ಜುಲೈ 10, 2018

ಅರವಿಂದ್ ಕೇಜ್ರೀವಾಲ್ ವರ್ಸಸ್ ನರೇಂದ್ರಮೋದಿ!

ಸಾಂಧರ್ಬಿಕ ಚಿತ್ರ. ಮೂಲ: ಡಿ.ಏನ್.ಎ ಇಂಡಿಯಾ 
ಕು.ಸ.ಮಧುಸೂದನ ರಂಗೇನಹಳ್ಳಿ 
ನ್ಯಾಯಾಲಯಗಳ ಮದ್ಯಪ್ರವೇಶಗಳ ನಂತರವೂ ದೆಹಲಿಯ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಶ್ರೀ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ (ಇವರ ಹಿಂದಿರುವುದು ಅದೇ ದೆಹಲಿಯ ಗದ್ದುಗೆ ಹಿಡಿದಿರುವ ಪ್ರದಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೇಂದ್ರಸರಕಾರ) ನಡುವಿನ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ. 

2015ರಲ್ಲಿ ಬಾರೀ ಬಹುಮತದೊಂದಿಗೆ ದೆಹಲಿಯಲ್ಲಿ ಅಧಿಕಾರ ಹಿಡಿದ ಶ್ರೀ ಅರವಿಂದ್ ಕೇಜ್ರೀವಾಲರು ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಅಲ್ಲಿನ ಲೆಫ್ಟಿನಂಟ್ ಗವರ್ನರ್ ಬಿಡಲೇ ಇಲ್ಲ. ಬ್ರಿಟೀಷ್ ಸಂಸದೀಯ ಪ್ರಜಾಸತ್ತೆಯಿಂದ ಎರವಲು ಪಡೆದು ನಾವು ಸ್ಥಾಪಿಸಿಕೊಂಡಿರುವ ಈ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿರುವವರು ಸದಾ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಆಣತಿಯಂತೆ ನಡೆದುಕೊಳ್ಳುವವರೇ ಆಗಿರುತ್ತಾರೆ. ಶೀಲಾ ದೀಕ್ಷಿತ್ ಅಂತವರು ದೆಹಲಿಯ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸಮಸ್ಯೆಗಳೇನು ಎದುರಾಗಿರಲಿಲ್ಲ. ಅದಕ್ಕೆ ಕಾರಣ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದದ್ದು ಶ್ರೀಮತಿ ಶೀಲಾದೀಕ್ಷೀತರ ಕಾಂಗ್ರೆಸ್ ಪಕ್ಷವೇ. ಹೀಗಾಗಿ ಆಗ ದೆಹಲಿ ಮುಖ್ಯಮಂತ್ರಿಗಳ ಅಧಿಕಾರವನ್ನು ಕೇಂದ್ರಸರಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ನಿಯಂತ್ರಿಸಲು ಹೋಗಿರಲಿಲ್ಲ. ಆ ನಂತರವೂ ಬಾಜಪದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ದಿವಂಗತ ಶ್ರಿ ಮದನಲಾಲ್ ಖುರಾನರವರುಗಳು ಮುಖ್ಯಮಂತ್ರಿಗಳಾಗಿದ್ದಾಗಲೂ ಮುಖ್ಯಮಂತ್ರಿಗಳ ಅಧಿಕಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿರಲಿಲ್ಲ. ತನ್ಮೂಲಕ ಪ್ರಜಾಸತ್ತಾತ್ಮಕವಾಗಿ ದೆಹಲಿಯ ಜನತೆ ಆಯ್ಕೆ ಮಾಡಿದ ಸರಕಾರವೊಂದು ತನಗಿರುವ ಅದಿಕಾರಗಳ ಮಿತಿಯಲ್ಲಿಯೇ ಸುಗಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿತ್ತು.

ಮೇ 25, 2017

ಭಗ್ನಗೊಂಡ ಕೋಟ್ಯಾಂತರ ಜನರ ಪರ್ಯಾಯ ರಾಜಕಾರಣದ ಕನಸು!

