ಅಕ್ಟೋ 22, 2014

'ಹುಲಿಯ ನೆರಳಿನೊಳಗೆ' ಪುಸ್ತಕದ ಮುನ್ನುಡಿಯಿಂದ



namadeva nimgade
ನಂ 2 ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ ಲಡಾಯಿ ಪ್ರಕಾಶನದಿಂದ ಪ್ರಕಟವಾಗಿರುವ 'ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ' ಪುಸ್ತಕಕ್ಕೆ ಅಪ್ಪಗೆರೆ ಸೋಮಶೇಖರ್ ಬರೆದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ. 
ಆತ್ಮಕಥೆಯಲ್ಲೊಂದು ಅಂಬೇಡ್ಕರ್ ಕಥೆ

 ದೆಹಲಿಯ ನವಯಾನ ಪ್ರಕಾಶನ ಪ್ರಕಟಿಸಿರುವ In The Tiger’s Shadow : The Autobiography of An Ambedkariteಪ್ರಖ್ಯಾತ ವಿಜ್ಞಾನಿಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ. ಮಹತ್ವದ ಆತ್ಮಕಥೆಯನ್ನುಹುಲಿಯ ನೆರಳಿನೊಳಗೆ : ಅಂಬೇಡ್ಕರ್ವಾದಿಯ ಆತ್ಮಕಥೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಬಿ. ಶ್ರೀಪಾದ ಭಟ್ ಅವರು ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಭಾರತೀಯ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡಿರುವ ಹಲವು ಪ್ರಮುಖ ದಲಿತ ಆತ್ಮಕಥೆಗಳು ಕನ್ನಡ ಪ್ರಜ್ಞೆ ಹಾಗೂ ಅನುಭವ ಜಗತ್ತನ್ನು ವಿಸ್ತರಿಸಿವೆ. ಜೊತೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ದಲಿತ ಆತ್ಮಕಥೆಗಳನ್ನು ಕುರಿತ ಜಿಜ್ಞಾಸೆಗೆ ಭಿನ್ನ ಆಯಾಮವನ್ನು ಒದಗಿಸಿಕೊಟ್ಟಿವೆ. ಅವುಗಳಲ್ಲಿ ಲಕ್ಷ್ಮಣ ಗಾಯಕವಾಡರಉಚಲ್ಯಾ; ಮಾದವಿ ದೇಸಾಯಿ ಅವರಕುಣಿಯೇ ಘುಮ(ಕನ್ನಡಕ್ಕೆ-ಚಂದ್ರಕಾಂತ ಪೋಕಳೆ); ಶರಣಕುಮಾರ ಲಿಂಬಾಳೆ ಅವರಅಕ್ರಮ ಸಂತಾನ; ದಾದಾ ಸಾಹೇಬ್ ಮಲ್ಲಾರಿ ಮೋರೆ ಅವರಗಬಾಳ(ಕನ್ನಡಕ್ಕೆ-ದು. ನಿಂ. ಬೆಳಗಲಿ); ಎಸ್. ಕೆ. ಥೊರಟ್ ಅವರಬಾಲ್ಯದಿಂದ ಪ್ರಾಯಕ್ಕೆ(ಕನ್ನಡಕ್ಕೆ-ನಗರಗೆರೆ ರಮೇಶ್, ಗಂಗಾಧರಮೂರ್ತಿ); ನರೇಂದ್ರಜಾದವ್ ಅವರಬಹಿಷ್ಕø(ಕನ್ನಡಕ್ಕೆ-ಸುಮಾಧ್ವಾರಕನಾಥ್); ಭಗವಾನ್ ದಾಸ್ ಅವರಭಂಗಿಜನ ಕಥಾ(ಕನ್ನಡಕ್ಕೆ-ಕೆ. ನಾರಾಯಣಸ್ವಾಮಿ); ಭೀಮರಾವ್ ಗಸ್ತಿ ಅವರವಾಲ್ಮೀಕಿ(ಕನ್ನಡಕ್ಕೆ-ಸರಜೂ ಕಾಟ್ಕರ್); ಭಾಮ ಅವರಕರುಕ್ಕು(ಕನ್ನಡಕ್ಕೆ-ಎಸ್. ಪ್ಲೋಮಿನ್ದಾಸ್); ದಯಾ ಪವಾರ ಅವರಬಲುತ(ಕನ್ನಡಕ್ಕೆ-ಪ್ರೊ. ಚಂದ್ರಕಾಂತ ಪೋಕಳೆ) ; ಬೇಬಿ ಹಾಲ್ದಾರ್ ಅವರನೋವು ತುಂಬಿದ ಬದುಕು(ಕನ್ನಡಕ್ಕೆ-ಜಿ. ಕುಮಾರಪ್ಪ)–ಮುಂತಾದವು ಪ್ರಮುಖ ಆತ್ಮಕಥಗಳಾಗಿವೆ. ಪರಂಪರೆಗೆ ಹೊಸ ಸೇರ್ಪಡೆ ಡಾ. ನಾಮದೇವ ನಿಮ್ಗಾಡೆ ಅವರ ಆತ್ಮಕಥೆ.

