ಮೇ 14, 2014

ಬೆಳ್ಳಂದೂರು ಕೆರೆಯ ಸ್ವಗತ

ರಮ್ಯ ವರ್ಷಿಣಿ
ನಾನು ಒಂದು ಕಾಲದಲ್ಲಿ ಹಸುರಿನಿಂದ ಕಂಗೊಳಿಸ್ತಿದ್ದೆ. ಒಂದು ಸಾರಿ ನನ್ನ ಕಡೆ ಕಣ್ಣು ಹಾಯಿಸಿ ನೋಡಿದ್ರೆ ಎಂಥವರನ್ನು ಆಕರ್ಷಣೆ ಮಾಡಿ ನನ್ನ ಕಡೆ ಸೆಳೆದುಕೊಳ್ತಿದ್ದೆ. ನನ್ನ ಸುತ್ತಾಮುತ್ತಲ ಹಸಿರು ಎಲ್ಲರ ಬಾಯಲ್ಲೂ ಅಬ್ಬಾಬ್ಬಾ ಅನ್ನಿಸೊ ಹಾಗೆ ಮನಸೂರೆ ಮಾಡಿತ್ತು. ನೀವ್ ನೋಡ್ತಿರೋ ನಾನು ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳೆಂದೂರು ಕೆರೆ.

ಮೇ 7, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 29

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 28 ಓದಲು ಇಲ್ಲಿ ಕ್ಲಿಕ್ಕಿಸಿ

ತರಗತಿಗಳನ್ನು ಮುಗಿಸಿಕೊಂಡು ಎಲ್ಲರೂ ಮನೆಯತ್ತ ಹೊರಟಿದ್ದರು. ಪೂರ್ಣಿಮಾ ಲೋಕಿಯೊಡನೆ ಕಾರಿಡಾರಿನಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಳು.
“ಥ್ಯಾಂಕ್ಸ್ ಲೋಕಿ” ಎಂದಳು.
“ಯಾಕೆ?”

ಮೇ 1, 2014

ಬೆಳ್ಳಕ್ಕಿಗಳ ಪ್ರಪಂಚ


ಆದರ್ಶವೇ ಬೆನ್ನು ಹತ್ತಿ .... ಭಾಗ 28

 ಡಾ ಅಶೋಕ್ ಕೆ ಆರ್

ಆದರ್ಶವೇ ಬೆನ್ನು ಹತ್ತಿ ಭಾಗ 27 ಓದಲು ಇಲ್ಲಿ ಕ್ಲಿಕ್ಕಿಸಿ

ನಗರ ಕೇಂದ್ರ ಗೃಂಥಾಲಯ. ತರಾಸುರವರ ತಿರುಗುಬಾಣವನ್ನು ಎದುರಿಗಿಟ್ಟುಕೊಂಡು ಕುಳಿತಿದ್ದಾಳೆ ಕೀರ್ತನಾ. ಒಂದು ಪುಟ ಓದ್ತಾಳೆ; ನಂತರ ಪುಸ್ತಕ ಜೋಡಿಸಿದ್ದ ಸಾಲಿನತ್ತ ನೋಡುತ್ತಾ ಅಲ್ಲಿರೋ ಜನರನ್ನು ನೋಡಿ ಬೇಸರಪಟ್ಟು ಮತ್ತೊಂದು ಪುಟ ತಿರುವುತ್ತಾ ಓದುವುದರಲ್ಲಿ ಮಗ್ನಳಾಗುತ್ತಾಳೆ. ಅವಳು ಗೃಂಥಾಲಯಕ್ಕೆ ಬರುತ್ತಿರುವುದು ಇದು ಎರಡನೆಯ ಬಾರಿ. ಮೊದಲ ಬಾರಿ ಬಂದಾಗ ಧೈರ್ಯ ಸಾಲದೆ ಅಂದುಕೊಂಡ ಕೆಲಸವನ್ನು ಸಾಧಿಸದೇ ವಾಪಸ್ಸಾಗಿದ್ದಳು.

