ಅಕ್ಟೋ 4, 2014

ಮೌನ

ಅಂದು
'ಅವರೆಲ್ಲಾ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಛೀ ಅಸಹ್ಯ' ಎಂದರು. ನನಗೆ ಸಂಬಂಧಪಟ್ಟಿದ್ದಾಗಿರಲಿಲ್ಲ. ಏನೋ ರಾಜಕೀಯ, ಮಾಡಿಕೊಳ್ಳಲಿ ಬಿಡಿ ಎಂದು ಸುಮ್ಮನಿದ್ದೆವು.
ಇಂದು
'ರಾಷ್ಟ್ರೀಯವಾದಿ ಪಕ್ಷದ ನಾಯಕನೊಬ್ಬ ಸರಕಾರೀ ದೂರದರ್ಶನದಲ್ಲಿ ಕಾಣಿಸಿಕೊಂಡ್ರೆ ಏನ್ರೀ ತಪ್ಪು' ಎಂದು ಅಬ್ಬರಿಸಿದರು. ಥೂ...ಓಕ್ಕೊಳ್ಲಿ ಬಿಡಪ್ಪ ಎಂದು ಸುಮ್ಮನಿದ್ದೆವು.
ಮುಂದು
'ಹಿಂದೂ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಜಾತಿಯವರೂ ಜೊತೆಜೊತೆಯಾಗಿ ವಾಸಿಸಿದರೆ ಹೆಂಗೆ? ವರ್ಣಾಶ್ರಮ ವ್ಯವಸ್ಥೆಗೆ ಅವಮಾನಿಸಿದರೆ ದೇಶಕ್ಕೆ ಒಳ್ಳೆಯದಲ್ಲ' ಎಂದು ನಯವಾಗಿ ತಲೆಸವರಿದರು. ಅಂದು ಮತ್ತು ಇಂದು ಸುಮ್ಮನಿದ್ದ ಕಾರಣ ಮಾತನಾಡಲೇನೂ ಉಳಿದಿರಲಿಲ್ಲ. ಗಂಟು ಮೂಟೆ ಕಟ್ಟಲಾರಂಭಿಸಿದೆವು.
Also Readಕಥೆಗಳು

ಅಕ್ಟೋ 3, 2014

ಕಮರಿದ ಕನಸುಗಳ ಕಲ್ಲೂರಿ

Kalloori movie review
ಕಲ್ಲೂರಿ
ಡಾ ಅಶೋಕ್ ಕೆ ಆರ್.
ದೊಡ್ಡ ಮರವೊಂದು ಬಿದ್ದಾಗ ಇಂತಹ ಚಿಕ್ಕ ಪುಟ್ಟ ಘಟನೆಗಳು ಸಹಜ ಎಂದು ಇಂದಿರಾ ಗಾಂಧಿಯ ಹತ್ಯೆಯ ನಂತರ ನಡೆದ ಸಿಖ್ ಹತ್ಯಾಕಾಂಡದ ಬಗ್ಗೆ ಹೇಳಿದ್ದು ರಾಜೀವ್ ಗಾಂಧಿ. ಕ್ರಿಯೆಗೊಂದು ಪ್ರತಿಕ್ರಿಯೆ ಸಹಜ ಎಂಬಭಿಪ್ರಾಯ ಕೇಳಿಬಂದಿದ್ದು ಗೋದ್ರೋತ್ತರದ ದಿನಗಳಲ್ಲಿ ನಡೆದ ಮುಸ್ಲಿಮರನ್ನು ಗುರಿಮಾಡಿಕೊಂಡ ಗಲಭೆಗಳಲ್ಲಿ. ಪ್ರತಿಯೊಂದು ಧಾರ್ಮಿಕ ಅಥವಾ ರಾಜಕೀಯ ಕಾರಣದ ಗಲಭೆಗಳಲ್ಲಿ ‘ಗಲಭೆ ಶುರು ಮಾಡಿದ್ದು ನಾವಲ್ಲ, ನಮ್ಮದೇನಿದ್ದರೂ ಅವರ ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ’ ಎಂಬರ್ಥದ ಸಮರ್ಥನೆಗಳಿರುತ್ತವೆ. ಆದರೆ ಗಲಭೆಯ ಕಾವಿನಿಂದ ಸಾಯುವವರು ಬಹಳಷ್ಟು ಪ್ರಕರಣಗಳಲ್ಲಿ ಗಲಭೆಗೆ ಸಂಬಂಧಪಡದವರಾಗಿರುತ್ತಾರೆ. ವಿನಾಕಾರಣವಾಗಿ ತಮ್ಮದೇನೂ ತಪ್ಪಿಲ್ಲದೆ ಸತ್ತೇ ಹೋದ ಮುಗ್ದರ, ಅಮಾಯಕರ ಕಮರಿದ ಕನಸುಗಳ ಬಗೆಗಿನ ಚಿತ್ರ ಬಾಲಾಜಿ ಶಕ್ತಿವೇಲನ್ ನಿರ್ದೇಶನದ “ಕಲ್ಲೂರಿ”.
Also readಮರೀನಾ ಎಂಬ ದೃಶ್ಯಕಾವ್ಯ

