ಚಲನಚಿತ್ರ ನಿರ್ದೇಶಕನಾಗುವುದೆಂದರೆ ಹತ್ತು ಸರ್ಕಸ್ಸು ಕಂಪನಿಗಳನ್ನು ನಡೆಸಿದಂತೆ ಎಂದು ಬರೆದಿದ್ದು ರವಿ ಬೆಳಗೆರೆ! ಒಂದು ಚಿತ್ರಕ್ಕೆ ನಾಯಕ ನಾಯಕಿ ಸಂಗೀತ ತಾಂತ್ರಿಕ ತಂಡದ್ದು ಒಂದು ತೂಕವಾದರೆ ನಿರ್ದೇಶಕ ಸ್ಥಾನದ್ದೇ ಒಂದು ತೂಕ. Director is Captain of the Ship ಎಂಬ ಮಾತು ಸುಖಾಸುಮ್ಮನೆ ಹುಟ್ಟಿದ್ದಲ್ಲ. ಪ್ರಪಂಚದ ಅತಿ ಉತ್ತಮ ಚಿತ್ರಗಳ ಹೆಸರು ಕೇಳಿದಾಗಲೆಲ್ಲ ನೆನಪಾಗುವುದು ಅದರ ನಿರ್ದೇಶಕರು. ಅಕಿರಾ ಕುರಸೋವಾ, ಮಾಜಿದ್ ಮಾಜಿದಿ ನೆನಪಲ್ಲಿರುವಷ್ಟು ಅವರ ಚಿತ್ರಗಳ ಕಲಾವಿದರು ನೆನಪಿನಲ್ಲಿರುವುದಿಲ್ಲ. ಕಥೆಯಾಧಾರಿತ ಚಿತ್ರಗಳಲ್ಲಿ ನಿರ್ದೇಶಕರು ಮಿಂಚಿದರೆ ಭಾರತದ ಬಹುತೇಕ ಚಲನಚಿತ್ರಗಳಲ್ಲಿ ಮಿಂಚುವುದು ಕಲಾವಿದರು. ಇದಕ್ಕೆ ಬಹುಮುಖ್ಯ ಕಾರಣ ಭಾರತದ ಮನೋರಂಜನಾತ್ಮಕ ಚಿತ್ರಗಳು ಕಲಾವಿದನ ಅದರಲ್ಲೂ ನಾಯಕನಟನ ಸುತ್ತ ಸುತ್ತುವುದು. ಕಥೆಗಾಗಿ ತಮ್ಮ ಇಮೇಜನ್ನು ಮೀರುವ ನಟರ ಸಂಖೈ ಕಡಿಮೆಯೆಂದೇ ಹೇಳಬೇಕು. ಇಮೇಜಿರುವ ಕಲಾವಿದರ ಆರಾಧಕರ ಸಂಖೈಯೂ ಹೆಚ್ಚಿರುವುದು ಇದೇ ಕಾರಣಕ್ಕೆ.
ಜನ 9, 2015
ಜನ 8, 2015
ಚಾರ್ಲಿ ಹೆಬ್ಡೋ ಮತ್ತು ಇಸ್ಲಾಮಿನೊಳಗಿನ ಸೈತಾನರು
ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆ 'ಚಾರ್ಲಿ ಹೆಬ್ಡೋ' ಕಛೇರಿಯ ಮೇಲೆ ಶಸ್ತ್ರಸಜ್ಜಿತ ಮುಸ್ಲಿಂ ಮೂಲಭೂತವಾದಿ ಉಗ್ರರು ಪೈಶಾಚಿಕ ದಾಳಿ ನಡೆಸಿದ್ದಾರೆ. ಪತ್ರಿಕೆಯ ಮುಖ್ಯ ಸಂಪಾದಕ, ನಾಲ್ವರು ಕಾರ್ಟೂನಿಷ್ಟರು, ಇಬ್ಬರು ಪೋಲೀಸರು ಸೇರಿದಂತೆ ಹನ್ನೆರಡು ಮಂದಿ ಹತರಾಗಿದ್ದಾರೆ. ಬಹಳಷ್ಟು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಎರಡು ಇಸ್ಲಾಂ ಅಸ್ತಿತ್ವದಲ್ಲಿದೆ, ಒಂದು ಅಲ್ಲಾ ಇಸ್ಲಾಂ ಮತ್ತೊಂದು ಮುಲ್ಲಾ ಇಸ್ಲಾಂ ಎಂದು ಹೇಳಿದ್ದರು. ಆಲ್ ಖೈದಾದ ಪತನದ ನಂತರ ಹುಟ್ಟಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೈತಾನರ ಇಸ್ಲಾಂ ಎಂಬ ಹೊಸ ಇಸ್ಲಾಮನ್ನು ಸೃಷ್ಟಿಸಿದೆಯಾ? ಇಸ್ಲಾಮಿಕ್ ಸ್ಟೇಟ್ ಸಂಘಟನೆ ಮತ್ತದರ ಬೆಂಬಲಿಗರು ನಡೆಸುತ್ತಿರುವ ದುಷ್ಕೃತ್ಯಗಳು ಹೌದೆನ್ನುತ್ತಿವೆ.
