ಆಗ 11, 2015

ಲಜ್ಜೆಗೆಟ್ಟ ಕಾಂಗ್ರೆಸ್ಸಿನಿಂದ ಪಂಚ ಭಾಷಾ ಪ್ರಣಾಳಿಕೆ.

Dr Ashok K R
ಬಿಬಿಎಂಪಿ ಚುನಾವಣೆಯನ್ನು ಮುಂದಕ್ಕಾಕುವ ಸರಕಾರದ ಎಲ್ಲಾ ಪ್ರಯತ್ನಗಳನ್ನೂ ನ್ಯಾಯಾಲಯಗಳು ತಳ್ಳಿಹಾಕಿದ ಪರಿಣಾಮವಾಗಿ ಈ ತಿಂಗಳಾಂತ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ಪಕ್ಷಗಳ ರಾಜಕೀಯ ಚಟುವಟಿಕೆಯೂ ಹೆಚ್ಚಾಗಿದೆ. ನಿನ್ನೆ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಬಿಎಂಪಿಯನ್ನು ಮೂರಾಗಿ ಐದಾಗಿ ವಿಭಜಿಸಲು ವಿಪರೀತವಾಗಿ ಪ್ರಯತ್ನಪಟ್ಟು ಸದ್ಯಕ್ಕೆ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ತೆಲುಗು ಭಾಷೆಗಳಲ್ಲಿ ಪ್ರಕಟಮಾಡಿ ವೋಟುಗಳಿಗೋಸ್ಕರ ಬೆಂಗಳೂರಿನಲ್ಲಿ ಕನ್ನಡವನ್ನು ಇಲ್ಲವಾಗಿಸುವುದಕ್ಕೂ ತಾನು ಹೇಸುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಸಾಮಾನ್ಯವಾಗಿ ಪ್ರಣಾಳಿಕೆಯನ್ನು ಕನ್ನಡದಲ್ಲಿ ಮತ್ತು ನಮಗೆ ಬೇಕೋ ಬೇಡವೋ ಅನಿವಾರ್ಯವಾಗಿಬಿಟ್ಟಿರುವ ಇಂಗ್ಲೀಷಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿಕೊಂಡ ಕರ್ನಾಟಕದಲ್ಲಿ ಅನ್ಯಭಾಷಿಕರ ಸಂಖೈ ಹೆಚ್ಚುತ್ತಲೇ ಇರುವುದು ಸತ್ಯ. ಜೊತೆಗೆ ಬೆಂಗಳೂರು ತಮಿಳುನಾಡು ಮತ್ತು ಆಂಧ್ರ ಗಡಿಗಳಿಗೆ ಹೊಂದಿಕೊಂಡಂತೆಯೇ ಇರುವುದರಿಂದ ಸಹಜವಾಗಿ ಅನೇಕ ಪ್ರದೇಶಗಳಲ್ಲಿ ತೆಲುಗು ಮತ್ತು ತಮಿಳು ಭಾಷಿಕರು ನೆಲೆಸಿದ್ದಾರೆ. ಅನ್ಯ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕಾದ ಕರ್ನಾಟಕ ಸರಕಾರ ಅವರ ವೋಟುಗಳನ್ನು ಪಡೆಯಲೋಸುಗ ಅವರ ಭಾಷೆಯಲ್ಲಿಯೇ ಪ್ರಣಾಳಿಕೆ ಬಿಡುಗಡೆ ಮಾಡುವಂತಹ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಸರಿಯೇ? 
ಆಂಧ್ರದ ಒವೈಸಿ, ಚಂದ್ರಬಾಬು ನಾಯ್ಡು ತಮಿಳುನಾಡಿನ ಜಯಲಲಿತಾ ತಮ್ಮ ತಮ್ಮ ಪಕ್ಷವನ್ನು ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸುತ್ತಿದೆಯಂತೆ ಎಂಬ ಸುದ್ದಿಗಳು ಕಾಂಗ್ರೆಸ್ಸಿನ ಈ ನಿರ್ಧಾರಕ್ಕೆ ಕಾರಣವಾಯಿತಾ? ಕನ್ನಡಿಗರ ರಾಷ್ಟ್ರೀಯ ಪಕ್ಷಗಳ ಮೇಲಿನ ಪ್ರೇಮದಿಂದ ಹಿಂದಿ ಹೇರಿಕೆಯೆಂಬುದು ನಿರಂತರವಾಗಿಬಿಟ್ಟಿದೆ. ಈಗ ಬೆಂಗಳೂರಿನಲ್ಲಿ ಅನ್ಯಭಾಷಾ ಪ್ರಣಾಳಿಕೆಯನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಸರದಿ ಬೆಂಗಳೂರಿಗರದು. ಬಿಬಿಎಂಪಿ ವಿಭಜನೆಯಾಗುವ ಮುನ್ನವೇ ಭಾಷಾ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಪ್ಪಿತಪ್ಪಿ 'ಆಡಳಿತದ' ಹೆಸರಿನಲ್ಲಿ ಬಿಬಿಎಂಪಿಯನ್ನು ವಿಭಜನಗೊಳಿಸಿಬಿಟ್ಟರೆ ಯಾವ ರೀತಿ ವರ್ತಿಸಬಹುದು? ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶದಲ್ಲಿ ಕೇವಲ ತೆಲುಗು ಪ್ರಣಾಳಿಕೆ, ತಮಿಳರು ಹೆಚ್ಚಿರುವ ಕಡೆ ತಮಿಳು ಪ್ರಣಾಳಿಕೆ, ಉರ್ದು ಭಾಷಿಕರಿರುವ ಕಡೆ (ಇಲ್ಲಿರುವ ಮುಸ್ಲಿಮರು ಮಾತನಾಡುವುದು ಉರ್ದುವಾ?) ಉರ್ದು ಪ್ರಣಾಳಿಕೆಯನ್ನಷ್ಟೇ ಪ್ರಕಟಿಸಿ ಕನ್ನಡವನ್ನೇ ಮೂಲೆಗುಂಪು ಮಾಡಿಬಿಡುವ ದಿನಗಳು ದೂರವಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮರಾಠಿ ಪಕ್ಷಗಳು ನಗರಸಭೆಗಳಲ್ಲಿ ನಿರ್ಣಯ ತೆಗೆದುಕೊಂಡಂತೆ ಮುಂದೊಂದು ದಿನ ಬೆಂಗಳೂರಿನ ಈ ಭಾಗವನ್ನು ಆಂಧ್ರಕ್ಕೆ ತಮಿಳುನಾಡಿಗೆ ಸೇರಿಸಿಬಿಡಿ ಎಂಬ ನಿರ್ಣಯಗಳೂ ಕೇಳಿ ಬರಬಹುದು. 
ಒಟ್ಟಿನಲ್ಲಿ ಕನ್ನಡ, ಕರ್ನಾಟಕ ಎಂದು ಎದೆತಟ್ಟಿ ಹೇಳುತ್ತಾ ದೇಶವನ್ನೇ ಎದುರುಹಾಕಿಕೊಳ್ಳುವ ಪಕ್ಷವೊಂದು ಕರ್ನಾಟಕದಲ್ಲಿ ಇಲ್ಲದ ಫಲಗಳನ್ನು ನಾವೀಗ ನೋಡುತ್ತಿದ್ದೇವೆ. ದೇಶ ಮೊದಲು ಎಂಬ 'ವಿಶಾಲ ಮನೋಭಾವವನ್ನು' ತೊರೆದು ರಾಜ್ಯ ಮೊದಲು ಭಾಷೆ ಮೊದಲು ಎಂಬ 'ಸಂಕುಚಿತ ಮನೋಭಾವವನ್ನು' ಬೆಳೆಸಿಕೊಳ್ಳದಿದ್ದರೆ ಈ ರಾಜಕಾರಣಿಗಳ ಸೋಗಲಾಡಿತನದಿಂದ ಕನ್ನಡಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ.

ಆಗ 10, 2015

ಅಹಂ ನಾನೇಶ್ವರ!

ಒಂದಷ್ಟು ಗಿಮಿಕ್ಕು, ಬಹಳಷ್ಟು ವಿಚಿತ್ರ ವಿಕ್ಷಿಪ್ತತೆಗೆ ಹೆಸರಾಗಿರೋ ಉಪೇಂದ್ರ ನಿರ್ದೇಶನದ ಹೊಸ ಚಿತ್ರ ಉಪ್ಪಿ 2 ಟೀಸರ್ ಸದ್ದು ಮಾಡುತ್ತಿದೆ. ಮೈಮೇಲೆಲ್ಲಾ ಬೂದಿ ಬಳಿದುಕೊಂಡು ಉಲ್ಟಾ ನಿಂತಿರೋ ಉಪೇಂದ್ರ ತಮ್ಮ ಉಲ್ಟುಲ್ಟಾ ಸ್ಟೈಲುಗಳಿಂದಲೇ ಮತ್ತೆ ಜನರ ಮನ ಗೆಲ್ಲುತ್ತಾರಾ? ಆಗಸ್ಟ್ ಹದಿನಾಲ್ಕಕ್ಕೆ ಗೊತ್ತಾಗುತ್ತದೆ. ಉಪೇಂದ್ರನೆಂಬ ನಿರ್ದೇಶಕ ಗೆಲ್ಲಬೇಕು.

ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಿಗೊಂದು ಬಹಿರಂಗ ಪತ್ರ!

ಸನ್ಮಾನ್ಯ ಅಧ್ಯಕ್ಷರಿಗೆ ನಮಸ್ಕಾರಗಳು,
ಮೊದಲಿಗೆ ನಿಮ್ಮ ಕ್ಷಮೆ ಕೋರುತ್ತೇನೆ: ಹೀಗೊಂದು ಬಹಿರಂಗ ಪತ್ರ ಬರೆದು ಬಿಡುವಿರದ ತಮ್ಮ ಸಮಯವನ್ನು ಹಾಳು ಮಾಡುತ್ತಿರುವುದಕ್ಕೆ.

