ನವೆಂ 4, 2014

ವರ್ತಮಾನ ಬಳಗದ ಪ್ರಶಸ್ತಿ ಪ್ರಧಾನ ಸಮಾರಂಭ.

ಟಿ.ಎಸ್.ವಿವೇಕಾನಂದರಿಗೆ ಪ್ರಶಸ್ತಿ ವಿತರಣೆ
ರವಿಕೃಷ್ಣರೆಡ್ಡಿವರಿದ್ದ ಮೇಲೆ ಕಾರ್ಯಕ್ರಮವೊಂದು ಫಾರ್ಮಲ್ ಆಗಿ ನಡೆಯುವ ಸಾಧ್ಯತೆ ಅಪರೂಪ! ಬಹುಶಃ ಇದೇ ಕಾರಣಕ್ಕೋ ಏನೋ ಅವರು ಕರೆದಾಗ ಹೋಗದೇ ಇರಲು ನನಗೆ ಸಾಧ್ಯವಾಗುವುದಿಲ್ಲ! (ವರ್ತಮಾನಕ್ಕೆ ಬರೆಯುವುದನ್ನು ವೈಯಕ್ತಿಕ ಕಾರಣಗಳಿಗೆ ನಿಲ್ಲಿಸಿದ್ದರೂ ನನ್ನನ್ನೂ ಇನ್ನೂ ವರ್ತಮಾನದ ಬಳಗದವನಂತೆಯೇ ನೋಡುತ್ತಾರೆ). ಗಾಂಧಿ ಜಯಂತಿ ಕಥಾ ಸ್ಪರ್ಧೆಯ 2014ರ ವಿಜೇತರಿಗೆ 'ಬಹುಮಾನ ವಿತರಿಸಲು' ನವೆಂಬರ್ ಎರಡರಂದು ಗಾಂಧಿನಗರದ ಬಸಂತ್ ರೆಸಿಡೆನ್ಸಿಯಲ್ಲಿ 'ಕಾರ್ಯಕ್ರಮ' ಆಯೋಜಿಸಿದ್ದರು. ಬಹುಮಾನ ವಿಜೇತರಾದ ಟಿ.ಎಸ್. ವಿವೇಕಾನಂದ, ಟಿ.ಕೆ. ದಯಾನಂದ, ಡಾ.ಎಚ್. ಎಸ್. ಅನುಪಮರವರನ್ನು ವೇದಿಕೆಯ ಮೇಲೆ ಕೂರಿಸಿ, ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಹಿರೇಮಠರಿಗೆ ಶಾಲು ಹೊದಿಸಿ ಸನ್ಮಾನಿಸಿ ರವಿಕೃಷ್ಣರೆಡ್ಡಿಯವರು ಎಸ್. ಆರ್. ಹಿರೇಮಠರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಹಾಡಿ ಹೊಗಳಿ ಹಿರೇಮಠರಿಂದ ಕಥೆಗಾರರಿಗೆಲ್ಲ ಶಾಲು ಹೊದಿಸಿ ಗಂಧದ ಮಾಲೆ ಹಾಕಿಸಿ ಬಹುಮಾನವನ್ನು ವಿತರಿಸಲಾಯಿತು

ಲಡಾಯಿ ಪ್ರಕಾಶನದ ಪುಸ್ತಕ ಬಿಡುಗಡೆ ಸಮಾರಂಭ.

ladai prakashana
ದಸಂಸದವರಿಂದ ಕ್ರಾಂತಿಗೀತೆ
ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಡಾಯಿ ಪ್ರಕಾಶನ ಪ್ರಕಟಿಸಿರುವ ಹುಲಿಯ ನೆರಳಿನೊಳಗೆ, ಚೆ - ಕ್ರಾಂತಿಯ ಸಹಜೀವನ ಮತ್ತು ಮೋಟಾರ್ ಸೈಕಲ್ ಡೈರಿಯ ಕನ್ನಡ ಅವತರಿಣಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಂಧೂದರ್ ಹೊನ್ನಾಪುರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೋರ್ಟಿನ ಒತ್ತಡಕ್ಕೆ ‘ಕಪ್ಪಿಟ್ಟ’ ಸರಕಾರ: ಕಪ್ಪು ಹಣದ ಸತ್ಯ-ಮಿಥ್ಯೆಯ ಸುತ್ತ ಭಾಗ 1

