ಆಗ 14, 2014

ಅವರೆಲ್ಲರೂ ಪ್ರತಿಭಾವಂತರೇ ಆದರೆ…..



ಡಾ ಅಶೋಕ್ ಕೆ ಆರ್
ಭಾರತದಲ್ಲಿ ಹಗರಣಗಳು ಹೊಸದಲ್ಲ, ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.

ಆಗ 13, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 36

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ .... ಭಾಗ 35 ಓದಲು ಇಲ್ಲಿ ಕ್ಲಿಕ್ಕಿಸಿ


“ಏನ್ರೀ ಕೀರ್ತನ, ನೀವೂ ನನ್ನ ಜಾತೀನೇ” ಮನೆಯ ಹೊರಗಡೆ ಮುಖ ತೊಳೆಯುತ್ತ ನಿಂತ ಕೀರ್ತನಾಳ ಬಳಿ ಬಂದು ಕೇಳಿದ ಅರುಣ್.

“ನನ್ನ ಜಾತಿ ಯಾವುದು ಅಂತ ನಿಮಗ್ಯಾವಾಗ ತಿಳಿಸಿದೆ”

“ಅಯ್ಯಯ್ಯೋ ಜಾತಿ ಅಂದ್ರೆ ಹುಟ್ಟಿನಿಂದ ಬಂದಿದ್ದಲ್ಲ. ನಾವು ಸೇರಿದ ವೃತ್ತಿಯಿಂದ ಬಂದಿದ್ದು”

ಆಗ 7, 2014

ಓದುವಭ್ಯಾಸ ಹಚ್ಚಿಸಿದ 'ಪ್ರಾಣ್' ಇನ್ನಿಲ್ಲ.

ಒಂದು ಹಂತದ ಓದುವ ಮಟ್ಟ ಮುಟ್ಟಿದ ಮೇಲೆ ನಾವು ಲಿಯೋ ಟಾಲ್ಸ್ಟಾಯ್, ಕುವೆಂಪು, ತೇಜಸ್ವಿ, ಕಾರಂತ, ಕಂಬಾರ, ಭೈರಪ್ಪ, ಶೇಕ್ಸ್ಪಿಯರ್ ಅಂತೆಲ್ಲ ಗಂಭೀರ ಚರ್ಚೆಯನ್ನು ಮಾಡುವವರಂತೆ ನಟಿಸುತ್ತೀವಿ. ನಿಜಕ್ಕೂ ಈ ಮೇಲಿನ ಮತ್ತು ಇನ್ನೂ ಅನೇಕ ಮೇರು ಲೇಖಕರ ಪುಸ್ತಕಗಳನ್ನು ಮೊದಲು ಓದಲಾರಂಭಿಸಿಬಿಟ್ಟಿದ್ದರೆ ಖಂಡಿತವಾಗಿ ಮತ್ತೆ ಜೀವನದಲ್ಲಿ ಪುಸ್ತಕವನ್ನು ಮುಟ್ಟುತ್ತಿರಲಿಲ್ಲ! ಏನ್ ತಲೆ ತಿಂತಾರಪ್ಪ ಇವರೆಲ್ಲ ಎಂಬ ಭಾವದಿಂದ!

