ಡಿಸೆಂ 26, 2012

ಆದರ್ಶವೇ ಬೆನ್ನು ಹತ್ತಿ....ಭಾಗ 13



ಡಾ ಅಶೋಕ್ ಕೆ ಆರ್

ಕಾಂತರಾಜ್ ಸರ್ ಹೇಳಿದಂತೆ ನಡೆದುಕೊಂಡರು. ಪ್ರಿನ್ಸಿಪಾಲರು, ಇತರೆ ಸಿಬ್ಬಂದಿಗಳು ಎಷ್ಟು ಹೇಳಿದರೂ ಕೇಳಲಿಲ್ಲ. ‘ನಾನಿದನ್ನು ಮುಂಚೆಯೇ ನಿರ್ಧರಿಸಿದ್ದೆ. ಇದೇನು ಆತುರದ ತೀರ್ಮಾನವಲ್ಲ’ ಎಂದ್ಹೇಳಿ ರಾಜೀನಾಮೆ ಕೊಟ್ಟುಬಿಟ್ಟರು. ಕಾಲೇಜಿನ ಪರವಾಗಿ ಅವರಿಗೊಂದು ಬೀಳ್ಗೊಡುಗೆ ಸಮಾರಂಭ ಇಟ್ಟುಕೊಳ್ಳಬೇಕೆಂಬ ವಿದ್ಯಾರ್ಥಿಗಳ ಆಸೆಗೂ ಬೇಡವೆಂದುಬಿಟ್ಟರು. ರಾಜೇಶ್ ಮತ್ತು ಎಂ.ಎಸ್.ಎ ಮೇಲೆ ದೂರೂ ನೀಡಲಿಲ್ಲ, ರೇಗಲೂ ಇಲ್ಲ, ಅನ್ಯರ ಬಳಿ ಕೆಟ್ಟಮಾತುಗಳನ್ನೂ ಆಡಲಿಲ್ಲ. ನಿಜಕ್ಕೂ ಈ ವ್ಯಕ್ತಿಗೆ ಹುಚ್ಚಿರಬೇಕೆಂಬ ಅನುಮಾನ ಎಲ್ಲರಿಗೂ ಬಂತು! ಒಬ್ಬ ಕಾಂತರಾಜರ ಹೊರತಾಗಿ!

ನವೆಂ 21, 2012

ಶಮೀನ



ಅನ್ಸಿಲಾ ಫಿಲಿಪ್ ವಾಸ್

ಛೇ! ನಾನೇನ್ಮಾಡ್ಲಿ? ಶಮೀನಾಗಿಂತ ತಾನು ಚೆನ್ನಾಗಿರುವುದು ನನ್ನ ತಪ್ಪೇ? ತನಗೆ ಹೇರಳವಾಗಿ ದೊರೆತ ಸೌಂದರ್ಯದ ಕುರಿತು ಚಿಂತಿಸುತ್ತಾಳೆ ಸೀಮ.

ಸೀಮ, ಶಮೀನರ ಮನೆಯ ಇಬ್ಬರು ಅಣ್ಣಂದಿರು ಸೌದಿಯಲ್ಲಿರುವುದರಿಂದ ಆಧುನಿಕ ಸಾಮಗ್ರಿಗಳನ್ನೊಳಗೊಂಡು ಸುಂದರವಾಗೇ ಇದ್ದಿತು ಶಮೀನಾಳಿಗಿಂತ ಸೀಮ ಚೆನ್ನಾಗಿದ್ದಾಳೆ ಎಂದು ಎಲ್ಲರೂ ಹೇಳುವಾಗ ಸೀಮಳಿಗೇಕೋ ವೇದನೆಯಾಗುತ್ತಿತ್ತು. “ಶಮೀನಾ ತನ್ನ ಅಕ್ಕ ಅವಳು ಚೆನ್ನಾಗಿ ಕಾಣಬೇಕು” ಇದು ಸೀಮಳ ಯೋಚನೆ.

ನವೆಂ 20, 2012

ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ....


ಡಾ ಅಶೋಕ್ ಕೆ ಆರ್
 
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.

ನವೆಂ 18, 2012

ಆದರ್ಶವೇ ಬೆನ್ನು ಹತ್ತಿ ... ಭಾಗ 12



ಡಾ ಅಶೋಕ್ ಕೆ ಆರ್
ಬೆಳಿಗ್ಗೆ ಎದ್ದ ಕೂಡಲೇ ಲೋಕಿಗೆ ಸಯ್ಯದನ ನೆನಪಾಯಿತು. ‘ನಿನ್ನೆ ನಡೆದ ವಿಷಯಗಳ್ಯಾವುದನ್ನೂ ಆತನಿಗೆ ತಿಳಿಸಲೇ ಇಲ್ಲವಲ್ಲ. ಕಾಂತರಾಜ್ ಸರ್ ನ ಅಮಾನತ್ತು ಮಾಡಿದ ದಿನ ಆತ ನನಗೋಸ್ಕರ ಕಾಲೇಜೆಲ್ಲ ಹುಡುಕಾಡಿದನಂತೆ. ಅಂತಹದ್ರಲ್ಲಿ ನಿನ್ನೆ ನಾನು ಅವನಿಗೆ ಒಂದು ಮಾತೂ ತಿಳಿಸಲಿಲ್ಲವಲ್ಲ. ಪೂರ್ಣಿಯೊಡನೆ ಮಾತನಾಡಿದ ಖುಷಿಯಲ್ಲಿ ಸಯ್ಯದನನ್ನೇ ಮರೆತು ಬಿಟ್ಟೆ’ ಒಂದಷ್ಟು ಬೇಸರವಾಯಿತು ತನ್ನ ವರ್ತನೆಯ ಬಗ್ಗೆ. ಅವನ ಮನೆಗೆ ಹೋಗಿ ವಿಷಯ ತಿಳಿಸಿ ಕಾಲೇಜಿಗೆ ಅವನೊಡನೆಯೇ ಹೋದರಾಯಿತು ಎಂದುಕೊಂಡು ಸ್ನಾನ ಮಾಡಿ ‘ತಿಂಡಿ ಕ್ಯಾಂಟೀನಿನಲ್ಲೇ ತಿಂತೀನಿ’ ಎಂದು ಸ್ನೇಹಳಿಗೆ ತಿಳಿಸಿ ಸಯ್ಯದ್ ಮನೆ ಕಡೆ ಹೊರಟ. ಬಸ್ಸಿನಲ್ಲಿ ಹೋದರೆ ಮೂರು ನಿಮಿಷದ ಪಯಣ, ನಡಿಗೆಯಲ್ಲಿ ಹದಿನೈದು ನಿಮಿಷ ಸಾಕು. ನಡೆದೇ ಹೊರಟ. ಮನೆಯ ಆವರಣದಲ್ಲಿದ್ದ ತೆಂಗಿನಮರದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ಸಯ್ಯದ್. ಕಾಫಿ ಹೀರುತ್ತ ಪತ್ರಿಕೆ ಓದುತ್ತಿದ್ದ. ಗೇಟಿನ ಶಬ್ದವಾದಾಗ ತಿರುಗಿ ನೋಡಿದ.

ನವೆಂ 15, 2012

ರಿಮೋಟಿಗಿಂದು ನಾನೇ ಒಡತಿ!

ಡಾ ಅಶೋಕ್ ಕೆ ಆರ್
ಇವರು ನಿನ್ನೆ ರಾತ್ರಿ ಚಿತ್ರದುರ್ಗಕ್ಕೆ ಹೊರಟರು, ಇವರ ಅಕ್ಕನ ಮಗಳಿಗೆ ಹೆರಿಗೆಯಾಗಿತ್ತು. ವಾರದಿಂದ ಬೆನ್ನು ನೋವು ನನಗೆ, ಮಗನೊಟ್ಟಿಗೆ ಇನ್ನೊಂದು ದಿನ ಹೋದರಾಯಿತೆಂದು ಸುಮ್ಮನಾಗಿದ್ದೆ. ಹಿರಿಮಗ ಹುಣಸೂರಿಗೆ ಸ್ನೇಹಿತನ ಮದುವೆಗೆಂದು ಇವತ್ತು ಬೆಳಿಗ್ಗೆ ಹೊರಟ. ಸೊಸೆ, ಮೊಮ್ಮಗಳು ಅವನೊಂದಿಗೆ ಹೋಗಿದ್ದಾರೆ. ಗೆಳೆಯರೆಲ್ಲಾ ಬಂದಿದ್ದಾರೆ ಅನ್ನೋ ನೆಪ ಮಾಡಿಕೊಂಡು ಬೆಳಗಿನ ಜಾವ ಐದು ಘಂಟೆಗೇ ಬೈಕನ್ನೇರಿ ಕಿರಿಯವನು ಗೋಪಾಲಸ್ವಾಮಿ ಬೆಟ್ಟಕ್ಕೆ ಹೋದ. ಎಂಟು ಘಂಟೆಯವರೆಗೆ ಪತ್ರಿಕೆ ತಿರುವಿ ಹಾಕಿ ಸ್ನಾನಕ್ಕೆ ಹೋದೆ. ಹಂಡೆಯಿಂದ ಬಕೇಟಿಗೆ ನೀರು ವರ್ಗಾಯಿಸುವುದರಲ್ಲಿ ‘ಸ್ನಾನ ಯಾಕೆ ಮಾಡಬೇಕಿವತ್ತು?’ ಎಂದೆನ್ನಿಸಿ ಕೈಕಾಲಿಗೊಂದು ಮುಖ ತೊಳೆಯಲೊಂದು ಚೊಂಬು ನೀರು ಖರ್ಚು ಮಾಡಿ ಉಳಿದದ್ದನ್ನು ಬಚ್ಚಲಿಗೆ ಚೆಲ್ಲಿ ಹೊರಬಂದೆ.