ಪೀಸ್ ಫುಲ್ಲಾಗಿಲ್ಲದ 'ಮಾಸ್ಟರ್ ಪೀಸ್' ಫಸ್ಟ್ ಲುಕ್!
![]() |
ಮಂಜು ಮಾಂಡವ್ಯ |
ಕಳೆದ ಒಂದೆರಡು ವರ್ಷದಿಂದ ಕನ್ನಡ ಚಿತ್ರರಂಗದ ನಂಬರ್ ಒನ್ ನಾಯಕ ಸ್ಥಾನದ ಪಟ್ಟ ಯಶ್ ಗೇ ಸಿಗಬೇಕು ಎಂದು ಯಾವುದೇ ಅನುಮಾನವಿಲ್ಲದೇ ಹೇಳ್ಬೋದು.ವೆರೈಟಿ ಚಿತ್ರಗಳು, ರಿಮೇಕೂ ಯಶಸ್ಸಾಗಿ ಸ್ವಮೇಕೂ ಯಶಸ್ಸಾಗಿ ಯಶ್ ನಂಬರ್ ಒನ್ ಸ್ಥಾನಕ್ಕೆ ಬಹುಶಃ ಈಗಾಗಲೇ ತಲುಪಿಬಿಟ್ಟಿದ್ದಾರೆ, ಇಲ್ಲಾ ಒಂದೆರಡು ಹೆಜ್ಜೆಯಷ್ಟೇ ಹಿಂದಿದ್ದಾರೆ. ಮೊಗ್ಗಿನ ಮನಸ್ಸು ಗೆಲುವು ಕಂಡಿತ್ತಾದರೂ ಅದರಲ್ಲಿ ರಾಧಿಕಾ ಪಂಡಿತ್ ಪಾತ್ರ ಹೆಚ್ಚಿತ್ತು. ಮೊದಲ ಸಲ ತಾಜಾತನದಿಂದ ಹೆಸರು ಮಾಡಿತಾದರೂ ಯಶ್ ಗೆಲುವು ಕಂಡ ಚಿತ್ರ 'ಕಿರಾತಕ'. ರಿಮೇಕ್ ಚಿತ್ರ ಗೆದ್ದ ತಕ್ಷಣ ರಿಮೇಕ್ ಹಿಂದೆಯೇ ಬೀಳುವ ಚಾಳಿ ಬೆಳೆಸಿಕೊಳ್ಳದ ಯಶ್ ನಂತರ ಸ್ವಮೇಕ್ ಚಿತ್ರಗಳಾದ ಡ್ರಾಮಾ, ಗೂಗ್ಲಿಯಲ್ಲಿ ಮಿಂಚಿದರು. ಮತ್ತೆ ದೊಡ್ಡ ಮಟ್ಟದ ಯಶಸ್ಸು ಕಂಡದ್ದು ರಾಜಾಹುಲಿ ಎಂಬ ರೀಮೇಕ್ ಚಿತ್ರದಲ್ಲಿ! ಲವ್ ಸ್ಟಾರ್ ಇಮೇಜಿನಿಂದ ಮಾಸ್ ಸ್ಟಾರ್ ಇಮೇಜಿಗೆ ಬದಲಿಸಿದ ಖ್ಯಾತಿಯೂ ರಾಜಾಹುಲಿಯದ್ದೇ!
