ಜುಲೈ 16, 2012

ಭ್ರಮೆ ಕಳಚುತ್ತಾ ಭ್ರಮೆಯ ಬೆನ್ನುಹತ್ತಿಸುವ “ಯಾಮಿನಿ”


ಡಾ. ಅಶೋಕ್. ಕೆ. ಆರ್
ಸಣ್ಣಕಥೆಗಳನ್ನು ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ಬರೆಯುವ ಜೋಗಿ [ಗಿರೀಶ್]ಯವರ ಕಾದಂಬರಿ ಕೂಡ ಸಣ್ಣಕಥೆಗಳ ಗುಚ್ಛದಂತೆಯೇ ಕಾಣುವುದು ಜೋಗಿಯ ಬಲ; ಜೊತೆಗೆ ದೌರ್ಬಲ್ಯವೂ ಕೂಡ! ಜೋಗಿಯ ‘ಯಾಮಿನಿ’ ಕಾದಂಬರಿಯನ್ನು [ಅಂಕಿತ ಪುಸ್ತಕದಿಂದ 2008ರಲ್ಲಿ ಮೊದಲ ಮುದ್ರಣ] ಮೊದಲ ಪುಟದಿಂದಲೇ ಓದಲಾರಂಭಿಸಬೇಕೆಂದೇನೂ ಇಲ್ಲ! ಯಾವ ಪುಟದಿಂದ ಓದಿದರೂ ಆಸಕ್ತಿ ಕೆರಳಿಸುತ್ತದೆ. ‘ಯಾಮಿನಿ’ ಕಾದಂಬರಿ ಜ್ಞಾನಪೀಠ ವಿಜೇತ ಲೇಖಕ ‘ಚಿರಾಯುವಿನ’ ಬದುಕಿನ ಸ್ಥೂಲ ಚಿತ್ರಣ. ಜ್ಞಾನಪೀಠಿ ಲೇಖಕನಿಂದ ಕನ್ನಡ ಕಾದಂಬರಿಯನ್ನು ಬರೆಸಿ ಅದನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಲಕ್ಷಾಂತರ ಪ್ರತಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದಿಶ್ಯದಿಂದ ಒಪ್ಪಂದದ ಮುವತ್ತಾರು ಲಕ್ಷದಲ್ಲಿ ಆರು ಲಕ್ಷವನ್ನು ಚಿರಾಯುವಿಗೆ ಮುಂಗಡವಾಗಿ ನೀಡಿ ಬರೆಯುವ ‘ಕೆಲಸಕ್ಕೆ’ ಹಚ್ಚುತ್ತದೆ ಪ್ರಕಾಶಕ ಸಂಸ್ಥೆ. ಕಾದಂಬರಿ ಹೀಗೆ – ಹೀಗೆ ಇದ್ದರೆ ಚೆಂದ ಎಂದು ‘ಬುದ್ಧಿ ಮಾತು’ ಹೇಳಿದ ಪ್ರಕಾಶಕ ಸಂಸ್ಥೆ ಚಿರಾಯುವಿನ ಬರವಣಿಗೆ ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಮುನ್ನುಡಿ ಬರೆದುಬಿಡುತ್ತದೆ!

ಜುಲೈ 12, 2012

ಆಡಾಡತ ಆಯುಷ್ಯ ನೋಡನೋಡತ ದಿನಮಾನ....


ಡಾ.ಅಶೋಕ್. ಕೆ. ಆರ್.
ಪಿ.ಯು.ಸಿಯಲ್ಲಿ ‘ಯಯಾತಿ’ ನಾಟಕ ಪಠ್ಯವಾಗಿತ್ತು. ಯಯಾತಿ ನಾಟಕ ನಮ್ಮನ್ನು ಪುಳಕಿಗೊಳಿಸಿದ್ದಕ್ಕೆ ಕಾರಣ ಗಿರೀಶ್ ಕಾರ್ನಾಡರೋ ಅಥವಾ ನಮಗೆ ಆ ಪಾಠ ಮಾಡಿದ ಮೇಷ್ಟರೋ [ಅವರ ಹೆಸರು ನೆನಪಾಗಲೊಲ್ಲದು] ಕಾರಣರೋ ಕರಾರುವಕ್ಕಾಗಿ ಹೇಳುವುದು ಕಷ್ಟ. ನಂತರ ಕನ್ನಡದ ಪ್ರಮುಖ ಕಥೆ ಕಾದಂಬರಿಗಳನ್ನು ಓದಲಾರಂಭಿಸಿದೆನಾದರೂ ನಾಟಕಗಳ ಕಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಗೆಳೆಯೊಬ್ಬನಿಂದ ಎರವಲು ಪಡೆದು ಓದಿದ ಟಿ.ಪಿ.ಕೈಲಾಸಂರ ನಾಟಕಗಳು ಅವುಗಳಲ್ಲಿನ ವಿಡಂಬನಾತ್ಮಕ ದೃಷ್ಟಿಕೋನದಿಂದ ಆಕರ್ಷಿಸಿದವು. ಮೈಸೂರಿನಲ್ಲಿ ದಸರಾ ಸಮಯದಲ್ಲಿ ನಾಟಕಗಳನ್ನು ನೋಡಿ ಮತ್ತಷ್ಟು ಆಕರ್ಷಣೆ ಹೆಚ್ಚಿತಾದರೂ ನಾಟಕದ ಪುಸ್ತಕ ‘ಕಾಸು’ ಕೊಟ್ಟು ಕೊಂಡುಕೊಳ್ಳುವಷ್ಟು ಯೋಗ್ಯವಲ್ಲ ಎಂಬ ಅಪನಂಬುಗೆಯಲ್ಲೇ ಇದ್ದೆ. ಆ ಅಪನಂಬುಗೆ ನಿಧಾನವಾಗಿ ಕ್ಷೀಣಿಸಿ ಶೇಕ್ಸ್ ಪಿಯರ್ ನ ಪುಸ್ತಕಗಳನ್ನು ಕೊಂಡೆನಾದರೂ ಓದಿ ಮುಗಿಸಿದ್ದು ಕಿಂಗ್ ಲಿಯರ್ ನಾಟಕವನ್ನು ಮಾತ್ರ!