ವಿಷಯ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ! ನಮ್ಮ ಅರ್ಧ ನಾಡು ಮಳೆಯಿರದೆ ಬರದಿಂದ ತತ್ತರಿಸುತ್ತಿದೆ. ಈಗಾಗಲೇ ತಮಗಾದ ಬೆಳೆನಷ್ಟ ಮತ್ತು ತೀರಿಸಲಾಗದ ಸಾಲಭಾದೆಯಿಂದ ಬಹಳಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿದು ನಡೆದು ಹೋಗಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದುವರೆಗು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಅಂಕಿ ಅಂಶಗಳ ಒಣಪಾಠವನ್ನು ನಾನಿಲ್ಲಿ ಒಪ್ಪಿಸಹೋಗುವುದಿಲ್ಲ ಮತ್ತು ಅದು ನನ್ನ ಉದ್ದೇಶವೂ ಅಲ್ಲ. 

ಇರಲಿ ವಿಷಯಕ್ಕೆ ಬರುತ್ತೇನೆ: ಈಗಾಗಲೇ ಕೆಲವು ಜನಪರ ಸಂಘಟನೆಗಳು ಅಕ್ಟೋಬರಿನಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಬೇಕೆಂಬ ಬೇಡಿಕೆ ಇಟ್ಟಿರುವುದು ತಮಗೆ ತಿಳಿದ ವಿಚಾರವಾಗಿದೆ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಸಮ್ಮೇಳನವನ್ನೇ ರದ್ದು ಮಾಡಬೇಕೆಂದು ಕೋರುತ್ತೇನೆ. ಕ್ಷಮಿಸಿ, ಹೀಗೆ ಹೇಳದೆ ವಿಧಿಯಿಲ್ಲ. ಯಾಕೆಂದರೆ ಬರಗಾಲದ ಇಂತಹ ಸನ್ನಿವೇಶದಲ್ಲಿ, ಜೊತೆಗೆ ಸಾಲು ಸಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರದ ಹಣವನ್ನು ಖರ್ಚು ಮಾಡಿ ಹಬ್ಬದ ಸಡಗರವನ್ನು ಆಚರಿಸುವುದು ಸೂಕ್ತವಲ್ಲವೆಂದು ನನ್ನ ಅನಿಸಿಕೆಯಾಗಿದೆ. ಇದರಲ್ಲಿ ಹಣದ ವಿಷಯ ಮಾತ್ರ ಅಡಕವಾಗಿಲ್ಲ. ಬದಲಿಗೆ ಸೂಕ್ಷ್ಮ ಮನಸ್ಸಿನವರೆನಿಸಿಕೊಂಡ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ನೈತಿಕ ಹೊಣೆಗಾರಿಕೆಯಾಗಿದೆ. ಸಾಹಿತಿಯಾದವನು ಕೊನೆಗೂ ಹೊಣೆಗಾರನಾಗುವುದು ತಾನು ಬದುಕುವ, ಬರೆಯುವ ಸಮಾಜಕ್ಕೆ ತಾನೆ? ಈ ವಿಚಾರವನ್ನು ನಾನು ಬಹಳಷ್ಟು ಜನರ ಜೊತೆ ಚರ್ಚಿಸಿದಾಗ ಕೇಳಿಬಂದ ಅಭಿಪ್ರಾಯಗಳು ಆಘಾತಕಾರಿಯಾಗಿದ್ದವು. ಅವುಗಳಲ್ಲಿ ಕೆಲವನ್ನು ನಾನಿಲ್ಲಿ ಹೇಳಬಯಸುತ್ತೇನೆ: ಮೊದಲ ಅನಿಸಿಕೆ ಒಂದು ಊರಲ್ಲಿ ಯಾರಾದರು ಸತ್ತರೆ ಆ ಊರಿನವರೇನು ಉಪವಾಸ ಇರುವುದಿಲ್ಲ. ಹೌದು ನಾನು ಒಪ್ಪುತ್ತೇನೆ, ಊರವರಿರಲಿ ಆ ಮನೆಯವರೆ ಯಾರೂ ಉಪವಾಸ ಇರುವುದಿಲ್ಲ. ಮಣ್ಣು ಮುಗಿದ ಮೇಲೆ ಅವರೂ ಉಣ್ಣುತ್ತಾರೆ, ಯಥಾ ಪ್ರಕಾರ ಜೀವನ ಸಾಗುತ್ತದೆ. ಆದರೆ ಸತ್ತವರ ಸೂತಕದ ಮನೆಯಲ್ಯಾರು ಹಬ್ಬದ ಅಡುಗೆ ಮಾಡಿ ಚಪ್ಪರ ಹಾಕಿ ಉಂಡು ನಲಿಯುವುದಿಲ್ಲ. ಇನ್ನೊಂದು ಅನಿಸಿಕೆ: ಸಮ್ಮೇಳನ ರದ್ದು ಮಾಡಿದರೆ ರಾಯಚೂರು ಭಾಗದ ಜನರ ಬಾವನೆಗಳಿಗೆ ಧಕ್ಕೆ ಯಾಗುತ್ತದೆ. ಇದನ್ನು ಖಂಡಿತಾ ಒಪ್ಪಲು ಸಾದ್ಯವಿಲ್ಲ .ಸಮ್ಮೇಳನದಿಂದ ಲಾಭ ಮಾಡಿಕೊಳ್ಳುವ ಕೆಲವರಿಗೆ ಬೇಸರವಾಗಬಹುದೇನೊ ಆದರೆ ತಮ್ಮ ರೈತ ಬಂದುಗಳನ್ನು ಕಳೆದುಕೊಂಡು ಬರದಿಂದ ತತ್ತರಿಸುತ್ತಿರುವ ಆ ಭಾಗದ ಜನರು ಇದನ್ನವರು ಮನಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ನನಗೆ ಅರಿವಿರುವಂತೆ ನಮ್ಮ ಜನ ಸಾವಿನ ಮನೆಯಲ್ಲಿ ಸಂಭ್ರಮ ಆಚರಿಸುವವರಲ್ಲ. ಇನ್ನು ಕೆಲವರ ಪ್ರಶ್ನೆ ರಾಜಕಾರಣಿಗಳು ಯಾವುದನ್ನು ನಿಲ್ಲಿಸಿದ್ದಾರೆಂಬುದು? ಇದು ಎಲ್ಲದಕ್ಕೂ ರಾಜಕಾರಣವನ್ನು ಹೊಣೆ ಮಾಡುವ ಪ್ರಶ್ನೆ. ಒಂದು ಸಾಹಿತ್ಯ ಸಮ್ಮೇಳನ ನಡೆಸುವುದು ಬಿಡುವುದು ಪರಿಷತ್ತು ಮತ್ತು ಸಾಹಿತ್ಯಾಸಕ್ತರ ಕೆಲಸವೇ ಹೊರತು ರಾಜಕಾರಣಿಗಳದ್ದಲ್ಲ. ಹಾಗಾಗಿ ನಾವು ಎಲ್ಲದಕ್ಕೂ ರಾಜಕಾರಣಿಗಳನ್ನು ದೂರುವುದು ತರವಲ್ಲ. ಸಾಹಿತ್ಯ ಸಮ್ಮೇಳನವೆನ್ನುವುದು ಕನ್ನಡಿಗರ ಕೆಲಸ. ಅದನ್ನು ಮಾಡುವುದು ಬೇಡವೆನ್ನುವುದು ಅವರದೇ ನಿರ್ಧಾರ. ಇನ್ನು ಕನ್ನಡಿಗರ ಅಭಿಮಾನಕ್ಕೆ ಬರಬಂದಿಲ್ಲ. ದುಡ್ಡು ಕೊಡುವವರು ಇದ್ದಾರೆ . ಸಮ್ಮೇಳನ ನಡೆಯಲಿ. ಎನ್ನುವವರೂ ಇದ್ದಾರೆ. ಹೌದು ಕನ್ನಡಿಗರ ಅಭಿಮಾನವಿರಬೇಕಾಗಿದ್ದು: ಮೊದಲು ಅನ್ನ ಕೊಡುವ ಮಣ್ಣಿನ ಮಕ್ಕಳ ಬಗ್ಗೆ. ಅದರ ತರುವಾಯವೇ ಸಾಹಿತ್ಯ ಕಲೆಗಳೆಲ್ಲ. ಹೀಗೆ ವಾದ ಮಾಡುತ್ತಾ ಹೋದರೆ ಮಾಡುತ್ತಲೇ ಹೋಗಬಹುದು. ಆದರೆ ನನ್ನ ವಿಚಾರ ಅದಲ್ಲ. ಒಂದು ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವುದರಿಂದ ಕನ್ನಡ ಸಾಹಿತ್ಯವೇನೂ ಸತ್ತು ಹೋಗುವುದಿಲ್ಲ. ಹಾಗೆಯೇ ರದ್ದು ಮಾಡುವುದರಿಂದ ಸತ್ತವರೂ ಎದ್ದು ಬರುವುದಿಲ್ಲ. ಹಾಗಾಗಿ ಸಮ್ಮೇಳನವನ್ನು ರದ್ದು ಮಾಡಬೇಕೆನ್ನುವ ನನ್ನ ಉದ್ದೇಶ: ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನಾವು ನಿಮ್ಮೊಂದಿಗಿದ್ದೇವೆ, ನಿಮ್ಮ ದು:ಖದಲ್ಲಿ ನಾವುಗಳು ಪಾಲುದಾರರು ಎಂಬ ಭಾವನೆ ಮೂಡಿಸಿ, ಆತ್ಮಹತ್ಯೆಯಂತಹ ವಿಚಾರಗಳಿಂದ ಅವರುಗಳನ್ನು ಹೊರತರುವ ಮಾನವೀಯ ಕಾಳಜಿಮಾತ್ರವಾಗಿದೆ. ಇಂತಹದೊಂದು ಕನಿಷ್ಠ ಸೌಜನ್ಯವನ್ನೂ ನಾವು ತೋರಿಸದೇ ಹೋದಲ್ಲಿ ನಾವು ರಚಿಸುವ ಸಾಹಿತ್ಯಕ್ಕೆ ಅರ್ಥವಿರುವುದಿಲ್ಲ.

