ಆಗ 23, 2013
ಆಗ 21, 2013
What actually COULD BE the duty of a DOCTOR??
Amaresh
Arali
No creature in the world is immortal. Everything that
exists today will ruin someday. Life here seems to be like a bubble on water,
which has got no permanent existence. When we know this open secret of nature,
then the question that strikes my mind is- What actually is the role of A
DOCTOR then...?
ಆಗ 19, 2013
ಬಲವಂತದ ಚುನಾವಣೆಯಲ್ಲಿ “ಪ್ರತಿಷ್ಠೆ” ಅಭ್ಯರ್ಥಿ!
ಡಾ. ಅಶೋಕ್. ಕೆ. ಆರ್
ರಾಷ್ಟ್ರಾದ್ಯಂತ ನಡೆಯಬೇಕಿರುವ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಒಂದು
ವರುಷ ಬಾಕಿಯಿರುವಾಗ ಕರ್ನಾಟಕದ ಜನತೆಗೆ ಎರಡು ಲೋಕಸಭಾ ಚುನಾವಣೆಯ ಭಾರವನ್ನು ಹೊರುವ ಸುಯೋಗ! ಲೋಕಸಭೆಗೆ
ಆಯ್ಕೆಯಾದವರು ತಮ್ಮ ಸಂಸತ್ ಅವಧಿಯ ಮಧ್ಯದಲ್ಲೇ ವಿಧಾನಸಭೆಗೆ ಸ್ಪರ್ಧಿಸಲು ಸಾಂವಿಧಾನಿಕವಾಗಿ ಯಾವ
ಅಡ್ಡಿ ಆತಂಕಗಳೂ ಇಲ್ಲವಾಗಿರುವುದರಿಂದ ರಾಜಕೀಯ ನೇತಾರರ ಅಸರ್ಮಪಕ ನಿರ್ಧಾರಗಳಿಂದ ಬೆಂಗಳೂರು ಗ್ರಾಮಾಂತರ
ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಜನರಿಗೆ ಕೇವಲ ಎಂಟತ್ತು ತಿಂಗಳುಗಳಿಗಾಗಿ ಸಂಸತ್ ಸದಸ್ಯರೊಬ್ಬರನ್ನು
ಆರಿಸುವ ಅನಿವಾರ್ಯ ಕರ್ಮ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದ ಜೆ.ಡಿ.ಎಸ್
ನ ಮಾನ್ಯ ಕುಮಾರಸ್ವಾಮಿಯವರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಅದೇ
ಜೆ.ಡಿ.ಎಸ್ ನ ಮಾನ್ಯ ಚೆಲುವರಾಯಸ್ವಾಮಿಯವರು ರಾಜ್ಯಕ್ಕೆ “ಸೇವೆ” ಸಲ್ಲಿಸುವ ಉದ್ದೇಶದಿಂದ ಸಂಸತ್
ಸದಸ್ಯತ್ವವನ್ನು ತ್ಯಜಿಸಿ ವಿಧಾನಸಭೆಗೆ ನಿಂತು ಗೆಲುವು ಕಂಡರು. ಅತಂತ್ರ ವಿಧಾನಸಭೆ ಸೃಷ್ಟಿಯಾಗಿ
ಜೆ.ಡಿ.ಎಸ್ ನಿರ್ಣಾಯಕಾರಿ ಪಾತ್ರ ವಹಿಸುತ್ತದೆ ಮತ್ತು ತಾವು ಅಧಿಕಾರದ ಕುರ್ಚಿ ಏರಬಹುದು ಎಂಬುದಿವರ
ಉದ್ದೇಶವಾಗಿತ್ತೇ ಹೊರತು “ರಾಜ್ಯ ಸೇವೆ” ಎಂಬುದು ನೆಪವಷ್ಟೇ. ಅದೃಷ್ಟವಶಾತ್ ರಾಜ್ಯದಲ್ಲಿ ಅತಂತ್ರತೆ
ಸೃಷ್ಟಿಯಾಗದೆ ಏಕಪಕ್ಷ ಬಹುಮತ ಪಡೆದ ಕಾರಣದಿಂದ ಜೆ.ಡಿ.ಎಸ್ ವಿರೋಧ ಪಕ್ಷದ ಸ್ಥಾನಕ್ಕಷ್ಟೇ ಸೀಮಿತವಾಗಬೇಕಾಯಿತು.
