ನವೆಂ 2, 2012
ನವೆಂ 1, 2012
ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!
ಡಾ
ಅಶೋಕ್ ಕೆ ಆರ್
ಜಮೀನ್ದಾರಿ ಪದ್ಧತಿಯ ವಿರುದ್ಧ, ಭೂರಹಿತರಿಗೆ ಭೂಮಿ ಹಂಚುವ ಪರವಾಗಿ ಪ್ರಾರಂಭವಾದ ನಕ್ಸಲ್ ಬರಿ ಹೋರಾಟ ಭಾರತದ ಚಳುವಳಿಗಳ ಇತಿಹಾಸದಲ್ಲಿ ಕ್ರಮಿಸಿರುವ ಹಾದಿ ದೊಡ್ಡದು, ವಿಸ್ತಾರವಾದುದು. ತನ್ನೊಳಗೇ ಕಾಲಕಾಲಕ್ಕೆ ನಡೆದ ಸೈದ್ಧಾಂತಿಕ ಸಂಘರ್ಷಗಳು, ಒಡಕುಗಳು, ಹಿಂಸಾತ್ಮಕ ಚಳುವಳಿಗಳ ಬಗ್ಗೆ ಮುಖ್ಯವಾಹಿನಿಯ ಬಹುತೇಕ ಜನರಲ್ಲಿರುವ ಭಯಭರಿತ ತಿರಸ್ಕಾರ, ಸಾವಿರಾರು ಕಾರ್ಯಕರ್ತರ – ಮುಖಂಡರ ಸಾವಿನ ನಂತರವೂ ನಕ್ಸಲ್ ಚಳುವಳಿ ಅಂತ್ಯ ಕಂಡಿಲ್ಲ. ನಕ್ಸಲೈಟ್, ಸಿಪಿಐ – ಎಂ.ಎಲ್, ಪೀಪಲ್ಸ್ ವಾರ್ ಗ್ರೂಪ್ ಮುಂತಾದ ಹೆಸರುಗಳಲ್ಲಿ ಚಲಾವಣೆಗೊಳ್ಳುತ್ತಲೇ ಇರುವ ಈ ಸಿದ್ಧಾಂತ ಹತ್ತನ್ನೆರಡು ವರುಷದ ಹಿಂದೆ ಸಣ್ಣ ಸಣ್ಣ ಸಂಘಟನೆಗಳ ವಿಲೀನದ ನಂತರ ಪಡೆದ ಹೆಸರು ಸಿಪಿಐ – ಮಾವೋವಾದಿ. ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಉಚ್ಛರಿಸಿರುವುದನ್ನು ಕೇಳಿರುವಿರಾದರೆ ಈ ಚಳುವಳಿ ಭಾರತದ ಅತಿದೊಡ್ಡ ಆಂತರಿಕ ಶತ್ರು. ಸಾವಿರಾರು ಪೋಲೀಸರು – ಅರೆಸೈನಿಕ ಪಡೆ, ಕೋಟ್ಯಾಂತರ ರುಪಾಯಿಯ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ತಂತ್ರಜ್ಞಾನ, ಅಭಿವೃದ್ಧಿ – ವಿಕಾಸ ಹೊಂದಲು ನಮ್ಮೊಡನೆ ಕೈಜೋಡಿಸಿ ಎಂಬ ಸರಕಾರದ ಘೋಷಣೆಗಳ ನಡುವೆಯೂ ತನ್ನದೇ ಮಾರ್ಗದಲ್ಲಿ ದೇಶದ ವಿವಿಧ ರಾಜ್ಯ – ಜಿಲ್ಲೆಗಳಲ್ಲಿ ನಕ್ಸಲ್ ಚಳುವಳಿ ಬೆಳೆಯುತ್ತಲೇ ಸಾಗುತ್ತಿದೆ. ಕೆಲವೊಮ್ಮೆ ಅಬ್ಬರದಿಂದ, ಕೆಲವೊಮ್ಮೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನಕ್ಸಲ್ ಚಳುವಳಿಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮೂಡಿ ಬಂದ ಪರಿಣಾಮಕಾರಿ ಚಿತ್ರ ಪ್ರಕಾಶ್ ಝಾ ನಿರ್ದೇಶನದ “ಚಕ್ರವ್ಯೂಹ”.
ಅಕ್ಟೋ 31, 2012
Blood soaked technology
Dr Ashok K R
When we hear or see or read about countries like uganda, rwanda, congo its about the poverty stricken people, malnourished children and unending civil wars. These countries which are naturally rich with the forests which cover the most valuable minerals, the minerals which have become a necessity for modern day technology, are considered underdeveloped nations. Their blood efforts are used to build the developed nations, the technological advancement of the modern world. Can life be this much terrific in the same world where we are living? The documentary Blood in the mobiles by Frank Poulsen on the conflict minerals that are used in mobile and other companies gives a disturbing picture of the truth behind our advanced gadgets. This is the era of neo slavery and we all who use the gadgets indirectly participate in this what can be called as world war III.
