ಅಕ್ಟೋ 30, 2012

. . . ದೂರದಲ್ಲಿ



ಡಾ. ಅಶೋಕ್. ಕೆ. ಆರ್
‘ದುಡಿಯೋ ವಯಸ್ನಲ್ಲಿ ಮನೇಲಿ ಕುಂತವ್ನೆ, ದಂಡಪಿಂಡ’ “ಇದ್ಯಾಕ್ ಮಗಾ ಬೆಂಗ್ಳೂರಿಗೆ ಹೋಗ್ಲಿಲ್ವಾ ಇವತ್ತು” ಬಾಗಿಲು ತಳ್ಳುತ್ತಾ ಒಳಬಂದ ಚಿಕ್ಕಪ್ಪ ಪತ್ರಿಕೆ ಓದುತ್ತಿದ್ದ ದಿಲೀಪನನ್ನು ವ್ಯಂಗ್ಯದಿಂದ ನೋಡುತ್ತಾ ಕೇಳಿದರು. ವ್ಯಂಗ್ಯದ ಅರಿವಾಗದೆ ಇರಲಿಲ್ಲ ದಿಲೀಪನಿಗೆ. ‘ಅದನ್ನೆಲ್ಲಾ ಕಟ್ಟಿಕೊಂಡು ನಿಮಗೇನ್ರಿ ಆಗಬೇಕು’ “ಓ! ಬನ್ನಿ ಚಿಕ್ಕಪ್ಪ. ಇವತ್ತೊಂದಷ್ಟು ಕಾಯಿ ಕೀಳಿಸಬೇಕಿತ್ತು ಅದಿಕ್ಕೆ ಉಳ್ಕೊಂಡೆ” ಎಂದೆನ್ನುತ್ತಾ ಪತ್ರಿಕೆ ಮಡಿಚಿದ. ‘ಬೆಂಗ್ಳೂರಿಗೆ ಹೋಗೆ ನೀನು ಕಿಸಿಯೋದೂ ಅಷ್ಟರಲ್ಲೇ ಇದೆ ಬಿಡು’ “ಹ್ಞು. ನಾನು ಈ ವಾರ ಕಾಯಿ ಕೀಳಿಸ್ಬೇಕು ಅಂದ್ಕೋತಿದ್ದೆ ನೋಡು. ಅಂದ್ಹಂಗೆ ಅಣ್ಣ ಎಲ್ಲೋದ್ರು”

ಅಕ್ಟೋ 28, 2012

ಆಯಾಮ



     ಡಾ. ಅಶೋಕ್. ಕೆ. ಆರ್.
‘ಈ ರೀತಿ ದಿನಗಟ್ಟಲೆ ಮಳೆ ಸುರಿದಿದ್ದೇ ಇಲ್ಲ ನಮ್ಮೂರಲ್ಲಿ’ ಸಂಜೆ ಆಫೀಸಿನಲ್ಯಾರೋ ಹೇಳಿದ ಮಾತುಗಳನ್ನು ಮೆಲಕುಹಾಕುತ್ತ ಕಿಟಕಿಯ ಬಳಿ ನಿಂತಿದ್ದ ರಾಜು ಮೌಳೇಶ್ವರ್. ಭೂರಮೆಯನ್ನೇ ಸೀಳಿಹಾಕುವಂತಹ ಗುಡುಗಿನ ಶಬ್ದಕ್ಕೆ ಎಚ್ಚರವಾಗಿ ರೂಮಿನಿಂದ ಹೊರಬಂದು ಮಳೆಯ ಆರ್ಭಟವನ್ನು ವೀಕ್ಷಿಸುತ್ತಿದ್ದ. ಯಾವ ಫೋನೂ ಬರದಿದ್ದರೆ ಸಾಕಪ್ಪ ಎಂದುಕೊಳ್ಳುವಷ್ಟರಲ್ಲಿ ಲ್ಯಾಂಡ್ ಲೈನ್ ರಿಂಗಣಿಸಿತು. ಈ ಲ್ಯಾಂಡ್ ಲೈನನ್ನೂ ಸ್ವಿಚ್ ಆಫ್ ಮಾಡುವ ಹಾಗಿದಿದ್ದರೆ ಚೆನ್ನಾಗಿತ್ತು ಎಂದುಕೊಂಡು ರಿಸೀವರ್ ತೆಗೆದುಕೊಂಡ

ಅಕ್ಟೋ 19, 2012

ತನಿಖಾ ವರದಿಯ ನೈತಿಕತೆಯೇ ಪ್ರಶ್ನಾರ್ಹವೆನಿಸತೊಡಗಿದಾಗ?!