ಏಪ್ರಿ 23, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 27

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 26 ಓದಲು ಇಲ್ಲಿ ಕ್ಲಿಕ್ಕಿಸಿ


‘ಘಟ್ಟಗಳಲ್ಲಿ ನಕ್ಸಲ್ ಚಳುವಳಿ ಬಲವಾಗಿ ಬೇರೂರುತ್ತಿದೆ’ ಎಂದು ಗುಪ್ತಚರರು ಸರ್ಕಾರಕ್ಕೆ ಅನೇಕ ಬಾರಿ ವರದಿ ಕಳುಹಿಸಿದ್ದರು. ಎಲ್ಲಾ ವಿಷಯಗಳಲ್ಲೂ ನಿರ್ಲಕ್ಷ್ಯ ತೋರುವ ಸರ್ಕಾರಕ್ಕೆ ಆ ವರದಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದೆನಿಸಲೇ ಇಲ್ಲ. ಎಲ್ಲಾ ವರದಿಗಳಂತೆ ಅದೂ ಧೂಳು ತಿನ್ನುತ್ತಾ ಕುಳಿತುಕೊಂಡಿತ್ತು. ಆದರೆ ಪತ್ರಿಕಾ ವರದಿಗಳು ಸರ್ಕಾರವನ್ನು ಬೆಚ್ಚಿಬೀಳಿಸಿದವು. ನಕ್ಸಲ್ ಚಳುವಳಿಯಿರಲಿ, ದೇಶದಲ್ಲಿ ನಡೆದ, ನಡೆಯುತ್ತಿರುವ ಯಾವೊಂದು ಚಳುವಳಿಯ ಒಳ ಹೊರಗು; ಆಗು ಹೋಗುಗಳು ಗೊತ್ತಿಲ್ಲದ ರಾಜಕಾರಣಿಗಳೆಲ್ಲಾ ದಿನಕ್ಕೊಂದು ಮಾತನ್ನಾಡಲಾರಂಭಿಸಿದವು.

ಕಬೀರನ ಪರ ಹೋರಾಟ ದಿಕ್ಕು ತಪ್ಪದಿರಲಿ

ಕಬೀರನ ಹತ್ಯೆಯ ವಿರುದ್ಧದ ಪ್ರತಿಭಟನೆ ಆತನ ಧರ್ಮದ ಕಾರಣದಿಂದಾಗಿ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಿರುವಾಗ ಮುನೀರ್ ಕಾಟಿಪಳ್ಳ ಬರೆದಿರುವ ಈ ಪುಟ್ಟ ಲೇಖನ ಪ್ರಸ್ತುತವೆನ್ನಿಸಿತು.

ಕಬೀರನ ಹತ್ಯೆ ಮಾಡಿದ್ದು ಪ್ರಭುತ್ವ. ಪ್ರಭುತ್ವ ಮಾಡಿರುವ ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕೇವಲ ಮುಸ್ಲಿಮರ ಜವಾಬ್ದಾರಿ ಅಲ್ಲ.ಇದು ಮುಸ್ಲಿಮರಿಗೆ ಸೀಮಿತವಾದ ವಿಷಯವೂ ಅಲ್ಲ. ಪ್ರಭುತ್ವ ಮಾಡಿದ ಕೊಲೆಯ ವಿರುದ್ದ ಹೋರಾಟದಲ್ಲಿ ಇಡೀ ಜನ ಸಮೂಹ ಪಾಲ್ಗೊಳ್ಳಬೇಕು.ಆ ರೀತಿಯ ಐಕ್ಯ ಹೋರಾಟ ನಡೆದರೆ ಮಾತ್ರ ಕಬೀರ್ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಅಂತಹ ಐಕ್ಯ ಹೋರಾಟದ ಅಪೂರ್ವ ಸನ್ನಿವೇಶ ನಿರ್ಮಾಣವಾಗುತ್ತಿರುವುದನ್ನು ಕಂಡು, ಜನಚಳುವಳಿ ಎದ್ದುಬರುತ್ತಿರುವುದನ್ನು ಕಂಡು ಪ್ರಭುತ್ವ ಬೀತಿಗೊಂಡಿದೆ. ಹಿಂದು ಮುಸ್ಲಿಂ ಹೀಗೆ ಎಲ್ಲಾ ವಿಭಾಗದ ಜನ ಕಬೀರ್ ತಮ್ಮ ಮನೆಯ ಮಗನೇನೋ ಎಂಬಂತೆ ಕಬೀರ್ ಪರ ದನಿ ಎತ್ತುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ.ಈ ಹೋರಾಟವನ್ನು ಹೇಗಾದರು ಮುರಿಯಬೇಕು ಎಂದು ಪಿತೂರಿ ನಡೆಸತೊಡಗಿದೆ.