When we hear or see or read about countries like uganda, rwanda, congo its about the poverty stricken people, malnourished children and unending civil wars. These countries which are naturally rich with the forests which cover the most valuable minerals, the minerals which have become a necessity for modern day technology, are considered underdeveloped nations. Their blood efforts are used to build the developed nations, the technological advancement of the modern world. Can life be this much terrific in the same world where we are living? The documentary Blood in the mobiles by Frank Poulsen on the conflict minerals that are used in mobile and other companies gives a disturbing picture of the truth behind our advanced gadgets. This is the era of neo slavery and we all who use the gadgets indirectly participate in this what can be called as world war III.
ಅಕ್ಟೋ 30, 2012
. . . ದೂರದಲ್ಲಿ
ಡಾ. ಅಶೋಕ್. ಕೆ. ಆರ್
‘ದುಡಿಯೋ ವಯಸ್ನಲ್ಲಿ ಮನೇಲಿ
ಕುಂತವ್ನೆ, ದಂಡಪಿಂಡ’ “ಇದ್ಯಾಕ್ ಮಗಾ ಬೆಂಗ್ಳೂರಿಗೆ ಹೋಗ್ಲಿಲ್ವಾ ಇವತ್ತು” ಬಾಗಿಲು ತಳ್ಳುತ್ತಾ
ಒಳಬಂದ ಚಿಕ್ಕಪ್ಪ ಪತ್ರಿಕೆ ಓದುತ್ತಿದ್ದ ದಿಲೀಪನನ್ನು ವ್ಯಂಗ್ಯದಿಂದ ನೋಡುತ್ತಾ ಕೇಳಿದರು. ವ್ಯಂಗ್ಯದ
ಅರಿವಾಗದೆ ಇರಲಿಲ್ಲ ದಿಲೀಪನಿಗೆ. ‘ಅದನ್ನೆಲ್ಲಾ ಕಟ್ಟಿಕೊಂಡು ನಿಮಗೇನ್ರಿ ಆಗಬೇಕು’ “ಓ! ಬನ್ನಿ ಚಿಕ್ಕಪ್ಪ.
ಇವತ್ತೊಂದಷ್ಟು ಕಾಯಿ ಕೀಳಿಸಬೇಕಿತ್ತು ಅದಿಕ್ಕೆ ಉಳ್ಕೊಂಡೆ” ಎಂದೆನ್ನುತ್ತಾ ಪತ್ರಿಕೆ ಮಡಿಚಿದ.
‘ಬೆಂಗ್ಳೂರಿಗೆ ಹೋಗೆ ನೀನು ಕಿಸಿಯೋದೂ ಅಷ್ಟರಲ್ಲೇ ಇದೆ ಬಿಡು’ “ಹ್ಞು. ನಾನು ಈ ವಾರ ಕಾಯಿ ಕೀಳಿಸ್ಬೇಕು
ಅಂದ್ಕೋತಿದ್ದೆ ನೋಡು. ಅಂದ್ಹಂಗೆ ಅಣ್ಣ ಎಲ್ಲೋದ್ರು”
ಅಕ್ಟೋ 28, 2012
ಆಯಾಮ
ಡಾ. ಅಶೋಕ್. ಕೆ. ಆರ್.
‘ಈ
ರೀತಿ ದಿನಗಟ್ಟಲೆ ಮಳೆ ಸುರಿದಿದ್ದೇ ಇಲ್ಲ ನಮ್ಮೂರಲ್ಲಿ’ ಸಂಜೆ ಆಫೀಸಿನಲ್ಯಾರೋ ಹೇಳಿದ ಮಾತುಗಳನ್ನು
ಮೆಲಕುಹಾಕುತ್ತ ಕಿಟಕಿಯ ಬಳಿ ನಿಂತಿದ್ದ ರಾಜು ಮೌಳೇಶ್ವರ್. ಭೂರಮೆಯನ್ನೇ ಸೀಳಿಹಾಕುವಂತಹ ಗುಡುಗಿನ
ಶಬ್ದಕ್ಕೆ ಎಚ್ಚರವಾಗಿ ರೂಮಿನಿಂದ ಹೊರಬಂದು ಮಳೆಯ ಆರ್ಭಟವನ್ನು ವೀಕ್ಷಿಸುತ್ತಿದ್ದ. ಯಾವ ಫೋನೂ ಬರದಿದ್ದರೆ
ಸಾಕಪ್ಪ ಎಂದುಕೊಳ್ಳುವಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್
ಮಾಡುವ ಹಾಗಿದಿದ್ದರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡ
ಅಕ್ಟೋ 19, 2012
ತನಿಖಾ ವರದಿಯ ನೈತಿಕತೆಯೇ ಪ್ರಶ್ನಾರ್ಹವೆನಿಸತೊಡಗಿದಾಗ?!