ಡಾ ಅಶೋಕ್ ಕೆ ಆರ್

ಮಹಾಲಯ ಅಮಾವಾಸೆಗೆಂದು ಶನಿವಾರ ಊರು ತಲುಪಿ ಕನ್ನಡದ ಸುದ್ದಿವಾಹಿನಿಗಳನ್ನು ನೋಡೋಣವೆಂದು ಚಾನೆಲ್ಲನ್ನು ಬದಲಿಸುತ್ತ ಕುಳಿತಾಗ ನಟಿ ಹೇಮಾಶ್ರಿಯ ಸಾವಿನ ಸುತ್ತ ಗೋಜಲು – ಗೊಂದಲಗಳನ್ನು ನಿರ್ಮಿಸುವಲ್ಲಿ ಎಲ್ಲಾ ವಾಹಿನಿಗಳೂ ಪೈಪೋಟಿಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವು. ‘ಅಯ್ಯೋ! ಮೂರು ದಿನದಿಂದ ಎಲ್ಲಾ ಚಾನೆಲ್ಲಿನಲ್ಲೂ ಇದೇ ಸುದ್ದಿ. ಸತ್ತೋಳ ಬಗ್ಗೆ ನಿಜವೋ – ಸುಳ್ಳೋ ಬೇಡದ ಮಾತನ್ನೆಲ್ಲಾ ಆಡುತ್ತಿದ್ದಾರೆ’ ಎಂದರು ಮನೆಯವರು. ಈ ಸುದ್ದಿ ವಾಹಿನಿಗಳ ಗೋಳೇ ಇಷ್ಟು ಎಂದುಕೊಳ್ಳುತ್ತಾ ಚಾನೆಲ್ ಬದಲಿಸಿದೆ. ಮಾರನೇ ದಿನ ಮತ್ತೊಂದು ‘ಪ್ರಹಸನಕ್ಕೆ’ ಕನ್ನಡ ವಾಹಿನಿಗಳು ಸಿದ್ಧಗೊಳ್ಳುತ್ತಿರಬಹುದೆಂಬ ಯಾವುದೇ ಸೂಚನೆಯಿಲ್ಲದೆ ಭಾನುವಾರ ಪಬ್ಲಿಕ್ ಟಿ ವಿ ಹಾಕಿದೆ!!

ಅಕ್ಟೋ 18, 2012

ಆದರ್ಶವೇ ಬೆನ್ನು ಹತ್ತಿ....ಭಾಗ 10



ಆದರ್ಶವೇ ಬೆನ್ನು ಹತ್ತಿ....ಭಾಗ 9


“ಈದು ಗ್ರಾಮದಲ್ಲಿ ನಕ್ಸಲರ ಹತ್ಯೆ”

ಹೆಡ್ಡಿಂಗಿನ ಕೆಳಗೆ ಸತ್ತ ಹುಡುಗಿಯರ ಫೋಟೋ ಕೊಟ್ಟಿದ್ದರು. ಒಬ್ಬಳು ಪಾರ್ವತಿ, ಇನ್ನೊಬ್ಬಳು ಹಾಜೀಮಾ. ಯಶೋಧಾ ಎಂಬುವವಳಿಗೆ ಕೂಡ ಗುಂಡೇಟು ತಗುಲಿ ಗಾಯಗಳಾಗಿದ್ದವಂತೆ. ಈದು ಗ್ರಾಮದಲ್ಲಿ ಜನರನ್ನು ಸಂಘಟಿಸುತ್ತಿದ್ದಾಗ ಅವರ ಮೇಲೆ ಆಕ್ರಮಣ ಮಾಡಿದ ಪೋಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇವರೀರ್ವರೂ ಮೃತರಾಗಿದ್ದರು. ಘಟನೆಯ ಸಂಪೂರ್ಣ ವಿವರಗಳನ್ನು ಓದಬೇಕೆಂದು ಪ್ರಾರಂಭಿಸಿದವನು ವಿಕ್ರಮ್ ಹೊರಬರುತ್ತಿದುದನ್ನು ನೋಡಿ ಆತುರಾತುರವಾಗಿ ಪತ್ರಿಕೆಯನ್ನು ಮೇಜಿನ ಮೇಲಿಟ್ಟ. ‘ಯಾಕಿಷ್ಟು ಗಾಬರಿಗೊಂಡತಿದ್ದಾನೆ?’ ಎಂದು ಪೂರ್ಣಿಮಾ ಪತ್ರಿಕೆಯ ಮುಖಪುಟ ನೋಡಿದಳು. ‘ಇವನೇನಾದರೂ. . .’ ಸಂಶಯ ಬಂತು.