ಮೋಟಾರ್ ಸೈಕಲ್ ಡೈರಿ - ಅನುವಾದಕರ ಮಾತು



(ನವೆಂಬರ್ ಎರಡರಂದು ಬಿಡುಗಡೆಗೊಳ್ಳುತ್ತಿರುವ ಲಡಾಯಿ ಪ್ರಕಾಶನ ಹೊರತಂದಿರುವ ಚೆಗೆವಾರನ ಮೋಟಾರ್ ಸೈಕಲ್ ಡೈರಿಗೆ ಅನುವಾದಕಿ ಡಾ.ಎಚ್.ಎಸ್ ಅನುಪಮ ಬರೆದಿರುವ ಸಾಲುಗಳು ಹಿಂಗ್ಯಾಕೆಯ ಓದುಗರಿಗಾಗಿ)

ಅರ್ನೆಸ್ಟೋ ಚೆ ಗೆವಾರ ಡಿ ಲಾ ಸೆರ್ನಾ
ಕವಿಯ ಮನಸು, ಕ್ರಾಂತಿಯ ಕನಸು..
ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶದ ಬಿಡುಗಡೆಗಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವೊಪ್ಪಿಸಿದ ವಿಶ್ವಮಾನವ: ಬದುಕಿದ ಕೇವಲ 39 ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲೂ ನಿರಂತರ ಬೆಳೆಯುತ್ತಲಿರುವ ಮಗು..
ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಚೆ - ಕ್ರಾಂತಿಯ ಸಹಜೀವನ ಪುಸ್ತಕದ ಮುನ್ನುಡಿಯಿಂದ