ಆಗ 6, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 35

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 34 ಓದಲು ಇಲ್ಲಿ ಕ್ಲಿಕ್ಕಿಸಿ


“ನಿಮ್ಮ ಹೆಸರು ಏನಾದ್ರೆ ನನಗೇನು? ನನ್ನಿಂದ ನಿಮಗೇನಾಗಬೇಕು?”
“ನಮ್ಮಿಬ್ಬರನ್ನೂ ನಕ್ಸಲ್ ಸಂಘಟನೆಗೆ ಸೇರಿಸಲು ನೀವು ಸಹಾಯ ಮಾಡಬೇಕು” ಕೀರ್ತನಾ ಕೂಡ ಮೇಲೆದ್ದು ಕೇಳಿದಳು.
“ನನಗೂ ನಕ್ಸಲ್ ಸಂಘಟನೆಗೂ ಏನು ಸಂಬಂಧ? ನಿಮಗ್ಯಾರು ಹೇಳಿದ್ದು ನನಗೆ ನಕ್ಸಲರ ಜೊತೆಗೆ ನಂಟುಂಟೆಂದು. ನಕ್ಸಲರ ಬಗ್ಗೆ ಮಾತನಾಡ್ತ ಇದ್ದೀವೆಂದೇ ಪೋಲೀಸರು ಬಂಧಿಸೋ ಸಾಧ್ಯತೆಗಳಿವೆ. ಮೊದಲು ಇಲ್ಲಿಂದ ಹೊರಡಿ” ‘ನಾನು ನಕ್ಸಲರ ಬೆಂಬಲಿಗ, ಅವರಿಗೆ ದಿನಸಿ ಕಳುಹಿಸ್ತೀನಿ ಅನ್ನೋದು ನನ್ನ ಮನೆಯವರಿಗೇ ಗೊತ್ತಿಲ್ಲ. ದೂರದ ಮೈಸೂರಿನವರಿಗೆ ಹೇಗೆ ತಿಳಿಯಿತು’ ಎಂದು ಮತ್ತಷ್ಟು ಗಾಬರಿಗೊಳ್ಳುತ್ತಾ ಹೇಳಿದ.

ಆಗ 5, 2014

ಯಾವ ಮಹಾಭಾರತವನ್ನು ಪಠ್ಯವಾಗಿಸಬೇಕು?



ಡಾ ಅಶೋಕ್ ಕೆ ಆರ್
ಸುಪ್ರೀಂಕೋರ್ಟಿನ ನ್ಯಾಯಧೀಶರೊಬ್ಬರು ‘ನಾನೇನಾದರೂ ಸರ್ವಾಧಿಕಾರಿಯಾಗಿದ್ದರೆ ಗೀತೆ ಮತ್ತು ಮಹಾಭಾರತವನ್ನು ಒಂದನೇ ತರಗತಿಯಲ್ಲಿದ್ದಾಗಲೇ ಪಠ್ಯವಾಗಿಸುತ್ತಿದ್ದೆ’ ಎಂಬ ಹಿತನುಡಿದಿದ್ದಾರೆ. ಒಂದು ದೇಶದ, ಹಿಂದು ಎಂಬ ಧರ್ಮದ ಪೌರಾಣಿಕ ಕೃತಿಯೆಂದೆನ್ನಿಸಿಕೊಂಡ ಮಹಾಭಾರತ, ಅದರಲ್ಲಿನ ಪಾತ್ರವರ್ಗದ ಪರಿಚಯ ಮುಂದಿನ ಪೀಳಿಗೆಗೂ ಇರಬೇಕೆಂಬುದು ಸ್ತುತ್ಯಾರ್ಹ. ಗೀತೆ ಮತ್ತು ಭಾರತವಷ್ಟೇ ಯಾಕೆ ಒಳ್ಳೆಯ ಅಂಶಗಳು ಯಾವ ಗೃಂಥದಲ್ಲೇ ಇದ್ದರೂ ಅದನ್ನು ಮಕ್ಕಳು ಓದುವಂತೆ ಪ್ರೇರೇಪಿಸುವುದು ಸರಿಯಾದ ಕ್ರಮವೇ. ಆದರೆ ಮಕ್ಕಳು ತಿಳಿಯುವಂತೆ ಮಾಡುವುದಕ್ಕೂ, ಪಠ್ಯವಾಗಿಸುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅರಿಯಲು ಸನ್ಮಾನ್ಯ ನ್ಯಾಯಾಧೀಶರಿಗೂ ಸಾಧ್ಯವಾಗಿಲ್ಲ. ಯಾವ ಮಹಾಭಾರತವನ್ನು ಪಠ್ಯವಾಗಿಸಬಹುದು? ಮತ್ತದನ್ನು ನಿರ್ಧರಿಸುವವರು ಯಾರು?

Khushwant Singh

quotes
Khushwant Singh's Delhi