ಅಕ್ಟೋ 13, 2012

ಮಲಾಳ ಯೂಸುಫ್ ಝಾಯಿಯ ಡೈರಿಯಿಂದ



malala yousufzai

ಪಾಕಿಸ್ತಾನಿ ತಾಲಿಬಾನಿಗಳಿಂದ ಗುಂಡೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಈ ಹೋರಾಟಗಾರ್ತಿ ಮಾಡಿದ ತಪ್ಪಾದರೂ ಏನು? ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂಬ ತಾಲಿಬಾನ್ ಆದೇಶವನ್ನು ವಿರೋಧಿಸಿದ್ದೇ ಇವಳ ಅಪರಾಧ! ಎರಡು ವರುಷದ ಮುಂಚೆ ಬರೆದ ದಿನಚರಿಗಳನ್ನು ಗುಲ್ ಮಕಾಯಿ ಎಂಬ ಕಾವ್ಯನಾಮದಡಿಯಲ್ಲಿ ಬಿಬಿಸಿ ಉರ್ದುವಿನಲ್ಲಿ ಪ್ರಕಟಣೆಗೆ ನೀಡಿದ್ದು ಇವಳ ಬಹುದೊಡ್ಡ ತಪ್ಪು. ಅಂದಹಾಗೆ ಮಲಾಳ ಯೂಸುಫ್ ಝಾಯಿ ಎಂಬ ಹೆಸರಿನ ಈ ಹೋರಾಟಗಾರ್ತಿಯ ವಯಸ್ಸು ಹದಿನಾಲ್ಕು!

ಅಕ್ಟೋ 11, 2012

ಆದರ್ಶವೇ ಬೆನ್ನು ಹತ್ತಿ....ಭಾಗ 9


ಆದರ್ಶವೇ ಬೆನ್ನು ಹತ್ತಿ....ಭಾಗ 8

 ಅವರ ಜೊತೆಯೇ ಇದ್ದ ರೂಪ “ನಿನಗೆ ವಿಷಯ ಗೊತ್ತಿಲ್ವಾ ಸಯ್ಯದ್ ಈ ಅಲಿ ಸರ್ ಮತ್ತು ಫಾತಿಮಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಮನೆಯವರೂ ಒಪ್ಪಿ ಮದುವೆಯ ಮಾತುಕತೆ ಮುಗಿದಿದೆಯಂತೆ”

“ಹೌದಾ?!! ಈ ವಿಷಯದಲ್ಲಿ ನಾವೆಲ್ಲೋ ಎಡವಿಬಿಟ್ಟಿದ್ದೀವಿ ಅನ್ನಿಸ್ತಾ ಇಲ್ವಾ ಲೋಕಿ?”