ನವೆಂ 5, 2012

ಜೀವೋತ್ಪಾದಕರ ‘ಹತ್ಯೆ’ಯ ಕಥೆ!



jagadish koppa

ಡಾ ಅಶೋಕ್ ಕೆ ಆರ್

ಭುವಿಯ ಮೇಲೆ ಮೊದಲ ಜೀವಿಯ ಉಗಮವಾಗಿದ್ದು ನೀರಿನಲ್ಲಿ. ಮಂಗಳ ಮತ್ತಿನ್ನಿತರ ಗ್ರಹಗಳ ಮೇಲಿನ ಅಧ್ಯಯನದಲ್ಲಿ ಪ್ರಾಮುಖ್ಯತೆ ದೊರೆಯುವುದು ನೀರಿನ ಅಸ್ತಿತ್ವಕ್ಕೆ. ನಮ್ಮ ದೇಹತೂಕದ ಅರ್ಧಕ್ಕೂ ಅಧಿಕ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ ಎಂಬುದು ಕೂಡ ನೀರಿನ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ. “ನದಿಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ” ಎಂಬರ್ಥದ ಮಾತುಗಳನ್ನು ಕೇಳಿದಾಗಲೆಲ್ಲ ನನ್ನಲ್ಲಿ ನೂರಾರು ಪ್ರಶ್ನೆಗಳೇಳುತ್ತವೆ. ನದಿ ನೀರು ಸಮುದ್ರಕ್ಕೆ ಸೇರದಿದ್ದರೆ ಪ್ರಾಕೃತಿಕ ಸಮತೋಲನದಲ್ಲಿ ಏರುಪೇರುಗಳಾಗುವುದಿಲ್ಲವೇ? ಸಮುದ್ರದ ಜೀವಿಗಳ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದಿಲ್ಲವೇ? ಬೃಹತ್ ಅಣೆಕಟ್ಟು ಕಟ್ಟುವುದರಿಂದ ನದಿ ಕೆಳಗಿನ ಪಾತ್ರದ ಜೀವಸಮುದಾಯ, ನಾಗರೀಕತೆಗಳಿಗೆ ಹಾನಿಯುಂಟಾಗುವುದಿಲ್ಲವೇ? ಇನ್ನು ಬೃಹತ್ ಅಣೆಕಟ್ಟೆಗಳಿಂದ ಭೂತಾಪಮಾನದ ಏರುವಿಕೆಯೂ ಹೆಚ್ಚುತ್ತದಂತೆ! ಇಂಥ ಗೊಂದಲಗಳೇ ತುಂಬಿರುವಾಗ ಒಂದಷ್ಟು ಉತ್ತರ ದೊರಕಿಸಿದ್ದು ಡಾ ಎನ್ ಜಗದೀಶ್ ಕೊಪ್ಪರವರ ಕೃತಿ ‘ಜೀವನದಿಗಳ ಸಾವಿನ ಕಥನ’

ಆದರ್ಶವೇ ಬೆನ್ನು ಹತ್ತಿ....ಭಾಗ 11



ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ....ಭಾಗ 10


“ನೀವು ಕೊಟ್ಟಿದ್ದು ಸುಳ್ಳು ಕಂಪ್ಲೇಂಟಾ?! ಏನ್ರೀ ಫಾತಿಮಾ ನೀವು ಹೇಳ್ತಿರೋದು?!”
“ಹೌದು ಸರ್. ಪಾಪ ನಮ್ಮ ಕಾಂತರಾಜ್ ಸರ್ ಯಾವತ್ತೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ”
“ಮತ್ತೆ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ಯಾಕೆ?”
“ಇದರಲ್ಲಿ ನನ್ನ ತಪ್ಪೇನೂ ಇಲ್ಲ ಸರ್. ರಾಜೇಶ್ ಸರ್ ಮತ್ತು ಅಲಿಯ ಒತ್ತಡದಿಂದ ಇಂಥ ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ”

ನವೆಂ 2, 2012

ಭಾಷೆ, ಸಂಸ್ಕೃತಿ ಮತ್ತು ಸಮಾಜ: ಒಂದು ಸಮಾಜಶಾಸ್ತ್ರೀಯ ಪ್ರತಿಫಲನ

kannada
ಜಯಪಾಲ್ ಹಿರಿಯಾಲು 
ಕನ್ನಡ ರಾಜ್ಯೋತ್ಸವ. ಭಾರತದಲ್ಲಿ ಭಾಷೆಯ ಮೇಲೆ ಭೌಗೋಳಿಕ ಪ್ರದೇಶಗಳನ್ನು ರಚಿಸಿದ ದಿನ. ಭಾಷೆ ಮನುಷ್ಯನ ಸಾಂಘಿಕ ಜೀವನದಲ್ಲಿ ಹೊಂದಿರುವ ಪ್ರಾಮುಖ್ಯತೆಯನ್ನು ಅರಿಯಲು ಒಂದು ಪುಟ್ಟ ಪ್ರಯತ್ನ ಮಾಡುತ್ತಿರುವೆ.

ನವೆಂ 1, 2012

ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!



prakash jha

ಡಾ ಅಶೋಕ್ ಕೆ ಆರ್

ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.

ಅಕ್ಟೋ 31, 2012

Blood soaked technology


Dr Ashok K R
When we hear or see or read about countries like uganda, rwanda, congo its about the poverty stricken people, malnourished children and unending civil wars. These countries which are naturally rich with the forests which cover the most valuable minerals, the minerals which have become a necessity for modern day technology, are considered underdeveloped nations. Their blood efforts are used to build the developed nations, the technological advancement of the modern world. Can life be this much terrific in the same world where we are living? The documentary Blood in the mobiles by Frank Poulsen on the conflict minerals that are used in mobile and other companies gives a disturbing picture of the truth behind our advanced gadgets. This is the era of neo slavery and we all who use the gadgets indirectly participate in this what can be called as world war III.

ಅಕ್ಟೋ 30, 2012

. . . ದೂರದಲ್ಲಿ



ಡಾ. ಅಶೋಕ್. ಕೆ. ಆರ್
‘ದುಡಿಯೋ ವಯಸ್ನಲ್ಲಿ ಮನೇಲಿ ಕುಂತವ್ನೆ, ದಂಡಪಿಂಡ’ “ಇದ್ಯಾಕ್ ಮಗಾ ಬೆಂಗ್ಳೂರಿಗೆ ಹೋಗ್ಲಿಲ್ವಾ ಇವತ್ತು” ಬಾಗಿಲು ತಳ್ಳುತ್ತಾ ಒಳಬಂದ ಚಿಕ್ಕಪ್ಪ ಪತ್ರಿಕೆ ಓದುತ್ತಿದ್ದ ದಿಲೀಪನನ್ನು ವ್ಯಂಗ್ಯದಿಂದ ನೋಡುತ್ತಾ ಕೇಳಿದರು. ವ್ಯಂಗ್ಯದ ಅರಿವಾಗದೆ ಇರಲಿಲ್ಲ ದಿಲೀಪನಿಗೆ. ‘ಅದನ್ನೆಲ್ಲಾ ಕಟ್ಟಿಕೊಂಡು ನಿಮಗೇನ್ರಿ ಆಗಬೇಕು’ “ಓ! ಬನ್ನಿ ಚಿಕ್ಕಪ್ಪ. ಇವತ್ತೊಂದಷ್ಟು ಕಾಯಿ ಕೀಳಿಸಬೇಕಿತ್ತು ಅದಿಕ್ಕೆ ಉಳ್ಕೊಂಡೆ” ಎಂದೆನ್ನುತ್ತಾ ಪತ್ರಿಕೆ ಮಡಿಚಿದ. ‘ಬೆಂಗ್ಳೂರಿಗೆ ಹೋಗೆ ನೀನು ಕಿಸಿಯೋದೂ ಅಷ್ಟರಲ್ಲೇ ಇದೆ ಬಿಡು’ “ಹ್ಞು. ನಾನು ಈ ವಾರ ಕಾಯಿ ಕೀಳಿಸ್ಬೇಕು ಅಂದ್ಕೋತಿದ್ದೆ ನೋಡು. ಅಂದ್ಹಂಗೆ ಅಣ್ಣ ಎಲ್ಲೋದ್ರು”

ಅಕ್ಟೋ 28, 2012

ಆಯಾಮ



     ಡಾ. ಅಶೋಕ್. ಕೆ. ಆರ್.
‘ಈ ರೀತಿ ದಿನಗಟ್ಟಲೆ ಮಳೆ ಸುರಿದಿದ್ದೇ ಇಲ್ಲ ನಮ್ಮೂರಲ್ಲಿ’ ಸಂಜೆ ಆಫೀಸಿನಲ್ಯಾರೋ ಹೇಳಿದ ಮಾತುಗಳನ್ನು ಮೆಲಕುಹಾಕುತ್ತ ಕಿಟಕಿಯ ಬಳಿ ನಿಂತಿದ್ದ ರಾಜು ಮೌಳೇಶ್ವರ್. ಭೂರಮೆಯನ್ನೇ ಸೀಳಿಹಾಕುವಂತಹ ಗುಡುಗಿನ ಶಬ್ದಕ್ಕೆ ಎಚ್ಚರವಾಗಿ ರೂಮಿನಿಂದ ಹೊರಬಂದು ಮಳೆಯ ಆರ್ಭಟವನ್ನು ವೀಕ್ಷಿಸುತ್ತಿದ್ದ. ಯಾವ ಫೋನೂ ಬರದಿದ್ದರೆ ಸಾಕಪ್ಪ ಎಂದುಕೊಳ್ಳುವಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್ ಮಾಡುವ ಹಾಗಿದಿದ್ದರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡ

ಅಕ್ಟೋ 19, 2012

ತನಿಖಾ ವರದಿಯ ನೈತಿಕತೆಯೇ ಪ್ರಶ್ನಾರ್ಹವೆನಿಸತೊಡಗಿದಾಗ?!



