ಆಗ 7, 2012

ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ...


anna hazare
Team anna
 
-       ಡಾ. ಅಶೋಕ್. ಕೆ. ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!

ಆಗ 6, 2012

ಆದರ್ಶವೇ ಬೆನ್ನು ಹತ್ತಿ.... ಭಾಗ 1


ದಾರಿ ಹುಡುಕುತ್ತ....
ವೈದ್ಯಕೀಯ ಓದುತ್ತಿದ್ದಾಗ ಕೊನೆಯ ವರ್ಷ ಕಾಲೇಜಿಗೆ ಹೋಗುವುದನ್ನೂ ಮರೆತು ಬರೆದ ಕಾದಂಬರಿಯಿದು! ಆಗ ಈ ಕಾದಂಬರಿಯ ಕೆಲವು ಭಾಗಗಳು 'ಮಾರ್ಗದರ್ಶಿ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಕಾದಂಬರಿ ಕಾಲಿಟ್ಟ ಘಳಿಗೆಯೋ ಏನೋ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯೇ ಮುಚ್ಚಿಹೋಯಿತು!! ನಂತರದ ದಿನಗಳಲ್ಲಿ ಕಾದಂಬರಿಯನ್ನು ಪುನಃ ಓದಿದಾಗ ಎಳಸೆಳಸು ಬರಹ ಎಂಬ ಭಾವನೆ ಬಂತು[ಇವತ್ತಿಗೂ ಅದೇ ಭಾವನೆಯಿದೆ!]. ಒಂದಷ್ಟು ಬದಲಾವಣೆಗಳೊಂದಿಗೆ ಇಲ್ಲಿ ಪ್ರಕಟಿಸುತ್ತಿದ್ದೀನಿ, ಓದುವ ಕಷ್ಟ ನಿಮ್ಮದಾಗಲಿ! - ಡಾ ಅಶೋಕ್. ಕೆ. ಆರ್.

ಆಗ 5, 2012

ಫಾಲ್ಕೆಯ ಸಿನಿಮಾಗಾಥೆ - 'ಹರೀಶ್ಚಂದ್ರಾಚಿ ಫ್ಯಾಕ್ಟರಿ'

marathi movie
ಹರೀಶ್ಚಂದ್ರಾಚಿ ಫ್ಯಾಕ್ಟರಿ
ಡಾ ಅಶೋಕ್ ಕೆ ಆರ್
ದಾದಾ ಸಾಹೇಬ ಫಾಲ್ಕೆಯ ಹೆಸರು ಕೇಳಿದ್ದು ನಮ್ಮ ರಾಜಣ್ಣನಿಗೆ ಆ ಪ್ರಶಸ್ತಿ ಬಂದಾಗ. ದಾದಾ ಸಾಹೇಬ ಫಾಲ್ಕೆ ಯಾರೆಂಬುದೂ ಸರಿಯಾಗಿ ತಿಳಿದಿರಲಿಲ್ಲ. ತಿಳಿದಿದ್ದು ಮರಾಠಿ ಚಿತ್ರ ಹರೀಶ್ಚಂದ್ರಾಚಿ ಫ್ಯಾಕ್ಟರಿಯನ್ನು ನೋಡಿದಾಗ. ಪರೇಶ್ ಮೊಕಾಶಿಯ ಸಮರ್ಥ ನಿರ್ದೇಶನದಲ್ಲಿ ಪಡಿಮೂಡಿರುವ ಈ ಚಿತ್ರ ಭಾರತೀಯ ಸಿನಿಮಾರಂಗದ ಹುಟ್ಟಿನ ಕಥೆಯೂ ಹೌದು. ಅದು 1911ರ ಇಸವಿ, ಜೊತೆಗಾರನಿಂದ ಬೇರ್ಪಟ್ಟು ಪ್ರಿಂಟಿಂಗ್ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಜಾದೂಗಾರನಾಗುತ್ತಾನೆ ಫಾಲ್ಕೆ.

ಆಗ 3, 2012

ಗುಡ್ಡೆ ಮೇಲೆ ದೇವಸ್ಥಾನ


-      S. ಅB ಹನಕೆರೆ.
        
 “ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.

ಆಗ 2, 2012

ಎಚ್ಚರ ಪತ್ರಕರ್ತ ಎಚ್ಚರ....!

