಿದ್ದಿತ್ತು. ಊಟ ಮಾಡುತ್ತ ಅಥವಾ ಊಟ ಮುಗಿಸಿ ವಾಹಿನಿಗಳಲ್ಲಿ ಸುದ್ದಿ ನೋಡುತ್ತ(ಕೇಳತ್ತ) ಕೂತಿದ್ದ ಜನತೆ ಆತಂಕಕ್ಕೀಡಾಗಿದ್ದು ಸುಳ್ಳಲ್ಲ. ಅನಾಣ್ಯೀಕರಣದ ಬಗ್ಗೆ ಹೆಚ್ಚೆನು ಮಾಹಿತಿ ಇರದ ಜನತೆಗೆ ಇದರ ಹಿಂದಿನ ಉದ್ದೇಶ ಮತ್ತು ಸಾಧಕಬಾದಕಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಮೂರು ದಿನ ಬೇಕಾಗಿತ್ತು. ಸುದ್ದಿವಾಹಿನಿಗಳನ್ನು ನೋಡಿದವರು, ವೃತ್ತಪತ್ರಿಕೆಗಳನ್ನು ಓದಿದವರು ಒಂದಷ್ಟು ಅರ್ಥಮಾಡಿಕೊಂಡರೂ, ಬಹಳಷ್ಟು ಜನ ಅವಿದ್ಯಾವಂತರಿಗೆ ಈ ನಡೆಯನ್ನು ಅರಿತುಕೊಳ್ಳಲು ಕಷ್ಟವಾಗಿದ್ದು ನಿಜ. ಅನಾಣ್ಯೀಕರಣವೆಂದರೆ ಜಾಸ್ತಿ ಮುಖಬೆಲೆಯ ಅಂದರೆ ಐನೂರು ಮತ್ತು ಸಾವಿರದ ನೋಟುಗಳನ್ನು ಸರಕಾರ ಹಿಂದಿರುಗಿ ಪಡೆದು ಅವುಗಳ ಬದಲಿಗೆ ಅದೇ ಮೌಲ್ಯದ ಕಡಿಮೆ ಮುಖಬೆಲೆಯ ನೋಟುಗಳನ್ನು ಜನರಿಗೆ ನೀಡುವುದೆಂಬ ಮಾತು ಜನರಿಗೆ ಅರ್ಥವಾದರೂ, ಅವರಿಗೆ ಅರ್ಥವಾಗದೇ ಹೋದದ್ದು. ಹೀಗೆ ನೋಟು ಬದಲಿಸಿಕೊಳ್ಳುವ ಮಾರ್ಗ ಮತ್ತು ಅವಧಿಯ ಬಗ್ಗೆ. ಅಂತೂ ಮೂರ್ನಾಲ್ಕು ದಿನಗಳ ಒಳಗೆ ಜನರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯಂತು ಸಿಕ್ಕಿತ್ತು.

ಮೇಕಿಂಗ್ ಹಿಸ್ಟರಿ: ಮೂರನೇ ಅಲೆ: ರೈತರ ಗೆರಿಲ್ಲಾ ಯುದ್ಧ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ನಗರ ರೈತರ ಗೆರಿಲ್ಲಾ ಯುದ್ಧದ ಕೆಲವು ವಿಶಿಷ್ಟ ಲಕ್ಷಣಗಳನ್ನೀಗ ನೋಡೋಣ; ಆ ಯುದ್ಧದ ಸಾಧನೆಗಳು ಮತ್ತು ಅದು ಸೃಷ್ಟಿಸಿದ ಸಂಕಟಗಳು ಶತ್ರುಗಳನ್ನು ಮುಗ್ಗರಿಸುವಂತೆ ಮಾಡಿದ್ದನ್ನು ನೋಡೋಣ. ನಗರದ ಬಂಡಾಯದ ಮೂರನೇ ಹಂತದಲ್ಲಿ ಸಶಸ್ತ್ರ ಹೋರಾಟವು ಬಹುಮುಖ್ಯ ಜನಪ್ರಿಯ ಹೋರಾಟವಾಗಿದ್ದದ್ದು ಸ್ಪಷ್ಟವಾಗಿದೆ. 

