ಜುಲೈ 16, 2013

ಮನುಜ ಲಾಲಸೆಯ ಮೇಘಸ್ಪೋಟ!





ಉತ್ತರಾಖಂಡ ತತ್ತರಿಸಿದೆ. ಮೇಘಸ್ಪೋಟ ಸೃಷ್ಟಿಸಿದ ಮಹಾಪ್ರಳಯಕ್ಕೆ, ಪ್ರಳಯ ಸೃಷ್ಟಿಸಿದ ಬೀಭತ್ಸಕಾರಿ ವಾತಾವರಣಕ್ಕೆ. ಕಳೆದುಹೋಗಿರುವ ಜೀವಗಳೆಷ್ಟೋ, ಕಣ್ಮರೆಯಾದವರೆಷ್ಟೋ, ನೆರವಿಗೆ ಕಾಯುತ್ತ ದುರ್ಗಮ ಸ್ಥಳಗಳಲ್ಲಿ ಜೀವವನ್ನು ಕೈಯಲ್ಲಿಡಿದುಕೊಂಡು ದೈವ ಚಿಂತನೆಯಲ್ಲಿ ಮುಳುಗಿರುವವರೆಷ್ಟೋ?! ಸಿಡಿದೆದ್ದ ನದಿಗಳ ಆರ್ಭಟಕ್ಕೆ ಸತ್ತವರ ನಿಖರ ಸಂಖೈ ಇನ್ನೂ ತಿಳಿಯಲಾಗಿಲ್ಲ. ಕೇಂದ್ರ ಸರ್ಕಾರ ಸಾವಿರದಷ್ಟು ಜನರು ಸಾವನ್ನಪ್ಪಿದ್ದಾರೆ ಎಂದರೆ ಉತ್ತರಾಖಂಡದ ರಾಜ್ಯಪಾಲರ ಪ್ರಕಾರ ಸತ್ತವರ ಸಂಖೈ ಹತ್ತು ಸಾವಿರಕ್ಕೂ ಹೆಚ್ಚು. ಸರಿಯಾದ ಅಂಕಿಅಂಶ ಕೊನೆಗೂ ಗೊತ್ತೇ ಆಗುವುದಿಲ್ಲವೋ ಏನೋ?