ಇಷ್ಟು ದಿನ ಪತ್ರಕರ್ತರನ್ನು ಅದರಲ್ಲೂ  ದೃಶ್ಯಮಾಧ್ಯಮದ ವರದಿಗಾರರನ್ನು ದೂಷಿಸುವುದೇ ಆಗುತ್ತಿತ್ತು. ಕಾರಣ ಅಲ್ಲಿನ ಬಹುತೇಕರ ವರ್ತನೆ ದೂಷಿಸಲು ಯೋಗ್ಯವಾಗಿಯೇ ಇರುವುದು! ಮಂಗಳೂರಿನ ಪಡೀಲಿನ ಘಟನೆಯಲ್ಲಿ ವಿಚಾರಣೆಗೊಳಪಟ್ಟ ನವೀನ್ ಸೂರಿಂಜೆ ಬರೆದ ಲೇಖನದ ನಂತರ ಉಳಿದೆಡೆಗಳಿಂದಲೂ ಪತ್ರಕರ್ತರು ಅನುಭವಿಸುತ್ತಿರುವ ಪಡಿಪಾಟಲುಗಳ ವಿವರಗಳು ಬರುತ್ತಿವೆ. ನಂತರ ಪ್ರಜಾವಾಣಿಯ ಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ ಲೇಖನ ಕೂಡ ಪತ್ರಕರ್ತರ ಪಾತ್ರದ ಬಗ್ಗೆ, ಅವರ ಮೇಲಾಗುತ್ತಿರುವ ಕೊಟ್ಟಿ ಕೇಸುಗಳ ಬಗ್ಗೆ ತಿಳಿಸಿತ್ತು. ಉತ್ತರಕರ್ನಾಟಕದ ಪತ್ರಕರ್ತ ಪರಶುರಾಮ್ ತಹಸೀಲ್ದಾರ್ ತಾನು ಅನುಭವಿಸಿದ್ದನ್ನು ಬರೆದಿದ್ದಾರೆ...

ಕೆಲವು 'ಬರ'ದ ಪದ್ಯಗಳು

1

ಚುಕ್ಕಿ ಮೂಡುವ ಹೊತ್ತಿನಲ್ಲಿ
ನನ್ನೊಳಗೆ
ಮಿಣುಕು ಹುಳು ಜೀವ ಪಡೆಯುತ್ತವೆ
ಕತ್ತಲಲ್ಲಿ ಬಿದ್ದ ಕಣ್ಣಹನಿ ಉರಿದಂತೆ
ಮತ್ತೆ ಉದುರುತ್ತವೆ
ಈ ಜಗದ ಬೇಗುದಿ ದೊಡ್ಡದು

2

ಯಾವ ಸುದ್ದಿ
ಯಾರು ತಂದರೋ ತಿಳಿದಿಲ್ಲ
ಬತ್ತಿದ ಕೆರೆಯ ಬಿರಿದೆದೆಯ ಶೋಕಸಭೆಗೆ
ನಾವಿಂದು ಕರೆಯದೇ ಬಂದ ಅತಿಥಿ
ನೆತ್ತಿಯ ಮೇಲೆ ಹಾರುತಿದೆ
ಯಾರದೋ ನಗು ತುಂಬಿದ ವಿಮಾನ

3

ಅಳುವ
ಮಗುವಿನ ಕೈಯಲ್ಲಿನ
ನಗುವ ಗೊಂಬೆಯಂತೆ ನೀನು
ಕೋಗಿಲೆಯೊಳಗಿನ ಕೊಳಲು
ಆಲದ ಬಿಳಲು ಮುತ್ತಿರುವ ಎಲೆಯ ಕುಕಿಲು
ನೇಣು ಬಿಗಿದುಕೊಳ್ಳಲು ಬಂದ ಅನ್ನದಾತನ ಅಳಲೂ

4

ಬರದ ನೆಲದ ಬೆಂಕಿ ಹೂ
ಹೇಗೆ ಮುಡಿಯುವುದು
ಖಾಲಿ ಹೊಟ್ಟೆ ಉರಿವ ಕೊಂಡ
ನೀರು ಬತ್ತಿದ ಕಣ್ಣು ಯಾರೋ ಬಿಟ್ಟ ಬಾಣ
ಕಂಡ ಮೋಡಗಳೆಲ್ಲ ಕೆಂಡದುಂಡೆಗಳೇ
ಈ ಬೇಗೆಯೂ ಬೇಕು ಬಿಡು ನಿನ್ನಂತೆ
- ವೀರಣ್ಣ ಮಡಿವಾಳರ್ 

ಚರ್ಚೆಯಾಗಬೇಕಿರುವುದು ‘ಸಂಸ್ಕೃತಿಯ’ ಬಗ್ಗೆಯಲ್ಲ ಕುಡಿತದ ಬಗ್ಗೆ....