i) ವರ್ಗ ಸಂಯೋಜನೆಯಲ್ಲಾದ ಬದಲಾವಣೆ 
ಹೋರಾಟದ ವಿವಿಧ ಹಂತಗಳಲ್ಲಿ, ಹೋರಾಟದ ಮಾದರಿಯೂ ಬದಲಾಗುತ್ತಿತ್ತು. ಜೊತೆ ಜೊತೆಗೇ, ಚಳುವಳಿಯಲ್ಲಿನ ವರ್ಗ ಸಂಯೋಜನೆ ಮತ್ತು ಪಾತ್ರಗಳಲ್ಲೂ ಬದಲಾವಣೆಯಾಗುತ್ತಿತ್ತು. ಈ ಬದಲಾವಣೆಗಳು ಹೋರಾಟದ ಹಂತಗಳ ಮಾರ್ಪಡುವಿಕೆಯನ್ನು ಗುರುತಿಸುತ್ತಿತ್ತು ಮತ್ತು ಅಳವಡಿಸಿಕೊಂಡ ಮಾದರಿಯನ್ನು ನಿರ್ಧರಿಸುತ್ತಿತ್ತು. ಬಂಡಾಯದ ಬಗೆಗಿನ ಯಾವುದೇ ಸಾಮಾನ್ಯ ವಿಶ್ಲೇಷಣೆಯನ್ನೂ ಈ ಅಂಶದ ಆಧಾರದ ಮೇಲೆ ನಿರ್ಧರಿಸುವುದು ಅವಶ್ಯಕ. 

Nov 17, 2016

ಬ್ಯಾಂಕುಗಳ ಮುಂದೆ ಬಸವಳಿದ ಭಾರತ.

ಡಾ.ಅಶೋಕ್.ಕೆ.ಆರ್
ಇಡೀ ದೇಶ ಅಚ್ಚರಿ ಮತ್ತು ಆಘಾತಕ್ಕೊಳಗಾಗಿ ಒಂದು ವಾರವಾಯಿತು. ಭ್ರಷ್ಟಾಚಾರ ರಹಿತ, ಅಭಿವೃದ್ಧಿಗೆ ಪೂರಕವಾಗಿ ಆಡಳಿತ ನೀಡುವ ಆಶ್ವಾಸನೆಯೊಂದಿಗೆ ಕೇಂದ್ರದಲ್ಲಿ ಅಧಿಕಾರವಿಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಕೊಟ್ಟ ಮೊದಲ ಅಚ್ಚರಿಯಿದು. ಅಚ್ಚರಿಗೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅಚ್ಚರಿ ಆಘಾತವಾಗಿ ಪರಿವರ್ತನೆಯಾಗುವುದಕ್ಕೆ ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಜನರ ಹೊಗಳಿಕೆಯ ಮಾತುಗಳು ತೆಗಳಿಕೆಯಾಗಿ ಮಾರ್ಪಡುವುದಕ್ಕೂ ಹೆಚ್ಚು ಸಮಯ ಹಿಡಿಯಲಿಲ್ಲ. ಒಳ್ಳೆಯ ಉದ್ದೇಶದಿಂದ ಕೂಡಿದೆ ಎನ್ನಿಸುವ ದೂರಗಾಮಿಯಲ್ಲಿ ಉತ್ತಮ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನಲಾದ ಯೋಜನೆಯೊಂದು ಪೂರ್ವ ಸಿದ್ಧತೆಯ ಕೊರತೆಯ ಕಾರಣದಿಂದಾಗಿ ದೇಶದ ಜನರ – ಹೆಚ್ಚಾಗಿ ಬಡ, ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದ ಜನರ – ದಿನಗಳನ್ನೇ ಏರುಪೇರುಮಾಡಿಬಿಟ್ಟಿದೆ. ದೇಶಕ್ಕೆ ಒಳ್ಳೇದಾಗುತ್ತೇನೋ ಎಂಬ ನಿರೀಕ್ಷೆಯಿಂದ ಜನರೂ ಒಂದು ಮಟ್ಟಿಗೆ ತಾಳ್ಮೆಯಿಂದಲೇ ಕಷ್ಟವನ್ನನುಭವಿಸುತ್ತಿದ್ದಾರೆ. ನಿಜಕ್ಕೂ ಪ್ರಧಾನ ಮಂತ್ರಿ ಮೋದಿಯವರ ಈ ನಿರ್ಧಾರದಿಂದ ಒಳ್ಳೆಯದಾಗುತ್ತದಾ?