ಕು.ಸ,ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದ ಕೋಟ್ಯಾಂತರ ಜನರ ಕನಸುಗಳು ಒಂದೇ ದಿನದಲ್ಲಿ ಛಿದ್ರಗೊಂಡಿವೆ!

ಹೌದು,ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರ ಮೇಲೆ ಎರಡು ಕೋಟಿ ರೂಪಾಯಿ ಲಂಚ ಪಡೆದ ಆರೋಪ ಮತ್ತು ಸುಳ್ಳು ಕಂಪನಿಗಳ ಮೂಲಕ ಹವಾಲ ಹಣಕಾಸು ವ್ಯವಹಾರ ನಡೆಸಿದ ಆರೋಪ ಹೊರಬೀಳುತ್ತಲೇ ಜನತೆಯಲ್ಲಿ ಭ್ರಮನಿರಸನದ ನಿಟ್ಟುಸಿರು ಕೇಳಿ ಬರುತ್ತಿದೆ. ಯಾಕೆಂದರೆ ಭಾರತೀಯರ ಮಟ್ಟಿಗೆ, ಅದರಲ್ಲೂ ಇಂದಿನ ಅಕ್ಷರಸ್ಥ ಯುವಪೀಳಿಗೆಯ ಪಾಲಿಗೆ ಆಮ್ ಆದ್ಮಿ ಪಕ್ಷ ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಾಗಿರಲಿಲ್ಲ. ಈ ನಾಡಿನಲ್ಲಿ ಕಳೆದ ಎಪ್ಪತ್ತು ವರ್ಷಗಳಿಂದ ರಾಜಕಾರಣ ಮಾಡುತ್ತ ಬರುತ್ತಿದ್ದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ನಿಂತ ಪರ್ಯಾಯ ರಾಜಕಾರಣದ ಒಂದು ಆಯುಧವಾಗಿತ್ತು.

ಸೆಪ್ಟೆಂ 9, 2015

ಶೈಕ್ಷಣಿಕ ಸಾಲಕ್ಕೆ ಸರಕಾರವೇ ಗ್ಯಾರಂಟಿ: ದೆಹಲಿ ಸರಕಾರದ ಯೋಜನೆ

ಉನ್ನತ ಶಿಕ್ಷಣವೀಗ ಖರ್ಚಿನ ಬಾಬತ್ತು. ಸರಕಾರೀ ಸಂಸ್ಥೆಗಳಲ್ಲಿರುವ ಶುಲ್ಕವನ್ನು ಭರಿಸುವುದೇ ಅನೇಕರಿಗೆ ಕಷ್ಟವಾಗಿರುವಾಗ ಖಾಸಗಿ ಸಂಸ್ಥೆಗಳಲ್ಲಿನ ಶುಲ್ಕವನ್ನು ಭರಿಸಿ ಓದುವುದು ದೂರದ ಮಾತೇ ಸರಿ. ಬ್ಯಾಂಕುಗಳೇನೋ 12ರಿಂದ 14% ಬಡ್ಡಿಗೆ ಸಾಲ ನೀಡುತ್ತವೆ. ಆದರೆ ಈ ಸಾಲ ಪಡೆಯಲು ವಿದ್ಯಾರ್ಥಿಯ ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರಬೇಕು. ಇಲ್ಲವಾದಲ್ಲಿ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಎಷ್ಟು ಜನರ ಬಳಿ ಈ ರೀತಿ ಆಸ್ತಿ ಇರಲು ಸಾಧ್ಯ. ಆಸ್ತಿ ವಂಚಿತರು ಕೊನೆಗೆ ಉನ್ನತ ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆ ಅಧಿಕ. 

ಇಂತವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ದೆಹಲಿ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ಪೋಷಕರ ಬಳಿ ಖಾತರಿಯಾಗಿಡಲು ಆಸ್ತಿ ಪಾಸ್ತಿ ಇರದಿದ್ದರೂ ಪರವಾಗಿಲ್ಲ, ವಿದ್ಯಾರ್ಥಿಯ ಸಾಲಕ್ಕೆ ಸರಕಾರವೇ ಗ್ಯಾರಂಟಿ ಕೊಡುತ್ತದೆ! ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನು ಈಡೇರಿಸಿರುವ ದೆಹಲಿಯ ಆಪ್ ಸರಕಾರ ಹತ್ತು ಲಕ್ಷದವರೆಗಿನ ಸಾಲಕ್ಕೆ ಬ್ಯಾಂಕಿಗೆ ಖಾತರಿಯಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದು ದುಡ್ಡಿನ ಕೊರತೆಯ ಕಾರಣದಿಂದ ಉನ್ನತ ಶಿಕ್ಷಣಕ್ಕೆ ಸೇರಲಾಗದವರಿಗೆಲ್ಲರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ.

ಈ ಯೋಜನೆ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ/ಓದಲು ಬಯಸುವ ವಿದ್ಯಾರ್ಥಿಗಳೆಲ್ಲರಿಗೂ ಲಭ್ಯವಿದೆ. ಸರಕಾರವೇ ಹೇಳುವಂತೆ ಈ ಯೋಜನೆಯ ಯಶಸ್ಸು ಓದು ಮುಗಿಸಿ ಕೆಲಸಕ್ಕೆ ಸೇರುವ ವಿದ್ಯಾರ್ಥಿಗಳ ಮೇಲಿದೆ. ಕೆಲಸ ಸಿಕ್ಕ ಮೇಲೆ ಸಮಯಕ್ಕೆ ಸರಿಯಾಗಿ ಸಾಲ ತೀರಿಸಿದರಷ್ಟೇ ಈ ಯೋಜನೆ ಮುಂದಿನ ವಿದ್ಯಾರ್ಥಿಗಳಿಗೂ ಯಶಸ್ವಿಯಾಗಿ ಮುಂದುವರೆಯುತ್ತದೆ. ಇಲ್ಲವಾದರೆ ಆರ್ಥಿಕ ಹೊರೆಯ ನೆಪವೊಡ್ಡಿ ಮುಂದಿನ ಸರಕಾರಗಳು ಹಂತಹಂತವಾಗಿ ಯೋಜನೆಯನ್ನೇ ಸ್ಥಗಿತಗೊಳಿಸಿಬಿಡಬಹುದು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರಕಾರವೇ ಉತ್ತಮವಾಗಿ ನಡೆಸುವುದು ಅತ್ಯುತ್ತಮ ವ್ಯವಸ್ಥೆ, ಖಾಸಗೀಕರಣವನ್ನು ಸದ್ಯಕ್ಕೆ ತಡೆಯುವ ಉಪಾಯ ಇಲ್ಲದ ಕಾರಣ ಖಾಸಗೀಕರಣದಿಂದ ಹೆಚ್ಚಳವಾದ ಶುಲ್ಕ ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಂದರೆಯುಂಟುಮಾಡಬಾರದೆಂಬ ಉದ್ದೇಶದ ಈ ಯೋಜನೆ ದೆಹಲಿಯಲ್ಲಿ ಯಶಸ್ವಿಯಾಗಲಿ, ದೇಶದೆಲ್ಲೆಡೆ ಇಂತಹ ಯೋಜನೆಗಳು ಜಾರಿಯಾಗಲಿ.

ಮೇ 21, 2015

Arvind Kejriwal vs Lieutenant Governor Najeeb Jung

Narasimhan Khadri
The public spat between Arvind Kejriwal and Lieutenant Governor Najeeb Jung is condemnable but inevitable, given the notorious and dubious roles played by governors and LGs in the past.

Read this story when modi as a CM had such vocal fight between his governor related to the appointment of lokayukta


Reforming the role and appointment process of the governors is the need of the hour. Whimsical and often adhoc manner that every union government uses in the appointments of governors should be done away with and a uniform procedures should be brought in, consistent with the federal nature of our polity. Raj bhavan cannot be a retirement homes for bureaucrats and aged politicians.

As they often do, media always picks the wrong end of the stick. Or rather the end which just creates noice more than anything alse. Salman khan verdict could have been used as a classical case of educating people about the dangers of drunken driving. All they did instead was to give ball-by-ball commentary about salman's road trip to the court. Similarly, Lieutenant Governor v/s Chief Minister issue can be used by the media to educate people about the intricacies about such conflicts and also lobby for reforms. 

