Aug 29, 2018

ಮನುಷ್ಯರ ಆತ್ಮದಿಂದಾಗುವ ದೇಶ

ಕು.ಸ.ಮಧುಸೂದನರಂಗೇನಹಳ್ಳಿ
ದೇಶವೆನ್ನೋದು
ಕಲ್ಲು ಮಣ್ಣಿನ ಭೂಮಿ ಮಾತ್ರವಾಗಿದ್ದಾಗ
ಬಣ್ಣದ ಭೂಪಟದಲ್ಲಿ ಬರೆದ ಕಲ್ಪನೆಯ ಗಡಿಗಳು 
ಮಾತ್ರವಾದಾಗ
ಅದನ್ನು ಆರಾಧಿಸುವವರು ಭಕ್ತರಾಗುತ್ತಾರೆ
ಅಲ್ಲಗೆಳೆಯುವವರು ದ್ರೋಹಿಗಳಾಗುತ್ತಾರೆ.
ದೇಶವೆನ್ನುವುದು ರಕ್ತಮಾಂಸಗಳಿಂದ ಮಾಡಿದ ಮನುಷ್ಯರ
ಆತ್ಮದಿಂದಾಗಿದ್ದೆಂದು ಬಾವಿಸಿ
ಮತ್ತವರ ಸುಖದು:ಖ ನೋವು ನಲಿವುಗಳು 
ಎಲ್ಲರದೂ ಆದಾಗ ಮಾತ್ರ 
ದೇಶದೊಳಗೆ ದ್ವೇಷವಿಲ್ಲವಾಗಿ
ದೇಶವಾಸಿಗಳು ಮಾತ್ರ ಉಳಿಯುತ್ತಾರೆ
ಆಗ ದೇಶದ್ರೋಹದ ಬಗ್ಗೆಯಾಗಲಿ ದೇಶಭಕ್ತಿಯ ಬಗ್ಗೆಯಾಗಲಿ
ಮಾತಾಡುವ ಅಗತ್ಯವಿರುವುದಿಲ್ಲ.

No comments:

Post a Comment