ಆಗ 8, 2013

ಇದ್ದರು ಮಹಾನುಬಾವುಲು .....

ಗುಜರಾತಿನ ಜನ ಅಪೌಷ್ಟಿಕತೆಯಿಂದ ನರಳುತ್ತಿಲ್ಲ ಅವರು "diet conscious" ಆಗಿದ್ದಾರೆ ಆಷ್ಟೇ  - ನರೇಂದ್ರ ಮೋದಿ . 
ಬಡತನ ಎಂಬುದು ಒಂದು ಮಾನಸಿಕ ಸ್ಥಿತಿ ಅಷ್ಟೇ - ರಾಹುಲ್ ಗಾಂಧಿ .

ಆಗ 3, 2013

ಮಾಧ್ಯಮಗಳ ಆದ್ಯತೆ ಏನು?

ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ನಟ ದರ್ಶನ್. ಆಸ್ಪತ್ರೆಯ ವೈದ್ಯರ ಪ್ರಕಾರ ಕುತ್ತಿಗೆಯ ಬಳಿ ಪೆಟ್ಟಾಗಿದೆ, ಅಪಾಯವೇನೂ ಇಲ್ಲ.
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು? 

ಜುಲೈ 28, 2013

ಕ್ಯಾಮೆರ ಕಣ್ಣು !!

ಅತಿ ಶೀಘ್ರದಲ್ಲಿ

ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ

ವೈಯಕ್ತಿಕ ವಿಷಯದಿಂದ ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ!

ಜುಲೈ 27, 2013

ಪ್ರಣಾಳಿಕೆ ರೂಪದ ಜನಪ್ರಿಯ ಬಜೆಟ್ಟು



budget 2013-14

ಡಾ ಅಶೋಕ್ ಕೆ ಆರ್
ವಿಧಾನಸಭೆ ಚುನಾವಣೆ ನಡೆದು 2013ರಲ್ಲಿ ಎರಡು ಸರಕಾರವನ್ನು ಕರ್ನಾಟಕ ಕಂಡ ಕಾರಣ ಹೊಸ  ಸರಕಾರದ ಹೊಸ ಬಜೆಟ್ ಮಂಡನೆಯಾಗಿದೆ. ಇತ್ತಿಚಿನ ವರುಷಗಳಲ್ಲಿ ಬಜೆಟ್ ಎಂಬುದು ಕೂಡ ಚುನಾವಣಾ ಪೂರ್ವದ ಪ್ರಣಾಳಿಕೆಗಳ ರೂಪದಲ್ಲೇ ಹೊರಬರುತ್ತಿರುವುದಕ್ಕೆ ರಾಜಕಾರಣಿಗಳ ದೂರದರ್ಶತ್ವದ ಕೊರತೆ, ಹತ್ತಿರದ ಚುನಾವಣೆಗಳ ಮೇಲಿನ ದೃಷ್ಟಿ ಕಾರಣ. ಹಾಗಾಗಿ ದೂರಗಾಮಿಯಾಗಿ ಸಮಾಜದ ದೇಶದ ಏಳಿಗೆಯ ಮೇಲೆ ಪ್ರಭಾವವುಂಟುಮಾಡುವ ಯೋಜನೆಗಳಿಗಿಂತ ತತ್ ಕ್ಷಣದಲ್ಲಿ ಜನರಿಗೆ ನೇರವಾಗಿ ಹಣ ತಲುಪಿಸುವ ಹೆಚ್ಚೆಚ್ಚು ಜನಪ್ರಿಯತೆ ತಂದುಕೊಡುವ ಯೋಜನೆಗಳ ಮೇಲೆಯೇ ಹೆಚ್ಚು ಪ್ರೀತಿ. ಹಿಂದಿನ ಬಜೆಟ್ಟಿಗಿಂತ ಹೆಚ್ಚು ವೆಚ್ಚದ ಬಜೆಟ್ ಮಂಡಿಸಬೇಕು ಎಂಬ ಆತುರವೂ ಇತ್ತೀಚಿನ ವರುಷಗಳಲ್ಲಿ ಕಾಣುತ್ತಿದೆ. ಹಿಂದಿನ ಬಜೆಟ್ಟಿನಲ್ಲಿ ಮೀಸಲಿರಿಸಲಾದ ಹಣದ ಎಷ್ಟು ಅಂಶ ವಿನಿಯೋಗವಾಗಿದೆ ಎಂಬುದನ್ನು ಗಮನಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ನಿರಾಶಾದಾಯಕ ವಾತಾವರಣವೇ ಇದೆ. ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ 1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರೆ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 1,21,611 ಕೋಟಿಯ ಬಜೆಟ್ ಮಂಡಿಸಿದ್ದಾರೆ. ಅಲ್ಲಿಗೆ ಕಾಗದದ ಮೇಲಿನ ಹಣದ ರೂಪದಲ್ಲಂತೂ ಹಿಂದಿನ ಸರಕಾರದ “ಸಾಧನೆ”ಯನ್ನು ಮುರಿದಿದ್ದಾರೆ! ಆದರೆ ಬಜೆಟ್ಟಿನ ಆಶಯಗಳು ಆಶೋತ್ತರಗಳು ಹಿಂದಿನ ಸರಕಾರಕ್ಕಿಂತ ಉತ್ತಮವಾಗಿದೆಯಾ??