ಡಾ ಅಶೋಕ್ ಕೆ ಆರ್

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು – ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ – ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ಪಬ್ಲಿಕ್ ಟಿ ವಿ ಹಾಕಿದೆ!!

ಅಕ್ಟೋ 18, 2012

ಆದರ್ಶವೇ ಬೆನ್ನು ಹತ್ತಿ....ಭಾಗ 10



ಆದರ್ಶವೇ ಬೆನ್ನು ಹತ್ತಿ....ಭಾಗ 9


“ಈದು ಗ್ರಾಮದಲ್ಲಿ ನಕ್ಸಲರ ಹತ್ಯೆ”

ಹೆಡ್ಡಿಂಗಿನ ಕೆಳಗೆ ಸತ್ತ ಹುಡುಗಿಯರ ಫೋಟೋ ಕೊಟ್ಟಿದ್ದರು. ಒಬ್ಬಳು ಪಾರ್ವತಿ, ಇನ್ನೊಬ್ಬಳು ಹಾಜೀಮಾ. ಯಶೋಧಾ ಎಂಬುವವಳಿಗೆ ಕೂಡ ಗುಂಡೇಟು ತಗುಲಿ ಗಾಯಗಳಾಗಿದ್ದವಂತೆ. ಈದು ಗ್ರಾಮದಲ್ಲಿ ಜನರನ್ನು ಸಂಘಟಿಸುತ್ತಿದ್ದಾಗ ಅವರ ಮೇಲೆ ಆಕ್ರಮಣ ಮಾಡಿದ ಪೋಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇವರೀರ್ವರೂ ಮೃತರಾಗಿದ್ದರು. ಘಟನೆಯ ಸಂಪೂರ್ಣ ವಿವರಗಳನ್ನು ಓದಬೇಕೆಂದು ಪ್ರಾರಂಭಿಸಿದವನು ವಿಕ್ರಮ್ ಹೊರಬರುತ್ತಿದುದನ್ನು ನೋಡಿ ಆತುರಾತುರವಾಗಿ ಪತ್ರಿಕೆಯನ್ನು ಮೇಜಿನ ಮೇಲಿಟ್ಟ. ‘ಯಾಕಿಷ್ಟು ಗಾಬರಿಗೊಂಡತಿದ್ದಾನೆ?’ ಎಂದು ಪೂರ್ಣಿಮಾ ಪತ್ರಿಕೆಯ ಮುಖಪುಟ ನೋಡಿದಳು. ‘ಇವನೇನಾದರೂ. . .’ ಸಂಶಯ ಬಂತು.

ಅಕ್ಟೋ 13, 2012

ಮಲಾಳ ಯೂಸುಫ್ ಝಾಯಿಯ ಡೈರಿಯಿಂದ



malala yousufzai

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!

ಅಕ್ಟೋ 11, 2012

ಆದರ್ಶವೇ ಬೆನ್ನು ಹತ್ತಿ....ಭಾಗ 9


ಆದರ್ಶವೇ ಬೆನ್ನು ಹತ್ತಿ....ಭಾಗ 8

 ಅವರ ಜೊತೆಯೇ ಇದ್ದ ರೂಪ “ನಿನಗೆ ವಿಷಯ ಗೊತ್ತಿಲ್ವಾ ಸಯ್ಯದ್ ಈ ಅಲಿ ಸರ್ ಮತ್ತು ಫಾತಿಮಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಮನೆಯವರೂ ಒಪ್ಪಿ ಮದುವೆಯ ಮಾತುಕತೆ ಮುಗಿದಿದೆಯಂತೆ”

“ಹೌದಾ?!! ಈ ವಿಷಯದಲ್ಲಿ ನಾವೆಲ್ಲೋ ಎಡವಿಬಿಟ್ಟಿದ್ದೀವಿ ಅನ್ನಿಸ್ತಾ ಇಲ್ವಾ ಲೋಕಿ?”

ಅಕ್ಟೋ 9, 2012

ಕದ್ದ ಸಿನಿಮಾದ ಆಸ್ಕರ್ ಪಯಣ



ranbir

ಡಾ ಅಶೋಕ್ ಕೆ ಆರ್
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?

ಅಕ್ಟೋ 4, 2012

ಆದರ್ಶವೇ ಬೆನ್ನು ಹತ್ತಿ....ಭಾಗ 8

ಆದರ್ಶವೇ ಬೆನ್ನು ಹತ್ತಿ . . . ಭಾಗ 7

ಡಾ ಪ್ರಭುಲಿಂಗಸ್ವಾಮಿ – ತಂದೆಯ ಗೆಳೆಯ. ಅವರೇ ನಿಂತು ವಿಜಿಯನ್ನು ನೋಡಿಕೊಳ್ಳುತ್ತಿದ್ದರು. ಅವರನ್ನು ಕಂಡರೆ ಲೋಕಿಗೆ ಆಗುತ್ತಿರಲಿಲ್ಲ. ಹಿಂದೆ ಲೋಕಿ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಲೋಕಿಗೆ ಇನ್ನೂ ಮರೆಯಲಾಗಿರಲಿಲ್ಲ. ಆಗ ಪ್ರಭುಲಿಂಗಸ್ವಾಮಿಯವರು ಹುಣಸೂರಿನಲ್ಲಿದ್ದರು. ಒಮ್ಮೆ ಲೋಕಿ ತನ್ನ ತಂದೆಯ ಜೊತೆ ನೆಂಟರೊಬ್ಬರ ಮದುವೆಗೆ ಹುಣಸೂರಿಗೆ ಹೋಗಿದ್ದ. ಛತ್ರದಲ್ಲಿ ಊಟ ಮುಗಿಸಿ ಆಸ್ಪತ್ರೆಗೆ ಹೋಗಿದ್ದರು. ನಾಲ್ಕು ಮುಕ್ಕಾಲಿನ ಸಮಯದಲ್ಲಿ ಒಬ್ಬ ರೈತ ತನ್ನ ಹದಿಮೂರು ಹದಿನಾಲ್ಕು ವರ್ಷದ ಮಗನೊಂದಿಗೆ ಬಂದ.

ಸೆಪ್ಟೆಂ 30, 2012

ಧರ್ಮಗುರುಗಳ ಸಹಜ ಮನಸ್ಸಿನ ಅನಾವರಣ


Habemus papam [photo source - iloveitalianmovies]

ಡಾ ಅಶೋಕ್ ಕೆ ಆರ್
ಸ್ವಾಮೀಜಿಗಳ, ಮೌಲ್ವಿಗಳ, ಒಟ್ಟಾರೆ ಎಲ್ಲ ಧರ್ಮದ ಗುರುಗಳ ಸ್ಥಾನದಲ್ಲಿರುವವರ ಮನಸ್ಥಿತಿ ಎಂತಹುದು ಎಂಬುದು ನಿಜಕ್ಕೂ ಕುತೂಹಲದ ವಿಷಯ. ವರುಷದ ಮುನ್ನೂರೈವತ್ತು ದಿನವೂ ಅವರು ಧರ್ಮಚಿಂತನೆಯಲ್ಲೇ ತೊಡಗುತ್ತಾರಾ? ಹಳೆಯ ತಪ್ಪುಗಳು, ಹಿಂದಿನ ದಿನಗಳು, ಆ ದಿನಗಳ ಜನರ ಒಡನಾಟ ಅವರಿಗೆ ಕಾಡುವುದೇ ಇಲ್ಲವಾ? ನೆನಪಿನಾಳದಿಂದ ಒತ್ತರಿಸಿ ಬರುವ ಭಾವನೆಗಳಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವೇ? ದೂರದಲ್ಲಿ ನಿಂತು ಧರ್ಮಗುರುಗಳನ್ನು ದೇವರ ಅವತಾರದಂತೆ ದೇವದೂತನಂತೆ ನೋಡುವವರಿಗೆ ಆ ಧರ್ಮಗುರುಗಳೂ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ ಆತನಿಗೂ ಒಂದು ಮನಸ್ಸಿದೆ ಎಂಬುದೇ ಮರೆತುಹೋಗಿರುತ್ತದೆ. ಪೋಪ್ ಸ್ಥಾನಕ್ಕೆ ಆರಿಸಲ್ಪಟ್ಟ ಒಬ್ಬ ವ್ಯಕ್ತಿಯ ಮನಸ್ಥಿತಿಯ ಅನಾವರಣವಾಗಿರುವುದು ನನ್ನಿ ಮೊರೆಟ್ಟಿ [Nanni Moratti] ನಿರ್ದೇಶನದ ಇಟಾಲಿಯನ್ ಚಿತ್ರ “ಹೆಬೆಮಸ್ ಪಾಪಮ್”ನಲ್ಲಿ [Habemus Papam ಅರ್ಥಾತ್ we have a pope].