Dr Ashok K R
ಕಳೆದ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎಯ ನೇತೃತ್ವ ವಹಿಸಿದ್ದ ನರೇಂದ್ರ ಮೋದಿಯವರು ಪದೇ ಪದೇ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದುದು ಪರರಾಷ್ಟ್ರಗಳಲ್ಲಿರುವ – ಹೆಚ್ಚಿನದಾಗಿ ಸ್ವಿಸ್ ಬ್ಯಾಂಕುಗಳಲ್ಲಿರುವ ‘ಕಪ್ಪು ಹಣ’ವನ್ನು ಭಾರತಕ್ಕೆ ನೂರೇ ದಿನಗಳಲ್ಲಿ ವಾಪಸ್ಸು ತರುವ ಬಗ್ಗೆ. ನೂರು ದಿನಗಳಲ್ಲಿ ಅಷ್ಟೂ ಹಣವನ್ನು ವಾಪಸ್ಸು ತಂದು ಭಾರತದ ಏಳ್ಗೆಗೆ ಕಾಣ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದರು. ಉಳಿದನೇಕ ಕಾರಣಗಳಿಂದ ಮತ್ತು ತಮ್ಮ ವೈಯಕ್ತಿಕ ಪ್ರಭಾವದಿಂದ ಬಿಜೆಪಿ ಏಕಪಕ್ಷವಾಗಿ ಸರಕಾರ ನಡೆಸುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ನಿರೀಕ್ಷೆಯಂತೆ ನೂರು ದಿನಗಳೊಳಗೆ ಕಪ್ಪು ಹಣವೆಲ್ಲ ವಾಪಸ್ಸು ಬಂತೇ?

ನವೆಂ 2, 2014

ನಾಲ್ಕಕ್ಷರ ಕಲಿ(ತ)ಯದ ದಲಿತರು ಮೊದಲು ಅಟ್ರಾಸಿಟಿ ಮನಸ್ಥಿತಿಯಿಂದ ಹೊರಬರಬೇಕು

false atrocity case
M L Lingaraju, Prajasamara
   ಸದುದ್ದೇಶದಿಂದ ಜಾರಿಗೆ ಬಂದಿದ್ದ ಜಾತಿನಿಂದನೆ, ಅಟ್ರಾಸಿಟಿ ಪ್ರಕರಣ ಇಂದು ಎಷ್ಟರ ಮಟ್ಟಿಗೆ ದುರುಪಯೋಗವಾಗುತ್ತಿದೆ ಎಂದರೆ, ನಿಜಕ್ಕೂ ಬೇಸರವಾಗುತ್ತದೆ. ಮೊನ್ನೆ ಫೇಸ್ಬುಕ್ನಲ್ಲಿ ದಲಿತ ಯುವಕನು ಹಾಕಿದ್ದ ಸ್ಟೇಟಸ್ಗೆ ಇನ್ನಾವುದೋ ಕೋಮಿನ ಯುವಕ ಕಮೆಂಟು ಮಾಡಿದ್ದಕ್ಕೆ ರಾದ್ಧಾಂತವೇ ನಡೆದುಹೋಯಿತು. ಸ್ಟೇಟಸ್ ಹಾಕಿದ್ದ ದಲಿತ ಯುವಕ, ಕಮೆಂಟ್ ಮಾಡಿದವನ ಮೇಲೆ ನಾಳೆ ಅಟ್ರಾಸಿಟಿ ದಾಖಲು ಮಾಡುವುದಾಗಿ ಅದಕ್ಕಾಗಿ ನನ್ನ ಬೆಂಬಲಕ್ಕೆ ಬರುವ ಸ್ನೇಹಿತರಿದ್ದರೆ, ಬನ್ನಿ ಎಂದು ಕರೆ ನೀಡಿದ್ದ.

