ಅಕ್ಟೋ 13, 2014

ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ - ವೀರಣ್ಣ ಮಡಿವಾಳರ ಖಂಡಕಾವ್ಯ ಬಿಡುಗಡೆ ಸಮಾರಂಭ

veeranna madiwala
ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ
ವೀರಣ್ಣ ಮಡಿವಾಳರು ಬರೆದಿರುವ ಖಂಡಕಾವ್ಯ "ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ" ಚಾನೂ ಪ್ರಕಾಶನ, ಗಾವಡ್ಯಾನವಾಡಿಯ ವತಿಯಿಂದ ಪ್ರಕಟವಾಗಿದೆ. ಇದೇ ಭಾನುವಾರ ದಿನಾಂಕ 19/10/2014ರಂದು ಬೆಂಗಳೂರಿನ ಕರ್ನಾಟಕ ಅಕಾಡೆಮಿಯ ಚಾವಡಿಯಲ್ಲಿ ಬೆಳಿಗ್ಗೆ ಹತ್ತಕ್ಕೆ ಲೋಕಾರ್ಪಣೆಯಾಗಲಿದೆ. ಖಂಡಕಾವ್ಯದ ಪುಟ್ಟ ಭಾಗ "ಹಿಂಗ್ಯಾಕೆ" ಓದುಗರಿಗೆ.
                                           
ಸಮಯಾಸಮಯಗಳ ಸಂಗಮದಲ್ಲಿ ಋತುಬಳಗ ದಿಕ್ಕಾಪಾಲು
ಚೈತ್ರ ವಸಂತ ಹಾಡಿದ್ದೆಲ್ಲ ಚರಮಗೀತೆ
ನೋವ ಅಳೆಯುವ ಮಾಪು ಇನ್ನೂ ಬಂದಿಲ್ಲ
ಕಳಂಕ ಮಮತೆ ಗಳೆಲ್ಲ ಅದಲು ಬದಲು
ಎಲ್ಲದಕ್ಕೂ ಇಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ
ಮೋಡ ನುಡಿದ ಮೌನ ಸದ್ದಿದು
ಬರೆದವನ ಬಡಬಡಿಕೆಯಲ್ಲ
ಕೋಗಿಲೆಯ ಒಡಲೊಳಗೆ ಉಳಿದ ಪದವಿದು
ನಂಬಿಕೆಯ ರಿಯಾಯಿತಿ ಬೇಡುವುದಿಲ್ಲ
ಸಕಲ ಜೀವದ ಕಣ್ಣಹನಿಯ ಸ್ವಗತ
ತೋರಿ ತಾಕುವ ತಾಕತ್ತು ಯಾವುದರಲ್ಲೂ ಇಲ್ಲ

ಅಕ್ಟೋ 12, 2014

ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ ಪುಸ್ತಕ ಬಿಡುಗಡೆ ಸಮಾರಂಭ

jim corbet kannada book
ದೀಪ ಬೆಳಗಿದ ನಾರಾಯಣಗೌಡರು
Dr Ashok K R


ಡಾ ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಪಲ್ಲವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಡಾ.ಎನ್ ಜಗದೀಶ್ ಕೊಪ್ಪರವರ “ಬಿಳಿ ಸಾಹೇಬನ ಭಾರತ – ಜಿಮ್ ಕಾರ್ಬೆಟ್ ಜೀವನಗಾಥೆ” ಪುಸ್ತಕ ಶನಿವಾರ (10/10/2014) ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಂಡಿತು. ಪಲ್ಲವ ಪ್ರಕಾಶನದ ಡಾ ವೆಂಕಟೇಶ್, ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರತಿಷ್ಠಾನದ ಸುರೇಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ, ಡಾ. ನಲ್ಲೂರು ಪ್ರಸಾದ್, ಪ್ರೊ. ಹಂಪನಾ, ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ವಿಷುಕುಮಾರ್, ಡಾ. ಎನ್. ಜಗದೀಶ್ ಕೊಪ್ಪ, ವಿಜಯ ಕರ್ನಾಟಕದ ಪತ್ರಕರ್ತ ಮತ್ತು ಕವಿ ಎಸ್. ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
Also Read