ಜನ 6, 2015
ಆರ್ಡಿನೆನ್ಸ್ ರಾಜ್ ವಿರುದ್ಧ ಆಮ್ ಆದ್ಮಿ ಪಕ್ಷದ ಪ್ರತಿಭಟನೆ
ಪತ್ರಿಕಾ ಪ್ರಕಟಣೆ
ಅಧಿವೇಶನವಿರದ ಸಂದರ್ಭವನ್ನು ಬಳಸಿಕೊಂಡು, ಲೋಕಸಭೆಯಲ್ಲಿ ಚರ್ಚಿಸದೇ ಕೇಂದ್ರದ ಬಿ.ಜೆ.ಪಿ. ಸರ್ಕಾರವು ವಾಮಮಾರ್ಗದಿಂದ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ರಾಷ್ಟ್ರಪತಿಯವರ ಅಂಗೀಕಾರವನ್ನು ಪಡೆಯಲಾಗಿರುವ ಈ ತಿದ್ದುಪಡಿಗಳು ಸಂಪೂರ್ಣವಾಗಿ ಜನವಿರೋಧಿ ಮತ್ತು ರೈತವಿರೋಧಿಯಾಗಿವೆ. ಸಹಿ ಹಾಕುವ ಸಂದರ್ಭದಲ್ಲಿ ರಾಷ್ತ್ರಪತಿಗಳು ಸಹ, ತುರ್ತಾಗಿ ಈ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ.
ಜನ 5, 2015
ಜನ 4, 2015
ಆರ್ಡಿನೆನ್ಸುಗಳಿಗಿದು ಅಚ್ಛೇ ದಿನ್!
Dr Ashok K R
ನರೇಂದ್ರ
ಮೋದಿ ನೇತೃತ್ವದ ಬಿಜೆಪಿ ಅಧಿಕಾರವಿಡಿದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹತ್ತು
ವರ್ಷದ, ಅದರಲ್ಲೂ ಎರಡನೇ ಯುಪಿಎ ಸರಕಾರದ ದುರಾಡಳಿತವನ್ನು ಹೀಗಳೆಯುತ್ತ. ಜೊತೆಜೊತೆಗೆ
ಕಾಂಗ್ರೆಸ್ ಸರಕಾರ ಸಾಧಿಸಲಾಗದ ಅನೇಕ ಸಂಗತಿಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಡುವುದಾಗಿ
ಹೇಳುತ್ತಿದ್ದ ನರೇಂದ್ರ ಮೋದಿ ‘ಅಚ್ಛೇ ದಿನ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ನರೇಂದ್ರ ಮೋದಿ
ನೇತೃತ್ವದ ಬಿಜೆಪಿ ಸರಕಾರ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಬಹುತೇಕ
ಸರಕಾರಗಳಂತೆ ಕೆಲವಷ್ಟು ಒಳ್ಳೆಯ ಕೆಲಸ, ಬಹಳಷ್ಟು ಅನಗತ್ಯ ಕೆಲಸಗಳು ಸರಕಾರದ ವತಿಯಿಂದ
ನಡೆಯುತ್ತಿವೆ. ಜೊತೆಜೊತೆಗೆ ಅಪಾಯಕಾರಿ ರೀತಿಯ ಕೆಟ್ಟ ಕಾರ್ಯಗಳು ನರೇಂದ್ರ ಮೋದಿಯವರ ಸರಕಾರದಿಂದ
ನಿಧನಿಧಾನಕ್ಕೆ ಜಾರಿಯಾಗುತ್ತಿವೆ. ಮತ್ತೀ ಅಪಾಯಗಳು ಪ್ರಸ್ತುತಕ್ಕೆ ಅನಿವಾರ್ಯವೆಂಬ ಭಾವನೆ
ಜನಮಾನಸದಲ್ಲಿ ಮೂಡಿಸುವಲ್ಲಿ ಸರಕಾರದ ವಿವಿಧ ಮಂತ್ರಿಗಳ ಮಾತಿನ ಕಸರತ್ತು ಸಹಕರಿಸುತ್ತಿದೆ.
ಆರ್ಡಿನೆನ್ಸುಗಳ ಬೆನ್ನು ಹತ್ತಿರುವ ಕೇಂದ್ರ ಸರಕಾರದ ಹೆಜ್ಜೆಗಳು ಕೊನೆಗೆ ಪ್ರಜಾಪ್ರಭುತ್ವದ
ಮೂಲಭೂತ ಆಶಯಗಳಿಗೆ ಧಕ್ಕೆಯುಂಟುಮಾಡುತ್ತಿವೆ.
ಡಿಸೆಂ 31, 2014
ವಾಡಿ ಜಂಕ್ಷನ್ .... ಭಾಗ 8
Dr Ashok K R
ಇದೇನಾಗೋಯ್ತು
ನಿನ್ನೆ? ರಾಘವ ಯೋಚನೆಗೆ ಬಿದ್ದಿದ್ದ. ಕಾಲೇಜಿಗೆ ಹೋಗುವ ಮನಸ್ಸಾಗಿರಲಿಲ್ಲ. ‘ನಡೀಲೇ ಕಾಲೇಜಿಗೆ’
ಎಂದ ಅಭಯನ ಮೇಲೂ ರೇಗಿದ್ದ. ‘ಯಾಕೆ ಬರ್ತಿಲ್ಲ ಅನ್ನೋದಾದ್ರೂ ಹೇಳು?’ ಎಂದವನು ಕೇಳಿದ್ದಕ್ಕೆ “ಎಲ್ಲಾ
ವಿಷಯಾನೂ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಹೇಳೋದಿಕ್ಕೆ ಆಗೋದಿಲ್ಲ ಕಣಪ್ಪ” ರಾಘವ ಗಂಭೀರವದನನಾಗಿ
ಹೇಳಿದಾಗ ಮನಸ್ಸಿನೊಳಗೇ ನಕ್ಕು ‘ಇನ್ನೂ ಸ್ವಲ್ಪ ಸಮಯ ಬೇಕು. ಇವನ ಮನಸ್ಸು ಸರಿಯಾಗಲಿಕ್ಕೆ’
ಎಂದುಕೊಂಡು ಅಭಯ ಕಾಲೇಜಿಗೆ ತೆರಳಿದ.
ಡಿಸೆಂ 27, 2014
ಹಿಂದಿರುಗಿ ನೋಡಿದಾಗ
Dr Ashok K R
ಪೇಶಾವರದಲ್ಲಿ ತೆಹ್ರೀಕ್ ಇ ತಾಲಿಬಾನ್ ನಡೆಸಿದ
ಪೈಶಾಚಿಕ ಕೃತ್ಯ ಧರ್ಮ ದೇಶಗಳ ಗಡಿ ದಾಟಿ ಮೂಡಿಸಿದ ಆಘಾತ, ಸತ್ತ ಪುಟ್ಟ ಮಕ್ಕಳ ಬಗೆಗೆ ಬೆಳೆದ
ಆರ್ದ್ಯ ಭಾವದ ಕಣ್ಣೀರು ಒಣಗುವ ಮುನ್ನವೇ 2014ಕ್ಕೆ ತೆರೆಬೀಳಲಿದೆ. ಹಿಂದಿರುಗಿ ನೋಡಿದಾಗ
ನೆನಪಾಗುವ ಸಂಗತಿಗಳು ಅನೇಕ. ಭಾರತದ ಮಟ್ಟಿಗೆ ರಾಜಕೀಯವಾಗಿ ಒಂದು ಪಕ್ಷ ಉತ್ತುಂಗಕ್ಕೇರಿದರೆ
ಮತ್ತೊಂದು ಪಕ್ಷ ಪಾತಾಳಕ್ಕಿಳಿದಿದೆ. ದಶಕಗಳ ನಂತರ ಏಕಪಕ್ಷ ಬಹುಮತ ಪಡೆದಿದ್ದು ನರೇಂದ್ರ ಮೋದಿ
ನೇತೃತ್ವದ ಬಿಜೆಪಿಯ ಸಾಧನೆ. ಹಿಂದೆಂದೂ ಕಾಣದಷ್ಟು ಕಡಿಮೆ ಸೀಟುಗಳನ್ನು ದಕ್ಕಿಸಿಕೊಂಡದ್ದು
ಕಾಂಗ್ರೆಸ್ಸಿನ ಸಾಧನೆ! ಮಂಗಳಯಾನದ ಯಶಸ್ಸು ಇಡೀ ವಿಶ್ವ ಭಾರತದ ತಂತ್ರಜ್ಞಾನದೆಡೆಗೆ
ಗಮನಹರಿಸುವಂತೆ ಮಾಡಿತು.
ಡಿಸೆಂ 22, 2014
ಮತಾಂತರವೂ ತಪ್ಪಲ್ಲ ಮರುಮತಾಂತರವೂ ತಪ್ಪಲ್ಲ; ಆದರೆ?
Dr Ashok K R
ಅಭಿವೃದ್ಧಿಯ
ಹೆಸರಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ‘ಅಭಿವೃದ್ಧಿ’ಯ
ಪಥದಿಂದ ಪಕ್ಕಕ್ಕೆ ಸರಿದು ತನ್ನ ಮಾತೃ ಸಂಸ್ಥೆಯಾದ ಆರ್.ಎಸ್.ಎಸ್ ಮತ್ತದರ ಪರಿವಾರದ ಇತರ
ಸಂಸ್ಥೆಗಳ ತಾಳಕ್ಕೆ ಕುಣಿಯಲು ಸಿದ್ಧತೆಗಳು ನಡೆಯುತ್ತಿವೆಯಾ? ಇಂತಹುದೊಂದು ಅನುಮಾನಕ್ಕೆ
ಕಾರಣವಾಗುವ ಅನೇಕ ಬಿಡಿ ಬಿಡಿ ಘಟನೆಗಳು ಒಂದಾದ ಮೇಲೊಂದರಂತೆ ನಡೆಯುತ್ತಿರುವುದು ಕಾಕತಾಳೀಯವಲ್ಲ.
ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸುವ ಪ್ರಯತ್ನ, ಕ್ರಿಸ್ ಮಸ್ ದಿನದ ರಜಾ
ವಿವಾದ, ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವನ್ನಾಗಿಸುವ ಹೇಳಿಕೆಗಳು, ಉತ್ತರಪ್ರದೇಶದಲ್ಲಿ
ಠುಸ್ಸೆಂದ ಲವ್ ಜೆಹಾದ್ ವಿವಾದ ಮತ್ತೀಗ ಪರಿವಾರದ ವಿವಿಧ ಅಂಗಸಂಸ್ಥೆಗಳು ನಡೆಸುತ್ತಿರುವ ‘ಘರ್
ವಾಪಸಿ’ ಎಂಬ ಮರುಮತಾಂತರದ ವಿವಾದಗಳೆಲ್ಲವೂ ಬಿಜೆಪಿಯೆಂದರೆ ಧರ್ಮಧಾರಿತ ರಾಜಕಾರಣ
ಮಾಡುವುದಕ್ಕಷ್ಟೇ ಸರಿ ಎಂಬ ಆರೋಪಕ್ಕೆ ಪೂರಕವಾಗಿಯೇ ಇವೆ. ‘ಘರ್ ವಾಪಸಿ’ ಎಂಬ ಕಾರ್ಯಕ್ರಮ
ಮುಂಚೆಯೂ ಅಲ್ಲಲ್ಲಿ ನಡೆದಿತ್ತು, ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರಕಾರವಿರುವಾಗ
ಅದಕ್ಕೆ ಮತ್ತಷ್ಟು ರಂಗು ಬಂದಿದೆ. ಒಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ ಆರೋಪಕ್ಕೆ
ಗುರಿಯಾಗಿದ್ದ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮತ್ತೊಂದು ಧರ್ಮದವರನ್ನು ಓಲೈಸುವ ರಾಜಕಾರಣ ಮಾಡುವ
ಆರೋಪಕ್ಕೆ ಗುರಿಯಾಗುವ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೊರತುಪಡಿಸಿದರೆ ಹೆಚ್ಚೇನೂ
ವ್ಯತ್ಯಾಸಗಳು ಗೋಚರಿಸುತ್ತಿಲ್ಲ.