ಅಕ್ಟೋ 31, 2014

ವಾಡಿ ಜಂಕ್ಷನ್ .... ಭಾಗ 5

wadi junction

Dr Ashok K R
ಮತ್ತೆ ನಿಲ್ದಾಣದಲ್ಲಿ
“ಮೊದಲ ವರ್ಷ, ಅದೂ ಕಾಲೇಜಿಗೆ ಸೇರಿ ಮೂರು ತಿಂಗಳಾಗಿದೆ ಅಷ್ಟೇ. ಈಗಲೇ ಹೀಗೆ ಇನ್ನು ಮುಂದೆ?” ಪ್ರಿನ್ಸಿಪಾಲರು ಯಾವುದೋ ಕಾಗದಗಳಿಗೆ ಸಹಿಹಾಕುತ್ತಾ ಪ್ರಶ್ನಿಸಿದರು. ರಾಘು, ಅಭಯ್, ತುಷಿನ್, ಕ್ರಾಂತಿ ತಲೆತಗ್ಗಿಸಿದಂತೆ ನಿಂತಿದ್ದರು.
“ಇನ್ನು ಮುಂದೆ ಈ ರೀತಿ ಮಾಡಲ್ಲ ಬಿಡ್ರಿ ಸರ್” ರಾಘು ಮೆಲ್ಲನೆ ಹೇಳಿದ.
“ಯಾರ್ ಯಾರ್ ಹೇಳಿದ್ದು” ಪ್ರಿನ್ಸಿಪಾಲ್ ಕಾಗದದಿಂದ ತಲೆಎತ್ತಿದರು. ಎಲ್ಲರೂ ಯಾರೂ ಮಾತನಾಡಿದ್ದೆಂಬಂತೆ ಅಚ್ಚರಿ ವ್ಯಕ್ತಪಡಿಸುತ್ತಾ ಒಬ್ಬರನ್ನೊಬ್ಬರು ನೋಡಿದರು. ಮತ್ತೆ ತಲೆತಗ್ಗಿಸಿದರು. ಆ ರೀತಿ ನಿಲ್ಲಬೇಕಾದ ಸಂದರ್ಭವನ್ನು ತಾವಾಗೇ ಸೃಷ್ಟಿಸಿಕೊಂಡಿದ್ದರು.
ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಲೇಜಿನಿಂದ ಎರಡ್ಮೂರು ಕಿಮಿ ಕ್ರಮಸಿದರೆ ಸಿದ್ಧಲಿಂಗಪುರ, ಅಲ್ಲಿಂದ ಹತ್ತಿಪ್ಪತ್ತೆಜ್ಜೆ ದಾಟಿ ಎಡಕ್ಕೆ ಹೊರಳಿದರೆ ಎ-1 ಡಾಬಾ. ನಾಲ್ವರೂ ಸಂಜೆ ಏಳಕ್ಕೆ ಅಲ್ಲಿ ಸೇರಿದ್ದರು. ಊಟ ಮಾತು. ಹತ್ತು ಘಂಟೆ ಆಗುತ್ತಿದ್ದಂತೆ ರಾಘವ “ಒಂದು ಕೆ.ಎಫ್ ಸ್ಟ್ರಾಂಗ್ ತಗೊಂಡು ಬಾ” ಅಂದ ಅಷ್ಟರಲ್ಲಾಗಲೇ ಪರಿಚಯವಾಗಿದ್ದ ಕುಮಾರನಿಗೆ.
ಉಳಿದ ಮೂವರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

ಅಕ್ಟೋ 29, 2014

P. Sainath: 100 days of Namo and Sycophant media.



Sainath P
ಪಿ. ಸಾಯಿನಾಥ್

P.Sainath
Its barely a couple of weeks ago since the media and the elite celebrated hundred days of the Modi government in power. I want to speak about the media, because at this point the media are an embarrassment not only to themselves but to Mr Modi’s public relation officers who must be feeling insecure about their jobs! You know, so since the media are doing so much better, the sycophantic projection, that PR firm which he had hired, I don’t think there contract need be renewed. The first hundred days, you know we had that tamasha over the first hundred days, I ask myself this question whether its Mr Modi or whether it is Mr Dr Manmohan singh or whoever, what about, what happens in those hundred days typically in rural area. 

