ಸೆಪ್ಟೆಂ 13, 2014

ಧರ್ಮ ಮತ್ತು ಅಂಧತ್ವ



ಡಾ ಅಶೋಕ್ ಕೆ ಆರ್.
ಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು. 
(ಪ್ರಜಾಸಮರ ಪಾಕ್ಷಿಕಕ್ಕೆ ಬರೆದ ಲೇಖನ)

ಸೆಪ್ಟೆಂ 29, 2012

ಮನುಷ್ಯ ಧರ್ಮದ ‘ಅಂಗೈಯಲ್ಲೇ ಆಕಾಶ’




ಡಾ. ಅಶೋಕ್. ಕೆ. ಆರ್

ಹತ್ತದಿನೈದು ಸಾಲಿನಲ್ಲೇ ಮುಗಿದುಹೋಗುವ ಸಣ್ಣ ಸಣ್ಣ ಕಥೆಗಳು ಮನಸ್ಸನ್ನು ತಟ್ಟುವಷ್ಟು ದೊಡ್ಡ ಕತೆಗಳು ತಲುಪುವುದು ಕಷ್ಟ. ಹನಿಗಥೆಗಳ ಪ್ರಭಾವದ ಅರಿವಾಗಿದ್ದು ಸದತ್ ಹಸನ್ ಮಾಂಟೋ ಭಾರತ ವಿಭಜನೆಯ ಸಂದರ್ಭದಲ್ಲಿ ಬರೆದ ಕಥೆಗಳನ್ನು ಓದಿದಾಗ. ಕೆಲವೇ ಕೆಲವು ಸಾಲುಗಳಲ್ಲಿ ಜೀವನ ದರ್ಶನದ ಅನುಭವ ಮಾಡಿಸುವುದು ಕಷ್ಟವೇ ಸರಿ. ಆದರೂ ಓದಿ ಮುಗಿಸಿದ ಕೆಲವು ವರುಷಗಳ ನಂತರವೂ ನೆನಪಿನಲ್ಲುಳಿಯುವುದು ದೊಡ್ಡ ಕತೆಗಳೇ! ದೊಡ್ಡ ಕತೆಗಳು ಕಟ್ಟಿಕೊಡುವ ವ್ಯಕ್ತಿ – ಪ್ರದೇಶ – ವಿಷಯದ ವಿವರಗಳೇ ಆ ಕಥೆಗಳನ್ನು ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಎಂ. ಬಶೀರರ ಹನಿ ಹನಿ ಕತೆಗಳ ಸಂಕಲನ ‘ಅಂಗೈಯಲ್ಲೇ ಆಕಾಶ’ ಸಣ್ಣ ಕತೆಗಳ ಮಿತಿಗಳನ್ನೂ ದಾಟಿ ಬಹುದಿನಗಳವರೆಗೆ ಕಾಡುವುದು ಆ ಕತೆಗಳಲ್ಲಿನ ವಿಷಯ ವೈವಿಧ್ಯದಿಂದ; ಇಂದಿಗೂ ಮತ್ತು ಮುಂದಿಗೂ ಪ್ರಸ್ತುತವಾಗಿ ಉಳಿಯುವ ಸಂಗತಿಗಳಿಂದ.