ಅಕ್ಟೋ 2, 2014

ವಾಡಿ ಜಂಕ್ಷನ್ .... ಭಾಗ 1


wadi junction


Dr Ashok K R
ಕ್ರಾಸಿಂಗ್
“A patient by name Mr Basavaraju aged 22 years”
‘ಒಂದು ಹಂತದವರೆಗೆ ಹೆಸರು, ದುಡ್ಡು ಎಲ್ಲಾ ನೋಡಿದ ಮೇಲೆ ಮನುಷ್ಯ ಹೊಸತೇನನ್ನೋ ಹುಡುಕಬಯಸೋದು ಸಹಜ’
“comes from a middle class family. He is from”
‘ನಿಮಗೆ ಈ ಸಧ್ಯ ದೇವರು ಎಲ್ಲದರಲ್ಲೂ ಯಶಸ್ಸು ಕೊಟ್ಟಿದ್ದಾನೆ”
“village Hanoor of Gundlupet Taluk. He is an agricultuist by occupation”
‘ಈಗ ಮಾಡಿರೋ ಹೆಸರು ಸಾಲದು, ಮತ್ತಷ್ಟು ಹೆಸರು ಮಾಡಬೇಕೆನ್ನಿಸಿದರೆ ದಾನ ಧರ್ಮ ಮಾಡಿ’
“He presents with compaint of swelling in the right groin region from past 20”
‘ಮಠಕ್ಕೆ ಸೇರಿ ಸನ್ಯಾಸಿ ಜೀವನ ಮಾಡಬೇಕೆನ್ನೋದೂ ನಿಮಗೆ ಹೆಸರು ಮಾಡುವ ಒಂದು’
“years and pain in the swelling from past 7 days”
‘ವಿಧಾನ ಅಲ್ವಾ ಡಾಕ್ಟ್ರೇ! ನಿಮಗೆಷ್ಟೇ ಒಳ್ಳೇ ಸರ್ಜನ್ ಎಂಬ ಹೆಸರಿದ್ದರೂ ಅಂತರಂಗದಲ್ಲಿ ನೀವೇನು ಅನ್ನೋದು ನಿಮಗಿಂತ ಚೆನ್ನಾಗಿ ತಿಳಿದಿರೋರು ಬೇರೆಯವರಿರಲಿಕ್ಕಿಲ್ಲ. ನನ್ನ ಧ್ಯಾನದ ಸಮಯ ಈಗ. ನೀವಿನ್ನು....’
“ಮುಂಡಾಮೋಚ್ತು” ತನಗೇ ಎಂಬಂತೆ ಶ್ರವಣ್ ಹೇಳಿಕೊಂಡನಾದರೂ ಎದುರಿಗಿದ್ದ ಹತ್ತು ಜನ ವಿದ್ಯಾರ್ಥಿಗಳಿಗದು ಕೇಳಿಸಿತ್ತು. Case present ಮಾಡುತ್ತಿದ್ದ ವಿದ್ಯಾರ್ಥಿನಿ ಗಾಬರಿಯಾಗಿ “ಸರ್” ಎಂದಳು. ಉಳಿದವರು ಒಬ್ಬರೊಬ್ಬರ ಮುಖ ನೋಡಿದರು. ಹಿಂದೆ ನಿಂತವರು ನಕ್ಕರೇನೋ ಎನ್ನಿಸಿತು ಶ್ರವಂತ್‍ಗೆ.