ಅಕ್ಟೋ 10, 2014

ವಾಡಿ ಜಂಕ್ಷನ್ .... ಭಾಗ 2

hingyake
Dr Ashok K R
ಪ್ಲಾಟ್‍ಫಾರಂ ನಂ 1
ನಿಲ್ದಾಣ 1
“ನನ್ನ ತಾತ ತಲೆಯಲ್ಲಿ ಯಾವ ಭಾವನೆ ಇಟ್ಟುಕೊಂಡು ನನಗೀ ಹೆಸರು ಇಟ್ಟರೋ? ತೀರ ಮೊನ್ನೆ ಮೊನ್ನೆ ಎನ್‍ಡಿಟಿವಿ ಇಂಡಿಯಾದಲ್ಲಿ ಕಾರು ಮತ್ತು ಬೈಕುಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುವವನ ಹೆಸರೂ ಕ್ರಾಂತಿ ಸಂಭವ್ ಎಂದು ನೋಡಿದಾಗ ಮನ ನಿರಾಳವಾಯಿತು. ನನ್ನಿಂದ ಯಾವುದಾದರೂ ಕ್ರಾಂತಿ ಸಂಭವಿಸುತ್ತದೆ ಎಂದು ಭಾವಿಸಿದರೋ ಅಥವಾ ನನ್ನ ಕಾಲಘಟ್ಟದಲ್ಲಿ ದೇಶದಲ್ಲೊಂದು ಮಹತ್ತರ ಬದಲಾವಣೆಯಾಗುತ್ತೆ ಎಂದು ಕನಸಿದ್ದರೋ ಗೊತ್ತಿಲ್ಲ. ಮದ್ದೂರಿನ ಬೆಸಗರಹಳ್ಳಿಯಲ್ಲಿ ಹುಟ್ಟಿದ ಹೈದನಿಗೆ ಕ್ರಾಂತಿ ಸಂಭವ್ ಎಂದು ಹೆಸರಿಟ್ಟುಬಿಟ್ಟರು. ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ನನ್ನ ತಪ್ಪಿಗೆ ದಂಡಿಸುವುದನ್ನು ಬಿಟ್ಟು ನನ್ನ ಹೆಸರಿಡಿದುಕೊಂಡು ವ್ಯಂಗ್ಯವಾಡುತ್ತಿದ್ದರು. ‘ಏನಪ್ಪಾ ಕ್ರಾಂತಿ ಮಾಡೋನು ಈ ರೀತಿ ಮಾಡ್ತೀಯಲ್ಲ’ ಎನ್ನುವವರ ಮಾತಲ್ಲಿ ಲೇವಡಿ ಎದ್ದು ಕಾಣುತ್ತಿತ್ತು. ಅವತ್ತು ಮನೆಗೆ ಹಿಂದಿರುಗಿದ ತಕ್ಷಣ ತಾತನ – ಅಜ್ಜ ಅಷ್ಟೊತ್ತಿಗಾಗಲೇ ತೀರಿಕೊಂಡಿದ್ದರು – ಫೋಟೋ ತೆಗೆದುಕೊಂಡು ಅಟ್ಟ ಸೇರಿ ಮನಸಾರೆ ಮನಸ್ಸಿನಲ್ಲೇ ಬಯ್ಯುತ್ತಿದ್ದೆ. ನೀತಿ ಕಥೆಗಳನ್ನು ಹೇಳಿ ಹೇಳಿ ನನ್ನಲ್ಲೊಂದು ಸ್ಥೈರ್ಯ ಉತ್ಸಾಹ ಮೂಡಿಸಿದ್ದ ಅದೇ ತಾತ ಕ್ರಾಂತಿ ಸಂಭವ್ ಎಂದು ಹೆಸರಿಟ್ಟು ಜನ್ಮ ಜನ್ಮಕ್ಕೂ ಸಾಕಾಗುವಷ್ಟು ಕೀಳರಿಮೆ ಮೂಡಲು ಕಾರಣವಾಗಿಬಿಟ್ಟ”
Also Readವಾಡಿ ಜಂಕ್ಷನ್ .... ಭಾಗ 1

ಅಕ್ಟೋ 9, 2014

ಬೆಂಕಿ ಹಚ್ಚಲು ಪೊಟ್ಣ ಬರ್ತಿದೆ!