ಜುಲೈ 16, 2013

ಮನುಜ ಲಾಲಸೆಯ ಮೇಘಸ್ಪೋಟ!





ಉತ್ತರಾಖಂಡ ತತ್ತರಿಸಿದೆ. ಮೇಘಸ್ಪೋಟ ಸೃಷ್ಟಿಸಿದ ಮಹಾಪ್ರಳಯಕ್ಕೆ, ಪ್ರಳಯ ಸೃಷ್ಟಿಸಿದ ಬೀಭತ್ಸಕಾರಿ ವಾತಾವರಣಕ್ಕೆ. ಕಳೆದುಹೋಗಿರುವ ಜೀವಗಳೆಷ್ಟೋ, ಕಣ್ಮರೆಯಾದವರೆಷ್ಟೋ, ನೆರವಿಗೆ ಕಾಯುತ್ತ ದುರ್ಗಮ ಸ್ಥಳಗಳಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ದೈವ ಚಿಂತನೆಯಲ್ಲಿ ಮುಳುಗಿರುವವರೆಷ್ಟೋ?! ಸಿಡಿದೆದ್ದ ನದಿಗಳ ಆರ್ಭಟಕ್ಕೆ ಸತ್ತವರ ನಿಖರ ಸಂಖೈ ಇನ್ನೂ ತಿಳಿಯಲಾಗಿಲ್ಲ. ಕೇಂದ್ರ ಸರ್ಕಾರ ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆ ಎಂದರೆ ಉತ್ತರಾಖಂಡದ ರಾಜ್ಯಪಾಲರ ಪ್ರಕಾರ ಸತ್ತವರ ಸಂಖೈ ಹತ್ತು ಸಾವಿರಕ್ಕೂ ಹೆಚ್ಚು. ಸರಿಯಾದ ಅಂಕಿಅಂಶ ಕೊನೆಗೂ ಗೊತ್ತೇ ಆಗುವುದಿಲ್ಲವೋ ಏನೋ? 

ಜುಲೈ 9, 2013

ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆ ದಿನೇಶ್ ಅಮೀನ್ ಮಟ್ಟು.



