ಸೆಪ್ಟೆಂ 13, 2012

ವಿದ್ಯುತ್ ಅನಿವಾರ್ಯ ... ಆದರೆ?

ಚಿತ್ರ ಕೃಪೆ - firstpost
ಡಾ ಅಶೋಕ್ ಕೆ ಆರ್
ಕೂಡುಂಕುಳಂ ಅಣುಸ್ಥಾವರದಲ್ಲಿ ನಿನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಅಂತೋನಿ  ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ಮಜಲು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ; ಮೀನುಗಾರನ ಹತ್ಯೆಗೆ ಅವರು ಕೊಟ್ಟ ಸಮರ್ಥನೆ! ಪ್ರತಿಭಟನಾಕಾರರನ್ನು ದಾಳಿಗೆ ಪ್ರಚೋದಿಸಿದ ಕಾರಣಗಳು?!