hingyake
ಬೆಂಕಿಪಟ್ಣ

Dr Ashok K R
ದಯಾನಂದ ಟಿ.ಕೆ ನಿರ್ದೇಶನದ ಸ್ಟೀವ್ ಕೌಶಿಕ್ ಸಂಗೀತ ನೀಡಿರುವ ‘ಬೆಂಕಿಪಟ್ಣ’ ಚಿತ್ರದ ಹಾಡುಗಳು ಬಿಡುಗಡೆಗೊಂಡಿವೆ. ದಯಾನಂದರನ್ನು ಮೊದಲು ಕಂಡಿದ್ದು ಕುಪ್ಪಳ್ಳಿಯ ‘ನಾವು ನಮ್ಮಲ್ಲಿ’ ಕಾರ್ಯಕ್ರಮದಲ್ಲಿ. ಅವರ ಪುಸ್ತಕ ‘ರಸ್ತೆ ನಕ್ಷತ್ರ’ ಬಿಡುಗಡೆಯಾಗಿತ್ತು. ನಿಜವೆನ್ನಿಸದ ನೈಜ ಕಥಾನಕಗಳ ಗುಚ್ಛವದು. ಅದ್ಭುತ ಶೈಲಿಯ ನಿರೂಪಣೆಯಿಂದ ಗಮನ ಸೆಳೆದಿತ್ತು. ಅದೇ ಶೈಲಿಯ ಕಂಡರೂ ಕಾಣದೇ ಹೋಗುವ ಜನರ ಕಥಾನಕಗಳು ಈಗ ವಿವಿಧ ದಿನಪತ್ರಿಕೆಗಳಲ್ಲೂ ನಿಯಮಿತವಾಗಿ ಬರುತ್ತಿವೆಯೆನ್ನುವುದು ದಯಾನಂದರ ಶೈಲಿಯ ಪ್ರಭಾವವನ್ನು ತಿಳಿಸುತ್ತದೆ. ಇಂಥ ಅದ್ಭುತ ಕಥೆಗಾರರೊಬ್ಬರು ಇದ್ದಕ್ಕಿದ್ದಂತೆ ಸಿನಿಮಾ ತೆಗೆಯುತ್ತೇನೆಂದು ಘೋಷಿಸಿದಾಗ ಅರೆರೇ! ಎಂದು ಅಚ್ಚರಿಯಾದರೂ ಅವರಲ್ಲಿರುವ ಕಥೆಗಾರನ ಮೇಲಿರುವ ನಂಬುಗೆಯಿಂದ ಚಿತ್ರದ ಬಗೆಗಿನ ನಿರೀಕ್ಷೆಯೂ ಹೆಚ್ಚಿದೆ.
Also read

ಅಕ್ಟೋ 7, 2014

ಮಾತಿನ ಮೋಡಿಯಲ್ಲಿ ಚರ್ಚೆಗೊಳಪಡದ ಸಂಗತಿಗಳು

drug mafia hingyake
ಲಾಬಿಗೆ ಮಣಿದ ಸರ್ಕಾರ?
Dr Ashok K R


ಮಾತು ಬೆಳ್ಳಿ ಮೌನ ಬಂಗಾರ”ವೆಂಬ ಗಾದೆಮಾತಿನ ಮೊದಲರ್ಧದ ಅರ್ಥ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಅನುಭವಕ್ಕೆ ಬಂದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಗಾದೆಮಾತಿನ ಉಳಿದರ್ಧವನ್ನು ಅರ್ಥ ಮಾಡಿಸುವ ಪಣ ತೊಟ್ಟಂತಿದೆ! ಅನಿವಾರ್ಯವಿದ್ದಾಗಲೂ ಮಾತನಾಡದ ಪ್ರಧಾನಿಯನ್ನು ನೋಡಿದ ನಂತರ ಅವಶ್ಯಕತೆಗಿಂತ ಹೆಚ್ಚಾಗಿ ಅದದೇ ಮಾತುಗಳನ್ನು ನೋಡುವ ಸೌಭಾಗ್ಯ ನಮ್ಮದು! ನರೇಂದ್ರ ಮೋದಿ ತಮ್ಮ ಮಾತಿನ ಮೋಡಿಯಿಂದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದು ಮತ್ತು ತಾವು ಮಾತನಾಡಿದ್ದೆಲ್ಲ ನಿಜವೆಂದು ಕೇಳುಗರು ನಂಬುವಂತೆ ಮಾಡುತ್ತಿರುವುದು ಸುಳ್ಳಲ್ಲ. ಉಳಿದದ್ದೇನೇ ಇರಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರಂತೆ ಚಾಣಾಕ್ಷತನದಿಂದ ಮಾಧ್ಯಮವನ್ನು ನಿರ್ವಹಿಸಿದವರನ್ನು ನಾನಂತೂ ನೋಡಿಲ್ಲ. ಪಿ.ಎಮ್.ಓದಿಂದ ಏನು ಸುದ್ದಿ ಬರುತ್ತದೋ ಅದಷ್ಟೇ ಸದ್ದು ಮಾಡುತ್ತಿದೆ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳಲ್ಲಿ. ರಾಜಕೀಯ ಪಕ್ಷದ – ರಾಜಕಾರಣಿಯ ದೃಷ್ಟಿಯಿಂದ ಅವರು ಮಾಡುತ್ತಿರುವುದು ನೂರು ಪ್ರತಿಶತಃ ಸರಿ. ಆದರೀ ಮಾಧ್ಯಮಗಳಿಗೆ ಏನಾಗಿದೆ? ಜನಸಮೂಹದ ಮೇಲೆ ಹೊರೆಯಾಗುವಂತಹ ನಿರ್ಧಾರಗಳನ್ನು ಎನ್.ಡಿ.ಎ ಸರಕಾರ ತೆಗೆದುಕೊಂಡಿರುವುದು ಕೇವಲ ಒಳಪುಟಗಳಲ್ಲಿ ಸಣ್ಣ ವರದಿಯಾಗಿ ಮರೆಯಾಗಿದೆ, ಕೆಲವದರಲ್ಲಿ ಆ ಪುಟ್ಟ ವರದಿಯೂ ಇಲ್ಲ, ಕೆಲವೇ ಕೆಲವು ವಿಶ್ಲೇಷಣಾತ್ಮಕ ವರದಿಗಳನ್ನು ನೀಡಿವೆ. ಇನ್ನು ಮುಂದೆ ಔಷಧಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವಂತಿಲ್ಲ ಎಂಬ ಎನ್.ಡಿ.ಎ ಸರಕಾರದ ನಿರ್ಣಯ ಭಾರತದ ಜನರಿಗಷ್ಟೇ ಅಲ್ಲದೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಿಗೆಲ್ಲವೂ ಆಘಾತ ಕೊಡುವಂತದ್ದು.