ಅದರ ಬದಲಿಗೆ ಅದೇ ಅಕ್ಟೋಬರ್ ತಿಂಗಳಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ಜಿಲ್ಲೆಯಲ್ಲೂ, ಏಕಕಾಲಕ್ಕೆ ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಹುಡುಕಾಟ ಎಂಬ ವಿಚಾರವನ್ನಿಟ್ಟುಕೊಂಡು ಹೆಚ್ಚು ಖರ್ಚಿಲ್ಲದೆ ವಿಚಾರಸಂಕಿರಣಗಳನ್ನು ನಡೆಸಬಹುದಾಗಿದೆ. ಇಂತಹ ಸಂಕಿರಣಗಳಲ್ಲಿ ಆಯಾ ಜಿಲ್ಲೆಯ ಸಾಹಿತಿಗಳು ಕೃಷಿ ತಜ್ಞರು, ಪ್ರಗತಿಪರರು ಬಾಗವಹಿಸುವಂತೆ ನೋಡಿಕೊಳ್ಳಬಹುದಾಗಿದೆ. ತದನಂತರ ಸಂಕಿರಣದಲ್ಲಿ ಹೊರಹೊಮ್ಮಿದ ಮುಖ್ಯ ಅಂಶಗಳನ್ನು ಕ್ರೋಢೀಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು. ಇದು ನನ್ನ ವಿನಮ್ರ ಸಲಹೆ ಮಾತ್ರ.

ಇದರೊಂದಿಗೆ ಸರಕಾರ ಕೊಡುವ ಒಂದೆರಡು ಕೋಟಿ ಅನುದಾನವನ್ನು ರೈತರಿಗೆ ನಿಜಕ್ಕೂ ಅನುಕೂಲವಾಗುವ ಯಾವುದಾದರು ಯೋಜನೆಗೆ ಬಳಸಲು,ಪರಿಷತ್ತು ಸರಕಾರಕ್ಕೆ ಒತ್ತಾಯಿಸಬೇಕು.

ಆದ್ದರಿಂದ ಸಾಹಿತ್ಯಪರಿಷತ್ತಿನ ಅದ್ಯಕ್ಷರಿಗೆ ನಾನು ಮನವಿ ಮಾಡಿಕೊಳ್ಳುವುದೇನೆಂದರೆ ದಯಮಾಡಿ ಸಾಹಿತ್ಯ ಸಮ್ಮೇಳವನ್ನು ಈವರ್ಷ ರದ್ದು ಮಾಡಿ. ನಿಮ್ಮ ಅವಧಿ ಮುಗಿದ ನಂತರ- ಬರವಿದ್ದರೂ ಸಮ್ಮೇಳನ ನಡೆಸಿದವರು ಅನಿಸಿಕೊಳ್ಳುವುದಕ್ಕಿಂತ ಬರದ ಕಾರಣದಿಂದ ಸಮ್ಮೇಳನವನ್ನು ರದ್ದು ಮಾಡಿ ರೈತಪರ ಕಾಳಜಿಯನ್ನು ಮೆರೆದವರೆಂದು ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯವೆಂದು ನನಗನ್ನಿಸುತ್ತದೆ. ಇತಿಹಾಸದ ಪುಟಗಳನ್ನು ಸೇರುವುದು ಮುಖ್ಯವಲ್ಲ, ಯಾಕೆ ಸೇರಲಾಯಿತು ಅನ್ನುವುದೇ ಮುಖ್ಯವಲ್ಲವೇ ಸರ್. ದಯಮಾಡಿ ಯೋಚಿಸಿ , ನಿಮ್ಮ ಪದಾಧಿಕಾರಿಗಳನ್ನು ನನಗಿಂತ ಹಿರಿಯರಾದ ಸಾಹಿತಿಗಳನ್ನು, ಬುದ್ದಿಜೀವಿಗಳನ್ನು ಸಂಪರ್ಕಿಸಿ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.

ಕು.ಸ.ಮಧುಸೂದನ್ ನಾಯರ್

ಮಂಡ್ಯದಲ್ಲಿ ಎರಡು ದಿನ ನಡೆದ 'ಬೀಜ ಮೇಳ'

seed festival mandya
ವ್ಯವಸಾಯ ಬಿಡಿ, ಮನೆಯಲ್ಲಿ ಪುಟ್ಟ ಕುಂಡದಲ್ಲಿ ಒಂದು ಗಿಡ ಬೆಳೆಸುವ ಆಸಕ್ತಿ ನಿಮ್ಮಲ್ಲಿದ್ದರೆ ಮೊದಲ ಹಂತದಲ್ಲೇ ನಿರಾಶೆಯಾಗಿಬಿಡುತ್ತೀರಿ. ಕಾರಣ, ದುಡ್ಡು ಕೊಟ್ಟು ಕೊಂಡು ತಂದ ಬೀಜಗಳು ಮೊಳಕೆಯೊಡೆಯುವ ಆಸಕ್ತಿ ತೋರಿಸದೆ ಮಣ್ಣಿನಲ್ಲೊಂದಾಗಿ ಗೊಬ್ಬರವಾಗಿಬಿಡುವುದು! ಬೀಜವೆಂಬುದು ದೊಡ್ಡ ಉದ್ಯಮವಾಗಿಬಿಟ್ಟಿದೆ. ಬಹಳಷ್ಟು ಬೀಜಗಳ ಮೇಲೆ 'ವಿಷ ಸಿಂಪಡಿಸಲಾಗಿದೆ' ಎಂದು ದೊಡ್ಡಕ್ಷರಗಳಲ್ಲಿ ಬರೆದಿರುತ್ತಾರೆ. ವಿಷದ ಬೀಜ ಬಿತ್ತಿ ವಿಷವಿಲ್ಲದೆ ಬೆಳೆದು ವಿಷಮುಕ್ತ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಬೀಜ ಶೇಖರಿಸುವ, ಶೇಖರಿಸಿಕೊಂಡ ಬೀಜವನ್ನು ನೆರೆಹೊರೆಯವರಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಮಾಯವಾಗುವುದಕ್ಕೆ ಉದ್ದಿಮೆದಾರರು ಎಷ್ಟು ಕಾರಣರೋ ರೈತರೂ ಅಷ್ಟೇ ಕಾರಣ. ಬೀಜ ಶೇಖರಿಸುವ, ಒಣಗಿಸುವ, ಕೆಡದಂತೆ ನೈಸರ್ಗಿಕವಾಗಿ ಸಂಗ್ರಹಿಸಿಡುವ ಶ್ರಮಕ್ಕಿಂತ ಹಣ ಕೊಟ್ಟು ಬೀಜ ತರುವುದು ಸುಲಭದ ಕೆಲಸ. ಹೀಗೆ ಹಣ ಕೊಟ್ಟು ತರುವ ಬೀಜದ ಗುಣಮಟ್ಟದ ಅರಿವಿರುವುದಿಲ್ಲ, ಅದು ಬೆಳೆಯುವಾಗ ಅನುಭವಿಸುವ ತೊಂದರೆಗಳ ಅರಿವಿರುವುದಿಲ್ಲ. 
seed festival mandya
ಮಂಡ್ಯದಲ್ಲಿ ನಡೆದ ಬೀಜ ಜಾತ್ರೆ
ಹಳೆಯ ಪದ್ಧತಿಯ ಬೀಜ ಹಂಚುವಿಕೆಯನ್ನು, ವಿಷಮುಕ್ತವಾದ ಬೀಜಗಳನ್ನು ಸಂಗ್ರಹಿಸುವ, ಕಡಿಮೆ ಬೆಲೆಗೆ ಮಾರುವ ವೇದಿಕೆ ಸೃಷ್ಟಿಸುತ್ತಿರುವುದು 'ಸಹಜ ಸಮೃದ್ಧಿ' ಬಳಗ. ಹದಿನೈದು ವರುಷಗಳಿಂದ ವಿಧವಿಧದ ತಳಿಗಳನ್ನು ಉಳಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತಾ ವರುಷವಿಡೀ ದೇಶದ ಹತ್ತಲವು ಭಾಗಗಳಲ್ಲಿ ಬೀಜ ಮೇಳ ನಡೆಸುತ್ತಿದೆ. ಆಗಸ್ಟ್ 8 ಮತ್ತು 9ರಂದು ಮಂಡ್ಯದ ಗುರುಭವನದಲ್ಲಿ ಬೀಜ ಮೇಳ ಆಯೋಜಿಸಲಾಗಿತ್ತು. ಸಾವಯವ ಬೀಜಗಳು ಮತ್ತು ಸಾವಯವ ಪದ್ಧತಿಯಿಂದ ಬೆಳೆದ ಬೆಳೆಗಳನ್ನು ಮಾರಲು ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಉತ್ಸಾಹದಿಂದ ಅನುಭವ ಹಂಚಿಕೊಳ್ಳುತ್ತಿದ್ದ ರೈತರು
ಜೊತೆಗೆ ಸಾವಯವ ರೈತರು ತಮ್ಮ ತಮ್ಮ ಅನುಭವಗಳನ್ನು ಸಹೋದ್ಯೋಗಿಗಳೊಡನೆ ಹಂಚಿಕೊಳ್ಳುತ್ತಿದ್ದರು. ಪಿರಿಯಾಪಟ್ಟಣ, ಬೆಳಗಾವಿ, ಹುಬ್ಬಳ್ಳಿಯ ಕಡೆಯಿಂದೆಲ್ಲ ಬಂದಿದ್ದ ರೈತರು ಸಾವಯವ ಉತ್ಪನ್ನಗಳನ್ನು ಮಾರುತ್ತಿದ್ದರು. ಮಂಡ್ಯದ ಕಿರುಗಾವಲಿನ ಘನಿ ಬರೋಬ್ಬರಿ ಏಳೂನೂರ ಐವತ್ತಕ್ಕೂ ಅಧಿಕ ರೀತಿಯ ಭತ್ತದ ತಳಿಗಳೊಡನೆ ಮಿಂಚುತ್ತಿದ್ದರು. ಭಾರತದಷ್ಟೇ ಅಲ್ಲದೇ ವಿದೇಶೀ ತಳಿ ಭತ್ತಗಳೂ ಅವರ ಬತ್ತಳಿಕೆಯಲ್ಲಿವೆ. ವಿದೇಶಿ ತಳಿಗಳೆಂದರೆ ಹೈಬ್ರಿಡ್ ಅಲ್ಲ! ವಿದೇಶಿ ಸಾವಯವ ತಳಿಗಳು.
ಇನ್ನು ಆವರಣದಲ್ಲಿ ಎಲ್ಲಾ ರೀತಿಯ ಸೊಪ್ಪು, ತರಕಾರಿ ಬೀಜಗಳು ಲಭ್ಯವಿದ್ದವು, ಹೊರಗೆ ಸಿಗುವ ಹೈಬ್ರಿಡ್ಡಿಗಿಂತ ಕಡಿಮೆ ಬೆಲೆಗೆ. ಜನರು ಹೆಚ್ಚು ಮುತ್ತಿಕೊಂಡಿದ್ದು ಮಾತ್ರ ಹಪ್ಪಳ, ಸಂಡಿಗೆ ಮಾರಾಟ ಮಾಡುತ್ತಿದ್ದ ಅಂಗಡಿಯ ಮುಂದೆ! ಅಂಗಡಿಗಳಲ್ಲಿ ಕಾಣಸಿಗದ ಕಪ್ಪು ಬೆಲ್ಲಗಳು ಇಲ್ಲಿ ಲಕಲಕ ಹೊಳೆಯುತ್ತಿದ್ದವು. ಅಂಗಡಿಯ ಬಿಳಿ ಬೆಲ್ಲಗಳು ರಾಸಾಯನಿಕಗಳ ಮುದ್ದೆ ಎಂಬುದು ತಿಳಿದಿದ್ದರೂ ಅದಕ್ಕೇ ಮಾರು ಹೋಗುತ್ತೇವೆ ನಾವು.
Ghani
750ಕ್ಕೂ ಅಧಿಕ ಭತ್ತದ ತಳಿಯೊಂದಿಗೆ ಘನಿ ಮತ್ತು ತಂಡ.
ಸಾವಯವ ಪದ್ಧತಿಯ ಬಗೆಗೆ ವಿವಿಧ ರೈತರು ಬರೆದ ಪುಸ್ತಕಗಳೂ ಲಭ್ಯವಿದ್ದವು. ವಿಷದ ಉಪಯೋಗವನ್ನು ಕಡಿಮೆಗೊಳಿಸಿ ಸಾವಯವ ಪದ್ಧತಿಯ ಕೃಷಿ ಹೆಚ್ಚಾಗುವುದಕ್ಕೆ ರೈತರ ಶ್ರಮವೊಂದೇ ಸಾಲದು. ಕಂಪನಿಗಳ ವಕ್ತಾರನಂತೆ ವರ್ತಿಸುವ ಕೃಷಿ ಇಲಾಖೆ ತನ್ನ ನೀತಿ ನಿಯಮಗಳನ್ನು ಅಮೂಲಾಗ್ರವಾಗಿ ಬದಲಿಸಿಕೊಳ್ಳಬೇಕು. ಗ್ರಾಹಕರು ಸಾವಯವ ಪದ್ಧತಿಯಲ್ಲಿ ಬೆಳೆದ ಉತ್ಪನ್ನಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡಬೇಕು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಕೃಷಿಕರೂ ಕೂಡ ಸಾವಯವ ಪದ್ಧತಿಯತ್ತ ಆಸಕ್ತಿ ವಹಿಸುತ್ತಾರೆ. ಇವೆಲ್ಲದರ ಜೊತೆಗೆ ಸಾವಯವದ ಹೆಸರಿನಲ್ಲಿ ಹೆಚ್ಚುತ್ತಿರುವ ನಕಲಿಗಳನ್ನು ಕಂಡು ಹಿಡಿಯುವ ಕೆಲಸವೂ ದೊಡ್ಡ ಮಟ್ಟದಲ್ಲಿ ಆಗಬೇಕು.