ಅಕ್ಟೋ 9, 2012

ಕದ್ದ ಸಿನಿಮಾದ ಆಸ್ಕರ್ ಪಯಣ



ranbir

ಡಾ ಅಶೋಕ್ ಕೆ ಆರ್
“ಬಿಡ್ರೀ ರೀ. ಆಸ್ಕರ್ ಪ್ರಶಸ್ತಿ ಕೊಡೋದು ಪರದೇಶದೋರು. ಅದು ಸಿಗದಿದ್ರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು” ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳುತ್ತೇವಾದರೂ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರದ ಸಂಗೀತಕ್ಕೆ ಎ. ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಬಂದಾಗ ಖುಷಿಪಟ್ಟಿದ್ದು ಸುಳ್ಳಲ್ಲ. ಮುಂದೊಂದು ದಿನ ಭಾರತೀಯ ಭಾಷೆಯ ಚಿತ್ರವೊಂದಕ್ಕೆ ಆಸ್ಕರ್ ದೊರೆತರೆ ಅಭೂತಪೂರ್ವವಾಗಿ ಸಂಭ್ರಮಿಸುವುದೂ ಸತ್ಯ. ಇಲ್ಲಿಯವರೆಗೆ ಭಾರತ ನಲವತ್ತೈದು ಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆಂದು ಕಳುಹಿಸಿದೆಯಾದರೂ ಯಾವೊಂದು ಚಿತ್ರವೂ ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು ಬೆರಳೆಣಿಕೆಯ ಚಿತ್ರಗಳಷ್ಟೇ. ಭಾರತೀಯ ಚಿತ್ರವೆಂದರೆ ಹಿಂದಿ ಚಿತ್ರಗಳು ಮಾತ್ರ ಎಂಬ ಪೂರ್ವಗ್ರಹವೂ ಇದಕ್ಕೆ ಕಾರಣ ಎಂದರೆ ತಪ್ಪಲ್ಲ. ನಲವತ್ತೈದು ಚಿತ್ರಗಳಲ್ಲಿ ಮೂವತ್ತು ಹಿಂದಿ ಭಾಷೆಯವು, 8 ತಮಿಳು, ಮಲಯಾಳಂ, ಮರಾಠಿ ಬಂಗಾಳಿಯ ಎರಡು ಮತ್ತು ಉರ್ದುವಿನ ಒಂದು ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಲಾಗಿದೆ. ಈ ವರ್ಷ ಆಸ್ಕರ್ ಗೆ ಭಾರತದಿಂದ ಆಯ್ಕೆ ಮಾಡಿ ಕಳುಹಿಸಿದ ಚಿತ್ರ ಅನುರಾಗ್ ಬಸು ನಿರ್ದೇಶನದ ಹಿಂದಿ ಚಿತ್ರ ‘ಬರ್ಫಿ’. ನಿಜಕ್ಕೂ ಇದು ಆಸ್ಕರ್ ಮೆಟ್ಟಿಲೇರಲು ಸಮರ್ಥವಾದ ಚಿತ್ರವೇ?

ಅಕ್ಟೋ 4, 2012

ಆದರ್ಶವೇ ಬೆನ್ನು ಹತ್ತಿ....ಭಾಗ 8

ಆದರ್ಶವೇ ಬೆನ್ನು ಹತ್ತಿ . . . ಭಾಗ 7

ಡಾ ಪ್ರಭುಲಿಂಗಸ್ವಾಮಿ – ತಂದೆಯ ಗೆಳೆಯ. ಅವರೇ ನಿಂತು ವಿಜಿಯನ್ನು ನೋಡಿಕೊಳ್ಳುತ್ತಿದ್ದರು. ಅವರನ್ನು ಕಂಡರೆ ಲೋಕಿಗೆ ಆಗುತ್ತಿರಲಿಲ್ಲ. ಹಿಂದೆ ಲೋಕಿ ಚಿಕ್ಕವನಾಗಿದ್ದಾಗ ನಡೆದ ಒಂದು ಘಟನೆ ಲೋಕಿಗೆ ಇನ್ನೂ ಮರೆಯಲಾಗಿರಲಿಲ್ಲ. ಆಗ ಪ್ರಭುಲಿಂಗಸ್ವಾಮಿಯವರು ಹುಣಸೂರಿನಲ್ಲಿದ್ದರು. ಒಮ್ಮೆ ಲೋಕಿ ತನ್ನ ತಂದೆಯ ಜೊತೆ ನೆಂಟರೊಬ್ಬರ ಮದುವೆಗೆ ಹುಣಸೂರಿಗೆ ಹೋಗಿದ್ದ. ಛತ್ರದಲ್ಲಿ ಊಟ ಮುಗಿಸಿ ಆಸ್ಪತ್ರೆಗೆ ಹೋಗಿದ್ದರು. ನಾಲ್ಕು ಮುಕ್ಕಾಲಿನ ಸಮಯದಲ್ಲಿ ಒಬ್ಬ ರೈತ ತನ್ನ ಹದಿಮೂರು ಹದಿನಾಲ್ಕು ವರ್ಷದ ಮಗನೊಂದಿಗೆ ಬಂದ.