ಡಾ
ಅಶೋಕ್ ಕೆ ಆರ್
ಮಹಾಲಯ
ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ
ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು – ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ
ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ
ಸುದ್ದಿ. ಸತ್ತೋಳ ಬಗ್ಗೆ ನಿಜವೋ – ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು.
ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು
‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ
ಪಬ್ಲಿಕ್ ಟಿ ವಿ ಹಾಕಿದೆ!!
ಅಕ್ಟೋ 18, 2012
ಆದರ್ಶವೇ ಬೆನ್ನು ಹತ್ತಿ....ಭಾಗ 10
ಆದರ್ಶವೇ ಬೆನ್ನು ಹತ್ತಿ....ಭಾಗ 9
“ಈದು ಗ್ರಾಮದಲ್ಲಿ ನಕ್ಸಲರ ಹತ್ಯೆ”
ಹೆಡ್ಡಿಂಗಿನ
ಕೆಳಗೆ ಸತ್ತ ಹುಡುಗಿಯರ ಫೋಟೋ ಕೊಟ್ಟಿದ್ದರು. ಒಬ್ಬಳು ಪಾರ್ವತಿ, ಇನ್ನೊಬ್ಬಳು ಹಾಜೀಮಾ. ಯಶೋಧಾ ಎಂಬುವವಳಿಗೆ
ಕೂಡ ಗುಂಡೇಟು ತಗುಲಿ ಗಾಯಗಳಾಗಿದ್ದವಂತೆ. ಈದು ಗ್ರಾಮದಲ್ಲಿ ಜನರನ್ನು ಸಂಘಟಿಸುತ್ತಿದ್ದಾಗ ಅವರ ಮೇಲೆ
ಆಕ್ರಮಣ ಮಾಡಿದ ಪೋಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇವರೀರ್ವರೂ ಮೃತರಾಗಿದ್ದರು.
ಘಟನೆಯ ಸಂಪೂರ್ಣ ವಿವರಗಳನ್ನು ಓದಬೇಕೆಂದು ಪ್ರಾರಂಭಿಸಿದವನು ವಿಕ್ರಮ್ ಹೊರಬರುತ್ತಿದುದನ್ನು ನೋಡಿ
ಆತುರಾತುರವಾಗಿ ಪತ್ರಿಕೆಯನ್ನು ಮೇಜಿನ ಮೇಲಿಟ್ಟ. ‘ಯಾಕಿಷ್ಟು ಗಾಬರಿಗೊಂಡತಿದ್ದಾನೆ?’ ಎಂದು ಪೂರ್ಣಿಮಾ
ಪತ್ರಿಕೆಯ ಮುಖಪುಟ ನೋಡಿದಳು. ‘ಇವನೇನಾದರೂ. . .’ ಸಂಶಯ ಬಂತು.
ಅಕ್ಟೋ 13, 2012
ಮಲಾಳ ಯೂಸುಫ್ ಝಾಯಿಯ ಡೈರಿಯಿಂದ
![]() |
malala yousufzai |
ಪಾಕಿಸ್ತಾನಿ
ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ
ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ
ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ
ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್
ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!
ಅಕ್ಟೋ 11, 2012
ಆದರ್ಶವೇ ಬೆನ್ನು ಹತ್ತಿ....ಭಾಗ 9
ಆದರ್ಶವೇ ಬೆನ್ನು ಹತ್ತಿ....ಭಾಗ 8
ಅವರ ಜೊತೆಯೇ
ಇದ್ದ ರೂಪ “ನಿನಗೆ ವಿಷಯ ಗೊತ್ತಿಲ್ವಾ ಸಯ್ಯದ್ ಈ ಅಲಿ ಸರ್ ಮತ್ತು ಫಾತಿಮಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ,
ಮನೆಯವರೂ ಒಪ್ಪಿ ಮದುವೆಯ ಮಾತುಕತೆ ಮುಗಿದಿದೆಯಂತೆ”
“ಹೌದಾ?!!
ಈ ವಿಷಯದಲ್ಲಿ ನಾವೆಲ್ಲೋ ಎಡವಿಬಿಟ್ಟಿದ್ದೀವಿ ಅನ್ನಿಸ್ತಾ ಇಲ್ವಾ ಲೋಕಿ?”
ಅಕ್ಟೋ 9, 2012
ಕದ್ದ ಸಿನಿಮಾದ ಆಸ್ಕರ್ ಪಯಣ
![]() |
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು
ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ
‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ
ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ
ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು
ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ
ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ
ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ
ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ.
ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ
ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?