Nov 15, 2016

ಜನಪರ ಕೆಲಸಗಳ ಜೊತೆಯೇ ಶಕ್ತಿರಾಜಕಾರಣದಲ್ಲಿಯೂ ಯಶಸ್ವಿಯಾದ ನಾಯಕ - ಶ್ರೀ ದೇವರಾಜ್ ಅರಸ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸಕ್ರಿಯ ರಾಜಕಾರಣಿಯೊಬ್ಬ ತಾನು ಮಾಡುವ ಜನಪರ ಕೆಲಸಗಳಿಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡುವುದು ತೀರಾ ಅಪರೂಪ ಮತ್ತು ವಿಶೇಷ!. ಯಾಕೆಂದರೆ ಶಕ್ತಿರಾಜಕಾರಣದ ಕುತಂತ್ರಗಳಲ್ಲಿ ಮುಳುಗಿ ಹೋಗುವ ರಾಜಕೀಯ ನಾಯಕನೊಬ್ಬ ಜನಪರವಾಗಿ ಕೆಲಸ ಮಾಡಲಾಗದಷ್ಟು ಮಟ್ಟಿಗೆ ತನ್ನ ತಂತ್ರಗಾರಿಕೆಯಲ್ಲಿ ಮುಳುಗಿ ಹೋಗಿರುವುದನ್ನು ನಾವು ಇಂಡಿಯಾದ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಹಾಗೆಯೇ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಭರದಲ್ಲಿ ರಾಜಕೀಯ ತಂತ್ರಗಾರಿಕೆಗಳಲ್ಲಿ ವಿಫಲರಾಗಿ ಹೋದ ಹಲವರನ್ನೂ ನಾವು ನೋಡಿರುವುದುಂಟು. ಇಂಡಿಯಾದ ಮಟ್ಟಿಗೆ ಜನಪರ ಕಾರ್ಯಗಳನ್ನೂ ಹಾಗು ಶಕ್ತಿ ರಾಜಕಾರಣವನ್ನೂ ಒಟ್ಟೊಟ್ಟಿಗೆ ಮಾಡಿಕೊಂಡು ಅದರಲ್ಲಿ ಗೆದ್ದವರ ಸಂಖ್ಯೆ ತೀರಾ ವಿರಳ.

Nov 14, 2016

ದ್ವಂದ್ವದಲ್ಲಿರುವ ಜನತಾದಳದ ಮುಂದಿನ ನಡೆಗಳು?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಅರ್ಥವಾಗುವ ಒಂದು ವಿಷಯವೆಂದರೆ: ಆಡಳಿತಾರೂಢ ಕಾಂಗ್ರೆಸ್ ವಿರೋಧಪಕ್ಷಗಳಿವೆಯೆಂಬುದನ್ನು ಮರೆತಂತೆ ತನ್ನ ಪಾಡಿಗೆ ತಾನು ಅಡರಿದ ಮಂಪರಿನಲ್ಲಿ ಆಡಳಿತ ನಡೆಸುತ್ತಿದ್ದರೆ (ಆಡಳಿತದ ವೈಖರಿಯ ಬಗ್ಗೆ ಬೇರೆಯದೇ ಆಗಿ ಬರೆಯಬೇಕಾಗುತ್ತದೆ), ಅಧಿಕೃತ ವಿರೋಧಪಕ್ಷವಾದ ಬಾಜಪ ವಸ್ತುನಿಷ್ಠವಾಗಿ ಆಡಳಿತದ ಲೋಪದೋಷಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಹಾಗು ಜನಪರ ಆಡಳಿತದ ಬಗ್ಗೆ ಸರಕಾರದ ಕಣ್ಣು ತೆರೆಸುವ ಯಾವುದೇ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ, ಕೇವಲ ಜನರನ್ನು ಬಾವನಾತ್ಮಕವಾಗಿ ಕೆರಳಿಸುವಂತಹ ಜನಪ್ರಿಯವಾಗಬಲ್ಲಂತ ವಿಷಯಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ತನ್ನ ರಾಜಕೀಯ ಮಾಡುತ್ತಿದೆ (ಇದನ್ನು ಸಹ ಪ್ರತ್ಯೇಕವಾಗಿ ಬರೆಯಬಹುದಾಗಿದೆ).