ಸೆಪ್ಟೆಂ 30, 2012

ಧರ್ಮಗುರುಗಳ ಸಹಜ ಮನಸ್ಸಿನ ಅನಾವರಣ


Habemus papam [photo source - iloveitalianmovies]

ಡಾ ಅಶೋಕ್ ಕೆ ಆರ್
ಸ್ವಾಮೀಜಿಗಳ, ಮೌಲ್ವಿಗಳ, ಒಟ್ಟಾರೆ ಎಲ್ಲ ಧರ್ಮದ ಗುರುಗಳ ಸ್ಥಾನದಲ್ಲಿರುವವರ ಮನಸ್ಥಿತಿ ಎಂತಹುದು ಎಂಬುದು ನಿಜಕ್ಕೂ ಕುತೂಹಲದ ವಿಷಯ. ವರುಷದ ಮುನ್ನೂರೈವತ್ತು ದಿನವೂ ಅವರು ಧರ್ಮಚಿಂತನೆಯಲ್ಲೇ ತೊಡಗುತ್ತಾರಾ? ಹಳೆಯ ತಪ್ಪುಗಳು, ಹಿಂದಿನ ದಿನಗಳು, ಆ ದಿನಗಳ ಜನರ ಒಡನಾಟ ಅವರಿಗೆ ಕಾಡುವುದೇ ಇಲ್ಲವಾ? ನೆನಪಿನಾಳದಿಂದ ಒತ್ತರಿಸಿ ಬರುವ ಭಾವನೆಗಳಿಂದ ಸಂಪೂರ್ಣ ಮುಕ್ತರಾಗಲು ಸಾಧ್ಯವೇ? ದೂರದಲ್ಲಿ ನಿಂತು ಧರ್ಮಗುರುಗಳನ್ನು ದೇವರ ಅವತಾರದಂತೆ ದೇವದೂತನಂತೆ ನೋಡುವವರಿಗೆ ಆ ಧರ್ಮಗುರುಗಳೂ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ ಆತನಿಗೂ ಒಂದು ಮನಸ್ಸಿದೆ ಎಂಬುದೇ ಮರೆತುಹೋಗಿರುತ್ತದೆ. ಪೋಪ್ ಸ್ಥಾನಕ್ಕೆ ಆರಿಸಲ್ಪಟ್ಟ ಒಬ್ಬ ವ್ಯಕ್ತಿಯ ಮನಸ್ಥಿತಿಯ ಅನಾವರಣವಾಗಿರುವುದು ನನ್ನಿ ಮೊರೆಟ್ಟಿ [Nanni Moratti] ನಿರ್ದೇಶನದ ಇಟಾಲಿಯನ್ ಚಿತ್ರ “ಹೆಬೆಮಸ್ ಪಾಪಮ್”ನಲ್ಲಿ [Habemus Papam ಅರ್ಥಾತ್ we have a pope].

ಸೆಪ್ಟೆಂ 29, 2012

ಆದರ್ಶವೇ ಬೆನ್ನು ಹತ್ತಿ . . . ಭಾಗ 7


ಆದರ್ಶವೇ ಬೆನ್ನು ಹತ್ತಿ . . . ಭಾಗ 6

ಶಿವಶಂಕರ್ ಅಳುತ್ತಿದ್ದರು.

ವಿಕ್ರಮ್ ಯಾರು? ಎಂಬ ಯೋಚನೆಯಲ್ಲಿ ಅರ್ಧ ಜೀವನವೇ ಕಣ್ಮುಂದೆ ಸುಳಿದು ಹೋಯ್ತಲ್ಲ ಎಂದು ಅಚ್ಚರಿಗೊಳ್ಳುತ್ತ ವಾಸ್ತವಕ್ಕೆ ಬಂದನು ಲೋಕೇಶ್. ತಂದೆಯೆಡೆಗೆ ನೋಡಿದ. ಅಳುತ್ತಿದ್ದರು. ಭಯ ಗೊಂದಲ ಉಂಟಾಯಿತು. ನಾನೇ ಒಳಗೆ ಹೋಗಲಾ? ವಿಜಿ ಏನು ಮಾಡಿರಬಹುದು? ಕಳ್ಳತನ? ಅಥವಾ ಅವನಿಗೇನಾದ್ರೂ . . .ಛೀ ಕೆಟ್ಟದನ್ಯಾಕೆ ಯೋಚಿಸಬೇಕು. ವಿಕ್ರಮ್ ಹೊರಬಂದರು.