- S. ಅB ಹನಕೆರೆ.
“ಹತ್ತೋವಾಗಲೆ ಎಷ್ಟು ಮೆಟ್ಟಿಲು ಇದೆ ಅಂತ ಎಣಿಸಿಬಿಟ್ಟು ಇನ್ನು ಇಳಿಯುವಾಗ relax ಆಗ್ಬಿಟ್ರೆ ಅಂತ ಅದರ ಕಡೆ ಗಮನ ಕೊಡಲಿಲ್ಲ” ಎಂದು ಸಮರ್ಥನೆ ಮಾಡಿಕೊಂಡಳು ಗಾಯತ್ರಿ. ಸುತ್ತಲೂ ನೋಡುತ್ತಾಳೆ, ಕೆಳಗಿನ ಊರು, ರಸ್ತೆ ಮೇಲಿನ ವಾಹನ ಎಲ್ಲವೂ ಸ್ತಬ್ಧವಾಗಿ ಮತ್ತೊಮ್ಮೆ ಎಲ್ಲವೂ ಚಲಿಸುತ್ತಿರುವಂತೆ ಕಾಣುತ್ತವೆ. “ನಿನ್ನ ಈ ವಕ್ರ ದೃಷ್ಟೀನೆ ನನಗೆ ಇಷ್ಟ ಆಗೋದು” ಎಂದು ಗಾಯತ್ರಿ ಕಣ್ಣನ್ನೇ ದೃಷ್ಟಿಸಿದ ಶೇಖರನ್ನ ನೋಡಿ, ಗಾಯತ್ರಿ ಮನದೊಳಗೆ ‘ನನ್ನ ದೃಷ್ಟಿ ಇವನಿಗೆ ಹೇಗೆ ಗೊತ್ತಾಯ್ತು? ಈ ಮನುಷ್ಯನಿಗೆ ಸೃಷ್ಟಿ ಯಾವುದು? ದೃಷ್ಟಿ ಯಾವುದು? ಸಮರ್ಥನೆ ಯಾವುದೆಂದು ಗೊತ್ತಾಗಿದ್ರೆ ನನ್ನ ಹಿಂದೆ ಯಾಕ್ ಬೀಳ್ತಿದ್ದ’ ಎಂದುಕೊಂಡು ಶೇಖರನೊಡನೆ ದೇವಸ್ಥಾನದೊಳಗೆ ಹೋದಳು.