Modi's supporters have used this occasion to pounce on Arvind Kejriwal and have labelled him as an anarchist who is not interested in governing but only controversies. It is true that Arvind Kejriwal should stop indulging in theatrics time and time again, there is not an iota of truth that he is doing mal-governance.His innovative idea of decentralized budget preparation, despite its many short comings, requires widest possible publicity. His attempts to bring transparency in the administration deserves credit which is due. Mainstream media has colour blindness for such issues. 

If the delhi Chief Minister can't chose his chief secretary and even that call will be taken by the Home minister or Lieutenant Governor then why did we have an election and why did our PM and his cabinet colleagues canvas?

To conclude, delhi government has raised a very valid issue that many Chief Ministers have raised in the past(including PM modi). It might still be for a half-state of delhi. One can indeed argue that it could have been done in a more mellowed voice. Popular CMs like kejriwal and Mamata Banerjee should learn the 'art' to take the combat into south block and not come back with empty hands.

Share your views
image source: ndtv

ಫೆಬ್ರ 24, 2015

‘ಎಕೆ 49’ ಎಕೆ 67 ಆದ ಯಶಸ್ಸಿನ ಕಥೆ

Dr Ashok K R
ರಾಜ್ಯವಲ್ಲದ ರಾಜ್ಯದ ಚುನಾವಣೆಯೊಂದು ದೇಶದ ರಾಜಕೀಯ ಭವಿಷ್ಯದ ದಾರಿಯನ್ನೇ ಬದಲಿಸಿಬಿಡುವ ಭಯ – ಆಶಾಭಾವನೆ ಮೂಡಿಸಿದೆ. ಈ ಭಯ ಮತ್ತು ಆಶಾಭಾವನೆಗಳೆರಡೂ ಪ್ರತಿಯೊಂದನ್ನೂ ಅತಿಗೆ ತೆಗೆದುಕೊಂಡು ಹೋಗುವ ಇವತ್ತಿನ ಸಾಮಾನ್ಯ ಮನಸ್ಥಿತಿಯ ಪ್ರತೀಕವಾಗಿದೆಯಾ? ದೆಹಲಿಯ ಚುನಾವಣೆಯ ನಂತರದಲ್ಲಿ ಮಾಧ್ಯಮ ಒಂದು ದೊಡ್ಡ ಯು – ಟರ್ನ್ ತೆಗೆದುಕೊಂಡು ಅರವಿಂದ್ ಕೇಜ್ರಿವಾಲ್ ಎಂಬ ನಾಯಕನ ಮತ್ತಾತನ ಆಮ್ ಆದ್ಮಿ ಪಕ್ಷದ ಗುಣಗಾನದಲ್ಲಿ ನಿಂತುಬಿಟ್ಟಿದೆ. ಸರಿಸುಮಾರು ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ಕಡೆಗಣಿಸಲ್ಪಟ್ಟ ವ್ಯಕ್ತಿಯೊಬ್ಬ ಮತ್ತೆ ಮೀಡಿಯಾ ಡಾರ್ಲಿಂಗ್ ಆಗಿಬಿಟ್ಟಿದ್ದು ಹೇಗೆ? ಗೆದ್ದೆತ್ತಿನ ವರದಿ ಮಾಡುವುದಕ್ಕೂ ಗೆದ್ದೆತ್ತಿನ ಬಾಲ ಹಿಡಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಮಾಧ್ಯಮದ ಸಹಾಯವಿದ್ದರೆ ಚುನಾವಣೆಯಲ್ಲಿ ಗೆಲುವು ಕಾಣಬಹುದು ಎಂಬುದಕ್ಕೆ ಹೋದ ಬಾರಿಯ ದೆಹಲಿಯ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಉದಾಹರಣೆಯಾಗಿದ್ದರೆ ಮಾಧ್ಯಮಕ್ಕೆ ಅಪ್ರಿಯರಾದರೂ ಜನರ ನೇರ ಸಂಪರ್ಕದಿಂದ ಚುನಾವಣೆಯೊಂದನ್ನು ಗೆಲ್ಲಬಹುದು ಎಂಬುದನ್ನು ನಿರೂಪಿಸಿದೆ ಈ ಬಾರಿಯ ದೆಹಲಿ ಚುನಾವಣೆ.