ಅಕ್ಟೋ 27, 2014

ಮಾಧ್ಯಮ ಮತ್ತು ಜನಸಾಮಾನ್ಯ

media and common man
Dr Ashok K R


ಭಾರತದ ಮಕ್ಕಳ ಏಳಿಗೆಗಾಗಿ, ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರ ವಿರುದ್ಧ ಅವಿರತ ಹೋರಾಟ ಮಾಡಿದ ಕೈಲಾಶ್ ಸತ್ಯಾರ್ಥಿ ಎನ್ನುವವರಿಗೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಹಿಯ ಜೊತೆಗೆ ಜಂಟಿಯಾಗಿ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಘೋಷಣೆಯಾಯಿತು. ಇದ್ದಕ್ಕಿದ್ದಂತೆ ಭಾರತಕ್ಕೆ ಬಂದ ನೋಬಲ್ ಪ್ರಶಸ್ತಿ ಸಂತಸ ನೀಡುವುದರ ಜೊತೆಜೊತೆಗೆ “ಯಾರಿದು ಕೈಲಾಶ್ ಸತ್ಯಾರ್ಥಿ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು. ಬಹುಶಃ ಕೈಲಾಶ್ ಸತ್ಯಾರ್ಥಿಯ ಸಂಘಟನೆಗೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಇನ್ಯಾರಿಗೂ ಅವರ ಹೆಸರಾಗಲೀ ಅವರ ಕೆಲಸ ಕಾರ್ಯಗಳಾಗಲೀ ತಿಳಿದೇ ಇರಲಿಲ್ಲ. ನೋಬೆಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಎಲ್ಲೆಡೆಯೂ ಅವರ ಬಗ್ಗೆಯೇ ಮಾತು, ಅವರ ಬಗ್ಗೆಯೇ ಚರ್ಚೆ. ದೂರದೂರಿನವರಿಗಿರಲಿ ಅವರು ಕೆಲಸ ಮಾಡುತ್ತಿದ್ದ ರಾಜ್ಯದ ಹೆಚ್ಚಿನ ಜನರಿಗೂ ಅವರ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲವಂತೆ. ಎಲೆಮರೆಕಾಯಿಯಂತೆ ಅವರು ಕೆಲಸ ನಿರ್ವಹಿಸಿದ್ದನ್ನು ಒಪ್ಪಿಕೊಳ್ಳಬಹುದಾದರೂ ಜನಸಾಮಾನ್ಯರಿಗೆ ಜನಸಾಮಾನ್ಯರ ಮಧ್ಯೆಯೇ ಇದ್ದು ಅತ್ಯುತ್ತಮವೆನ್ನಿಸುವಂತಹ ಕೆಲಸ ಮಾಡುತ್ತಿರುವ ಕೈಲಾಶ್ ಸತ್ಯಾರ್ಥಿಯವರನ್ನು ನೋಬೆಲ್ ಬರುವುದಕ್ಕೆ ಮುಂಚೆಯೇ ಪರಿಚಯಿಸುವ ಕೆಲಸ ಮಾಧ್ಯಮದ್ದಾಗಿತ್ತಲ್ಲವೇ? ಒಬ್ಬ ವ್ಯಕ್ತಿ ಆತನ ಕೆಲಸಗಳು ನಮ್ಮ ಮಾಧ್ಯಮದಲ್ಲಿ ಬರುವುದಕ್ಕೂ ವಿದೇಶಿ ಪ್ರಶಸ್ತಿಯೊಂದು ಅವರಿಗೆ ಸಿಗುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಾದರೂ ಯಾಕೆ?