che guevera kannada book
(ಡೇವಿಡ್ ಡಚ್ ಮನ್ ಸಂಪಾದಿಸಿರುವ ಚೆ - ಕ್ರಾಂತಿಯ ಸಹಜೀವನ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವವರು ನಾ.ದಿವಾಕರ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿ ನಂ.2ರಂದು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುನ್ನುಡಿ ಹಿಂಗ್ಯಾಕೆಯ ಓದುಗರಿಗಾಗಿ)
ಜೀಸಸ್ ಮಾಂಟೇನ್ ಒರೋಪೆಸ್
ಕ್ಯೂಬಾದಲ್ಲಿ ತನ್ನ ಪ್ರಾಣಕ್ಕೆ ಅಪಾಯವಿದ್ದುದರಿಂದ ಗಡೀಪಾರು ಆಗಿ ಜುಲೈ 7, 1955 ಗುರುವಾರ ಹವಾನಾದಿಂದ ಮೆಕ್ಸಿಕೋಗೆ ತೆರಳುವ ಮುನ್ನ ಫಿಡೆಲ್ ಕ್ಯಾಸ್ಟ್ರೋ ಚೆ ಅವರನ್ನು ಭೇಟಿಯಾಗಿದ್ದರು.
ಜುಲೈ 26, 1953 ಮೊಂಕಾಡ ರಕ್ಷಣಾ ದಳದ ಮೇಲಿನ ದಾಳಿ ಪ್ರಜಾ ಸಶಸ್ತ್ರ ದಂಗೆಯನ್ನು ಹುಟ್ಟುಹಾಕುವ ಪ್ರಥಮ ಸೋಪಾನವಾಗಿ ಪರಿಣಮಿಸಿತ್ತು. ದಾಳಿಯಲ್ಲಿ ಬದುಕುಳಿದವರನ್ನು ಪೈನ್ಸ್ ದ್ವೀಪದ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಮೇ 15, 1955 ಭಾನುವಾರದಂದು, ಬಂಧನದ 53 ದಿನಗಳ ನಂತರ ನಮ್ಮೆಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.
53 ದಿನಗಳ ಅವಧಿಯಲ್ಲಿ ಹವಾನಾದಲ್ಲೇ ಇದ್ದ ಫಿಡೆಲ್ ಸಮೂಹ ಮಾಧ್ಯಮಗಳ ಮೂಲಕ  ದಿಟ್ಟವಾಗಿ ರಾಜಕೀಯ ಸಂಘರ್ಷವನ್ನು ಜಾರಿಯಲ್ಲಿರಿಸಿದ್ದರು. ಬ್ಯಾಟಿಸ್ಟಾ ಸರ್ವಾಧಿಕಾರದ ಪಾತಕಿ ಕೃತ್ಯಗಳನ್ನು ಮತ್ತು ಮೊಂಕಾಡ, ಬಯಾರ್ಮೋ ದಾಳಿಯಲ್ಲಿ ಭಾಗಿಯಾದವರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿದ್ದ ಫಿಡೆಲ್ ಬ್ಯಾಟಿಸ್ಟಾ ಸರ್ಕಾರದ ದಮನಕಾರಿ ನೀತಿಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ವ್ಯವಸ್ಥೆಯ ವಿರುದ್ಧ ಹೋರಾಡುವವರನ್ನು ಹತ್ತಿಕ್ಕುವ, ಕಾರ್ಮಿಕರನ್ನು ಶೋಷಿಸುವ ವ್ಯವಸ್ಥೆಯನ್ನು ಸಮರ್ಥಿಸುವ, ಶಾಂತಿಯುತ ರಾಜಕೀಯ ಹೋರಾಟಗಳಿಗೆ ಅವಕಾಶವೀಯದ ಬ್ಯಾಟಿಸ್ಟಾ ಆಡಳಿತದ ವಿರುದ್ಧ ಫಿಡೆಲ್ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಕೂಡಲೇ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಕ್ಯೂಬಾ ದೇಶದಲ್ಲಿ ಪ್ರಜಾತಂತ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾವು ನೀಡುತ್ತಿದ್ದ ಪ್ರಚೋದನಕಾರಿ ಹೇಳಿಕೆಗಳ ಹಿಂದೆ ಸರ್ವಾಧಿಕಾರಿ ಬ್ಯಾಟಿಸ್ಟಾನನ್ನು ಒತ್ತಾಯಿಸುವ ಉದ್ದೇಶವಿದ್ದುದನ್ನು ಕಾಣಬಹುದಿತ್ತು
Also Read

ಚೆ - ಕ್ರಾಂತಿಯ ಸಹಜೀವನ - ಪ್ರಕಾಶಕರ ನುಡಿ

che guevera kannada book
ನಂ. 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿರುವ  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ) "ಚೆ- ಕ್ರಾಂತಿಯ ಸಹಜೀವನ" ಪುಸ್ತಕಕ್ಕೆ ಲಡಾಯಿ ಪ್ರಕಾಶನದ ಬಸೂ ಬರೆದಿರುವ ಸಾಲುಗಳು.


ಅನ್ಯಾಯವನ್ನು ಪ್ರತಿಭಟಿಸಿದ್ದಕ್ಕಾಗಿ ಚೆ ನನ್ನ ಸಂಗಾತಿ..