-      ಡಾ ಅಶೋಕ್. ಕೆ. ಆರ್

ಮಂಗಳೂರಿನ ಪಡೀಲಿನ ಘಟನೆಯ ನಂತರ ಸಂಸ್ಕೃತಿ, ಸ್ವಾತಂತ್ರ್ಯ, ಸ್ವೇಚ್ಛಾಚಾರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಚರ್ಚೆಗಳಾಗುತ್ತಿವೆ. ಇವೆಲ್ಲವುಗಳ ಮಧ್ಯೆ ಜುಲೈ 31ರಂದು ವಿಧಾನಪರಿಷತ್ತಿನಲ್ಲಿ ಸಚಿವರೊಬ್ಬರು ಅಮೋಘ ಹೇಳಿಕೆಯನ್ನಿತ್ತಿದ್ದಾರೆ! “ಅಸೆಂಬ್ಲಿಯಲ್ಲಿರೋ ಸಚಿವರುಗಳೇ ಮದ್ಯಪಾನ ಮಾಡೋದಿಲ್ಲ. ಇನ್ನು ನಮ್ಮ ಇಲಾಖೆಗೆ ಆದಾಯ ಎಲ್ಲಿಂದ ಬರಬೇಕು. ಹೀಗಾಗಿ ಎಲ್ಲರೂ ಮದ್ಯಪಾನ ಮಾಡತೊಡಗಿದರೆ ರಾಜ್ಯ ಬೊಕ್ಕಸದ ಆದಾಯವೂ ಹೆಚ್ಚುತ್ತದೆ” ಎಂದು ಹೇಳಿದ್ದಾರೆ ಅಬಕಾರಿ ಸಚಿವರಾದ ರೇಣುಕಾಚಾರ್ಯ. ಅಲ್ಲಿಗೆ ಸರಕಾರವೇ ಮದ್ಯಪಾನವನ್ನು ಪ್ರೋತ್ಸಾಹಿಸಿದಂತಾಯಿತಲ್ಲವೇ? ಮದ್ಯದಿಂದ ಕಳೆದ ಐದು ವರುಷಗಳಲ್ಲಿ ಬಂದಿರುವ ಆದಾಯದ ವಿವರಗಳನ್ನು ಸದನಕ್ಕೆ ತಿಳಿಸಿದ್ದಾರೆ. 2007 -08ರ ಸಾಲಿನಲ್ಲಿ 4811.93 ಕೋಟಿಯಷ್ಟಿದ್ದ ಆದಾಯ ದುಪ್ಪಟ್ಟುಗೊಂಡು 2011 -12ರಲ್ಲಿ 9827.89 ಕೋಟಿಯಾಗಿದೆ!

ಆಗ 1, 2012

ಪಾಲಿಸಲಾಗದ ಸತ್ಯವೇ “ಚಲಂ”!