ಆಗ 8, 2015

'Seed Mela' at Mandya on Aug 8,9.

Organised by: Sahaja Samruddhi.
Venue: Gurubhavana, Mandya.
Timings: 10:00am to 8:00pm

Exhibition :

- Display of a spectacular diversity of Paddy. Millets and Vegetables
- Photographs, posters and other visual matter
- Uncultivated Food Crops

Stalls 

- Traditional Rice - Medicinal Rice, Biriyani Rice, Black Rice, Red Rice....
- Magic of Millets - Foxtail, Little, Brown top, Barnyard. Finger, Kodo Millet
- Fruits and Vegetables 
- Organic seeds for sale 
- Books, CDs and craft item

Workshop : Searching Organic Alternates


Seed conservation, Cultivation of traditional paddy and millets. value addition and marketing of organic produce. Special talk on legume culture, diversification of sugar cane and marketing of traditional rice and millets.

Image Source and information: Krishna Prasad Govindaiah's facebook page.

ಆಗ 7, 2015

ವೀಡಿಯೋ: ಮುನೀರ್ ಕಾಟಿಪಳ್ಳ ಮಾತುಗಳು.

ಆಗಸ್ಟ್ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರಿಗೆ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು ನಡೆದ ಪ್ರತಿಭಟನೆಯಲ್ಲಿ ಪ್ರಕರಣದ ಬಗ್ಗೆ ವಿವರ ನೀಡಿದ ಮುನೀರ್ ಕಾಟಿಪಳ್ಳ.


ವೀಡಿಯೋ: ಸುಂದರ ಮಲೆಕುಡಿಯನ ಪರವಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ.

ಜುಲೈ ನಾಲ್ಕರಂದು ಬೆಂಗಳೂರಿನ ಟೌನ್ ಹಾಲ್ ಎದುರು ಆದಿವಾಸಿ ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು "ಮನುಜಮತ" ಮತ್ತು ಸಮಾನ ಮನಸ್ಕರು ನಡೆಸಿದ ಪ್ರತಿಭಟನೆ. ಸಿ.ಎಸ್.ದ್ವಾರಕಾನಾಥರ ಕೆಲವು ಮಾತುಗಳಿವೆ.

ಪತ್ರಕರ್ತನೊಬ್ಬನ ಆಸ್ತಿ ವಿವರ!

ಗೆ, 
ಎಚ್.ಆರ್. ರಂಗನಾಥ್
ವ್ಯವಸ್ಥಾಪಕ ನಿರ್ದೇಶಕರು
ಪಬ್ಲಿಕ್ ಟಿವಿ
ಬೆಂಗಳೂರು

ಆತ್ಮೀಯ ಸರ್, 

ವಿಷಯ: ನನ್ನ ಆಸ್ತಿ ವಿವರ ಸಲ್ಲಿಸುವ ಕುರಿತು

ಇವತ್ತಿಗೆ ನಾನು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆರಂಭಿಸಿ 12 ವರ್ಷ ಕಳೆಯಿತು. 2003 ಆಗಸ್ಟ್ 6ರಂದು ಮೈಸೂರು ಕನ್ನಡಪ್ರಭ ಕಚೇರಿಯಲ್ಲಿ ಅಂಶಿ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಶುರುಮಾಡಿದೆ. ಅದಾದ ನಂತರ ಕನ್ನಡಪ್ರಭ, ಧಾರವಾಡ ಅಲ್ಲಿಂದ ಬೆಂಗಳೂರು ಕನ್ನಡಪ್ರಭಕ್ಕೆ ಬಂದೆ. ಅದಾದ ನಂತರ ಸುವರ್ಣನ್ಯೂಸ್ ಅಲ್ಲಿಂದ ಹೊರಟು ಉದಯವಾಣಿ ದೆಹಲಿ ವರದಿಗಾರನಾಗಿಯೂ ಇದೆ. 2011 ಅಕ್ಟೋಬರ್ 27ರಂದು ಬಂದು ಬೆಂಗಳೂರು ಪಬ್ಲಿಕ್ ಟಿವಿ ಸೇರ್ಪಡೆಯಾಗಿ ಸದ್ಯ ಇನ್‍ಪುಟ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 6 ಸಾವಿರ ರೂಪಾಯಿ ಸಂಬಳದಿಂದ ಉದ್ಯೋಗ ಶುರು ಮಾಡಿದ ನಾನೀಗ ತಿಂಗಳಿಗೆ 64,500 ರೂಪಾಯಿ (ನಿಗದಿಯಾಗಿರುವ ಸಂಬಳ 72 ಸಾವಿರ ರೂಪಾಯಿ, ಟ್ಯಾಕ್ಸ್ ಕಳೆದು ಕೈಗೆ ಸಿಗುವ ಸಂಬಳ 64,500 ರೂಪಾಯಿ) ಪಡೆದುಕೊಳ್ಳುತ್ತಿದ್ದೇನೆ. ಸಂಬಳದ ವಿಚಾರದಲ್ಲಿ ಸಂತೃಪ್ತನಾಗಿದ್ದೇನೆ.