ಸೆಪ್ಟೆಂ 30, 2014

ಡಾ ಎನ್ ಜಗದೀಶ್ ಕೊಪ್ಪ: ಬಿಳಿ ಸಾಹೇಬನ ಭಾರತ - ಜಿಮ್ ಕಾರ್ಬೆಟ್ ನ ಮಾನವೀಯ ಮುಖ


jim corbet kannada book
ಬಿಳಿ ಸಾಹೇಬನ ಭಾರತ - ಡಾ ಎನ್ ಜಗದೀಶ್ ಕೊಪ್ಪ
ನಾನು ಇತ್ತೀಚಿನ ದಿನಗಳಲ್ಲಿ ಇಷ್ಟಪಡುವ ಲೇಖಕರಲ್ಲೊಬ್ಬರು ಜಗದೀಶ್ ಕೊಪ್ಪ. ಅವರ ಲೇಖನಗಳನ್ನು ಮೊದಲು ಓದಿದ್ದು ವರ್ತಮಾನದಲ್ಲಿ. ಅವರ ಅನುವಾದಿತ ಕೃತಿಗಳಿರಬಹುದು, ವಿಶ್ಲೇಷಣಾತ್ಮಕ ಲೇಖನಗಳಿರಬಹುದು ಹೊಸತೇನನ್ನೋ ಓದುಗರಿಗೆ ತಿಳಿಸುವ ಹಂಬಲವಿರುವಂತಹ ಬರಹಗಳವು. ಅವರ ಹೊಸ ಪುಸ್ತಕ - ಬಿಳಿ ಸಾಹೇಬನ ಭಾರತ, ಜಿಮ್ ಕಾರ್ಬೆಟ್  ಜೀವನಗಾಥೆ. ಜಿಮ್ ಕಾರ್ಬೆಟ್ ಎಂದರೆ ನನಗೆ ಗೊತ್ತಿರುವಂತೆ ಬೇಟೆಗಾರ ಮತ್ತು ಇಂಗ್ಲೀಷ್ ಆಫೀಸರ್. ಆತನ ಮಾನವೀಯ ಮುಖಗಳು ಮತ್ತು ನಿಸರ್ಗದೊಂದಿಗಿನ ಸಂಬಂಧಗಳ ಬಗೆಗಿನ ಪುಸ್ತಕವಿದು. ಅಕ್ಟೋಬರ್ ಹನ್ನೊಂದರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ. 
ಬಿಳಿ ಸಾಹೇಬನ ಭಾರತದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.


ಜಿಮ್ ಕಾರ್ಬೆಟ್ ಮೊಕಮೆಘಾಟ್ಗೆ ಬಂದ ನಂತರ ಅವನ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ರೈಲ್ವೆ ನಿಲ್ದಾಣದ ಸರಕು ಸಾಗಾಣಿಕೆಯ ವಿಷಯದಲ್ಲಿ ಶಿಸ್ತು ಕಾಣತೊಡಗಿತು. ಆರಂಭದಲ್ಲಿ ಕಾರ್ಬೆಟ್ಗೆ ಇದ್ದ ಒತ್ತಡಗಳು ಮರೆಯಾಗತೊಡಗಿದವು. ಕೆಲಸ ಸುಗಮವಾಗಿ ಸಾಗತೊಡಗಿದಂತೆ ಅವನ ಮನಸ್ಸು ನಿರಾಳವಾಯಿತು. ಆದರೂ ಕೂಡ ಅವನೊಳಗೆ ಹುಟ್ಟೂರಿನ ಪರಿಸರದ ಸೆಳೆತ ಯಾವಾಗಲೂ ಕಾಡುತ್ತಿತ್ತು. ಪ್ರತಿವರ್ಷ ಡಿಸಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನೈನಿತಾಲ್ಗೆ ಹೋಗಿ ತನ್ನ ಕುಟುಂಬದ ಜೊತೆ ಕಾಲಕಳೆಯುತ್ತಿದ್ದ. ತನ್ನ ಮನೆಯಲ್ಲಿದ್ದ ಬೇಟೆ ನಾಯಿಗಳ ಜೊತೆ ಕಲದೊಂಗಿಯ ಅರಣ್ಯ ಪ್ರದೇಶವನ್ನು ಹೊಕ್ಕಿಬರುತ್ತಿದ್ದ. ಅಲ್ಲಿನ ಸ್ಥಳೀಯರ ಯೋಗಕ್ಷೇಮ ವಿಚಾರಿಸುತ್ತಿದ್ದ.