ಜುಲೈ 9, 2012

ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ....

ಡಾ. ಅಶೋಕ್. ಕೆ. ಆರ್
ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!

ದೀಪ

ನೀ
 ದೀಪವಾದಮೇಲೆ
ನಿನ್ನವರಿಗೆ ಕತ್ತಲೆಯೇ
ಸ್ವಂತ!
- ಅಭಿ ಹನಕೆರೆ

ಜುಲೈ 4, 2012

ಜೆನರೇಷನ್ ಗ್ಯಾಪಿನ “ಪ್ರೀತಿ ಮೃತ್ಯು ಭಯ”


ಡಾ. ಅಶೋಕ್. ಕೆ. ಆರ್
ಯು.ಆರ್. ಅನಂತಮೂರ್ತಿಯವರು 1959ರಲ್ಲಿ ಬರೆದ ಮೊದಲ ಕಾದಂಬರಿ ಪ್ರೀತಿ ಮೃತ್ಯು ಭಯ ಬರೋಬ್ಬರಿ ಐವತ್ತಮೂರು ವರ್ಷದ ನಂತರ ಪ್ರಕಟಣೆಗೊಂಡಿದೆ. ಪುಸ್ತಕದಂಗಡಿಯಲ್ಲಿ ನೋಡಿದ ಕೂಡಲೇ ಗಮನಸೆಳೆಯುವ ಮುಖಪುಟವಿದೆ. ಯಾವುದೇ ಕಲಾವಿದನ ವಿನ್ಯಾಸದ ಮುಖಪುಟವಲ್ಲ; ಕಂದು ಬಣ್ಣದ ‘ವಿಸ್ಡಂ’ ಪುಸ್ತಕದ ಮೇಲೆ ಮೂಡಿರುವ ಅನಂತಮೂರ್ತಿಯವರ ಕೈಬರಹವೇ ಮುಖಪುಟವಾಗಿದೆ. ಮುಖಪುಟವಷ್ಟೇ ಅಲ್ಲ ಕಾದಂಬರಿಯ ಓದೂ ಗಮನ ಸೆಳೆಯುತ್ತದೆ. ಚಿಂತನೆಗೆ ಹಚ್ಚಿ ಪಾತ್ರಧಾರಿಗಳಲ್ಲಿ ನಮ್ಮನ್ನೂ ಹುಡುಕುವಂತೆ ಪ್ರೇರೇಪಿಸುತ್ತದೆ.