ಜೀವಮಾನವಿಡೀ ದುಡಿಯುತ್ತ ಸವೆದರೂ ಕಣ್ಣಿಂದ ನೋಡಲಾಗದ, ಕನಸಿನಲ್ಲೂ ಊಹಿಸಲಾಗದ ಸಾವಿರ ಕೋಟಿ ಎಂಬ ಧನರಾಶಿಯ ಕುರಿತು ಜನಸಾಮಾನ್ಯ ದಿಗ್ಭ್ರಮೆಗೊಳ್ಳುವಾಗಲೇ ರಟ್ಟೆ ಕಸುವಿದ್ದರಷ್ಟೇ ಹೊಟ್ಟೆ ತುಂಬುವ, ಪ್ರತಿದಿನದ ಕೂಳೂ ಅವತ್ತಿನ ಸೂರ್ಯನೊಂದಿಗೇ ಮೂಡಿಬರುವ ಅನಿವಾರ್ಯ ವಾಸ್ತವ ಅವನನ್ನು ಕಂಗೆಡಿಸುತ್ತಿದೆ. ಜಾಗತಿಕ ಬಂಡವಾಳ ಹೂಡಿಕೆದಾರರು ಫಲವತ್ತಾದ ನೆಲೆ-ನೆಲ ಅರಸಿ ವಿಶ್ವದ ಬಡದೇಶಗಳನ್ನು ಸುತ್ತಿ ಪ್ರತಿವರ್ಷ ಸಮಾವೇಶ ನಡೆಸುತ್ತಾರೆ. ಸಾವಿರಾರು ಕೋಟಿ ಬಂಡವಾಳ `ಬಡದೇಶಗಳತ್ತ ಹರಿದುಬರುತ್ತದೆ. ಹಾಗೆ ಬಂದದ್ದು ಸ್ಥಳೀಯ ಹಳ್ಳ-ತೊರೆ-ಗುಂಡಿ-ಕೆರೆಗಳಲ್ಲಿರುವುದನ್ನೆಲ್ಲ ಬಾಚಿ ಬರಿದಾಗಿಸಿ ಭೋರ್ಗರೆದು ಸಮುದ್ರದತ್ತಲೇ ಹರಿಯುತ್ತದೆ. ಮರಳುಗಾಡು, ಬರದ ನಾಡುಗಳು ಹರಿವಿನ ದೂರದ ಕನಸಿನಲ್ಲೂ ಇರುವುದಿಲ್ಲ
Also Read

ಲಡಾಯಿ ಪ್ರಕಾಶನದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದ ವಿವರ

ladai prakashana
ಬಿಡುಗಡೆ ಸಮಾರಂಭದ ವಿವರಗಳು
ಎಡಪಂಥೀಯ ವಿಚಾರಧಾರೆಯ, ದಲಿತ ಪರ, ಮಹಿಳಾ ಪರ, ಪ್ರಗತಿಪರ ಪುಸ್ತಕಗಳನ್ನು ಹೊರತರುತ್ತಿರುವ ಗದಗ ಜಿಲ್ಲೆಯ ಲಡಾಯಿ ಪ್ರಕಾಶನದ ಮೂರು ಅನುವಾದಿತ ಪುಸ್ತಕಗಳನ್ನು ನವೆಂಬರ್ ಎರಡರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಗೊಳ್ಳಲಿವೆ.
Also Read
ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ

ಅಕ್ಟೋ 21, 2014

ಚೌಕಟ್ಟು ಮೀರಿದ ಬದುಕಿನ ಬಿಳಿ ಸಾಹೇಬನ ಕಥನ



jim corbet
ಬಿಳಿ ಸಾಹೇಬನ ಭಾರತ
Dr Ashok K R
ಇತಿಹಾಸ ನಿರ್ಮಿಸಿ ಬದುಕಿದವರನ್ನೆಲ್ಲ ಒಂದು ನಿರ್ದಿಷ್ಟ ಚೌಕಟ್ಟಿಗೆ ಸೀಮಿತಗೊಳಿಸುವುದಕ್ಕೆ ಆ ವ್ಯಕ್ತಿಯ ಬದುಕಿನ ಬಗ್ಗೆ ಪುಸ್ತಕ ಬರೆಯುವವರು ಎಷ್ಟು ಕಾರಣರೋ ಕೆಲವೊಮ್ಮೆ ಚೌಕಟ್ಟಿನೊಳಗಡೆಯೇ ಸೇರಿ ಹೋಗುವ ವ್ಯಕ್ತಿಯ ವ್ಯಕ್ತಿತ್ವವೂ ಕಾರಣ. ನಮ್ಮ ಇಷ್ಟಾನಿಷ್ಟಗಳ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇತಿಹಾಸದಿಂದ ತೆಗೆದುಕೊಳ್ಳುವುದು ಸಂಪೂರ್ಣ ತಪ್ಪೇನೂ ಅಲ್ಲ! ಇದರಿಂದಾಗುವ ಅನಾನುಕೂಲವೆಂದರೆ ವ್ಯಕ್ತಿಯ ನೈಜ ವ್ಯಕ್ತಿತ್ವ ಅರಿಯದೆ ಹೋಗುವುದು. ಕನ್ನಡದ ಮಟ್ಟಿಗೆ ಚೌಕಟ್ಟಿನೊಳಗಡೆ ಬಂಧಿಯಾಗಿಬಿಟ್ಟಿದ್ದ ‘ಜಿಮ್ ಕಾರ್ಬೆಟ್ ನ’ ವ್ಯಕ್ತಿತ್ವವನ್ನು ಬಿಡುಗಡೆಗೊಳಿಸಿದ ಕೀರ್ತಿ ಡಾ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ” ಪುಸ್ತಕದ್ದು.
Also Read