ಸೆಪ್ಟೆಂ 29, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 7


ಆದರ್ಶವೇ ಬೆನ್ನು ಹತ್ತಿ . . . ಭಾಗ 6

ಶಿವಶಂಕರ್ ಅಳುತ್ತಿದ್ದರು.

ವಿಕ್ರಮ್ ಯಾರು? ಎಂಬ ಯೋಚನೆಯಲ್ಲಿ ಅರ್ಧ ಜೀವನವೇ ಕಣ್ಮುಂದೆ ಸುಳಿದು ಹೋಯ್ತಲ್ಲ ಎಂದು ಅಚ್ಚರಿಗೊಳ್ಳುತ್ತ ವಾಸ್ತವಕ್ಕೆ ಬಂದನು ಲೋಕೇಶ್. ತಂದೆಯೆಡೆಗೆ ನೋಡಿದ. ಅಳುತ್ತಿದ್ದರು. ಭಯ ಗೊಂದಲ ಉಂಟಾಯಿತು. ನಾನೇ ಒಳಗೆ ಹೋಗಲಾ? ವಿಜಿ ಏನು ಮಾಡಿರಬಹುದು? ಕಳ್ಳತನ? ಅಥವಾ ಅವನಿಗೇನಾದ್ರೂ . . .ಛೀ ಕೆಟ್ಟದನ್ಯಾಕೆ ಯೋಚಿಸಬೇಕು. ವಿಕ್ರಮ್ ಹೊರಬಂದರು.

ಮನುಷ್ಯ ಧರ್ಮದ ‘ಅಂಗೈಯಲ್ಲೇ ಆಕಾಶ’




ಡಾ. ಅಶೋಕ್. ಕೆ. ಆರ್

ಹತ್ತದಿನೈದು ಸಾಲಿನಲ್ಲೇ ಮುಗಿದುಹೋಗುವ ಸಣ್ಣ ಸಣ್ಣ ಕಥೆಗಳು ಮನಸ್ಸನ್ನು ತಟ್ಟುವಷ್ಟು ದೊಡ್ಡ ಕತೆಗಳು ತಲುಪುವುದು ಕಷ್ಟ. ಹನಿಗಥೆಗಳ ಪ್ರಭಾವದ ಅರಿವಾಗಿದ್ದು ಸದತ್ ಹಸನ್ ಮಾಂಟೋ ಭಾರತ ವಿಭಜನೆಯ ಸಂದರ್ಭದಲ್ಲಿ ಬರೆದ ಕಥೆಗಳನ್ನು ಓದಿದಾಗ. ಕೆಲವೇ ಕೆಲವು ಸಾಲುಗಳಲ್ಲಿ ಜೀವನ ದರ್ಶನದ ಅನುಭವ ಮಾಡಿಸುವುದು ಕಷ್ಟವೇ ಸರಿ. ಆದರೂ ಓದಿ ಮುಗಿಸಿದ ಕೆಲವು ವರುಷಗಳ ನಂತರವೂ ನೆನಪಿನಲ್ಲುಳಿಯುವುದು ದೊಡ್ಡ ಕತೆಗಳೇ! ದೊಡ್ಡ ಕತೆಗಳು ಕಟ್ಟಿಕೊಡುವ ವ್ಯಕ್ತಿ – ಪ್ರದೇಶ – ವಿಷಯದ ವಿವರಗಳೇ ಆ ಕಥೆಗಳನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಎಂ. ಬಶೀರರ ಹನಿ ಹನಿ ಕತೆಗಳ ಸಂಕಲನ ‘ಅಂಗೈಯಲ್ಲೇ ಆಕಾಶ’ ಸಣ್ಣ ಕತೆಗಳ ಮಿತಿಗಳನ್ನೂ ದಾಟಿ ಬಹುದಿನಗಳವರೆಗೆ ಕಾಡುವುದು ಆ ಕತೆಗಳಲ್ಲಿನ ವಿಷಯ ವೈವಿಧ್ಯದಿಂದ; ಇಂದಿಗೂ ಮತ್ತು ಮುಂದಿಗೂ ಪ್ರಸ್ತುತವಾಗಿ ಉಳಿಯುವ ಸಂಗತಿಗಳಿಂದ.

ಸೆಪ್ಟೆಂ 24, 2012

ಬರಹಗಾರನ ಭಾಷೆ ಮತ್ತು ಸ್ಮಾರಕ


R K Narayan's house in Mysore
ಡಾ ಅಶೋಕ್ ಕೆ. ಆರ್.
ಆರ್. ಕೆ. ನಾರಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.

ಸೆಪ್ಟೆಂ 14, 2012

ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ


ಚಿತ್ರಮೂಲ - kvgmi
 ಡಾ ಅಶೋಕ್ ಕೆ ಆರ್
ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ.

ಸೆಪ್ಟೆಂ 13, 2012

ವಿದ್ಯುತ್ ಅನಿವಾರ್ಯ ... ಆದರೆ?

ಚಿತ್ರ ಕೃಪೆ - firstpost
ಡಾ ಅಶೋಕ್ ಕೆ ಆರ್
ಕೂಡುಂಕುಳಂ ಅಣುಸ್ಥಾವರದಲ್ಲಿ ನಿನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಅಂತೋನಿ  ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ಮಜಲು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ; ಮೀನುಗಾರನ ಹತ್ಯೆಗೆ ಅವರು ಕೊಟ್ಟ ಸಮರ್ಥನೆ! ಪ್ರತಿಭಟನಾಕಾರರನ್ನು ದಾಳಿಗೆ ಪ್ರಚೋದಿಸಿದ ಕಾರಣಗಳು?!

ಸೆಪ್ಟೆಂ 11, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 6


“ಥ್ಯಾಂಕ್ಸ್ ಸರ್” ಎಂದು ಹೇಳಿ ಇಬ್ಬರೂ ಹೊರಬಂದರು.

“ನಿನಗೇನನ್ನಿಸುತ್ತೆ ಸಯ್ಯದ್”

“ಇವರ ಮಾತು, ಅವರ ಮುಖದಲ್ಲಿನ ಭಾವ ನೋಡಿದರೆ ಅಲ್ಲೇನೂ ನಡೆದೇ ಇಲ್ಲ ಅನ್ನಿಸುತ್ತೆ”

ಸೆಪ್ಟೆಂ 3, 2012

ಮಿನುಗುವ ಮನಗಳ “ರಸ್ತೆ ನಕ್ಷತ್ರ”



-      ಡಾ ಅಶೋಕ್ ಕೆ ಆರ್.

ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.

ಆಗ 31, 2012

ಆದರ್ಶವೇ ಬೆನ್ನು ಹತ್ತಿ ..... ಭಾಗ 5


ಬಚ್ಚಲುಮನೆಗೆ ಹೋಗಿ ಲೋಕಿ ಕೈ ಮೂಸಿದ. ಸಿಗರೇಟಿನ ಘಮ ಇನ್ನೂ ಉಳಿದಿತ್ತು! ‘ಛೇ!! ದಿನಾ ಎಲೆ ತೆಗೆದುಕೊಂಡು ಕೈ ಉಜ್ಜಿಕೊಂಡು ಬರುತ್ತಿದ್ದೆ. ಇವತ್ತು ಮರೆತುಬಿಟ್ಟೆನಲ್ಲ. ಅಷ್ಟಕ್ಕೂ ನಾನು ಸಿಗರೇಟು ಸೇದ್ತೀನಿ ಅನ್ನೋ ಅನುಮಾನ ಇವರಿಗ್ಯಾಕೆ ಬಂತು? ನಮ್ಮ ನೆಂಟರಿಷ್ಟ್ಯಾರಾದರೂ ನೋಡಿಬಿಟ್ಟರಾ? ಅದೇಗಾದ್ರೂ ತಿಳಿದಿರಲಿ, ಕೊನೇಪಕ್ಷ ಅಣ್ಣ ಬಯ್ಯಲೂ ಇಲ್ಲವಲ್ಲ. ಏನೂ ಆಗೇ ಇಲ್ಲವೆಂಬಂತೆ ಹೊರಟುಹೋದರು. ನಾನೇ ಹೋಗೆ ತಪ್ಪಾಯ್ತು ಅಂತ ಕೇಳ್ಲಾ? ಇನ್ನು ಮುಂದೆ ಸೇದಲ್ಲ ಅಣ್ಣ . . .ಸಿಗರೇಟು ಬಿಡಬಲ್ಲೆನಾ?

ಆಗ 30, 2012

ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’


kavya madhavan
ಗದ್ದಾಮ photo source - sify.com
ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.