ಲೋಕಸಭಾ ಚುನಾವಣೆಗೆ ಉಳಿರಿರುವುದು ಕೆಲವೇ ತಿಂಗಳು ಮರುಚುನಾವಣೆ ನಡೆಯಲಾರದು ಎಂದು ನಂಬಿಕೊಂಡಿದ್ದ
ಜೆ.ಡಿ.ಎಸ್ ಗೆ ಮರುಚುನಾವಣೆ ಘೋಷಿತವಾಗಿರುವುದು ಬಿಸಿ ತುಪ್ಪದಂತೆ ಪರಿಣಮಿಸಿದೆ. ಆರು ತಿಂಗಳ ಅವಧಿಯ
ಒಳಗೇ ಲೋಕಸಭಾ ಚುನಾವಣೆ ನಡೆಯುವಂತಿದ್ದರೆ ಮರುಚುನಾವಣೆಯ ಅವಶ್ಯಕತೆಯಿಲ್ಲ ಆದರೆ ಮುಂದಿನ ಲೋಕಸಭಾ
ಚುನಾವಣೆ ಎಂಟು ತಿಂಗಳುಗಳ ನಂತರವಿರುವುದರಿಂದ ಅಲ್ಲಿಯ ತನಕ ಕ್ಷೇತ್ರವನ್ನು ಅನಾಥವಾಗಿ ಬಿಡಬಾರದ ಕಾರಣಕ್ಕೆ
ಮರುಚುನಾವಣೆಯನ್ನು ಘೋಷಿಸಿದೆ ಚುನಾವಣಾ ಆಯೋಗ.
ಆಗ 15, 2013
ಅಮರ ಸುಳ್ಯದ ಕ್ರಾಂತಿ- ತುಳುನಾಡಿನ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟ
![]() |
ಸ್ವತಂತ್ರ ಧ್ವಜ ಹಾರಾಡಿದ ಬೆಳ್ಳಾರೆಯ ಕೋಟೆ |
1857ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಯಾರೂ ಪ್ರಶ್ನಿಸಿಲ್ಲ ಎಂದರ್ಥವಲ್ಲ. ಬ್ರಿಟಿಷ್ ಗವರ್ನರ್ ಜನರಲ್ ಡಾಲ್ಹೌ್ಸಿ ಬಳಕೆಗೆ ತಂದ ನಿಯಮಾವಳಿಯ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ದತ್ತು ತೆಗೆದುಕೊಳ್ಳುವುದಕ್ಕೆ ಮೊದಲೇ ರಾಜನು ಸತ್ತರೆ ಅಥವಾ ಆತನಿಗೆ ದತ್ತು ತೆಗೆದುಕೊಳ್ಳಲು ಅನುಮತಿ ಸಿಗದೆ ಇದ್ದರೆ ಆ ರಾಜನ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು. ಡಾಲ್ಹೌ ಷಿ ತಂದ ನಿಯಮದಿಂದಾಗಿ ಕೊಡಗು ರಾಜ್ಯ ಕೂಡ ಬ್ರಿಟಿಷರ ಪಾಲಾಗಬೇಕಾಗುತ್ತದೆ.
ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನು ಆಡಳಿತ ನಡೆಸುತ್ತಿದ್ದಾಗ ಸಮಯವನ್ನು ಹೊಂಚುಹಾಕುತ್ತಿದ್ದ ಬ್ರಿಟಿಷರು ಚಿಕ್ಕವೀರ ರಾಜೇಂದ್ರವನ್ನು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದ್ದರಿಂದ ಕೊಡಗು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಬೆಳ್ಳಾರೆ, ಸುಳ್ಯ ಸೇರಿದಂತೆ ಪಂಜ ಸೀಮೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಳದ ಜನತೆಗೆ ಇಷ್ಟದ ವಿಚಾರವಾಗಿರಲಿಲ್ಲಿ.
ಆಗ 14, 2013
ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ
‘ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ
ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ
ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ.
ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ
ಹೊಡೆದಾಡಿ........’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ ...... ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ
ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ
ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’
ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ
ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ?
ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!
ಮುಂದಿನ ವರುಷದ ಲೋಕಸಭಾ
ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿಯೇ ನಡೆದಿದೆ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ
ನರೇಂದ್ರ ಮೋದಿಯೆಂಬುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ
ಪ್ರಧಾನಿ ಅಭ್ಯರ್ಥಿಯಾ? ಖಚಿತವಾಗಿ ಹೇಳುವುದು ಕಷ್ಟ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನರೇಂದ್ರ
ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ಬಿಜೆಪಿ ಸಾಮಾಜಿಕ ತಾಣದ
ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆಯಿಂದ ಅಂತರ್ಜಾಲದಲ್ಲಿ ನರೇಂದ್ರ ಮೋದಿಯ ಬೆಂಬಲಿಗರೇ
ಹೆಚ್ಚಿರುವುದು ನಿಜ. ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ
ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ
ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!