ಖ್ಯಾತಿಯ ತುದಿಯಲ್ಲಿ ಸೆರೆವಾಸ

shashikala natarajan
ಜಯಲಲಿತ
ಡಾ. ಅಶೋಕ್ ಕೆ ಆರ್
ಮಧ್ಯ ಮತ್ತು ಉತ್ತರಭಾರತದ ಚಿತ್ರರಂಗವನ್ನೆಲ್ಲ ತನ್ನ ಮಾರುಕಟ್ಟೆ ತಂತ್ರದಿಂದ, ಅದ್ದೂರಿತನದಿಂದ ಅಪೋಶನ ತೆಗೆದುಕೊಂಡಿದ್ದು ಹಿಂದಿ ಚಿತ್ರರಂಗ. ಹಿಂದಿ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಇದ್ದರೂ ದಕ್ಷಿಣ ಚಿತ್ರರಂಗ ತನ್ನ ಪಾರಮ್ಯವನ್ನು ಬಿಟ್ಟುಕೊಟ್ಟಿಲ್ಲ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಹೊಸತನದ ಚಿತ್ರಗಳಿಂದ, ಮಣ್ಣಿನ ಸೊಗಡಿನ ಚಿತ್ರಗಳಿಂದ ಹೆಸರು ಮಾಡಿರುವುದು ತಮಿಳು ಚಿತ್ರಂಗ. ಹೀರೋ ಆಧಾರಿತ ವಿಪರೀತ ಬಜೆಟ್ಟಿನ ಮಾಸ್ ಚಿತ್ರಗಳಿಂದ ಹಿಡಿದು ಕಥೆಯಾಧಾರಿತ ಅತ್ಯಂತ ಕಡಿಮೆ ಬಜೆಟ್ಟಿನ ಚಿತ್ರಗಳನ್ನು ಸುಂದರವಾಗಿ ಹೆಣೆಯುವುದರಲ್ಲಿ ತಮಿಳು ಚಿತ್ರರಂಗ ಮೇಲುಗೈ ಸಾಧಿಸಿದೆ. ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಿಸುವಾಗ ತಮಗೆ ಮೆಚ್ಚುಗೆಯಾದ ಸನ್ನಿವೇಶ ಬಂದರೆ ಜನರದಕ್ಕೆ ಚಪ್ಪಾಳೆ ತಟ್ಟುತ್ತಾರಂತೆ! ಚಿತ್ರಮಂದಿರಗಳಲ್ಲಿ ಕುಣಿಯುವುದು, ವಿಷಿಲ್ ಹೊಡಿಯುವುದು ಸಾಮಾನ್ಯವಾದರೂ ಚಪ್ಪಾಳೆ ತಟ್ಟುವುದು ಒಂದಷ್ಟು ವಿಚಿತ್ರದಂತೆಯೇ ಕಾಣುತ್ತದೆ. ಅದು ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಬಾಬಾ’ ಚಿತ್ರ ಬಿಡುಗಡೆಯಾಗಿದ್ದ ಸಂದರ್ಭ. ಸಾಧಾರಣವಾದ ಚಿತ್ರವದು. ಚಿತ್ರ ಬಿಡುಗಡೆಯಾದ ಹೊಸದರಲ್ಲಿ ಟಿ.ವಿ ವಾಹಿನಿಯೊಂದು ಚಿತ್ರ ನೋಡಿ ಹೊರಬಂದವರ ಅಭಿಪ್ರಾಯ ಕೇಳುತ್ತಿತ್ತು. ಹೆಂಗಸೊಬ್ಬರು ಚಿತ್ರದಲ್ಲಿ ರಜನೀಕಾಂತ್ ಕೈಯಲ್ಲಿ ಮೂಟೆ ಹೊರಿಸಿದ್ದನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅದು ಸಿನಿಮಾ ಕಣಮ್ಮ ಎಂದರೂ ಅಳು ಕಡಿಮೆಯಾಗಲಿಲ್ಲ. ತಮಿಳುನಾಡಿನಲ್ಲಿ ಸಿನಿಮಾ ಜನರ ಮೇಲೆ ಮಾಡಿರುವ ಅಭೂತಪೂರ್ವ ಪ್ರಭಾವಕ್ಕೆ ಇದೊಂದು ಉದಾಹರಣೆಯಷ್ಟೇ. ಈ ಕಾರಣದಿಂದಲೋ ಏನೋ ದಶಕಗಳಿಂದ ತಮಿಳುನಾಡಿನಲ್ಲಿ ಸಿನಿಮಾದಿಂದ ರಾಜಕೀಯಕ್ಕೆ ಪ್ರವೇಶಿಸಿದವರ ಪ್ರಾಬಲ್ಯವೇ ಹೆಚ್ಚು. ಎಂ.ಜಿ.ಆರ್, ಕರುಣಾನಿಧಿ, ಜಯಲಲಿತ ಮತ್ತೀಗ ಪ್ರವರ್ಧಮಾನಕ್ಕೆ ಬರುತ್ತಿರುವ ವಿಜಯಕಾಂತ್ – ಎಲ್ಲರೂ ಸಿನಿಮಾದೊಂದಿಗೆ ಒಡನಾಡಿದವರು. ಬರಹಗಾರರಾಗಿದ್ದ ಕರುಣಾನಿಧಿಯನ್ನೊರತುಪಡಿಸಿ ಉಳಿದವರೆಲ್ಲರೂ ತಮ್ಮ ನಟನೆಯಿಂದ ಜನಮನ ಸೆಳೆದವರು. ರಜನೀಕಾಂತರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಕ್ಕೂ ಅವರ ಸೂಪರ್ ಸ್ಟಾರ್ ಗಿರಿಯೇ ಕಾರಣ.