ಅಕ್ಟೋ 18, 2014

ನಂ 1 ಸ್ಥಾನ ಸುಲಭವಾಗಿ ದಕ್ಕುವುದಿಲ್ಲ!

vijayavani kannada daily
ನಂ.1 ಆಗಲು ಹೀಗೆಲ್ಲ ಮಾಡಬೇಕೆ
Dr Ashok K R
ಕಳೆದ ಶುಕ್ರವಾರದ ವಿಜಯವಾಣಿಯ ಮುಖಪುಟದಲ್ಲಿ 'ವಿಜಯವಾಣಿ' ಪತ್ರಿಕೆ ಮೊದಲೆರಡು ಸ್ಥಾನಗಳಲ್ಲಿದ್ದ 'ವಿಜಯ ಕರ್ನಾಟಕ' ಮತ್ತು 'ಪ್ರಜಾವಾಣಿ' ಪತ್ರಿಕೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ತಲುಪಿದೆ ಎಂಬ ಸುದ್ದಿ ಭರ್ತಿ ಎರಡು ಪುಟಗಳ ತುಂಬ ಪ್ರಕಟವಾಗಿದೆ. ಜನವರಿಯಿಂದ ಜೂನ್ ವರೆಗಿನ ಆಡಿಟ್ ಬ್ಯೂರೋ ಆಫ್ ಸರ್ಕುಲೇಷನ್ ಪ್ರಕಾರ ವಿಜಯವಾಣಿ ದಿನಂಪ್ರತಿ 6, 67, 879 ಪ್ರತಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಪ ಕಾಲಾವಧಿಯಲ್ಲಿಯೇ ವಿಜಯವಾಣಿ ಇಷ್ಟರಮಟ್ಟಿಗೆ ಯಶ ಸಾಧಿಸಿರುವುದು ಪ್ರಶಂಸಾರ್ಹವೇನೋ ಹೌದು. ಆದರೆ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಿಕೆಗಳು ಮಾರಾಟ ಸಂಖೈ ಹೆಚ್ಚಿಸಲು ಹಿಡಿದಿರುವ ಮಾರ್ಗಗಳನ್ನು ನೋಡಿದರೆ ಬೇಸರವುಂಟಾಗುತ್ತದೆ.
Also Read
ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವನ್ನು ಪ್ರಶ್ನಿಸುವರಾರು?

ಅಕ್ಟೋ 17, 2014

ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು!