ಪತ್ರಿಕೋದ್ಯಮ ಮತ್ತು ಪತ್ರಕರ್ತ ತನ್ನ ನೈತಿಕತೆಯನ್ನು ಕಳೆದುಕೊಳ್ಳುತ್ತಾ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವುದನ್ನೇ ಮರೆಯುತ್ತಿರುವ ವಿಷಮ ದಿನಗಳಿವು. ಪತ್ರಿಕೆ ಪ್ರಕಟಿಸುವ ವರದಿಗಳೇ ಹೋರಾಟ – ಚಳುವಳಿಗಳಿಗೆ ಮುನ್ನುಡಿಯಾಗುತ್ತಿದ್ದ ದಿನಗಳು ಶರವೇಗದಲ್ಲಿ ಮಾಯವಾಗುತ್ತಿದೆ. ದೃಶ್ಯ ಮಾಧ್ಯಮ ಮಾಹಿನಿಗಳ ಭರಾಟೆ ಹೆಚ್ಚುತ್ತಿದ್ದ ಹಾಗೆ ಪತ್ರಿಕೋದ್ಯಮದ ಬೆಲೆಯೂ ಇಳಿಯುತ್ತಿರುವುದು ವಿಪರ್ಯಾಸವೇ ಸರಿ. ಹೀಗೆಂದ ಮಾತ್ರಕ್ಕೆ ಪತ್ರಿಕೋದ್ಯಮ ಮುಂಚಿನ ದಿನಗಳಲ್ಲಿ ಸಂಪೂರ್ಣ ಪರಿಶುದ್ಧವಾಗಿತ್ತಾ? ಇದ್ದಿರಲಾರದು. ಆದರೆ ಪತ್ರಕರ್ತರ ಭ್ರಷ್ಟಾಚಾರ, ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗನುಗುಣವಾಗಿ ವರದಿಗಳನ್ನೇ ತಿರುಚಿಬಿಡುವ ದಾರ್ಷ್ಟ್ಯತನ ಹೆಚ್ಚುತ್ತಿರುವುದು ಒಟ್ಟಾರೆಯಾಗಿ ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳಿಗನುಗುಣವಾಗಿಯೇ ಇದೆ. ಸುದ್ದಿಯ ಸತ್ಯಾಸತ್ಯತೆ, ಆ ಸುದ್ದಿಯಿಂದ ಸಮಾಜದ ಮನಸ್ಸಿನ ಮೇಲುಂಟಾಗುವ ಪರಿಣಾಮಗಳಿಗಿಂತ ಹೆಚ್ಚಾಗಿ ಆ ಸುದ್ದಿ ಎಷ್ಟರ ಮಟ್ಟಿಗೆ ಬಿಕರಿಯಾಗಬಹುದು? ಎಷ್ಟರ ಮಟ್ಟಿಗೆ ನಮ್ಮ ಆದಾಯ ಹೆಚ್ಚಿಸಬಲ್ಲದು? ಎಂಬ ಪ್ರಶ್ನೆಗಳೇ ಮುಖ್ಯವಾಗಿ ಹೋಗಿದೆ. ಪತ್ರಕರ್ತ ಗೆಳೆಯನೊಬ್ಬ ಹೇಳಿದಂತೆ ಇಂದಿನ ಮಾಧ್ಯಮಗಳು entertainment ಮತ್ತು informationನಿಂದ ಉದ್ಭವವಾದ infotainment! ಪತ್ರಿಕೋದ್ಯಮದ ಬಗ್ಗೆ ಇಷ್ಟೆಲ್ಲ ಸಿನಿಕತೆಗಳಿದ್ದಾಗ್ಯೂ ಇಂದಿಗೂ ಪತ್ರಿಕೆಯ ಸುದ್ದಿ ವಿಶ್ಲೇಷಣೆಯನ್ನು ಗೌರವದಿಂದ ನೋಡುವಂತೆ ಮಾಡುವಲ್ಲಿ ದಿನೇಶ್ ಅಮೀನ್ ಮಟ್ಟುರಂಥ ಪತ್ರಕರ್ತರು ಕಾರಣಕರ್ತರೆಂದರೆ ತಪ್ಪಲ್ಲ.

ಜೂನ್ 26, 2013

ಧರ್ಮದ ಮಧ್ಯೆ ಕಮರಿ ಹೋದ ಮನಸ್ಸುಗಳು

ಮೊಹಮದ್ ಇರ್ಷಾದ್
ಅದು ಸಂಜೆಯ ವೇಳೆ. ಸ್ವಲ್ಪ ಬಿಡುವಿದ್ದ ಕಾರಣಕ್ಕಾಗಿ ಸಂಗೀತ ಕೇಳುತ್ತಾ ಕುಳಿತಿದ್ದೆ. ಅಷ್ಟೊತ್ತಿಗೆ ನನ್ನ ಪೋನ್ ರಿಂಗ್ ಆಯಿತು. ನಾನು ಹಲೋ ಅಂದ ಕೂಡಲೇ ಆ ಕಡೆಯಿಂದ ಹೆಣ್ಣು ಧ್ವನಿವೊಂದು ಕೇಳಿಸಿತು. ಅದು ಆತಂಕದಿಂದ ಕೂಡಿದ ಏನೋ ನಡೆದಿದೆ ಎಂಬ ಅಸ್ಪಷ್ಟ ಧ್ವನಿಯಾಗಿತ್ತು. ಹೇಳ ಬೇಕೋ, ಬೇಡವೋ ಎಂಬವಂತ್ತಿತ್ತು ಆಕೆಯ ಮಾತು. ಯಾರು ಅಂತ ವಿಚಾರಿಸಿದಾಗ ಕರೆ ಮಾಡಿದ ಹೆಣ್ಣು ಮಗಳು ತನ್ನ ಪರಿಚಯ ಹೇಳಿದಳು. 