ಸೆಪ್ಟೆಂ 29, 2014

ಹೆಸರಲ್ಲೆಲ್ಲಾ ಇದೆ!

religion
ಡಾ ಅಶೋಕ್ ಕೆ ಆರ್
ಇಂಡಿಯನ್ ಮುಜಾಹಿದ್ದೀನೋ ಹಿಜ್ಬುಲ್ ಮುಜಾಹಿದ್ದೀನೋ ಹೆಸರಿನ ಮುಸ್ಲಿಂ ಸಂಘಟನೆಯೊಂದರ ನಾಮಧೇಯದಿಂದ ಪೋಲೀಸರಿಗೆ ಬೆದರಿಕೆಯ ಈ-ಮೇಲ್ ಸಂದೇಶಗಳು ತಲುಪುತ್ತವೆ. ಇಡೀ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಮೈಮರೆತಾಗ, ದೂರದೂರಿನ ಜನರೆಲ್ಲ ಮೈಸೂರಿಗೆ ಬಂದು ದಸರಾದ ವೈಭವವನ್ನು ಸವಿಯುತ್ತಿರುವಾಗ ಮೈಸೂರಿನ ಹಲವೆಡೆ ಸ್ಪೋಟಗೊಳ್ಳುವಂತೆ ಟೈಂ ಬಾಂಬುಗಳನ್ನು ಇಟ್ಟಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂಬ ಬೆದರಿಕೆ ಮತ್ತು ಪಂಥಾಹ್ವಾನದ ಸಂದೇಶವದು. ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬ್ ಸ್ಪೋಟವೆಂದರೆ ಹೈಅಲರ್ಟ್ ಘೋಷಿಸಬೇಕಾದ ಸಂದರ್ಭವಂತೂ ಹೌದು. ಮೈಸೂರಿನ ಪೋಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ – ಮೇಲ್ ಕಳುಹಿಸಿದ ಐ.ಪಿ ಅಡ್ರೆಸ್ಸನ್ನು ಪತ್ತೆ ಹಚ್ಚಿ ಆ ಕಂಪ್ಯೂಟರ್ ಅಂಗಡಿಯ ಬಳಿಯಲ್ಲಿನ ಮನೆಯಲ್ಲಿದ್ದ ಬೆದರಿಕೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸುತ್ತಾರೆ.
ಮೇಲಿನದಷ್ಟು ನಡೆದ ಘಟನಾವಳಿ. ಪತ್ರಿಕೆಗಳು ಮತ್ತು ಮಾಧ್ಯಮದಲ್ಲಿ ಈ ಘಟನೆ ಯಾವ ರೀತಿ ವರದಿಯಾಗುತ್ತದೆ?