ಆಗ 28, 2012

ಬೆಚ್ಚಿಬೀಳಿಸುವ ವ್ಯಾಸ!


astra
 ಡಾ ಅಶೋಕ್. ಕೆ. ಆರ್
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!

ಆಗ 27, 2012

ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!


ಚಿತ್ರಕೃಪೆ - ಇಂಡಿಯಾ ಟುಡೇ
 ಡಾ ಅಶೋಕ್. ಕೆ. ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!

ಆಗ 24, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 4



ಆದರ್ಶವೇ ಬೆನ್ನು ಹತ್ತಿ . . . ಭಾಗ 3

“ಹೋಟೆಲ್ಲಿನಲ್ಲಿ ನಡೆದಿದ್ದರ ಬಗ್ಗೆ ಚಿಂತಿಸುತ್ತಿದ್ದೀರ. ಆ ವಿಷಯವನ್ನು ನಾನು ಯಾರಿಗೂ ಹೇಳೋದಿಲ್ಲ. ಚಿಂತೆ ಬೇಡ”
“ನಿಮಗೇನಾದರೂ ಫೇಸ್ ರೀಡಿಂಗ್ ಬರುತ್ತಾ?”
‘ಇದೇ ಪ್ರಶ್ನೆ ಸ್ವಲ್ಪ ಸಮಯದ ಮೊದಲು ನನ್ನ ಮನಸ್ಸಿಗೂ ಬಂದಿತ್ತಲ್ಲ’ ಎಂದು ಅಚ್ಚರಿಗೊಳ್ಳುತ್ತ “ಇಲ್ಲ” ಎಂದ. ಅಷ್ಟರಲ್ಲಿ ಸಯ್ಯದ್ ಒಳಬಂದ. “ಏನ್ ಇನ್ನೂ ಏನು ಆರ್ಡರ್ರೇ ಮಾಡಿಲ್ಲ” ಎಂದ್ಹೇಳಿ ಮಾಣಿಯನ್ನು ಕರೆದು ತಿಂಡಿ ಹೇಳಿದ. ತಿಂಡಿ ತಿಂದಾದ ಮೇಲೆ “ಸರಿ ಲೋಕಿ. ಒಂದಷ್ಟು ಕೆಲಸವಿದೆ. ನಾಳೆ ಭೇಟಿಯಾಗೋಣ” ಎಂದ್ಹೇಳಿ ಸಯ್ಯದ್ ಮೇಲೆದ್ದ. “ಬರ್ತೀನಿ ಲೋಕೇಶ್” ರೂಪಾ ಕೂಡ ಹೊರಡಲನುವಾದಳು. ‘ದಯಮಾಡಿ ಹೇಳಬೇಡ’ ಅನ್ನೋ ಬೇಡಿಕೆಯಿತ್ತಾ?! ಛೇ! ನಿಜಕ್ಕೂ ನನಗೆ ಫೇಸ್ ರೀಡಿಂಗ್ ಬರುವಂತಿದ್ದರೆ. .

ಆಗ 23, 2012

ತೀವ್ರವಾದದ ನಡುವೆ ಸೊರಗುತ್ತಿರುವ ಮನುಷ್ಯ ಧರ್ಮ


 ಡಾ ಅಶೋಕ್. ಕೆ. ಆರ್.
ಇತ್ತೀಚೆಗಷ್ಟೇ ಸುಳ್ಯ ಮತ್ತು ಪುತ್ತೂರಿನ ಸುತ್ತಮುತ್ತ ವಾಸಿಸುತ್ತಿರುವ ನಿರಾಶ್ರಿತ ಶ್ರೀಲಂಕಾ ತಮಿಳರು ಪಡಿತರ ಚೀಟಿಯನ್ನು ವಿತರಿಸಬೇಕೆಂದು ಪ್ರತಿಭಟಿಸಿದರು. ಟಿಬೆಟ್ಟಿನಲ್ಲಿ ಚೀನಾ ದೇಶದ ಶೋಷಣೆಯನ್ನು ಖಂಡಿಸಿ ಕೆಲವು ತಿಂಗಳುಗಳ ಹಿಂದೆ ಟಿಬೆಟ್ಟಿಯನ್ನರು ಭಾರತದ ವಿವಿದೆಡೆ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ನೇಪಾಳಿಗರ ವಲಸೆ ನಿರಂತರವಾಗಿ ನಡೆಯುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾನವ ಹಕ್ಕು ಆಯೋಗದ ವರದಿಯಂತೆ ಕಳೆದ ಮೂರು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಹಿಂದೂ ಪಾಕಿಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಈ ವಲಸೆಗಳ ಬಗ್ಗೆ ಇಲ್ಲದ ಆಕ್ರೋಶ ಬಾಂಗ್ಲಾ ವಲಸಿಗರ ಮೇಲೆ ಮಾತ್ರ ಯಾಕೆ? ಬಾಂಗ್ಲಾ ವಲಸಿಗರು ಸ್ಥಳೀಯ ಬೋಡೋ ಆದಿವಾಸಿಗಳ ಮೇಲೆ ನಡೆಸಿರುವ ಕ್ರೌರ್ಯವಷ್ಟೇ ಇದಕ್ಕೆ ಕಾರಣವಾ? ಆಶ್ರಯನೀಡಿದ ದೇಶಕ್ಕೆ ಅವರು ದ್ರೋಹಬಗೆಯುತ್ತಿದ್ದಾರೆಂಬ ಅಸಹನೆಯಾ? ಆಶ್ರಯ ನೀಡಿದ ದೇಶದ ಪ್ರಧಾನಮಂತ್ರಿಯನ್ನೇ ಕೊಂದ ಜನರ ವಿರುದ್ಧ ‘ದೇಶಭಕ್ತಿಯ’ ಹೆಸರಿನಲ್ಲಿ ಕೂಗಾಡದ ಮಂದಿ ಬಾಂಗ್ಲಾ ವಲಸಿಗರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸುತ್ತಿರುವುದ್ಯಾಕೆ? ಬಾಂಗ್ಲಾ ವಲಸಿಗರು ಮುಸಲ್ಮಾನರೆಂಬ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್, ಶ್ರೀರಾಮ ಸೇನೆಯಂಥ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದಾರಾ?

ಆಗ 22, 2012

ಕುಪ್ಪಳ್ಳಿಯಲ್ಲಿ 'ಕರ್ನಾಟಕ ಕಂಡ ಚಳುವಳಿಗಳು' ಸಂವಾದ ಸಮಾವೇಶ

ಆತ್ಮೀಯರೆ, 

ಬಯಲು ಸಾಹಿತ್ಯ ವೇದಿಕೆ ಕೊಟ್ಟೂರು,  ಈ ಸಲದ  ನಾವು ನಮ್ಮಲ್ಲಿ  ಕಾರ್ಯಕ್ರಮವನ್ನು  ಇದೇ ತಿಂಗಳ 25 ಮತ್ತು 26ರಂದು ಕುಪ್ಪಳ್ಳಿಯಲ್ಲಿ ಆಯೋಜಿಸಿದೆ.  ಈಸಲದ  ಸಮಾವೇಶದ ಸಂವಾದ ವಿಷಯ ' ಕರ್ನಾಟಕ ಕಂಡ ಚಳವಳಿಗಳು' 





ಬನ್ನಿ ಭಾಗವಹಿಸಿ. 

ವೇದಿಕೆಯ ಪರವಾಗಿ 
ಅಕ್ಷತಾ ಕೆ.
ನಿರಂಜನ ಎಚ್.ಎಂ
ಅರುಣ್ ಜೋಳದ ಕೂಡ್ಲಿಗಿ
ಭಾರತೀದೇವಿ. ಪಿ.

ಆಗ 19, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 3


ಮಹಾರಾಜ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಬ್ಯಾಸ್ಕೆಟ್ ಬಾಲ್ ಮೈದಾನದಲ್ಲಿ ಸಂಜೆಯ ವೇಳೆ ಹತ್ತಾರು ಚಿಕ್ಕ ಚಿಕ್ಕ ಮಕ್ಕಳು ಸ್ಕೇಟಿಂಗ್ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಜೊತೆಯಲ್ಲಿ ಅವರ ಮನೆಯ ಹಿರಿಯರೊಬ್ಬರು. ಲೋಕಿಗೆ ಬೇಸರವಾದಾಗಲೆಲ್ಲ ಇಲ್ಲಿಗೆ ಬಂದು ಕಲ್ಲು ಬೆಂಚಿನ ಮೇಲೆ ಕೂರುತ್ತಿದ್ದ. ಹೊಸಬರು ಸ್ಕೇಟಿಂಗ್ ಕಲಿಯುವ ರೀತಿ, ಹಳಬರು ಹೊಸ ಹುಡುಗರ ಮುಂದೆ ತಮಗೆ ಎಲ್ಲಾ ಗೊತ್ತು ಎಂಬಂತೆ ಮಾಡುತ್ತಿದ್ದ ಮುಖಭಾವವನ್ನು ನೋಡಿದರೆ ಮನಸ್ಸಿಗೆಷ್ಟೋ ಸಮಾಧಾನವಾಗುತ್ತಿತ್ತು. ಅಂದು ಕೂಡ ಲೋಕಿ ಅಲ್ಲಿ ಬಂದು ಕುಳಿತಿದ್ದ. ಸಯ್ಯದ್ ಈತನನ್ನು ಕಂಡು ಬಳಿಗೆ ಬಂದ.