raghaveshwara swamy case
ರಾಘವೇಶ್ವರ ಸ್ವಾಮಿ
Dr Ashok K R 


ಅದೊಂದು ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಸರ್ವೇಸಾಧಾರಣ ಎಂದೇ ಕರೆಯಬಹುದಾದ ಒಂದು ಪ್ರಕರಣ. ತಮ್ಮ ಸ್ಥಾನವನ್ನು ಬಳಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು, ಲೈಂಗಿಕ ಹಿಂಸೆಗೆ ಒಳಪಡಿಸಿಬಿಟ್ಟರು ಎಂಬ ದೂರು ಪೋಲೀಸರನ್ನು ತಲುಪುತ್ತದೆ. ದೂರನ್ನು ಸ್ವೀಕರಿಸಿಕೊಂಡ ಪೋಲೀಸರು ಯಾವ ರೀತಿ ಕಾರ್ಯನಿರ್ವಹಿಸಬೇಕು? ನ್ಯಾಯಾಲಯ ಯಾವ ರೀತಿ ಕೆಲಸ ಮಾಡಬೇಕು? ಸಮಾಜದ ಪ್ರತಿಕ್ರಿಯೆ ಯಾವ ರೀತಿ ಇರಬೇಕು? ದೂರು ಸ್ವೀಕರಿಸಿಕೊಂಡ ಪೋಲೀಸರು ಆಪಾದಿತನನ್ನು ವಿಚಾರಿಸಿ ಅಗತ್ಯವಿದ್ದರೆ ಬಂಧಿಸಿ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ನ್ಯಾಯಾಲಯ ಅಪರಾಧದ ಹಿಂದು ಮುಂದನ್ನು ಪರಿವೀಕ್ಷಿಸಿ ಆಪಾದಿತನಿಗೆ ಜಾಮೀನು ಕೊಡಬಹುದು ಅಥವಾ ಅಪರಾಧ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಂತೆನ್ನಿಸಿದರೆ ಮತ್ತಷ್ಟು ವಿಚಾರಣೆಗೆ ಅನುಮತಿ ನೀಡಬೇಕು. ಒಂದು ಗುರುತರ ಆರೋಪಕ್ಕೊಳಗಾಗಿರುವ ವ್ಯಕ್ತಿಯನ್ನು ಸಮಾಜ ಆರೋಪ ಸಾಬೀತಾಗುವವರೆಗೂ ಅಪರಾಧಿಯನ್ನಾಗಿ ಮಾಡುವ ಅವಶ್ಯಕತೆಯಿರದಿದ್ದರೂ ಒಂದು ಪುಟ್ಟ ಅನುಮಾನದ ದೃಷ್ಟಿಯಿಂದಲಾದರೂ ನೋಡಬೇಕು. ನಂತರದ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದು ಸತ್ಯಾಸತ್ಯತೆಗಳು ಹೊರಬರಬೇಕು. ಸಂವಿಧಾನಕ್ಕೆ ಕಾನೂನಿಗೆ ಬೆಲೆ ಇರುವ ಪ್ರಜಾಪ್ರಭುತ್ವದಲ್ಲಿ ಎಲ್ಲಾ ಪ್ರಕರಣಗಳ ವಿಚಾರಣೆಗಳೂ ಇದೇ ರೀತಿ ನಡೆಯಬೇಕಲ್ಲವೇ? ಕ್ಷಮಿಸಿ ಈ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚು ಸಮಾನರು.

Also Read
ಧರ್ಮ ಮರೆತ ನಾಡಿನಲ್ಲಿ

ಅಕ್ಟೋ 16, 2014

ವಾಡಿ ಜಂಕ್ಷನ್ .... ಭಾಗ 3

Dr Ashok K R
“ಭಯ್ಯಾ ಜೀವನ ಅಂದ್ರೆ ಏನು?” ಪ್ರಶ್ನೆ ಕೇಳಿದ ರಾಘವ ಮತ್ತೆ ಮುಸುಕೆಳೆದುಕೊಂಡು ಪಕ್ಕಕ್ಕೆ ಹೊರಳಿದ.
ತುದಿಗಳೆಲ್ಲಾ ಜೀರ್ಣವಾಗಿದ್ದ ಚಾಪೆಯ ಮೇಲೆ ಕೂತು ಕೈಯಲ್ಲಿ ಪಾಲಿಶ್ ಮಾಡಿಸಿಕೊಂಡು ಮಿರಿಮಿರಿ ಮಿಂಚುತ್ತಿದ್ದ ತಲೆಬುರುಡೆಯ ಅಸಂಖ್ಯಾತ ತೂತುಗಳ ಅಧ್ಯಯನದಲ್ಲಿ ಮುಳುಗಿಹೋಗಿದ್ದ ಅಭಯ ರಾಘವನ ಪ್ರಶ್ನೆಯಿಂದ ವಿಚಲಿತಗೊಂಡ. ತಲೆಬುರುಡೆಯನ್ನು ಪಕ್ಕಕ್ಕಿಟ್ಟು ಅಂಗಿಯ ಜೇಬಿನಿಂದ ಸಿಗರೇಟು ಹೊರತೆಗೆದು ಫಿಲ್ಟರನ್ನು ಬಲಗೈಯ ಬೆರಳುಗಳಲ್ಲಿಟ್ಟುಕೊಂಡು ಎಡ ಹೆಬ್ಬರಳಿನ ಉಗುರ ಮೇಲೆ ನಾಲ್ಕು ಬಾರಿ ಕುಟ್ಟಿದ. ಇನ್ನೊಂದು ತುದಿಯಲ್ಲಿನ ತಂಬಾಕು ಒಂದಷ್ಟು ಒಳಹೋಯ್ತು. ಪಕ್ಕದ ಮೇಜಿನ ಮೇಲೆ ವಿವೇಕಾನಂದರ ಫೋಟೋದ ಮುಂದಿದ್ದ ಕಡ್ಡಿಪೆಟ್ಟಿಗೆಯನ್ನು ತೆಗೆದುಕೊಂಡು ಸಿಗರೇಟತ್ತಿಸಿ ಮೇಜಿನ ಅಂಡಿನಲ್ಲಿದ್ದ ಲೋಟ ಕಮ್ ಆ್ಯಶ್ ಟ್ರೇಯನ್ನು ಬಗುಲಲ್ಲಿಟ್ಟುಕೊಂಡ.
“ಕರೆಕ್ಟು ಗುರು ನೀನ್ಕೇಳಿದ್ದು. ಏನು ಜೀವ್ನ ಅಂದ್ರೆ?” ಧೂಮವನ್ನು ಗಾಳಿಯಲ್ಲಿ ಲೀನವಾಗಿಸುತ್ತಾ ಕೇಳಿದ.
“ಪ್ರಶ್ನೆ ಕೇಳಿದ್ದು ನಾನು. ಉತ್ತರ ಹೇಳು”
“ಪ್ರಶ್ನೆಗೆ ಪ್ರಶ್ನೆಯೇ ನನ್ನ ಉತ್ತರ”
Also read