ಅಕ್ಟೋ 24, 2014

ವಾಡಿ ಜಂಕ್ಷನ್ .... ಭಾಗ 4

wadi junction
Dr Ashok K R
ಇನ್ನು ನಮ್ಮ ಅಭಯ್, ಅಭಯ್‍ಗೌಡ ಬಸನಗೌಡ ಪೋಲೀಸ್ ಪಾಟೀಲ್ – ಆಗಿನ ರಾಯಚೂರಿನ ಈಗಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಷ್ಟಗಿ ತಾಲ್ಲೂಕಿನ ತಾವರಗೆರೆಯವನು. ತಂದೆತಾಯಿಗೆ ಮೂವರು ಮಕ್ಕಳು. ಇವನು ಮೂರನೆಯವನು. ಒಬ್ಬ ಅಣ್ಣ ಬಿಎಸ್ಸಿವರೆಗೆ ಓದಿಕೊಂಡು ತಾವರಗೆರೆಯಲ್ಲೇ ಜಮೀನು ನೋಡಿಕೊಳ್ಳುತ್ತಾನೆ, ನೋಡುತ್ತಾನಷ್ಟೇ ಕೆಲಸಗಳನ್ನೆಲ್ಲಾ ಅವನ ತಂದೆಯೇ ಮಾಡಿಸುತ್ತಾರೆ. ಮಧ್ಯದವಳು ಅಂದ್ರೆ ಅಭಯನ ಅಕ್ಕ ಬಿ.ಕಾಮ್ ಮಾಡಿದ್ದಾಳೆ. ಅಭಯ್ ಮೈಸೂರನ್ನು ಉದ್ಧರಿಸಲು ಬರುವುದಕ್ಕೆ ಸ್ವಲ್ಪ ದಿನಗಳ ಮುಂಚೆ ಆಕೆಯ ಮದುವೆಯಾಯಿತು. ಆಕೆಯೀಗ ಕಲ್ಬುರ್ಗಿಯಲ್ಲಿದ್ದಾಳೆ. ‘ನಾನೇ ಮೂರನೆಯವನು. ಅಪ್ಪ ಅಮ್ಮನಿಗಾಗಲೇ ಮಕ್ಕಳ ಮೇಲಿನ ಆಸ್ಥೆ ಕಡಿಮೆಯಾಗಿತ್ತು. ಈಗಲೇ ಆಪರೇಷನ್ ಮಾಡಿಸಿಕೊಳ್ಳೋದೋ ಬೇಡವೋ ಎಂಬ ಸಂದಿಗ್ಧದಲ್ಲಿದ್ದಾಗ ಹುಟ್ಟಿದವನು ನಾನು. ಭೂಮಿಗೆ ಅಷ್ಟಾಗಿ ನನ್ನ ಅವಶ್ಯಕತೆ ಇರಲಿಲ್ಲವೇನೋ?’ ಇದವನ ಎಂದಿನ ಪ್ರವರ. ಆತ ಹೀಗೆ ದೂರುತ್ತಾನಲ್ಲ, ತಂದೆ ತಾಯಿ ಇವನನ್ನು ಕಡೆಗಣಿಸುತ್ತಾರ ಅಂದರೆ ಅದೂ ಇಲ್ಲ. ಉಳಿದವರ ಮೇಲಿರುವಷ್ಟೇ ಅಕ್ಕರೆ ಇವನ ಮೇಲೂ ಇದೆ.ಇವನಲ್ಲೇ ಬಹುಷಃ ಕೊರಗಿರಬೇಕು. ಏಳನೇ ತರಗತಿಯವರೆಗೆ ತಾವರಗೆರೆಯಲ್ಲೇ ಓದಿ ನಂತರ ಧಾರವಾಡಕ್ಕೆ ವಲಸೆ ಹೋಸ. ಎಸ್.ಡಿ.ಎಂನಲ್ಲಿ ಮುಂದಿನ ಅಧ್ಯಯನ. ರಂಗೀಲಾದ ಹಾಡು ಗುನುಗುತ್ತಾ ಪತ್ರಿಕೆಯಲ್ಲಿ ಬಂದಿದ್ದ ನಗ್ನಬಾಲಿಕೆಯ ಮೊಲೆಯ ಮೇಲೆ ತನ್ನ ಹೆಸರು ಬರೆಯುತ್ತಿದ್ದವನಿಗೆ ಹಿಂದಿನಿಂದ ತಂದೆ ಬಂದು ಬಿಂತಿದ್ದು ಅರಿವಿಗೇ ಬಂದಿರಲಿಲ್ಲ. ‘ಏನಪ್ಪಾ ಬರಿ ಅಭಯ್ ಅಂತ ಬರೆದುಬಿಟ್ಟೆ. ಪೂರ್ತಿ ಹೆಸರು ಬರಿ. ನಮ್ಮ ವಂಶದ ಕೀರ್ತಿನಾದರೂ ಬೆಳೆಯುತ್ತೆ’ ಎಂದು ಅವನ ತಂದೆ ನುಡಿದಾಗ ಇವನ ಸ್ಥಿತಿ......ಸಮಾನತೆ ಸ್ವಾತಂತ್ರ್ಯಕ್ಕಿಂತ ಮುಖ್ಯ ಎಂಬ ಭಾವನೆಯವನು. ಪ್ರತಿಭಾವಂತನಲ್ಲ, ಕೆಲಸ ಸಿಗುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿ ಹಸಿದು ಮಲಗುತ್ತಾನೆಂದರೆ ಅದು ನಮ್ಮ ದೇಶದ ಅಧಃಪತನದ ಸಂಕೇತ ಎನ್ನುತ್ತಾನೆ. ಬಹಳಷ್ಟು ಬಾರಿ ಆತನ ಮಾತುಗಳು ನಮಗೆ ಅರ್ಥವಾಗುವುದಿಲ್ಲ.