ಫೆಬ್ರ 10, 2015

ಗೆಲುವು ಕಂಡ ಆಮ್ ಆದ್ಮಿಗಿದು ಜವಾಬ್ದಾರಿ ಪರ್ವ!

ದೆಹಲಿ ಚುನಾವಣೆಗೆ ಸಂಬಂಧಪಟ್ಟಂತೆ ಬರೆದಿದ್ದ ಹಿಂದಿನ ಲೇಖನದ ಕೊನೆಯಲ್ಲಿ ಅರವಿಂದ್ ಕೇಜ್ರಿವಾಲರ ಅರಾಜಕತೆ ಕಿರಣ್ ಬೇಡಿಯವರ ಅನುಕೂಲಸಿಂಧುತ್ವಗಳೇನೇ ಇದ್ದರೂ ಪ್ರಾಮಾಣಿಕತೆಯ ವಿಷಯದಲ್ಲಿ ಸದ್ಯದ ಮಟ್ಟಿಗೆ ಇಬ್ಬರಲ್ಲೂ ತುಂಬ ವ್ಯತ್ಯಾಸಗಳನ್ನುಡುಕುವುದು ಕಷ್ಟ. ಕಿರಣ್ ಬೇಡಿಯವರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಬಿಜೆಪಿಗೆ ಮತ ಚಲಾಯಿಸುವವರು ಇರುವ ಹಾಗೆಯೇ ಬಿಜೆಪಿಯ ಅವಕಾಶವಾದಿತನದ ರಾಜಕಾರಣದಿಂದ ಬೇಸತ್ತು ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯ ಚುನಾವಣೆ ಹತ್ತಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕೊನೆಗೆ ಪ್ರಜಾಪ್ರಭುತ್ವ ಗೆಲ್ಲಲಿ ಎಂಬುದಷ್ಟೇ ಆಶಯ - ಎಂದು ಬರೆದಿದ್ದೆ. ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆ ಸ್ಪಷ್ಟ ಬಹುಮತದ ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಇಂದಿನ ಫಲಿತಾಂಶ ಕಾಂಗ್ರೆಸ್ಸಿನ ಧೂಳಿಪಟವನ್ನು ಖಚಿತಪಡಿಸಿ, ಬಿಜೆಪಿಗೂ ಅಘಾತಕಾರಿಯಾದಂತಹ ತೀರ್ಪು ನೀಡಿದ್ದಾರೆ ದೆಹಲಿಯ ಮತದಾರರು. ಇರುವ ಎಪ್ಪತ್ತು ಸೀಟುಗಳಲ್ಲಿ ಆಮ್ ಆದ್ಮಿ ಪಕ್ಷ 67ರಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಮೂರರಲ್ಲಿ ಮಾತ್ರ ಗೆಲುವು ಖಂಡಿದೆ. ಕಾಂಗ್ರೆಸ್ಸಿಗೆ ಒಂದೂ ಇಲ್ಲ!

ಫೆಬ್ರ 4, 2015

ಆಮ್ ಆದ್ಮಿ ಮತ್ತು ‘ಅಭಿವೃದ್ಧಿಯ’ ನಡುವೆ ಗೆಲುವು ಯಾರಿಗೆ?