Nov 12, 2016

ಜಾತಿ ಮತ್ತು ಧರ್ಮ ರಾಜಕಾರಣಗಳ ಸುಳಿಯಲ್ಲಿ ಉತ್ತರಪ್ರದೇಶದ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಉತ್ತರ ಪ್ರದೇಶದ ರಾಜ್ಯವಿದಾನಸಭೆಗೆ 2017ರ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಿಗಾಗಿ ಬಹುತೇಕ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿದ್ದು,ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿಷಯಗಳಿಗೆ ಪ್ರದಾನ್ಯತೆ ಕೊಡುತ್ತ ಚುನಾವಣೆಯ ಕಾವನ್ನು ಏರಿಸುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜನರ ಬಾವನಾತ್ಮಕ ವಿಷಯಗಳಿಗೇ ಹೆಚ್ಚು ಮಹತ್ವ ನೀಡುತ್ತ, ಜಾತಿ ಧರ್ಮಗಳ ನೆಲೆಯಲ್ಲಿಯೇ ಮತ ಪಡೆಯುವ ಹುನ್ನಾರ ನಡೆಸಿವೆ. ಉತ್ತರ ಪ್ರದೇಶದ ಮಟ್ಟಿಗೆ ಜಾತಿ ರಾಜಕಾರಣ ತೀರಾ ವಾಸ್ತವವಾಗಿದ್ದು, ಈಗಾಗಲೇ ಜಾತಿ ಸಮೀಕರಣಗಳ ಲೆಕ್ಕಾಚಾರಗಳು ಎಲ್ಲ ಪಕ್ಷಗಳ ಆಂತರೀಕ ವಲಯದಲ್ಲಿ ಮಹತ್ವ ಪಡೆಯುತ್ತಿವೆ.

Nov 11, 2016

ದಲಿತಶಕ್ತಿಯ ವಿರುದ್ದ ಒಗ್ಗಟ್ಟಾಗುತ್ತಿರುವ ಉತ್ತರಪ್ರದೇಶದ ರಾಜಕೀಯ ಪಕ್ಷಗಳು.

ku sa madhusudhan
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಒಬ್ಬ ದಲಿತ ನಾಯಕಿ ಮಾಯಾವತಿಯವರನ್ನು ಮತ್ತು ದಲಿತರ ರಾಜಕೀಯ ದ್ವನಿಯಾದ ಬಹುಜನ ಪಕ್ಷವನ್ನು ಮುಗಿಸುವ ಒಂದು ಷಡ್ಯಂತ್ರ ಉತ್ತರ ಪ್ರದೇಶದಲ್ಲಿ ಸದ್ದಿರದೆ ನಡೆಯುತ್ತಿದೆ. ಇನ್ನೇನು ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಬಹುಜನ ಪಕ್ಷವನ್ನು ಸೋಲಿಸುವ ಮೂಲಕ ದಲಿತರ ದನಿಯನ್ನು ಹತ್ತಿಕ್ಕುವ ರಾಜಕೀಯ ಚದುರಂಗದಾಟ ಈಗಾಗಲೇ ಶುರುವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಂ ಸಮುದಾಯ ತದನಂತರ ನಡೆದ ಕೆಲವು ಕೋಮುಗಲಭೆಗಳಲ್ಲಿ ಸಮಾಜವಾದಿ ಪಕ್ಷ ತೆಗೆದುಕೊಂಡ ನಿರ್ದಾರಗಳಿಂದ ಅಸಮಾದಾನಗೊಂಡು ಅದರಿಂದ ದೂರ ಸರಿಯುತ್ತಿದೆಯೆಂಬ ಬಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಇದರ ಲಾಭ ಪಡೆಯಲು ಹೊರಟ ಬಹುಜನ ಪಕ್ಷ ಈಗಾಗಲೇ ತಾನು ಸಿದ್ದಪಡಿಸಿಕೊಂಡಿರುವ ದಲಿತ ಮತ್ತು ಬ್ರಾಹ್ಮಣ ಮತಬ್ಯಾಂಕಿನ ಜೊತೆಗೆ ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ನಿರ್ದರಿಸಿ ಪಶ್ಚಿಮ ಉತ್ತರಪ್ರದೇಶದ ಸುಮಾರು 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟು ನೀಡಲು ನಿರ್ದರಿಸಿತು.