ಆಗ 10, 2012

ಬ್ರಹ್ಮಚಾರಿ


ಡಾ ಅಶೋಕ್. ಕೆ. ಆರ್.
ಕಥೆಯ ಆರಂಭಕ್ಕೂ ಮುಂಚೆ ಒಂದು Disclaimer! – ಈ ಕಥೆಯಲ್ಲಿ ಉಪಯೋಗಿಸಿರುವ ಜಾತಿ ಧರ್ಮದ ಹೆಸರುಗಳು ಕೇವಲ ಸಾಂಕೇತಿಕ. ಒಂದು ಜಾತಿಯ ಬದಲಿಗೆ ಮತ್ತೊಂದು ಜಾತಿಯ ಹೆಸರು ಬರೆದಾಗ್ಯೂ ಈ ಕಥೆಯ ಪ್ರಸ್ತುತತೆಗೆ ಧಕ್ಕೆಯಾಗುವುದಿಲ್ಲವೆಂಬುದು ನಮ್ಮ ಇವತ್ತಿನ ಸಮಾಜದ ದುರಂತ ಮತ್ತು ನಮ್ಮೆಲ್ಲರ ವೈಯಕ್ತಿಕ ವೈಫಲ್ಯ. ಈ ಕೆಳಗೆ ಹೆಸರಿಸಿರುವ ಯಾವುದಾದರೂ ಜಾತಿ ಧರ್ಮದವರು ನೀವಾಗಿದ್ದ ಪಕ್ಷದಲ್ಲಿ ಕಥೆ ಓದಿ ಮುಗಿಸಿದ ನಂತರ ನಿಮ್ಮಲ್ಲಿ ಖುಷಿ ಅಥವಾ ಕೋಪದ ಭಾವನೆ ಮೂಡಿದರೆ ಅದು ನಿಮ್ಮ ಕಲ್ಮಶ ಮನಸ್ಸಿನ ಸಂಕೇತ!

ಆಗ 9, 2012

ಆದರ್ಶವೇ ಬೆನ್ನು ಹತ್ತಿ....ಭಾಗ 2


 “ಹಬ್ಬದ ದಿನ ಏನೇನೋ ಹೇಳಿ ನಿನ್ನ ಮನಸ್ಸಿಗೆ ಬೇಸರ ಉಂಟುಮಾಡುವ ಇಚ್ಛೆ ನನಗಿಲ್ಲ. ಮತ್ತೊಮ್ಮೆ ಹೇಳ್ತೀನಿ” ನಗುತ್ತಾ ಉತ್ತರಿಸಿ ಹೊರಟುಹೋದ.

ಗಣೇಶ ಚತುರ್ಥಿಯಾಗಿ ಒಂದು ವಾರ ಕಳೆದ ನಂತರ ಲೋಕಿಯ ಹುಟ್ಟುಹಬ್ಬ. ಪಿ.ಯು.ಸಿಗೆ ಬಂದ ನಂತರ ಸ್ನೇಹಿತರಿಗೆ ಪಾರ್ಟಿ ಕೊಡಿಸುವ ನೆಪದಲ್ಲಿ ಮನೆಯಲ್ಲಿ ಹಣ ಪಡೆದುಕೊಂಡು ನೂರು ರುಪಾಯಿಗೆ ಒಂದು ಪುಸ್ತಕ, ಸಾಮಾನ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಪುಸ್ತಕವನ್ನು ಖರೀದಿಸುತ್ತಿದ್ದ. ಮಿಕ್ಕ ದುಡ್ಡನ್ನು ಭಿಕ್ಷುಕರಿಗೆ ಕೊಟ್ಟುಬಿಡುತ್ತಿದ್ದ. ಇಂದ್ಯಾಕೋ ಹಣ ಕೊಡುವುದು ಬೇಡ, ಹೋಟೆಲ್ಲಿಗೆ ಕರೆದೊಯ್ದು ಊಟ ಕೊಡಿಸೋಣ ಎಂದೆನಿಸಿತು. ಇದೇ ಯೋಚನೆಯಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ಇಂದ್ರ ಭವನ್ ಹೋಟೆಲ್ ಎದುರಿಗೆ ಒಬ್ಬ ವ್ಯಕ್ತಿ ಭಿಕ್ಷೆ ಬೇಡುತ್ತಿರುವುದು ಕಂಡಿತು. ಆತನಿಗೆ ಎರಡೂ ಕಾಲುಗಳಿರಲಿಲ್ಲ. ಎಡಗೈ ಇರಲಿಲ್ಲ. ಅವನ ಹತ್ತಿರ ಹೋಗಿ “ಏನಾದರೂ ತಿಂತೀರಾ?” ಅಂದ. “ದುಡ್ಡೇ ಇಲ್ಲ ಸಾಮಿ” ಅವನ ಮಾತು ಕೇಳಿ ಲೋಕಿಗೆ ‘ಸಮಾನತೆ ಅನ್ನೋದು ಕೈಗೆಟುಕದ ನಕ್ಷತ್ರದಂತೆಯೇ ಉಳಿದುಹೋಗುತ್ತದಾ?’ ಎಂಬ ಯೋಚನೆ ಬಂತು. ಯೋಚನೆಗಳನ್ನು ಹತ್ತಿಕ್ಕುತ್ತಾ “ನಾನು ಕೊಡಿಸ್ತೀನಿ ನಡೀರಿ” ಎಂದ್ಹೇಳಿ ಆತನ ಮಾತಿಗೂ ಕಾಯದೆ ಅವನನ್ನು ಅನಾಮತ್ ಮೇಲೆತ್ತಿಕೊಂಡು ಇಂದ್ರ ಭವನದ ಒಳಗೆ ಹೋದ. ಸುತ್ತಲಿನವರ ಗಮನ ಲೋಕಿಯ ಮೇಲಿತ್ತು.

ಆಗ 8, 2012

ಕನಸುಗಳ ಬೆಂಬತ್ತಿದ ಬರ್ಟ್ ಮನ್ರೋ – The worlds fastest Indian


burt munro

 ಡಾ ಅಶೋಕ್. ಕೆ. ಆರ್.
ಜೀವಿತದಲ್ಲಿ ನಮ್ಮ ಮನದಾಳದ ಕನಸನ್ನು ನನಸಾಗಿಸಲು ಪ್ರಮುಖವಾಗಿ ಬೇಕಿರುವುದೇನು? ಸತತ ಪರಿಶ್ರಮ, ಸೋಲೊಪ್ಪಿಕೊಳ್ಳದ ಛಲ, ಕೊಂಚ ಮಟ್ಟಿಗಿನ ಅದೃಷ್ಟ, ತಾಳ್ಮೆ. ಇವೆಲ್ಲವೂ ಇದ್ದ ಬರ್ಟ್ ಮನ್ರೋ ತನ್ನ ಹಾದಿಯಲ್ಲಿ ಬಂದ ಕಾಠಿಣ್ಯವನ್ನೆಲ್ಲ ದಾಟಿ ಕನಸನ್ನು ನನಸಾಗಿಸುತ್ತಾನೆ. 1899ರಲ್ಲಿ ನ್ಯೂಝಿಲೆಂಡಿನ ಇನ್ವರ್ ಕಾರ್ಗಿಲ್ಲಿನಲ್ಲಿ ಜನಿಸಿದ ಮನ್ರೋಗೆ ಚಿಕ್ಕಂದಿನಿಂದ ಬೈಕುಗಳ ಹುಚ್ಚು. ಮೊದಲು ಖರೀದಿಸಿದ್ದು ಇಂಡಿಯನ್ ಸ್ಕೌಟ್ ಬೈಕನ್ನು ತನ್ನ ಇಪ್ಪತ್ತೊಂದನೇ ವಯಸ್ಸಿನಲ್ಲಿ. ಆಗ ಅದರ ವೇಗ ಕೇವಲ 55 ಮೈಲಿ/ ಘಂಟೆಗೆ. ತನ್ನದೇ ಗ್ಯಾರೇಜನ್ನು ಸ್ಥಾಪಿಸಿ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದಲೇ ಬೈಕನ್ನು ಉತ್ತಮಗೊಳಿಸುತ್ತ ಕೊನೆಗೆ 1967ರಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಾನೆ, ತನ್ನ 68ನೇ ವಯಸ್ಸಿನಲ್ಲಿ! ಬರ್ಟ್ ಮನ್ರೋನ ಜೀವನಗಾಥೆಯನ್ನು ಆಧಾರವಾಗಿಸಿಕೊಂಡು ರೋಜರ್ ಡೋನಾಲ್ಡ್ ಸನ್ The Worlds fastest Indian ಸಿನಿಮಾ ತೆಗೆದಿದ್ದಾರೆ.