ಏಪ್ರಿ 25, 2013

ಗಾಂಧಿವಾದದ ನೆರಳಿನಲ್ಲಿ ಬದುಕಿನ ಕೂರ್ಮಾವತಾರ.



ಡಾ ಅಶೋಕ್, ಕೆ, ಆರ್.
ಬದುಕು ಮಗ್ಗುಲು ಬದಲಿಸಲು ವಯಸ್ಸಿನ ಹಂಗಿಲ್ಲ. ಕೆಲಸ ನಿರ್ವಹಿಸುವುದರಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ವೃತ್ತಿ ಜೀವನದ ನಿವೃತ್ತಿಯ ಅಂಚಿನಲ್ಲಿ ತನ್ನಿಡೀ ಜೀವನದ ಆಗುಹೋಗುಗಳನ್ನು ವಿಮರ್ಶಿಸಲಾರಂಭಿಸುತ್ತ ಕೆಲವೊಮ್ಮೆ ಪುಟಿಯುತ್ತ ಕೆಲವೊಮ್ಮೆ ಕುಸಿಯುತ್ತಾ ಹೊಸ ಮನುಷ್ಯನಾಗಿ ಜನ್ಮ ತಳೆಯುವ ಕಥೆಯೇ ಕೂರ್ಮಾವತಾರ. ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರ ಕಥೆಯೊಂದನ್ನು ಆಧರಿಸಿ ತೆಗೆದಿರುವ ಚಿತ್ರ ಕೂರ್ಮಾವತಾರ.

ಏಪ್ರಿ 5, 2013

ದಶಕದ ಇರಾಕ್ ಯುದ್ಧ


                                           
ಡಾ ಅಶೋಕ್ ಕೆ ಆರ್

ಮಾರ್ಚ್ 20 2013 ಯುದ್ಧವಾರಂಭಿಸಿ ದಶಕವಾಯಿತು ಮತ್ತು “ಅಧಿಕೃತ”ವಾಗಿ ಈ ಯುದ್ಧವನ್ನು ಅಂತ್ಯಗೊಳಿಸಿ ಹೆಚ್ಚು ಕಡಿಮೆ ಒಂದು ವರುಷವಾಗುತ್ತ ಬಂದಿದೆ. ಯುದ್ಧದಲ್ಲಿ ಗೆಲುವು ಕಂಡಿದ್ಯಾರು? ಸೋತವರ್ಯಾರು? ಯುದ್ಧವಾರಂಭಿಸಲು ಕೊಟ್ಟ ನೆಪಗಳಲ್ಲಿ ಸತ್ವವಿತ್ತೇ? ದೇಶವೊಂದರ ಮೇಲೆ ಯುದ್ಧ ಸಾರುವ ಮುನ್ನ ಜಗತ್ತಿನೆದುರಿಗಿಟ್ಟ ಆರೋಪಗಳಲ್ಲಿ ಒಂದಾದರೂ ಸತ್ಯವಿತ್ತೇ? ಅಧಿಕಾರದ ಕೇಂದ್ರಬಿಂದುವಿನಲ್ಲಿರುವ ವ್ಯಕ್ತಿಯನ್ನು ಬದಲಿಸಿದಕ್ಕಾಗಿ ಯುದ್ಧ ಗೆದ್ದ ಭ್ರಮೆಯಲ್ಲಿರುವವರನ್ನು ಅಭಿನಂದಿಸಬೇಕಾ ಅಥವಾ ಜನಸಾಮಾನ್ಯರ ಜೀವನವನ್ನು ಮತ್ತಷ್ಟು ದುರ್ಬರಗೊಳಿಸಿದಕ್ಕಾಗಿ ಈ ಯುದ್ಧ ನಿರ್ಮಾಪಕ ನಿರ್ವಾಹಕರ ಮೇಲೆ ದೋಷಾರೋಪ ಮಾಡಬೇಕಾ?