Elections are nearing. Probably Loksabha elections in India was never portrayed like the one we are seeing in this. Instead of being a democratic election's publicity it has become a fight between the two individuals. Here is a small piece of article which i read in facebook. Appears hilarious but unfortunately true - hingyake
ಮಾರ್ಚ್ 8, 2014
ಮಾರ್ಚ್ 7, 2014
ನದಿ ತಿರುಗಿಸುವ ದುಸ್ಸಾಹಸ.....
ಡಾ.ಅಶೋಕ್.ಕೆ.ಆರ್.
ನಾಗರೀಕತೆಗೆ ಮೂಲವಾದ ನದಿಗಳ ಬಗೆಗಿನ ಮನುಷ್ಯನ ನೋಟ ದಿಕ್ಕುತಪ್ಪಿಹೋಗಿದೆ.
ಪ್ರಪಂಚದೆಲ್ಲರಿಗಿಂತ ಬುದ್ಧಿವಂತ ಜೀವಿ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡರೂ ಪ್ರಕೃತಿಯ ಮುಂದೆ
ನಾವೆಲ್ಲರೂ ತೃಣಮಾತ್ರರೆಂಬುದನ್ನು ಮರೆಯಬಾರದು. ಪ್ರಕೃತಿ ಪ್ರತಿಯೊಂದನ್ನೂ ಕಾರಣವಿಲ್ಲದೆ ಮಾಡುವುದಿಲ್ಲ,
ಅದು ನದಿಯ ಹರಿವಿನ ಜಾಡಿರಬಹುದು, ನದಿ ಸಮುದ್ರಕ್ಕೆ ಸೇರುವ ಬಗೆಯಿರಬಹುದು ಪ್ರತಿಯೊಂದಕ್ಕೂ ಕಾರಣವಿದ್ದೇ
ಇದೆ; ಜೀವಸಂಕುಲವನ್ನು ಪೊರೆಯುವ ಪ್ರಕೃತಿಯ ಪ್ರೀತಿಯ ಸಿಂಚನವಿದೆ. ಇಂತಹ ಪರಿಸರವನ್ನು ಮಲಿನಗೊಳಿಸಿದ
ಮೊದಲ ಶ್ರೇಯಸ್ಸು ಶತಶತಮಾನಗಳ ಹಿಂದೆ ಕೃತಕವಾಗಿ ಬೆಂಕಿ ಸೃಷ್ಟಿಸಿದ ಆದಿಮಾನವನದು. ಪ್ರಕೃತಿಯ ವಿರುದ್ಧ
ಈಜಲು ತೊಡಗಿದ್ದು ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆ ನಿಂತು ವ್ಯವಾಸಾಯ ಆರಂಭಿಸಿದ ತಲೆಮಾರಿನದು.
ಅಂದಿನಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧ ಈಜುತ್ತಲೇ ಇದ್ದೇವೆ,
ನಮ್ಮ ಶಕ್ತಿಗೆ ತಕ್ಕಷ್ಟು ಪರಿಸರ ನಾಶಗೊಳಿಸುತ್ತಲೇ ಸಾಗಿದ್ದೇವೆ.
ಮಾರ್ಚ್ 1, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 20
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ ಭಾಗ 19 ಓದಲು ಇಲ್ಲಿ ಕ್ಲಿಕ್ಕಿಸಿ
"ಬಾಂಬ್’ ಎಸ್.ಐ ಬಂಧನ!”
ಲೋಕಿ ಸಿಂಚನಾಳ ಬಳಿ ಬಂದು
“ಮಧುರೈಗೆ ಹೋಗಲು ಇದು ಸರಿಯಾದ ದಾರಿ ಅಲ್ವಂತೆ? ಕರ್ನಾಟಕ ರಿಜಿಸ್ಟ್ರೇಷನ್ ಇರೋ ಬಸ್ಸನ್ನೇ ಮಾಡಬಹುದಿತ್ತಲ್ವಾ?”
“ಕರ್ನಾಟಕ ರಿಜಿಸ್ಟ್ರೇಷನ್
ಇರೋ ಗಾಡಿ ಮಾಡಿದ್ದರೆ ಆರು ಸಾವಿರ ರೋಡ್ ಟ್ಯಾಕ್ಸ್ ಕಟ್ಟಬೇಕಿತ್ತು ತಮಿಳುನಾಡಿನಲ್ಲಿ. ಅದಿಕ್ಕೆ
ಹೋಗೋದು ಸ್ವಲ್ಪ ಲೇಟಾದ್ರೂ ಪರವಾಗಿಲ್ಲ ಅಂತ ಈ ಬಸ್ಸನ್ನೇ ಮಾಡಿದ್ದು”
ಫೆಬ್ರ 22, 2014
ವಿಶೇಷಗಳಿಲ್ಲದ ನಿರಾಸದಾಯಕವೂ ಅಲ್ಲದ ಕರ್ನಾಟಕ ಬಜೆಟ್.