ಜೂನ್ 28, 2012

ಮುಖ್ಯವಾಹಿನಿಯ ಜಾಣಗುರುಡು


ಡಾ ಅಶೋಕ್ ಕೆ ಆರ್        
 ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

ಜೂನ್ 13, 2012

ಅಂತ್ಯೋದಯ


ಮೂಲ 
ಡಾ ಅಶೋಕ್. ಕೆ. ಆರ್.
ಅರ್ಧ ಘಂಟೆಯ ಮುಂಚೆ ಅಪೆಂಡಿಸೈಟಿಸ್ ಆಪರೇಷನ್ ಮುಗಿಸಿ ಮಲಗಲು ಹೋದವಳನ್ನು ನರ್ಸ್ ಎಬ್ಬಿಸಿದ್ದಳು. ಆಕ್ಸಿಡೆಂಟ್ ಕೇಸ್ ಬಂದಿದೆ. ಎರಡು ಎರಡೂವರೆ ವರ್ಷದ ಮಗು, ತಲೆಗೆ ಪೆಟ್ಟಾಗಿದೆ ಎಂದು ಹೇಳಿದ್ದಳು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡು ಕೂದಲು ಸರಿಮಾಡಿಕೊಂಡು ಎದೆಯ ಮೇಲೊಂದು ದುಪ್ಪಟ್ಟಾ ಹೊದ್ದಿಕೊಂಡು ಕೆಳಮಹಡಿಯಲ್ಲಿದ್ದ ಎಮರ್ಜೆನ್ಸಿ ವಾರ್ಡಿಗೆ ಬಂದಾಗ ಘಂಟೆ ಹನ್ನೊಂದಾಗಿತ್ತು. ಮಗುವಿನ ತಲೆಗೊಂದು ಬ್ಯಾಂಡೇಜನ್ನು ಒತ್ತಿ ಹಿಡಿದಿದ್ದರು, ರಕ್ತಮಯವಾಗಿತ್ತು. ಮಂಚದ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಅಂಗಿ ಪ್ಯಾಂಟು ಅಲ್ಲಲ್ಲಿ ಹರಿದಿತ್ತು. ಅಂಗಿಯ ಎಡಭಾಗದಲ್ಲಿ ರಕ್ತದ ಕಲೆಯಿತ್ತು. ಮಣ್ಣಾಗಿ ಕೆದರಿದ್ದ ಕೂದಲು. ಡಾಕ್ಟರ್ ಬಂದರೆಂದು ತಿರುಗಿ ನೋಡಿದ ರಾಕೇಶ. “ಅರೆ! ರಾಕಿ ನೀನು?!” ಭವ್ಯಳ ದನಿಯಲ್ಲಿ ಅಚ್ಚರಿ ಆಶ್ಚರ್ಯ ಸಂತಸವಿತ್ತು.

ಜೂನ್ 8, 2012

ಬದುಕು ಚಿತ್ರಮಂದಿರ!

-ಹರ್ಷನ್
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ
ನಿತ್ಯ ಇದೇ ಪರಿಪಾಟ.
ಪ್ರದರ್ಶನಕ್ಕಿರುವುದು ನಮ್ಮ ಜೀವನದ 
ಜಂಜಾಟ ಮತ್ತು ಪರದಾಟ.
ಬದುಕು ಚಿತ್ರಮಂದಿರ!
ಅದೇ ಪರದೆ ಅದೇ ಸಿನಿಮಾ.
ಆದರೆ ಕಥೆಯೇ ಬೇರೆ 
ಕಥೆಯಲ್ಲಿನ ವ್ಯಥೆಯೇ ಬೇರೆ.
ಬದುಕು ಚಿತ್ರಮಂದಿರ!
ಕಾಲ್ಪನಿಕ ಕಥೆಗೆ ಜಾಗವಿಲ್ಲ 
ವಾಸ್ತವಿಕತೆಗೆ ಅರ್ಥವಿಲ್ಲ..
ಅರ್ಧವಿರಾಮವಂತೂ ಇಲ್ಲವೇ ಇಲ್ಲ,
ಬದುಕು ಚಿತ್ರಮಂದಿರ!
ಶುರುವಾಗುವುದು ಕೊನೆಯಾಗುವುದು 
ನಾಳಿನ ಆಟಗಳಿಗೆ ಮತ್ತೆ 
ತಯಾರಾಗುವುದು....
ಬದುಕು ಚಿತ್ರಮಂದಿರ!
ದಿನ ನಾಲ್ಕು ಆಟ, ನಿತ್ಯ ಅದೇ ಪರಿಪಾಟ.

ಮೇ 29, 2012

ಸಾಮಾಜಿಕ ಕಳಕಳಿಯೆಂದರೆ.....

