ಸಣ್ಣಕಥೆಗಳನ್ನು ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ಬರೆಯುವ ಜೋಗಿ [ಗಿರೀಶ್]ಯವರ ಕಾದಂಬರಿ ಕೂಡ ಸಣ್ಣಕಥೆಗಳ ಗುಚ್ಛದಂತೆಯೇ ಕಾಣುವುದು ಜೋಗಿಯ ಬಲ; ಜೊತೆಗೆ ದೌರ್ಬಲ್ಯವೂ ಕೂಡ! ಜೋಗಿಯ ‘ಯಾಮಿನಿ’ ಕಾದಂಬರಿಯನ್ನು [ಅಂಕಿತ ಪುಸ್ತಕದಿಂದ 2008ರಲ್ಲಿ ಮೊದಲ ಮುದ್ರಣ] ಮೊದಲ ಪುಟದಿಂದಲೇ ಓದಲಾರಂಭಿಸಬೇಕೆಂದೇನೂ ಇಲ್ಲ! ಯಾವ ಪುಟದಿಂದ ಓದಿದರೂ ಆಸಕ್ತಿ ಕೆರಳಿಸುತ್ತದೆ. ‘ಯಾಮಿನಿ’ ಕಾದಂಬರಿ ಜ್ಞಾನಪೀಠ ವಿಜೇತ ಲೇಖಕ ‘ಚಿರಾಯುವಿನ’ ಬದುಕಿನ ಸ್ಥೂಲ ಚಿತ್ರಣ. ಜ್ಞಾನಪೀಠಿ ಲೇಖಕನಿಂದ ಕನ್ನಡ ಕಾದಂಬರಿಯನ್ನು ಬರೆಸಿ ಅದನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಲಕ್ಷಾಂತರ ಪ್ರತಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದಿಶ್ಯದಿಂದ ಒಪ್ಪಂದದ ಮುವತ್ತಾರು ಲಕ್ಷದಲ್ಲಿ ಆರು ಲಕ್ಷವನ್ನು ಚಿರಾಯುವಿಗೆ ಮುಂಗಡವಾಗಿ ನೀಡಿ ಬರೆಯುವ ‘ಕೆಲಸಕ್ಕೆ’ ಹಚ್ಚುತ್ತದೆ ಪ್ರಕಾಶಕ ಸಂಸ್ಥೆ. ಕಾದಂಬರಿ ಹೀಗೆ – ಹೀಗೆ ಇದ್ದರೆ ಚೆಂದ ಎಂದು ‘ಬುದ್ಧಿ ಮಾತು’ ಹೇಳಿದ ಪ್ರಕಾಶಕ ಸಂಸ್ಥೆ ಚಿರಾಯುವಿನ ಬರವಣಿಗೆ ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಮುನ್ನುಡಿ ಬರೆದುಬಿಡುತ್ತದೆ!
ಜುಲೈ 16, 2012
ಭ್ರಮೆ ಕಳಚುತ್ತಾ ಭ್ರಮೆಯ ಬೆನ್ನುಹತ್ತಿಸುವ “ಯಾಮಿನಿ”
ಸಣ್ಣಕಥೆಗಳನ್ನು ಕುತೂಹಲ ಕೆರಳಿಸುವಂತೆ, ಮನಮುಟ್ಟುವಂತೆ ಬರೆಯುವ ಜೋಗಿ [ಗಿರೀಶ್]ಯವರ ಕಾದಂಬರಿ ಕೂಡ ಸಣ್ಣಕಥೆಗಳ ಗುಚ್ಛದಂತೆಯೇ ಕಾಣುವುದು ಜೋಗಿಯ ಬಲ; ಜೊತೆಗೆ ದೌರ್ಬಲ್ಯವೂ ಕೂಡ! ಜೋಗಿಯ ‘ಯಾಮಿನಿ’ ಕಾದಂಬರಿಯನ್ನು [ಅಂಕಿತ ಪುಸ್ತಕದಿಂದ 2008ರಲ್ಲಿ ಮೊದಲ ಮುದ್ರಣ] ಮೊದಲ ಪುಟದಿಂದಲೇ ಓದಲಾರಂಭಿಸಬೇಕೆಂದೇನೂ ಇಲ್ಲ! ಯಾವ ಪುಟದಿಂದ ಓದಿದರೂ ಆಸಕ್ತಿ ಕೆರಳಿಸುತ್ತದೆ. ‘ಯಾಮಿನಿ’ ಕಾದಂಬರಿ ಜ್ಞಾನಪೀಠ ವಿಜೇತ ಲೇಖಕ ‘ಚಿರಾಯುವಿನ’ ಬದುಕಿನ ಸ್ಥೂಲ ಚಿತ್ರಣ. ಜ್ಞಾನಪೀಠಿ ಲೇಖಕನಿಂದ ಕನ್ನಡ ಕಾದಂಬರಿಯನ್ನು ಬರೆಸಿ ಅದನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಲಕ್ಷಾಂತರ ಪ್ರತಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಉದ್ದಿಶ್ಯದಿಂದ ಒಪ್ಪಂದದ ಮುವತ್ತಾರು ಲಕ್ಷದಲ್ಲಿ ಆರು ಲಕ್ಷವನ್ನು ಚಿರಾಯುವಿಗೆ ಮುಂಗಡವಾಗಿ ನೀಡಿ ಬರೆಯುವ ‘ಕೆಲಸಕ್ಕೆ’ ಹಚ್ಚುತ್ತದೆ ಪ್ರಕಾಶಕ ಸಂಸ್ಥೆ. ಕಾದಂಬರಿ ಹೀಗೆ – ಹೀಗೆ ಇದ್ದರೆ ಚೆಂದ ಎಂದು ‘ಬುದ್ಧಿ ಮಾತು’ ಹೇಳಿದ ಪ್ರಕಾಶಕ ಸಂಸ್ಥೆ ಚಿರಾಯುವಿನ ಬರವಣಿಗೆ ನಿಲ್ಲಿಸಬೇಕೆಂಬ ನಿರ್ಧಾರಕ್ಕೆ ಮುನ್ನುಡಿ ಬರೆದುಬಿಡುತ್ತದೆ!