Also Read
ಜನಪ್ರಿಯವೂ ಅಲ್ಲ ಜನಪರವೂ ಅಲ್ಲ

ಅಕ್ಟೋ 5, 2014

ಎಂ.ಆರ್.ಪಿ.ಎಲ್ ಕಂಪನಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ

Press Release
ನಾಗರೀಕ ಬಂಧುಗಳೇ,
ಮಂಗಳೂರು ತೈಲಾಗಾರ ನಿರ್ಮಾಣ ಈ ಭಾಗದ ಜನತೆಯ ಕನಸಾಗಿತ್ತು. ಬೃಹತ್ ಕೈಗಾರಿಕೆಯ ಆಗಮನದಿಂದ ಯುವಜನರಿಗೆ ಉದ್ಯೋಗ ದೊರಕುತ್ತದೆ, ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ಕನಸಿನೊಂದಿಗೆ ತಮ್ಮ ಫಲವತ್ತಾದ ಭೂಮಿಯನ್ನು ಎಂ.ಆರ್.ಪಿ.ಎಲ್‍ಗೆ ಬಿಟ್ಟು ಕೊಟ್ಟಿದ್ದೇವೆ. ಆದರೆ ನಮ್ಮ ಭೂಮಿ, ನಮ್ಮ ಬೆಂಬಲದೊಂದಿಗೆ ಸ್ಥಾಪನೆಯಾದ ಎಂ.ಆರ್.ಪಿ.ಎಲ್ ಇಲ್ಲಿಯ ಜನತೆಗೆ ನೀಡಿದ್ದೇನು? ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸಿದ ಕಂಪನಿ ಇಂದು ಎಸ್.ಇ.ಝಡ್‍ನೊಂದಿಗೆ ಸೇರಿ ಜನತೆಯ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಇಂದು ವಿಸ್ತಾರವಾಗಿ ಬೆಳವಣಿಗೆಯಾಗುತ್ತಿರುವ ಕಂಪನಿಯು ಹಲವು ವಿನಾಶಕಾರಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಎರಡನೇ ಹಂತ, ಮೂರನೇ ಹಂತದಲ್ಲಿ ಜೋಕಟ್ಟೆ ಭಾಗದಲ್ಲಿ ಕೋಕ್ ಮತ್ತು ಸಲ್ಫರ್ ಉತ್ಪಾದನೆ ಮಾಡುತ್ತಿರುವುದು ಜನತೆಯ ನೆಮ್ಮದಿಯ ಬದುಕಿಗೆ ನೇರವಾಗಿ ಬೆದರಿಕೆಯೊಡ್ಡಿದೆ.

