ಜನ 29, 2015

ಮಹಾತ್ಮನ ಒಪ್ಪಿಗೆಗೆ ಕಾಯುತ್ತಾ….

waiting for mahatma
ಆರ್.ಕೆ.ನಾರಾಯಣರ ಪುಸ್ತಕಗಳು ಸರಳತೆಗೆ ಮತ್ತೊಂದು ಹೆಸರು. ಪಾತ್ರ ಪರಿಚಯ, ಭಾಷೆ, ಕಥಾ ಹಂದರದಲ್ಲಾಗಲೀ ಕಠಿಣತೆಯ ಮಾರ್ಗವನ್ನು ತೊರೆದ ಲೇಖನಿ ಅವರದು. ದೈನಂದಿನ ಜೀವನದ ಸರ್ವೇ ಸಾಧಾರಣ ಎಂಬಂತೆ ತೋರುವ, ಬಹಳಷ್ಟು ಲೇಖಕರಿಂದ ತಿರಸ್ಕೃತವಾಗುವ ವಸ್ತುಗಳಿಗೆ ಸುಂದರದೊಂದು ಚೌಕಟ್ಟು ನಿರ್ಮಿಸುವ ಕಥೆಗಾರ ಆರ್.ಕೆ. ನಾರಾಯಣ್. ತೀರ ಇತ್ತೀಚೆಗೂ ಆರ್.ಕೆ. ನಾರಾಯಣ್ ಸೃಷ್ಟಿಸಿದ ‘ಮಾಲ್ಗುಡಿ’ ಎಂಬ ಊರು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂದು ಹಿರಿಯರೊಬ್ಬರು ನನ್ನೊಂದಿಗೆ ವಾದಿಸಿದ್ದರು! ಅವರ ಕಥೆಗಳ ಶಕ್ತಿ ಮತ್ತು ಪ್ರಭಾವವದು. ನಾರಾಯಣರ ‘Waiting for Mahatma’ ಕಾದಂಬರಿ ಕೂಡ ಇಂತದ್ದೇ ಒಂದು ಸರಳ ಕಥೆಯ ಗುಚ್ಛ. ಸ್ವಾತಂತ್ರ್ಯದ ಸುತ್ತಮುತ್ತ ನಡೆಯುವ ಕಥೆಯೊಳಗಿರುವ ಒಂದು ಸುಂದರ ಪ್ರೇಮ ಪ್ರಸಂಗಕ್ಕೆ ಮಹಾತ್ಮ ಗಾಂಧೀಜಿಯೇ ಹೀರೋ, ಗಾಂಧಿಯೇ ವಿಲನ್!