ಡಾ ಅಶೋಕ್ ಕೆ ಆರ್
ಮತ್ತೊಂದು ಬಜೆಟ್ಟಿನ ಸಮಯ. ಕಳೆದ ವರುಷ ಚುನಾಯಿತವಾದ ಕಾಂಗ್ರೆಸ್ ಸಿದ್ಧರಾಮಯ್ಯನವರ
ನೇತೃತ್ವದಲ್ಲಿ ಮತ್ತೊಂದು ಬಜೆಟ್ ಮಂಡಿಸಿದೆ. ದಾಖಲೆಯ ಒಂಭತ್ತನೆಯ ಬಾರಿಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ
ಸಿದ್ಧರಾಮಯ್ಯನವರ 2014 – 2015ರ ಸಾಲಿನ ಬಜೆಟ್ಟಿನ ಮೇಲೆ ಯಾರಿಗೂ ಅತಿಯಾದ ನಿರೀಕ್ಷೆಗಳೇನಿರಲಿಲ್ಲ.
ಇದು ಲೋಕಸಭಾ ಚುನಾವಣೆ ಇರುವ ವರುಷವಾದ್ದರಿಂದ ತೆರಿಗೆಯನ್ನು ಮತ್ತಷ್ಟು ಹೊರೆಯಾಗಿಸುವ ಸಾಧ್ಯತೆ ಕಡಿಮೆಯೆಂಬುದು
ಎಲ್ಲರ ಭಾವನೆಯಾಗಿತ್ತು. ಒಂದಷ್ಟು ತೆರಿಗೆ ಕಡಿತ ಮಾಡಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಮತ ಹೆಚ್ಚಿಸಿಕೊಳ್ಳಬಹುದೆಂಬ
ಭಾವನೆಯೂ ಇತ್ತು. ಇಡೀ ದೇಶದ ಆರ್ಥಿಕತೆಯೇ ಒಂದಷ್ಟು ಕುಂಟುತ್ತ ತೆವಳುತ್ತ ಸಾಗುತ್ತಿರುವಾಗ ಕರ್ನಾಟಕ
ಬಜೆಟ್ಟಿನಲ್ಲಿ ದೂರದೃಷ್ಟಿಯ ಬೃಹತ್ ವ್ಯಾಪ್ತಿಯ ಯೋಜನೆಗಳನ್ನು ನಿರೀಕ್ಷಿಸುವುದು ತಪ್ಪಾದೀತು. ಆದರೂ
ಉತ್ತಮ ಹಣಕಾಸು ಸಚಿವರಾಗಿ ಹೆಸರು ಮಾಡಿರುವ ಸಿದ್ಧರಾಮಯ್ಯ ಆರ್ಥಿಕ ಶಿಸ್ತನ್ನು ತಂದು ಒಂದಷ್ಟು ದೂರದೃಷ್ಟಿಯ
ಯೋಜನೆಗಳನ್ನು ಘೋಷಿಸಬಹುದೇನೋ ಎಂಬುದು ಕೆಲವರ ನಿರೀಕ್ಷೆಯಾಗಿತ್ತು. ಅತ್ತ ಪರಿಪೂರ್ಣವೂ ಅಲ್ಲದ ಇತ್ತ
ಚುನಾವಣೆಯನ್ನಷ್ಟೇ ಗುರಿಯಾಗಿಸಿಕೊಂಡು ತಯಾರಿಸಿರದ ಆಯವ್ಯಯವನ್ನು ಸಿದ್ಧರಾಮಯ್ಯನವರು ಮಂಡಿಸಿದ್ದಾರೆ.
ಒಂದಷ್ಟು ಉತ್ತಮ ಯೋಜನೆಗಳು ಇರುವುದಾದರೂ ಸಿದ್ಧರಾಮಯ್ಯನವರಿಂದ ಮತ್ತಷ್ಟು ಮಗದಷ್ಟು ನಿರೀಕ್ಷೆ ಮಾಡಿದ್ದರೆ
ತಪ್ಪಲ್ಲ.
ಫೆಬ್ರ 21, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 19
“ನಾಳೆ ಟೂರಿಗೆ ಹೊರಡೋದಿಕ್ಕೆ
ಎಲ್ಲಾ ಸಿದ್ಧ ಮಾಡಿಕೊಂಡಾ ಲೋಕಿ?”
“ನಾಳೆ ಸಂಜೆ ಹೊರಡೋದಲ್ವಾ,
ನಾಳೆ ಮಧ್ಯಾಹ್ನ ಒಂದು ಮೂರು ಜೊತೆ ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಬಂದರೆ ಆಯಿತು”.
ಫೆಬ್ರ 20, 2014
ಫೆಬ್ರ 19, 2014
ಫೆಬ್ರ 13, 2014
ಆದರ್ಶವೇ ಬೆನ್ನು ಹತ್ತಿ .... ಭಾಗ 18
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 17 ಓದಲು ಇಲ್ಲಿ ಕ್ಲಿಕ್ಕಿಸಿ
ಆದರ್ಶವೇ ಬೆನ್ನು ಹತ್ತಿ .... ಭಾಗ 17 ಓದಲು ಇಲ್ಲಿ ಕ್ಲಿಕ್ಕಿಸಿ
ಕಾಲೇಜಿನ ಒಳಗೆ ಹೋಗುವಾಗಲೇ
ಲೋಕಿಗೆ ಸಿಂಚನಾ ಸಿಕ್ಕಿದಳು. “ಯಾಕೋ ಲೋಕೇಶ್ ಟ್ರಿಪ್ಪಿಗೆ ಬರಲ್ಲ ಅಂದುಬಿಟ್ಯಂತೆ. ಪೂರ್ಣಿ ಬರ್ತಾ
ಇದ್ದಾಳೆ. ನೀನು ಬರೋದಿಲ್ಲ ಅಂದರೆ ಹೇಗೆ ಹೇಳು?” ಮುಗುಳ್ನಗುತ್ತಾ ಕೇಳಿದಳು ಸಿಂಚನಾ.
‘ಏನು ಕಾರಣ ಅಂತ ಹೇಳೋದು?’
ಎಂದು ಯೋಚಿಸುತ್ತಾ “ಶಿವಮೊಗ್ಗದ ಕಡೆಯ ಊರುಗಳನ್ನೆಲ್ಲಾ ನೋಡಿಬಿಟ್ಟಿದ್ದೀನಿ ಸಿಂಚನಾ. ಅದಕ್ಕೆ ಬರಲ್ಲ
ಅಂದೆ”
ಫೆಬ್ರ 12, 2014
ಮತ್ತೆ ಮತ್ತೆ ಡಬ್ಬಿಂಗ್ - - - ಸ್ವಾರ್ಥ ಅಹಂಕಾರದ ಸೋಗಿನಲ್ಲಿ ‘ಸಂಸ್ಕೃತಿ’ಯ ರಕ್ಷಣೆ?!
ಡಾ ಅಶೋಕ್. ಕೆ. ಆರ್.
ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.
ವರುಷದ ನಂತರ ಮತ್ತೆ ಕರ್ನಾಟಕದಲ್ಲಿ ‘ಡಬ್ಬಿಂಗ್’ ಬಗೆಗಿನ ಚರ್ಚೆ ತಾರಕಕ್ಕೇರಿದೆ. ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ವಿರೋಧಿಸುವವರ ನಡುವಿನ ವಾಕ್ಸಮರವೂ ಹೆಚ್ಚಾಗುತ್ತ ಕೆಲವೊಮ್ಮೆ ಹೀನ ಭಾಷೆಯ ಪ್ರಯೋಗವೂ ಆಗುತ್ತಿದೆ. ಈ ವರುಷವಾದರೂ ಡಬ್ಬಿಂಗ್ ಬಗೆಗಿನ ಚರ್ಚೆ ಒಂದು ತಾರ್ಕಿಕ ಅಂತ್ಯ ಕಾಣುತ್ತದಾ ಅಥವಾ ಕಳೆದ ಸಲವಾದಂತೆ ಈ ಸಲವೂ ಯಾವೊಂದು ನಿರ್ಣಯವೂ ಸಾಧ್ಯವಾಗದೆ ಯಥಾಸ್ಥಿತಿ ಮುಂದುವರೆದು ಮತ್ತೊಂದು ವರುಷವೋ ಎರಡು ವರುಷದ ನಂತರವೋ ಮತ್ತೆ ಡಬ್ಬಿಂಗ್ ವಿವಾದಕ್ಕೊಳಪಟ್ಟು ಸುದ್ದಿ ಮಾಡುತ್ತದಾ? ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪತ್ರಿಕಾಗೋಷ್ಟಿಯಲ್ಲಿ ಡಬ್ಬಿಂಗ್ ಪರ – ವಿರೋಧಿಗಳು ಹೇಳುವ ಸಂಗತಿಗಳೆಲ್ಲವೂ ಡಬ್ಬಿಂಗ್ ವಿಷಯದ ಬಗೆಗಿನ ಮೇಲ್ನೋಟದ ಸಂಗತಿಗಳೇ ಹೊರತು ಅಂತರಾಳದಲ್ಲಿರುವ ಸತ್ಯಗಳನ್ನು ಜನರಿಗೆ ತಿಳಿಸುವ ಯತ್ನವನ್ನು ಡಬ್ಬಿಂಗ್ ಪರವಾಗಿರುವವರೂ ಮಾಡುತ್ತಿಲ್ಲ, ಡಬ್ಬಿಂಗ್ ವಿರೋಧಿಗಳೂ ಮಾಡುತ್ತಿಲ್ಲ.