ಪಬ್ಲಿಕ್ ಟಿವಿ ಶುರು ಮಾಡಿದಾಗ ನೀವು ಆಸ್ತಿ ಘೋಷಿಸಿಕೊಂಡಂತೆಯೇ ನಾನು ಆಸ್ತಿ ಘೋಷಿಸಿಕೊಳ್ಳಬೇಕು ಅಂದುಕೊಳ್ಳುತ್ತಲೇ ದಿನ ತಳ್ಳಿದ್ದೆ. ಆಗಾಗ ಅನ್ನಿಸಿದರೂ ಬರೆಯಲು ಕುಳಿತವ ನನ್ನ ಹತ್ತಿರ ಏನಿದೆ ಆಸ್ತಿ ಬರೆದುಕೊಳ್ಳಲು ಅಂತ ಸುಮ್ಮನಾಗುತ್ತಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಭ್ರಷ್ಟಾಚಾರ ಕುರಿತಂತೆ ಎದ್ದಿರುವ ಚರ್ಚೆಗಳ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಪತ್ರಕರ್ತರ ಕುರಿತಂತೆ ಹಾಕಿದ ಕಾಮೆಂಟ್‍ಗಳು ಹಾಗೂ ನನ್ನ ಹಳೆಯ ತುಡಿತದಿಂದಾಗಿ ನಿಮಗೆ ನನ್ನ ಆಸ್ತಿ ವಿವರವನ್ನು ಸಲ್ಲಿಸುತ್ತಿದ್ದೇನೆ. ತಾವು ಅನುಮತಿ ನೀಡಿದರೆ ಇದನ್ನು ನನ್ನ ವೈಯಕ್ತಿಕ ಫೇಸ್‍ಬುಕ್ ಅಕೌಂಟಿನಲ್ಲಿಯೂ ಪ್ರಕಟಿಸುತ್ತೇನೆ. 

ಇದನ್ನು ನನ್ನ ಅಹಂ ಪ್ರದರ್ಶನಕ್ಕೋ, ಪ್ರಚಾರಕ್ಕೋ ಮಾಡುತ್ತಿಲ್ಲ. ಎಲ್ಲರ ಅಕೌಂಟಬಿಲಿಟಿ ಪ್ರಶ್ನಿಸುವ ನಾವು ನಮ್ಮ ಗಳಿಕೆ ಪಾರದರ್ಶಕವಾಗಿಡಬೇಕು ಎಂಬುದು ನನ್ನ ಅಭಿಪ್ರಾಯ, ನಂಬಿಕೆ ಮತ್ತು ನಿರ್ಧಾರ ಆಗಿದ್ದರಿಂದ ಈ ವಿವರ ಸಲ್ಲಿಸುತ್ತಿದ್ದೇನೆ.

ಇಲ್ಲಿಯ ತನಕ ನಾನು ಆಯಾ ಸಂಸ್ಥೆಗಳು ನೀಡಿದ ಸಂಬಳದ ವಿನಃ ಬೇರೆ ಸಂಪಾದನೆಯನ್ನ ಮಾಡಿಲ್ಲ. ಆದರೆ, ನಾನು ವರದಿಗಾರನಾದ ಮೊದಲ ಎರಡು ವರ್ಷ ಪಿಜಿಎಫ್ ಕಂಪನಿಯ ಸಣ್ಣ ಉಳಿತಾಯ ಯೋಜನೆಯ ಏಜೆಂಟ್ ಆಗಿಯೂ ಕಮಿಷನ್ ಪಡೆದಿದ್ದೇನೆ. ನಂತರ ಅದರಿಂದ ಹೊರಬಂದೆ. ಧಾರವಾಡದಲ್ಲಿದ್ದ ವೇಳೆ ಭಾಷಾಂತರ ಕಾರ್ಯ ಮಾಡಿ 25 ಸಾವಿರ ರೂಪಾಯಿ ಸಂಪಾದಿಸಿದ್ದು ಬಿಟ್ಟರೆ ಈವರೆಗೆ ಸಂಬಳದ ವಿನಃ ಬೇರೆಲ್ಲೂ ಒಂದು ರೂಪಾಯಿಯನ್ನು ದುಡಿದೂ ಇಲ್ಲ. ಪಡೆದೂ ಇಲ್ಲ. ಹಣದ ಆಸೆ ಆಗಾಗ ಹುಟ್ಟಿದೆ ನಾನೇ ತಾಳ್ಮೆಯಿಂದ ಅವನ್ನು ಕೊಂದು ಹಾಕಿದ್ದೇನೆ.

ಪಿತ್ರಾರ್ಜಿತ ಆಸ್ತಿ ವಿವರ:

ನಾನು ಈ ಕ್ಷಣದವರೆಗೆ ಅವಿವಾಹಿತ. ಮುಂದೆ ಗೊತ್ತಿಲ್ಲ. ಮಂಡ್ಯ ತಾಲೂಕಿನ ಹನಕರೆ ನನ್ನ ಹುಟ್ಟೂರು. ನನ್ನ ತಂದೆ ತಾಯಿ, ನನ್ನ ತಮ್ಮ ಮತ್ತು ಆತನ ಪತ್ನಿ ಎಲ್ಲರೂ ಇರುವ ಒಟ್ಟು ಕುಟುಂಬ. ನನ್ನ ತಮ್ಮ ಅಭಿಲಾಷ್ ಚಿತ್ರ ನಿರ್ದೇಶಕ. ಒಟ್ಟು ಕುಟುಂಬವಾದರೂ ಚಿತ್ರ ನಿರ್ಮಾಣ-ನಿರ್ದೇಶನದಲ್ಲಿ ತೊಡಗಿಕೊಂಡಿರುವ ಆತನ ವ್ಯವಹಾರಕ್ಕೆ ಯಾವತ್ತೂ ನಾನಾಗಲಿ, ನನ್ನ ತಂದೆ-ತಾಯಿಯಾಗಲಿ ಕೈ ಹಾಕಿಲ್ಲ. ಆತ ನಮ್ಮಲ್ಲಿ ಕೇಳಿಲ್ಲ. ಸಾಮಾನ್ಯ ಸಹೋದರರಂತೆ ಒಂದಿಷ್ಟು ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಆಗಿದ್ದೇವೆ ಅಷ್ಟೇ. ನನ್ನ ತಂದೆ ಶಂಕರಪ್ಪ - ತಾಯಿ ರತ್ನಮ್ಮ ಅವರ ಯೋಗಕ್ಷೇಮಕ್ಕೆ ನಾನು ಹಣ ಕೊಡುವುದು ಉಂಟು ಆದರೆ ನಾನು ದುಡಿಯಲಾರಂಭಿಸಿದ ದಿನದಿಂದ ಅವರಲ್ಲಿ ನಾನು ಹಣ ಪಡೆದಿಲ್ಲ. ನನ್ನ ತಾಯಿ ಪಿಎಸಿಎಲ್ ಕಂಪನಿ ಉಳಿತಾಯ ಯೋಜನೆಯ ಪ್ರತಿನಿಧಿಯಾಗಿ ಕಮಿಷನ್ ಪಡೆಯುತ್ತಿದ್ದರು. ಆದರೆ ಕಳೆದ ಒಂದೂವರೆ ವರ್ಷದಿಂದ ಆ ಕಂಪನಿಯೇ ತೊಂದರೆಯಲ್ಲಿರುವುದರಿಂದ ಅವರಿಗೆ ಯಾವುದೇ ಹಣ ಬರುತ್ತಿಲ್ಲ. ನನ್ನ ತಂದೆ ಶಂಕರಪ್ಪ, ಮಧುಮೇಹ ಸೇರಿದಂತೆ ಹಲವು ವಿಷಯಗಳಲ್ಲಿ ಅನಾರೋಗ್ಯಪೀಡಿತರು. ನಮಗೆ ಒಟ್ಟು 3 ಎಕರೆ 25 ಗುಂಟೆ ನೀರಾವರಿ ಜಮೀನಿದೆ. ಅದರಲ್ಲಿ ನಾವು ಸಾಗುವಳಿ ಮಾಡುತ್ತಿಲ್ಲ. ಗುತ್ತಿಗೆಗೆ ನೀಡಿದ್ದೇವೆ. ಅದರಿಂದ ಬರುವ ಆದಾಯ - ನಷ್ಟ ಎಲ್ಲವೂ ನಮ್ಮ ತಂದೆ-ತಾಯಿಯೇ ನಿಭಾಯಿಸುತ್ತಾರೆ. 

ನನ್ನ ಹೆಸರಿನಲ್ಲಿರುವ ಪಿತ್ರಾರ್ಜಿತ ಆಸ್ತಿ ಮತ್ತು ಸಾಲ

* ನನ್ನ ಹುಟ್ಟೂರಾದ ಮಂಡ್ಯ ತಾಲೂಕಿನ ಹನಕೆರೆಯಲ್ಲಿ 1 ಎಕರೆ 23 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಇದೆ. ಈ ಜಮೀನನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ನನ್ನ ತಾಯಿಯ ಹೆಸರಲ್ಲಿ 2 ಎಕರೆ 2 ಗುಂಟೆ ಜಮೀನು ಇದೆ. ಈ ಜಮೀನಿನ ಮೇಲೆ 70 ಸಾವಿರ ರೂಪಾಯಿ (ಬಡ್ಡಿ ಹೊರತುಪಡಿಸಿ) ಬೆಳೆ ಸಾಲವಿದೆ.

* ಹನಕೆರೆಯಲ್ಲಿರುವ ನಮ್ಮ ಮನೆಯ ಸುತ್ತ ಒಟ್ಟು 17 ಗುಂಟೆ ಜಾಗವಿದೆ. ಇದು ನನ್ನ ತಂದೆ ಶಂಕರಪ್ಪ ಅವರ ಹೆಸರಲ್ಲಿದೆ.

