ಡಾ ಅಶೋಕ್. ಕೆ. ಆರ್
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!