P Sainath


ಸೆಪ್ಟೆಂ 27, 2014

ಜನಸಂಗ್ರಾಮ ಪರಿಷತ್ತಿನಿಂದ ಯುವಜನತೆಗಾಗಿ ಯುವಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ

ಜನ ಸಂಗ್ರಾಮ ಪರಿಷತ್ - ಪತ್ರಿಕಾ ಟಿಪ್ಪಣಿ
ಬೆಂಗಳೂರು, 26-09-2014
ನಾಡಿನ ಸುಸ್ಥಿರ ಅಭಿವೃದ್ಧಿಗೆ ಪ್ರಜ್ಞಾವಂತ ನಾಗರಿಕರ ಅದರಲ್ಲೂ ಯುವಜನರ ಪಾತ್ರ ಮಹತ್ವದ್ದಾಗಿರುತ್ತದೆ. ನಾಡಿನ ನೆಲ ಜಲ ಮತ್ತು ಇತರೆ ನೈಸರ್ಗಿಕ ಸಂಪತ್ತಿನ ರಕ್ಷಣೆಯಲ್ಲಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಜ್ಞಾವಂತ ಯುವಜನರ ಪಾತ್ರ ನಿರ್ಣಾಯಕ ಪಾತ್ರವಹಿಸಲಿದೆ. ಇಂತಹ ಪ್ರಜ್ಞಾವಂತ ಯುವಜನರನ್ನು ಗಮನದಲ್ಲಿ ಇಟ್ಟುಕೊಂಡು ಜನಸಂಗ್ರಾಮ ಪರಿಷತ್ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಬೇತಿಯು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಪರಿವರ್ತನಾ ಸದನದಲ್ಲಿ ನಡೆಯಲಿದ್ದು, 18ರಿಂದ 35 ರವರೆಗಿನ ವಯೋಮಿತಿಯ ಆಸಕ್ತ ಯುವಜನರು ಭಾಗವಹಿಸಬಹುದಾಗಿದೆ. ತರಬೇತಿಯ ಸಮಯದಲ್ಲಿ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 500 ರೂಪಾಯಿಗಳ ಶುಲ್ಕವನ್ನು ನೀಡಬೆಕಾಗಿರುತ್ತದೆ. ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಬೇಕು.
ತರಬೇತಿಯನ್ನು ಅಕ್ರಮ ಗಣಿಗಾರಿಕೆ, ಭೂಗಳ್ಳರ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರು ಮತ್ತು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಆರ್. ಹಿರೇಮಠ, ಪಶ್ಚಿಮಘಟ್ಟಗಳ ಉಳುವಿಗಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಬಗೆಗಿನ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಿ. ಯತಿರಾಜು, ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ, ಶಾ0ತಲಾ ದಾಮ್ಲೆ, ದೀಪಕ್ ಸಿ. ಎನ್. ತುಮಕೂರಿನ ಸಿಜ್ಞಾ ಸಂಸ್ಥೆಯ ಜ್ಞಾನ ಸಿಂಧು ಸ್ವಾಮಿ ಮತ್ತು ಪ್ರತಿಮಾ ನಾಯಕ್ ಹಾಗೂ ಇನ್ನಿತರರು ನಡೆಸಿಕೊಡಲಿದ್ದಾರೆ. ತರಬೇತಿಯಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಮುಖವಾಗಿ ಸಾಮಾಜಿಕ ಚಳುವಳಿಗಳು, ಸ್ವರಾಜ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆ, ಸುಸ್ಥಿರ ಬದಲಾವಣೆ, ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ಸಾಹಿತ್ಯ ಕೃತಿಗಳ ಪರಿಚಯ, ಮಾಹಿತಿ ಹಕ್ಕು ಕಾಯ್ದೆ ಮತ್ತು ಇನ್ನೂ ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ.
ತರಬೇತಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮೊದಲೇ ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ 9916601969 / 8867186343 ದೂರವಾಣಿಯನ್ನು ಸಂಪರ್ಕಿಸಬಹುದು.
ದೀಪಕ್ ಸಿ. ಎನ್.
ಪ್ರಧಾನ ಕಾರ್ಯದರ್ಶಿ