ಚಲಂ

ಡಾ ಅಶೋಕ್. ಕೆ. ಆರ್
ಉಪೇಂದ್ರ ನಿರ್ದೇಶಿಸಿದ ‘ಉಪೇಂದ್ರ’ ಚಿತ್ರದ ಆರಂಭದಲ್ಲಿ ಬೇತಾಳನ ಪಾತ್ರಧಾರಿ ‘ಮನಸ್ಸಿನ ಮಾಲಿನ್ಯ’ ಎಂಬ ಪದವನ್ನು ಉಪಯೋಗಿಸುತ್ತಾನೆ. ಹಿಂದೊಮ್ಮೆ ಗೆಳೆಯನೊಡನೆ ಯಾವುದೋ ಚರ್ಚೆ ನಡೆಸುತ್ತಿದ್ದಾಗ ‘ಎಲ್ಲರೊಳಗೂ ಹಾದರದ ಮನಸ್ಸಿರುತ್ತೆ ಕಂಟ್ರೋಲ್ ಮಾಡ್ಕೊಂಡಿರ್ತೀವಿ ಅಷ್ಟೇ!’ ಎಂದು ಹೇಳಿದ್ದೆ. ಮನಸ್ಸಿನಾಳದಲ್ಲಿ ನಮ್ಮೆಲ್ಲರಲ್ಲೂ ಕಲ್ಮಶವೇ ಇರುತ್ತಾ? ನಿಷ್ಕಲ್ಮಶ ಎಂಬ ಪದವೇ ನಿರರ್ಥಕವಾದುದಾ? ಎಂಬ ಪ್ರಶ್ನೆ ಬಹಳಷ್ಟು ಕಾಡಿದ್ದಿದೆ. ಎಲ್ಲರ ಮನದೊಳಗೂ ಕೆಟ್ಟ ಆಲೋಚನೆಗಳು, ಕೆಟ್ಟ ವಿಚಾರಗಳು ಬಂದೇ ಬರುತ್ತದೆಂದು ನನ್ನ ನಂಬಿಕೆ. ನನ್ನದು ನಿಷ್ಕಲ್ಮಶ ಮನಸ್ಸು ಎಂದು ಹೇಳಿಕೊಳ್ಳುವವರ ಬಗ್ಗೆ ಅಸಡ್ಡೆ. ಆದರೆ ಮನಸ್ಸಿನ ಯೋಚನೆ- ಯೋಜನೆಗಳನ್ನೆಲ್ಲ ಕಲ್ಮಶ ನಿಷ್ಕಲ್ಮಶವೆಂದು ಭೇದ ಮಾಡದೆ ಆಚರಣೆಯಲ್ಲಿ ತರುವುದು ಕಷ್ಟಸಾಧ್ಯ. ನೈತಿಕ ಅನೈತಿಕತೆಯ ಪ್ರಶ್ನೆ, ಸಂಭಾವಿತನಾಗಬೇಕೆಂಬ ಹಪಾಹಪಿ, ಸಮಾಜದಲ್ಲೊಂದು ಗೌರವ ಪಡೆಯಬೇಕೆಂಬ ಆಸೆ ಇವೆಲ್ಲವೂ ನಮ್ಮ ಮನದ ಎಷ್ಟೋ ಯೋಚನೆಗಳನ್ನು ಹತ್ತಿಕ್ಕಿಬಿಡುತ್ತವೆ. ಆ ‘ಕೆಟ್ಟ’ ಯೋಚನೆಗಳನ್ನು ತಡೆದುಬಿಟ್ಟೆನಲ್ಲ ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತ ಆತ್ಮರತಿಯಲ್ಲಿಯೇ ಕಳೆದುಹೋಗುತ್ತೀವಿ. 

ಜುಲೈ 31, 2012

ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ....

ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?

ಜುಲೈ 30, 2012

ಹುಬ್ಬಳ್ಳಿ ನಗರದ ಚಾಣಕ್ಯಪುರಿ ರಸ್ತೆಯ ಮ್ಯಾನ್ಹೋಲ್ ವಿಷಾನಿಲ ಸೇವನೆಯಿಂದ ಮೃತಪಟ್ಟ ಇಬ್ಬರ ಸಾವಿನ ಕುರಿತ ಸಪಾಯಿಕರ್ಮಚಾರಿ ಕಾವಲುಸಮಿತಿಯ ಸತ್ಯಶೋಧನಾ ವರದಿ.

 ಧರ್ಮ ಸಂಸ್ಕೃತಿ ನಗ್ನತೆ ಸಭ್ಯತೆ ಬುರ್ಖ ದನ ಹಂದಿ ಮಾಂಸ ಎಣ್ಣೆ ಬಾರು ಪಬ್ಬುಗಳ ಬಗ್ಗೆಯೇ ಬರೆಯುತ್ತ ಕೂರುವ ನಮ್ಮಂಥವರ ನಡುವೆ ಇತ್ತೀಚೆಗಷ್ಟೇ ಪಿ.ಸಾಯಿನಾಥ್ ರವರಿಂದ ಕೌಂಟರ್ ಮೀಡಿಯ ಪ್ರಶಸ್ತಿ ಪಡೆದುಕೊಂಡ ದಯಾನಂದ್ ಟಿ.ಕೆರವರು ಮಲದಗುಂಡಿ ಸ್ವಚ್ಛಗೊಳಿಸಲು ಹೋಗಿ ಪ್ರಾಣ ಕಳೆದುಕೊಂಡವರ ಬಗ್ಗೆ ಸತ್ಯಶೋಧನಾ ವರದಿ ಬರೆದಿದ್ದಾರೆ. ಇಂಥ ವಿಪರ್ಯಾಸದ ಸಂಗತಿಗಳು ಕೂಡ ನಮ್ಮ ಭಾರತದ ಸಂಸ್ಕೃತಿಯೇ ಅಲ್ಲವೇ??