* ನನಗಾಗಿ ನಾನು ಒಂದು ಗುಲಗಂಜಿ ಚಿನ್ನವನ್ನು ಕೊಂಡುಕೊಂಡಿಲ್ಲ. ನನ್ನ ತಾಯಿ ಅವರು ದುಡಿದ ಹಣದಲ್ಲಿ ಚಿನ್ನ ಮಾಡಿಸಿಕೊಂಡಿದ್ದಾರೆ. ಕೆಜಿ ಲೆಕ್ಕದಲ್ಲಂತು ಚಿನ್ನವಿಲ್ಲ.

* ಮಂಡ್ಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದರಿಂದ ಸಹಜವಾಗಿ ಅದರಲ್ಲಿ ಷೇರುಗಳಿವೆ. ಅದರ ಲೆಕ್ಕವಿಲ್ಲ.

ನನ್ನ ವೈಯಕ್ತಿಕ ಉಳಿತಾಯ - ಗಳಿಕೆ

* ಜೀವ ವಿಮೆ - 1. ಮ್ಯಾಕ್ಸ್ ನ್ಯೂ ಯಾರ್ಕ್ - 2007ರಿಂದ ವಾರ್ಷಿಕ 5057 ರೂಪಾಯಿ ಕಟ್ಟಲಾಗುತ್ತಿದೆ.

2. ಭಾರತೀಯ ಜೀವ ವಿಮೆ - 2007ರಿಂದ 6 ತಿಂಗಳಿಗೊಮ್ಮೆ 1,276 ರೂಪಾಯಿ ಕಟ್ಟಲಾಗುತ್ತಿದೆ

ತಿಂಗಳ ಉಳಿತಾಯ ಯೋಜನೆಗಳು

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಮೂರು ಖಾತೆಗಳಿಗೆ ನನ್ನ ಹೆಸರಿನಲ್ಲೇ ಹಣ ಜಮೆ ಮಾಡುತ್ತಿದ್ದೇನೆ.

* ಪಿಎಸಿಎಲ್ ಲಿ.ಗೆ - ತಿಂಗಳಿಗೆ 550 ರೂಪಾಯಿಯ ಎರಡು ಖಾತೆಗಳಿಗೆ ನನ್ನ ತಾಯಿ ಮತ್ತು ನನ್ನ ಸಂಬಂಧಿ ಒಬ್ಬರ ಹೆಸರಿಗೂ ಹಣ ಜಮೆ ಮಾಡುತ್ತಿದ್ದೇನೆ.

* ಮೈಸೂರಿನಲ್ಲಿ ಗೆಳಯರ ಬಳಿ 9 ಸಾವಿರ ರೂಪಾಯಿ ಚೀಟಿ ಕಟ್ಟುತ್ತಿದ್ದೇನೆ. ಹಣ ಪಡೆದು ಬಳಸಿಕೊಂಡಿದ್ದೇನೆ.

* ನನಗೆ ಗೆಳೆಯರು-ಸಂಬಂಧಿಕರಿಂದ ಬರಬೇಕಾಗಿರುವ ಹಣ - 4.5 ಲಕ್ಷ ರೂಪಾಯಿ (ಬರುವುದಿಲ್ಲ ಎಂದು ಖಾತ್ರಿಯಾಗಿರುವ ಮೊತ್ತ ಇದರಲ್ಲಿ ಸೇರಿಸಿಲ್ಲ)

* ನಾನು ಮೊಟ್ಟ ಮೊದಲ ಬಾರಿಗೆ ಕೊಂಡುಕೊಂಡ ಸ್ಟಾರ್ ಸಿಟಿ ಬೈಕ್ ನನ್ನ ಹೆಸರಲ್ಲೇ ಇದೆ. ಅದನ್ನು ಗೆಳಯನಿಗೆ ಕೊಟ್ಟಿದ್ದೇನೆ, ವಾಪಸ್ ನೀಡಬೇಕು ಎನ್ನುವ ಷರತ್ತಿನೊಂದಿಗೆ. ಅದನ್ನು ಮಾರಿದರೆ 10 ಸಾವಿರ ರೂಪಾಯಿಗೆ ವ್ಯಾಪಾರವಾದ್ರೆ ಹೆಚ್ಚು.

* ಕಮಾಡಿಟಿ ಮಾರ್ಕೆಟ್‍ನಲ್ಲಿ ಹಣ ಹಾಕಿದೆನಾದರೂ ಅದರಲ್ಲಿ ದುಡಿಯಲಿಲ್ಲ. ಝರೋದಾ ಬ್ರೋಕರೇಜ್‍ನ ಅಕೌಂಟಿನಲ್ಲಿ 6,500 ರೂಪಾಯಿ ಹಣ ಉಳಿದಿದೆ.

* ಭಾರತೀಯ ಸ್ಟೇಟ್ ಬ್ಯಾಂಕ್, ಮೈಸೂರು ಮುಖ್ಯ ಶಾಖೆಯಲ್ಲಿ ಒಂದು ಎಸ್‍ಬಿ ಖಾತೆ ಹೊಂದಿದ್ದೇನೆ. 3 ಸಾವಿರ ರೂಪಾಯಿಯಷ್ಟು ಹಣ ಅದರಲ್ಲಿದೆ. ಖಾತೆ ಸಂಖ್ಯೆ - 10562379822

* ನನ್ನ ಸಂಬಳದ ಖಾತೆಯು ಬೆಂಗಳೂರು ಮಲ್ಲೇಶ್ವರದಲ್ಲಿರುವ ಐಎನ್‍ಜಿ ವೈಶ್ಯ ಬ್ಯಾಂಕ್ (ಇದೀಗ ಕೊಟಕ್ ಮಹೇಂದ್ರ)ನಲ್ಲಿದೆ. ಖಾತೆ ಸಂಖ್ಯೆ - 147010163987

ನನ್ನ ವೈಯಕ್ತಿಕ ಸಾಲ

ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ಜೆಪಿನಗರದ ಶಾಖೆಯಲ್ಲಿ ಎರಡು ಕಾರು ಲೋನ್‍ಗಳು ನನ್ನ ಹೆಸರಲ್ಲಿವೆ.

* ಐ10 ಕಾರಿನ ಸಾಲ - 4 ಲಕ್ಷ ರೂಪಾಯಿ (ಈ ಕಾರು ನನ್ನ ಬಳಿ ಇಲ್ಲ. ಆದರೆ, ಕಾರು ನನ್ನ ಹೆಸರಲ್ಲೇ ಇದೆ. ಪ್ರತಿ ತಿಂಗಳು 8,550 ರೂಪಾಯಿಯನ್ನು ನಾನೇ ತುಂಬುತ್ತಿದ್ದೇನೆ. ಕಾರಣ, ಕಾರಿನ ಸಾಲದ ಹಣ ನಾನೇ ಬಳಸಿಕೊಂಡಿದ್ದೇನೆ)

* ಐ20 ಕಾರಿನ ಸಾಲ - 6.5 ಲಕ್ಷ ರೂಪಾಯಿ (ಈ ಕಾರನ್ನು ನಾನೇ ಬಳಸಲು ಕೊಂಡುಕೊಂಡೆನಾದರೂ ಅದನ್ನು ನನ್ನ ಗೆಳೆಯನಿಗೆ ಮಾರಿದ್ದೇನೆ. ಆಗಸ್ಟ್ ತಿಂಗಳಿನಿಂದ ನನ್ನ ಗೆಳೆಯನೇ ಇದರ ಇಎಂಐ ಪಾವತಿಸಲಿದ್ದಾನೆ.)

* ಗೆಳಯರಿಂದ ಪಡೆದ ಸಾಲ - 3 ಲಕ್ಷ ರೂಪಾಯಿ ಇದೆ.
ಮೈಸೂರಲ್ಲಿರುವ ತನಕ ಒಂದಷ್ಟು ವೈಯಕ್ತಿಕ ಸಾಲ-ಕಮಿಟ್‍ಮೆಂಟ್‍ಗಳಿಂದಾಗಿ ತಿನ್ನುವುದರಲ್ಲೂ ಉಳಿಸುತ್ತಿದ್ದೆ. ಧಾರವಾಡಕ್ಕೆ ಹೋದ ಮೇಲೆ ಸಂಬಳವೂ ಹೆಚ್ಚಾದ್ದರಿಂದ ನೆಮ್ಮದಿಯಿಂದ ತಿಂದಿದ್ದೇನೆ. ತಿನ್ನಿಸಿದ್ದೇನೆ. ಬಟ್ಟೆಗಳಿಗೆ ಎಂದಿಗೂ ಹೆಚ್ಚು ಖರ್ಚು ಮಾಡಿದವನಲ್ಲ. ತಿರುಗಾಟಕ್ಕೆ ಖರ್ಚು ಮಾಡಿದ್ದೇನೆ. ಬೆಂಗಳೂರಿಗೆ ಬಂದ ಮೇಲೆ ಪುಸ್ತಕಕ್ಕೆ ದುಡ್ಡು ಸುರಿಯುವುದು ನಿಂತು ಹೋಯಿತು. ದೆಹಲಿಯಲ್ಲಿದ್ದಾಗ ಒಂದು ನೂರು ಪುಸ್ತಕಗಳನ್ನು ಕೊಂಡುಕೊಂಡಿದ್ದೆ. ಒಟ್ಟಾರೆ ಒಂದೂವರೆ ಸಾವಿರದಷ್ಟು ಪುಸ್ತಕಗಳು ನನ್ನ ಬಳಿ ಇರಬಹುದು. ನೆರವಿನ ವಿವರ ಹೇಳಿಕೊಳ್ಳಬಾರದು. ಹೇಳಿಕೊಳ್ಳುವುದಿಲ್ಲ. ಅಪಾರ ಸಂಖ್ಯೆಯ ಗೆಳೆಯರು, ಒಂದಷ್ಟು ಗೆಳೆತಿಯರು ಇದ್ದಾರೆ. ಅವರೇ ನಾನು ಕಳೆದುಕೊಳ್ಳಾರದ ನನ್ನ ಆಸ್ತಿ. ಮೇಲೆ ತಿಳಿಸಿದ ವಿವರಗಳಿಗಿಂತ ಹೆಚ್ಚಿನ ಆಸ್ತಿ, ಹಣಕಾಸು ನನ್ನ ಬಳಿ ಇಲ್ಲ ಎಂದು ನಂಬಿದ್ದೇನೆ. ಯಾರಾದರೂ ಇದಕ್ಕಿಂತ ಹೆಚ್ಚಿನ ಹಣ-ಆಸ್ತಿಯನ್ನು ತೋರಿಸಿದರೆ ಅದನ್ನು ಅವರಿಗೇ ಕೊಟ್ಟು ಬಿಡುತ್ತೇನೆ.

ಕೊನೆ ಮಾತು - ಮದ್ವೆ ಇಲ್ಲ, ಮಕ್ಕಳಿಲ್ಲ. ನಿಂಗೇನಪ್ಪಾ ಖರ್ಚು...? ಅಂತ ಅನ್ನುವ ಸಾವಿರ ಬಗೆಯ ಮಾತು ಕೇಳಿಸಿಕೊಂಡಿದ್ದೇನೆ. ಹೆಂಡತಿ - ಮಕ್ಕಳ ನೆಪ ತೋರಿ ತಪ್ಪಿಸಿಕೊಳ್ಳುವ ಅವಕಾಶ ಅವಿವಾಹಿತರಿಗೆ ಇರುವುದಿಲ್ಲ. ಉಳಿಸು - ಗಳಿಸು ಅಂತ ಪೀಡಿಸಲು ಹೆಂಡತಿ ಇರುವುದಿಲ್ಲ. ಕೊಟ್ಟದ್ದು ತನಗೆ - ಬಚ್ಚಿಟ್ಟದ್ದು ಪರರಿಗೆ ಅಷ್ಟೇ ಅಂದುಕೊಂಡಿದ್ದೇನೆ. 
ಇಂತಿ,
ನಿಮ್ಮ ವಿಶ್ವಾಸಿ
ಎಚ್.ಎಸ್. ಅವಿನಾಶ್







ಆಗ 6, 2015

Yakub’s death and diseased Society.


Ashok. K. RThousands gathered to watch, see and mourn his death. Times of India reported that almost 15,000 people gathered in his funeral. Almost all of them were Muslims. If you think that someone who worked restlessly for the wellbeing of Muslim was expired then you are wrong! Court had ruled him guilty in 1993 Mumbai serial bomb explosion case. Yakub memon was hanged to death after 23 years of judiciary proceedings. Accusations against him were not severe when compared to his bother Tiger Memon and Dawood Ibrahim – both absconding. But it’s difficult to deny the role of Yakub Memon. Many involved in the serial bomb case have witnessed against Yakub.
yakub memon
Yakub Memon
Judiciary works on the basis of evidence and witness. According to the witness and police reports judiciary granted him the extreme punishment which is allowed by Indian law, hang till death. Yakub approached all levels of judiciary and even the President through his lawyers. He lost the case at all levels. Judiciary is not free from mistakes, but it’s not right to blame them completely when the judgement is not in our favour. Keeping aside all those judicial matters what’s frightening in this case is the turnout at Yakub’s funeral. Moral support for an extremist activity is a threat to the society.

Coincidentally I had finished reading Kannada version of ‘Freedom at Midnight’ last week. The book which runs around 1947 bursts the myth of ‘Peace loving’ India. It describes the ‘peace’fulness of Hindu – Muslim – Sikh people. Can we relate rise of fanaticism to the violence involved in the birth of two nations? Is there any evidence either in India or Pakistan of punishing the culprits involved in rape, murder, extortion, abduction during partition? Birth of two nations sent a strong and wrong message – ‘it’s difficult to punish criminals of mass riots’.

The violence of partition can be brushed aside by blaming the British. We will look at the mass riots post independence. Unfortunately the first mass riot of Independent India is associated with Mahatma Gandhi. A person who preached and lived non violence was killed violently by Hindu terrorist Nathuram Godhse. Godhse was hanged till death. Even Gandhi would have opposed his hanging as it is state sponsored violence. Many who were involved in Gandhi’s murder belonged to Chitpavana Brahmin community. Chitpavana Brahmins were attacked in various parts of the country. Is it right to attack and torture an entire community for an individual’s mistake? Were the rioters punished?


The next mass riot was after Indira Gandhi’s assassination. Indira was killed by Sikh bodyguards who sympathized with terrorists. Followers of Indira and Congress found this as an opportunity to show their affection towards Indira. Innocent Sikh were the victims. ‘When a big tree falls, these type of incidents are common’ was Rajiv Gandhi’s irreresponsible statement. Even after many investigations the real perpetrators of Sikh massacre were not punished; courtesy: lack of evidence.

BJP was directly responsible for next major riot. In the name of Hinduism, BJP under the leadership of L.K. Advani started rathayathra. They needed a climax which can be memorized for many more decades. The climax was destruction of Babri Masjid and oath of constructing the Ram temple at the same place. With the demolition of the Masjid attacks over Muslims spread all over the country. BJP leaders who instigated this mass violence are still roaming free.

And the recent mass riot occurred in 2002 in Gujarat. In response to Godhra train incident where Hindu sanyasis were burnt thousands of Muslims were killed. Were the criminals punished? Some investigations are still under trial, cases deliberately weakened by the state. Some have got life imprisonment for heinous crimes. At present they are out on bail.

What do these incidents suggest? If you hate a community it’s better to turn that hatred into a mass riot instead of attacking individually. It’s easy to escape the clutches of law in mass violence. It’s still easier to escape if you belong to a majority community and your foe is minority. If we observe mass riots of India, in many people who suffered belonged to Sikh, Muslim community whereas the attackers were Hindus, the majority. It saddens when we see what happened to those instigators. Rajiv Gandhi who carelessly supported attack on Sikhs enjoyed the Prime Minister post. His name shines in innumerable roads, airport, and government projects even today. BJP’s Atal Bihari Vajpayee becomes Prime Minister. All mistakes of BJP are selectively forgotten. Today we consider Atal as one of the farsighted leader of Independent India! Advani who was the master mind of 1992 Rathayathra becomes Deputy PM. Don’t be surprised if Advani is considered as far sighted leader and awarded ‘Bharat Ratna’ in future. Both Rajiv and Atal are ‘Bharat Ratna’ awardees! Muruli Manohar Joshi, Umabharathi have enjoyed various posts in their political career. Narendra Modi who was Gujarat’s chief minister during 2002 massacre is now Prime Minister of India! At present he is considered as strongest PM. Many more superlatives will be added in future!

Thousands who participated in the Yakub’s funeral reminded Nathuram Godhse. Many ‘liked’ Godhse as he killed Gandhi. Reason? He killed Gandhi who ‘cheated’ Hindus. People used to praise Godhse secretly. Now the secret element is missing. Godhse temple, Godhse road are discussed openly. Don’t be surprised if you see them in reality in near future. BJP which believes in many ideologies of Godhse is in power today. One can’t deny the fact that the praise of Godhse is related to BJP’s electoral victory. Followers of Godhse have an advantage. Society doesn’t label them as antinational, terrorists. Because they are Hindus. By default, Hindu is patriotic just because of his birth religion! Only Muslims, Sikhs, Christians have to repeatedly prove their patriotism. LTTE who killed Rajiv Gandhi receives wide support in Tamilnadu. There were many worthy reasons for LTTE’s fight but those reasons shouldn’t make us to justify Rajiv Gandhi’s murder. Religious fanaticism has made people to support Godhse, Yakub; regional fanaticism has made people to support criminal activities of LTTE. Tamilnadu legislative assembly takes a decision in favour of Rajiv Gandhi’s assassins. Are you still surprised about the huge crowd at Yakub’s funeral?

Bal Thackeray's funeral
1993 Mumbai serial blast was in response to 1992 riots which killed thousands of Muslims. Does Yakub appear to those attended the funeral as their savior? Protector of Muslim community? The answers to these dangerous questions are yes and it reflects the bad state of our society. Those people who attended the funeral are projected as terrorists, antinational because they are Muslims. Thousands attended Bal Thackeray’s funeral. Bal Thackeray was accused in 1992 riots by Shree Krishna committee. But these people are portrayed as patriotic not terrorists!

Questioning the judicial trial of Yakub at this juncture is futile. Judiciary works on evidence and witness. One can’t deny the fact that Police and to a certain extent Judiciary is influenced by the religious dramas and political pressure. The zeal shown by Police in cases involving Muslim terrorists is seriously missing when it confronts Hindu terrorists. Accused in Gujarat riots Maya Kodnani and Babu Bajrangi were granted bail when Yakub was hanged. Babu Bajrangi has ‘proudly’ narrated his killings in front of Tehelka’s spy cameras. But still he is awarded with life imprisonment not execution. The delay in Malegaon and Ajmer blast investigations shows the vested interests of government and investigating agencies. ‘When Hindu terrorist is not punished why Yakub should be punished?’ is the most idiotic question. Yakub is a criminal, he should be punished. At the same time other criminals should also be punished. Though it is not happening supporting a criminal just because the other one is roaming free is not the right path.

Netizens are equally dangerous! They selectively support few and oppose few. And they give publicity according to their own liking in extreme way. Those who opposed Yakub, those who shared photos of Yakub’s funeral with “shame on them” tag appear patriotic. But you observe their older posts; they showed their full support to Godhse, Sadhvi! Those who strongly talked against Sadhvi in older posts now post updated supportive of Yakub. These kind of bi – tongued people play a major role in creating Yakub, Godhse and the likes.

The discussion of rights and wrongs of judicial execution takes place when an execution is nearing. The discussion fades away after execution. Demand for ban of judicial execution should be done when there is no execution.