ಏಪ್ರಿ 22, 2014

ಕಬೀರನ ಸಾವು; ಮನುಷ್ಯತ್ವದ ಎದೆಗೆ ಬಿದ್ದ ಗುಂಡು.

ಉಷಾ ಕಟ್ಟೀಮನಿ

ಯಾವನೋ ಒಬ್ಬ ಸಾಬಿ, ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ. ಇನ್ಯಾರಿಗೋ ಆ ಸುದ್ದಿ ತಲುಪಿ ಅವರು ಒಂದಷ್ಟು ಜನ ಗುಂಪು ಸೇರಿಕೊಂಡು ಬಂದು ಆ ಸಾಬಿಯನ್ನು ದನ ಬಡಿದಂತೆ ಬಡಿಯುತ್ತಾರೆ-ಇಲ್ಲಿನ ಶಬ್ದ ಪ್ರಯೋಗವನ್ನು ಗಮನಿಸಿ, ಅಂದರೆ ದನಕ್ಕೆ ಬಡಿಯುವುದು ಟೇಕನ್ ಫಾರ್ ಗ್ರೆಂಟೆಡ್ ಅಂತನಾ?

ಏಪ್ರಿ 17, 2014

ಪ್ರಜಾಪ್ರಭುತ್ವದ ಆರೋಗ್ಯದ ಮಾಪಕ ಪತ್ರಿಕೋದ್ಯಮ



ಡಾ ಅಶೋಕ್ ಕೆ ಆರ್

ಪ್ರಜಾಪ್ರಭುತ್ವ ಮಾಧ್ಯಮಗಳ ಪಾತ್ರ ಪ್ರಮುಖವಾದುದು. ಆ ಕಾರಣದಿಂದಲೇ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ಮೂರು ಆಧಾರ ಸ್ಥಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗದ ಜೊತೆಗೆ ಸಮೀಕರಿಸಿ ನಾಲ್ಕನೇ ಸ್ಥಂಭವಾಗಿ ಗುರುತಿಸಲಾಗಿದೆ. ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪತ್ರಿಕೋದ್ಯಮದ ಕೊಡುಗೆ ಅಪಾರ. ಪತ್ರಿಕೋದ್ಯಮಕ್ಕಿರುವ ಸ್ವಾತಂತ್ರ್ಯ ಮತ್ತು ಪತ್ರಕರ್ತರಿಗಿರುವ ರಕ್ಷಣೆಯ ಆಧಾರದ ಮೇಲೆ ಆ ಸಮಾಜದ ಆರೋಗ್ಯವನ್ನಳೆಯುವುದೂ ಇದೆ. Reporters without borders ಸಂಸ್ಥೆಯ ಅಧ್ಯಯನದ ಅನ್ವಯ ಭಾರತ ಪತ್ರಿಕೋದ್ಯಮದ ವಿಷಯದಲ್ಲಿ ಗಳಿಸಿರುವುದು 143ನೇ ಸ್ಥಾನ! ಇತ್ತೀಚಿನ ವರುಷಗಳಲ್ಲಿ ಭಾರತದಲ್ಲಿ ಪತ್ರಿಕೋದ್ಯಮಿಗಳ ಮೇಲೆ ಪತ್ರಕರ್ತರ ಮೇಲಿನ ಹಲ್ಲೆಯ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. 2013ರಲ್ಲಿ ಭಾರತದ ಎಂಟು ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗುತ್ತದೆ. ಈ ಸಂಖ್ಯೆ ಪತ್ರಕರ್ತರಿಗೆ ಅಪಾಯಕಾರಿ ದೇಶವೆನ್ನಿಸಿಕೊಂಡಿರುವ ಪಾಕಿಸ್ತಾನಕ್ಕಿಂತಲೂ ಹೆಚ್ಚು ಎಂಬುದು ಭಾರತದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನೆನಪಿಸುತ್ತದೆ.