ಸೆಪ್ಟೆಂ 24, 2012

ಬರಹಗಾರನ ಭಾಷೆ ಮತ್ತು ಸ್ಮಾರಕ


R K Narayan's house in Mysore
ಡಾ ಅಶೋಕ್ ಕೆ. ಆರ್.
ಆರ್. ಕೆ. ನಾರಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.

ಸೆಪ್ಟೆಂ 14, 2012

ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ


ಚಿತ್ರಮೂಲ - kvgmi
 ಡಾ ಅಶೋಕ್ ಕೆ ಆರ್
ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ.

ಸೆಪ್ಟೆಂ 13, 2012

ವಿದ್ಯುತ್ ಅನಿವಾರ್ಯ ... ಆದರೆ?

ಚಿತ್ರ ಕೃಪೆ - firstpost
ಡಾ ಅಶೋಕ್ ಕೆ ಆರ್
ಕೂಡುಂಕುಳಂ ಅಣುಸ್ಥಾವರದಲ್ಲಿ ನಿನ್ನೆ [10/09/1012] ಯುರೇನಿಯಂ ಇಂಧನವನ್ನು ತುಂಬುವುದರ ವಿರುದ್ಧ ನಡೆದ ಪ್ರತಿಭಟನೆ ಅಂತೋನಿ  ಜಾನ್ ಎಂಬ ಮೀನುಗಾರನ ಹತ್ಯೆಯಿಂದ ಹೊಸ ಮಜಲು ಪಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ತೂತ್ತುಕುಡಿಯಲ್ಲಿ ಪೋಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ ಎಂಬುದು ಅಲ್ಲಿನ ಹಿರಿಯ ಪೋಲೀಸ್ ಅಧಿಕಾರಿಗಳ ಹೇಳಿಕೆ; ಮೀನುಗಾರನ ಹತ್ಯೆಗೆ ಅವರು ಕೊಟ್ಟ ಸಮರ್ಥನೆ! ಪ್ರತಿಭಟನಾಕಾರರನ್ನು ದಾಳಿಗೆ ಪ್ರಚೋದಿಸಿದ ಕಾರಣಗಳು?!

ಸೆಪ್ಟೆಂ 11, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 6


“ಥ್ಯಾಂಕ್ಸ್ ಸರ್” ಎಂದು ಹೇಳಿ ಇಬ್ಬರೂ ಹೊರಬಂದರು.

“ನಿನಗೇನನ್ನಿಸುತ್ತೆ ಸಯ್ಯದ್”

“ಇವರ ಮಾತು, ಅವರ ಮುಖದಲ್ಲಿನ ಭಾವ ನೋಡಿದರೆ ಅಲ್ಲೇನೂ ನಡೆದೇ ಇಲ್ಲ ಅನ್ನಿಸುತ್ತೆ”

ಸೆಪ್ಟೆಂ 3, 2012

ಮಿನುಗುವ ಮನಗಳ “ರಸ್ತೆ ನಕ್ಷತ್ರ”



-      ಡಾ ಅಶೋಕ್ ಕೆ ಆರ್.

ಇಲ್ಲಿಯವರೆಗೆ ಹೆಚ್ಚುಕಡಿಮೆ ನಾಲ್ಕುನೂರು ಪುಸ್ತಕಗಳನ್ನು ಓದಿದ್ದೇನೆ. ಕಥೆ – ಕವಿತೆ – ಕಾದಂಬರಿ – ನಾಟಕ – ಹಾಸ್ಯ – ಆತ್ಮಕತೆ – ಸಾಮಾಜಿಕ – ಚಿಂತನೆ – ಪ್ರಬಂಧಗಳು – ಐತಿಹಾಸಿಕ – ಕಾಮೋದ್ರೇಕ – ಆದ್ಯಾತ್ಮ ಹೀಗೆ ಇನ್ನೂ ವಿಧವಿಧವಾದ ಪುಸ್ತಕಗಳನ್ನು ಓದಿರುವೆನಾದರೂ ಇದೊಂದು ಪುಸ್ತಕವನ್ನು ಸಾಹಿತ್ಯದ ಯಾವ ಉಪವಿಭಾಗಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ! ಬಡಜನರ ಆತ್ಮಕಥೆಯಷ್ಟೇ ಎಂದುಕೊಳ್ಳೋಣವೆಂದರೆ ದುತ್ತನೆ ರಾಜಕೀಯ ಧಾರ್ಮಿಕ ವಿಶ್ಲೇಷಣೆ ಎದುರಾಗುತ್ತದೆ! ಯಾವ ತಾತ್ವಿಕನಿಗೂ ಕಾಣದ ಜೀವನದೃಷ್ಟಿ ಇಲ್ಲಿರುವ ಜನಸಾಮಾನ್ಯರ ಮಾತಿನಲ್ಲಿ ಸಲೀಸಾಗಿ ಕಾಣಸಿಗುತ್ತದೆ. ಅಯೋಧ್ಯೆಯಿಂದ ಹಿಡಿದು ಭಾರತೀಯ ಸೈನ್ಯದ ವಿಶ್ಲೇಷಣೆಯೂ ನಡೆದುಬಿಡುತ್ತದೆ! ಅಂದಹಾಗೆ ಪುಸ್ತಕದ ಹೆಸರು ‘ರಸ್ತೆ ನಕ್ಷತ್ರ’. ಆಕಾಶದೆಡೆಗೆ ನೆಟ್ಟು ಹೋದ ನಮ್ಮ ನಿಲುವುಗಳನ್ನು ರಸ್ತೆಯ ಮೇಲೆ ಎಳೆದುತಂದು ನಕ್ಷತ್ರಗಳನ್ನು ಗುರುತಿಸುವಂತೆ ಮಾಡಿದ ಶ್ರೇಯ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ಪ್ರಶಸ್ತಿ ಪಡೆದ ಟಿ.ಕೆ. ದಯಾನಂದರವರದು.

ಆಗ 31, 2012

ಆದರ್ಶವೇ ಬೆನ್ನು ಹತ್ತಿ ..... ಭಾಗ 5


ಬಚ್ಚಲುಮನೆಗೆ ಹೋಗಿ ಲೋಕಿ ಕೈ ಮೂಸಿದ. ಸಿಗರೇಟಿನ ಘಮ ಇನ್ನೂ ಉಳಿದಿತ್ತು! ‘ಛೇ!! ದಿನಾ ಎಲೆ ತೆಗೆದುಕೊಂಡು ಕೈ ಉಜ್ಜಿಕೊಂಡು ಬರುತ್ತಿದ್ದೆ. ಇವತ್ತು ಮರೆತುಬಿಟ್ಟೆನಲ್ಲ. ಅಷ್ಟಕ್ಕೂ ನಾನು ಸಿಗರೇಟು ಸೇದ್ತೀನಿ ಅನ್ನೋ ಅನುಮಾನ ಇವರಿಗ್ಯಾಕೆ ಬಂತು? ನಮ್ಮ ನೆಂಟರಿಷ್ಟ್ಯಾರಾದರೂ ನೋಡಿಬಿಟ್ಟರಾ? ಅದೇಗಾದ್ರೂ ತಿಳಿದಿರಲಿ, ಕೊನೇಪಕ್ಷ ಅಣ್ಣ ಬಯ್ಯಲೂ ಇಲ್ಲವಲ್ಲ. ಏನೂ ಆಗೇ ಇಲ್ಲವೆಂಬಂತೆ ಹೊರಟುಹೋದರು. ನಾನೇ ಹೋಗೆ ತಪ್ಪಾಯ್ತು ಅಂತ ಕೇಳ್ಲಾ? ಇನ್ನು ಮುಂದೆ ಸೇದಲ್ಲ ಅಣ್ಣ . . .ಸಿಗರೇಟು ಬಿಡಬಲ್ಲೆನಾ?

ಆಗ 30, 2012

ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’


kavya madhavan
ಗದ್ದಾಮ photo source - sify.com
ಡಾ ಅಶೋಕ್ ಕೆ ಆರ್
ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.

ಆಗ 28, 2012

ಬೆಚ್ಚಿಬೀಳಿಸುವ ವ್ಯಾಸ!


astra
 ಡಾ ಅಶೋಕ್. ಕೆ. ಆರ್
ಭೌತಿಕವಾಗಿ ಒಂದು ಊರನ್ನು ಕಟ್ಟುವುದು ಎಷ್ಟು ಕಷ್ಟದ ಕೆಲಸವೋ ಅದಕ್ಕಿಂತಲೂ ಕಷ್ಟದ ಕೆಲಸ ಕಾಲ್ಪನಿಕ ಊರನ್ನು ಕಟ್ಟುವುದು. ಆಂಗ್ಲದಲ್ಲಿ ಬರೆದ ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಊರನ್ನು ಅತ್ಯದ್ಬುತವಾಗಿ ಕಟ್ಟಿಕೊಡುತ್ತಾರೆ. ಅವರ ಕಥೆಗಳನ್ನು ಓದಿದ ಕೆಲವರು ಮಾಲ್ಗುಡಿ ಊರನ್ನು ಹುಡುಕಾಡಿದ್ದೂ ಉಂಟಂತೆ. ಕನ್ನಡದಲ್ಲಿ ಒಂದು ಊರನ್ನು ಮನಮುಟ್ಟುವಂತೆ ಕಟ್ಟಿ ಆ ಊರನ್ನೇ ತಮ್ಮ ಕಥೆಗಳಿಗೆ ಯಶಸ್ವಿಯಾಗಿ ಅಳವಡಿಸಿಕೊಂಡಿರುವುದು ಎಂ ವ್ಯಾಸ. ಅವರ ಕಥೆಗಳನ್ನು ಓದುತ್ತಿದ್ದಂತೆ ದುರ್ಗಾಪುರವೆಂಬ, ಅಲ್ಲಿ ಹರಿಯುವ ಶಂಕರೀ ನದಿ, ನದಿಯ ತಿರುವು, ತಿರುವಿನಂಚಿನ ಮನೆ, ಊರಿನ ದೇವಸ್ಥಾನ, ದೇವಸ್ಥಾನದ ರಸ್ತೆ ನಮ್ಮ ಮನಪಟಲದಲ್ಲಿ ಮೂಡಲಾರಂಭಿಸುತ್ತದೆ. ಎರಡನೆಯ ಕಥೆ ಓದುವಷ್ಟರಲ್ಲಿ ದುರ್ಗಾಪುರದ ನಕ್ಷೆ ನಮ್ಮೊಳಗೆ ಸೇರಿಬಿಡುತ್ತದೆ!

ಆಗ 27, 2012

ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!


ಚಿತ್ರಕೃಪೆ - ಇಂಡಿಯಾ ಟುಡೇ
 ಡಾ ಅಶೋಕ್. ಕೆ. ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!

ಆಗ 24, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 4



ಆದರ್ಶವೇ ಬೆನ್ನು ಹತ್ತಿ . . . ಭಾಗ 3

“ಹೋಟೆಲ್ಲಿನಲ್ಲಿ ನಡೆದಿದ್ದರ ಬಗ್ಗೆ ಚಿಂತಿಸುತ್ತಿದ್ದೀರ. ಆ ವಿಷಯವನ್ನು ನಾನು ಯಾರಿಗೂ ಹೇಳೋದಿಲ್ಲ. ಚಿಂತೆ ಬೇಡ”
“ನಿಮಗೇನಾದರೂ ಫೇಸ್ ರೀಡಿಂಗ್ ಬರುತ್ತಾ?”
‘ಇದೇ ಪ್ರಶ್ನೆ ಸ್ವಲ್ಪ ಸಮಯದ ಮೊದಲು ನನ್ನ ಮನಸ್ಸಿಗೂ ಬಂದಿತ್ತಲ್ಲ’ ಎಂದು ಅಚ್ಚರಿಗೊಳ್ಳುತ್ತ “ಇಲ್ಲ” ಎಂದ. ಅಷ್ಟರಲ್ಲಿ ಸಯ್ಯದ್ ಒಳಬಂದ. “ಏನ್ ಇನ್ನೂ ಏನು ಆರ್ಡರ್ರೇ ಮಾಡಿಲ್ಲ” ಎಂದ್ಹೇಳಿ ಮಾಣಿಯನ್ನು ಕರೆದು ತಿಂಡಿ ಹೇಳಿದ. ತಿಂಡಿ ತಿಂದಾದ ಮೇಲೆ “ಸರಿ ಲೋಕಿ. ಒಂದಷ್ಟು ಕೆಲಸವಿದೆ. ನಾಳೆ ಭೇಟಿಯಾಗೋಣ” ಎಂದ್ಹೇಳಿ ಸಯ್ಯದ್ ಮೇಲೆದ್ದ. “ಬರ್ತೀನಿ ಲೋಕೇಶ್” ರೂಪಾ ಕೂಡ ಹೊರಡಲನುವಾದಳು. ‘ದಯಮಾಡಿ ಹೇಳಬೇಡ’ ಅನ್ನೋ ಬೇಡಿಕೆಯಿತ್ತಾ?! ಛೇ! ನಿಜಕ್ಕೂ ನನಗೆ ಫೇಸ್ ರೀಡಿಂಗ್ ಬರುವಂತಿದ್ದರೆ. .