ಅಕ್ಟೋ 23, 2014

ಫ್ಯಾಕ್ಟರಿ ಹಾಲು!

Muufri
ಹಾಲು ಫ್ಯಾಕ್ಟರಿ!
ದೂರದ ಅಮೆರಿಕಾದಲ್ಲಿ ಭಾರತೀಯ ಮೂಲದವರಾದ ರಿಯಾನ್ ಪಾಂಡೆ, ಪೆರುಮಾಲ್ ಗಾಂಧಿ ಮತ್ತು ಇಶಾ ದತಾರ್ ಸೇರಿಕೊಂಡು ಹಾಲಿನ ಫ್ಯಾಕ್ಟರಿ ತಯಾರಿಸುವ ಉತ್ಸಾಹದಲ್ಲಿದ್ದಾರೆ. Genetically engineered ಹಸುಗಳನ್ನು ಚಿಕ್ಕ ಜಾಗದಲ್ಲಿ ಗುಡ್ಡೆ ಹಾಕಿಕೊಂಡು ಹಾಲು ಉತ್ಪಾದಿಸುವ ಫ್ಯಾಕ್ಟರಿ ಎಲ್ಲೆಡೆಯೂ ಇರುವಾಗ ಈ ಹಾಲಿನ ಫ್ಯಾಕ್ಟರಿಯ ವಿಶೇಷವೇನೆಂದರೆ ಇಲ್ಲಿ ಹಸುಗಳೊಂದೂ ಇರುವುದಿಲ್ಲ! ಬೇರೆ ಪ್ರಾಣಿಯೂ ಇರುವುದಿಲ್ಲ ಎಂಬುದನ್ನು ನೆನಪಿಡಿ! ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿರುವ ಮುಫ್ರಿ ತಂಡದ ಪ್ರಯತ್ನವಿದು!
Also Read
ಹಿಂಗೂ ಇರುತ್ತೆ!

ಅಕ್ಟೋ 22, 2014

ಅಂಬೇಡ್ಕರ್ ವಾದಿಯ ಕಣ್ಣಲ್ಲಿ ಬಾಬಾಸಾಹೇಬ್

ladai prakashana
ಬಿ. ಶ್ರೀಪಾದ್ ಭಾವಾನುವಾದ ಮಾಡಿರುವ ನಾಮದೇವ ನಿಮ್ಗಾಡೆ ಬರೆದಿರುವ "ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ" ಪುಸ್ತಕದ ಬಗ್ಗೆ ಡಾ.ಎಚ್.ಎಸ್. ಅನುಪಮರವರ ಬರಹ. ಲಡಾಯಿ ಪ್ರಕಾಶನದಿಂದ ಮುದ್ರಣ ಕಂಡಿರುವ ಪುಸ್ತಕ ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.