ಮೇಕಿಂಗ್ ಹಿಸ್ಟರಿ: ರಾಜನ ಉಗ್ರ ಪ್ರವಾಸ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1830ರ ಡಿಸೆಂಬರ್ 14ರಿಂದು 1831ರ ಜನವರಿ 10ರವರೆಗೆ ಶತ್ರುಗಳು ರೈತರಲ್ಲಿ ಭೀತಿಯನ್ನುಟ್ಟಿಸಲು ಪ್ರಚಾರ ನಡೆಸಿದರು. ಈ ಭೀತಿಯ ಪ್ರಚಾರವನ್ನು ರಾಜನ ಪ್ರವಾಸದ ಭಾಗವಾಗಿ ನಡೆಸಲಾಯಿತು; ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತೊಂದರೆಗೀಡಾದ ಪ್ರದೇಶಗಳಿಗೆ ರಾಜ ಪ್ರವಾಸ ನಡೆಸುತ್ತಿದ್ದ. 

ರಾಜನೊಂದಿಗೆ ಸಾವಿರ ಸೊವರ್ಗಳು, 200 ಮಂದಿ ಅಂಗರಕ್ಷಕರು ಮತ್ತು ಮೂರು ಬೆಟಾಲಿಯನ್ನಿನಷ್ಟು ಕಾಲಾಳು ಸೈನಿಕರಿದ್ದರು. ರೈತರನ್ನು ಸಂತೈಸುವುದು ಇದರ ಉದ್ದೇಶವಾಗಿತ್ತು, ಆದರೆ ವಾಸ್ತವದಲ್ಲಿ, ರೈತರು ಪ್ರತಿರೋಧಿಸುವ ಧೈರ್ಯವನ್ನೂ ಮಾಡಬಾರದೆಂಬ ನಿಟ್ಟಿನಲ್ಲಿ ನಡೆದ ಪ್ರಭುತ್ವದ ಶಕ್ತಿ ಪ್ರದರ್ಶನವಾಗಿತ್ತಿದು. 

ಉಪಲಬ್ಧತೆ

ಪ್ರವೀಣಕುಮಾರ್ ಗೋಣಿ 
ಎದೆಯ ಬಾಗಿಲ ತೆರೆಯದೆ 
ಬಂದು ಪವಡಿಸುವನೇ ಪರಮಾತ್ಮ ?
ಭೋಗದ ಬಲೆಯಲ್ಲಿ ಸಿಲುಕಿ 
ಕಾಣೆಯಾಗಿಹ ಮನಕೆ ತಾಕೀತೆ 
ಅವನ ಬರುವೆಯಾ ಪುಳಕ ?