ಆಗ 8, 2013
ಆಗ 3, 2013
ಮಾಧ್ಯಮಗಳ ಆದ್ಯತೆ ಏನು?
ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ನಟ ದರ್ಶನ್. ಆಸ್ಪತ್ರೆಯ ವೈದ್ಯರ ಪ್ರಕಾರ ಕುತ್ತಿಗೆಯ ಬಳಿ ಪೆಟ್ಟಾಗಿದೆ, ಅಪಾಯವೇನೂ ಇಲ್ಲ.
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು?
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು?
ಜುಲೈ 28, 2013
ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ
ವೈಯಕ್ತಿಕ ವಿಷಯದಿಂದ
ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ
ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ
ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ
ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು
ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ
ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ
ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ
ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ
ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು.
ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು.
ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ
ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು
ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ
ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು
ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ
ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ
ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ
ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು
ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ!
ಜುಲೈ 27, 2013
ಪ್ರಣಾಳಿಕೆ ರೂಪದ ಜನಪ್ರಿಯ ಬಜೆಟ್ಟು
![]() |
ವಿಧಾನಸಭೆ
ಚುನಾವಣೆ ನಡೆದು 2013ರಲ್ಲಿ ಎರಡು ಸರಕಾರವನ್ನು ಕರ್ನಾಟಕ ಕಂಡ ಕಾರಣ ಹೊಸ ಸರಕಾರದ ಹೊಸ ಬಜೆಟ್ ಮಂಡನೆಯಾಗಿದೆ. ಇತ್ತಿಚಿನ ವರುಷಗಳಲ್ಲಿ
ಬಜೆಟ್ ಎಂಬುದು ಕೂಡ ಚುನಾವಣಾ ಪೂರ್ವದ ಪ್ರಣಾಳಿಕೆಗಳ ರೂಪದಲ್ಲೇ ಹೊರಬರುತ್ತಿರುವುದಕ್ಕೆ ರಾಜಕಾರಣಿಗಳ
ದೂರದರ್ಶತ್ವದ ಕೊರತೆ, ಹತ್ತಿರದ ಚುನಾವಣೆಗಳ ಮೇಲಿನ ದೃಷ್ಟಿ ಕಾರಣ. ಹಾಗಾಗಿ ದೂರಗಾಮಿಯಾಗಿ ಸಮಾಜದ
ದೇಶದ ಏಳಿಗೆಯ ಮೇಲೆ ಪ್ರಭಾವವುಂಟುಮಾಡುವ ಯೋಜನೆಗಳಿಗಿಂತ ತತ್ ಕ್ಷಣದಲ್ಲಿ ಜನರಿಗೆ ನೇರವಾಗಿ ಹಣ ತಲುಪಿಸುವ
ಹೆಚ್ಚೆಚ್ಚು ಜನಪ್ರಿಯತೆ ತಂದುಕೊಡುವ ಯೋಜನೆಗಳ ಮೇಲೆಯೇ ಹೆಚ್ಚು ಪ್ರೀತಿ. ಹಿಂದಿನ ಬಜೆಟ್ಟಿಗಿಂತ
ಹೆಚ್ಚು ವೆಚ್ಚದ ಬಜೆಟ್ ಮಂಡಿಸಬೇಕು ಎಂಬ ಆತುರವೂ ಇತ್ತೀಚಿನ ವರುಷಗಳಲ್ಲಿ ಕಾಣುತ್ತಿದೆ. ಹಿಂದಿನ
ಬಜೆಟ್ಟಿನಲ್ಲಿ ಮೀಸಲಿರಿಸಲಾದ ಹಣದ ಎಷ್ಟು ಅಂಶ ವಿನಿಯೋಗವಾಗಿದೆ ಎಂಬುದನ್ನು ಗಮನಿಸಿದರೆ ಬಹುತೇಕ
ಕ್ಷೇತ್ರಗಳಲ್ಲಿ ನಿರಾಶಾದಾಯಕ ವಾತಾವರಣವೇ ಇದೆ. ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್
1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 1,21,611 ಕೋಟಿಯ
ಬಜೆಟ್ ಮಂಡಿಸಿದ್ದಾರೆ. ಅಲ್ಲಿಗೆ ಕಾಗದದ ಮೇಲಿನ ಹಣದ ರೂಪದಲ್ಲಂತೂ ಹಿಂದಿನ ಸರಕಾರದ “ಸಾಧನೆ”ಯನ್ನು
ಮುರಿದಿದ್ದಾರೆ! ಆದರೆ ಬಜೆಟ್ಟಿನ ಆಶಯಗಳು ಆಶೋತ್ತರಗಳು ಹಿಂದಿನ ಸರಕಾರಕ್ಕಿಂತ ಉತ್ತಮವಾಗಿದೆಯಾ??