ಆಗ 7, 2012

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...


anna hazare
Team anna
 
-       ಡಾ. ಅಶೋಕ್. ಕೆ. ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಆಗ 6, 2012

ಆದರ್ಶವೇ ಬೆನ್ನು ಹತ್ತಿ.... ಭಾಗ 1


ದಾರಿ ಹುಡುಕುತ್ತ....
ವೈದ್ಯಕೀಯ ಓದುತ್ತಿದ್ದಾಗ ಕೊನೆಯ ವರ್ಷ ಕಾಲೇಜಿಗೆ ಹೋಗುವುದನ್ನೂ ಮರೆತು ಬರೆದ ಕಾದಂಬರಿಯಿದು! ಆಗ ಈ ಕಾದಂಬರಿಯ ಕೆಲವು ಭಾಗಗಳು 'ಮಾರ್ಗದರ್ಶಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕಾದಂಬರಿ ಕಾಲಿಟ್ಟ ಘಳಿಗೆಯೋ ಏನೋ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯೇ ಮುಚ್ಚಿಹೋಯಿತು!! ನಂತರದ ದಿನಗಳಲ್ಲಿ ಕಾದಂಬರಿಯನ್ನು ಪುನಃ ಓದಿದಾಗ ಎಳಸೆಳಸು ಬರಹ ಎಂಬ ಭಾವನೆ ಬಂತು[ಇವತ್ತಿಗೂ ಅದೇ ಭಾವನೆಯಿದೆ!]. ಒಂದಷ್ಟು ಬದಲಾವಣೆಗಳೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೀನಿ, ಓದುವ ಕಷ್ಟ ನಿಮ್ಮದಾಗಲಿ! - ಡಾ ಅಶೋಕ್. ಕೆ. ಆರ್.

ಆಗ 5, 2012

ಫಾಲ್ಕೆಯ ಸಿನಿಮಾಗಾಥೆ - 'ಹರೀಶ್ಚಂದ್ರಾಚಿ ಫ್ಯಾಕ್ಟರಿ'

marathi movie
ಹರೀಶ್ಚಂದ್ರಾಚಿ ಫ್ಯಾಕ್ಟರಿ
ಡಾ ಅಶೋಕ್ ಕೆ ಆರ್
ದಾದಾ ಸಾಹೇಬ ಫಾಲ್ಕೆಯ ಹೆಸರು ಕೇಳಿದ್ದು ನಮ್ಮ ರಾಜಣ್ಣನಿಗೆ ಆ ಪ್ರಶಸ್ತಿ ಬಂದಾಗ. ದಾದಾ ಸಾಹೇಬ ಫಾಲ್ಕೆ ಯಾರೆಂಬುದೂ ಸರಿಯಾಗಿ ತಿಳಿದಿರಲಿಲ್ಲ. ತಿಳಿದಿದ್ದು ಮರಾಠಿ ಚಿತ್ರ ಹರೀಶ್ಚಂದ್ರಾಚಿ ಫ್ಯಾಕ್ಟರಿಯನ್ನು ನೋಡಿದಾಗ. ಪರೇಶ್ ಮೊಕಾಶಿಯ ಸಮರ್ಥ ನಿರ್ದೇಶನದಲ್ಲಿ ಪಡಿಮೂಡಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ಹುಟ್ಟಿನ ಕಥೆಯೂ ಹೌದು. ಅದು 1911ರ ಇಸವಿ, ಜೊತೆಗಾರನಿಂದ ಬೇರ್ಪಟ್ಟು ಪ್ರಿಂಟಿಂಗ್ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಜಾದೂಗಾರನಾಗುತ್ತಾನೆ ಫಾಲ್ಕೆ.

ಆಗ 3, 2012

ಗುಡ್ಡೆ ಮೇಲೆ ದೇವಸ್ಥಾನ


-      S. ಅB ಹನಕೆರೆ.
        
 “ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.

ಆಗ 2, 2012

ಎಚ್ಚರ ಪತ್ರಕರ್ತ ಎಚ್ಚರ....!

ಇಷ್ಟು ದಿನ ಪತ್ರಕರ್ತರನ್ನು ಅದರಲ್ಲೂ  ದೃಶ್ಯಮಾಧ್ಯಮದ ವರದಿಗಾರರನ್ನು ದೂಷಿಸುವುದೇ ಆಗುತ್ತಿತ್ತು. ಕಾರಣ ಅಲ್ಲಿನ ಬಹುತೇಕರ ವರ್ತನೆ ದೂಷಿಸಲು ಯೋಗ್ಯವಾಗಿಯೇ ಇರುವುದು! ಮಂಗಳೂರಿನ ಪಡೀಲಿನ ಘಟನೆಯಲ್ಲಿ ವಿಚಾರಣೆಗೊಳಪಟ್ಟ ನವೀನ್ ಸೂರಿಂಜೆ ಬರೆದ ಲೇಖನದ ನಂತರ ಉಳಿದೆಡೆಗಳಿಂದಲೂ ಪತ್ರಕರ್ತರು ಅನುಭವಿಸುತ್ತಿರುವ ಪಡಿಪಾಟಲುಗಳ ವಿವರಗಳು ಬರುತ್ತಿವೆ. ನಂತರ ಪ್ರಜಾವಾಣಿಯ ಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ಕೂಡ ಪತ್ರಕರ್ತರ ಪಾತ್ರದ ಬಗ್ಗೆ, ಅವರ ಮೇಲಾಗುತ್ತಿರುವ ಕೊಟ್ಟಿ ಕೇಸುಗಳ ಬಗ್ಗೆ ತಿಳಿಸಿತ್ತು. ಉತ್ತರಕರ್ನಾಟಕದ ಪತ್ರಕರ್ತ ಪರಶುರಾಮ್ ತಹಸೀಲ್ದಾರ್ ತಾನು ಅನುಭವಿಸಿದ್ದನ್ನು ಬರೆದಿದ್ದಾರೆ...

ಕೆಲವು 'ಬರ'ದ ಪದ್ಯಗಳು

1

ಚುಕ್ಕಿ ಮೂಡುವ ಹೊತ್ತಿನಲ್ಲಿ
ನನ್ನೊಳಗೆ
ಮಿಣುಕು ಹುಳು ಜೀವ ಪಡೆಯುತ್ತವೆ
ಕತ್ತಲಲ್ಲಿ ಬಿದ್ದ ಕಣ್ಣಹನಿ ಉರಿದಂತೆ
ಮತ್ತೆ ಉದುರುತ್ತವೆ
ಈ ಜಗದ ಬೇಗುದಿ ದೊಡ್ಡದು

2

ಯಾವ ಸುದ್ದಿ
ಯಾರು ತಂದರೋ ತಿಳಿದಿಲ್ಲ
ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ
ನಾವಿಂದು ಕರೆಯದೇ ಬಂದ ಅತಿಥಿ
ನೆತ್ತಿಯ ಮೇಲೆ ಹಾರುತಿದೆ
ಯಾರದೋ ನಗು ತುಂಬಿದ ವಿಮಾನ

3

ಅಳುವ
ಮಗುವಿನ ಕೈಯಲ್ಲಿನ
ನಗುವ ಗೊಂಬೆಯಂತೆ ನೀನು
ಕೋಗಿಲೆಯೊಳಗಿನ ಕೊಳಲು
ಆಲದ ಬಿಳಲು ಮುತ್ತಿರುವ ಎಲೆಯ ಕುಕಿಲು
ನೇಣು ಬಿಗಿದುಕೊಳ್ಳಲು ಬಂದ ಅನ್ನದಾತನ ಅಳಲೂ

4

ಬರದ ನೆಲದ ಬೆಂಕಿ ಹೂ
ಹೇಗೆ ಮುಡಿಯುವುದು
ಖಾಲಿ ಹೊಟ್ಟೆ ಉರಿವ ಕೊಂಡ
ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ
ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ
ಈ ಬೇಗೆಯೂ ಬೇಕು ಬಿಡು ನಿನ್ನಂತೆ
- ವೀರಣ್ಣ ಮಡಿವಾಳರ್ 

ಚರ್ಚೆಯಾಗಬೇಕಿರುವುದು ‘ಸಂಸ್ಕೃತಿಯ’ ಬಗ್ಗೆಯಲ್ಲ ಕುಡಿತದ ಬಗ್ಗೆ....