ಅಕ್ಟೋ 4, 2014

ಮೌನ

ಅಂದು
'ಅವರೆಲ್ಲಾ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಛೀ ಅಸಹ್ಯ' ಎಂದರು. ನನಗೆ ಸಂಬಂಧಪಟ್ಟಿದ್ದಾಗಿರಲಿಲ್ಲ. ಏನೋ ರಾಜಕೀಯ, ಮಾಡಿಕೊಳ್ಳಲಿ ಬಿಡಿ ಎಂದು ಸುಮ್ಮನಿದ್ದೆವು.
ಇಂದು
'ರಾಷ್ಟ್ರೀಯವಾದಿ ಪಕ್ಷದ ನಾಯಕನೊಬ್ಬ ಸರಕಾರೀ ದೂರದರ್ಶನದಲ್ಲಿ ಕಾಣಿಸಿಕೊಂಡ್ರೆ ಏನ್ರೀ ತಪ್ಪು' ಎಂದು ಅಬ್ಬರಿಸಿದರು. ಥೂ...ಓಕ್ಕೊಳ್ಲಿ ಬಿಡಪ್ಪ ಎಂದು ಸುಮ್ಮನಿದ್ದೆವು.
ಮುಂದು
'ಹಿಂದೂ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಜಾತಿಯವರೂ ಜೊತೆಜೊತೆಯಾಗಿ ವಾಸಿಸಿದರೆ ಹೆಂಗೆ? ವರ್ಣಾಶ್ರಮ ವ್ಯವಸ್ಥೆಗೆ ಅವಮಾನಿಸಿದರೆ ದೇಶಕ್ಕೆ ಒಳ್ಳೆಯದಲ್ಲ' ಎಂದು ನಯವಾಗಿ ತಲೆಸವರಿದರು. ಅಂದು ಮತ್ತು ಇಂದು ಸುಮ್ಮನಿದ್ದ ಕಾರಣ ಮಾತನಾಡಲೇನೂ ಉಳಿದಿರಲಿಲ್ಲ. ಗಂಟು ಮೂಟೆ ಕಟ್ಟಲಾರಂಭಿಸಿದೆವು.
Also Readಕಥೆಗಳು

ಅಕ್ಟೋ 3, 2014

ಕಮರಿದ ಕನಸುಗಳ ಕಲ್ಲೂರಿ

Kalloori movie review
ಕಲ್ಲೂರಿ
ಡಾ ಅಶೋಕ್ ಕೆ ಆರ್.
ದೊಡ್ಡ ಮರವೊಂದು ಬಿದ್ದಾಗ ಇಂತಹ ಚಿಕ್ಕ ಪುಟ್ಟ ಘಟನೆಗಳು ಸಹಜ ಎಂದು ಇಂದಿರಾ ಗಾಂಧಿಯ ಹತ್ಯೆಯ ನಂತರ ನಡೆದ ಸಿಖ್ ಹತ್ಯಾಕಾಂಡದ ಬಗ್ಗೆ ಹೇಳಿದ್ದು ರಾಜೀವ್ ಗಾಂಧಿ. ಕ್ರಿಯೆಗೊಂದು ಪ್ರತಿಕ್ರಿಯೆ ಸಹಜ ಎಂಬಭಿಪ್ರಾಯ ಕೇಳಿಬಂದಿದ್ದು ಗೋದ್ರೋತ್ತರದ ದಿನಗಳಲ್ಲಿ ನಡೆದ ಮುಸ್ಲಿಮರನ್ನು ಗುರಿಮಾಡಿಕೊಂಡ ಗಲಭೆಗಳಲ್ಲಿ. ಪ್ರತಿಯೊಂದು ಧಾರ್ಮಿಕ ಅಥವಾ ರಾಜಕೀಯ ಕಾರಣದ ಗಲಭೆಗಳಲ್ಲಿ ‘ಗಲಭೆ ಶುರು ಮಾಡಿದ್ದು ನಾವಲ್ಲ, ನಮ್ಮದೇನಿದ್ದರೂ ಅವರ ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ’ ಎಂಬರ್ಥದ ಸಮರ್ಥನೆಗಳಿರುತ್ತವೆ. ಆದರೆ ಗಲಭೆಯ ಕಾವಿನಿಂದ ಸಾಯುವವರು ಬಹಳಷ್ಟು ಪ್ರಕರಣಗಳಲ್ಲಿ ಗಲಭೆಗೆ ಸಂಬಂಧಪಡದವರಾಗಿರುತ್ತಾರೆ. ವಿನಾಕಾರಣವಾಗಿ ತಮ್ಮದೇನೂ ತಪ್ಪಿಲ್ಲದೆ ಸತ್ತೇ ಹೋದ ಮುಗ್ದರ, ಅಮಾಯಕರ ಕಮರಿದ ಕನಸುಗಳ ಬಗೆಗಿನ ಚಿತ್ರ ಬಾಲಾಜಿ ಶಕ್ತಿವೇಲನ್ ನಿರ್ದೇಶನದ “ಕಲ್ಲೂರಿ”.
Also readಮರೀನಾ ಎಂಬ ದೃಶ್ಯಕಾವ್ಯ

ಅಕ್ಟೋ 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.