ಡಾ ಅಶೋಕ್ ಕೆ ಆರ್
ತೀರ ಗಂಗಾಧರ್ ಮೊದಲಿಯಾರ್ ಕೂಡ ಈ ರೀತಿಯಾಗಿ ಬರೆಯಬಲ್ಲರು ಎಂದು ನಿರೀಕ್ಷಿಸಿರಲಿಲ್ಲ! ಪ್ರಜಾವಾಣಿಯ ಸಿನಿಮಾರಂಜನೆಯ ಫಿಲಂ ಡೈರಿ ಅಂಕಣದಲ್ಲಿ ಅಮೀರ್ ಖಾನನ ಸತ್ಯಮೇವ ಜಯತೆಯ ಬಗ್ಗೆ ಬರೆದಿದ್ದಾರೆ. ‘ಬುರುಡೆ ಪುರಾಣ’ ಎಂಬ ಶೀರ್ಷಿಕೆಯೇ ಅಸಂಬದ್ಧವಾಗಿದೆ. ಅಮೀರ್ ಖಾನನ ಕೆಲಸವನ್ನು ಮೆಚ್ಚುತ್ತಲೇ ಅವನನ್ನು ತೆಗಳುತ್ತಾ ಹೋಗುತ್ತಾರೆ. ಭಾವನೆಗಳನ್ನು ಉದ್ರಿಕ್ತಗೊಳಿಸಿ ಹಣ ಮಾಡುವ ‘ದಂಧೆ’ ಎಂದುಬಿಡುತ್ತಾರೆ. ಅಮೀರ್ ಖಾನ್ ಹೋರಾಟಗಾರನಲ್ಲ, ಸಾಮಾಜಿಕ ಕಾರ್ಯಕರ್ತನೂ ಅಲ್ಲ; ಆತ ಒಬ್ಬ ನಟ, ನಿರ್ಮಾಪಕ, ನಿರ್ದೇಶಕ. ಹಣವಿಲ್ಲದೆ ಏನೂ ಮಾಡಲಾಗದ ಚಿತ್ರರಂಗದವನು. ಯಾವ ಕಾರ್ಯಕ್ರಮ ಮಾಡಿದರೂ ಅದರಿಂದ ಲಾಭ ಬರುವುದನ್ನು ಅವನು ಗಮನಿಸಲೇಬೇಕು. ‘ಏರ್ ಟೆಲ್ನಿಂದ ಮೇಸೇಜ್ ಮಾಡಿ, ಕೇವಲ ಒಂದು ರುಪಾಯಿ’ ಎಂದವನು ಕಾರ್ಯಕ್ರಮದ ಕೊನೆಯಲ್ಲಿ ಹೇಳುವುದು ಕೂಡ ಲಾಭದ ಒಂದು ಮುಖ. ಇವೆಲ್ಲವೂ ಸತ್ಯವೇ, ಆದರೆ....

ಮೇ 8, 2012

ಡಬ್ಬಿಂಗ್ ಅವಶ್ಯಕವೇ?

ಡಾ ಅಶೋಕ್. ಕೆ. ಆರ್.
ಡಬ್ಬಿಂಗ್ ವಿವಾದ ಮತ್ತೆ ಗರಿಗೆದರಿದೆ. ಕಳೆದ ಹಲವಾರು ತಿಂಗಳುಗಳಿಂದ ‘ಏನ್ ಗುರು’ವಿನಂಥ ಬ್ಲಾಗುಗಳಲ್ಲಿ, ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಿಗೆ ಸೀಮಿತವಾಗಿದ್ದ ಈ ಚರ್ಚೆ ಅಮೀರ್ ಖಾನನ ‘ಸತ್ಯಮೇವ ಜಯತೆ’ಯ ಕನ್ನಡದವತರಣಿಕೆಯ ತಯಾರಿಕೆಯ ಹಿನ್ನೆಲೆಯಲ್ಲಿ ಮುಖ್ಯವಾಹಿನಿಗಳಲ್ಲೂ ಚರ್ಚೆಗೊಳಪಡುತ್ತಿದೆ. ‘ಸತ್ಯಮೇವ ಜಯತೆ’ಯನ್ನು ಕನ್ನಡದಲ್ಲಿ ಪ್ರಸರಿಸಲು ಮುಂದಾಗಿದ್ದ ಸುವರ್ಣ ವಾಹಿನಿಯು ಚಿತ್ರೋದ್ಯಮದ ‘ಬೆದರಿಕೆ’ ಭರಿತ ವಿರೋಧದ ಹಿನ್ನೆಲೆಯಲ್ಲಿ ಪ್ರಸಾರದಿಂದ ಹಿಂದೆ ಸರಿದಿದೆ. ‘ಪ್ರಾಣ ಹೋದರೂ ಸರಿಯೇ ಡಬ್ಬಿಂಗಿಗೆ ಅವಕಾಶ ಕೊಡುವುದಿಲ್ಲ. ಅಪ್ಪಾಜಿಯ ಮೇಲಾಣೆ’ ಎಂದು ಶಿವರಾಜ್ ಕುಮಾರ್ ಆರ್ಭಟಿಸಿದ್ದಾರೆ. ಪ್ರಜಾವಾಣಿ ಶನಿವಾರದ ಪುಟವೊಂದನ್ನು ಡಬ್ಬಿಂಗಿನ ಚರ್ಚೆಗೆ ಮೀಸಲಿರಿಸಿದರೆ ಸುವರ್ಣ ವಾರ್ತಾ ವಾಹಿನಿಯು ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮದನ್ ಪಟೇಲ್ ಮತ್ತು ಬನವಾಸಿ ಬಳಗದ ಆನಂದ್ ರನ್ನು ಕರೆಸಿ ಜುಗಲ್ ಬಂದಿ ನಡೆಸಿದ್ದಾರೆ.