-      ಡಾ ಅಶೋಕ್. ಕೆ. ಆರ್

ಮಂಗಳೂರಿನ ಪಡೀಲಿನ ಘಟನೆಯ ನಂತರ ಸಂಸ್ಕೃತಿ, ಸ್ವಾತಂತ್ರ್ಯ, ಸ್ವೇಚ್ಛಾಚಾರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಚರ್ಚೆಗಳಾಗುತ್ತಿವೆ. ಇವೆಲ್ಲವುಗಳ ಮಧ್ಯೆ ಜುಲೈ 31ರಂದು ವಿಧಾನಪರಿಷತ್ತಿನಲ್ಲಿ ಸಚಿವರೊಬ್ಬರು ಅಮೋಘ ಹೇಳಿಕೆಯನ್ನಿತ್ತಿದ್ದಾರೆ! “ಅಸೆಂಬ್ಲಿಯಲ್ಲಿರೋ ಸಚಿವರುಗಳೇ ಮದ್ಯಪಾನ ಮಾಡೋದಿಲ್ಲ. ಇನ್ನು ನಮ್ಮ ಇಲಾಖೆಗೆ ಆದಾಯ ಎಲ್ಲಿಂದ ಬರಬೇಕು. ಹೀಗಾಗಿ ಎಲ್ಲರೂ ಮದ್ಯಪಾನ ಮಾಡತೊಡಗಿದರೆ ರಾಜ್ಯ ಬೊಕ್ಕಸದ ಆದಾಯವೂ ಹೆಚ್ಚುತ್ತದೆ” ಎಂದು ಹೇಳಿದ್ದಾರೆ ಅಬಕಾರಿ ಸಚಿವರಾದ ರೇಣುಕಾಚಾರ್ಯ. ಅಲ್ಲಿಗೆ ಸರಕಾರವೇ ಮದ್ಯಪಾನವನ್ನು ಪ್ರೋತ್ಸಾಹಿಸಿದಂತಾಯಿತಲ್ಲವೇ? ಮದ್ಯದಿಂದ ಕಳೆದ ಐದು ವರುಷಗಳಲ್ಲಿ ಬಂದಿರುವ ಆದಾಯದ ವಿವರಗಳನ್ನು ಸದನಕ್ಕೆ ತಿಳಿಸಿದ್ದಾರೆ. 2007 -08ರ ಸಾಲಿನಲ್ಲಿ 4811.93 ಕೋಟಿಯಷ್ಟಿದ್ದ ಆದಾಯ ದುಪ್ಪಟ್ಟುಗೊಂಡು 2011 -12ರಲ್ಲಿ 9827.89 ಕೋಟಿಯಾಗಿದೆ!

ಆಗ 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ. 

ಜುಲೈ 31, 2012

ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ....

ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?

ಜುಲೈ 30, 2012

ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

 ಧರ್ಮ ಸಂಸ್ಕೃತಿ ನಗ್ನತೆ ಸಭ್ಯತೆ ಬುರ್ಖ ದನ ಹಂದಿ ಮಾಂಸ ಎಣ್ಣೆ ಬಾರು ಪಬ್ಬುಗಳ ಬಗ್ಗೆಯೇ ಬರೆಯುತ್ತ ಕೂರುವ ನಮ್ಮಂಥವರ ನಡುವೆ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ರವರಿಂದ ಕೌಂಟರ್ ಮೀಡಿಯ ಪ್ರಶಸ್ತಿ ಪಡೆದುಕೊಂಡ ದಯಾನಂದ್ ಟಿ.ಕೆರವರು ಮಲದಗುಂಡಿ ಸ್ವಚ್ಛಗೊಳಿಸಲು ಹೋಗಿ ಪ್ರಾಣ ಕಳೆದುಕೊಂಡವರ ಬಗ್ಗೆ ಸತ್ಯಶೋಧನಾ ವರದಿ ಬರೆದಿದ್ದಾರೆ. ಇಂಥ ವಿಪರ್ಯಾಸದ ಸಂಗತಿಗಳು ಕೂಡ ನಮ್ಮ ಭಾರತದ ಸಂಸ್ಕೃತಿಯೇ ಅಲ್ಲವೇ??

ನಾನು ಪತ್ರಕರ್ತನಾಗಿ ಸರಿಯಾಗಿದ್ದೀನಾ ?

ಕಸ್ತೂರಿ ವಾಹಿನಿಯ ವರದಿಗಾರ ನವೀನ್  ಮಂಗಳೂರಿನಲ್ಲಿ ನಡೆದ ದಾಳಿಯನ್ನು ಮೊದಲು ವರದಿ ಮಾಡಿದವರು. ಮಾಧ್ಯಮಗಳ ನಡವಳಿಕೆಯ ಬಗ್ಗೆ ಎಲ್ಲೆಡೆಯೂ ವಿಮರ್ಶೆ ನಡೆಯುತ್ತಿರುವ ಈ ದಿನಗಳಲ್ಲಿ ಸ್ವತಃ ವರದಿಗಾರನೊಬ್ಬನೇ ಸ್ವವಿಮರ್ಶೆ ಮಾಡಿಕೊಂಡಿದ್ದು ಅಪರೂಪ. ಬರೆಯುವ ಕಷ್ಟ ತೆಗೆದುಕೊಂಡು ನವೀನ್ ಶೆಟ್ಟಿಯವರು ಫೇಸ್  ಬುಕ್ಕಿನಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ. ಮಂಗಳೂರಿನಲ್ಲಿ ನಡೆದ ಘಟನೆಯ ಈ ವಿಸ್ತೃತವಾದ ಬರಹ ಹಿಂದೂ ಸಂಘಟನೆಗಳು, ಪೋಲೀಸರ ಬಗ್ಗೆ ನೂರಾರು ಪ್ರಶ್ನೆಗಳನ್ನು ಮೂಡಿಸುತ್ತದೆ.

ಜುಲೈ 26, 2012

'ಆ ಅಂಗಡಿ' ಮತ್ತು 'ಈ ಅಂಗಡಿ' ನಡುವೆ...

ಫೇಸ್ ಬುಕ್ಕಿನಲ್ಲಿ ಕೊನೆಯ ಕಂತೆಂಬಂತೆ ವ್ಯಂಗ್ಯಚಿತ್ರಕಾರ ಪಿ ಮಹಮ್ಮದ್ ರವರು ಪ್ರಜಾವಾಣಿ ತೊರೆಯುತ್ತಿರುವ ಸಂಗತಿ ತಿಳಿಸಿದ್ದಾರೆ! ಪ್ರಜಾವಾಣಿಯನ್ನು ಆ ಅಂಗಡಿಯೆಂದು ಕರೆಯುತ್ತ ಯಡಿಯೂರಪ್ಪನವರನ್ನು ಚೂಪು ಮೀಸೆಯ ಸರದಾರನೆಂದು ಕರೆಯುತ್ತ ಕಾರಣಗಳನ್ನು ಹೇಳಿದ್ದಾರೆ. ಯಾವ ಪಕ್ಷಕ್ಕೂ ಸೇರಿದ್ದಲ್ಲವೆಂಬ ಭಾವನೆ ಮೂಡಿಸಿದ್ದ 'ಕರ್ನಾಟಕದ ವಿಶ್ವಾಸರ್ಹ ದಿನಪತ್ರಿಕೆಯ' ವಿಶ್ವಾಸಾರ್ಹತೆಯನ್ನು ಬೆತ್ತಲು ಮಾಡಿದ್ದಾರೆ. ಖುಷಿಯ ಸಂಗತಿಯೆಂದರೆ ಅವರು ಈ ಅಂಗಡಿಯನ್ನು ಸೇರಲಿದ್ದಾರೆ. 'ನಂಬರ್ ಒನ್' ಈ ಅಂಗಡಿ ವಿಜಯ ಕರ್ನಾಟಕವೇ ತಾನೇ?!!

ಮುಸ್ಲಿಮರ ವಿರುದ್ಧ ಕೆಂಡಕಾರುವುದಕ್ಕಷ್ಟೇ ಹಿಂದೂ ಜಾಗೃತಿ ಸೀಮಿತವಾಗಬೇಕಾ?

ಡಾ. ಅಶೋಕ್. ಕೆ. ಆರ್.
            ಅನಾಗರೀಕ, ಹಿಂದುಳಿದ ರಾಜ್ಯಗಳೆಂಬ ಹಣೆಪಟ್ಟಿ ಹೊತ್ತ ದೂರದ ಬಿಹಾರ, ಉತ್ತರಪ್ರದೇಶದಲ್ಲಿ ನಡೆಯುತ್ತದೆಂದು ಕೇಳುತ್ತಿದ್ದ ಅಮಾನವೀಯ ಘಟನೆಯೊಂದು ನಮ್ಮ ಕರ್ನಾಟಕದ ಮಂಡ್ಯಜಿಲ್ಲೆಯಲ್ಲಿ ನಡೆದುಹೋಗಿದೆ. ನಾಲ್ವರು ಯುವಕರು ಯಶವಂತಪುರ – ಮೈಸೂರು ರೈಲಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ್ದಾರೆ. ಬೇಸತ್ತ ಯುವತಿ ಬಾಗಿಲಿನ ಬಳಿ ಬಂದು ನಿಂತಿದ್ದಾಳೆ. ಅಲ್ಲಿಗೂ ಬಂದು ರೇಗಿಸಲಾರಂಭಿಸಿದವರಿಗೆ ಪೋಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾಳೆ. ಕೋಪಗೊಂಡ ಆ ನಾಲ್ಕು ಮನುಷ್ಯರೂಪಿ ರಾಕ್ಷಸರು ಚಲಿಸುವ ರೈಲಿನಿಂದ ಆಕೆಯನ್ನು ಹೊರತಳ್ಳಿಬಿಟ್ಟಿದ್ದಾರೆ. ರೈಲಾಗ ಮದ್ದೂರಿನ ಶಿಂಷಾ ನದಿಯ ಸೇತುವೆಯ ಮೇಲೆ ಚಲಿಸುತ್ತಿತ್ತು. ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಬೆನ್ನುಹುರಿಗೆ ಬಿದ್ದ ಏಟು, ಮೂಳೆಮುರಿತದಿಂದ ಎಷ್ಟರ ಮಟ್ಟಿಗೆ ಆ ಯುವತಿ ಚೇತರಿಸಿಕೊಳ್ಳುತ್ತಾಳೆ ಎಂಬುದನ್ನು ಕಾದುನೋಡಬೇಕಷ್ಟೇ.