ಅಕ್ಟೋ 15, 2014

ಡಿ.ಎಸ್.ಎಲ್.ಆರ್ ಕ್ಯಾಮೆರಾ ಖರೀದಿಸುವ ಮುನ್ನ

fast vs slow shutter speed
Understanding shutter speed
Dr Ashok K R
ಸುಳ್ಯದ ಪರಿಸರದಿಂದ ಉತ್ತೇಜಿತನಾಗಿ ‘ದೊಡ್ಡ’ ಕ್ಯಾಮೆರಾ ಖರೀದಿಸಬೇಕೆಂದು ನಿರ್ಧರಿಸಿದೆ. ಒಂದಷ್ಟು ಪರಿಚಯದ ಫೋಟೋಗ್ರಾಫರುಗಳನ್ನು ಕೇಳಿದಾಗ ಬಹುತೇಕರು ‘ನಿಕಾನ್’ ಎಂದರು. ಇಂಟರ್ನೆಟ್ ಯುಗದಲ್ಲಿ ಜನರನ್ನು ಕೇಳಿ ತಿಳಿದು ಸುಮ್ಮನಿರಲಾದೀತೇ! ಸರಿ ಗೂಗಲ್ಲಿನಲ್ಲಿ ‘Best DSLR for beginners’ ಎಂದು ಟೈಪಿಸಿ ಗೂಗಲ್ ಹರವಿದ ಲಕ್ಷಾಂತರ ಪುಟಗಳಲ್ಲಿ ಒಂದಷ್ಟನ್ನು ತೆರೆತೆರೆದು ಓದುವುದಾರಂಭವಾಯಿತು. ನಿಕಾನ್ ಮತ್ತು ಕೆನಾನ್ ಮಧ್ಯೆ ಜೋರು ಯುದ್ಧವೇ ನಡೆದಿತ್ತು. ಹದಿನೈದು ದಿನದ ಓದಿನ ನಂತರವೂ ಯಾವ ಕ್ಯಾಮೆರಾ ಖರೀದಿಸಬೇಕೆಂದು ತೀರ್ಮಾನಿಸಲಾಗಲಿಲ್ಲ. ಹದಿನೈದು ದಿನದ ಓದಿನಿಂದ ಕ್ಯಾಮೆರಾಗಳ ಬಗೆಗಿನ ತಾಂತ್ರಿಕ ವಿವರಗಳ ಬಗ್ಗೆ ಸ್ವಲ್ಪ ತಿಳಿದಂತಾಗಿ ನನಗೆ ಗೊತ್ತಿಲ್ಲದ ಫೋಟೋಗ್ರಫಿಯ ಮೂಲಭೂತ ಅಂಶಗಳೇ ಅಧಿಕವಾಗಿದೆ ಎಂಬುದರಿವಾಯಿತು! ಸದ್ಯಕ್ಕೆ ನಿಕಾನೂ ಬೇಡ, ಕೆನಾನೂ ಬೇಡ ಎಂದು ನಿರ್ಧರಿಸಿ ಅಷ್ಟರವರೆಗೆ ಜೊತೆಗಿದ್ದ ಸೋನಿ DSC S930 ‘ಪಾಯಿಂಟ್ ಅಂಡ್ ಶೂಟ್’ ಕ್ಯಾಮೆರಾ ಕೈಗೆತ್ತಿಕೊಂಡೆ.
Also Read
Flash "ಬ್ಯಾಕ್"