 ಮಧ್ಯಪ್ರದೇಶದ ಸಾತಗಾಂವ್ ಎಂಬ ಹಳ್ಳಿಯ ಮಹಾರ್ ಕೇರಿಯಲ್ಲಿ 1920ನೇ ಇಸವಿಯ `ಮಳೆಗಾಲದ ಯಾವುದೋ ಒಂದು ದಿನ ಹುಟ್ಟಿದ ನಾಮದೇವನೆಂಬ ಹುಡುಗನೊಬ್ಬ, ತನ್ನ 14ನೇ ವರ್ಷಕ್ಕೆ ಶಾಲೆ ಸೇರಿ ಓದಿ, ಪದವೀಧರನಾಗಿ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಿ, ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ನಾಮದೇವ್ ನಿಮ್ಗಾಡೆಯಾಗಿ ಬೆಳೆದ ಕತೆಯೇ, `ಇನ್ ಟೈಗರ್ಸ್ ಶಾಡೋ.’
ಉಳಿದ ದಲಿತ ಆತ್ಮಕಥೆಗಳಲ್ಲಿರುವಂತೆಯೇ ಇಲ್ಲೂ ನಿಮ್ಗಾಡೆ ತಾವು ಎದುರಿಸಿದ ಅಸ್ಪೃಶ್ಯತೆಯ ಅವಮಾನ, ಜಾತೀಯತೆಯ ಕ್ರೌರ್ಯಗಳು, ಮಾನವೀಯ ಅನುಕಂಪದ ಸಹಾಯಗಳು ಇವನ್ನೆಲ್ಲ ನೆನೆದು ದಾಖಲಿಸುತ್ತಲೇ, ಅಂಬೇಡ್ಕರ್ ಅವರ ವ್ಯಕ್ತಿತ್ವ-ವೈಯುಕ್ತಿಕ ಜೀವನದ ಬಗೆಗೊಂದು ಆಪ್ತ ಮತ್ತು ಖಾಸಾ ಆದ ಫಸ್ಟ್ಹ್ಯಾಂಡ್ ನೋಟವೊಂದನ್ನು ಕೊಟ್ಟಿದ್ದಾರೆ. ಕಳೆದ ಶತಮಾನದ 40-50 ದಶಕವು ನಮ್ಮ ದೇಶದ ಮಟ್ಟಿಗೆ ಮಹಾಸಂಕ್ರಮಣದ ಕಾಲ. ದಿನಗಳಲ್ಲಿ ಅಂಬೇಡ್ಕರರೊಡನೆ ಹತ್ತಿರದಿಂದ ಒಡನಾಡಿದ ನಾಮದೇವ ನಿಮ್ಗಾಡೆ, ತಮ್ಮ ಗುರು-ಸ್ಪೂರ್ತಿ-ಸಲಹಾಕಾರ-ಆಪದ್ಭಾಂಧವ ಎಲ್ಲವೂ ಆಗಿದ್ದ ಬಾಬಾಸಾಹೇಬ್ ಅವರನ್ನು ಹೆಜ್ಜೆಹೆಜ್ಜೆಗೂ ನೆನಪಿಸಿಕೊಂಡಿದ್ದಾರೆ. ತಮ್ಮ ಯಶಸ್ಸಿನ ರೂವಾರಿ ಅವರೇ ಎಂದು ಹುಲಿ ನಡೆದ ಜಾಡಿನಲ್ಲಿ ನಡೆಯುತ್ತಾರೆ.
ಪುಸ್ತಕದ ಬಗೆಗೆ ಹೆಚ್ಚು ಬರೆಯುವುದಕ್ಕಿಂತ ಅದರ ಇಣುಕುನೋಟವನ್ನು ಕೊಡುವುದು ಸೂಕ್ತ. ಅದರಲ್ಲೂ ಮತ್ತೆಮತ್ತೆ ಬರುವ ಅಂಬೇಡ್ಕರ್ ಕುರಿತಾದ ಘಟನೆಗಳ ಸಾರಸಂಗ್ರಹ ಇಲ್ಲಿದೆ..