“Flash” ಬ್ಯಾಕ್


payaswini
ಸುಳ್ಯದ ಸಮೀಪ

Dr Ashok K R
ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ ಎಂಬ ಮಾತಿದೆ. ಫೋಟೋಗ್ರಫಿಗಿರುವ ಈ ಶಕ್ತಿಯನ್ನು ಅರಿಯಲು ನಾನು ಸವೆಸಿದ ಒಂದು ಪುಟ್ಟ ಹಾದಿಯ ಅನುಭವಗಳನ್ನು ಈ ‘ಕ್ಯಾಮೆರಾ ಕಣ್ಣು’ ಅಂಕಣದ ಮೂಲಕ ಹಂಚಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೇನೆ. ಫೋಟೋಗ್ರಫಿಯ ಅ ಆ ಇ ಈ ತಿಳಿಸಿಕೊಡಲು ಸಾವಿರಾರು ಪುಸ್ತಕಗಳು ಲಭ್ಯವಿದೆ (ಬಹುತೇಕ ಪುಸ್ತಕಗಳನ್ನು ಮುಟ್ಟಿ ನೋಡಷ್ಟೇ ತೃಪ್ತಿ ಪಟ್ಟುಕೊಳ್ಳಬೇಕು, ಅಷ್ಟು ದುಬಾರಿ), ಅಂತರ್ಜಾಲದಲ್ಲೂ ನೂರಾರು ತಾಣಗಳು ಉಚಿತವಾಗಿ ಫೋಟೋಗ್ರಫಿಯ ಮೂಲ ಪಾಠಗಳನ್ನು ಹೇಳಿಕೊಡುತ್ತವೆ. Dp review, digital photography school ನಾನು ಪ್ರಾರಂಭದ ದಿನಗಳಲ್ಲಿ ಓದಿದ ತಾಣಗಳು. ಓದೋದ್ಯಾರು ಅನ್ನೋರಿಗೆ ಯೂಟ್ಯೂಬಿನಲ್ಲಿ ಫೋಟೋಗ್ರಫಿ ಟುಟೋರಿಯಲ್ಸಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳಿವೆ. ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ತಿಳಿಸುವ ತಾಣಗಳು ಒಂದಷ್ಟು ಕಡಿಮೆಯೇ.

ಸೆಪ್ಟೆಂ 25, 2014

ಚಿಕ್ಕ ಹಗರಣ

ಮೂಲ – ಹರ್ಷ Think Bangalore
ಅನುವಾದ – ಡಾ ಅಶೋಕ್ ಕೆ ಆರ್.
ರಾಮಸ್ವಾಮಿ ಪ್ರಖ್ಯಾತ ವ್ಯಕ್ತಿ. ಊರಿನ ಹೈಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಆಗಿ ಕೆಲಸಮಾಡುತ್ತಿದ್ದರು. ಅವರ ಮಾತೆಂದರೆ ಊರವರಿಗೆಲ್ಲ ಬಹಳ ಗೌರವ. ಕಾರಣ, ಅವರ ಆದರ್ಶಯುತ ಜೀವನ. ಸುಳ್ಳಾಡದೆ, ಯಾರೊಬ್ಬರಿಗೂ ಮೋಸ ಮಾಡದೆ, ಕೆಟ್ಟದನ್ನು ಮಾಡದೆ ಎಲ್ಲರೊಡನೆ ಸೌಮ್ಯದಿಂದ ಸ್ನೇಹಮಯದಿಂದಿರುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಬುದ್ಧಿವಂತರು. ಚೆನ್ನಾಗಿ ಓದಿಕೊಂಡರು. ದೊಡ್ಡವ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದರೆ ಚಿಕ್ಕವ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.