ಆಗ 5, 2015

ಸುಂದರ ಮಲೆಕುಡಿಯನಿಗೆ ನ್ಯಾಯ ಒದಗಿಸಲು ಬೆಂಗಳೂರಿನಲ್ಲಿ ಪ್ರತಿಭಟನೆ

ಬೆಳ್ತಂಗಡಿ ಮಲೆಕುಡಿಯ ಆದಿವಾಸಿಗಳ ಕೈ ಕತ್ತರಿಸಿದ ಭೂಮಾಲೀಕ ಅರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಆಗಸ್ಟ್‌ 4, ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ನಡೆದ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಳುವಳಿಗಾರರು, ಇಂಜಿನಿಯರ್ರುಗಳು, ವೈದ್ಯರು, ರಂಗಕರ್ಮಿಗಳು, ದಲಿತ ಮುಖಂಡರು, ಸಿನಿಮಾ ರಂಗದವರೆಲ್ಲರೂ ಭಾಗವಹಿಸಿದ್ದರು. ಅನ್ಯಾಯವೆಸಗಿದ ಭೂಮಾಲೀಕನನ್ನು ಬಂಧಿಸಲು ಒತ್ತಾಯಿಸಲಾಯಿತು. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಲೆಕುಡಿಯ ಆದಿವಾಸಿಗಳ ಮೇಲೆ ನಿತ್ಯ ನಿರಂತರ ದೌರ್ಜನ್ಯ ನಡೆಸುತ್ತಿರುವ ಭೂಮಾಲೀಕ ಗೋಪಾಲಗೌಡನು ಇತ್ತೀಚೆಗೆ ಸುಂದರ ಮಲೆಕುಡಿಯನ ಎರಡೂ ಕೈಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪ್ರಗತಿಪರ ಸಾಹಿತಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬೆಂಗಳೂರಿನ ಟೌನ್ ಹಾಲಿನಲ್ಲಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮದ ಪತ್ರಿಕಾ ಹೇಳಿಕೆ. 
muneer katipalla
ಮುನೀರ್ ಕಾಟಿಪಳ್ಳ
dwarakanath
ದ್ವಾರಕಾನಾಥ್
ಕಳೆದ 25 ವರ್ಷಗಳಿಂದ ಅಕ್ರಮವಾಗಿ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಭೂಮಾಲೀಕ ಬೆಳ್ತಂಗಡಿಯ ಗೋಪಾಲಗೌಡನು ಈಗಲೂ ತನ್ನ ಜಮೀನನ್ನು ವಿಸ್ತಿರಿಸುವ ಕಾಯಕದಲ್ಲಿ ತೊಡಗಿದ್ದಾನೆ. ಭೂಮಾಲೀಕ ಗೋಪಾಲಗೌಡನ ಕುಟುಂಬ ಬ್ರಿಟೀಷರ ಆಡಳಿತಾವಧಿ ಕಾಲದಲ್ಲಿ ಬ್ರಿಟೀಷರಿಗಾಗಿ ಕರವಸೂಲಿ ಮಾಡುವ ಶೇಣವರಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ರಮೇಣ ಜಮೀನ್ದಾರರಾಗಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಭೂಮಾಲೀಕ ಪ್ರವೃತ್ತಿಯನ್ನು ಮುಂದುವರೆಸಿದ್ದು, ಈಗಲೂ ಆದಿವಾಸಿಗಳು, ದಲಿತರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಲೇ ಬಂದಿದ್ದಾನೆ.
protest in bangalore
ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆ
director giriraj
ಗಿರಿರಾಜ್
bhaskar prasad
ಭಾಸ್ಕರ್ ಪ್ರಸಾದ್
mounakke hattu varsha
ಮೌನಕ್ಕೆ ಹತ್ತು ವರ್ಷ
vimala
ವಿಮಲಾ
ಸುಂದರ ಮಲೆಕುಡಿಯರು ಗೋಪಾಲಗೌಡನ ಜಮೀನಿನ ಪಕ್ಕದಲ್ಲಿ ಜಮೀನನ್ನು ಹೊಂದಿದ್ದು, ಸುಂದರ ಮಲೆಕುಡಿಯನು ಅಲ್ಲಿ ಕೃಷಿ ಮಾಡಬಾರದೆಂದು ಸುಮಾರು 25 ವರ್ಷಗಳ ಆದೇಶ ಹೊರಡಿಸಿದ್ದ. ಆದರೆ ಸುಂದರ ಮಲೆಕುಡಿಯ ಕೃಷಿ ಚಟುವಟಿಕೆ ಮುಂದುವರೆಸಿದಾಗ ಗೋಪಾಲಗೌಡನ ಸಹಚರರು ಸುಂದರ ಮಲೆಕುಡಿಯನ ಮನೆಗೆ ನುಗ್ಗಿ ಮಗು ಪೂರ್ಣೇಶ ಮಲಗಿದ್ದ ತೊಟ್ಟಿಲನ್ನು ಕಡಿದಿದ್ದರು. ಆಗ ಅಡ್ಡ ಬಂದ ಸುಂದರ ಮಲೆಕುಡಿಯನ ಪತ್ನಿಯ ಕೈ ಬೆರಳುಗಳನ್ನು ಗೋಪಾಲಗೌಡನ ಸಹಚರರು ತುಂಡರಿಸಿದ್ದರು. ಇಂತಹ ಹಲವಾರು ಘಟನೆಗಳು ಆ ಸಂದರ್ಭದಲ್ಲಿ ನಡೆದಿತ್ತು. 25 ವರ್ಷಗಳ ಹಿಂದೆ ಮುಖ್ಯವಾಹಿನಿಯಲ್ಲಿ ನಡೆಯುತ್ತಿರೋ ಹೋರಾಟಗಳ ಸಂಪರ್ಕ ಇಲ್ಲದಿದ್ದ ಮಲೆಕುಡಿಯರು ಬೆರಳು, ಕೈಗಳನ್ನು ಕಳೆದುಕೊಂಡು ಸುಮ್ಮನಿದ್ದರು. 
manujamatha
"ಮನುಜಮತ"
ananth naik
ಅನಂತನಾಯ್ಕ್
manujamatha
ಕೊನೆಗೊಂದು ಹಾಡು....
ಇತ್ತೀಚೆಗೆ ಮತ್ತೆ ಸುಂದರ ಮಲೆಕುಡಿಯನ ಜಮೀನಿಗೆ ನುಗ್ಗಿದ ಗೋಪಾಲಗೌಡ ಮತ್ತು ಸಹಚರರು ಮರಗಳನ್ನು ಮಿಷಿನ್ನಿನ ಮೂಲಕ ಕಡಿಯಲಾರಂಭಿಸಿದ್ದರು. ಅದನ್ನು ವಿರೋಧಿಸಿದ ಸುಂದರ ಮಲೆಕುಡಿಯ ಮತ್ತು ಪತ್ನಿ, ಮಗ ಪೂರ್ಣೇಶನಿಗೆ ಮೆಣಸಿನ ಹುಡಿ ಎರಚಿದ್ದಾರೆ. ನಂತರ ಸುಂದರ ಮಲೆಕುಡಿಯ ಕೈಗಳನ್ನು ಪ್ರಜ್ಞಾಪೂರ್ವಕವಾಗಿ ಹಿಡಿದು ಎರಡೂ ಕೈಗಳನ್ನು ಪ್ರತ್ಯೇಕವಾಗಿ ಮೆಷಿನ್ನಿನಿಂದ ತುಂಡರಿಸಿದ್ದಾರೆ. 

ಪ್ರತಿಭಟನಾಕಾರರ ಬೇಡಿಕೆಗಳು: 

  1. ಪೋಲೀಸರು ಭೂಮಾಲೀಕ ಗೋಪಾಲಗೌಡನನ್ನು ಇನ್ನೂ ಬಂಧಿಸಿಲ್ಲ. ಗೋಪಾಲಗೌಡನ ಬಂಧನವಾಗಬೇಕು. ಭೂಮಾಲೀಕನಿಂದ ಕೈಗಳನ್ನು ಕಳೆದುಕೊಂಡಿರುವ ಸುಂದರ ಮಲೆಕುಡಿಯನಿಗೆ 25 ಲಕ್ಷ ಪರಿಹಾರ ನೀಡಬೇಕು. 
  2. ಸುಂದರ ಮಲೆಕುಡಿಯನ ಪುತ್ರ ಪೂರ್ಣೇಶನಿಗೆ ಸರಕಾರಿ ಉದ್ಯೋಗ ನೀಡಬೇಕು. 
  3. ಇನ್ನೂ ಅಸ್ತಿತ್ವದಲ್ಲಿ ಇರುವ ಭೂಮಾಲೀಕ ಪದ್ಧತಿಯನ್ನು ಹತ್ತಿಕ್ಕಲು ಸರಕಾರ ನಿರ್ಧಾರ ಕೈಗೊಳ್ಳಬೇಕು. 
  4. ಭೂಮಾಲೀಕರು ಅಥವಾ ಜಮೀನ್ದಾರರ ಹೆಚ್ಚುವರಿ ಭೂಮಿಯನ್ನು ಗುರುತಿಸಿ ಅವರ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಗ್ರಾಮದ ಭೂ ರಹಿತರಿಗೆ ವಿತರಿಸಬೇಕು. 
  5. ಭೂಸುಧಾರಣಾ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿ ಗ್ರಾಮದಲ್ಲಿ ಪ್ರತ್ಯೇಕ ಸರಕಾರವನ್ನು ಹೊಂದಿರುವ ಭೂಮಾಲೀಕರ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕು
Update: ದಿನಾಂಕ 23/08/2015ರಂದು ಗೋಪಾಲಕೃಷ್ಣಗೌಡನನ್ನು ಬಂಧಿಸಲಾಗಿದೆ.