Nov 9, 2016

ಮಾಹಿತಿ ಹಕ್ಕು ಮತ್ತು ರಾಜಕೀಯ ಪಕ್ಷಗಳ ಜಾಣಮೌನ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇವತ್ತು ಮಾಹಿತಿ ಹಕ್ಕು ಕಾಯಿದೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಒಂದು ದಶಕದ ಹಿಂದೆ ಶಾಸನವಾಗಿ ಜಾರಿಗೆ ಬಂದಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ಹಾಗು ಹಲವು ರಾಜ್ಯ ಸರಕಾರಗಳ ಭ್ರಷ್ಟತೆಯ ಹಲವು ಪ್ರಕರಣಗಳು ಬಯಲಾಗಿವೆ,ಆಗುತ್ತಿವೆ.ಅದರಲ್ಲೂ ಪತ್ರಕರ್ತರುಗಳ ಹಾಗು ನಮ್ಮವರೇ ಆದ ಭ್ರಷ್ಟಾಚಾರದ ವಿರುದ್ದ ಸತತವಾಗಿ ಹೋರಾಡುತ್ತಿರುವ ಶ್ರೀಯುತ ಹಿರೇಮಠರಂತವರ ಕೈಲಿ ಸಿಕ್ಕ ಈ ಆಯುಧ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.. ದೇಶದಾದ್ಯಂತ ಇರುವ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯಿದೆಯನ್ನು ಬಳಸಿ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರೆಂಬ ಹೊಸದೊಂದು ಸಮುದಾಯವೇ ಸೃಷ್ಠಿಯಾಗಿದೆ. ಯಾಕಾದರೂ ಈ ಕಾಯಿದೆಯನ್ನು ಜಾರಿಗೆ ತಂದೆವೋ ಎಂದು ರಾಜಕಾರಣಿಗಳು ಇವತ್ತು ಪರಿತಪಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳೂ ಈ ಕಾಯಿದೆಯಿಂದಾಗಿವೆ. ಸಮಾಜಸೇವಕರ ಮುಖವಾಡ ಹಾಕಿಕೊಂಡ ಕೆಲವರು ಈ ಕಾಯ್ದೆಯನ್ನು ಬಳಸಿಕೊಂಡು ಪಡೆದ ಅಧಿಕೃತ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಸರಕಾರದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ ದುಡ್ಡು ಮಾಡುವ ದಂದೆಯೊಂದನ್ನು ಸಹ ಶುರು ಮಾಡಿರುವುದು ಕೆಲವೆಡೆ ಕಂಡು ಬರುತ್ತಿದೆ. ಇಂತಹ ಕೆಲವು ದೌರ್ಬಲ್ಯಗಳ ಹೊರತಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕಾಯಿದೆ ಸ್ವಲ್ಪ ಮಟ್ಟಿಗಾದರು ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.

Nov 8, 2016

ಮೊದಲು ಕವಿತೆ ಹೀಗಿರಲಿಲ್ಲ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ಮೊದಲು ಕವಿತೆ ಹೀಗಿರಲಿಲ್ಲ
ಕಾಡಂಚಲ್ಲಿ ದನಕರುಗಳ ಮೇಯಿಸುತ್ತಿದ್ದ ಹರಯದ ಹುಡುಗ ಹುಡುಗಿಯರ ಕೊರಳಲ್ಲಿ ಹುಟ್ಟಿ
ಊರೊಳಗಿನ
ರಾಗಿ ಬೀಸುವ ಹೆಂಗಸರ ಗಂಟಲೊಳಗೆ
ಹರಯದ ಹುಡುಗಿಯರ ಹೊಸಗೆಯ ಆರತಿಯೊಳಗೆ
ಜೋಳಿಗೆ ಹಾಕಿ ಕೇರಿಗಳ ತಿರುಗುತ್ತಿದ್ದಅಲೆಮಾರಿ ಕೊರಳುಗಳೊಳಗೆ
ಹಾಡುಗಳಾಗಿ ಬೆಳೆಯುತ್ತ ಹೋಯಿತು.

Nov 6, 2016

ಬಾಲ್ಯವೆಂದರೆ…..!

ಕು.ಸ.ಮಧುಸೂದನ್
ಬಾಲ್ಯದ ಬಗ್ಗೆ ಬಹಳ ಜನ
ರೊಮ್ಯಾಂಟಿಕ್
ಆಗಿ ಮಾತಾಡುತ್ತಾರೆ
ನನ್ನ ಕೈಲಿ ಆಗೋದಿಲ್ಲ.

ಬಾಲ್ಯವನ್ನು ನೆನಪಿಸಿಕೊಳ್ಳುವುದೆಂದರೆ
ನನಗೆ
ಹಳೆ ಗಾಯದ ಕಲೆಗಳನ್ನು
ಅದರ ನೋವನ್ನು 
ನೆಕ್ಕಿದಂತಾಗುತ್ತದೆ.

Nov 5, 2016

ನೀನು ಮಾತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನೀನೊಂದು ಬರೀ ರಕ್ತಮಾಂಸದ
ಏರುಯೌವನದ ಜೀವಂತ ಹೆಣ್ಣು 
ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು!

ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನು
ನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನು
ನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನು
ನಾನು ಕಳೆದುಕೊಂಡ ಎಲ್ಲವನೂ
ಮೊಗೆಮೊಗೆದು ಕೊಡಬಲ್ಲ 
ಸಾವಿರದ ನೋವಿರದ ದೇವತೆ ನೀನು.

Nov 4, 2016

ಮೇಕಿಂಗ್ ಹಿಸ್ಟರಿ: ನಗರದ ರೈತಾಪಿ ಬಂಡಾಯ ಭಾಗ 3

ashok k r
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಈ. ರೈತರ ವರ್ಗ ಬೇಡಿಕೆಗಳು 
ಬುಡಿ ಬಸಪ್ಪ 1830ರಲ್ಲಿ ನಗರದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿದ್ದ. ತನ್ನ ಪ್ರತಿನಿಧಿಯಾಗಿ ಮಾನಪ್ಪನನ್ನು ನೇಮಿಸಿದ್ದ. ಮಾನಪ್ಪನನ್ನು ಬುಡಿ ಬಸಪ್ಪನ “ಪ್ರಧಾನ ದಂಡನಾಯಕ”ನೆಂದೂ ಕರೆಯಲಾಗುತ್ತಿತ್ತು. (96) 

ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ 1830ರ ಆಗಷ್ಟ್ 23ರಂದು ರ್ಯಾಲಿಗೆ ಕರೆ ನೀಡಲಾಗಿತ್ತು. ಸಾವಿರಾರು ರೈತರು ಅದರಲ್ಲಿ ಭಾಗವಹಿಸಿದರು. ನೂರಾರು ಎತ್ತಿನಗಾಡಿಗಳು ಹೊಸಂತೆಯ ಮೈದಾನವನ್ನು ತುಂಬಿದವು ಎಂದು ರಾಮಭಟ್ಟ ಬರೆಯುತ್ತಾರೆ. ರೈತರು ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಬಂದಿದ್ದರು. 

Nov 3, 2016

ಸರ್ಜಿಕಲ್ ಸ್ಟ್ರೈಕ್ ರಾಜಕೀಯ.

ಸಾಂದರ್ಭಿಕ ಚಿತ್ರ.
ಡಾ.ಅಶೋಕ್.ಕೆ.ಆರ್
ಯಾವುದು ನಡೆಯಬಾರದಿತ್ತೋ ಅದೇ ನಡೆಯುತ್ತಿದೆ. ಸೈನಿಕ ಕಾರ್ಯಾಚರಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರ್ನಡೆಯನ್ನು ನಾನಂತೂ ಇಲ್ಲಿಯವರೆಗೆ ಕಂಡಿರಲಿಲ್ಲ. ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಅತೀವ ಆಸಕ್ತಿ ತೋರುತ್ತಿದೆ. ಈ ಆಸಕ್ತಿಗೆ ಕಾರಣ ಬಾಗಿಲಲ್ಲೇ ಇರುವ ಹಲವು ರಾಜ್ಯಗಳ ಚುನಾವಣೆ. ಅದರಲ್ಲೂ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಸೈನಿಕರ ಬಗ್ಗೆ ಸೈನ್ಯದ ಬಗ್ಗೆ ಯಾವುದೇ ರೀತಿಯ ಪ್ರಶ್ನೆ ಕೇಳುವುದು, ಸೈನಿಕರ ಉಪಟಳಗಳ ಬಗ್ಗೆ ಮಾತಾಡುವುದು, ಅದನ್ನು ಖಂಡಿಸುವುದೇ ದೇಶದ್ರೋಹ ಎನ್ನುವಂತಹ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ. ಸೈನಿಕರೆಂದರೆ ಪ್ರಶ್ನಾತೀತರೇ? ಸೈನ್ಯವನ್ನು ಹೊಗಳುವುದಷ್ಟೇ ದೇಶಪ್ರೇಮವೇ? ಎಲ್ಲಕ್ಕಿಂತ ಮುಖ್ಯವಾಗಿ ಸೈನಿಕ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಸರಿಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ನವ ಭಾರತದ ‘ದೇಶಭಕ್ತ’ರ ದೃಷ್ಟಿಯಲ್ಲಿ ದೇಶದ್ರೋಹವೇ ಹೌದು.