delhi elections 2015
Dr Ashok K R
ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿ ಅರಾಜಕತೆ ಸೃಷ್ಟಿಸಲಿಕ್ಕಷ್ಟೇ ಲಾಯಕ್ಕು. ಅರಾಜಕತೆ ಸೃಷ್ಟಿಸುವ ಕೇಜ್ರಿವಾಲ್ ಕಾಡಿಗೆ ಹೋಗಿ  ನಕ್ಸಲರ ಜೊತೆ ಸೇರಲಿ ಎಂದು ನರೇಂದ್ರ ಮೋದಿ ಹೇಳುವುದರೊಂದಿಗೆ ದೆಹಲಿಯ ವಿಧಾನಸಭಾ ಚುನಾವಣೆ ರಂಗೇರಿತು. ಕಳೆದ ಬಾರಿಯ ಚುನಾವಣೆಯಲ್ಲಿ ವಿಶ್ಲೇಷಕರು ಮತ್ತು ರಾಜಕಾರಣಿಗಳೆಲ್ಲ ಅಚ್ಚರಿ ಪಡುವಂತಹ ಗೆಲುವು ಕಂಡಿತ್ತು ಆಮ್ ಆದ್ಮಿ ಪಕ್ಷ. ಯು.ಪಿ.ಎ ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ಕಟ್ಟಿದ ಅಣ್ಣಾ ಹಜಾರೆ ನೇತೃತ್ವದ ತಂಡದ ಸದಸ್ಯರಲ್ಲೊಬ್ಬರಾದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕಿಳಿದಾಗ ಸ್ವತಃ ಅಣ್ಣಾ ಹಜಾರೆ ಬೆಂಬಲ ನೀಡಲಿಲ್ಲ. ಭ್ರಷ್ಟಾಚಾರಿ ವಿರೋಧಿ ಆಂದೋಲನದ ಅನೇಕರು ಬೆಂಬಲಿಸದಿದ್ದರೂ ಅರವಿಂದ್ ಕೇಜ್ರಿವಾಲ್ ರಾಜಕಾರಣಕ್ಕೆ ಧುಮುಕಿದಾಗ ನಕ್ಕವರೇ ಹೆಚ್ಚು. ದೆಹಲಿಯನ್ನು ವಿಶೇಷ ಗಮನದಲ್ಲಿರಿಸಿಕೊಂಡು ಚುನಾವಣೆಗೆ ನಿಂತಾಗ ಬಿಜೆಪಿಗೆ ಒಂದೆಡೆ ಖುಷಿಯೇ ಆಗಿತ್ತು. ಹತ್ತು ವರುಷದ ಕಾಂಗ್ರೆಸ್ಸಿನ ದುರಾಡಳಿತದಿಂದ ಬೇಸತ್ತಿದ್ದ ಮತದಾರ ಬಿಜೆಪಿಗೆ ಬಹುಮತ ಕೊಡುತ್ತಾನೆ ಎಂಬ ನಂಬಿಕೆಯಿತ್ತು. ಬಿಜೆಪಿಯನ್ನು ವಿರೋಧಿಸುವ ಮತದಾರರ ಓಟು ಕಾಂಗ್ರೆಸ್ಸಿಗೂ ಹೋಗದೆ ಆಮ್ ಆದ್ಮಿ ಪಕ್ಷಕ್ಕೆ ಬೀಳುತ್ತದೆ. ಎದುರಾಳಿಯ ಮತಗಳು ವಿಭಜನೆಯಾದರೆ ಅದರಿಂದ ತನಗೇ ಗೆಲುವು ಖಂಡಿತ ಎಂಬ ಭಾವನೆಯಿತ್ತು. ಅವರ ನಂಬುಗೆ ಪೂರ್ಣ ನಿಜವಾಗಲಿಲ್ಲ. ಕಾಂಗ್ರೆಸ್ಸಿನ ಓಟು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಎಂಟು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಿತು. ಆದರೆ ಬಿಜೆಪಿಗೂ ಬಹುಮತ ದೊರಕಲಿಲ್ಲ. ಮೂವತ್ತೆರಡು ಸ್ಥಾನಗಳನ್ನು ಗಳಿಸಲು ಯಶಸ್ವಿಯಾದ ಬಿಜೆಪಿ ಸರಳ ಬಹುಮತಕ್ಕೆ ನಾಲ್ಕು ಸ್ಥಾನಗಳಷ್ಟು ಕೊರತೆಯನ್ನಭುವಿಸಿತು. ಎಲ್ಲರ ನಿರೀಕ್ಷೆಯನ್ನೂ ಮೀರಿ ಆಮ್ ಆದ್ಮಿ ಪಕ್ಷ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಯಾರಿಗೂ ಬಹುಮತ ಸಿಗದ ಕಾರಣ ಸರಕಾರ ರಚನೆಗೊಂದಷ್ಟು ಕಸರತ್ತು ನಡೆದು ಅಲ್ಲಿಯವರೆಗೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್ಸಿನ ‘ಬಾ-ಹ್ಯ ಬೆಂಬಲ’ದೊಡನೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. ಜನಲೋಕಪಾಲ್ ಮಸೂದೆಯ ನೆಪದಿಂದ ಅರವಿಂದ್ ಕೇಜ್ರಿವಾಲ್ ನಲವತ್ತೊಂಬತ್ತು ದಿನಕ್ಕೆ ರಾಜೀನಾಮೆಯನ್ನೂ ನೀಡಿಬಿಟ್ಟರು! ರಾಜಕಾರಣದಲ್ಲಿ ಅದವರ ಮೊದಲ ತಪ್ಪಾಯಿತು. ನಂತರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿತು. ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಯಶಸ್ಸು ಗಳಿಸಿತು. ಆದರೂ ದೆಹಲಿಯ ಚುನಾವಣೆಯ ಬಗ್ಗೆ ಆತುರ ತೋರಲಿಲ್ಲ ಬಿಜೆಪಿ. ಆತುರ ತೋರದೆ ತಪ್ಪು ಮಾಡಿತಾ? ದೆಹಲಿ ಚುನಾವಣೆಯ ಸುತ್ತಮುತ್ತಲಿನ ಬೆಳವಣಿಗೆಗಳು ತಪ್ಪು ಮಾಡಿತೆಂದೇ ಹೇಳುತ್ತಿವೆ. ಚುನಾವಣಾ ಫಲಿತಾಂಶ ಏನೇ ಆಗಬಹುದು, ಸದ್ಯದ ಮಟ್ಟಿಗಂತೂ ಬಿಜೆಪಿಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ರಾಜಕೀಯವಲ್ಲದ ರಾಜಕಾರಣ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆದ್ದುಬಿಟ್ಟಿದ್ದಾರೆ!

ಜನ 31, 2015

AAP Manifesto

1. Aam Aadmi Party resolves to legislate the Delhi Jan Lokpal Bill after coming to power.
2. Aam Aadmi Party will legislate the Swaraj Act to devolve power directly to the people.
3. Acting within constitutional framework AAP will use its moral nd political authority to push fr full statehood for Delhi
4. Aam Aadmi Party government will keep its promise of reducing electricity bills by half.

Kiran Bedi's Blue Print

Here's a 20-point plan for Housing, Civic Infrastructure and Transportation that will raise the quality of life for Delhi.
1) Pukka housing for jhuggie dwellers – under the Jan Punarvas Yojana; multi-level housing for people residing in jhuggies
2) Simplify housing allotment rules and convert leasehold to freehold, where appropriate

ಜನ 6, 2015

ಆರ್ಡಿನೆನ್ಸ್ ರಾಜ್ ವಿರುದ್ಧ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

aap karnataka protest
ಪತ್ರಿಕಾ ಪ್ರಕಟಣೆ
ಅಧಿವೇಶನವಿರದ ಸಂದರ್ಭವನ್ನು ಬಳಸಿಕೊಂಡು, ಲೋಕಸಭೆಯಲ್ಲಿ ಚರ್ಚಿಸದೇ ಕೇಂದ್ರದ ಬಿ.ಜೆ.ಪಿ. ಸರ್ಕಾರವು ವಾಮಮಾರ್ಗದಿಂದ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ರಾಷ್ಟ್ರಪತಿಯವರ ಅಂಗೀಕಾರವನ್ನು ಪಡೆಯಲಾಗಿರುವ ಈ ತಿದ್ದುಪಡಿಗಳು ಸಂಪೂರ್ಣವಾಗಿ ಜನವಿರೋಧಿ ಮತ್ತು ರೈತವಿರೋಧಿಯಾಗಿವೆ. ಸಹಿ ಹಾಕುವ ಸಂದರ್ಭದಲ್ಲಿ ರಾಷ್ತ್ರಪತಿಗಳು ಸಹ, ತುರ್ತಾಗಿ ಈ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ.